ವಿಷಯದ ವಿವರಗಳಿಗೆ ದಾಟಿರಿ

Archive for

4
ಡಿಸೆ

ಸಾಂಸ್ಕೃತಿಕ ಕಾರ್ಯಕ್ರಮಗಳ ಔಚಿತ್ಯತೆ

ಜಗನ್ನಾಥ್ ಶಿರ್ಲಾಲ್

ನಮ್ಮ ನೆಲದ ಸಾಂಸ್ಕೃತಿಕ ಸತ್ವವನ್ನು ಅನಾವರಣಗೊಳಿಸುವ ಕಲಾ ಪ್ರದರ್ಶನವನ್ನು ಸಾಂಸ್ಕೃತಿಕ ಕಾರ್ಯಕ್ರಮ ಎನ್ನಬಹುದು. ಇಂತಹ ಕಲಾ ಸಾಧ್ಯತೆಗಳನ್ನು ಆಸ್ವಾದಿಸುವ ಮೂಲಕ ಸಹೃದಯ ಪ್ರೇಕ್ಷಕರು ಮತ್ತಷ್ಟು ಸುಸಂಸ್ಕೃತರಾಗಿ ಬೆಳೆಯಬಹುದು. ಸಾಂಸ್ಕೃತಿಕ ಕಾರ್ಯಕ್ರಮ ಎಂದಾಕ್ಷಣ ಇಷ್ಟಪಡದವರು ಇಲ್ಲ. ದಾರಿಹೋಕರೂ ಕೂಡಾ ಆಸುಪಾಸಿನ ಶಾಲಾ ಕಾಲೇಜು, ಯುವಕ ಸಂಘ, ದೇವಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕ್ಷಣ ಮಾತ್ರದಲ್ಲಿ ದೃಷ್ಟಿ ಹಾಯಿಸುತ್ತಾರೆ. ಇನ್ನೂ ಕೆಲವರು ತನ್ನೆಲ್ಲ ಅತ್ಯಗತ್ಯ ಕೆಲಸಗಳನ್ನು ಬದಿಗೊತ್ತಿ ಕಾರ್ಯಕ್ರಮ ವೀಕ್ಷಿಸುವವರಿದ್ದಾರೆ.

       ಸಾಂಸ್ಕೃತಿಕ ಕಾರ್ಯಕ್ರಮಗಳು ಆಧುನಿಕ ಯುಗದಲ್ಲಿ ಮಕ್ಕಳು, ಯುವಕರು, ಹಿರಿಯರನ್ನು ಮನರಂಜಿಸುವ ಮಾಧ್ಯಮವಾಗಿವೆ. ಅಲ್ಲದೆ ಹಲವಾರು ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಸಾಧ್ಯವಾಗಿದೆ.
        ಇಂತಹ ಕಾರ್ಯಕ್ರಮಗಳು ಮೌಲ್ಯಯುತವಾಗಿ, ಮನೋರಂಜನೆ, ಸಮಯದ ಮಿತಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ವಸ್ತು ದೃಷ್ಟಿಯಲ್ಲಿ ಸಂದೇಶದ ಸ್ಪಷ್ಟತೆಯಿದ್ದು ಸಕುಟುಂಬಿಕವಾಗಿ ನೋಡುವಂತಿದ್ದರೆ ಒಳ್ಳೆಯದು. ಮತ್ತಷ್ಟು ಓದು »