“ ಗ್ರಾಮಭಾರತ “ ಸಾಧನೆಯ ಸಾಕ್ಷಾತ್ಕಾರಕ್ಕೆ ಕೊನೆಗೂ ಸ೦ದ ಪೂರ್ಣಾನುಗ್ರಹ!
-ರಾಘವೇಂದ್ರ ನಾವಡ
ಏನೂ ಮಾಡದೇ ಇರುವುದಕ್ಕಿ೦ತ ಏನನ್ನಾದರೂ ಮಾಡುವುದು ಸಾವಿರ ಪಾಲು ಉತ್ತಮವೆ೦ಬ ನಾವಡ ಉವಾಚವಿದೆ.. ಏನನ್ನಾದರೂ ಮಾಡುತ್ತಲೇ ಇರುವುದು ವ್ಯಕ್ತಿಯೋರ್ವನ ಸತತ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವ ಆಯ್ಕೆ ಮಾತ್ರ ನಮ್ಮದು! ಕೆಲವರು ತಾವು ಬೆಳೆದುಬ೦ದದ್ದನ್ನು ಮರೆಯದೇ ಬೆಳೆದ ನ೦ತರ ಊರವರಿಗೆ ತನ್ನ ಗ್ರಾಮಕ್ಕೆ ಏನನ್ನಾದರೂ ಕೊಡುಗೆಯನ್ನು ನೀಡಬೇಕೆ೦ದು ಬಯಸಿದರೆ, ಏನನ್ನೂ ಮಾಡದಿದ್ದವರು ಇರುವವರಿ೦ದಲೇ ಎಲ್ಲವನ್ನೂ ಕಿತ್ತುಕೊ೦ಡು ತಮ್ಮ ಬೇಳೆ ಬೇಯಿಸಿಕೊಳುತ್ತಾರೆ!
ಎಲ್ಲವುದಕ್ಕಿ೦ತಲೂ ಮುಖ್ಯವಾಗಿ ಒಬ್ಬ ವ್ಯಕ್ತಿ ಸಮಾಜದಲ್ಲಿ ಒ೦ದು ಹ೦ತದಕ್ಕೆ ಮುಟ್ಟಿದನೆ೦ದರೆ ಜನತೆ ಅವರಿ೦ದ ನಿರೀಕ್ಷಿಸುವುದು ಬಹಳಷ್ಟಿರುತ್ತದೆ! ಕೆಲವರು ಆ ನಿರೀಕ್ಷೆಯ ಸಾಫಲ್ಯತೆಗಾಗಿ ಸ್ವಲ್ಪವಾದರೂ ಪ್ರಯತ್ನ ಪಟ್ಟರೆ.. ಇನ್ನು ಕೆಲವರು ನಿರೀಕ್ಷೆಗಳ ಹಿ೦ದೆ ಓಡುತ್ತಾ ತಮ್ಮ ಬದುಕನ್ನು ಗೋಜಲಿನೊಳಗೆ ಸಿಲುಕಿಸಿಕೊಳ್ಳಲು ಇಷ್ಟಪಡುವುದಿಲ್ಲ.. ದೇವರಿಟ್ಟ ಹಾಗೆ ಇರಲಿ! ಎನ್ನುವ೦ತೆ…
ಅದಕ್ಕೆ೦ದೇ ಮಾನವ ಕನಸನ್ನು ಕಾಣಬೇಕು ಎನ್ನುವುದು!.. ಕನಸು ಮು೦ದಿನ ಸಾಧನೆಯ ಹ೦ತಕ್ಕೆ ನಮ್ಮನ್ನು ಕೊ೦ಡೊಯ್ಯುವ ದಾರಿ ದೀಪ. ಕೆಲವರು ಕ೦ಡ ಕನಸಿನ ಬೆನ್ನನ್ನು ಹತ್ತುತ್ತಾರೆ.. ಇನ್ನು ಕೆಲವರು ರಾತ್ರಿ ಕ೦ಡ ಕನಸನ್ನು ಮತ್ತೊಬ್ಬರೊ೦ದಿಗೆ ಚರ್ಚಿಸುತ್ತಾ ಸುಮ್ಮನಿದ್ದು ಬಿಡುತ್ತಾರೆ!
ಗಡ್ಕರಿಯ ಅ”ವಿವೇಕ” ಮತ್ತು ಸಂಘದ “ಸ್ವಾಮಿ”ನಿಷ್ಠೆ…!
– ರಾಕೇಶ್ ಶೆಟ್ಟಿ
“ಇನ್ನೊಬ್ಬ ವಿವೇಕಾನಂದನಿದ್ದಿದ್ದರೆ ಅವನಿಗೆ ತಿಳಿಯುತಿತ್ತು – ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು… ಇರಲಿ, ಕಾಲಾಂತರದಲ್ಲಿ ಮತ್ತೆಷ್ಟು ಮಂದಿ ವಿವೇಕಾನಂದರು ಉದಿಸಲಿರುವರೋ!” ಸ್ವಾಮೀಜಿ ದೇಹತ್ಯಾಗದ ದಿನ ತಮ್ಮಷ್ಟಕ್ಕೆ ತಾವೇ ಹೇಳಿಕೊಂಡ ಮಾತುಗಳಿವು. ನಿಜ ವಿವೇಕಾನಂದ ಮಾಡಿ ಹೋಗಿದ್ದೇನು? ಯಾರನ್ನಾದರು ಕೇಳಿ ನೋಡಿ, ತಟ್ಟನೆ “ಅವರು ಸರ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದರು” ಅಂತಲೇ ಹೇಳುತ್ತಾರೆ..ಮುಂದೇನು ಮಾಡಿದ್ದರು ಅಂತ ಕೇಳುವಷ್ಟರಲ್ಲಿ ಮಾತು ತಡವರಿಸುತ್ತದೆ… ಬಹುಷಃ ಇದೆಲ್ಲವನ್ನೂ ಅರಿತೇ ಸ್ವಾಮೀಜಿ ಬಹುಷಃ ಮೇಲಿನ ಮಾತನ್ನು ಹೇಳಿದ್ದರು ಅನ್ನಿಸುತ್ತದೆ.
ಆದರೆ,ಮುಂದೊಂದು ದಿನ ತಾನು ಪ್ರತಿಪಾದಿಸುತ್ತಿರುವ “ರಾಷ್ಟ್ರೀಯತೆ(?)” ಅನ್ನುವ ಪದವನ್ನು ಹಿಡಿದು ಪಕ್ಷವೊಂದು ಉದಯಿಸಬಹುದು ಮತ್ತು ಅದಕ್ಕೊಬ್ಬ ಮೇಧಾವಿ ಅಧ್ಯಕ್ಷ ಬಂದು ಅವನು “ಸ್ವಾಮಿ ವಿವೇಕಾನಂದರ ಬುದ್ದಿಮತ್ತೆಯನ್ನು ಮುಂಬೈನ ಕಪ್ಪು ಜಗತ್ತಿನ ಕಳ್ಳನಾಗಿದ್ದವನ ಬುದ್ದಿ ಮತ್ತೆಗೆ ಸರಿಸಮ” ಅಂತೇಳಬಹುದು ಅನ್ನುವುದನ್ನು ಮಾತ್ರ ಊಹಿಸಿರಲಿಕ್ಕಿಲ್ಲ…!
ಯಾವಾಗ ಪಂದ್ಯ ಮುಗಿಯುತ್ತದೆ ಅನ್ನುವುದನ್ನು ವಿಧಿಯೇ ನಿರ್ಧರಿಸಲಿ ಅನ್ನುವುದು ನನ್ನ ಆಸೆ, ನಿನ್ನದು?
– ರಾಕೇಶ್ ಎನ್ ಎಸ್
ಇಷ್ಟೇ ಬರೆದು ಪತ್ರ ವ್ಯವಹಾರ ಶುರು ಮಾಡುವುದು ಪತ್ರ ಸಂಪ್ರದಾಯದ ಉಲ್ಲಂಘನೆ ಅನ್ನುವುದೇನೋ ನಿಜ. ಆದರೆ ನಾನು ಏನುಮಾಡಲಿ? ಯಾವ ಪ್ರಿಫಿಕ್ಸ್,ಸಫಿಕ್ಸ್ ಬಳಸೋದು ಅಂತ ಗೊತ್ತೇ ಆಗುತ್ತಿಲ್ಲ ಮಾರಾಯ್ತಿ. ಕಲ್ಲನ್ನು ಕಲ್ಲು ಎಂದು ಕರೆಯುವುದನ್ನು ಬಿಟ್ಟುಅದಕ್ಕೆ ಯಾವುದೇ ಪ್ರಿಫಿಕ್ಸ್ ಆಥವಾ ಸಫಿಕ್ಸ್ ಸೇರಿಸಿದರೂ ಅದು ತನ್ನ ಗುಣ, ಗುಣಮಟ್ಟ, ಆಕಾರ, ಆಕೃತಿ, ದೃವ್ಯರಾಶಿಗಳಲ್ಲಿ ಕಿಂಚಿತ್ತುಬದಲಾವಣೆ ತಂದು ಕೊಳ್ಳಲಾರದು ಎಂಬುದು ಕಲ್ಲು ಹೃದಯದವಳಾದ (ನೀನೇ ಕರೆದುಕೊಂಡಂತೆ) ನಿನಗೆ ಚೆನ್ನಾಗಿಯೇ ಗೊತ್ತಿದೆ.ನಾನು ನಿನ್ನನ್ನು ಏಕೆ ಗೌರವಿಸುತ್ತಿದ್ದೆ ಎಂದು ಕಾರಣ ಕೊಟ್ಟು ಹೇಳಬಹುದಾದ ಕೆಲವೇ ಕೆಲವು ಕಾರಣಗಳಲ್ಲಿ ಒಂದು ನೀನು stone hearted ಆಗಿದ್ದರೂ ಅದಕ್ಕಿಂತ ಹೆಚ್ಚು strong hearted ಆಗಿದ್ದದ್ದು. ಈ ಕಲ್ಲು ಹೃದಯಕ್ಕು ಗಟ್ಟಿ ಹೃದಯಕ್ಕೂ ಅಂಗ್ಲ ಭಾಷೆಯಲ್ಲಿಎರಡೇ ಎರಡು ಸ್ಪೆಲ್ಲಿಂಗ್ನ ವ್ಯತ್ಯಾಸವಷ್ಟೇ ಇದ್ದರೂ ಕೂಡ ಆ ಎರಡು ಸ್ಪೆಲ್ಲಿಂಗ್ಗಳು ನಮ್ಮ ವ್ಯಕ್ತಿತ್ವ, ವ್ಯವಹಾರ, ನಡೆ ನುಡಿಗಳಲ್ಲಿತರುವ ವ್ಯತ್ಯಯ ಅಪಾರವಾದದ್ದು. ಈ ಸ್ಪೆಲ್ಲಿಂಗ್ ವಿಷಯ ಬಿಟ್ಟು ಬಿಡೋಣ. ಏಕೆಂದರೆ ಈ ಎರಡು ಭಾಷೆಗಳಲ್ಲೂ ’ಅಪಾರ ಪಾಂಡಿತ್ಯ’ಸಂಪಾದಿಸಿರುವ ನಿನಗೆ ನಾನಂತೂ ಏನೂ ಹೇಳಲಾಗದು. “ನನ್ನದು ಏನೇ ಇದ್ದರೂ ಹೇಳಿ ಕೇಳಿ ಮೊದಲೇ ಚೂರು… ಪಾಪಿ ನಾನು”…
ಆದರೂ ನನಗೆ ನನ್ನ ಭಾವ ಮತ್ತು ಜ್ಞಾನ ಪರಿಧಿಯಲ್ಲಿ ಹೊಳೆದ ಒಂದು ಅಂಶವನ್ನು ನಿನ್ನ ಮುಂದೆ ಇಡುತ್ತೇನೆ. ಒಪ್ಪಿಕೊ ಎಂದುಒತ್ತಾಯಿಸಲಾರೆ… ಒಪ್ಪದಿದ್ದರೂ ನಾನೇನು ಕಳೆದುಕೊಳ್ಳಲಾರೆ. ನನ್ನ ಪ್ರಕಾರ ಕಲ್ಲು ಹೃದಯ ಎಂದರೆ ಪಲಾಯನವಾದ. ಯಾವುದೇಸ್ಥಿತಿ, ಪರಿಸ್ಥಿತಿ ಎದುರಾದಗಲೂ ಅದಕ್ಕೆ ಬೆನ್ನು ಹಾಕಿ ಓಡುವುದು. ಉದಾಹರಣೆಗೆ ನಾನು ನಿನಗೆ ಬೈದದ್ದೆ ಆದರೆ ಆಮೇಲೆ ಫೋನ್ರಿಸೀವ್ ಮಾಡದಿರುವುದು, ಮೆಸೆಜ್ಗೆ ರಿಪ್ಲೈ ಮಾಡದಿರುವುದು ಇತ್ಯಾದಿ. ಅದೇ ಗಟ್ಟಿ ಹೃದಯ ಎಂದರೆ ನಾನು ನಿನ್ನಲ್ಲಿ ಅದೇಷ್ಟೆ ಪರಿಪರಿಯಾಗಿ ಪಪ್ಪಿ ಕೇಳಿದ್ದರೂ ಕೂಡ ಅದನ್ನು ಕೊಡದೆ ಆದರೆ ನನ್ನನ್ನು ಕಳೆದುಕೊಳ್ಳದೆ ವ್ಯವಹರಿಸುತ್ತಿದ್ದಿ ಅಲ್ವಾ ಅದು. ಇದರಿಂದ ನಿನ್ನಬಗ್ಗೆ ನನಗಿದ್ದ ಪ್ರೀತಿ ಹೆಚ್ಚೇನು ಆಗಿಲ್ಲ. ಅದು ಆಗಲೂ, ಈಗಲೂ, ಆ ಕ್ಷಣವೂ, ಈ ಕ್ಷಣವೂ ಹಾಗೇ ಇದೆ ಸಾಗರದಂತೆ. ಅದರಸಾಂದ್ರತೆ, ತೀವೃತೆಯಲ್ಲಿ ಹೆಚ್ಚು ಕಡಿಮೆಯಾಗಿಲ್ಲ. ಅದ್ದರಿಂದ ನಾನು ನಿನ್ನಿಂದ ಏನು ನಿರೀಕ್ಷಿಸುತ್ತಿದ್ದೇನೆ ಎಂಬುದನ್ನು ನೀನು ಅರ್ಥಮಾಡಿಕೊಳ್ಳುವಲ್ಲೆ ಸಂಪೂರ್ಣ ಎಡವಿದ್ದಿ ಎಂದು ನನಗನಿಸುತ್ತೆ. ಅದ್ದರಿಂದಲೇ ಈ ಎಲ್ಲ ಸಮಸ್ಯೆ.
ನಕ್ಸಲರು ಬರದಿದ್ದಲ್ಲಿ “ಚಕ್ರವ್ಯೂಹದ” ಅರಿವಾಗುತ್ತಿರಲಿಲ್ಲವೇನೋ?!
-ಡಾ.ಅಶೋಕ್ ಕೆ ಆರ್

ಜಿ-ಮೈಲ್ನಲ್ಲಿ ಹೊಸ ರೀತಿಯಲ್ಲಿ ಒಮ್ಮೆಗೆ ಹಲವು ಮಿಂಚೆ ರಚಿಸಿ
ಸ್ನೇಹಿತರೇ,
ಜಿ-ಮೈಲ್ನಲ್ಲಿ ಹೊಸ ರೀತಿಯಲ್ಲಿ ಮಿಂಚೆ ರಚಿಸಿ.. ಈಗ. ಏನಿದು ವಿಶೇಷ? ಹೌದು.. ಎಷ್ಟೋ ಬಾರಿ ನೀವು ಮಿಂಚೆ ರಚಿಸುವಾಗ, ನಿಮಗನ್ನಿಸಿರಬಹುದು. ಛೇ..! ಕೆಲವು ವಿಚಾರ ಹಿಂದಿನ ಮೈಲ್ಗಳಲ್ಲಿ ನೋಡಿ ಕಾಪಿ(ಪ್ರತಿ) ಮಾಡಿಕೊಳ್ಳೋದಿತ್ತು. ಕಳುಹಿಸಿದ ಮೈಲ್ (Sent Mail)ನಲ್ಲಿ ಇರೋ ವಿಚಾರ ಒಂದಷ್ಟು ಪ್ರತಿ ಮಾಡಿಕೊಳ್ಳೋದಿತ್ತು. ಅದ್ಯಾವುದೋ ಮೈಲ್ನಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರ ಇತ್ತು. ಅದನ್ನೊಮ್ಮೆ ನೋಡಬೇಕಿತ್ತು. ಅದ್ಯಾವುದೋ ಮೇಲ್ ಮರೆತು ಹೋಯ್ತು.. ಅದನ್ನ ಹುಡುಕಿ, ಅದರಲ್ಲಿನ ವಿಚಾರ ಓದಿ ಅದಕ್ಕೆ ಪೂರಕ ಉತ್ತರ ಕೊಡೋದಿತ್ತು ಅಥವಾ ಅದರಲ್ಲಿನ ವಿಚಾರ ಸ್ವಲ್ಪ ಇಲ್ಲೂ ಪ್ರತಿ ಮಾಡಿ ಹಾಕೋ ಅವಶ್ಯಕತೆ ಇತ್ತು ಅಂತ ನಿಮಗನ್ನಿಸಿರಬಹುದು. ಆಗ ನಿಮಗಾಗುತ್ತಿದ್ದ ಸಮಸ್ಯೆ.. ನಿಮ್ಮ ಇನ್ಬಾಕ್ಸ್ ಅಥವಾ ಕಳುಹಿಸಿದ ಮಿಂಚೆಯ ಫೋಲ್ಡರ್ ಯಾವುದಾದರು ಒಂದು ತೆರೆಯಬಹುದು ಅಥವಾ ನಿಮ್ಮ ಮಿಂಚೆ ಬರೆಯುವಿಕೆಯ ಒಂದು ಕೆಲಸ ಒಮ್ಮೆ ಮಾತ್ರ ಮಾಡಬಹುದು. ಎಲ್ಲವೂ ಒಟ್ಟಿಗೆ ಮಾಡಬೇಕೆಂದಲ್ಲಿ ಬ್ರೌಸರ್ನ ಬೇರೆ ಬೇರೆ ಕಿಟಕಿಗಳನ್ನು ತೆರೆದು ಕೆಲಸ ಮಾಡಬೇಕಿತ್ತು. ಈಗ ಗೂಗಲ್ ನಿಮಗೆ ಇದಕ್ಕೆ ಪರಿಹಾರ ಕೊಟ್ಟಿದೆ.
ನೋಡಿ..! ಈ ಕೆಳಗಿನ ವಿಚಾರಗಳನ್ನು.
ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಮಧುಚಂದ್ರ ಭದ್ರಾವತಿ
ಬಹಳ ದಿನಗಳಿಂದ ಈ ಲೇಖನ ಪ್ರಕಟಿಸಬೇಕು ಎನ್ನುವ ಕಾತರ ಆದರೆ ಸರಿಯಾದ ಸಮಯ ಸಿಗದೇ ಇಂದು ನಾಳೆ ನಾಡಿದ್ದು …. ಹಾಗೆ ಮುಂದುವರಿತ ಹೋಯ್ತು. ಕೊನೆಗೆ ಅ ದಿನ ಬರಲೇ ಇಲ್ಲ. ಇಂದು ಪ್ರಕಟಣೆ ಮಾಡಲೇ ಬೇಕು ಎನ್ನುವ ತುಡಿತ ಇದ್ದುದರಿಂದ ಇಂದೇ ಪ್ರಕಟಿಸುತ್ತಿದ್ದೇನೆ.
ನಿಮಗೆಲ್ಲ ಗೊತ್ತಿರುವ ಹಾಗೆ ಮಾನವ ಒಬ್ಬ ಸಂಘ ಜೀವಿ. ದಿನ ನಿತ್ಯದ ಜೀವನದಲ್ಲಿ ಹಲವರನ್ನು ಭೇಟಿ ಮಾಡುತ್ತಾನೆ. ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ತನ್ನ ಮನದಾಳದ ವಿಚಾರವನ್ನು ಭಾಷೆಯ ಮೂಲಕ ಹಂಚಿ ಕೊಳ್ಳುತ್ತಾನೆ.
ಭಾಷೆ ಎಂದರೆ ಅದೊಂದು ಸಂವಹನ. ಇಬ್ಬರ ನಡೆಯುವ ಮಾತುಕತೆ ಇರಬಹುದು ಅಥವಾ ಹಲವರ ಜೊತೆ ನಡೆಯುವ ಇರುವ ಸಂವಾದವು ಇರಬಹುದು. ಅದು ಎಲ್ಲರಿಗು ಅರ್ಥವಾಗುವ ಹಾಗಿದ್ದರೆ ಕೇಳುವವನು ಮತ್ತು ಅಡುವವನಿಗೆ ಗೌರವ ಸಲ್ಲುತ್ತದೆ. ಭಾಷೆಯಲ್ಲಿ ಎರಡು ವಿಧ. ಒಂದು ಮಾತೃ ಭಾಷೆ ಮತ್ತೊಂದು ವ್ಯವಹಾರಿಕ ಭಾಷೆ. ಮಾತೃ ಭಾಷೆ ತಾಯಿಯ ಕರುಳ ಬೇರಿನಿಂದ ಬಂದದು. ಆಗತಾನೆ ಧರೆಗಿಳಿದ ಮುಗ್ದ ಕಂದಮ್ಮ ಮೊದಲು ಆಡುವುದೇ ಮಾತೃಭಾಷೆ . ಅದೇ ಮುದ್ದಿನ ಕಂದ ಮಾತೃ ಭಾಷೆಯ ಮೂಲಕ ಹೆತ್ತ ತಾಯಿಗೆ ತನ್ನ ಋಣವನ್ನು ತೀರಿಸುತ್ತದೆ. ಮಗು ಮುಂದೆ ದೊಡ್ಡವನಾಗುತ್ತ ಹೋದ ಹಾಗೆ ಅನ್ನ ಸಂಪಾದನೆಗಾಗಿ ವ್ಯವಹಾರಿಕ ಪ್ರಪಂಚಕ್ಕೆ ಕಾಲಿಡುತ್ತಾ ಹಲವು ಭಾಷೆ ಮತ್ತು ವಿದ್ಯೆಯನ್ನು ಕಲಿಯುತ್ತ ಬೆಳೆಯುತ್ತದೆ. ಕಡೆಗೆ ಒಂದು ಹಂತ ಮೀರಿದಾಗ ತನ್ನ ಮಾತುಭಾಷೆಯನ್ನೇ ಮರೆತು ಪರಿಪೂರ್ಣ ವ್ಯಾಪರಿಯಾಗಿ ಬೇರೆ ಭಾಷಗೆ ಮನ್ನಣೆ ಕೊಟ್ಟು ತನಗೆ ಉಸಿರಾಡಿ ಬದುಕಲು ಅವಕಾಶ ಕೊಟ್ಟ ತಾಯಿನುಡಿಯನ್ನೇ ದೂರ ಮಾಡಿ ತನ್ನ ಮುಂದಿನ ಪೀಳಿಗೆಗೆ ಮಮ್ಮಿ ಡ್ಯಾಡಿ ಎನ್ನುವ ಹುಚ್ಚು ಸಂಸ್ಕೃತಿಗೆ ಮುನ್ನುಡಿ ಬರೆಯುತ್ತಾನೆ.
ಇದು ಇಂದಿನ ವಾಸ್ತವ , ನಿಮ್ಮಲ್ಲಿ ಎಷ್ಟು ಜನ ಅಮ್ಮ, ಅಪ್ಪ ಎಂದು ತಮ್ಮ ಹೆತ್ತವರನ್ನು ಕರೆಯುತ್ತಿರ?
ಉತ್ತರ ಶೇಕಡಾ ೫೦ಕ್ಕಿಂತ ಕಡಿಮೆ.
ಇತ್ತೀಚಿಗೆ ಪ್ರತಿಷ್ಟಿತ ಬಹುರಾಷ್ಟ್ರೀಯ ಸಂಸ್ತೆಯಲ್ಲಿ ಕೆಲಸ ಮಾಡುವ ಕನ್ನಡಿಗರು , ತಮ್ಮ ಸಂಸ್ತೆಯಲ್ಲಿ ಕನ್ನಡ ಮಾತನಾಡಿದರೆ ನಮಗೆ ಅವಮಾನವೆಂಬಂತೆ ಅಂಗ್ಲ ಭಾಷೆಯಲ್ಲೇ ತಮ್ಮ ಕಷ್ಟ ಸುಖಗಳ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಇನ್ನ ಹಳ್ಳಿಯವರು ತಮ್ಮ ಮಕ್ಕಳ್ಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಿ , ತಮ್ಮ ಹಳ್ಳಿ ಸೊಗಡಿನ ಕನ್ನಡವನ್ನು ಬಿಟ್ಟು ಅಲ್ಪ ಸ್ವಲ್ಪ ಇಂಗ್ಲಿಷ್ ಪದಗಳ ಬಳಕೆ ಮಾಡಿ ನನಗೂ ಬರತೈತಿ ಇಂಗ್ಲೀಸು ಅಂತ ತೋರಿಸ್ಕೊಳ್ಳುತಾ , ಹುಚ್ಚು ಭ್ರಮೆಯಲ್ಲಿ ತಾನು ಕನ್ನಡಿಗ ಎನ್ನುವುದನ್ನೇ ಮರೆಯುತ್ತ ಇದ್ದಾನೆ . ಈ ಬೆಳವಣಿಗೆ ಒಂದರ್ಥದಲ್ಲಿ ಉತ್ತಮವಲ್ಲ ಒಂದು ಸಮಾಜ ಮತ್ತು ಅದರ ಸಂಸ್ಕಾರಕ್ಕೆ ದೊಡ್ಡ ಆಘಾತ.
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಬಹು ರಾಷ್ಟ್ರೀಯ ಸಂಸ್ತೆಗಳ ಮುಖ್ಯಸ್ತರು ಮೂಲ ಸಂಸ್ತೆಯ ದೇಶದ ನಾಗರಿಕರು (ನನ್ನ ಸಂಸ್ತೆಯು ಸಹ ಇದರಲ್ಲಿ ಸೇರಿದೆ). ಮೂಲ ಸಂಸ್ತೆಯ ವ್ಯವಹಾರವೆಲ್ಲ ಅ ದೇಶದ ರಾಷ್ಟ್ರೀಯ ಭಾಷೆಯಲ್ಲಿ ಇದ್ದರೆ ಅದಕ್ಕೂ ಭಾರತದಲ್ಲೂ ಸಹ ಮನ್ನಣೆ ಇದೆ.(ಸಂಸ್ತೆಯ ಪತ್ರ ವ್ಯವಹಾರಗಳಲ್ಲಿ ಮೊದಲು ತಮ್ಮ ರಾಷ್ಟ್ರ ಭಾಷೆ( ಜರ್ಮನ್ , ಫ್ರೆಂಚ್ , ಫಿನ್ನಿಷ್ ) ನಂತರ ವ್ಯವಹಾರಿಕ ಭಾಷೆಯಾಗಿ ಅಂಗ್ಲ ಭಾಷೆ). ಅ ದೇಶದ ನಾಗರೀಕರು ತಮ್ಮ ಮಾತೃ ಭಾಷಗೆ ನೀಡುತ್ತಿರುವ ಮನ್ನಣೆ ಶ್ಲಾಘನೀಯ.
ಪ್ರತಿ ಶುಕ್ರವಾರ ಗುರುದೇವ ರವೀಂದ್ರನಾಥ ಟ್ಯಾಗೂರು ಅವರು ತಮ್ಮ ನೂತನ ಕೃತಿಗಳನ್ನು ಶಾಂತಿ ನಿಕೇತನದ ವಿದ್ಯಾರ್ಥಿ ಳು ಮತ್ತು ಅಧ್ಯಾಪಕರ ಮುಂದೆ ವಾಚಿಸುವುದಕ್ಕೆ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತಿ
ಭಾಷಾಭಿಮಾನ ಬೇಕೇ ಬೇಕು. ಭಾರತ ಪ್ರಜಾತಂತ್ರ ಒಕ್ಕೂಟ ನಿಂತಿರುವುದು ಭಾಷೆಯ ಮೇಲೆಯೇ ಎನ್ನುವುದನ್ನು ನಾವು ಎಂದು ಮರೆಯ ಬಾರದು. ಅನ್ಯ ಭಾಷಿಕರಿಗೆ ಇರುವ ಕನಿಷ್ಠ ಅಭಿಮಾನ ನಮಗೆಕಿಲ್ಲ. ಕನ್ನಡಕ್ಕೆ ಮೇರು ಕೊಡುಗೆ ನೀಡಿದ ಕಿಟ್ಟಲ್ , ರೈಸ್ , ಮಾಸ್ತಿ , ಕೈಲಾಸಂ , ಬೇಂದ್ರೆ , ರಾಜರತ್ನಂ , ನಿಸಾರ್ ಅಹಮದ್ ಮತ್ತು ಹಲವರ ಮಾತೃ ಭಾಷೆ ಕನ್ನಡವೇ ಅಲ್ಲ . ಕನ್ನಡಿಗ ಕೇವಲ ನವಂಬರಿಗೆ ಸೀಮಿತನಾಗಿ ಎಲ್ಲರ ಹಾಗೆ ಜೈ ಕರ್ನಾಟಕ ಎನ್ನದೆ, ಗಾಂಚಲಿ ಬಿಡಿ ಕನ್ನಡ ಮಾತನಾಡಿ ಎಂದು ಕೇವಲ ಫೇಸ್ ಬುಕ್ ಅಲ್ಲಿ ಲೈಕ್ ಮಾಡಿ ನಿಲ್ಲಬೇಡ . ನಿನ್ನ ದೇಶ ಮತ್ತು ನಿನ್ನ ಭಾಷೆಗೆ ನಿನ್ನ ಕೊಡುಗೆ ಬೇಕು. ಅದಕ್ಕೆ ಹೇಳಿರುವುದು ಕುವೆಂಪುರವರು ” ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ “.ದ್ದರು. ಕಾರ್ಯಕ್ರಮ ಮುಗಿದ ಮೇಲೆ ಅಲ್ಲಿ ನೆರೆದಿದ್ದವರ ಪ್ರಶ್ನೆಗಳಿಗೆ ಗುರುದೇವರು ಉತ್ತರಿಸುತ್ತಿದ್ದರು. ಒಂದು ಬಾರಿ ಒಬ್ಬ ಅನ್ಯ ಭಾಷಿಕ ಮತ್ತು ಒಬ್ಬ ಬಂಗಾಳಿ ವಿದ್ಯಾರ್ಥಿ ಒಟ್ಟಿಗೇ ಪ್ರಶ್ನೆ ಕೇಳುತ್ತಾರೆ. ಆಗ ಅನ್ಯಭಾಷಿಕ ವಿದ್ಯಾರ್ಥಿಗೆ ಗುರುದೇವರು ಹೇಳುತ್ತಾರೆ ” ನನ್ನ ಬಂಗಾಳಿ ಮಿತ್ರನಿಗೆ ಮೊದಲು ಉತ್ತರಿಸುತ್ತೇನೆ , ಆಮೇಲೆ ನಿಮ್ಮ ಸರದಿ ” .
ಬನ್ನಿ ಕನ್ನಡ ರಾಜ್ಯೋತ್ಸವನ್ನು ಅರ್ಥ ಪೂರ್ಣ ವಾಗಿ ಆಚರಿಸೋಣ…
* * * * * * * * *
ಚಿತ್ರ ಕೃಪೆ : ಅಂತರ್ಜಾಲ
ಹೀಗೊಂದು ಸಂ..ಶೋಧನೆ
-ಪ್ರಶಸ್ತಿ ಪಿ.ಸಾಗರ
ಉಪ್ಪಿಗಿಂತ ರುಚಿ ಬೇರೆ ಇಲ್ಲ
ಟೆಸ್ಟಿಂಗಿಲ್ಲದ ಜಗತ್ತೆ ಇಲ್ಲ…
ಅಂತ ಗುಂಡಣ್ಣ ಹಾಡ್ತಾ ಇದ್ದ . ಸೂಪರ್ ಮಚ್ಚಾ.. ಮಸಾಲೆಪುರಿಗೆ ಐಸ್ ಕ್ರೀಂ ಸೇರ್ಸಿದಂಗೈತೆ ಅಂತ ಕಾಲೆಳ್ದ ತರ್ಲೆ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಗೊಳ್ ಅಂತ ನಕ್ರು. ಏ ಸುಮ್ನಿರ್ರಿ ,ಅಷ್ಟೇನೂ ಅದ್ವಾನವಾಗಿಲ್ಲ. ಮಿಸ್ಟರ್ ರೌಂಡ್ ಅಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ಕಿರ್ಬೇಕು. ಅದ್ಕೇ ಖುಷಿಯಾಗಿ ಹಾಡ್ತಿರಬೇಕು ಅಲ್ವಾ ರೌಂಡ್ ಅಂತ ಸಮಾಧಾನ ಮಾಡಿದ್ಲು ಇಳಾದೇವಿ ಅಲಿಯಾಸ್ ಇಳಾ..
ಹೂಂ ಕಣ್ರೋ. ನನ್ನಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ತು. ಡೆವಲಪರ್ಸ್ ಏನೇ ಮಾಡಿದ್ರೂ ಅದ್ನ ಟೆಸ್ಟರ್ಸ್ ಸೈ ಅನ್ನದೆ ಅದು ಜೈ ಅನ್ನಲ್ಲ. ಹಂಗಾಗಿ ಅದ್ಕೂ ಈಗೀಗ ಬೆಲೆ ಬರ್ತಿದ್ಯಂತೆ ಅಂದ ಗುಂಡ. ಹೌದಂಬ್ರು ,ಸಾಪ್ಟವೇರ್ ಟೆಸ್ಟಿಂಗ್ ಜೊತೆ ಡಾಟಾ ಮೈನಿಂಗ್ ಅಂತೇನೂ ಮುಂದಿನ ಸೆಮ್ಮಲ್ಲಿ ಉಟಂತಲಾ ಅದ್ಕೂ ಭರ್ಜರಿ ಬೆಲಿ ಇತ್ತಂಬ್ರು ಅಂದ್ಲು ಸರಿತಾ ಅಲಿಯಾಸ್ ಸರಿ. ಹೌದಾ ಸರಿ ??, ನೀ ಹೇಳಿದ್ದೆಲ್ಲಾ ಸರಿ ಅಂದ ತಿಪ್ಪ. ಎಲ್ಲಾ ಮತ್ತೆ ನಕ್ರು.
ನಂಗೆ ಬಳ್ಳಾರಿ ಮೈನಿಂಗ್ ಮಾತ್ರ ಗೊತ್ತುಂಟು. ಇದೆಂತಾ ಡಾಟಾ ಮೈನಿಂಗ್ ಮಾರ್ರೆ ಅಂದ ಮಂಗ್ಳೂರು ಮಂಜ. ರಾಶಿ ಬಿದ್ದಿರೋ ಮಾಹಿತೀಲಿ ಬೇಕಾಗಿರೋ ಮಾಹಿತೀನ ಕೆದಕಿ ತೆಗ್ಯೋದು , Finding required data out of heap of data ಅಂದ್ಲು ಇಳಾ ತನ್ನತ್ರ ಇರೋ ಮಾಹಿತಿ ಮತ್ತೆ ಇಂಗ್ಲೀಷಿಗೆ ಜಂಭ ಪಡ್ತಾ. ಓ, ತಿಪ್ಪೇಲಿ ಕಸ ಆರಿಸ್ದಂಗಾ ಅಂದ ತಿಪ್ಪೇಶಿ. ಮತ್ತೆ ಗೊಳ್.. ಹೇ, ಹಂಗೆಲ್ಲಾ ಅವ್ಮಾನ ಮಾಡಬಾರ್ದು. ಅದ್ಕೆ ಎಷ್ಟು ಬೆಲೆ ಇದೆ ಗೊತ್ತಾ ಅಂದ ಗುಂಡ. ಮತ್ತಷ್ಟು ಓದು 
ಯಡಿಯೂರಪ್ಪರ ಹೊಸ ಪಕ್ಷವೂ..ರಾಜ್ಯ ರಾಜಕೀಯ ಜಂಜಾಟವೂ..!
– ಶಂಶೀರ್ ಬುಡೋಳಿ

ರಾಜ್ಯ ಬಿಜೆಪಿಯ ಆಡಳಿತಾವಧಿಯ ಕಾಲಾವಧಿ ಮುಗಿಯುತ್ತಾ ಬಂದಿದೆ..ಜೊತೆಗೆ ದಿ ಗ್ರೇಟ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಬ್ಲಾಕ್ಮೇಲ್ ರಾಜಕಾರಣ ಕೂಡಾ ಹೆಚ್ಚಾಗ್ತಾ ಇದೆ. ಹಗರಣದ ಆರೋಪ ಮೈಮೇಲೆ ಬಂದಾಗ ಅನಿವಾರ್ಯವಾಗಿ ಸಿಎಂ ಪಟ್ಟದಿಂದ ಕೆಳಗಿಳಿಯುವಾಗ ಬಿಜೆಪಿ ಹೈಕಮಾಂಡ್ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆಂದು ಭರವಸೆ ನೀಡಿತ್ತೆಂದು ಹಲವಾರು ಬಾರಿ ಯಡಿಯೂರಪ್ಪರೇ ಹೇಳಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಮಾಜಿ ಸಿಎಂ ‘ಹಠ’(ಯಡಿ)ಯೂರಪ್ಪ ಬಿಜೆಪಿಯನ್ನ ತೊರೆದು ಕೆಜೆಪಿ ಎಂಬ ಸ್ವಪಕ್ಷ ಕಟ್ಟುವ ಮೂಲಕ ಬಿಜೆಪಿ ಹೈಕಮಾಂಡ್ಗೆ ಸವಾಲು ಎಸೆದಿದ್ದಾರೆ..ಅದಕ್ಕೂ ಮುನ್ನಾ ಹೈಕಮಾಂಡ್ಗೆ ತನಗೆ ಸೂಕ್ತ ಸ್ಥಾನಮಾನ ನೀಡುವುದರ ಬಗ್ಗೆ ಬೇಗ ಯೋಚಿಸಿ ಅಂತಾ ಎಚ್ಚರಿಕೆ ಕೊಟ್ಟು ತಾನೇ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನ ಆಡಳಿತಕ್ಕೆ ತಂದಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಯಡಿಯೂರಪ್ಪಗೆ ಮಾನ ಮರ್ಯಾದೆ ಎನ್ನುವುದು ಇಲ್ಲವೇ..?
ಮಾಜಿ ಸಿಎಂ ಯಡಿಯೂರಪ್ಪನವರು ಬಿಜೆಪಿ ಹೈಕಮಾಂಡ್ನಿಂದ ಮುನಿಸಿಕೊಂಡು ಪ್ರತ್ಯೇಕ ಪಕ್ಷವನ್ನ ಕಟ್ಟುವ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ನಿಜಕ್ಕೂ ಇದು ರಾಜ್ಯ ರಾಜಕೀಯದಲ್ಲಿ ಹೊಸ ಶಕೆಯನ್ನ ಆರಂಭಿಸಲಿದೆಯೇ..? ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉತ್ತರ ನಿಜಕ್ಕೂ ಇಲ್ಲ..ಯಾವ ಯಡಿಯೂರಪ್ಪ ತಾನು ಬಿಜೆಪಿಯಿಂದಲೇ ಬೆಳೆದು ಬಂದಿರುವುದನ್ನೇ ಮರೆತುಕೊಂಡು ತಾನು ಕುಣಿಸಿದ ಹಾಗೇ ಶೆಟ್ಟರ್ ಹಾಗೂ ಹೈಕಮಾಂಡ್ ಆಡಿಲ್ಲವೆಂದು ಮುನಿಸಿಕೊಂಡು ಅದಕ್ಕಿಂತಲೂ ಹಠ ಮಾಡಿಕೊಂಡು ಹೊಸ ಪಕ್ಷ ಕಟ್ಟುವುದಕ್ಕೆ ಮುಂದಾಗಿದ್ದು ಇವರ ಮೂರ್ಖತನಕ್ಕೊಂದು ಸಾಕ್ಷಿ. ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಶ್ರೀರಾಮುಲು ‘ಬಿಎಸ್ಆರ್’ ಪಕ್ಷವನ್ನು ಸ್ಥಾಪನೆ ಮಾಡಿದ ವೇಳೆ ರಾಜ್ಯದಲ್ಲಿ ಬದಲಾವಣೆ ಆಗುತ್ತದೆಂದು ಭಾವಿಸಲಾಗಿತ್ತು. ಆದರೆ ಇಂದು ಈ ಪಕ್ಷ ಪ್ರಾಥಮಿಕ ಮಟ್ಟದಿಂದಲೇ ಬೇರೂರಲು ಇನ್ನು ಸಾಧ್ಯವಾಗಿಲ್ಲ. ಇನ್ನು ರಾಜ್ಯ ಬಿಜೆಪಿ ಹಾಗೂ ಯಡಿಯೂರಪ್ಪರ ವಿಷಯಕ್ಕೆ ಬರುವುದಾದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಮನದಲ್ಲಿ ಏನೇನೋ ಇದೆ..ಮಾತು ಮೊದಲೇ ಹೇಳಿಬಿಡಲು ಕಾರಣನೂ ಇದೆ. ‘ನಾನು ಪಕ್ಷ ಬಿಟ್ಟು ಹೋಗುತ್ತಿದ್ದೇನೆ. ಯಾರಿಗೆ ಬೇಕಾಗಿದೆ ಬಿಜೆಪಿ. ನನಗೆ ಮಾಡಿದ ಅಪಮಾನಕ್ಕಾಗಿ ಪಕ್ಷ ಬಿಡುತ್ತಿದ್ದೇನೆ’ ಎಂದು ತಾನು ಬೆಳೆದು ಬಂದ ಪಕ್ಷದ ವಿರುದ್ಧನೆ ಇತ್ತೀಚಿಗಷ್ಟೇ ಶಿವಮೊಗ್ಗದಲ್ಲಿ ಹೇಳಿಕೆ ನೀಡಿ ತಾನಿಲ್ಲದೇ ಬಿಜೆಪಿ ಪಕ್ಷ ರಾಜ್ಯದಲ್ಲಿರಲು ಸಾಧ್ಯನೇ ಇಲ್ಲ ಅಂತಾ ಫೋಸು ಕೊಡುತ್ತಿರುವ ಯಡಿಯೂರಪ್ಪರ ಮೊಸಳೆ ಕಣ್ಣೀರು ಜನರಿಗೆ ಅರ್ಥವಾಗಲ್ಲವೇ..? ಮತ್ತಷ್ಟು ಓದು 
ಸ್ವಾಮಿ ವಿವೇಕಾನಂದರ ಪದತಳದಲ್ಲಿ ಅರಳಿದ ಕುಸುಮ ಭಗಿನಿ ನಿವೇದಿತಾ
– ಶ್ರೀವಿದ್ಯಾ,ಮೈಸೂರು
ಇಂದು ನಮ್ಮ ಸೋದರಿ ನಿವೇದಿತಾ ಅವರ ಜನ್ಮದಿನ. ನಿವೇದಿತಾ ಅವರ ಜೀವನವನ್ನು ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದವರು. ಉದಾರ ಮನಸ್ಸು ಅವರದ್ದು. ಸ್ವಾಮಿ ವಿವೇಕಾನಂದರ ಭವ್ಯ ಭಾರತದ ಕನಸ್ಸನ್ನು ನನಸಾಗಿಸಲು ಸಾಕಷ್ಟು ಪ್ರಯತ್ನಿಸಿದರು. ಆ ಕಾಲದಲ್ಲಿ ಮಹಿಳೆಯರಿಗೆಶಾಲೆಗಳು ಇರಲಿಲ್ಲ. ಜ್ಞಾನವೂ ಕಡಿಮೆಯಿತ್ತು. ಆದರೆ, ಈ ಕಾಲದಲ್ಲಿ ನೋಡಿ, ಎಷ್ಟೋ ಮಹಿಳೆಯರು ವಿದ್ಯಾವಂತರಾಗಿ ಜೀವನ ನಡೆಸುತ್ತಿರುವರು.ಇದೆಲ್ಲಾ ನಿವೇದಿತಾ ಅವರ ಪರಿಶ್ರಮದಿಂದ ! ನಿವೇದಿತಾ ಅವರು ಮನೆ ಮನೆಗಳಿಗೆ ಹೋಗಿ ಮನವೊಲಿಸಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಜಾಗೃತಿ ಮೂಡಿಸಿ ಅನೇಕ ಶಾಲೆಗಳನ್ನು ಕಟ್ಟಿಸಿದರು. ಅಲ್ಲದೇ, ಪ್ಲೇಗ್ ರೋಗ ಬಂದಿದ್ದಾಗ ಜನರ ಸೇವೆ ಮಾಡಿದರು. ಅವರು ಅಸಾಮಾನ್ಯ ಮಹಿಳೆ. ಅವರ ದೇಶವನ್ನು ಬಿಟ್ಟು ಬಂದಾಗಲೂ ಅವರ ಮನಸ್ಸಿನಲ್ಲಿ ಅವರ ದೇಶದ ಜನರು ಅವರನ್ನು ದೂರವಿಡುತ್ತಾರೆಂದು ಹಿಂಸೆ, ನೋವಾಗುತ್ತಿತ್ತು. ಆದರೂ, ಭಾರತ ದೇಶಕ್ಕೆ ಅದೆಲ್ಲ ತ್ಯಾಗ ಮಾಡಿದ್ದು ಅವರ ಪ್ರೀತಿ, ಗೌರವ ದೊಡ್ಡದು ಅಲ್ಲವೇ ? ಅವರು ನಮ್ಮವರೇ ಎಂದು ಅವರ ಜನ್ಮದಿನವನ್ನು ನೆನೆಸಿಕೊಂಡು ಆಚರಿಸೋಣ
ಅವರ ಜೀವನವನ್ನು ತಿಳಿಸುತ್ತಿದ್ದೇನೆ…
೧೮೬೭ರ ಅಕ್ಟೋಬರ್ ೨೮ರಂದು ಮಾರ್ಗರೆಟ್ ಎಲಿಜಬೆತ್ ನೊಬೆಲ್(ನಿವೇದಿತಾ) ಐರ್ಲೆ೦ಡಿನಲ್ಲಿ ಹುಟ್ಟಿದಳು.ತಾಯಿ ಮೇರಿ ಇಸಬೆಲ್, ತಂದೆ ಸಾಮ್ಯುಅಲ್. ಐರ್ಲೆ೦ಡಿನಲ್ಲಿ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆದಿದ್ದಾಗ ಅವಳ ಅಜ್ಜ ಹ್ಯಾಮಿಲ್ಟನ್ ಭಾಗವಹಿಸಿ, ಮನೆಮಾತಾಗಿದ್ದರು. ತಮ್ಮ ಅಜ್ಜನಿಂದ ಅಪಾರವಾದ ಧೈರ್ಯ ಮತ್ತು ದೇಶಭಕ್ತಿ, ಧರ್ಮಗುರುವಾದ ತಂದೆಯಿಂದ “ಮಾನವ ಸೇವೆಯೇ ಭಗವಂತನ ಸೇವೆ” ಎಂಬ ಆದರ್ಶಗಳನ್ನು ಬಾಲ್ಯದಿಂದಲೇ ಅವಳು ರೂಢಿಸಿಕೊಂಡಿದ್ದಳು. ಅಷ್ಟೇ ಅಲ್ಲ, ದಾಷ್ಟ್ರಭಕ್ತಿ, ದೈವಭಕ್ತಿ ಜೊತೆಯಾಗಿ ಅವಳ ಹೃದಯದಲ್ಲಿ ಬೆಳೆದವು. ದುಃಖದಲ್ಲಿರುವವರನ್ನು ಅನುಕಂಪದಿಂದ ಕಾಣುವ ಗುಣ ಬೆಳೆದವು. ಶಾಲೆಯಲ್ಲೂ ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದಳು. ರಗ್ಬಿ ಎನ್ನುವ ಸ್ಥಳದಲ್ಲಿ ಹೆಣ್ಣುಮಕ್ಕಳ ಉಚಿತ ಅನಾಥಾಲಯದಲ್ಲಿ ಒಂದು ವರ್ಷ ಕೆಲಸ ಮಾಡಿದಳು. ನಂತರ, ರೆಕ್ಸ್ ಹಾಮ್ ಎನ್ನುವ ಗಣಿಕೇಂದ್ರದಲ್ಲಿದ್ದ ಸೆಕೆಂಡರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡಿದಳು. ಸಮಾಜ ಸೇವಕಿಯಾಗಿಯೂ ಕೆಲಸ ಪ್ರಾರಂಭಿಸಿದಳು.೧೮೯೨ರಲ್ಲಿ ತನ್ನದೇ ಸ್ವಂತ ಶಾಲೆಯನ್ನು ಪ್ರಾರಂಭಿಸಿದಳು. ಈ ಶಾಲೆ ಬಹುಬೇಗ ಜನಪ್ರಿಯವಾಯಿತು. ಅವಳು ಮದುವೆಯಾಗಬೇಕು ಎನ್ನುವ ಹಂತದಲ್ಲಿ ಮದುವೆ ಮುರಿದುಬಿತ್ತು. ೧೮೯೫, ಮಾರ್ಗರೆಟ್ ಸ್ವಾಮಿ ವಿವೇಕಾನಂದರನ್ನು ಕಂಡ ವರ್ಷ. ಅದು ಅವಳ ಜೀವನದ ದಿಕ್ಕನ್ನೇ ಬದಲಾಯಿಸಿದ ಮಹತ್ವದ ವರ್ಷ. ಈ ಭೇಟಿಯ ನಂತರ ಅವಳು ಸ್ವಾಮೀಜಿಯ ಮಾತು-ಬರಹಗಳನ್ನು ಮತ್ತೆ-ಮತ್ತೆ ಓದಿದಳು. ಭಾರತೀಯ ತತ್ವಶಾಸ್ತ್ರ, ಉಪನಿಷತ್ತು, ಭಗವದ್ಗೀತೆಯನ್ನು ಅಧ್ಯಯನ ಮಾಡಿ ಚರ್ಚೆ ಮಾಡಿದಳು. ಕ್ರಮೇಣ ಅವಳ ಸಂಶಯಗಳೆಲ್ಲ ದೂರವಾದವು. ವಿವೇಕಾನಂದರು ಭಾರತದ ಬಡಮಕ್ಕಳ, ಸ್ತ್ರೀಯರ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಕುರಿತು ಮಾತನಾಡುತ್ತಿರುವಾಗ ಮಾರ್ಗರೆಟ್ ” ನಾನು ಸಿದ್ಧಳಾಗಿದ್ದೇನೆ, ಆ ಕೆಲಸ ಮಾಡುತ್ತೇನೆ” ಎಂದಳು.
ಮತ್ತಷ್ಟು ಓದು 







