ವಿಷಯದ ವಿವರಗಳಿಗೆ ದಾಟಿರಿ

Archive for

31
ಡಿಸೆ

ಆಲದ ಮರ ಮತ್ತು ಅತೃಪ್ತ ಆತ್ಮಗಳು

ಸಂತೋಷ್ ಆಚಾರ್ಯ

ಈ ದೆವ್ವ ಭೂತಗಳು ಪ್ರತಿ ಹಳ್ಳಿಯ ಅವಿಭಾಜ್ಯ ಭಾಗ! ಒಂದು ರೀತಿ ಹಳ್ಳಿಯ ಬದುಕಿನ ಹಾಸು ಹೊಕ್ಕುಗಳಲ್ಲಿ ಸೇರಿಕೊಂಡ ಹಾರರ್ ಸ್ಕೋಪುಗಳಿದ್ದಂತೆ. ಪಟ್ಟಣದಲ್ಲಿ ಪಾಳು ಬಂಗಲೆಯಲ್ಲಿ, ಸ್ಮಷಾನದಲ್ಲಿ ಆವಾಸಿಯಾಗಿದ್ದರೂ ಹಳ್ಳಿಯಲ್ಲಿ ಈ ಪ್ರೇತಗಳಿಗೆ ಮರಗಳೆಂದರೆ ಅಚ್ಚು ಮೆಚ್ಚು! ಅದರಲ್ಲೂ ಹುಣಸೇ ಮರವೆಂದರೆ ಪ್ರಾಣ. ಇದನ್ನು ಪ್ರವೀಣ್ ಮಾಯ್ಕರ್ ಅವರ ಒಂದು ಬರಹ ಕೂಡ ಸ್ಪಷ್ಟೀಕರಿಸುತ್ತದೆ. ಹಾಗೆ ನೋಡುವುದಾದರೆ ನನ್ನ ಮತ್ತು ಈ ಪ್ರೇತಗಳ ಸಂಬಂಧ ಏನೇನೂ ಇಲ್ಲ. ಸುಮ್ಮನೆ ಯಾವುದೋ ನೆನಪಾದ ಹಳೆಯ ವಿಷಯವೊಂದು ನನ್ನ ಮನಃಪಟಲಕ್ಕೆ ಈ ರಾತ್ರಿ ಬಂದಿದ್ದರಿಂದ ಈ ಬರಹ! ಬೆಳಿಗ್ಗೆವರೆಗೆ ಆಫೀಸಿನಿಂದ ಕದಲುವ ಹಾಗಿಲ್ಲ, ಮನೆಗೆ ಹೋಗುವ ಹಾಗಿಲ್ಲ. ಆದ್ದರಿಂದ ಚಿಂತೆಯಿಲ್ಲ.

ಮನೆಯ ಕಾಂಪೌಂಡಿನಿಂದ ಸುಮಾರು ಐವತ್ತು ಮೀಟರ್ ದೂರದಲ್ಲಿದ್ದ ಆಲದ ಮರದಲ್ಲಿ ಭೂತವಿತ್ತು ಎಂಬುದು ಅಜ್ಜಿ ಕಲಿಸಿಕೊಟ್ಟ ಸಂಗತಿ. ಆಗ ಭೂತವೆಂದರೆ ಬಿಳಿ ಸೀರೆಯನ್ನುಟ್ಟ ಮಹಿಳೆ ಎಂದೆನಿಸುತ್ತಿದ್ದೆ. ವಿಶಾಲವಾಗಿದ್ದ ಆ ಮರದ ಯಾವುದೋ ಕೊಂಬೆಯಲ್ಲಿ ರಾತ್ರಿ ಬಂದು ನೇತಾಡುತ್ತಿರಬಹುದು ಎಂದು ನನ್ನ ಊಹೆಯಾಗಿತ್ತು. ಅದು ನಾನು ಓದುತ್ತಿದ್ದ ಪುಸ್ತಕಗಳ ಮಹಿಮೆಯೋ ಟಿವಿಯ ಮಹಿಮೆಯೋ ಅಥವಾ ಅಜ್ಜಿಯ ಮಹಿಮೆಯೋ ಭೂತವೆಂದರೆ ಹೀಗೆಯೇ ಇರತ್ತೆ ಎಂದು ನಾನು ಅಂದುಕೊಂಡಿದ್ದೆ. ಅದರ ಮೇಲೆ ಮನೆಯ ಹಿಂದಿನ ಬ್ರಾಹ್ಮಣರ ತಂದೆಯ ಶವವನ್ನೂ ಅಲ್ಲೇ ಸುಟ್ಟಿದ್ದು ಅವರ ಭೂತ ಕೂಡ ಅಲ್ಲಿ ಸೇರಿರಬಹುದು ಎಂದು ನನ್ನ ಶಂಕೆಯಾಗಿತ್ತು. ಪುರುಷರೂ ಸತ್ತ ನಂತರ ಭೂತವಾಗುತ್ತಾರೆ. ಸೊಳ್ಳೆಗಳಂತೆ ಅವು ತೊಂದರೆ ಮಾಡುವುದಿಲ್ಲ ಎಂದು ನನ್ನ ಅನಿಸಿಕೆಯಾಗಿತ್ತು. ಒಟ್ಟಾರೆ ಸತ್ತ ಬಳಿಕ ಎಲ್ಲರೂ ಭೂತವಾಗುತ್ತಾರೆ ಮತ್ತು ಆ ಮರದಲ್ಲಿ ಜೋತು ಬೀಳುತ್ತಾರೆ ಎಂದು ಅಂದುಕೊಂಡಿದ್ದೆ. ನನ್ನ ಎಷ್ಟೋ ಟೆನ್ನಿಸ್ ಬಾಲುಗಳು ಆ ಮರದ ಕೆಳಗಿದ್ದ ಪೊದೆಗಳಲ್ಲಿ ಮರೆಯಾಗಿತ್ತು. ಹುಡುಕುವ ಧೈರ್ಯ ಯಾವತ್ತೂ ಮಾಡಿರಲಿಲ್ಲ. ಆದರೆ ಕ್ರಮೇಣ ಚಿಂತನೆಗಳು ಬದಲಾದಂತೆ ಇದೆಲ್ಲಾ ನಗಣ್ಯವಾಗಿದ್ದು ಬೇರೆ ಮಾತು. ಮತ್ತಷ್ಟು ಓದು »

30
ಡಿಸೆ

ABVP ಸಮಾವೇಶಕ್ಕೆ ಹಿಂದಿ ಬ್ಯಾನರ್ ಯಾಕೆ?

ವಸಂತ ಶೆಟ್ಟಿ

ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು. ಇದೇನಪ್ಪ ಇದು ಅಂತ ನೋಡಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್, ಅದು ಪೂರ್ತಿ ಹಿಂದಿಯಲ್ಲಿ !!. ಅಲ್ಲಲ್ಲಿ…
ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು. ಇದೇನಪ್ಪ ಇದು ಅಂತ ನೋಡಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್, ಅದು ಪೂರ್ತಿ ಹಿಂದಿಯಲ್ಲಿ !!. ಅಲ್ಲಲ್ಲಿ ಕನ್ನಡದಲ್ಲೂ ಬ್ಯಾನರ್ ಕಂಡಿದ್ದೆ, ಆದರೆ ಕರ್ನಾಟಕದಲ್ಲಿ ಹಿಂದಿ ಬ್ಯಾನರ್ ಯಾವ ಪುರುಷಾರ್ಥಕ್ಕಾಗಿ ಹಾಕಿದ್ದಾರೆ ಅಂತ ಗೊತ್ತಾಗಲಿಲ್ಲ. ಮತ್ತಷ್ಟು ಓದು »

29
ಡಿಸೆ

ಭೈರಪ್ಪ ಎಂಬ STAR WRITER

ವಿಕಾಸ್ ಹೆಗಡೆ
ಪ್ರಕಟವಾದ ಮೊದಲನೇ ವಾರವೇ ಮೂರು ಮುದ್ರಣ, ಅಧಿಕೃತವಾಗಿ ಪುಸ್ತಕ ಬಿಡುಗಡೆ ಮಾಡಿದ್ದು ಎಂಟನೇ ಮುದ್ರಣ, ಪ್ರಕಟವಾಗುವ ಮೊದಲೇ ಬುಕ್ಕಿಂಗ್, ಎಲ್ಲಾ ಪ್ರತಿಗಳು ಖಾಲಿ, ಬೆಲೆ ದುಬಾರಿಯಾದರೂ ಎಲ್ಲಾ ಕಡೆ ಪುಸ್ತಕಗಳ ಜೋರು ಮಾರಾಟ, ಪತ್ರಿಕೆಗಳಲ್ಲಿ ಚರ್ಚೆ, ವಾದ, ವಿವಾದ, ಸಮರ್ಥನೆ, ದೂಷಣೆ – ಇಷ್ಟು ಹೇಳುತ್ತಿದ್ದಂತೆ ಎಲ್ಲರಿಗೂ ತಿಳಿದುಬಿಡುತ್ತದೆ. ಇದು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದ ವಿದ್ಯಮಾನ. ಅದು ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ. ೨೩ ಮುದ್ರಣಗಳನ್ನು ಕಂಡ ಅವರ ಹಿಂದಿನ ಕಾದಂಬರಿ ‘ಆವರಣ’ದ ವಿಷಯವಂತೂ ಹೇಳುವುದೇ ಬೇಡ. ಬಹುಶಃ ಈ ಮಟ್ಟಿಗೆ ಸಂಚಲನ ಉಂಟು ಮಾಡುವ ಮತ್ತೊಬ್ಬ ಬರಹಗಾರ ಭಾರತದಲ್ಲಿಲ್ಲ. ಆ ಮಟ್ಟಿಗೆ ಜನಪ್ರಿಯ. ಎಲ್ಲಾ ವಯೋಮಾನದ ಓದುಗರನ್ನು ಹೊಂದಿರುವ ಲೇಖಕರಲ್ಲೊಬ್ಬರು. ಅಧ್ಯಯನ ಶೀಲ, ಸಮರ್ಪಣಾ ಮನೋಭಾವದ ಕಾದಂಬರಿಕಾರರಾಗಿ, ಅದ್ಭುತ ಬರಹಗಾರರಾಗಿ ಭೈರಪ್ಪನವರು ಪ್ರಸಿದ್ಧಿ. ಪಕ್ಕದ ರಾಜ್ಯದ ಸಾಹಿತ್ಯ ಲೋಕದಲ್ಲೇನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗದಿರುವ ಈ ಪರಿಸ್ಥಿತಿಯಲ್ಲೂ ಇವರ ಹಲವಾರು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತವೆ.ನಾನು ಓದಿದ ಇವರ ಮೊದಲ ಕಾದಂಬರಿ ‘ಧರ್ಮಶ್ರೀ’. ಅದಾದ ಮೇಲೆ ಅವರ ಅಂಚು, ದಾಟು, ಪರ್ವ, ವಂಶವೃಕ್ಷ, ನಿರಾಕರಣ, ಜಲಪಾತ, ಸಾರ್ಥ ಮುಂತಾದ ಹಲವು ಕಾದಂಬರಿಗಳನ್ನು ಓದಿದ್ದೇನೆ. ಒಂದೊಂದೂ ಕೂಡ ವಿಷಯಗಳ ಆಗರವಾಗಿ ಕಂಡಿವೆ. ಇನ್ನೂ ಕೆಲವು ಓದುವುದು ಬಾಕಿ ಇವೆ. ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು. ಭೈರಪ್ಪನವರ ಬರವಣಿಗೆಯ ವಿಷಯಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತ್ತವೆ ಎಂದರೆ ಅವು ಮೇಲ್ನೋಟಕ್ಕೆ ಸುಮ್ಮನೇ ಕಥೆಯಾಗಿದ್ದರೂ ಅದು ಸರಿಯಾಗಿ ಅರ್ಥವಾಗಲು ಅಂತಹ ಸನ್ನಿವೇಶಗಳನ್ನು, ಪರಿಸ್ಥಿತಿಗಳನ್ನು, ಮನಸ್ಥಿತಿಯನ್ನು ಸ್ವತಃ ಅನುಭವಿಸಿರಬೇಕು, ಇಲ್ಲವೇ ಕಂಡಿರಬೇಕು. ಆವಾಗಲಷ್ಟೇ ಅದು ಇನ್ನೂ ಚೆನ್ನಾಗಿ ತಾಗಬಲ್ಲುದು. ಜೊತೆಗೆ ಅವರ ಕಾದಂಬರಿಗಳ ವಿಷಯ ವ್ಯಾಪ್ತಿ ಮತ್ತು ಆಳ ಎಂತವರಿಗೂ ಹೊಸ ಹೊಸ ಲೋಕಗಳನ್ನು, ಸತ್ಯಗಳನ್ನು ತೋರಿಸಿಕೊಡುವಂತವು. ಮತ್ತಷ್ಟು ಓದು »
28
ಡಿಸೆ

USB ಡ್ರೈವ್ ನಲ್ಲಿ ಲಿನಕ್ಸ್

 ಓಂಶಿವಪ್ರಕಾಶ್ ಎಚ್. ಎಲ್

ಹೊಸದಾಗಿ ಲಿನಕ್ಸ್ ಬಳಸಬೇಕು ಅಂತಿರೋರು, ಹೊಸ ಹೊಸ ಗ್ನು/ಲಿನಕ್ಸ್ ಆವೃತ್ತಿಗಳನ್ನು ಟೆಸ್ಟ ಮಾಡಿನೋಡ್ಬೇಕು ಅಂತಿರೋ ನನ್ನಂತಹವರು ಪ್ರತಿ ಭಾರಿಯೂ ಲಿನಕ್ಸ್ ಅನ್ನು ನಮ್ಮ ಲ್ಯಾಪ್ಟಾಪ್ ಗಳಲ್ಲಿ ಅಥವಾ ಡೆಸ್ಕಾಪ್ ಗಳಲ್ಲಿ ಪುನ: ಪುನ: ಇನ್ಸ್ಟಾಲ್ ಮಾಡ್ಕೊಳ್ಳಿಕ್ಕೆ ಇಷ್ಟ ಪಡಲ್ಲ. ಹಾಗಿದ್ರೆ ಅದನ್ನ ಬಳಸೋದಾದ್ರೂ ಹ್ಯಾಗೆ?

ವರ್ಚುಅಲ್ ಬಾಕ್ಸ್ – ತಂತ್ರಜ್ಞಾನ ಕುರಿತಾದ ಲೇಖನಗಳನ್ನು ನೀವು ಓದ್ತಿದ್ರೆ ಇಷ್ಟೋತ್ತಿಗಾಗಲೇ ಇದರ ಹೆಸರು ನಿಮ್ಮ ಬಾಯಿಂದ ಹೊರಡಿರಬೇಕು. ಹೊಸಬರಿಗೆ ಅದೂ ಸ್ವಲ್ಪ ಕಿರಿ ಕಿರಿ ಅನ್ನಿಸ್ಬಹುದು. ಹಾಗಿದ್ರೆ ಅಂತವರಿಗೆಲ್ಲ ಗು/ಲಿನಕ್ಸ್ ನ ಔತಣವನ್ನ ಹೇಗೆ ಬಡಿಸೋದು ಅನ್ನೊದು ಮುಂದಿನ ಪ್ರಶ್ನೆ.

ಇದಕ್ಕೆ ಒಂದು ಉತ್ತರ ಹೇಳ್ತೀರಾ?

-> ಲೈವ್ ಸಿ.ಡಿ ಉಪಯೋಗಿಸ್ಬಹುದಲ್ವಾ?

ಟೆಕ್ ತಂಡ ಹೊರತಂದ ಡೆಬಿಯನ್ ಚಿಗುರು ಕೂಡಾ ಲೈವ್ ಸಿ.ಡಿ ಯೇ. ನಿಮ್ಮ ಕಂಪ್ಯೂಟರ್ ಅನ್ನು ಸಿ.ಡಿ ಯಲ್ಲಿ ಬೂಟ್ ಮಾಡಿದರಾಯಿತು. ಮತ್ತಷ್ಟು ಓದು »

27
ಡಿಸೆ

ಗೋಹತ್ಯೆ ನಿಷೇಧದ ಸುತ್ತ…!

ಕವಿತಾ ಪಿ.ಎನ್ ಮತ್ತು ಸಂದೀಪ

ಗೋಹತ್ಯೆ ಹಾಗೂ ಗೋಹತ್ಯೆ ನಿಷೇಧಕಾಯಿದೆ/ಶಾಸನಬದ್ಧಗೊಳಿಸುವ ಕುರಿತಂತೆ ಬಿಡುವಿಲ್ಲದೇ ಚರ್ಚೆಗಳು ನಡೆಯುತ್ತಿರುವುದನ್ನು ನಾವೆಲ್ಲ ಓದುತ್ತಿದ್ದೇವೆ. ಹಳೆಯ ಒಂದು ಹಿಂದೂ ಪತ್ರಿಕೆಯಲ್ಲಿ ಬಂದ ‘Cow slaughter ban is a tool to oppress Dalits’ ಸಿಬ್ಬಂದಿ ಮಾಡಿದ್ದ ವರದಿಯಲ್ಲಿ, ಆರ್.ಎಸ್.ಎಸ್. ಮತ್ತು ಅದರ ವಿರೋಧಿ ಪಾಳೇಯದ ಟೀಕಾ ಪ್ರಹಾರಗಳು ಕಂಡುಬಂದವು.

ಆರ್.ಎಸ್.ಎಸ್.ಅನ್ನು ಟೀಕಿಸುವರು ಹೇಳುವುದೆನೆಂದರೆ, ಭಾರತೀಯ ಸ್ಥಳೀಯ ಸಂಸ್ಕೃತಿಗಳಿಗೆ ಹಿಂದೂ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯು ವಿದೇಶದಿಂದ ಆಮದು ಮಾಡಿಕೊಂಡ ಸರಕು, ಆದರೆ ಆರ್.ಎಸ್,ಎಸ್.ನವರು ಬೇರೆ ಬೇರೆಯ ರೀತಿಯ ಆಹಾರ ಪದ್ದತಿಗಳನ್ನು ಹೊಂದಿರುವ ಸಂಸ್ಕೃತಿಗಳನ್ನು ರಾಷ್ಟ್ರೀಯತೆಯ ವಿರೋಧಿಗಳು ಎಂದು ಗುರುತಿಸುವ ಮೂಲಕ, ಆಂತರೀಕವಾಗಿ ಶತ್ರುಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂಬ ಹೇಳಿಕೆಯನ್ನು ಪ್ರಕಾಶ ಅವರು ನೀಡಿದ್ದಾರೆ. ಮತ್ತಷ್ಟು ಓದು »

26
ಡಿಸೆ

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ…!

– ಆಸು ಹೆಗ್ಡೆ

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,                                                                                
ಈ ಗೂಡು ತನ್ನದು, ಇದರಲ್ಲಿ ತನ್ನ ಬೆವರು ಬೆರೆತಿದೆ,
ತನ್ನ ಪರಿಶ್ರಮದ ಸಾಕ್ಷಿಯಾಗಿ ಇನ್ನೂ ಸುಭದ್ರವಾಗಿಯೇ ಅದು ಉಳಿದಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ಹಕ್ಕಿ ಹೊಸ ನೆಲೆಯ ಹುಡುಕಿ ಹೊರಡಬೇಕಾಗಿದೆ,
ಇಂದಿಗೆ ತೀರಿತು ಇಲ್ಲಿಯ ಋಣ, ಎಂದು ಇನ್ನು ಹೊಸಗೂಡು ಕಟ್ಟಬೇಕಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಾನು ತನ್ನದೆಂಬ ಭಾವುಕತೆಗೆ ಅಂಟಿರಲಾಗದಾಗಿದೆ,
ಭೌತಿಕ ವ್ಯಾಮೋಹ ತೊರೆದು ಮೈಕೊಡವಿ ಎದ್ದು ಹೊರನಡೆಯಬೇಕಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ವಿಷಜಂತುಗಳ ಜೊತೆಗೆ ಕಾಲಹರಣ ವ್ಯರ್ಥವಾದುದಾಗಿದೆ,
ಮನವೊಲಿಸಿ ತನ್ನದನ್ನು ಉಳಿಸಿಕೊಂಬ ವ್ಯರ್ಥ ಪ್ರಯತ್ನ ಇನ್ನು ಬೇಡವಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,,
ಇದ್ದಲ್ಲೇ ಒಳಗೊಳಗೇ ಮರುಗಿ ಬೇಯುವುದು ಬೇಡವಾಗಿದೆ,
ಹಾವಿನ ಸಹವಾಸವ ತೊರೆದು ಸ್ವಚ್ಛಂದ ಬಾನಿನಲ್ಲಿ ತಾನೀಗ ಹಾರಾಡಬೇಕಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ನಂಬಿದ ತತ್ವಗಳ ಇಂದು ಒರೆಗೆಹಚ್ಚಿ ಪರೀಕ್ಷಿಸಬೇಕಾಗಿದೆ,
ತಾನು ಸರ್ವಸಮರ್ಥ ಎಂಬುದ ಈ ಜಗದ ಮುಂದೆ ಸಾಬೀತುಪಡಿಸಬೇಕಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಲೆಯೆತ್ತಿ, ಎತ್ತ ದೈವಚಿತ್ತವೋ ಅತ್ತ ನಡೆದುಬಿಡಬೇಕಾಗಿದೆ,
ಹೊಸದೊಂದು ಸ್ಥಾನದಲ್ಲಿ ಹೊಸ ಅಸ್ಥಿತ್ವವನ್ನು ಸ್ಥಾಪಿಸಿ ಬೆಳೆಸಿಕೊಳ್ಳಬೇಕಾಗಿದೆ!

 

ಚಿತ್ರ ಕೃಪೆ : http://www.austinreptileservice.net

25
ಡಿಸೆ

“ಗ್ರಾಮದೇಗುಲಗಳಾಗಿ ಗರೋಡಿಗಳು”

ಜಗನ್ನಾಥ್ ಶಿರ್ಲಾಲ್

ತುಳುನಾಡು ಸಾಂಸ್ಕೃತಿಕ ಅನನ್ಯತೆಯ ನಾಡು. ದೈವ, ದೇವರುಗಳ ಸಮಾಗಮದ ಬೀಡು. ಇಲ್ಲಿನ ಪರಿಸರ, ಪ್ರಾಣಿ, ಪಕ್ಷಿ, ಗಿಡ, ಮರ, ಸ್ಥಳ, ವೀರ ಪುರುಷರ, ಆರಾಧನೆಯ ದೈವಿಕ ನೆಲೆಯಾಗಿದೆ. ಪ್ರತಿಯೊಂದು ನಂಬಿಕೆ ನಡವಳಿಕೆಗಳು ಜಾನಪದದ ಆಧಾರದಲ್ಲಿ ಹೆಣೆದಿರುವುದು ತುಳುನಾಡ ಸಂಸ್ಕೃತಿಯ ವೈಶಿಷ್ಟ್ಯ.
ವ್ಯಕ್ತಿಗಳು ತನ್ನ ಜೀವಿತ ಕಾಲದಲ್ಲಿ ಅಸಾಮಾನ್ಯ ರೀತಿಯಲ್ಲಿ ಬಾಳಿ ಬದುಕಿ ಬಲಿದಾನವಾದಾಗ ಅವರನ್ನು ದೈವತ್ವ ಮಟ್ಟಕ್ಕೆ ಏರಿಸಿ ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಕಂಡುಬರುತ್ತದೆ. ಅತಿಮಾನುಷ ಶಕ್ತಿಗಳನ್ನು ಪೂಜಿಸಲು ಅತ್ತ ದೇವಸ್ಥಾನವು ಅಲ್ಲದ ಇತ್ತ ಭೂತ ಸ್ಥಾನವೂ ಅಲ್ಲದ ಒಂದು ವಿಶಿಷ್ಟ ಪೂಜಾ ಕೇಂದ್ರವಾಗಿ ‘ಗರೋಡಿ’ ಎಂಬ ದೇಗುಲವು ನಿರ್ಮಾಣವಾದುದು ಜನರ ಭಾವುಕ ಪ್ರಜ್ಞೆಗೆ ತಲೆಬಾಗಲೇ ಬೇಕಾದುದು. ಈ ಮೂಲಕ ಇಡೀ ಗ್ರಾಮ ವ್ಯವಸ್ಥೆಯಲ್ಲಿ ಆ ಗರೋಡಿಗೆ ಸಂಬಂಧಿಸಿದ ಸಮುದಾಯದ ಜನರನ್ನು ಒಂದುಗೂಡಿಸುವಲ್ಲಿ ದೈವ ಭಕ್ತಿಯು  ಕಾರಣವಾಗಿದೆ. ಅಲ್ಲದೆ ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಸಮುದಾಯಗಳ ಮಧ್ಯೆ ಸಾಮರಸ್ಯ ಮೂಡಿಸಲು ಮತ್ತು ಪಾಲ್ಗೊಳ್ಳುವಿಕೆಗೆ ಗರೋಡಿಗಳು ಒಂದು ಕಾರಣವಾಗಿದೆ. ಮತ್ತಷ್ಟು ಓದು »
24
ಡಿಸೆ

ಬೆಂಗಳೂರು-ಮಂಗಳೂರು ಬಸ್ಸಲ್ಲಿ…!

ವೇಣುವಿನೋದ್, ಪತ್ರಕರ್ತರು, ಮಂಗಳೂರು

ಇದುವರೆಗೆ ಸುಮಾರು ೩೦ ಬಾರಿ ಬೆಂಗಳೂರಿಗೆ ಹೋಗಿ ಬಂದಿದ್ದೇನೆ. ಅದರಲ್ಲಿ ಮೊನ್ನೆಯ ನನ್ನ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾತ್ರ ದಾಖಲೆಯ ಪುಟದಲ್ಲಿ ಸೇರಿ ಹೋಯಿತು…

ಕ್ಯಾಮೆರಾ ರಿಪೇರಿ, ಒಂದಷ್ಟು ಪುಸ್ತಕ ಖರೀದಿ ಕೆಲಸ ಇದ್ದ ಕಾರಣ ಶನಿವಾರದ ವಾರದ ರಜೆಯನ್ನು ಉಪಯೋಗ ಮಾಡಿಕೊಳ್ಳೋಣ ಎಂದು ಶುಕ್ರವಾರ ರಾತ್ರಿ ಮಂಗಳೂರಿನಿಂದ ಹೊರಟೆ. ಕೆಟ್ಟ ರಸ್ತೆಯಲ್ಲಿ ಆರ್ಡಿನರಿ ಬಸ್‌ಗಳಲ್ಲಿ ಹೋದರೆ ಖಂಡಿತಾ ನಿದ್ದೆ ಬರುವುದು ಕಷ್ಟ ಎಂದು ಗೊತ್ತು. ಅದಕ್ಕೇ ೫೦೦ ರು. ಕೊಟ್ಟು ಕೆಎಸ್ಸಾರ‍್ಟಿಸಿ ಐರಾವತದಲ್ಲೇ ಸೀಟ್ ಬುಕ್ ಮಾಡಿಸಿದ್ದೆ. ೯.೨೩ರ ನನ್ನ ಬಸ್ ಎಸಿ ಸರಿ ಇಲ್ಲ ಎಂದು ಅರ್ಧ ಗಂಟೆ ವಿಳಂಬವಾಗಿ ಹೊರಟಿತು. ಶಿರಾಡಿ ಬ್ಲಾಕ್ ಆದ ಕಾರಣ ಮಡಿಕೇರಿ-ಮೈಸೂರು ರೋಡಲ್ಲಿ ಬಸ್ ಸಾಗಿತ್ತು. ಆದರೆ ಕೆಟ್ಟ ರಸ್ತೆ ಮತ್ತು ವೋಲ್ವೋ ಕೂಡಾ ಹಳೆಯದಾಗಿದ್ದರಿಂದಲೋ ಏನೋ ಚೆನ್ನಾಗಿ ನಿದ್ದೆ ತೆಗೆಯುವ ನನ್ನ ಉದ್ದೇಶ ಈಡೇರಲಿಲ್ಲ. ಘಾಟ್ ರಸ್ತೆಯಲ್ಲಿ ಕ್ರಶರ‍್ನಲ್ಲಿ ಹಾಕಿ ಕುಲುಕಿಸಿದ ಅನುಭವ. ಮತ್ತಷ್ಟು ಓದು »

23
ಡಿಸೆ

ಕನ್ನಡ ಮಿಡಿಯಾ – ಎಡವುತ್ತಿರುವುದೆಲ್ಲಿ ?

ವಸಂತ ಶೆಟ್ಟಿ, ಬೆಂಗಳೂರು

ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು (ವಿ.ಕ, ಪ್ರ.ವಾ,ಉ.ವಾ, ಕ.ಪ್ರ), ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು (ಟಿವಿ9, ಸುವರ್ಣ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು( ಜೀ ಕನ್ನಡ, ಕಸ್ತೂರಿ, ಈ ಟಿವಿ ಕನ್ನಡ, ಸುವರ್ಣ), ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ, ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ. ಇವರ ಹಿಂದಿ ಸಿನೆಮಾ, ಹಾಡು, ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಹಾಗಿದ್ರೆ ಇದೆಷ್ಟು ಸರಿಯಾದದ್ದು ?

ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು

’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಮತ್ತಷ್ಟು ಓದು »

22
ಡಿಸೆ

ಅಲೆಲ್ಲೆಲ್ಲೆ…. ಸಿಂಗ್ರಿ!

ಇರ್ಷಾದ್ ಎಂ.ವೇಣೂರು

ಸಿಂಗ್ರಿ ರೌಂಡ್ಸ್…

 ಬೆಳಿಗ್ಗೆ 8.15 ದಾಟಿದರೆ ಸಾಕು ಯಾವುದೇ ಕೆಲಸದಲ್ಲಿ ಬ್ಯೂಸಿ ಆಗಿರುವವರು ಟಿ.ವಿ ಮುಂದೆ ಹಾಜರಾಗ್ತಾರೆ. ಬೇರೆ ಯಾವುದೇ ಚಾನಲ್ ನೋಡ್ತಿರೋರು ಸುವರ್ಣ ನ್ಯೂಸ್ ಚಾನೆಲ್ ಗೆ ಜಂಪ್ ಆಗ್ತಾರೆ. 8 ಗಂಟೆಯ ನ್ಯೂಸ್ ಓದ್ತಿರೋ ಆಂಕರ್ ‘ಈಗ ಸಿಂಗ್ರಿ ರೌಂಡ್ಸ್ ಪ್ರಸಾರವಾಗತ್ತೆ, ಕ್ಷಣ ಕ್ಷಣದ ಸುದ್ದಿಗಾಗಿ ಸುವರ್ಣ ನ್ಯೂಸ್ 24X7 ನೋಡ್ತಾ ಇರಿ’ ಎಂದಾಗ ಟಿವಿ ಮುಂದೆ ಕೂತವರ ಮುಖದಲ್ಲಿ ಮಂದಹಾಸ ಬೀರುತ್ತೆ. ಇನ್ನು ಸಿಂಗ್ರಿ ಮ್ಯೂಸಿಕ್ ಬಂತು ಅಂದ್ರೆ ಮನೆ ಮಂದಿಯ ಕಣ್ಣೆಲ್ಲಾ ಟಿ.ವಿ ಪರದೆಯ ಮೇಲೆ ಬೀಳುತ್ತೆ!
ಹಿಂದಿನ ದಿನದ ಆಗು ಹೋಗುಗಳನ್ನು ತನ್ನದೇ ಆದ ಶೈಲಿಯಲ್ಲಿ ಉಣಬಡಿಸುವ ಸಿಂಗ್ರಿ ಎಲ್ಲರ ಅಚ್ಚುಮೆಚ್ಚು. ತೆರೆಯ ಮೇಲೆ ಕುಡುಕನೋರ್ವ 90 ಹಾಕ್ಕೊಂಡು ಗಾಳಿಯಲ್ಲಿ ತೂರಾಡ್ತಾ ಇರ್ತಾನೆ. ಅವನಿಗೆ ಸಾಥಿಯಾಗಿ ಕುಡುಕನ ವಾಯ್ಸ್ ರಾಜಕೀಯ – ಪ್ರಚಲಿತ ವಿದ್ಯಮಾನಗಳ ಬಗ್ಗೆ ತನ್ನ ಅನಿಸಿಕೆ ಹೇಳುತ್ತಾ ಹೋಗುತ್ತೆ. ಕೇವಲ ರಾಜಕೀಯದ ಸುತ್ತ ಮಾತ್ರ ಸಿಂಗ್ರಿ ರೌಂಡ್ ಹಾಕಲ್ಲ. ಕೆಲವೊಮ್ಮೆ ವಿಶಿಷ್ಟ ಸುದ್ದಿಗಳೂ ಅಲ್ಲಿರುತ್ತೆ! ಪ್ರತಿಯೊಂದು ಟಾಂಗ್ – ಟಾಂಟ್ ಮೂಲಕ ಚಾಟಿಯೇಟು ನೀಡಿದ ಬಳಿಕ ಹ್ಹಿಹ್ಹಿಹ್ಹಿ ಎಂಬ ಮಗುವಿನ ನಗು ಪ್ರೇಕ್ಷಕರ ಬಾಯಲ್ಲೂ ಪ್ರತಿಫಲನವಾಗುತ್ತೆ.