ವಿಷಯದ ವಿವರಗಳಿಗೆ ದಾಟಿರಿ

Posts tagged ‘ಜ್ಞಾನಪೀಠ’

15
ಮಾರ್ಚ್

ಮೂಕಜ್ಜಿಯ ಕನಸುಗಳು (ಪುಸ್ತಕ ಪರಿಚಯ)

– ನಾಗೇಶ ಮೈಸೂರು

image1‘ … ಅಂಥ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ಸಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯ್ತು. ಆದರೂ ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ…. ‘

‘ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸುತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು…’

ಬಹುಶ ಮುನ್ನುಡಿಯಲ್ಲಿ ಶಿವರಾಮಕಾರಂತರು ಕಾಣಿಸಿರುವ ಇವೆರಡು ಸಾಲುಗಳು ಸಾಕೇನೋ – ಈ ಅದ್ಭುತ ಪುಸ್ತಕದ ಸಾರಾಂಶವನ್ನು ಎರಡೇ ಮಾತಲ್ಲಿ ಹಿಡಿದಿಡಲು. ಪರಂಪರಾನುಗತವಾಗಿ ಹರಿದುಬಂದ ನಂಬಿಕೆ, ಸಂಪ್ರದಾಯಗಳಲ್ಲಿ ನಿಮಿತ್ತವೆಂಬಂತೆ ಬದುಕು ಸಾಗಿಸಿದ ಜನಮಾನಸದ ಕೆಲವಾದರೂ ಚಿತ್ತಗಳನ್ನು ಕೆದಕಿ ಕದಡಿರಬಹುದಾದ ‘ಏನೀ ಜಗ ? ನಾನೇಕಿಲ್ಲಿದ್ದೇನೆ ?’ ಎಂಬ ಗಹನ ಪ್ರಶ್ನೆಗಳಿಗೆ ತನ್ನರಿವಿನ ಪರಿಧಿಯನುಸಾರ ಉತ್ತರ ಕಂಡುಕೊಳ್ಳುವ ಸೂಕ್ಷ್ಮಚಿತ್ರಣ ಈ ಕಾದಂಬರಿಯ ಸ್ಥೂಲ ಮೊತ್ತ ಎಂದರೆ ತಪ್ಪಾಗಲಾರದು.
ಮತ್ತಷ್ಟು ಓದು »

31
ಜನ

ಕುಚ್ಚಿನ ಟೋಪಿಯ ಬೆಚ್ಚನೆ ಬೇಂದ್ರೆ, ನೆನಪುಗಳ ಗುಂಗಿನಲ್ಲಿ…

– ಅಶೋಕ ಶೆಟ್ಟರ್

Bendre(ಇಂದು, ಅಂದರೆ ಜನವರಿ ಮೂವತ್ತೊಂದು., ದ.ರಾ ಬೇಂದ್ರೆ ಜನಿಸಿದ ದಿನ. ಬೇಂದ್ರೆ ಕಾವ್ಯ ಒಂದು ಕಣಜ. ಮೊಗೆದಷ್ಟೂ ಒಸರುವ ಒರತೆ. ಜಗತ್ತಿನ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲ ಪ್ರತಿಭೆ.ಅವರು ಕನ್ನಡ ಕಾವ್ಯದ ಬಹುಮುಖ್ಯ ಧ್ವನಿ.ಅವರ ಕುರಿತಾಗಿ ಅಶೋಕ್ ಶೆಟ್ಟರ್ ಅವರು ೨ ವರ್ಷದ ಹಿಂದೆ ಬರೆದ ಈ ಲೇಖನ ಈಗ ಇಲ್ಲಿ, “ನಿಲುಮೆ”ಯ ಓದುಗರಿಗಾಗಿ – ನಿಲುಮೆ)

“ಅಲ್ಲಿ ಸಂಪಿಗೆಯಿತ್ತು ಪಾರಿಜಾತಕವಿತ್ತು
ಮಾವು ಮಲ್ಲಿಗೆಯಿತ್ತು ಮನೆಯಿದುರು
ಮುಗಿಲ ಮಲ್ಲಿಗೆಯಿತ್ತು ತೆಂಗಿತ್ತು ಹಲಸಿತ್ತು
ನಿಂಬಿಯ ಇಂಬಿತ್ತು ಎಡೆಎಡೆಗೆ
ಹೊಂಗೆಯ ಸಾಲಿತ್ತು ಕಣ್ಮುಂದೆ ಕೆರೆಯಿತ್ತು
ಗುಡ್ಡದ ನೆರೆಯಿತ್ತು ಅದರಾಚೆಗೆ… …..”

“ಸಖಿಗೀತ”ದಲ್ಲಿ ಬರುವ ಈ ಸಾಲುಗಳು ಬೇಂದ್ರೆ ಕಂಡ ಸಾಧನಕೇರಿಯ ಶಬ್ದಚಿತ್ರಗಳು.ನಿನ್ನೆ ಅಂದರೆ ೨೯ ಜನವರಿ ೨೦೧೧ ರಂದು ಮಧ್ಯಾಹ್ನ ಒಂದೆರಡು ತಾಸು ಧಾರವಾಡದ ಬೇಂದ್ರೆ ಭವನದಲ್ಲಿ ಇದ್ದೆ. ಬೇಂದ್ರೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಶಾಮಸುಂದರ ಬಿದರಕುಂದಿಯವರೊಂದಿಗೆ ಮಾತಾಡಿ ಆಮೇಲೆ ಬೇಂದ್ರೆಯವರ ಮೂಲನಿವಾಸ “ಶ್ರೀಮಾತಾ”ದಲ್ಲೇ ಇರುವ ಅವರ ಪುತ್ರ ವಾಮನ ಬೇಂದ್ರೆಯವರ ಜೊತೆ ಸ್ವಲ್ಪ ಹೊತ್ತು ಕಳೆದೆ. ಬೇಂದ್ರೆ ಭವನದ ಮೇಲಂತಸ್ತಿನ ಬಾಲ್ಕನಿಯಿಂದ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ನವೀಕೃತ ಸಾಧನಕೆರೆಗೆ ಹೋಗುವ ದಾರಿ,ಉದ್ದಕ್ಕೂ ಕಟಾಂಜನ ಇವನ್ನೆಲ್ಲ ನೋಡುತ್ತಿದ್ದಾಗ ನನ್ನ ಮನಸಿನಲ್ಲಿ ಅಚ್ಚೊತ್ತಿದಂತಿರುವ ಆ ಪರಿಸರದ ಬೇರೆಯದೇ ಚಿತ್ರದ ಮೇಲೆ ನಾನು ಇವುಗಳನ್ನು ಸುಪರಿಂಪೋಸ್ ಮಾಡಬೇಕಾಗಿ ಬಂತು.ನನ್ನ ಮನಸಿನಲ್ಲಿ ಸುಳಿಯುತ್ತಿದ್ದುದು ೩೦-೩೫ ವರ್ಷಗಳ ಹಿಂದೆ ಬೇಂದ್ರೆ ಮನೆ ಇರುವ ಸಾಲಿಗೆ ಎದುರಾಗಿ,ಗೋವಾಕ್ಕೆ ಹೋಗುವ ಮುಖ್ಯರಸ್ತೆಯಾಚೆ, ಸಾಧನಕೆರೆಯ ಒಂದು ಮೇರೆಯಾಗಿರುವ, ನಾನು ಪೋಲಿಸ್ ವಸತಿಗೃಹಗಳಿಗೆ ಸಾಗಿ ಹೋಗುತ್ತಿದ್ದ, ಕಿರಿದಾದ ಮಣ್ಣ ರಸ್ತೆ, ಸಾಧನಕೆರೆಯ ಇನ್ನೊಂದು ಮೇರೆಯಾಗಿ ಆ ಕೆರೆಯ ಏರಿ, ಅದರಾಚೆ ಭತ್ತದ ಗದ್ದೆ, ತೋಟ ಪಟ್ಟಿಗಳು,ಆಗೊಂದು ಈಗೊಂದರಂತೆ ಗೋವಾಕ್ಕೆ ಹೋಗುತ್ತಿದ್ದ ಖಾಸಗಿ ಅಥವಾ ಸರಕಾರಿ ವಾಹನಗಳು,ಕೆಲಗೇರಿ ಹಾಗು ಮುಗದ ಗ್ರಾಮಗಳ ನಡುವಿನ ಕುರುಚಲು ಕಾಡುಗಳಲ್ಲಿ ಸಂಗ್ರಹಿಸಿದ ಕಟ್ಟಿಗೆಗಳ ಹೊರೆ ಹೊತ್ತು ಓಟದ ನಡಿಗೆಯಲ್ಲಿ ಧಾರವಾಡದತ್ತ ಹೋಗುತ್ತಿದ್ದ ಬಡಪಾಯಿ ಹೆಂಗಳೆಯರು, ಮುಕ್ತಾಯಗೊಳ್ಳಬೇಕು ಎಂಬ ಯಾವ ಧಾವಂತವೂ ಇಲ್ಲದೇ ನಿಷ್ಕಾರಣವೆಂಬಂತೆ ನಿಷ್ಕರುಣೆಯಿಂದ ಸುರಿಯುತ್ತಿದ್ದ ಜಿಡ್ಡುಮಳೆ,ಅಂಚಿನಲ್ಲೆಲ್ಲ ಜೊಂಡು ಬೆಳೆದಿದ್ದ ಚಿಕ್ಕದೂ ಅಲ್ಲದ ಬಹಳ ವಿಸ್ತಾರವೂ ಅಲ್ಲದ ಸಾದನಕೆರೆ..ಹಳೆ ಕಾಲದ ಕೆಂಪು ಹಂಚಿನ ಮನೆಗಳು,ಸುಶಿಕ್ಷಿತ ಜನ..ಆ ಪರಿಸರದಲ್ಲಿದ್ದಷ್ಟೂ ಹೊತ್ತು ಮನಸಿನಲ್ಲಿ ನೆನಪುಗಳ ಸಂತೆ ನೆರೆದಿತ್ತು. “ಸಾಧನಕೇರಿಯ ಸಂಜೆ ಮಳೆ ಸೆಳಕುಗಳು” ಎಂಬ ನನ್ನದೊಂದು ಕವಿತೆಯಲ್ಲಿ ಸಾದನಕೇರಿಯ ಇತರೆ ಚಿತ್ರಗಳೊಂದಿಗೆ ಬೇಂದ್ರೆ ನನ್ನ ಮನಸಿನಲ್ಲಿ ಮೂಡಿದ್ದು ಹೀಗೆ:
ಮತ್ತಷ್ಟು ಓದು »

17
ಆಗಸ್ಟ್

ಬಹುಮಾನ ನೋ! ಅಪಮಾನ ನೋ !!

ಮಧುಚಂದ್ರ ಭದ್ರಾವತಿ

ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಕೆಲವು ಹಿರಿಯ ಕವಿಗಳನ್ನು ಮತ್ತು ಖ್ಯಾತ ವಿಮರ್ಶಕರನ್ನು ಪತ್ರಕರ್ತರು ಸಂದರ್ಶಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಲು ಕೇಳಿ ಕೊಂಡರು. ಕೆಲವರು ಕನ್ನಡಕ್ಕೆ ಸಂದ ಬಹು ದೊಡ್ಡ ಗೌರವ ಎಂದು ಹೇಳಿ ಅಭಿನಂದಿಸಿದರು. ಮತ್ತೆ ಕೆಲವರು ತಮಗೆ ಪುರಸ್ಕಾರ ಸಂದಿಲ್ಲ ಎಂದು ಅವರನ್ನು ಹಿಯಾಳಿಸಿ ” ಜ್ಞಾನಪೀಠ ಪುರಸ್ಕಾರಕ್ಕೆ ಬೆಲೆಯೇ ಇಲ್ಲ , ಯಾರು ಬೇಕಾದರೂ ಪಡೆಯ ಬಹುದು ” ತುಂಬಾ ಕೆಳ ಮಟ್ಟದಲ್ಲಿ ಮಾತನಾಡಿದರು . ಅ ಹಿರಿಯ ಕವಿಗಳ ಹೆಸರು ಬೇಡ. ಯಾಕೆಂದರೆ ಅವರ ಸಾಧನೆಯು ಕಡಿಮೆ ಏನಿಲ್ಲ.

ಇದು ಕೇವಲ ಕಂಬಾರರಿಗೆ ತಟ್ಟಿದ ಬಿಸಿಯಲ್ಲ , ಅಂದು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಅವರು ಅದರ ಬಿಸಿಗೆ ಹೊರತಲ್ಲ. ಮತ್ತೊಬ್ಬ ಖ್ಯಾತ ಕವಿ “ನೀವು ಕುವೆಂಪುರವರನ್ನು ಕವಿ ಎಂದು ಕರೆದರೆ , ನಾನು ಸಹ ಕವಿಯಲ್ಲ ” ಎಂದು ಘಂಟಘೋಷವಾಗಿ ಸಾರಿ ಹೇಳಿದರು. ಹಾಗೆ ಕೆಲವು ನವೋದಯ ಕಾಲದ ಒಂದು ವರ್ಗದ ಕವಿಗಳು ಇದನ್ನು ಬೆಂಬಲಿಸಿ , ಕುವೆಂಪು ಅವರ ಮೇಲೆ ಹರಿಹಾಯ್ದರು,(ಅ ವರ್ಗದ ಕವಿಯೋಬ್ಬರಿಗೆ ಕೊನೆಗೂ ಜ್ಞಾನಪೀಠ ಪ್ರಶಸ್ತಿ ಸಂದಿತು ಎನ್ನುವುದು ಇಲ್ಲಿ ಉಲ್ಲೇಖಾರ್ಹ ). ಕೊನೆಗೆ ಕುವೆಂಪು ಅವರಿಗಿದ್ದ ಅಭಿಮಾನಿಗಳ ಬೆಂಬಲ ನೋಡಿ,ಅವರೆಲ್ಲರೂ ಸುಮ್ಮನಾದರು. ಇದೆ ರೀತಿಯ ಅನುಭವ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಕೂಡ ಬಾಯಿ ಹದಗೆಡಿಸಿಕೊಂಡ ಕವಿ ವರ್ಗವು ಇತ್ತು.

ಕವಿಗಳನ್ನು ವಿಶಾಲ ಹೃದಯಿಗಳು ಎನ್ನುತ್ತಾರೆ ಯಾವ ಸಂಧರ್ಭದಲ್ಲಿ ಎನ್ನುವುದು ಇಲ್ಲಿ ಅಪವಾದವಾಗಿ ಬಿಟ್ಟಿದೆ.

ಇದಕ್ಕೆ ಟಾಂಗ್ ಕೊಡುವ ಸಂಧರ್ಭವೊಂದು ತುಂಬಾ ಹಿಂದೆ ಜರುಗಿತ್ತು. ಇಲ್ಲಿ ಉಲ್ಲೇಖಿಸುವುದು ಉಚಿತವೆನಿಸುತ್ತದೆ.

ಬೇಡರ ಕಣ್ಣಪ್ಪ ಚಿತ್ರದ ಹಾಡು ” ಶಿವಪ್ಪ ಕಾಯೋ ತಂದೆ , ಮೂರು ಲೋಕ ಸ್ವಾಮಿ ದೇವ ” ಎಲ್ಲರಿಗು ಚಿರಪರಿಚಿತವಾದುದು. ರಾಜಣ್ಣ ಅವರು ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟ ಚಿತ್ರ. ಅ ಚಿತ್ರದ ” ಶಿವಪ್ಪ ಕಾಯೋ ತಂದೆ , ಮೂರು ಲೋಕ ಸ್ವಾಮಿ ದೇವ ” ಹಾಡನ್ನು ಚಿತ್ರದ ನಿರ್ದೇಶಕ ಎಚ್ ಎಲ್ ನ್ ಸಿಂಹ ಅವರು ಆನೇಕಲ್ ಗ್ರಾಮದ ಕಡೆಗೆ ಹೋದಾಗ ಅಲ್ಲಿ ದನ ಕಾಯುತ್ತಿದ್ದ ನಂಜುಡಪ್ಪ ಎನ್ನುವವನು ಹಾಡುತಿದ್ದರು, ಹಾಡಿನ ಸಾಹಿತ್ಯ ತುಂಬಾ ಚೆನ್ನಾಗಿ ಇದ್ದುದರಿಂದ ನಿರ್ದೇಶಕರು ಪೂರ್ತಿ ಹಾಡನ್ನು ಬರೆಸಿಕೊಂಡು ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಳವಡಿಸಿಕೊಂಡರು. ಮುಂದೆ ಚಿತ್ರ ಬಿಡುಗಡೆಯಾಯಿತು, ಎಲ್ಲಡೆ ಅದ್ಧುತ ಪ್ರದರ್ಶನ ಕಂಡಿತು. ಉತ್ತಮ ನಟ , ನಿರ್ದೇಶಕ, ಸಂಗೀತಕ್ಕೆ ಪ್ರಶಸ್ತಿಗಳು ಸಂದವು. ಅಂದು ಸೂಪರ್ ಹಿಟ್ ಅದ ” ಶಿವಪ್ಪ ಕಾಯೋ ತಂದೆ , ಮೂರು ಲೋಕ ಸ್ವಾಮಿ ದೇವ ” ಸಾಹಿತ್ಯ ಬರೆದ ಕವಿ ನಂಜುಡಪ್ಪನವರಿಗೆ ಅದರ ಶ್ರೇಯ ಸಲ್ಲಲಿಲ್ಲ. ಇದನ್ನು ಅರಿತ ಪತ್ರಕರ್ತರು ನಂಜುಡಪ್ಪನವರನ್ನು ಸಂದರ್ಶಿಸಿ ಕೇಳಿಯೇ ಬಿಟ್ಟರು ” ಎಲ್ಲರಿಗೂ ಪ್ರಶಸ್ತಿ ಸಿಕ್ಕಿದೆ , ನಿಮ್ಮ ಹಾಡು ಜಗತ್ ಪ್ರಸಿದ್ದವಾಗಿದೆ , ನಿಮಗೆ ಪ್ರಶಸ್ತಿ ದಕ್ಕಿಲ್ಲವೆಂದು ಬೇಜಾರು ಆಯಿತೇ “. ಅದಕ್ಕೆ ಕವಿ ನಂಜುಂಡಪ್ಪನವರು ಕೊಟ್ಟ ಉತ್ತರಕ್ಕೆ ಪತ್ರಕರ್ತರು ತೆಲೆದೊಗಿದರು.

ಮತ್ತಷ್ಟು ಓದು »