ವಿಷಯದ ವಿವರಗಳಿಗೆ ದಾಟಿರಿ

Recent Articles

7
ಜೂನ್

ಅಣ್ಣಾಬಾಂಡ್ ‘ನಲ್ಲಿ `ಪ್ರೇಮ್ ‘ಗಿಮಿಕ್ಸ್

ಶ್ರೀಧರ್ ಜಿ ಸಿ ಬನವಾಸಿ

ಇತ್ತೀಚೆಗೆ ಬಿಡುಗಡೆಯಾದ ಪುನೀತ್ ರಾಜ್ ಕುಮಾರ್ ಅಭಿನಯದ `ಅಣ್ಣಾ ಬಾಂಡ್’’ ಸಿನಿಮಾವನ್ನು ಎಲ್ಲರೂ ನೋಡಿರಬಹುದು. ಇಡೀ ಸಿನಿಮಾದಲ್ಲಿ ಪುನೀತ್ , ರಂಗಾಯಣ ರಘು, ಜೊತೆಗೆ ಒಬ್ಬ ಸಿನಿಮಾ ನಿರ್ದೇಶಕನ ಒಂದು ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ. ಆ ಪಾತ್ರವನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದಾಗ ಕನ್ನಡದಲ್ಲಿ ಗಿಮಿಕ್ಸ್ ಮಾಡಿ ಸದಾ ಪಬ್ಲಿಸಿಟಿ ಮಾಡೋ ನಿರ್ದೇಶಕ ಪ್ರೇಮ್ ನೆನಪಾಗುತ್ತಾನೆ.

ಚಿತ್ರದ ಒಪನಿಂಗ್ ನಲ್ಲಿ ಇಡೀ ನಗರದಾದ್ಯಂತ ಅಣ್ಣಾಬಾಂಡ್ ನ ಹವಾ ಏರುತ್ತಿದ್ದಾಗ, ಜನರೆಲ್ಲಾ ಅಣ್ಣಾ ಬಾಂಡ್ ಈ ಸಮಾಜಕ್ಕೆ ಬೇಕು ಅಂತೆಲ್ಲಾ ಕೂಗುತ್ತಿರುತ್ತಾರೆ. ಆಗ ಟೀವಿ ಚಾನೆಲ್ನವರು ಒಂದು ಸಂವಾದ ಮಾಡುತ್ತಾರೆ. ಆ ಸಂವಾದಕ್ಕೆ ಒಬ್ಬ ನಿರ್ದೇಶಕನನ್ನು ಕರೆಯುತ್ತಾರೆ. ತುಂಬಾ ಆತುರ ಸ್ವಭಾವದ, ಪಕ್ಕಾ ಮಂಡ್ಯಾ ಭಾಷೆಯಲ್ಲಿ, ಮಾತ್ ಮಾತಿಗೆ ಅಣ್ಣಾಬಾಂಡ್ ಮೇಲೆ ಸಿನಿಮಾ ಮಾಡ್ತೀನಿ, 3ಡಿ, 4ಡಿ, 6ಡಿ ಸಿನಿಮಾ ಮಾಡ್ತೀನಿ, ಇಡೀ ಕರ್ನಾಟಕದವ್ರೆಲ್ಲಾ ಈ ಸಿನಿಮಾ ನೋಡೋ ಹಾಗೆ ಪಬ್ಲಿಸಿಟಿ ಮಾಡ್ತೀನಿ ಅಂತ ಟೀವಿ ಸ್ಟುಡಿಯೋದಲ್ಲಿ ಪುಂಕಾನುಫುಂಕವಾಗಿ ಕೊರೆಯುತ್ತಿರುತ್ತಾನೆ. ಇದಾದ ನಂತರ ಈ ನಿರ್ದೇಶಕನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋದಾಗ ನಾಯಕನಿಗೆ ಮಾತ್ ಮಾತಿಗೆ `ಬಾಸು..ಬಾಸು..’ ಅಂತ ಸಂಬೋಧಿಸುತ್ತಿರುತ್ತಾನೆ.

ಮತ್ತಷ್ಟು ಓದು »

6
ಜೂನ್

ಲೇಖನಿ ದುರ್ಯೋಧನನ ಗದೆಯಾಗದಿರಲಿ

ಪರೇಶ ಸರಾಫ
 
“ಅವರ್ಯಾರೋ ಏನೋ ಹೇಳಿಕೆ ಕೊಟ್ಟರು.ಅದು ಸಹ್ಯವಲ್ಲ.” ಎಂದು ಎಷ್ಟೋ ಜನರ ಮಾತುಗಳನ್ನು ತಿರುಚಿ ಅದಕ್ಕೆ ಬಣ್ಣ ಹಚ್ಚಿ ಸುಗಂಧ ಲೇಪಿಸಿ ಅನೇಕ ಲೇಖನಗಳು ಬರುತ್ತಿರುವುದನ್ನು ಇತ್ತೀಚಿಗೆ ನೋಡುತ್ತಿದ್ದೇವೆ. ಇಂತಹ ಲೇಖನಗಳ ಬಗ್ಗೆ ಹತ್ತು ಹಲವಾರು ಬಿಸಿ ಚರ್ಚೆಗಳು ಸಾಮಾಜಿಕ ತಾಣಗಳಲ್ಲಿ, ಮತ್ತು ಬುದ್ಧಿ ಜೀವಿಗಳ ನಡುವೆ ನಡೆಯುತ್ತಿವೆ. ಹೀಗೆ ಒಬ್ಬ ವ್ಯಕ್ತಿಯ ತೇಜೋವಧೆಯ ಮೂಲಕ ತಮ್ಮ ಜನಪ್ರಿಯತೆಯನ್ನು ದುಪ್ಪಟ್ಟು ಮಾಡುವ ಹುನ್ನಾರಗಳು ಈಗಿನ ಮಾಧ್ಯಮಗಳಲ್ಲಿ ವ್ಯಾಪಕವಾಗಿರುವಾಗ ಓದುಗರು ಆಲೋಚನೆ ಮಾಡಬೇಕಾದ ಅಗತ್ಯ ಇದೆ.

ಇಂದು ರಾಜಕೀಯ ಪಕ್ಷಗಳ ಚೇಲಾ ಆಗಿರುವ ಅದೆಷ್ಟೋ ಪತ್ರಿಕೆಗಳು, ಟಿ.ವಿ. ಚಾನೆಲ್ ಗಳು ತಮ್ಮ ಸ್ವಾರ್ಥಸಾಧನೆಗಾಗಿ ವೃತ್ತಿ ಧರ್ಮವನ್ನೇ ಮರೆತು ತಾಂಡವವಾಡುತ್ತಿವೆ. ದೇಶವನ್ನು ಮೇಯುತ್ತಿರುವ ರಾಜಕಾರಣಿಗಳನ್ನು ಹೊಗಳಿ ಬರೆಯುವ ಈ ಬುದ್ಧಿ ಜೀವಿಗಳು, ಇರುವೆಯಂತಹ ವಿಷಯವನ್ನು ಆನೆ ಮಾಡಿ ತೋರಿಸಿ ತನ್ಮೂಲಕ ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿಸುವಲ್ಲಿ ಪರಿಣಿತರಾಗಿದ್ದಾರೆ. ಸಮಾಜದ ಆಗು ಹೋಗುಗಳನ್ನು, ತೊಡಕುಗಳನ್ನು ಬಿಂಬಿಸಬೇಕಾದ ಮಾಧ್ಯಮಗಳು ತಮಗೆ ಬೇಕಾದ ರೀತಿಯಲ್ಲಿ ವಿಷಯವನ್ನು ತಿರುವು ಮುರುವು ಮಾಡಿ ಬಿತ್ತರಿಸಿ ಜನರನ್ನು ನಂಬಿಸುತ್ತಿದ್ದಾರೆ. ಮಾಧ್ಯಮಗಳೇ ದುಸ್ಶ್ಯಾಸನರಾಗಿ ನಿಂತಾಗ ಸಮಾಜದ ಸ್ವಾಸ್ಥ್ಯ ಬೆತ್ತಲಾಗುವುದರಲ್ಲಿ ಮತ್ತೇನು ಸಂಶಯ?

ಮತ್ತಷ್ಟು ಓದು »

5
ಜೂನ್

ಹುಣಸೆಮರ ಮತ್ತು ಪ್ರವೀಣ

ಪವನ್ ಪಾರುಪತ್ತೇದಾರ

ಯಾಕೋ ಈ ನಡುವೆ ಪ್ರವೀಣನಿಗೆ ದುಗುಡಗಳೇ ಹೆಚ್ಚಾಗಿತ್ತು, ಏನು ಕೆಲಸ ಮಾಡಬೇಕಾದರೂ ಭಯ, ಉತ್ಸಾಹವಿಲ್ಲ, ಜಗತ್ತಿನಲ್ಲಿ ತಾನೇನನ್ನೋ ಕಳೆದುಕೊಂಡವನ ಹಾಗೆ ಇರುತಿದ್ದ. ಯಾವಾಗಲೂ ಮನೆಯ ಜಗುಲಿಯ ಮೇಲೆ ಕೂತು ಮನೆ ಮುಂಭಾಗದ ಕಂಬವನ್ನೇ ದಿಟ್ಟಿಸಿ ನೋಡುತಿದ್ದ.ಅಕ್ಕ ಪಕ್ಕದ ಮನೆಯವರೆಲ್ಲ ಇವನಿಗ್ಯಾವುದೇ ಗರ ಬಡಿದಿರಬಹುದು ಎಂದುಕೊಂಡರು, ಬರು ಬರುತ್ತಾ ಮನೆಯವರಿಗೂ ಚಿಂತೆ ಅತಿಯಾಗಿ ಏನು ಮಾಡಲು ತೋಚದ ಸ್ಥಿತಿಯಲ್ಲಿರುವಾಗ ದೂರದ ನೆಂಟರೊಬ್ಬರು ಸಲಹೆ ಕೊಟ್ಟರು, ತಮ್ಮೂರಿನಲ್ಲೊಬ್ಬ ಭೂತ ಬಿಡಿಸುವವನಿದ್ದಾನೆ, ನಿಮ್ಮ ಮಗನಿಗೆ ಯಾವುದೋ ಭೂತ ಮೆಟ್ಟಿದೆ ಆದ್ದರಿಂದಲೇ ಹೀಗೆ ಇರುವುದು ಎಂದರು. ಹೆದರಿದ ಅಪ್ಪ ಅಮ್ಮ ಮಗನ ಭೂತ ಬಿಡಿಸಲು ಆ ನೆಂಟರ ಊರಿಗೆ ಹೊರಟರು.

ಭೂತ ಬಿಡಿಸುವ ಮಂತ್ರವಾದಿ ಬೇವಿನೆಲೆ, ತಲೆಬುರುಡೆ ಮುಂತಾದವುನೆಲ್ಲ ಹಿಡಿದು ವಿಚಿತ್ರವಾದ ಮಂತ್ರಗಳನ್ನೊದುರುತಿದ್ದ. ಈ ಮಂತ್ರವಾದಿಗಿಂತ ಪ್ರವೀಣನೆ ಮೇಲು ಸುಮ್ಮನೆ ಶಾಂತನಾಗಿ ಒಂದು ಕಡೆ ಕುಳಿತುಬಿಡುತಿದ್ದ ಅಂತ ಪ್ರವೀಣನ ಅಪ್ಪ ಗೊಣಗಿಕೊಂಡರು. ಪ್ರವೀಣನ ಅಮ್ಮ ಭಕ್ತಿ ಭಾವದಿಂದ ಮತ್ತು ಭಯದಿಂದ ಸ್ವಾಮಿ ನನ್ನ ಮಗ ತುಂಬಾ ಮಂಕಾಗಿ ಬಿಟ್ಟಿದ್ದಾನೆ, ಈ ನಡುವೆ ಯಾರ ಬಳಿಯೂ ಸರಿಯಾಗಿ ಮಾತಾಡೋಲ್ಲ. ಸುಮ್ಮನೆ ಕುಳಿತಿರುತ್ತಾನೆ, ಕೆಲಸಕ್ಕೂ ಹೋಗ್ತಿಲ್ಲ. ಏನಾದ್ರು ಬೈದರೂ ಸುಮ್ಮನೇ ಕೂರುತ್ತಾನೆ, ಏನು ಮಾಡೋದೋ ಗೊತ್ತಾಗ್ತಿಲ್ಲ ದಯವಿಟ್ಟು ನೀವೇ ಏನಾದ್ರು ಪರಿಹಾರ ಕೊಡಿ ಅಂತ ಬೇಡಿಕೊಂಡರು. ಮಂತ್ರವಾದಿ ಆಆಹಹಹ ಅಂತ ಅರಚುತ್ತಾ, ಬೇವಿನ ಸೊಪ್ಪನ್ನು ಒಂದೆರಡು ಬಾರಿ ಪ್ರವೀಣನೆ ಮೇಲೆ ಒದರಿ, ಕಪಾಲದಲ್ಲಿಂದ ತೀರ್ಥವನು ಪ್ರೋಕ್ಷಣೆ ಮಾಡಿ, ಪ್ರವೀಣನನ್ನೆ ದಿಟ್ಟಿಸಿ ನೋಡುತ್ತ, ನಿಮ್ಮ ಮಗನ ಮೇಲೆ ಯಾವುದೋ ಭೂತ ಹತ್ತಿದೆ, ಅವನ ಮುಖ ನೋಡಿದ್ರೆ ಗೊತ್ತಾಗುತ್ತೆ, ಖಂಡಿತ ಇದು ಮೋಹಿನಿಯೇ ಅಂದ. ಹೆದರಿದ ಪ್ರವೀಣನ ಅಪ್ಪ, ಸ್ವಾಮಿಗಳೇ ಈಗೇನು ಇದಕ್ಕೆ ಪರಿಹಾರ, ನಮಗಿರೋವ್ನು ಒಬ್ಬನೇ ಮಗ ನೀವೇ ದಾರಿ ತೋರಿಸ್ಬೇಕು ಅಂದ್ರು. ಆಗ ಮಂತ್ರವಾದಿ ಮನದಲ್ಲೇ ಏನೋ ಲೆಕ್ಕಾಚಾರ ಹಾಕಿಕೊಳ್ಳುತ್ತ, ಕಣ್ಣು ಗುಡ್ಡೆಯ ಮೇಲೆ ಮಾಡಿ ಯಾರ ಬಳಿಯೋ ಮಾತನಾಡಿದಂತೆ ಮಾಡಿ, ನಿಮ್ಮ ಮನೆ ಹತ್ರ ಯಾವುದಾದ್ರು ದೊಡ್ಡ ಮರ ಇದ್ಯ ಅಂದ. ಅದಕ್ಕೆ ಪ್ರವೀಣನ ಅಪ್ಪ ಹೌದು ಸ್ವಾಮಿ ನಮ್ಮ ತಾತನವರು ಹಾಕಿದ ಹುಣಸೆ ಮರ ಇದೆ, ನಮ್ಮ ಜಮೀನಲ್ಲೆ ಇದೆ ಅಂದ. ಥಟ್ಟನೆ ಮಂತ್ರವಾದಿ ಆ ಮರದಲ್ಲಿ ಅಡಗಿರೋ ದೆವ್ವಾನೆ ನಿಮ್ಮ ಮಗನ ಮೈ ಮೇಲೆ ಹೊಕ್ಕಿರೋದು. ಈಗ ಪರಿಹಾರ ಅಂದ್ರೆ ನಾನು ನಿಮ್ಮ ಮಗನಲ್ಲಿರುವ ದೆವ್ವಾನ ಮತ್ತೆ ಆ ಮರಕ್ಕೆ ಓಡುಸ್ತೀನಿ ಆಮೇಲೆ ನೀವು ಆ ಮರಾನ ಕಡಿದು ಹಾಕ್ಬೇಕು ಅಂದ.

ಮತ್ತಷ್ಟು ಓದು »

5
ಜೂನ್

ಒಮ್ಮೆ ಜನಮತಸಾಂದ್ರತೆ (Demography) ಬದಲಾದರೆ…

– ಎಂ.ಡಿ ಸುಬ್ರಮಣ್ಯ ಮಾಚಿಕೊಪ್ಪ

ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demography) ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಒಮ್ಮೆ ಆ ಪ್ರದೇಶದ ಜನಮತಸಾಂದ್ರತೆ ಬದಲಾದರೆ ಎಲ್ಲವೂ ಬದಲಾಗುತ್ತದೆ. ಇಲ್ಲಿ ಎಲ್ಲವೂ ಅಂದರೆ ಆ ಪ್ರದೇಶದ ಭಾಷೆ, ಆಚಾರ-ವಿಚಾರ, ರಾಷ್ಟ್ರನಿಷ್ಠೆ, ನಾಯಕರುಗಳು-ಎಲ್ಲವೂ ಬದಲಾಗುತ್ತದೆ!!! ಇದಕ್ಕೆ ಕಶ್ಮೀರಕಣಿವೆಯ ಉದಾಹರಣೆಯೇ ನಮ್ಮ ಕಣ್ಣುಮುಂದೆ (ಕಣ್ಣಿದ್ದವರಿಗೆ) ಕಾಣುತ್ತಿದೆ. ಕಲ್ಹಣ ಸಾಹಿತ್ಯ ರಚಿಸಿದ ಆ ಕಾಶ್ಮೀರಿ ಭಾಷೆ ಕಣಿವೆಯಲ್ಲಿ ಎಲ್ಲಿದೆ? ಬೋರ್ಡ್ ಗಳಲ್ಲೆಲ್ಲಾ ಅರಬಿ ಲಿಪಿ. ‘India’ ಎಂದು ಕಾಣುವ ಬೋರ್ಡ್ ಗಳ ಮೇಲೆ ಕಲ್ಲು, ಆಗಸ್ಟ್ ೧೫ ಬಂದ್!! ವಿಜೃಂಭಣೆಯ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ!!! ನಾಗಲ್ಯಾಂಡ್, ಮಿಜೊರಾಂ ಪರಿಸ್ಥಿತಿಯೂ (ಸದ್ಯಕ್ಕೆ ತಣ್ಣಕ್ಕಿದ್ದಂತೆ ಕಂಡರೂ) ತುಂಬವೇನು ಭಿನ್ನವಾಗಿಲ್ಲ. ಒಟ್ಟು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು ಕಶ್ಮೀರ, ನಾಗಲ್ಯಾಂಡ್ ಮತ್ತು ಮಿಜೋರಾಂಗಳಲ್ಲಿ ಅವರು ತುಂಬಾ ಅಲ್ಪಸಂಖ್ಯಾತರಾಗಿದ್ದು ಮುಸ್ಲಿಂ ಹಾಗೂ ಕ್ರೈಸ್ತರು ಅಲ್ಲಿ ಬಹುಸಂಖ್ಯಾತರಾಗಿರುವುದೇ ಇದಕ್ಕೆ ಕಾರಣ. (ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಆದರೆ ಬೌದ್ದರೇ ಸಾಕಷ್ಟು ಸಂಖ್ಯೆಯಲ್ಲಿರುವ ಲಡಕ್ ಪ್ರದೇಶದಲ್ಲಿ ಈ ಸಮಸ್ಯೆ ಅಷ್ಟಿಲ್ಲ!!) ಒಮ್ಮೆ ಜನಮತಸಾಂದ್ರತೆ ಬದಲಾದರೆ ರಾಷ್ಟ್ರನಿಷ್ಟೆಯೂ ಬದಲಾಗುತ್ತದೆಂಬುದು (ಪ್ರಪಂಚ ಮಟ್ಟದಲ್ಲಿ) ಅಪ್ರಿಯ ಸತ್ಯ.

4
ಜೂನ್

((((((?)))))))

 -ಪ್ರಕಾಶ್ ಶ್ರೀನಿವಾಸ್

ನಾಳೆ ಬೆಳಗ್ಗೆ 6ಕ್ಕೆ ನನ್ನ ಗೆಳೆಯನ ಮದುವೆ..

ಹೇಗಾದರೂ ಮಾಡಿ  ಬೇಗ ಹೊರಡ ಬೇಕು ಅಂತ ಅಂದು ಕೊಂಡು
ಎಲ್ಲ ಕೆಲಸಗಳನ್ನೂ ಮಾಡಿ ಹೊರಡಲು ನಿರ್ಧರಿಸಿದೆ …
ದಿಡೀರ್ ಅಂತ ಒಂದು ಕೆಲಸ ಬಂತು ಸರಿ ಮಾಡಿ ಮುಗಿಸಿ ಹೋಗೋಣ ಬೇಗ ಅಂತ ..
ಕೆಲಸ ಶುರು ಮಾಡಿದೆ ಕೆಲಸ ಮುಗಿಸಿ ಟೈಮ್ ನೋಡಿದರೆ ರಾತ್ರಿ 9 ಆಗಿದೆ ..
ಅಯ್ಯೋ ಈಗಲೇ ಬಿಟ್ಟರೆನೆ ಬೇಗ ಅಲ್ಲಿಗೆ ತಲುಪಲು ಆಗೋದು ಅಂತ
ಮನೆಗೆ ಬಂದು ರೆಡಿ ಆಗಿ ಹೊರಟೆ,
ಹೋಗುವ ಮೊದಲು ಅಮ್ಮನಿಗೆ ಒಂದು ಮಾತು ಹೇಳಿ ಹೋಗೋಣ ಅಂತ.
ಅಮ್ಮನ ರೂಮಿಗೆ ಹೋದೆ ಅಮ್ಮ ಬೆಳಗ್ಗೆ ರಮೇಶ್ ಮದುವೆ ಇದೆ ನಾನು ಹೋಗ್ತೀನಿ
ಅಮ್ಮ ಲೋ ಹೋಗಿ ಬರ್ತೀನಿ ಅನ್ನೋ ಅಂತ ಹೇಳಿದ್ರು ..
ಸರಿ ಅಮ್ಮ ಹೋಗಿ ಬರ್ತೀನಿ ….
ಸಮಯ ಆಗಲೇ 9:30 ಆಗಿತ್ತು ….
ಬಸ್ ಸ್ಟಾಪ್ ಗೆ ಬಂದೆ ಅಲ್ಲಿ ನೋಡಿದರೆ ನಾನು ಹೊರಡಬೇಕಾದ ಊರಿನ ಎಲ್ಲ ಬಸ್ಗಳು
ಆಗಲೇ ಹೊರಟಾಗಿತ್ತು…

ಸರಿ ಒಂದೊಂದು ಬಸ್ ನ ಬದಲಾಯಿಸಿಯಾದರೂ

ನಾನು ಹೋಗಲೇ ಬೇಕು ಅಂತ ಯೋಚಿಸುತ್ತ  ಇದ್ದಾಗ ………

ಹೇಗೋ ಒಂದು ಬಸ್ ಸಿಕ್ಕಿತು
ಸರಿ ಇದರಲ್ಲಿ ಅರ್ಧ ದಾರಿ ಹೋಗಬಹುದು ನಂತರ ಬೇರೆ ಬಸ್ ಹಿಡಿದು ಮುಂದೆ ಹೋಗೋಣ ಅಂತ ನಿರ್ಧರಿಸಿ ಬಸ್ ಹತ್ತಿದೆ ..
ಮನೆಯಲ್ಲಿ ಹೊರಡುವ ಅವಸರದಲ್ಲಿ ಊಟ ಮಾಡಿರಲಿಲ್ಲ
ಹಾಗಾಗಿ ಹೊಟ್ಟೆ ಹಸಿವು ಬೇರೆ …
ಸರಿ ಬಸ್ ಮುಂದೆ ಒಂದು ಡಾಬದಲ್ಲಿ ನಿಲ್ಲಿಸುತ್ತಾರೆ ಅಂತ conductor ಹೇಳಿದರು
ಡಾಬ ಬರೋದನ್ನೇ ಕಾಯುತ್ತ ಕೂತ್ತಿದ್ದೆ…..
ಕೊನೆಗೂ ಡಾಬ ಬಂದೆ ಬಿಟ್ಟಿತು.
ಹಸಿವು ಬೇರೆ, ಓಡಿ ಹೋಗಿ ಮೊದಲು ಹೊಟ್ಟೆ ತುಂಬಾ ಊಟ  ..
ಸರ್ ಕೈ ಹೊರಗೆ ತೊಳೆದುಕೊಳ್ಳಿ ಅಂತ ಸರ್ವರ್ ಹೇಳಿದ
ಹೊರಗೆ ಕೈ ತೊಳೆಯಲು ಹೋದೆ …
ಅಲ್ಲಿಂದ ಸ್ವಲ್ಪ ದೂರದಲ್ಲಿ ಬಾತ್ ರೂಂ ಇದೆ ಅಂತ ಬೋರ್ಡ್ ಇತ್ತು   ಮತ್ತಷ್ಟು ಓದು »
31
ಮೇ

ಸಾಮಾಜಿಕ ಕಳಕಳಿಯೆಂದರೆ…..

-ಡಾ.ಅಶೋಕ್ ಕೆ.ಆರ್

ತೀರ ಗಂಗಾಧರ್ ಮೊದಲಿಯಾರ್ ಕೂಡ ಈ ರೀತಿಯಾಗಿ ಬರೆಯಬಲ್ಲರು ಎಂದು ನಿರೀಕ್ಷಿಸಿರಲಿಲ್ಲ! ಪ್ರಜಾವಾಣಿಯ ಸಿನಿಮಾರಂಜನೆಯ ಫಿಲಂ ಡೈರಿ ಅಂಕಣದಲ್ಲಿ ಅಮೀರ್ ಖಾನನ ಸತ್ಯಮೇವ ಜಯತೆಯ ಬಗ್ಗೆ ಬರೆದಿದ್ದಾರೆ. ‘ಬುರುಡೆ ಪುರಾಣ’ ಎಂಬ ಶೀರ್ಷಿಕೆಯೇ ಅಸಂಬದ್ಧವಾಗಿದೆ. ಅಮೀರ್ ಖಾನನ ಕೆಲಸವನ್ನು ಮೆಚ್ಚುತ್ತಲೇ ಅವನನ್ನು ತೆಗಳುತ್ತಾ ಹೋಗುತ್ತಾರೆ. ಭಾವನೆಗಳನ್ನು ಉದ್ರಿಕ್ತಗೊಳಿಸಿ ಹಣ ಮಾಡುವ ‘ದಂಧೆ’ ಎಂದುಬಿಡುತ್ತಾರೆ. ಅಮೀರ್ ಖಾನ್ ಹೋರಾಟಗಾರನಲ್ಲ, ಸಾಮಾಜಿಕ ಕಾರ್ಯಕರ್ತನೂ ಅಲ್ಲ; ಆತ ಒಬ್ಬ ನಟ, ನಿರ್ಮಾಪಕ, ನಿರ್ದೇಶಕ. ಹಣವಿಲ್ಲದೆ ಏನೂ ಮಾಡಲಾಗದ ಚಿತ್ರರಂಗದವನು. ಯಾವ ಕಾರ್ಯಕ್ರಮ ಮಾಡಿದರೂ ಅದರಿಂದ ಲಾಭ ಬರುವುದನ್ನು ಅವನು ಗಮನಿಸಲೇಬೇಕು. ‘ಏರ್ ಟೆಲ್ನಿಂದ ಮೇಸೇಜ್ ಮಾಡಿ, ಕೇವಲ ಒಂದು ರುಪಾಯಿ’ ಎಂದವನು ಕಾರ್ಯಕ್ರಮದ ಕೊನೆಯಲ್ಲಿ ಹೇಳುವುದು ಕೂಡ ಲಾಭದ ಒಂದು ಮುಖ. ಇವೆಲ್ಲವೂ ಸತ್ಯವೇ, ಆದರೆ….
ಪತ್ರಿಕೆಗಳಿರಬಹುದು, ಅಂತರ್ಜಾಲ ತಾಣಗಳಲ್ಲಿರಬಹುದು ಇಂದು ಅಮೀರ್ ಖಾನನ ಕಾರ್ಯಕ್ರಮವನ್ನು ಅಮಿತಾಭ್ ನಡೆಸಿಕೊಟ್ಟ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಹೋಲಿಸಿ ಮಾತನಾಡುತ್ತಾರೆ. ಕೋಟ್ಯಧಿಪತಿಗೆ ಹೆಚ್ಚು ಟಿ.ಆರ್.ಪಿ ಇತ್ತು ಎಂದು ಹೇಳುತ್ತಾರೆ. ಇವೆರಡೂ ಕಾರ್ಯಕ್ರಮಗಳನ್ನು ಹೋಲಿಸುವುದೇ ಹಾಸ್ಯಾಸ್ಪದ. ಎರಡರ ಉದ್ದಿಶ್ಯವೂ ಬೇರೆ. ‘ಪ್ರೈಮ್ ಟೈಮ್’ ಎಂದು ಕರೆಯಲ್ಪಡುವ ರಾತ್ರಿ ಎಂಟರ ಸಮಯವನ್ನು ಬಿಟ್ಟು ಅಮೀರ್ ಖಾನ್ ಭಾನುವಾರ ಬೆಳಿಗ್ಗೆ ಹನ್ನೊಂದರ ಸಮಯವನ್ಯಾಕೆ ಆರಿಸಿದ ಎಂಬುದನ್ನೂ ಗಮನಿಸಬೇಕಲ್ಲವೇ? ಹಣ ಮಾಡುವುದಷ್ಟೇ ಉದ್ದೇಶವಾಗಿದ್ದರೆ ಈ ‘ಮೂರ್ಖ’ ಕೆಲಸವನ್ಯಾಕೆ ಮಾಡಬೇಕಿತ್ತವನು?
30
ಮೇ

ದೇವಾಡಿಗ ಯುನೈಟೆಡ್ ಚಾರಿಟಿ ಶೋ…

– ಲೋಕು ಕುಡ್ಲ

 ಪೊರ್ಲು ಬೈಯ್ಯದ ಮುಗಲ್ ಕತ್ತಲೆಡ್ ಕುಡ್ಲದ ಟೌನ್ ಹಾಲ್ ವೇದಿಕೆಡ್ ಉಂದೇ ಶನಿವಾರದಾನಿ 26-5-2012 ನೇ ತಾರೀಖ್ ಗ್ ನಡತ್ತಿನ ದೇವಾಡಿಗ ಚಾರಿಟಿ ಶೋ ಕಾರ್ಯಕ್ರಮದ ಪೊರ್ಲು ವರ್ಣನೆಗ್ ಮೀರ್ದಿನ. ಯುವ ಸೈನ್ಯ ಎಡ್ಡೆ ಬೇಲೆಗ್ ಜತ್ತ್೦ಡ್ ಪಂದಾಂಡ ಆ ಬೇಲೆ ಪೊರ್ಲುಡು ನೆರವೇರುನೆಟ್ಟ್ ವಾ ಸಂಶಯಲಾ ಇಜ್ಜಿ ಪನ್ಪಿನೆನ್ ದೇವಾಡಿಗ ಯುನೈಟೆಡ್ ಯುವ ಸಂಘಟನೆ ತೋಜಾದ್ ಕೊರ್ತೆರ್, ಜತ್ತಿ ಬೆಗರ್ ಪನಿನ್ ಲೆಕ್ಕ ದೀವಂದೆ ದೇವಾಡಿಗ ಯುನೈಟೆಡ್ ಸಂಘಟನೆ ಮಂತಿ ಬೇಲೆ ಶ್ಲಾಘನೀಯ, ದಾನೊಡ್ದು ಮಲ್ಲ ದಾನ ವಿಧ್ಯಾದಾನ ಆ ಮಲ್ಲ ದಾನೊನು ಮಂತಿ ಪುಣ್ಯ ಮಾತ ದೇವಾಡಿಗ ಯುವ ಬಂಧುಲೆಗ್ ಸಂದುಂಡು,

ವಿದ್ಯೆದ ಬಡವುಡು ಪೊರೆಲೊಂದಿತ್ತಿ ಪಾಪದ ಜೋಕ್ಲೆನ್ ಕೈ ಪತ್ತ್ ದ್ ಲಕ್ಕಾಯೆರ್ ದೇವಾಡಿಗೆರ್, ಆ ಜೋಕುಲು ಅಕ್ಲೆ ವಿದ್ಯೆದ ಬಡವುನು, ಆ ಬಡವುಗು ಆರ್ಥಿಕತೆದ ಅಂಗಲಪ್ಪುನು ಅಕ್ಲೆ ಬಾಯಾರ ಪಂಡಿನ ಪಾತೆರೊನು ಕೇನ್ನಗ ಎಂಚಿನಾಯಗ್ಲಾ ಒರ ಬಂಜಿ ನುಂಗುದು ಪೋವು, ಅಂದ್ ಆ ಜೋಕ್ಲೆ ವಿದ್ಯೆ ಅಂಗಲಪುದ ಪಾತೆರೊನು ಪ್ರತೀ ಜೋಕ್ಲೆನ ಇಲ್ಲಡೆಗ್ ಪೊದು ಅಕ್ಲೆ ಬಂಗ ಬದ್ಕ್ ದ ವಿಚಾರೊಲೆನ್ ತೆರಿಯೊ೦ದು ವೀಡಿಯೋ ಸಮೇತ ಯುನೈಟೆಡ್ ಬಂಧುಲು ಟೌನ್ ಹಾಲ್ ಡ್ ನಡತ್ತಿನ ಕಾರ್ಯಕ್ರಮೊಡು ಜನಕ್ಲೆಗ್ ತೊಜಪಾಯೆರ್ ಅಂಚೆನೆ ಕೆಲ ದೇವಾಡಿಗೆರ್ ದೇವಾಡಿಗ ವಿಧ್ಯಾದಾನದ ಎಡ್ಡೆ ಬೇಲೆಗ್ ಶುಭ ಹಾರೈಸಿಯೆರ್.
30
ಮೇ

ಕಾನೂರು ಹೆಗ್ಗಡಿತಿ – 75

– ಡಾ| ಬಿ.ಆರ್ ಸತ್ಯನಾರಾಯಣ

ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ ಸಾರ್ಥಕ ೭೫ ವರ್ಷಗಳು ಕಳೆದಿವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ.ಇದು ಕಳೆದ ಎರಡೇ ದಿನಗಳಲ್ಲಿ, ಅಂದರೆ ೧೯.೯.೧೯೩೩ರ ಬೆಳಿಗ್ಗೆಯಿಂದಲೇ ಕಾದಂಬರಿಯ ಬರವಣಿಗೆ ಆರಂಭವಾಗುತ್ತದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ನಂತರ ೧೯೩೭ರಲ್ಲಿ ಕಾದಂಬರಿ ಬೆಳಕು ಕಾಣುತ್ತದೆ.

ಈ ಎಲ್ಲಾ ಘಟನೆಗಳ ಹಿಂದಿದ್ದ ಮನೋಬಲಕ್ಕೆ ಧೈರ್ಯ ತುಂಬಿದವರು, ಕನಸನ್ನು ಬಿತ್ತಿದವರು ಕುವೆಂಪು ಅವರ ಗುರುಗಳಾದ ಶ್ರೀಟಿ.ಎಸ್.ವೆಂಕಣ್ಣಯ್ಯನವರು. ಟಾಲ್‌ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್‌ವರ್ದಿ ಮೊದಲಾದವರ ಮಹಾಕಾದಂಬರಿಗಳನ್ನು ಓದಿದ ಮೇಲೆ ಕನ್ನಡದಲ್ಲಿ ಅಂತಹ ಒಂದು ಕಾದಂಬರಿ ಯಾವಾಗ ಹುಟ್ಟುತ್ತದೆ ಎಂದು ಕಾಯುತ್ತಿದ್ದ ಕುವೆಂಪು, ತಮ್ಮ ಮಿತ್ರರಾಗಿದ್ದ ಅನೇಕ ಸ್ನೇಹಿತರಲ್ಲಿ ನೀವೇಕೆ ಬರೆಯಲು ಪ್ರಯತ್ನಿಸಬಾರದು? ಎಂದು ಪೀಡಿಸುತ್ತಿದ್ದರಂತೆ. ಒಂದು ದಿನ ಸಂಜೆ ಕುಕ್ಕನಹಳ್ಳಿ ಕೆರೆಯ ದಂಡೆಯ ಮೇಲೆ ವಾಯುಸಂಚಾರದಲ್ಲಿದ್ದಾಗ ವೆಂಕಣ್ಣಯ್ಯನವರು ನೀವೇ ಏಕೆ ಬರೆಯಬಾರದು? ಎಂದರಂತೆ. ಆಗ ಕುವೆಂಪು ಅವರು ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ – ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯಹೊರಟರೆ ಉತ್ತರಕುಮಾರನ ರಣಸಾಹಸವಾಗುತ್ತದಷ್ಟೆ! ಎಂದು ನಕ್ಕಬಿಟ್ಟಿದ್ದರಂತೆ. ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆಯಿನಿತೂ ಇರಲಿಲ್ಲ. ಮುಂದುವರೆದು ಅವರು ಹೀಗೆ ಹೇಳಿದ್ದರು. ನೋಡಿ, ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!

ಮತ್ತಷ್ಟು ಓದು »

29
ಮೇ

ಸುಂದರ್ ರಾಜ್ ನೆನಪಿಸಿಕೊಂಡಂತೆ ಅಂಬರೀಷ್ !

– ಶ್ರೀಧರ್ ಜಿ ಸಿ ಬನವಾಸಿ

ಅಂಬರೀಷ್ ಜೊತೆಗಿನ ನನ್ನ ಸ್ನೇಹವನ್ನು ಈ ಮೂಲಕ ವರ್ಣಿಸೋದು ತುಂಬಾ ಕಷ್ಟ. ಅಂಬರೀಷ್ ಜೊತೆಗಿನ ನನ್ನ ಒಡನಾಟ, ಸ್ನೇಹ, ಓಡಾಟ, ಕೆಲಸಮಾಡಿದ್ದು ನನಗೆ ಬೆಟ್ಟದಷ್ಟು ಅಪಾರ ನೆನಪುಗಳು ನನ್ನ ಮನಸ್ಸಿನಲ್ಲಿವೆ. ಆತ ಹೀಗೆ ಅಂತ ಹೇಳೋದು ತುಂಬಾ ಕಷ್ಟ, ಆತನ ತರಹ ನೀವಾಗಬೇಕು ಅಂತಾನೂ ಹೇಳೋದು ತುಂಬಾ ಕಷ್ಟ. ಅಂಬರೀಷನಿಗೆ ಅಂಬರೀಷನೇ ಸಾಟಿ. ಅಂಬರೀಷ್  ಯಾಕೆ ಇಷ್ಟವಾಗ್ತಾರೆ ಅಂತ ಅವರನ್ನ ಇಷ್ಟಪಡೋ ಎಲ್ಲರನ್ನು ಕೇಳಿ ಒಬ್ಬೋಬ್ಬರು ಆತನನ್ನು ಒಂದೊಂದು ರೀತಿಯಲ್ಲಿ ವರ್ಣಿಸುತ್ತಾರೆ. ಹಾಗಾಗಿ ಅಂಬರೀಷ್ ಇಷ್ಟವಾಗಲು ಬಹಳಷ್ಟು ಕಾರಣಗಳಿವೆ. ಕನ್ನಡಚಿತ್ರರಂಗವೇಕೇ, ರಾಜಕೀಯ, ಬೇರೆ ಚಿತ್ರರಂಗ, ರಾಜ್ಯ ರಾಜಕೀಯ, ದೆಹಲಿ ರಾಜಕೀಯದ ವ್ಯಕ್ತಿಗಳು ಕೂಡ ಆತನನ್ನು ಇಷ್ಟಪಡುತ್ತಾರೆ. ಆತನ ವ್ಯಕ್ತಿತ್ವೇ ಅಂತಹದ್ದು. ಅಜಾತಶತ್ರು, ಹುಂಬತನ, ಎದೆಗಾರಿಕೆ, ಬೇರೆಯವರಿಗೆ ಮರುಗುವ ಮನಸ್ಸು ಆತನ ಗುಣಗಾನ ಮಾಡುವುದು ನಿಜವಾಗಿಯೂ ಕಷ್ಟ ಸಾಧ್ಯ. ಇಂತಹ ಅಂಬರೀಷ್ ನನ್ನ ಆತ್ಮೀಯ ಸ್ನೇಹಿತ ಅನ್ನುವುದೇ ನನ್ನ ಹೆಮ್ಮೆಗೆ ಕಾರಣ.

ಅಂಬಿ ‘ನಾನೊಬ್ಬ ಅದ್ಭುತ ನಟ’ ಅಂತ ಎಲ್ಲೂ, ಯಾರ ಹತ್ತಿರವೂ ಹೇಳಿಕೊಂಡವರಲ್ಲ. ಆದರೆ, ವ್ಯಕ್ತಿಯಾಗಿ, ಸಮಾಜದ ಶಕ್ತಿಯಾಗಿ, ಉತ್ತಮ ಮನುಷ್ಯನಾಗಿ ಅಂಬಿಗೆ ಅಂಬಿಯೇ ಸಾಟಿ. ಇಂಥ ವೈವಿಧ್ಯತೆಯ ಮನುಷ್ಯನನ್ನು ಎಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಆ ದಿನಗಳಲ್ಲಿ ನನಗೆ ಅಂಬಿ ಕಂಡರೆ  ಸಣ್ಣ ಒಳ್ಳೆಯ ಹೊಟ್ಟೆಕಿಚ್ಚಂತೂ ಇತ್ತು, ಏನಪ್ಪಾ ಈ ಮನುಷ್ಯ ಪುಟ್ಟಣ್ಣನಂತಹ ನಿರ್ದೇಶಕರ ಮನಸ್ಸನ ಹೇಗಂಪಾ ಗೆದ್ದು ಬಿಟ್ಟಿದ್ದಾನೆ. ನಾವೇನೋ ಬಾಲಚಂದರ್ ಸಿನಿಮಾಗಳಲ್ಲಿ  ಗುರುತಿಸಿಕೊಂಡುಬಿಟ್ಟಿದ್ವಿ. ಆದರೆ ಪುಟ್ಟಣ್ಣರ ಸಿನಿಮಾಗಳಲ್ಲಿ ನಮಗೆ ಅವಕಾಶ ಸಿಕ್ಕಿರಲಿಲ್ಲ. ಈತನ್ನ ನೋಡಿದ್ರೆ ಪುಟ್ಟಣ್ಣನವರ ಹೆಚ್ಚಿನ ಸಿನಿಮಾಗಳಲ್ಲಿ ಚಾನ್ಸ್ ತಗೋತಾ ಇದಾನೆ. ಪುಟ್ಟಣ್ಣ ಕಣಗಾಲ್ ಗುರುಕೃಪೆಗೆ ಹೆಚ್ಚು ಒಳಗಾದ ನಟ ಅಂಬರೀಶ್ನನ್ನು ಕಂಡಾಗ ಈ ರೀತಿಯ ಅವ್ಯಕ್ತ ಅಸೂಹೆಯ ಪ್ರೀತಿ ಆತನ ಮೇಲಿತ್ತು. ಆದರೆ ಅಂಬರೀಷ್ ತನ್ನ ನಿಷ್ಕಲ್ಮಶ ಪ್ರೀತಿಯಿಂದ ನನ್ನನ್ನು ಗೆದ್ದುಬಿಟ್ಟಿದ್ದ.

ಮತ್ತಷ್ಟು ಓದು »

29
ಮೇ

ರಾತ್ರಿಯ ಕತ್ತಲಿನ ಮೌನ ನನ್ನಲ್ಲಿನ ಪ್ರಶ್ನೆಗಳಿಗೆ ಸಿಕ್ಕ ಉತ್ತರವಾಗಿತ್ತು

– ಭಾಸ್ಕರ್ ಎಸ್.ಎನ್

ತನ್ನ ಕಂದಮ್ಮನನ್ನು ಕಂಕುಳಲ್ಲಿ ಹೊತ್ತ ಆಕೆಗೆ ಮುಂದಿನ ದಾರಿ ಕಾಣುತ್ತಿಲ್ಲ, ಕೊನೆಯ ಕಣ್ಣ ಹನಿಯೂ ಸಹಾ ಬತ್ತಿ ಹೋಗಿತ್ತು. ಕ್ಷಣದಿಂದ ಕ್ಷಣಕ್ಕೆ ಕಂಕುಳಲ್ಲಿದ್ದ ಮಗುವಿನ ಜ್ವರ ಏರುತ್ತಿತ್ತು.

“ಏನಮ್ಮಾ! ಇಲ್ಲಿ ಸುಮ್ನೆ ನಿಂತಿದ್ರೆ ಕೆಲ್ಷ ಆಗೋಲ್ಲ. ದುಡ್ಡಿದ್ರೆ ಮಾತ್ರ ಇಲ್ಗೆ ಬಾ…ಸುಮ್ನೆ ನಮ್ ತಲೆ ತಿನ್ಬೇಡಾ, ಹೋಗ್..ಹೋಗ್” ಹೀಗೆ ಬಂದ ದ್ವನಿಯಲ್ಲಿದ್ದ ನಿರ್ಭಾವುಕತೆ ಆಕೆಯನ್ನು ಮತ್ತಷ್ಟು ನಿಸ್ಸಹಾಯಕ್ಕೆ ದೂಡುತ್ತಿತ್ತು. ಈ ಮಾತುಗಳನ್ನಾಡಿದವರು ಮತ್ಯಾರೂ ಅಲ್ಲ, ಒಬ್ಬ ಸುಪ್ರಸಿದ್ದ ಡಾಕ್ಟರ್‍, ಡಾ.ಕಷ್ಯಪ್. “ಅನುಗ್ರಹ ನರ್ಸಿಂಗ್ ಹೋಂ” ನ ಒಡೆಯ.

ಇವೆಲ್ಲವನ್ನು ಗಮನಿಸುತ್ತಿದ್ದ ನನಗೆ ಆಕೆಯ ದಯನೀಯ ಸ್ಥಿತಿ ಕಂಡು ಮಾತು ಹೊರಡದಂತಾಗಿತ್ತು. ಒಂದು ರೀತಿಯ ನಿಸ್ಸಹಾಯತೆ ನನ್ನನ್ನು ಆವರಿಸ ತೊಡಗಿತ್ತು.

ಆಕೆಯ ಜೊತೆಯಲ್ಲಿದ್ದ ಮಹಿಳೆಯಿಂದ ತಿಳಿದು ಬಂದ ವಿಷಯವೆಂದರೆ, ಆಕೆಗೆ ಇಬ್ಬರು ಹೆಣ್ಣುಮಕ್ಕಳು, ಈಗ ಇರುವ ಮಗುವಿಗೆ ಒಂದು ವರ್ಷ, ಮತ್ತೊಂದು ಮಗು ಈಗ್ಗೆ ೪ ದಿನಗಳ ಹಿಂದೆ ಸಾವನ್ನಪ್ಪಿತ್ತು..! ಅದೂ ಸಹಾ ಜ್ವರದಿಂದ ಅದ್ಯಾವ ಜ್ವರವೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಈಗ ಮಗುವಿಗೆ ಬಂದಿರುವುದೂ ಸಹಾ ಜ್ವರವೇ.

ಮತ್ತಷ್ಟು ಓದು »