ಸಂಸ್ಕೃತಿ ಸಂಕಥನ – 18 – ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ
-ರಮಾನಂದ ಐನಕೈ
ಇತ್ತೀಚೆಗೆ ಮಂಚೀಕೇರಿಯಲ್ಲಿ ಬಾಲಗಂಗಾಧರರ ಸಂವಾದ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಮುಂಚೀಕೇರಿಯ ಸಂಹತಿ ಟ್ರಸ್ಟ್ ಹಾಗೂ ಶಿವಮೊಗ್ಗ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಂಹತಿ ಗೆಳೆಯರು ತುಂಬಾ ಅಚ್ಚುಕಟ್ಟಾಗಿ ಸಂಘಟಿಸಿದ್ದರು. ನೂರಕ್ಕೂ ಹೆಚ್ಚು ಜನ ಸಂವಾದದಲ್ಲಿ ಪಾಲ್ಗೊಂಡು ಪ್ರಶ್ನೆಗಳ ಸುರಿಮಳೆ ಗೈದರು. ಬೇರೆ ಬೇರೆ ಪ್ರಶ್ನೆಗಳಿಗೆ ಬಾಲ ಗಂಗಾಧರರು ನೀಡಿದ ಉತ್ತರಗಳನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನ ಇಲ್ಲಿದೆ.
ಭಾರತ ತನ್ನ ಇತಿಹಾಸದಲ್ಲಿ ಎರಡು ವಸಹಾತು ಶಾಹಿಗಳನ್ನು ಕಂಡಿದೆ. ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ. ಇವೆರಡೂ ಕೂಡಾ ಸೆಮೆಟಿಕ್ ರಿಲಿಜನ್ ಹೊಂದಿದ ಸಂಸ್ಕೃತಿ ಯಿಂದ ಬಂದಂತಹವುಗಳು. ಇವರು ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲಿ ರಿಲಿಜನ್ ಇದೆ ಎಂದು ನಂಬಿ ದವರು, ಭಾರತಕ್ಕೆ ಬಂದಾಗ ಇಲ್ಲಿನ ಸಂಸ್ಕೃತಿ ಯಲ್ಲೂ ರಿಲಿಜನ್ ಹುಡುಕಲು ಪ್ರಾರಂಭಿಸಿದರು. ಅದು ಅವರಿಗೆ ಸುಲಭಕ್ಕೆ ಸಾಧ್ಯವಾಗಲಿಲ್ಲ. ಸೆಮೆಟಿಕ್ ರಿಲಿಜನ್ಗಳ ಕನ್ನಡಕ ಹಾಕಿಕೊಂಡು ಹುಡುಕಿದರು. ಕೊನೆಗೂ ‘ಹಿಂದೂಯಿಸಂ’ ಎಂಬ ರಿಲಿಜನ್ನನ್ನು ಕಂಡುಹಿಡಿದೇಬಿಟ್ಟರು. ಹಿಂದೂ ರಿಲಿಜನ್ ಅಂದರೆ ಪಾಶ್ಚಾತ್ಯರಿಗೆ ಮಾತ್ರ ಅರ್ಥ ವಾಗುತ್ತದೆ. ಭಾರತೀಯರಿಗೆ ಅರ್ಥವಾಗುವು ದಿಲ್ಲ. ಏಕೆಂದರೆ ಭಾರತದ ಹೆಚ್ಚಿನ ಜನರಿಗೆ ಹಿಂದೂ ರಿಲಿಜನ್ನಿನ ಅನುಭವವೇ ಆಗುವುದಿಲ್ಲ. ರಿಲಿಜ ನ್ನಿನ ಯಾವುದೇ ಸರಳ ರೇಖೆಗಳು ನಮ್ಮಲ್ಲಿಲ್ಲ. ದಿನನಿತ್ಯ ನಮ್ಮ ನಡುವೆ ಕಾಣುವ ಗೊಂದಲಗಳು ರಿಲಿಜನ್ ಹಾಗೂ ಸಂಸ್ಕೃತಿಯ ನಡುವಿನ ಹೊಂದಾಣಿಕೆ ಆಗದ ತಿಕ್ಕಾಟಗಳು, ಆದರೆ ಇದು ವರೆಗೆ ಯಾವ ಭಾರತೀ ಯನೂ ಈ ಕುರಿತು ಸಂಶೋಧನೆ ನಡೆಸದೇ ಇದ್ದದ್ದು ಆಶ್ಚರ್ಯದ ವಿಷಯ. ಪಾಶ್ಚಿಮಾತ್ಯರು ಭಾರತದ ಕುರಿತಾದ ತಮ್ಮ ಅನುಭವಗಳನ್ನು ಹೇಳಿ ಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಭಾರತೀಯರು ತಮ್ಮ ನಿಜ ಎಂದು ನಂಬಿಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಈಗ ನಮ್ಮ ಅನುಭವಗಳೆಂಬಂತೆ ಪುನರಾವರ್ತಿಸುತ್ತಿದ್ದೇವೆ. ಇದನ್ನೇ ವಸಾಹತು ಪ್ರಜ್ಞೆ ಅನ್ನುವುದು. ಬಾಲ ಗಂಗಾಧರರು ಈ ಕುರಿತು ಸಂಶೋ ಧನೆ ನಡೆಸುತ್ತಿರುವ ದೇಶದ ಹಾಗೂ ಪ್ರಪಂಚದ ಪ್ರಪ್ರಥಮ ಚಿಂತಕರು.
ಅಗೋಚರತೆ (ಇನ್ವಿಸಿಬಿಲಿಟಿ)
–ರಾವ್ ಎವಿಜಿ
ಮಿಸ್ಟರ್ ಇಂಡಿಯ, ಹ್ಯಾರಿ ಪಾಟ್ಟರ್, ಟಾಮ್ ಅಂಡ್ ಜೆರ್ರಿ ಇವೇ ಮೊದಲಾದ ಕೆಲವು ಚಲನಚಿತ್ರಗಳಲ್ಲಿ ಏನೋ ಒಂದು ದ್ರಾವಣ ಕುಡಿಯುವುದರಿಂದಲೋ, ಒಂದು ವಿಶಿಷ್ಟ ಮೇಲಂಗಿ ಅಥವ ಹೊದಿಕೆಯನ್ನು ಧರಿಸುವುದರಿಂದಲೋ, ಉಂಗುರವೊಂದನ್ನು ವಿಶಿಷ್ಟ ರೀತಿಯಲ್ಲಿ ಹಾಕಿಕೊಳ್ಳುವುದರಿಂದಲೋ ತಮಗೆ ಬೇಕೆನಿಸಿದಾಗ ಅದೃಶ್ಯರಾಗುವ ಪಾತ್ರಗಳನ್ನು ನೀವು ಗಮನಿಸಿರುತ್ತೀರಿ. ಬೇಕೆನಿಸಿದಾಗ ಅದೃಶ್ಯವಾಗುವುದು, ಅರ್ಥಾತ್ ಅಗೋಚರತೆ ಸಾಧನೀಯವೇ?
ಅಪಾರದರ್ಶಕ, ಅರ್ಥಾತ್ ಅಪಾರಕ ವಸ್ತುವಿನ ಮೇಲೆ ಬಿದ್ದ ಬೆಳಕಿನ ಕಿರಣಗಳು ಪ್ರತಿಫಲನಗೊಂಡು ನಮ್ಮ ಅಕ್ಷಿಪಟಲದ ಮೇಲೆ ಬಿಂಬವನ್ನು ಮೂಡಿಸಿದರೆ ಅದು ನಮಗೆ ಗೋಚರಿಸುತ್ತದೆ (ಚಿತ್ರ ೧). ಇದಕ್ಕೆ ಬದಲಾಗಿ ವಸ್ತು ತನ್ನ ಮೇಲೆ ಬಿದ್ದ ಬೆಳಕಿನ ಕಿರಣಗಳನ್ನು ಸಂಪೂರ್ಣವಾಗಿ ಹೀರಿಕೊಂಡರೆ ಏನಾಗುತ್ತದೆ ಊಹಿಸಬಲ್ಲಿರಾ? ಶಾಸ್ತ್ರ ರೀತ್ಯಾ ಆ ವಸ್ತು ನಮಗೆ ಗೋಚರಿಸಕೂಡದಾದರೂ ಅದರ ಆಸುಪಾಸಿನ ಎಲ್ಲ ವಸ್ತುಗಳೂ ನಮಗೆ ಗೋಚರಿಸುವುದರಿಂದ ಆ ವಸ್ತು ಎಷ್ಟು ಸ್ಥಳವನ್ನು ಆಕ್ರಮಿಸಿಕೊಂಡಿದೆಯೋ ಅಷ್ಟು ಸ್ಥಳ ಕಪ್ಪಾಗಿ ಗೋಚರಿಸುತ್ತದೆ! ಅದರ ಹಿಂದೆ ಏನಿದೆಯೋ ಅದು ನಮಗೆ ಗೋಚರಿಸುವುದಿಲ್ಲ (ಚಿತ್ರ ೨). ತತ್ಪರಿಣಾಮವಾಗಿ, ಆ ವಸ್ತುವಿನ ಸ್ವರೂಪ ನಮಗೆ ಗೋಚರಿಸದೇ ಇದ್ದರೂ ಅಲ್ಲಿ ಏನೋ ಒಂದು ಇದೆ ಎಂಬುದು ತಿಳಿಯುತ್ತದೆ. ಪರಿಪೂರ್ಣ ಅಗೋಚರತೆ ಆಗಬೇಕಾದರೆ ವಸ್ತು ನಮಗೆ ಗೋಚರಿಸ ಕೂಡದು, ಅದರ ಹಿಂದಿರುವ ವಸ್ತುಗಳು ನಮಗೆ ಗೋಚರಿಸಬೇಕು (ಚಿತ್ರ ೩). ವಸ್ತು ಯಾವದೋ ಒಂದು ತಂತ್ರದಿಂದ ಪಾರಕವಾದರೆ ಇಂತು ಆಗ ಬೇಕಲ್ಲವೇ? ಇಂತಾಗುವುದರಲ್ಲಿ ಒಂದು ಸಮಸ್ಯೆ ಇದೆ. ಈ ರೀತಿ ಅಗೋಚರವಾದ ವ್ಯಕ್ತಿಯ ಮೂಲಕ, (ಅಕ್ಷಿಪಟಲವೂ ಸೇರಿದಂತೆ ಪ್ರತಿಯೊಂದು ಅಂಗದ ಮೂಲಕ) ಬೆಳಕಿನ ಕಿರಣಗಳು ಹಾದು ಹೋಗುವುದರಿಂದ ಅವನಿಗೆ ಏನೂ ಕಾಣಿಸುವದಿಲ್ಲ. ಅರ್ಥಾತ್, ಆತ ಸಂಪೂರ್ಣ ಕುರುಡು ವ್ಯಕ್ತಿ ಆಗಲೇ ಬೇಕು!! ಇಂಥ ಅಗೋಚರತೆಯಿಂದ ಏನು ಲಾಭ?





