ಇದು ಹೆಣ್ಣಿನ ಕಥೆ
– ಗೀತಾ ಹೆಗ್ಡೆ
ಅವಳಿಗೆ ಕೇವಲ ಹದಿಮೂರು ವರ್ಷ. ಹುಟ್ಟೂರು ಪುತ್ತೂರು, ಉಡುಪಿ ತಾಲ್ಲೂಕು. ಅವಳಿಗೆ ಮದುವೆ ಗಂಡು ಗೊತ್ತಾಯಿತು. ಅವನಿಗೆ ವಯಸ್ಸು ಮೂವತ್ತೆರಡು. ಅವನ ಊರು ಉತ್ತರ ಕನ್ನಡದ ಒಂದು ಚಿಕ್ಕ ಹಳ್ಳಿ. ಆಗ ಮದುವೆಗೆ ಹೆಣ್ಣಿನ ಬರ. ತಿರಾ ಕೊಟ್ಟು(ವಧು ದಕ್ಷಿಣೆ ) ಹೆಣ್ಣನ್ನು ಮದುವೆ ಆಗುತ್ತಿದ್ದರಂತೆ. ಇನ್ನೂ ದೊಡ್ಡವಳಾಗಿಲ್ಲ; ಆಗಲೇ ಮದುವೆ ಮಾಡಿದರು. ಮೈ ತುಂಬಾ ಒಡವೆ ಗೆಜ್ಜೆಟಿಕ್ಕಿ, ತೋಳಬಂಧಿ, ಸೊಂಟಕ್ಕೆ ಬೆಳ್ಳಿ ಡಾಬು, ಕಿವಿ ಓಲೆ ಬುಗುಡಿ, ಕೈ ತುಂಬಾ ಬಳೆಗಳು ಇನ್ನೂ ಮುಂತಾದ ಆಭರಣ ಸುಂದರಿ. ದಕ್ಷಿಣದಿಂದ ಉತ್ತರಕ್ಕೆ ಅವಳ ಪಯಣ. ಗೊತ್ತಿಲ್ಲದ ಊರು. ಶಾಸ್ತ್ರ ಸಂಪ್ರದಾಯದ ಮನೆ. ಒಟ್ಟು ಕುಟುಂಬ. ಗಂಡನ ಮನೆ ಸೇರಿದಳು ವರ್ಷ ಹದಿನಾಲ್ಕಕ್ಕೆ ದೊಡ್ಡವಳಾಗಿ. ಅವಳ ಭಾಷೆ ತುಳು. ಶಿವಳ್ಳಿ ಬ್ರಾಹ್ಮಣ ಕುಟುಂಬದವಳು. ನಿಧಾನವಾಗಿ ಕನ್ನಡ ಭಾಷೆ ಕಲಿತಳು. ಹದಿನಾರರ ವಯಸ್ಸಿನಲ್ಲಿ ಗಂಡು ಮಗುವಿನ ಜನನ. ಮಗಳು ಬಾಳಂತನ ಮುಗಿಸಿಕೊಂಡು ಗಂಡನ ಮನೆ ಸೇರಿದಳು. ಮತ್ತಷ್ಟು ಓದು 
ನನ್ನ ಅಜ್ಜಿ
– ಚೇತನ್ ಕೆ.ವಿ
ಬಹಳ ವರ್ಷಗಳ ನಂತರ ನಾನು ನನ್ನ ಅಜ್ಜಿ ಊರು, ಮಂಜುಗುಡ್ಡೆಗೆ ಕಾಲಿರಿಸಿದ್ದೆ. ಒಮ್ಮೆ ನನ್ನ ಬಾಲ್ಯದ ದಿನಗಳೆಲ್ಲ ಕಪ್ಪುಬಿಳಪು ಚಿತ್ರದಂತೆ ತಟ್ಟನೆ ಕಣ್ಣೆದುರು ಬಂದು ಹೋಯಿತು. ಗಲ್ಲಿ ಗಲ್ಲಿಗೆ ಕಾಲಿರಿಸಿದಂತೆ ಮತ್ತೆ ಹಳೆ ನೆನಪಿನ ಪುಟಗಳು ತಿರುವುತಿತ್ತು. ಸುತ್ತ ಇಬ್ಬನಿ ಮುಸುಕಿದ ಪ್ರದೇಶ. ಬರೇ ಏರು-ಪೇರುಗಳ ಜಾಗಗಳು ಹೆಸರಿಗೆ ತಕ್ಕಂತೆ – ಮಂಜುಗುಡ್ಡೆ. ನಾನು ಈ ಊರು ಬಿಟ್ಟು ೨೫ ವರ್ಷಗಳ ಮೇಲಾಯಿತು. ಹೈಸ್ಕೂಲ್ ಮುಗಿಸಿ ತಂದೆ-ತಾಯಿ ಜೊತೆ ಊರು ಬಿಟ್ಟವನು ಮತ್ತೆ ಈ ಕಡೆ ಬಂದವನೆ ಅಲ್ಲ.ಆದರೂ ಅಲ್ಪ ಸ್ವಲ್ಪ ಬದಲಾವಣೆ ಬಿಟ್ಟರೆ ಹೇಳಿಕೊಳ್ಳುವಂತ change ಎನೂ ತೋರಲಿಲ್ಲ,ಅದೆ ನಾನಿರುವ ಬೆಂಗಳೂರು ವರ್ಷ ವರ್ಷಕ್ಕೂ ಎಂತ ಬದಲಾವಣೆ,೧ ವರ್ಷ ಯಾವುದಾದರು ಜಾಗಕ್ಕೆ ಹೋಗದಿದ್ದರೆ ಮತ್ತೆ ಆ ಜಾಗ ಗುರುತು ಸಿಗೋದು ಕಷ್ಟವೆ ಸರಿ ಎಂದುಕೊಂಡು ಮೂಲೆಯ ಒಂದು ಪೆಟ್ಟಿಗೆಯಂತಹ ಅಂಗಡಿ ಹೊಕ್ಕೆ.
ನನ್ನ ಅಜ್ಜ ವೆಂಕಟರಾಜಪ್ಪನ ಹೆಸರು ಹೇಳಿ ಅವರ ಮನೆಯ ವಿಳಾಸ ಕೇಳಿ,ಅವನು ತೋರಿದ ದಾರಿ ಹಿಡಿದು ಹೊರಟೆ.
ಸರಿ ಸುಮಾರು ೨೫ ವರ್ಷಗಳ ನಂತರ ತನ್ನ ಅಜ್ಜನ ಮನೆಗೆ ಹೋಗುತ್ತಿರುವ ಸಂಭ್ರಮ ಒಂದು ಕಡೆಯಾದರೆ, ಅಜ್ಜ ಅಜ್ಜಿಯ ಗುರುತೆ ಮರೆತ ಬೇಸರ ಮತ್ತೊಂದೆಡೆ. ಅಮ್ಮ ಅಜ್ಜಿಯೋಂದಿಗೆ ಜಗಳವಾಡಿ ಊರು ಬಿಡಲೇ ಬೇಕು ಎಂದು ಹಟ ಹಿಡಿದು ಪಟ್ಟಣ ಸೇರಿದ ಮೇಲೆ ಈ ಕಡೆ ಮತ್ತೆ ತಲೆ ಹಾಕಿ ಸಹ ಮಲಗಿರಲಿಲ್ಲ.ಒಬ್ಬನೆ ಮಗನನ್ನು ಕಳೆದುಕೊಂಡು ಎಷ್ಟು ದುಃಖ ಪಟ್ಟಿದ್ದರೂ ಅಜ್ಜಿ ಎಂದುಕೊಳ್ಳುತ್ತಾ ಹೆಜ್ಜೆ ಮುಂದಿಟ್ಟೆ. ದಾರಿಯಲ್ಲಿ ವಿಳಾಸ ಕೇಳುತ್ತಾ ಅಂತು ಮನೆ ಎದಿರು ಬಂದೆ. ಹಾಳು ಬಿದ್ದ ಮನೆಯಂತಿದ್ದ ಆ ಮನೆಯನ್ನೆ ಹಾಗೆ ದಿಟ್ಟಿಸಿ ನೋಡಿದೆ.ಹೆಂಚಿನ ಮನೆ,ಮುಂದಿನ ಅಂಗಳ ತುಂಬೆಲ್ಲ ಹುಲ್ಲು ಬೆಳೆದು ಎತ್ತರವಾಗಿತ್ತು.ಹಾಗೆ gateನಂತೆ ಅಡ್ಡಲಾಗಿಟ್ಟಿದ್ದ ಮರದ ದಿಣ್ಣೆ ಸರಿಸಿ ಒಳ ಹೊಕ್ಕೆ. ಮನೆಯ ಹೆಬ್ಬಾಗಿಲ ಬಳಿ ಬಂದು ನಿಲ್ಲುತಿದ್ದ ಹಾಗೆ ಹೆಬ್ಬಾಗಿಲಿಗೆ ಹತ್ತಿದ ಒರಳೆ ಕಣ್ಣಿಗೆ ರಾಚಿತು.ಒಂದು ಭಾಗ ಪೂರ ತಿಂದು ಈಗಲೊ ಅಗಲೊ ಅನ್ನುವಂತಿತ್ತು.
ಒಣಗಿದ ಗಂಟಲಲ್ಲೆ ಮೂರು ಬಾರಿ ಅಜ್ಜಿ ಎಂದು ಜೋರಾಗಿ ಕೂಗಿದ ನಂತರ ಒಳಗಿಂದ ಬೆನ್ನು ಬಾಗಿಹೋದ ಅಜ್ಜಿ ಹಣೆಯ ಮೇಲೆ ಕೈ ಇಟ್ಟು “ಯಾರೂ…..” ಎಂದು ನಡುಗುವ ಆ ದನಿಯಲ್ಲೆ ಕೇಳುತ್ತಾ ಬಂದಳು.ಅಜ್ಜಿಯನ್ನು ನೋಡಿದಕೂಡಲೆ ಇದು ನನ್ನ ಅಜ್ಜಿಯೆ ಹೌದ ಎಂದೆನ್ನಿಸಿತು. ನೇರವಾಗಿದ್ದ ಬೆನ್ನು ಮುರಿದು ಬಾಗಿ ಹೋಗಿತ್ತು, ಹಲ್ಲುಗಳೆಲ್ಲ ಉದುರಿ ಹೋಗಿ ಮತ್ತಷ್ಟು ಓದು 




