ವಿಷಯದ ವಿವರಗಳಿಗೆ ದಾಟಿರಿ

Recent Articles

29
ಡಿಸೆ

ಕೋಲ್ಕತ್ತಾದಲ್ಲಿ ಕುವೆಂಪು

-ಪ್ರೊ. ಬಿ ಎ ವಿವೇಕ ರೈ

ಕನ್ನಡದ ಯುಗದ ಕವಿ ಕುವೆಂಪು (೨೯ ದಶಂಬರ ೧೯೦೪-೧೦ ನವಂಬರ ೧೯೯೪ )  ಅವರು ತಮ್ಮ ಜೀವಮಾನದಲ್ಲಿ ಕರ್ನಾಟಕದಿಂದ ಹೊರಗೆ ಪ್ರಯಾಣ ಮಾಡಿದ್ದು ಎರಡೇ ಬಾರಿ. ಮೊದಲನೆಯದು ೧೯೨೯ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ.ಅಲ್ಲಿ ಬೇಲೂರು ರಾಮಕೃಷ್ಣ ಮಠದಲ್ಲಿ ಸ್ವಾಮಿ ಶ್ರದ್ಧಾನಂದರಿಂದ ಮಂತ್ರ ದೀಕ್ಷೆ ಪಡೆದದ್ದು. ಎರಡನೆಯದು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಲು ಎಲ್ಲ ಆಪ್ತರ ಒತ್ತಾಯದ ಮೇಲೆ ದೆಹಲಿಗೆ ಹೋದದ್ದು ೧೯೬೮.ಅವರ ಕಲ್ಕತ್ತಾದ ಭೇಟಿಯ ವೇಳೆಗೆ ಅವರಿಗೆ ಸುಮಾರು ಇಪ್ಪತ್ತೈದು ವರ್ಷ ಪ್ರಾಯ.ಅದೇ ವರ್ಷ ಅವರು ಎಂ ಎ ಮುಗಿಸಿದ್ದು.ಕಲ್ಕತ್ತಾ ಸಂದರ್ಶನ ಮತ್ತು ರಾಮಕೃಷ್ಣ ಆಶ್ರಮದ  ದರ್ಶನ ಕುವೆಂಪು ಬದುಕಿನ ಮೇಲೆ ಅಪಾರ ಪ್ರಭಾವವನ್ನು ಬೀರಿತು.ಅವರ ಸಾಹಿತ್ಯದ ದ್ರವ್ಯಗಳನ್ನು ರೂಪಿಸಿತು.

ಅಂತಹ ಕಲ್ಕತ್ತಾದಲ್ಲಿ ,ಅಂದರೆ ಈಗಿನ ಕೊಲ್ಕೊತ್ತಾದಲ್ಲಿ ‘ಕುವೆಂಪು’ ಬಗ್ಗೆ ಎರಡು ದಿನಗಳ ರಾಷ್ಟೀಯ ವಿಚಾರಸಂಕಿರಣ ಮೊನ್ನೆ ಮತ್ತು ನಿನ್ನೆ (ಸಪ್ಟಂಬರ ೧೦ ಮತ್ತು ೧೧ ) ನಡೆಯಿತು.ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ಜಂಟಿಯಾಗಿ ನಡೆಸಿದ ಈ ಮಹತ್ವದ ಸಂಕಿರಣಕ್ಕೆ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಸಂಸ್ಥೆ ಮತ್ತು ಕನ್ನಡ ವಿಶ್ವವಿದ್ಯಾಲಯ ಸಹಯೋಗ ಕೊಟ್ಟಿದ್ದವು.ವಿಚಾರಸಂಕಿರಣ ನಡೆದದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಲ್ಕತ್ತಾದ ಪ್ರಾದೇಶಿಕ ಕಚೇರಿಯಲ್ಲಿ .

ಮತ್ತಷ್ಟು ಓದು »

29
ಡಿಸೆ

ವಿಶ್ವಮಾನವನ ಜನುಮದಿನವಿಂದು

28
ಡಿಸೆ

“ಯೂನಿವರ್ಸಲ್ ಬ್ರದರ್‌ಹುಡ್” ಬರೀ ಬೂಟಾಟಿಕೆಯೇ ?

-ಸಾಗರ್ ಮೈಸೂರು

ಸ್ವಾಮೀ,
ಯಾಕೆ ಮುಗ್ಧ ಜನರ ತಲೆಯಲ್ಲಿ ವಿಷದ ಬೀಜ ಬಿತ್ತುತ್ತಿದ್ದೀರಿ? ನೀಮಗೂ ಭಯೋತ್ಪಾದಕರನ್ನು ಹುಟ್ಟು ಹಾಕುವ ಮುಲ್ಲಾ ಗಳಿಗೂ ಅಥವಾ ಭಾಷಾ ದುರಭಿಮಾನಿಗಳಿಗೂ ಏನು ವ್ಯತ್ಯಾಸ? ಸಾಮರಸ್ಯದಿಂದ ಬದುಕುವ ಬಗೆ ಹೇಗೆಂದು ತಿಳಿದಿದ್ದರೆ ಬರೆಯಿರಿ. ಇಲ್ಲಾಂದ್ರೆ ಸುಮ್ಮನಿರಿ. ನಿಮ್ಮನ್ತವರನ್ತು ಬರೆದು , ಬೆಂಕಿ ಹಚ್ಚಿ ತಣ್ಣಗೆ ಕುಳಿತು ಚಂದ ನೋಡುತ್ತಿರಿ. ಅಮಾಯಕರು ನಿಮ್ಮಿಂದ ಪ್ರೇರಿತರಾಗಿ ಯಾರದೋ ಮೈಮೇಲೆ ಬಿದ್ದು ಸಮಾಜದ ಶಾಂತಿ ಕದದುತ್ತಾರೆ ಅಥವಾ ಜೀವ ಬಿಡುತ್ತಾರೆ. ದುರಭಿಮಾನ, ಭಯೋತ್ಪಾದನೆ ಹುಟ್ಟುವುದು ಮೊದಲು ಮನಸ್ಸಿನಲ್ಲಿ. ಪ್ರೇರಿತರದವರು ಕೆಲವರು ಚಾಕು ಬಳಸುತ್ತಾರೆ, ಕೆಲವರು ಬಾಂಬು ಹಾಕುತ್ತಾರೆ, ಅವರವರ ಯೋಗ್ಯತೆಗೆ ತಕ್ಕಂತೆ. ನಿಮ್ಮಂಥವರು ಚಂದ ನೋಡುತ್ತೀರಿ.
“ಬೆಂಗಳೂರಿನ ಜುಟ್ಟು ಈಗಾಗಲೇ ರೆಡ್ಡಿಗಳ ಕೈಯ್ಯಿಗೆ ಕೊಟ್ಟಾಗಿದೆ” ಎಂದು ಮಹಾನ್ ಮೇಧಾವಿಯೊಬ್ಬರು (ಹಾಗೆಂದು ತಿಳಿದ) ಹೇಳಿದಾಗ ಅದ್ಯಾವನೋ ‘ವಿಷ್ಣು’ ಎಂಬುವವ ನೀಡಿದ್ದ ‘ಪ್ರತಿಕ್ರಿಯೆ’ ಅದು! ಹೌದಾ?! ಅದು ನಿಜಾನಾ? ನಮ್ಮ ಬೆಂಗಳೂರನ್ನ ನಿಜವಾಗಿಯೂ ‘ಅನ್ಯರು’, ‘ಕನ್ನಡೇತರರು’ ಆಳುತ್ತಿದ್ದಾರಾ ಎಂಬ ಪ್ರಶ್ನೆಯನ್ನ ನಮಗೆ ನಾವೇ ಹಾಕಿಕೊಂಡು serious ಆಗಿ ‘ಪರೀಕ್ಷಿಸಲು’ ಹೊರಟರೆ ಆ ‘ವಿಷ್ಣು’ ಎಂಬುವವನ ‘ಅಡ್ರಸ್ಸ್ ಹುಡುಕು’ವ ಮನಸ್ಸಾಗುತ್ತದೆ! ಅವನಿಗೊಂದು ವಿಶೇಷವಾದ ‘ದೊಣ್ಣೆ’ ರೆಡಿಮಾಡಿಸುವ ಕನಸು ಮೂಡುತ್ತದೆ!! ಆ ಮೇಧಾವಿ ಎಂಬ ಪತ್ರಕರ್ತ ಯಾವಾಗ ನೋಡಿದರೂ ‘ಭಾರತ’, ‘ಭಾರತೀಯತೆ’ ಎಂದು ಕಿರುಚಾಡುವವ. ಅಂಥವನೇ “ಪರಭಾಷಿಕರನ್ನ ಮಟ್ಟ ಹಾಕದಿದ್ದರೆ ಅಪಾಯ ತಪ್ಪಿದ್ದಲ್ಲ” ಎಂಬ ಸತ್ಯವನ್ನ ಕಂಡುಕೊಂಡಿದ್ದಾನೆ ಎಂದರೆ, ಅದರ ಮಹತ್ವವನ್ನ ನೀವೇ ಅರ್ಥಮಾಡಿಕೊಳ್ಳಿ.

ಮತ್ತಷ್ಟು ಓದು »

27
ಡಿಸೆ

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉತ್ತಮ ಭವಿಷ್ಯ ಇಲ್ಲವೇ?

-ರಾವ್ ಎವಿಜಿ 

ಇಲ್ಲ ಎಂದು ಬಹುಮಂದಿ ನಂಬಿರುವುದರಿಂದ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹಿಂಜರಿಯುವ ಜನ್ಮದಾತೃಗಳ ಸಂಖ್ಯೆ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳು, ವಿಶೇಷತಃ ಸರ್ಕಾರೀ ಶಾಲೆಗಳು ದುಸ್ಥಿತಿಯಲ್ಲಿವೆ. ಈ ಪರಿಸ್ಥಿತಿಗೆ ಕಾರಣ?

ನಾನು ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಯಲ್ಲಿ ಓದಿದವನು. ಪಿ ಯು ಸಿ ಮತ್ತು ಆನಂತರದ ಶಿಕ್ಷಣ ಪಡೆದದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ಆಗ ಕೊಡಗಿನಲ್ಲಿ ಎಲ್ಲರೂ ಶಿಕ್ಷಣ ಪಡೆಯುತ್ತಿದ್ದದ್ದೇ ಹೀಗೆ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಹಂಬಲವೇ ಆಗಲಿ, ಖಾಸಗಿ ಶಾಲೆಗಳು ಸರ್ಕಾರೀ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತವೆ ಎಂಬ ನಂಬಿಕೆಯೇ ಆಗಲಿ ಅಂದಿನ ಜನ್ಮದಾತೃಗಳಿಗೆ ಇರಲಿಲ್ಲ. ವಾಸ್ತವವಾಗಿ, ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮ, ಪಿ ಯು ಸಿ ಮತ್ತು ಆನಂತರದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಆಗ ಅಲ್ಲಿ ಇರಲೇ ಇಲ್ಲ. (ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಮೈಸೂರು, ಮಂಗಳೂರು, ಬೆಂಗಳೂರುಗಳಂಥ ದೊಡ್ಡ ನಗರಗಳಲ್ಲಿ ಲಭ್ಯವಿತ್ತಂತೆ) ನನಗೆ ತಿಳಿದ ಮಟ್ಟಿಗೆ ಕೊಡಗಿನಲ್ಲಿ ಆಗ ಇದ್ದದ್ದು ಎರಡೋ ಮೂರೋ ಕ್ರಿಶ್ಚಿಯನ್ ಆಡಳಿತದ ಖಾಸಗಿ ಪ್ರೌಢಶಲೆಗಳು. ಖಾಸಗಿ ಕಾಲೇಜುಗಳು ಇರಲೇ ಇಲ್ಲ.  ಈ ಪದ್ಧತಿಯಲ್ಲಿ ಶಿಕ್ಷಣ ಪಡೆದ ನಾನು ಏನಾಗ ಬಯಸಿದ್ದೆನೋ ಅದೇ ಆದೆ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದವರು ಎಂಜಿನಿಯರುಗಳೂ ಡಾಕ್ಟರುಗಳೂ ಆಗುತ್ತಿದ್ದರು. ಎಂದೇ, ೧ ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಆವಶ್ಯಕತೆ ಇದೆ ಎಂದು ಯಾರೂ ತಿಳಿದಿರಲಿಲ್ಲ. ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರಿಂದ ಯಾರ ಭವಿಷ್ಯವೂ ಅಂದು ಹಾಳಾದದ್ದು ನನಗೆ ತಿಳಿದಿಲ್ಲ. ಆಗ ಏಕೆ ಹಾಗಿತ್ತು?

ಮತ್ತಷ್ಟು ಓದು »

27
ಡಿಸೆ

ಭ್ರಷ್ಟಾಚಾರಿಗಳೇ ಭಾರತ ಬಿಟ್ಟು ತೊಲಗಿ..

26
ಡಿಸೆ

ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ

-ಬನವಾಸಿ ಸೋಮಶೇಖರ್, ಮಂಗಳೂರು
“1992 ನೇ ಇಸ್ವಿ.ನಾನು ಆಗಷ್ಟೇ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಮುಗಿಸಿದ್ದೆ.ಫಲಿತಾಂಶ ಇನ್ನೂ ಬಂದಿರಲಿಲ್ಲ.ಅತ್ಯಂತ ಕಡು ಬಡತನದ ಕುಟುಂಬ ನಮ್ಮದು.ಒಂದು ಹೊತ್ತಿನ ತುತ್ತಿಗೂ ತತ್ವಾರ ಪಡುವಂತ ದಯನೀಯ ಮತ್ತು ಶೋಚನೀಯ ಸ್ಥಿತಿ.ತಂದೆ ನಾ ಮಗುವಾಗಿರುವಾಗಲೇ ಗತಿಸಿದ್ದರು.ಮೂರು ಜನ ಅಣ್ಣಂದಿರು, ಒಬ್ಬಳು ಸಹೋದರಿ.ದೊಡ್ಡಣ್ಣ 10-11ರ ಪ್ರಾಯದಲ್ಲಿಯೇ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದ.ಅಮ್ಮ ಅವನಿಗಾಗಿ ಹುಡುಕಾಡಿ ಹುಡುಕಾಡಿ ಹೈರಾಣಾಗಿದ್ದರು.ಉಳಿದ ಇಬ್ಬರು ಅಣ್ಣಂದಿರಲ್ಲಿ ಒಬ್ಬ ಮಾತ್ರ ಅತ್ಯಂತ ಶ್ರಮಜೀವಿ.ಇಬ್ಬರೂ ಕೂಲಿ ಕೆಲಸ ಮಾಡಿ ತುತ್ತಿನ ಚೀಲ ತುಂಬಿಸುತ್ತಿದ್ದರು. ಅನ್ನಕ್ಕಾಗಿ ಹಾತೊರೆಯುವ ಪರಿಸ್ಥಿತಿ ಅದಾಗಿತ್ತು. ಅದಕ್ಕಾಗಿ ಒಮ್ಮೊಮ್ಮೆ ಅಕ್ಕ,ಅಣ್ಣಂದಿರೊಂದಿಗೆ ಜಗಳವಾಡಿದ್ದು ಇಂದಿಗೂ ನೆನಪಿದೆ. ಕೊನೆಯ ಮಗನಾದ ನನ್ನನ್ನು ಓದಿಸಬೇಕೆಂಬುದು ಅಮ್ಮನ ಮಹದಾಸೆ ಅಣ್ಣಂದಿರ ಹಿರಿಯಾಸೆಯಾಗಿತ್ತು.
ನಾನಾದರೋ ಮನೆಯ ದೈನ್ಯೇಸಿ ಸ್ಥಿತಿಯನ್ನು ನೋಡಿ ಮನೆ ಬಿಟ್ಟು ಹೋಗಿ ಏನಾದರೂ ಕೆಲಸ ಮಾಡಿ ಮನೆಗೆ ಆಸರೆಯೊದಗಿಸಬೇಕೆಂದು ಹಾತೊರೆದು ಮನೆ ತೊರೆದು ಬೆಂಗಳೂರಿನತ್ತ ಮುಖ ಮಾಡಿಯೇ ಬಿಟ್ಟಿದ್ದೆ. ಕೈಯಲ್ಲಿ  ಸಂಗ್ರಹಿಸಿಟ್ಟಿದ್ದ ಇಪ್ಪತ್ತು ರೂಪಾಯಿ ಇತ್ತಷ್ಟೇ.ಯಾವ್ಯಾವುದೋ ಬಸ್ ಹತ್ತಿ ನಿರ್ವಾಹಕನ ಕಣ್ ತಪ್ಪಿಸಿ ಟಿಕೇಟು ತೆಗೆಸದೇ ಬೆಂಗಳೂರಿಗೆ ಬಂದಿಳಿದಿದ್ದೆ.ಆಗ ನಾಡಿನ ದೊರೆಯಾಗಿದ್ದವರೇ ನಮ್ಮ ಸಾರೆಕೊಪ್ಪ ಬಂಗಾರಪ್ಪನವರು.ಅವರು ನಮ್ಮ ಪಕ್ಕದ ತಾಲೂಕಿನವರಾಗಿದ್ದರಿಂದಲೂ ನಮ್ಮೂರಲ್ಲಿ ಅವರ ಬಗ್ಗೆ ಅಪಾರ ಜನಪ್ರೀಯತೆ ಇದ್ದುದರಿಂದಲೂ ಅವರಲ್ಲಿಗೆ ಹೋಗಿ ಏನಾದರೂ ಸಹಾಯ ಪಡೆದು ಬೆಂಗಳೂರಲ್ಲಿ ಕೆಲಸ ಮಾಡಬಹುದೆಂದು ಯೋಚಿಸಿ ಸೊರಬದವನೆಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳ ಗೃಹ ಕಛೇರಿಯನ್ನು ಹರಸಾಹಸ ಮಾಡಿ ಪ್ರವೇಶಿಸಿದ್ದೆ.ಸಾವಿರಾರು ಸಾರ್ವಜನಿಕರು ಅಹವಾಲು ಸಲ್ಲಿಸಲು ಸರತಿಯಲ್ಲಿ ನಿಂತು ಕಾಯುತ್ತಿದ್ದರು.ನಾನೂ ಹಾಗೆಯೇ ಮಾಡಿದೆ. ಮತ್ತಷ್ಟು ಓದು »
26
ಡಿಸೆ

ಸಂಸ್ಕೃತಿ ಸಂಕಥನ 15 -ಭಾರತೀಯ ಪ್ರಭುತ್ವದ ಸೆಕ್ಯುಲರ್ ಗೊಂದಲಗಳು

ರಮಾನಂದ ಐನಕೈ

ಬಹುಸಂಸ್ಕೃತಿ ಹಾಗೂ ರಿಲಿಜನ್  ಎರಡೂ ಒಟ್ಟಿಗೇ ಬಾಳಬೇಕಾದ ಭಾರತದಂತಹ ದೇಶದಲ್ಲಿ ಪ್ರಭುತ್ವ  ತಟಸ್ಥವಾಗಿರಲು ಸಾಧ್ಯವೇ? ಏಕೆಂದರೆ ಇಲ್ಲಿ ನಂಬಿಕೆಯಲ್ಲಿ ಭಿನ್ನತೆ ಇದೆ. ಇಂಥಲ್ಲಿ ಸೆಕ್ಯುಲರ್ ಪ್ರಭುತ್ವ ಯಾರಿಗೆ ನ್ಯಾಯ ನೀಡುತ್ತದೆ? ಒಂದಕ್ಕೆ ನೀಡಿದ ನ್ಯಾಯ ಇನ್ನೊಂದಕ್ಕೆ ಅನ್ಯಾಯವಾಗಲು ಸಾಧ್ಯ. ಏಕೆಂದರೆ ರಿಲಿಜನ್ನವರು ಲೋಕಜ್ಞಾನದಲ್ಲಿ ಬದುಕುತ್ತಾರೆ. ಸಂಸ್ಕೃತಿಯಲ್ಲಿ ಕ್ರಿಯಾಜ್ಞಾನ ಇರುತ್ತದೆ. ಸೆಕ್ಯುಲರ್ ನೀತಿ ಲೋಕಜ್ಞಾನದಲ್ಲಿ ಉದಯಿಸಿದ್ದು. ಹಾಗಾಗಿ ಕ್ರಿಯಾಜ್ಞಾನದ ಸೂಕ್ಷ್ಮತೆಗೆ ಸ್ಪಂದಿಸುವಲ್ಲಿ ಸೋಲುವ ಸಾಧ್ಯತೆ ಇದೆ. ಹಾಗಾಗಿ ಸೆಕ್ಯುಲರ್ ನೀತಿಯನ್ನು ಭಾರತೀಯ ಸಂದರ್ಭದಲ್ಲಿ ಪುನರ್ಪರಿಶೀಲನೆ ಮಾಡುವ ಅಗತ್ಯ ಇದೆ.

ಭಾರತ ಸರಕಾರದ ಸೆಕ್ಯುಲರ್ ನೀತಿಯ ಸುತ್ತ ಹಲವು ಸಂದಿಗ್ಧಗಳಿವೆ. ನಮ್ಮ ಪ್ರಭುತ್ವಕ್ಕೆ ಈ ಪರಿಸ್ಥಿತಿ ಎದುರಾಗಲು ಕಾರಣವೇನು? ಸೆಕ್ಯುಲರ್ ಎಂಬ ಸಮಾನತೆಯ ಮಂತ್ರ ನಮ್ಮಲ್ಲಿ ಯಾವ ಫಲಿತಾಂಶ ನೀಡುತ್ತಿದೆ?

ಮತ್ತಷ್ಟು ಓದು »

24
ಡಿಸೆ

ಫೇಸ್ ಬುಕ್ಕಿನ ಫಂಡಾಸ್

-ಮಾಲತಿ ಎಸ್

ಜುಲೈ 2010, ಶ್ರೀಕಾಂತ ಗೆ ಡೆಂಗೆ ಹಾಗೂ ನಿಹಾರಿಕಂಗೆ air borne ವೈರಲ್ ಜ್ವರದಿಂದಾಗಿ 5-6 ದಿನಗಳ ಆಸ್ಪತ್ರೆವಾಸ. ಮನೆಗೆ ಬಂದ ಎರಡು ದಿನ, ನನಗೂ ರೆಸ್ಟ್ ಬೇಕಾಯಿತು..ಆಸ್ಪತ್ರೆ- ಮನೆ ಅಂತ ಓಡಾಡಿ ಬೆನ್ನುಹುರಿಯಲ್ಲಿ ನೋವು. ಮತ್ತೆ ಮನೆಯ ಉಳಿದ ಕ್ಲೀನಿಂಗ್-ಅದೂ-ಇದೂ etc.gಮೈಲ್ ತೆರೆದರೆ ಅದರಲ್ಲಿ ರಾಶಿ ರಾಶಿ ಮೈಲ್ ಗಳು. ಅದರಲ್ಲಿ ಮೊದಲಿಗೆ ಇದ್ದದ್ದು ಸಹನಾ ಜೋಶಿಯವರ facebook ಆಮಂತ್ರಣ. ಸಾಕಷ್ಟು ಫೇಸ್ ಬುಕ್ ಆಮಂತ್ರಣಗಳಿದ್ದರೂ ನಾನದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಶ್ರೀಕಾಂತ ನನ್ನ ಹಿಂದೆ ನಿಂತು ನನ್ನ ಮೈಲ್ ಗಳನ್ನು ನೋಡುತ್ತ ಇದ್ದರು. ’ನೀನು face book ನಲ್ಲಿ ಇಲ್ಲವಾ’ ಅಂತ ಕೇಳಿದ್ರು. ನಾನು ’ಇಲ್ಲ’ ಅಂದೆ. ಹೇ ಜಾಯಿನ್ ಆಗಿ ನೋಡು ಅದರಲ್ಲೇನಿದೆ ಅಂತ. ಇತ್ತೀಚಿಗೆ ಆಫಿಸ್ ನಲ್ಲಿ ಹೊರ ದೇಶದವರು ಬಂದಾಗಲೆಲ್ಲ r u on facebook ಅಂತ ವಿಚಾರಿಸುತ್ತಾರೆ. ಬುಸಿನೆಸ್ interactions ಗೆ ಅದು ಸೂಕ್ತ ತಾಣ ಅಂತೆಲ್ಲ ಹೇಳುತ್ತಾರೆ ಅಂದ್ರು. ಅದಕ್ಕೆ ನಾನು , ಹುಷಾರಾದ ಕೂಡಲೇ ನೀವೆ ಸೇರಿಕೊಂಡು ಬಿಡಿ, ನನಗೆ ಅದರಲ್ಲಿ ಆಸಕ್ತಿ ಇಲ್ಲ ಅಂದೆ. ಅಷ್ಟರಲ್ಲಿ ಶ್ರೀಕಾಂತ ಆರೋಗ್ಯ ವಿಚಾರಿಸಲು ತಮ್ಮ ಫೋನ್ ಮಾಡಿದಾಗ, ಅವನು ’ಯೇ ನೀನು facebook ಜಾಯಿನ್ ಆಗು, ನಾನು ಆಗ್ತಾ ಇದ್ದೇನೆ ಅಂದ. ಹೂಂ ಅಂತ ಸಹನಾ ಜೋಶಿಯವರ invite ಆಗಲೇ accept ಮಾಡಿ, ಸುಮ್ಮನಿದ್ದು ಬಿಟ್ಟೆ. ಆಮೇಲೆ ಶುರು ಆಯ್ತು invite ಗಳ ಸರಮಾಲೆ. ಗೊತ್ತಿದ್ದವರು, ಇಲ್ಲದವರು ಅಂತ ಒಂದು ರಾಶಿ.ಸ್ವಲ್ಪ ದಿನ ನಾನು ಆ ಕಡೆ ಹೋಗಲೇ ಇಲ್ಲ.

ಸುಮಾರು ಎರಡು ತಿಂಗಳ ನಂತರ ಹೋಗಿ ನನ್ನ ಪ್ರೊಫೈಲ್, ಮುಂತಾದವುಗಳನ್ನು ಸೇರಿಸಿದೆ. ನನ್ನ ಸ್ಕೂಲ್, ಕಾಲೇಜ್ ಫ್ರೆಂಡ್ಸ್ ಗಳನ್ನು ಹುಡುಕುವ ಅಂದ್ರೆ, ನಾನು ಓದಿದದ್ದು ಹೆಣ್ಣುಮಕ್ಕಳ ಶಾಲೆ ಯಲ್ಲಿ. ಎಲ್ಲರ ಮದುವೆಯಾಗಿ ಅಡ್ಡ ಹೆಸರು ಬದಲಾಗಿದ್ದರಿಂದ ಯಾರೂ ಸಿಗಲಿಲ್ಲ. ಒಬ್ಬ ಕಾಲೇಜ್ ಸ್ನೇಹಿತೆ ಮಾತ್ರ ಸಿಕ್ಕಳು, ಅದು ಅವಳು ಮದುವೆಯಾಗಿಲ್ಲದ್ದರಿಂದ. ನನಗೆಷ್ಟು ಖುಶಿಯಾಯ್ತು ಅವಳು ಸಿಕ್ಕಿದ್ದು.ಅವಳು ಅಮೇರಿಕದಲ್ಲಿದ್ದಾಳೆ. ಅವಳಿಗೂ ಬೇರೆ ಯಾರೂ ಕಾಲೇಜ್ ಮೇಟ್ಸ್ ಸಿಕ್ಕಿಲ್ಲ ಅಂತೆ. ಆದರೆ ಅವಳ ಆಫಿಸ್ ನವರೆಲ್ಲ ಫೇಸ್ ಬುಕ್ ನಲ್ಲಿರೋದರಿಂದ, ನಾವು ಇ ಮೈಲ್ ವಿನಿಮಯ ಮಾಡ್ಕೊಿಡು ಸಂಪರ್ಕದಲ್ಲಿದ್ದೇವೆ.
ಇನ್ನು ಸುಮ್ಮನೆ ಕೆಲವು ನನ್ನ random ಅನುಭವಗಳನ್ನು ಹಂಚಿಕೊಳ್ಳುತ್ತೇನೆ.
23
ಡಿಸೆ

ವಿಶಿಷ್ಟ ಸ್ಯೆಕಲ್ಲಿನ ಬೆಲ್ಜಿಯಂ ಜೋಡಿ

-ಗೋವಿಂದ ನೆಲ್ಯಾರು

ನಡುರಾತ್ರೆ ಎಪಿ ಸುಬ್ರಮಣ್ಯಂ ಅವರಿಂದ ಸತತ ನನ್ನ ಸಂಪರ್ಕ ಪ್ರಯತ್ನ. ನಾನು ರಾತ್ರಿ ಬೇಗ ಮಲಗುವ ವ್ಯಕ್ತಿ. ಅದುದರಿಂದ ನಿದ್ದೆಯ ಮದ್ಯೆ ಕಿವಿಗೊಟ್ಟು ಎಲ್ಲಕ್ಕೂ ಹೂಂಗುಟ್ಟಿದೆ. ಎರಡು ಜನ ಎರಡು ಪೆಡಲ್ ಎರಡು ಚಕ್ರದ ಗಾಡಿ ಯಾವುದೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ.   ಕಿವಿ ಸಮಸ್ಯೆಯೂ  ನನಗುಂಟು.    ಮರುದಿನ ಮಾಮೂಲಿ ಒಂಬತ್ತು ಕಿಮಿ ದೂರದ ತ್ರಿಚಕ್ರ ತಿರುಗಾಟದಿಂದ ಹಿಂತಿರುಗಿದ ನಂತರ ನಮ್ಮ ಸುಬ್ಬಣ್ಣ ಮೊದಲು ಮಾತನಾಡಿದ ಅನಿಲ ಪರದೇಶಿ ಸೈಕಲಿಗರ ಬೇಟಿಯಾದೆಯಾ ? ಎನ್ನುವಾಗಲೇ ನನಗೆ ಎಚ್ಚರವಾದುದು, ಒಂದು ಅವಕಾಶ ತಪ್ಪಿಸಿಕೊಂಡೆನಾ ? ಕೂಡಲೇ ಸುಬ್ರಮಣ್ಯಂ ಅವರ ಪುನಹ ಸಂಪರ್ಕಿಸಿದೆ. ಅವರು ಸೈಕಲ್ ಸವಾರರ ಜಾಲತಾಣದ ವಿಳಾಸವೂ ಚೂರು ಪ್ರವಾಸದ ವಿವರವನ್ನೂ ಕೊಟ್ಟರು.         http://eurasia.cyclic.eu/
ನೋಡಿದರೆ ಅವರಿರುವುದು ಜರ್ಮನಿಯ ಪ್ರಖ್ಯಾತ ಹೇಸ್ ಕಂಪೇನಿಯ ಪಿನೊ ಎನ್ನುವ ಇಬ್ಬರು ಪ್ರಯಾಣಿಸಬಹುದಾದ ಸೈಕಲು. ಪ್ರಾಯುಶ: ಈ ಸೈಕಲು ಇನ್ನೊಮ್ಮೆ ನೋಡುವ ಅವಕಾಶ ಸಿಗುವುದು ದುರ್ಲಬ. ಕೂಡಲೆ ಪೆಡಲಿಸಿದೆ ರಸ್ತೆ ಬದಿಗೆ. ಕಾಲು ಗಂಟೆಯೊಳಗೆ ಅವರು ಆಗಮಿಸಿದರು. ಒಬ್ಬ ಸೈಕಲ್ ಆಸಕ್ತ ನಿಮಗೆ ದಾರಿಯಲ್ಲಿ ಸಿಗಬಹುದೆಂಬ ಸೂಚನೆ ಮೊದಲೇ ಸುಬ್ಬಣ್ಣ ಅವರಿಗಿತ್ತಿದ್ದರು ಅನಿಸುತ್ತದೆ.
ಮತ್ತಷ್ಟು ಓದು »

23
ಡಿಸೆ

ಒನ್ ಟು ತ್ರೀ ವಿಷ್ಣುವರ್ಧನ

– ಫಿಲ್ಮಿ ಪವನ್

ಏನ್ರಿ ಗ್ರಹಚಾರ, ಏನೇ ಹೇಳಿ ಮೊದಲ ಸರಿ ಬರದಾಗ ಬಾರೋ ಮಜಾ ಎರಡನೇ ಸರಿ ಬರಲ್ಲ. ಇ ಬರಹಾನ ಮೊದಲೇ ಬರೆದಿದ್ದೆ, ನನ್ನ ಗ್ರಹಚಾರ ಸರಿ ಇಲ್ದೆ ಬರೆದಿದ್ದ ಬರಹವೆಲ್ಲ ಹೇಗೋ ಮಿಸ್ ಆಗೋಗಿತ್ತು.ಎರಡು ದಿನ ಅಷ್ಟು ಕಷ್ಟ ಪಟ್ಟು ಬರೆದು ವೇಸ್ಟ್ ಆಯ್ತಲ್ಲ ಅಂತ ಫೀಲಿಂಗ್ ಅಲ್ಲಿದ್ದೆ. ಈಗ ಮತ್ತೆ ಬರಿತ ಇದ್ದೀನಿ. ಹೇಗಿದ್ಯೋ ನೀವೇ ಹೇಳ್ಬೇಕು. ಮೊದಲ ಬರಹದಲ್ಲಿದ್ದೆ ಬಹಳಷ್ಟು ಪಾಯಿಂಟ್ ಗಳು ಇಲ್ಲಿ ಖಂಡಿತ ಮಿಸ್ ಆಗಿರುತ್ತೆ.

ನಮ್ಮೂರಿನ ಡಬ್ಬ ಥಿಯೇಟರಲ್ಲಿ ಒಂದಾದ ವೆಂಕಟೇಶ್ವರದಲ್ಲಿ, ವಿಷ್ಣುವರ್ಧನ ಫಿಲಂ ಬಂದೈತೆ ಅಂತ ಸರ್ಕಲ್ ನಲ್ಲಿ ಹಾಕಿರೋ ದೊಡ್ಡ ಪೋಸ್ಟರ್ಗಳು ನೋಡಿದಾಗ ತಿಳೀತು, ಹಾಗೇ ಗೆಳೆಯ ಯಾದವ್ ಗೆ ಫೋನ್ ಮಡಿ ಮಗ bioscope ಅಂದೇ. ಲೇ ಅಪ್ಪಿ ನ ಈಗ ನ ಶಿವಾಜಿನಗರದಲ್ಲಿದ್ದಿನಿ, ಬರಕ್ಕೆ ಇನ್ನ ಬಹಳ ಹೊತ್ತಾಗುತ್ತೆ ಇವಿನಿಂಗ್ ಶೋ ಹೋಗಣ ಅಂದ. ನಾನು ಮಗ ಸಿನಿಮ ಚೆನ್ನಾಗಿದ್ರೆ ಇನ್ನೊಂದು ಸಲಿ ನೋಡನ, ಕಾಯಕ್ಕಂತು ಸಾಧ್ಯ ಇಲ್ಲ ಅಂತ ಹೇಳಿ ನಮ್ ಮುರುಗನ್ ಚಿಪ್ಸ್ ಅಂಗಡಿಲಿ 100gm ಸೈಕಲ್ ಚಿಪ್ಸ್ ತಗೊಂಡು ಟಾಕಿಸ್ ಅಲ್ಲಿ 50 ರು ಟಿಕೆಟ್ ತೊಗೊಂಡು ಸಿನಿಮ ಹಾಲ್ ಅಲ್ಲಿ ಕೂತೆ.

7up ಆಡ್ ಅಲ್ಲಿ ಕೂದಲು ಮೇಲಕ್ಕೆ ಮಾಡಿಕೊಂಡಿರೋ ಬೊಂಬೆ ತಾರಾ ಇದ್ದ ಒಂದು ಕಾರ್ಟೂನ್ ಬಂದು, ನಾನೆ ದಿರೆಕ್ಟೊರ್ ಕಣ್ರೀ ಅಂತು. ನ ನಂಬಲಿಲ್ಲ ಅದ್ರು ಸಿನಿಮದ ಯಾವ ಪ್ರಚಾರ ಕಾರ್ಯಕ್ರಮದಲ್ಲೂ ನಿರ್ದೇಶಕರನ್ನು ನೋಡೇ ಇಲ್ಲ ಎಲ್ಲಿ ನೋಡಿದರು ಖಿಲಾಡಿ ಕುಳ್ಳ ಮತ್ತು ನಾಯಕ ನಾಯಕಿಯರು. ಹಾಗಾಗಿ ಇ 7up ಬೊಂಬೆನೆ director ಅಂದ್ಕೊಂಡು ಕೂತೆ. ಬಂದ ನಿರ್ದೇಶಕ ಜೇಬಲ್ಲಿ ಮೊಬೈಲ್ ಇದ್ದೀಯ ನೋಡ್ಕೊಲ್ರಿ ಅಂದಾಗ ಸಿನಿಮಾ ಹಾಲ್ ಅಲ್ಲಿ ಇದ್ದ 50 ಭಾಗದಷ್ಟು ಜನ ಒಮ್ಮೆ ಮೊಬೈಲ್ ಮುಟ್ಟಿ ನೋಡ್ಕೊಂಡಿದ್ದು ನಿಜ. ನಾ ಕೂಡ ನೋಡಿ, ಮೊಬೈಲ್ ನ ಸೈಲೆಂಟ್ ಮೋಡ್ ಗೆ ಹಾಕಿದೆ. ಒಪೆನಿಂಗ್ ರೀಲ್ ಅಲ್ಲೇ ಇದು ಸಾಹಸ ಸಿಂಹನಿಗೆ ಅವನ ಆಪ್ತಮಿತ್ರನ ಅರ್ಪಣೆ ಎಂಬ ಮಾತು ದ್ವಾರಕೀಶ್ ಅವರ ಧ್ವನಿಯಲ್ಲಿ ಕೇಳಿ ಬಂತು. ಸುದೀಪ್ introduction ಡಿಟ್ಟೋ ಆಪ್ತಮಿತ್ರ ಮೊದಲನೇ ಸಾಹಸ ದೃಶ್ಯದಂತೆ ಮಾಡಿದ್ದರು. ಡೈಲಾಗು ಫೈಟು ಎಲ್ಲ same t same. ಎಲ್ಲೋ ಒಂದು ಮುಲೆಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮೊಡನೆ ಇಲ್ಲ ಎಂಬ ನೋವನ್ನು ಸಾಹಸ ದೃಶ್ಯದ ಮೂಲಕ ನಿರ್ದೇಶಕರು ಬಹಳ ಜಾಣ್ಮೆಯಿಂದ ತೆರೆಯ ಮೇಲೆ  ಮುಡಿಸಿದ್ದರು.

ಮತ್ತಷ್ಟು ಓದು »