ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ-೨
– “ನಿಲುಮೆ”ಗಾಗಿ (೧) ಬಾಲಿವುಡ್ ಮತ್ತು (೨) ಜೈಲು ಈ ಎರಡು ಲೇಖನಗಳ ಸಾರಾಂಶ ಮಾಡಿದ್ದು :- ಮು. ಅ . ಶ್ರೀರಂಗ, ಬೆಂಗಳೂರು
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ –೧
(೧) ಬಾಲಿವುಡ್
———-
ಮೂಲ ಲೇಖಕರು : ಎಂ. ಕೆ. ರಾಘವೇಂದ್ರ ಕನ್ನಡಕ್ಕೆ : ಅಕ್ಷರ ಕೆ. ವಿ.
ಮುಂಬಯಿಯಲ್ಲಿ ತಯಾರಾಗುವ ಹಿಂದಿ ಭಾಷೆಯ ಚಲನಚಿತ್ರ ಪ್ರಕಾರಕ್ಕೆ ‘ಬಾಲಿವುಡ್’ ಎಂಬ ಹೆಸರನ್ನು ಕೊಡಲಾಗಿದೆ. ಈ ಚಲನಚಿತ್ರಗಳಿಗೆ ಭಾರತದಲ್ಲಿನ ಪ್ರೇಕ್ಷಕರ ಜತೆಗೆ ಏಶಿಯಾ,ಆಫಿಕ್ರಾದಾದ್ಯಂತ ಹರಡಿರುವ ಅಪಾರ ಪ್ರೇಕ್ಷಕ ಸಮೂಹವೇ ಇದೆ. ವದಂತಿಗಳ ಪ್ರಕಾರ (ಅವು ಉತ್ಪ್ರೇಕ್ಷಿತ ವಾಗಿರಲೂಬಹುದು) ಜೋಸೆಫ್ ಸ್ಟಾಲಿನ್ ಮತ್ತು ಮಾವೊತ್ಸೆತುಂಗರಂಥವರೂ ತಮ್ಮ ತಮ್ಮ ‘ ಕಾಲಗಳಲ್ಲಿ ಬಾಲಿವುಡ್ಡಿನ ಚಿತ್ರಗಳ ಭಕ್ತರಾಗಿದ್ದರಂತೆ! ಮಾವೋ ಅವರು ರಾಜಕಪೂರನ “ಆವಾರಾ” ವನ್ನು ನಲವತ್ತು ಬಾರಿ ನೋಡಿದ್ದರಂತೆ!
ಬಾಲಿವುಡ್ ಚಿತ್ರಗಳ ಕೆಲವು ಲಕ್ಷಣಗಳನ್ನು ಬಹುಶಃ ಈ ರೀತಿ ಪಟ್ಟಿಮಾಡಬಹುದು.
(೧) ರಂಜನೆ
(೨) ಸಾವಿನ ಅಂಚಿನಲ್ಲಿರುವ ಶ್ರೀಮಂತ ವಿಧವೆ ಸಾವನ್ನು ಎದುರುನೋಡುತ್ತ ಮುಂಬರುವ ಭಾವುಕ ಉತ್ತುಂಗಕ್ಕೆ ಕಾರಣಲಾಗುವುದು
(೩) ತನ್ನಪ್ಪನ ಸಾವಿಗೆ ಕಾರಣನಾದ ಖಳನಾಯಕನಿಗೆ ಪ್ರತೀಕಾರಮಾಡಲು ಕಾಯುತ್ತಿರುವ ನಾಯಕ
(೪) ಹುಟ್ಟುವಾಗಲೇ ಸಂತತ್ವವನ್ನು ಪಡೆದ ಸಂತರು
(೫) ಯಾವಾಗಲೂ ಶೋಕದಲ್ಲೇ ಮುಳುಗಿರುವ ವಿಧವೆಯರು
(೬) ಗೃಹಿಣಿಯರಾಗಲು ಸಾಧ್ಯವಾಗದ ವೇಶ್ಯೆಯರು.
ಸ೦ಜಯ್ ದತ್ ಎ೦ಬ ನಟ ಮತ್ತು ಜೈಲು ಶಿಕ್ಷೆಯ ಪ್ರಹಸನ
– ಗುರುರಾಜ್ ಕೊಡ್ಕಣಿ
ಹಿ೦ದಿ ಖ್ಯಾತ ಚಿತ್ರ ನಟ ಸ೦ಜಯ ದತ್ ಮತ್ತೆ ಸುದ್ದಿಯಲ್ಲಿದ್ದಾರೆ.ಟಾಡಾ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ಸ೦ಜಯ್ ದತ್ ಶಿಕ್ಷೆಯ ಪ್ರಮಾಣವನ್ನು ಇಳಿಸುವುದರ ಬಗ್ಗೆ ಕೇ೦ದ್ರ ಸರಕಾರ ಚಿ೦ತನೆ ನಡೆಸಿದೆ.ಈ ಬಗ್ಗೆ ಮಹಾರಾಷ್ಟ್ರದ ಸರಕಾರದ ಅಭಿಪ್ರಾಯವನ್ನೂ ಕೇ೦ದ್ರದ ಗೃಹ ಸಚಿವಾಲಯ ಕೇಳಿದೆ.’ಮಾನವೀಯತೆಯ ದೃಷ್ಟಿಯಿ೦ದ’ಆತನನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸರಕಾರ ಯೋಚಿಸುತ್ತಿದೆ.
ಸಲ್ಮಾನ್ ಖಾನ್ ಬಿಟ್ಟರೇ ಹಿ೦ದಿ ಚಿತ್ರರ೦ಗದ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಮತ್ತು ವಿವಾದಿತ ನಟ ಎ೦ದರೇ ಸ೦ಜಯ್ ದತ್. ಆತನ ಜೈಲು ಶಿಕ್ಷೆಯ ಸುದ್ದಿ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಸುದ್ದಿಯಾಗಿದ್ದು ಈಗ ಹಳೆಯ ವಿಷಯವೇ..1993ರ ಮು೦ಬೈಯ ಸರಣಿ ಬಾ೦ಬ್ ಸ್ಪೋಟದ ಹಿನ್ನಲೆಯಲ್ಲಿ ಟಾಡಾ ಕಾಯ್ದೆಯಡಿ ಬ೦ಧಿತನಾದ ಸ೦ಜಯ್ ದತ್ ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಟಾಡಾ ಕಾಯ್ದೆಯಡಿ ವಿಧಿಸಿದ್ದ ಆರು ವರ್ಷಗಳ ಶಿಕ್ಷೆಯನ್ನು ರದ್ದು ಮಾಡಿದ ಸುಪ್ರೀ೦ ಕೋರ್ಟು ,ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆಯನ್ನು ಐದು ವರ್ಷಗಳಿಗೆ ಇಳಿಸಿದ್ದೊ೦ದೇ ಹಿ೦ದಿ ಚಿತ್ರರ೦ಗದ ’ಮುನ್ನಾ ಭಾಯಿ’ಗೆ ಸಮಾಧಾನ ತರುವ೦ತಹ ವಿಷಯವಾಗಿತ್ತು.ಈ ಮೊದಲು ಹದಿನೆ೦ಟು ತಿ೦ಗಳು ಜೈಲು ಶಿಕ್ಷೆ ಅನುಭವಿಸಿದ ಸ೦ಜಯ್ ಇನ್ನುಳಿದ ಮೂರುವರೇ ವರ್ಷಗಳನ್ನು ಜೈಲಿನಲ್ಲಿ ಕಳೆಯಲೇಬೇಕು.
ಕೈದಿಯೊಬ್ಬ ಜೈಲು ಸೂಪರಿಂಟೆಂಡೆಂಟ್ ಆಗಿದ್ದು!… ಮ್ಯಾಜಿಸ್ಟ್ರೇಟರೂ ಆಗಿದ್ದು!!
– ಕವಿ ನಾಗರಾಜ್
ಸುಮಾರು ೩೭ ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ ಜೈಲಿನಿಂದ ಹೊರಬಂದ ಸುಮಾರು ನಾಲ್ಕು ವರ್ಷಗಳ ನಂತರ ಒಂದು ಉಪಕಾರಾಗೃಹದ ಜೈಲು ಸೂಪರಿಂಟೆಂಡೆಂಟ್ ಆಗಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ. ಇದಾಗಿ ೧೦ ವರ್ಷಗಳ ನಂತರದಲ್ಲಿ ಅವನು ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಯಾದ. ಆ ಹುದ್ದೆಯಲ್ಲಿ ಸುಮಾರು ೧೨ ವರ್ಷಗಳ ಕಾಲ ಕೆಲಸ ಮಾಡಿದ. ಹೀಗೇ ಆಗಲು ಸಾಧ್ಯವೇ? ಒಬ್ಬ ಕೈದಿ ಜೈಲು ಸೂಪರಿಂಟೆಂಡೆಂಟ್ ಆಗುವುದು ಮತ್ತು ನಂತರ ತಾಲ್ಲೂಕು ಮ್ಯಾಜಿಸ್ಟ್ರೇಟರೂ ಆದನೆಂದರೆ ಯಾರೂ ನಂಬಲಾರರು. ಆದರೆ ಇದು ನಡೆದ ಸಂಗತಿ.





