ವಿಷಯದ ವಿವರಗಳಿಗೆ ದಾಟಿರಿ

Posts tagged ‘ಹರಟೆ’

29
ಡಿಸೆ

ಲಘು ಹರಟೆ: ಡಿಮಾನಿಟೈಸಷನ್ನೂ, ಅಜೈಲ್ ಪ್ರೊಜೆಕ್ಟೂ..

– ನಾಗೇಶ ಮೈಸೂರು

1929_106ಪೆಚ್ಚು ಮೋರೆ ಹಾಕಿಕೊಂಡು ಸುಟ್ಟ ಬದನೆಯ ಮುಖ ಹಾಕಿಕೊಂಡು ಬರುತ್ತಾ, ಎದುರು ಸಿಕ್ಕಿದ ಗುಬ್ಬಣ್ಣನನ್ನು ಕಂಡು ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿ ‘ ಹಲೋ ಗುಬ್ಬಣ್ಣ..!’ ಎಂದೆ ತುಸು ಉದ್ವೇಗದ ದನಿಯಲ್ಲಿ.

‘ನಮಸ್ಕಾರ ಸಾರ್..’ ಅಷ್ಟೇ ನೀರಸ ದನಿಯಲ್ಲಿ ಗುಬ್ಬಣ್ಣನ ಮಾರುತ್ತರ.. ಸಂವೇರ್ ಸಂಥಿಂಗ್ ಈಸ್ ರಾಂಗ್.. ಹಾಳು ಸಿಂಗಪುರದ ಬಿಸಿಲು ಕಾಡಿ ನಲುಗಿಸಿಬಿಟ್ಟಿರಬೇಕು..

‘ತುಂಬಾ ಬಿಸಿಲು ಅಲ್ವಾ.. ಬಾ ಹೋಗಿ ಒಂದೊಂದು ಎಳನೀರು ಆದರು ಕುಡಿಯೋಣ.. ಮುಖವೆಲ್ಲ ಬಾಡಿ ಹೋಗಿದೆಯಲ್ಲೋ..?’ ಅಂದೆ.

‘ಅಯ್ಯೋ ಅದು ಬಿಸಿಲಿಗೆ ಬಾಡಿದ್ದಲ್ಲ ಸಾರ್.. ಹಾಳು ಅಪ್ಕಮಿಂಗ್ ಇಂಡಿಯಾ ಟ್ರಿಪ್ ಪ್ರಭಾವ… ಸುತ್ತಿ ಸುತ್ತಿ ಸಾಕಾಗೋಯ್ತು.. ಆದರೂ ನೋ ಸಕ್ಸಸ್..’ ಮತ್ತಷ್ಟು ಓದು »

24
ಜನ

ಶ್ರಾದ್ಧ … ಆಚರಣೆ

-ಪ್ರಕಾಶ್ ನರಸಿಂಹಯ್ಯ

ಹುಟ್ಟು ಅಂದಮೇಲೆ  ಸಾವು ನಿಶ್ಚಿತ. ಹುಟ್ಟಿನೊಂದಿಗೆ ಪ್ರಾರಂಭವಾಗುವ ಜೀವನ ಯಾತ್ರೆ  ಮರಣದೊಂದಿಗೆ  ಮುಗಿಯುತ್ತವೆ. ಅಂತ್ಯಸಂಸ್ಕಾರ ನಡೆಯುತ್ತವೆ . ನಂತರದಲ್ಲಿ  ಮೃತ ವ್ಯಕ್ತಿಗೆ ಹಲವಾರು ಸಂಸ್ಕಾರಗಳು ನಡೆಯುತ್ತವೆ. ಸತ್ತ ದಿನದಿಂದ ಹದಿನಾಲ್ಕು ದಿನಗಳವರೆಗೆ ಹಲವಾರು  ರೀತಿಯ ಕರ್ಮಗಳನ್ನು ಅವರವರ ಪದ್ದತಿಗನುಸಾರವಾಗಿ ಮತ್ತು ಸಂಪ್ರದಾಯದಂತೆ ಮಾಡುತ್ತಾರೆ. ಮೃತ ವ್ಯಕ್ತಿಯ ಮಕ್ಕಳು ಸಾಮಾನ್ಯವಾಗಿ ಈ ಕರ್ಮವನ್ನು ಮಾಡುತ್ತಾರೆ.ನಂತರದಲ್ಲಿ ಪ್ರತಿ ವರ್ಷ ಮೃತರ ನೆನಪಿನಲ್ಲಿ ಶ್ರಾದ್ಧ  ಕರ್ಮಅಥವಾ ತಿಥಿ ಎಂಬ  ಹೆಸರಿನಲ್ಲಿ  ಆಚರಣೆ ಮಾಡುವುದು ರೂಡಿಯಲ್ಲಿದೆ.

 ಈ ದೇಹಕ್ಕೆ ಅಂತ್ಯ ಸಂಸ್ಕಾರವಾದ ಮೇಲೆ ಶ್ರಾದ್ಧ  ಅಥವಾ ತಿಥಿ ಎನ್ನುವ ಕರ್ಮ ಬೇಕೇ? ಏಕೆ ಬೇಕು? ಅಂತ್ಯವಾದ ಮೇಲೆ ಶ್ರಾದ್ಧ  ಯಾರಿಗೆ? ಇದರ ಅವಶ್ಯಕತೆ ಏನು? ಎಂದು  ಹಲವರು  ಪ್ರಶ್ನೆ ಮಾಡುತ್ತಾರೆ . ಇನ್ನು ಹಲವರು “ವ್ಯಕ್ತಿ ಜೀವಂತ ಇದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳದೆ, ಗೊಳುಹಾಕಿ ಕೊಂಡು ಸತ್ತ ನಂತರ ನೂರಾರು ಜನರಿಗೆ ಊಟ ಹಾಕಿದರೇನು ಬಂತು?  ಇರುವಷ್ಟು ದಿನ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡು ಅವರ ಬೇಕುಬೇಡಗಳನ್ನು ಒದಗಿಸಿದರೆ ಸಾಕು. ಸತ್ತ ನಂತರ ತಿಥಿ ಮಾಡದಿದ್ದರೂ ಪರವಾಗಿಲ್ಲ.” ಎನ್ನುತ್ತಾರೆ. ಮತ್ತೆ ಕೆಲವರು “ನಮ್ಮ ಹಿರಿಯರು ನಡೆಸಿಕೊಂಡು ಬಂದ ಆಚಾರ ವಿಚಾರ, ಸುಮ್ಮನೆ ಮಾಡಿರುವುದಿಲ್ಲ. ಇದನ್ನು ಏಕೆ ತಪ್ಪಿಸಬೇಕು? ಇಂತಹ ಒಂದು ಆಚರಣೆ ಶ್ರಾದ್ಧ .