ಮುಖ್ಯಮಂತ್ರಿಯೂ ಮತ್ತು ನಲ್ವತ್ತು ಜನ…
ಭಾಗ ೧
ಭಾರತದ ಇತಿಹಾಸದಲ್ಲೇ ಕಾಣದಷ್ಟು ಕರಾಳ ದಿನ ೨೨ನೇ ಜನವರಿ ೨೦೧೧, ಆಡಳಿತ ಪಕ್ಷವೇ ಬಂದ್ ಕರೆ ನೀಡಿದ್ದು, ದೇಶದಲ್ಲಿ ಇದೇ ಮೊದಲು, ಒಂದೊಮ್ಮೆ ತುರ್ತು ಪರಿಸ್ಥಿತಿ ಎದುರಿಸಿದ್ದ ಭಾರತ ಸರ್ಕಾರ, ಕೆಲವೇ ದಿನಗಳಲ್ಲೇ ತನ್ನ ಸರಿ ದಾರಿಯನ್ನು ಕಂಡುಕೊಂಡು ಮುಂದೆ ಇಂತಹ ಪರಿಸ್ಥಿತಿ ಬಂದೊದಗದಂತೆ ನೋಡಿಕೊಳ್ಳುತ್ತಲೇ ಬಂದಿದೆ. ಇಂತಹ ಭವ್ಯ ಭಾರತದ ಸುದೀರ್ಘ ೬೦ ವರ್ಷಗಳ ಇತಿಹಾಸದಲ್ಲಿ ಇಂದು ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಬಂದ್ ಆಗುವುದಕ್ಕೆ ಕಾರಣವಾದರೂ ಏನು ? ಒಬ್ಬ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಹೊತ್ತ ವ್ಯಕ್ತಿಗೆ ಮತ್ತೊಬ್ಬ ಮಹೋನ್ನತ ಜವಾಬ್ದಾರಿ ಹೊತ್ತ ವ್ಯಕ್ತಿಯು ರಾಜ್ಯಕ್ಕೆ ಮಾಡಿದ ಮೋಸವನ್ನು ಸಾಬೀತುಪಡಿಸಲು ಅವಕಾಶ ನೀಡಿದ್ದು, ಅದು ತಪ್ಪೇ ? ಹಾಗಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ತಪ್ಪೇ ಮಾಡಲಾರನೇ ? ಕೇವಲ ಜನ ಸಾಮಾನ್ಯರು ಮಾತ್ರ ತಪ್ಪು ಮಾಡುವರೇ ? ಅವರಿಗೆ ಮಾತ್ರ ಶಿಕ್ಷೆಯೇ ?
ಆದದ್ದೇನು ………?
ಕರ್ನಾಟಕದ ಇಂದಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಅಖಂಡ ರಾಜಕೀಯ ಇತಿಹಾಸದಲ್ಲಿ ಸುಮಾರು ವರ್ಷ ವಿರೋಧ ಪಕ್ಷದಲ್ಲೇ ಉತ್ತಮ ಕೆಲಸಮಾಡಿ ಜನಮನ್ನಣೆ ಪಡೆದವರು, ಅಲ್ಲಿ ಯಡಿಯೂರಪ್ಪನವರ ಕೆಲಸಕ್ಕಿಂತ ಕರ್ನಾಟಕದ ಜನತೆಗೆ ಒಂದೇ ಪಕ್ಷ ಅಥವಾ ಆಡಳಿತದ ಚುಕ್ಕಾಣಿ ಹಿಡಿದು ಅಭಿವೃದ್ದಿಯ ಮಂತ್ರವನ್ನಷ್ಟೆ ಜಪಿಸಿ, ಜನರ ಆಕಾಂಕ್ಷೆಗಳಿಗೆ ಮನ್ನಣೆ ನೀಡದೇ ಇದ್ದದ್ದು, ಮತ್ತು ಬಿಜೆಪಿಯ ಮೇಲೆ ಹುಟ್ಟಿದ ಅನುಕಂಪ ೨೦೦೭-೨೦೦೮ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ದೊರೆತ ಮೊದಲ ಸಲದ ಆಡಳಿತ ಅವಕಾಶದಲ್ಲಿ ಮೊದಲು ನೂರಷ್ಟು ಗೊಂದಲಗಳು, ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪನ ಪಟಾಲಂಗಳು ತಮ್ಮ ತಮ್ಮ ನಾಯಕರಿಗೆ ಮುಖ್ಯಮಂತ್ರಿಯ ಪಟ್ಟವನ್ನು ಅಲಂಕರಿಸಲು ಸಾಕಷ್ಟು ಶ್ರಮವನ್ನು ನಡೆಸಿದರು. ಬಿಜೆಪಿ ಹ್ಯೆಕಮಾಂಡಿನ ಕೃಪಾಕಟಾಕ್ಷದಿಂದ ಯಡಿಯೂರಪ್ಪನವರಿಗೆ ಆ ಪದವಿ ಒಲಿದದ್ದು ಈಗ ಇತಿಹಾಸ. ಮತ್ತಷ್ಟು ಓದು 
ಫೆ.9ರೊಳಗೆ ಗ್ಯಾಸ್ ಏಜೆನ್ಸಿಗೆ ರೇಷನ್ ಕಾರ್ಡ್ ಸಲ್ಲಿಸಿ
ರೇಷನ್ ಕಾರ್ಡ್ ಸಲ್ಲಿಸಿದರೆ ಮಾತ್ರ ಎಲ್ ಪಿ ಜಿ ಲಭ್ಯ – ನಿಮ್ಮ ಗ್ಯಾಸ್ ಏಜಂಟರಿಗೆ ನೀಡಲು ಫೆಬ್ರವರಿ ೯ ರವರೆಗೂ ವಿಸ್ತರಣೆ.
ಸಲ್ಲಿಸಬೇಕಾದ ವಿವರಗಳು :
೧. ನಿಮ್ಮ ಮನೆಯ ವಿದ್ಯುತ್ ಬಿಲ್ಲಿನ ನೆರಳು ಪ್ರತಿ.
೨. ಇತ್ತೀಚಿನ ಗ್ಯಾಸ್ ಡೆಲಿವರಿಯ ರಸೀತಿ.
೩. ರೇಷನ್ ಕಾರ್ಡ್ ನೆರಳು ಪ್ರತಿ (ರೇಷನ್ ಕಾರ್ಡ್ ಇಲ್ಲದವರು “ತಮ್ಮ ಬಳಿ ರೇಷನ್ ಕಾರ್ಡ್ ಇಲ್ಲವೆಂದು” ಪತ್ರ ಬರೆದುಕೊಡಬೇಕು)
ಈ ಮೇಲಿನ ವಿವರಗಳನ್ನು ಸಲ್ಲಿಸದಿದ್ದರೆ, ಗ್ಯಾಸ್ ಏಜೆಂಟರು ಮುಂದೆ ನಿಮ್ಮ ಗ್ಯಾಸ್ ಬುಕಿಂಗ್ ಮಾಡಿಕೊಳ್ಳುವುದಿಲ್ಲ. ಪ್ರಾಯಶಃ ಈ ದಿನಾಂಕವನ್ನು ವಿಸ್ತರಿಸಲೂಬಹುದು, ಆದರೂ ಮುಂದಿನ ದಿನಂಪ್ರತಿ ಕೆಲಸದಲ್ಲಿ ಮರೆತು ಹೋಗಬಹುದಾದ್ದರಿಂದ ಇಂದೇ ಅವಶ್ಯಕ ವಿವರಗಳನ್ನು ಸಲ್ಲಿಸಿ.
ಔಟ್ ಆಫ್ ಸ್ಕೂಲ್! ಶಾಲೆ ಮೆಟ್ಟಿಲು ಹತ್ತದ ೧೧-೧೪ ವರ್ಷದ ಶೇ.೬ರಷ್ಟು ಬಾಲಕಿಯರು
– ಶಂಶೀರ್, ಬುಡೋಳಿ
ಕನ್ನಡಿಗರಲ್ಲಿ ಹೆಚ್ಚುತ್ತಿರುವ ಖಾಸಗಿ ಶಾಲಾ ವ್ಯಾಮೋಹ
ದೇಶದ ಶೈಕ್ಷಣಿಕ ರಂಗ ಬದಲಾವಣೆಯ ಹಂತದಲ್ಲಿದೆ ನಿಜ. ಬಾಲಕಿಯರು ಶೈಕ್ಷಣಿಕವಾಗಿ ಮುಂದೆ ಬರಲು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ವಿವಿಧ ರೀತಿಯ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದಿದೆ ನಿಜ. ಆದರೆ ಇವತ್ತು ಭಾರತದ ಗ್ರಾಮೀಣ ಪ್ರದೇಶದ ೧೧ರಿಂದ ೧೪ ವರ್ಷದವರೆಗಿನ ಶೇ. ೬ ರಷ್ಟು ಬಾಲಕಿಯರು ಶಾಲೆಯ ಮೆಟ್ಟಿಲು ಹತ್ತಿಲ್ಲವಂತೆ. ಇದು ಅಸೆರ್-೨೦೧೦ ಇತ್ತೀಚಿಗೆ ಬಿಡುಗಡೆ ಮಾಡಿದ ಅಂಕಿ ಅಂಶ.
ಸರಕಾರಿ ರಹಿತ ಸಂಸ್ಥೆಯಾದ ಪ್ರಥಮ್ ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಶೈಕ್ಷಣಿಕ ಮಟ್ಟದ ಅಂಕಿ ಅಂಶಗಳ ಕುರಿತಾದ ‘ಅಸೆರ್-೨೦೧೦’ ವರದಿಯು ದೇಶದ ಗ್ರಾಮೀಣ ಪ್ರದೇಶದ ಕೌಟುಂಬಿಕ ಪರಿಸ್ಥಿತಿ, ಶೈಕ್ಷಣಿಕ ಅರ್ಹತೆ, ಶಾಲಾ ಶಿಕ್ಷಣ ಮಟ್ಟ ಹೀಗೆ ಮುಂತಾದ ವಿಷಯಗಳನ್ನು ತೆರೆದಿಡುತ್ತದೆ. ಇದೊಂದು ದೇಶದ ಗ್ರಾಮೀಣ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಮಾಡಿದಂತಹ ಅತಿ ದೊಡ್ಡ ಶೈಕ್ಷಣಿಕ ಸಮೀಕ್ಷೆಯಾಗಿದೆ.
ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾಕೆಂದರೆ ದೇಶದ ಕೆಲವೊಂದು ರಾಜ್ಯಗಳಲ್ಲಿ ಸಮಾನ ರೀತಿಯಾದಂತಹ ಶಿಕ್ಷಣ ವ್ಯವಸ್ಥೆಯಿದ್ದರೆ , ಈಗಲೂ ಕೆಲವೊಂದು ರಾಜ್ಯಗಳಲ್ಲಿ ಶಿಕ್ಷಣ ಕಲಿಸುವ ಸಮಯದಲ್ಲಿ ಬಾಲಕಿಯರಿಗೆ ಕೇವಲ ಪ್ರಾಥಮಿಕ ಅಥವಾ ಹೈಸ್ಕೂಲ್ ಶಿಕ್ಷಣ ಕಲಿಸಿ ಕಲಿಕೆಯನ್ನು ಕಲಿಸಿ ನಂತರ ಮೊಟಕುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಾಗೆಯೇ ಬಾಲಕರಿಗೆ ಉನ್ನತ ಶಿಕ್ಷಣ ಕಲಿಯುವವರೆಗೆ ಅವಕಾಶ ಕೊಡಲಾಗುತ್ತದೆ. ಹೀಗಾಗಿ ಶೈಕ್ಷಣಿಕ ಮಟ್ಟದಲ್ಲಿ ಲಿಂಗ ತಾರತಮ್ಯವಾಗುತ್ತಿದೆ.
ಪ್ರಾಥಮಿಕ ಹಂತದಲ್ಲಿ ವಿಶೇಷವಾಗಿ ಬಾಲಕಿಯರಿಗಾಗಿ ಯೋಜನೆಗಳನ್ನು ಆಳವಡಿಸಿಕೊಂಡಿರಬಹುದು. ಆದರೆ ಇದು ಸಮರ್ಪಕ ಮಟ್ಟದಲ್ಲಿ ತಲುಪುವವರಿಗೆ ತಲುಪುತ್ತಿಲ್ಲ. ಸರಕಾರಿ ಶಿಕ್ಷಣ ಕೇವಲ ನೆಪ ಮಾತ್ರ ಎಂಬ ಭಾವನೆ ಕೆಲವರಲ್ಲಿ ಇರುವುದರಿಂದ್ದ ಇವತ್ತು ಮಧ್ಯಮ ವರ್ಗದ ಕುಟುಂಬದ ಜೊತೆಗೆ ಕೆಲವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಹ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕಲಾಗುತ್ತಿದೆ ಎಂಬ ಅಂಶ ಅಚ್ಚರಿ ಮೂಡಿಸುತ್ತದೆ. ಕಾರಣ ಸರಕಾರಿ ಶಾಲೆಯ ಶಿಕ್ಷಣ ಕಲಿಕೆ ಚೆನ್ನಾಗಿಲ್ಲ ಎಂಬುದು. ಮತ್ತಷ್ಟು ಓದು 
ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”
“ಮಚ್ಚು,ಲಾಂಗು,ಲೀಟರ್ ಗಟ್ಲೆ ರಕ್ತ ಬಿಟ್ಟು ಬೇರೆ ಇನ್ನೆನಪ್ಪ ಇದೆ ನಿಮ್ಮ ಕನ್ನಡ ಚಿತ್ರಗಳಲ್ಲಿ?, ವರ್ಷಕ್ಕೆ ಬರೋ ಚಿತ್ರಗಳಲ್ಲಿ ಅರ್ದಕ್ಕರ್ಧ ರಿಮೇಕ್ ಚಿತ್ರಗಳೇ.ಯಪ್ಪಾ!! ಬಿಡೋ ಹೋಗ್ಲಿ… ” ಅಂತ ನನ್ನ ಅನ್ಯ ಭಾಷೆಯ ಗೆಳೆಯರು ಕೂಡಿ ಗೇಲಿ ಮಾಡಿ ನಗ್ತಾ ಇದ್ರು.ನಾನಾದರು ಏನಂತ ಉತ್ತರ ಕೊಡ್ಲಿ, ಇರೋ ವಿಷ್ಯಾನೆ ತಾನೇ ಪಾಪ ಅವ್ರು ಹೇಳ್ತಾ ಇರೋದು.ಅದ್ರಲ್ಲಿ ತಪ್ಪೇನಿದೆ?,ಒಬ್ಬ ಕನ್ನಡ ಸಿನೆಮಾ ಅಭಿನಯದ ಅಭಿಮಾನಿಯಾಗಿದ್ದಕ್ಕೆ ಇಂತ ಮಾತುಗಳನ್ನ ಕೇಳಲೆಬೇಕಾಗಿತ್ತು.
ಅವ್ರು ಹೇಳಿದ್ ಮಾತ್ಗಳನ್ನ ಒಮ್ಮೆ ಕೂತು ಯೋಚಿಸಿ ನೋಡಿದೆ.ಹೌದಲ್ಲ! ನಮ್ಮ ಚಿತ್ರರಂಗದವರು ‘ಓಂ’ ಚಿತ್ರ ಗೆದ್ದಾದ ಮೇಲೆ ದಶಕಗಳ ಕಾಲ ಮಚ್ಚು,ಲಾಂಗು ಹಿಡಿದು ಟಿ.ಎಂ.ಸಿಗಟ್ಲೆ ರಕ್ತ ಚೆಲ್ಲಾಡಿ,ಮಧ್ಯೆ ‘ತವರಿನ’ ನೆನಪಾಗಿ ತೊಟ್ಟಿಲು,ಬಟ್ಟಲು,ಬಿಂದಿಗೆ,ಚೊಂಬು ಎಲ್ಲ ತಂದು,ಕಡೆಗೆ ‘ಮುಂಗಾರು ಮಳೆ’ ಬಂದ್ ಮೇಲೆ ಪ್ರವಾಹದ ರೀತಿಯಲ್ಲಿ ಪ್ರೀತಿಯ ಮಳೆ ಸುರಿಸುತ್ತಾ,ಒಂದ್ಸರಿ ತಮಿಳು ಸಿನೆಮ, ಇನ್ನೊಂದ್ಸರಿ ತೆಲುಗು ಸಿನೆಮ,ಟೈಮ್ ಸಿಕ್ಕಾಗ ಮಲಯಾಳಂ,ಹಿಂದಿ ಸಿನೆಮಾಗಳನ್ನ ನೋಡಿ ಆ ರೀಲುಗಳನ್ನ ಇಲ್ಲಿಗ್ ತಗಂಡ್ ಬಂದು,ಅದನ್ನ ಇಲ್ಲಿ ಬಿಚ್ಚಿ ಅದೇ ಕತೆಗೆ ಕನ್ನಡದ ಬಣ್ಣ (ಅದನ್ನು ಸರಿಯಾಗ್ ಬಳಿಯೋದಿಲ್ಲ ಎಷ್ಟೋ ಜನ,ಅದು ಇರ್ಲಿ ಬಿಡಿ) ಬಳಿದು ಮೇಲ್ಗಡೆ ಆ ಸ್ಟಾರು,ಈ ಸ್ಟಾರು ಅಂತ ಹೆಸ್ರಾಕಂಡು ರಿಲೀಸ್ ಮಾಡ್ತಾರೆ.ಜನ ಬಂದ್ ನೋಡ್ತಾರಾ?,ಎಲ್ಲೋ ನಮ್ಮಂತ ಕನ್ನಡ ಚಿತ್ರಗಳನ್ನ ಮಾತ್ರ ನೋಡೋ ಮಂದಿ ವಿಧಿಯಿಲ್ಲದೇ ಬಂದು ನೋಡ್ತಾರೆ.ಉಳಿದವರು ‘ಬನ್ರೋ,ಆ ಸಿನೆಮ ಬಂದೈತೆ ನೋಡನ’ ಅಂದ್ರೆ ‘ಹೇಯ್,ಹೋಗಲೇ ಅದನ್ನ ಆ ಭಾಷೆಯಲ್ಲೇ ನೋಡಿವ್ನಿ.ಯಾವ್ದಾದ್ರು ಇವರೇ ಮಾಡಿರೋ ಕತೆಯಿದ್ರೆ ಹೇಳು ಬತ್ತಿನಿ ನೋಡಕೆ’ ಅಂತಾರೆ. ಮತ್ತಷ್ಟು ಓದು 
28 ವರ್ಷಗಳ ಬಳಿಕ ಬ್ಲೂ ಪಡೆ ಗೆಲ್ಲಬಹುದೇ ವಿಶ್ವಕಪ್!?
– ಶಂಶೀರ್ ಬುಡೋಳಿ
ಜನವರಿ ೧೭. ಫೆಬ್ರವರಿ ೧೯ರಿಂದ ಎಪ್ರಿಲ್ ೨ ರವರೆಗೆ ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳ ಅತಿಥೇಯತ್ವದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ಗಾಗಿ ೧೫ ಮಂದಿ ಸದಸ್ಯರ
ಭಾರತ ತಂಡವನ್ನು ಪ್ರಕಟಿಸಿದ ದಿನ. ಸಮತೋಲನ ರೀತಿಯಲ್ಲಿ ವಿಶ್ವಕಪ್ಗಾಗಿ ತಂಡವನ್ನು ಆಯ್ಕೆ ಮಾಡಿರುವ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಜೊತೆಗೆ ಯಶ್ಪಾಲ್ ಶರ್ಮಾ, ಸುರೇಂದ್ರ ಭಾವೆ, ನರೇಂದ್ರ ಹಿರ್ವಾನಿ ಹಾಗೂ ರಾಜಾ ವೆಂಕಟ್ ಸಮಿತಿಯು ಇಪ್ಪತ್ತೆಂಟು ವರ್ಷಗಳ ಬಳಿಕ ಭಾರತ ತಂಡ ವಿಶ್ವಕಪ್ ಗೆಲ್ಲಬೇಕೆಂಬ ನೆಲೆಯಲ್ಲಿ ತಂಡವನ್ನು ಪ್ರಕಟಿಸಿದಂತಿದೆ.
ಧೋನಿ ನೇತೃತ್ವದ ಭಾರತೀಯ ತಂಡ ಫೇವರೀಟ್ ತಂಡಗಳಲ್ಲೊಂದು ಎಂಬುದು ಸಂಶಯವಿಲ್ಲ. ಟೆಸ್ಟ್ ಅಗ್ರಸ್ಥಾನಿ ಹಾಗೂ ಏಕದಿನ ರ್ಯಾಂಕಿಂಗ್ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ ಕ್ರಿಕೆಟ್ ತಂಡ ೨೦೧೧ರ ವಿಶ್ವಕಪ್ ಕ್ರಿಕೆಟ್ನಲ್ಲಿ ವಿಶ್ವಕಪ್ ಗೆಲ್ಲುವುದು ಅನಿವಾರ್ಯವೆಂದು ಗುರಿ ಇಟ್ಟುಕೊಂಡರೆ ಫೈನಲ್ ಹಾದಿಗೇರಬಹುದು. ತಂಡದ ಆಯ್ಕೆ ಸಮತೋಲನವಾಗಿದೆ. ಈ ಜೊತೆಗೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ನ್ಯೂಝಿಲೆಂಡ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡುತ್ತದೆಯೆಂಬುದು ಕೌತುಕವಾಗಿದೆ. ಯಾಕೆಂದರೆ ಇವರೆಗೆ ತವರಿನಲ್ಲಿ ನಡೆದ ಸರಣಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭಾರತ, ಈ ಬಾರಿಯ ವಿಶ್ವಕಪ್, ತವರಿನಲ್ಲಿ ನಡೆಯುವುದರಿಂದ್ದ ವಿಶ್ವಕಪ್ ಜಯಿಸುವ ಫೇವರೀಟ್ ತಂಡಗಳಲ್ಲೊಂದಾಗಿದೆ. ಗ್ರೂಪ್ ಬಿಯಲ್ಲಿ ಸ್ಥಾನ ಪಡೆದಿರುವ ಭಾರತದ ಫೈನಲ್ ಹಾದಿ ಸುಗಮವಾಗಿದೆ ಎಂದು ಹೇಳಬಹುದು. ಯಾಕೆಂದರೆ ಗ್ರೂಪ್ ಬಿಯಲ್ಲಿ ಭಾರತದ ಜೊತೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ಇಂಡೀಸ್, ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಹಾಲೆಂಡ್ ತಂಡಗಳು ಸ್ಥಾನ ಪಡೆದಿವೆ.
ಕರ್ನಾಟಕವೂ ಸಹ ಭಾರತದ ಭಾಗವಾಗಿರಲಿಲ್ಲ!
– ರಾಕೇಶ್ ಶೆಟ್ಟಿ
ಅಲ್ಲಿ ರಾಷ್ಟ್ರ ಧ್ವಜ ಹಾರುತ್ತದೋ ಇಲ್ವೋ? ಹಾರಿದರೆ ಏನಾಗುತ್ತೆ? ಅನ್ನೋದಕ್ಕೆಲ್ಲ ಬಹುಷಃ ಜನವರಿ ೨೬ರ ಇಂದಿನ ದಿನ ಉತ್ತರ ಸಿಗಲಿದೆ.Fine ನಾನೀಗ ಅರುಂಧತಿ ರಾಯ್ ಅವರ ಹೇಳಿಕೆಯ ಸುತ್ತ ಮಾತಾಡ ಹೊರಟೆ.
‘ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ’ ಅಂತೇಳಿದ ಸುದ್ದಿ ಜೀವಿ ಅರುಂಧತಿ ರಾಯ್ ಅವರಿಗೆ ‘ಕರ್ನಾಟಕವೂ ಸಹ ಭಾರತದ ಭಾಗವಾಗಿರಲಿಲ್ಲ’, ಹಾಗೆ ಇನ್ನ ಸ್ವಲ್ಪ ಕೆದಕುತ್ತ ಹಿಂದೆ ಹೋದರೆ ಖುದ್ದು ‘ಭಾರತವೂ ಸಹ ಭಾರತದ ಭಾಗವಾಗಿರಲಿಲ್ಲ’ ಅನ್ನೋದು ಗೊತ್ತಿಲ್ಲ ಅನ್ನಿಸುತ್ತೆ.
ಅಸಲಿಗೆ ಉಪಖಂಡವನ್ನ ಆಡಳಿತದ ಕಾರಣಕ್ಕಾಗಿ ‘ಭಾರತ’ ಅಂತ ಹಿಡಿದಿಟ್ಟವರು ಬ್ರಿಟಿಷರು.೪೭ರಲ್ಲಿ ಅವರು ಸ್ವಾತಂತ್ರ್ಯ ಕೊಟ್ಟು ಹೊರಡುವಾಗ ಇಲ್ಲಿ ೫೫೦ಕ್ಕು ಹೆಚ್ಚು ಸಣ್ಣ ಪುಟ್ಟ ರಾಜ ಸಂಸ್ಥಾನಗಳಿದ್ದವು. ಅವೆಲ್ಲ ಪಟೇಲರ ಮಂತ್ರದಂಡಕ್ಕೆ ತಲೆಬಾಗಿ ಭಾರತದ ಒಕ್ಕೊಟವನ್ನ ಸೇರಿಕೊಂಡವು.
ಕನ್ನಡ ಸಾಹಿತ್ಯ ಸಮ್ಮೇಳನ – ಬಂತು ನಮ್ ಬೆಂಗಳೂರಿಗೆ !
— ವಸಂತ್ ಶೆಟ್ಟಿ
41 ವರ್ಷಗಳ ದೊಡ್ಡ ಅಂತರದ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ರಾಜಧಾನಿ ಬೆಂಗಳೂರಿಗೆ ಬರುತ್ತಿದೆ. 1970ರ ಬೆಂಗಳೂರಿಗೂ, 2011ರ ಬೆಂಗಳೂರಿಗೂ ಆಕಾಶ-ಭೂಮಿಗಿರುವಷ್ಟು
ಅಂತರವಿದೆ. ಬೆಂಗಳೂರಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳಲ್ಲಿ ಗಣನೀಯವಾದ ಬದಲಾವಣೆಯಾಗಿದೆ. ಜಾಗತೀಕರಣದ ನಂತರ ಶುರುವಾದ ಐಟಿ ಕ್ರಾಂತಿ, ತದನಂತರ ಕೋಡಿ ಬಿದ್ದ ಕೆರೆಯಂತೆ ಹರಿದು ಬಂದ ವಲಸಿಗರ ಅಬ್ಬರದಲ್ಲಿ ಬೆಂಗಳೂರು ಖಂಡಿತ ಬದಲಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿಗೆ ಬರುತ್ತಿರುವ ಸಮ್ಮೇಳನ ಖಂಡಿತವಾಗಿಯೂ ಪ್ರಮುಖವಾದದ್ದು, ಅಲ್ಲಿ ಆಗಬೇಕಾದ ಚರ್ಚೆ, ನಡೆಯಬೇಕಾದ ವಿಚಾರ-ವಿಮರ್ಷೆ, ತೆಗೆದುಕೊಳ್ಳಬೇಕಾದ ನಿಲುವು ಎಲ್ಲವೂ ಬೆಂಗಳೂರು, ಕರ್ನಾಟಕದ ಮುಂದಿನ ದಾರಿಗೆ ದಿಕ್ಸೂಚಿಯಾಗಬಲ್ಲಂತದ್ದು ಅನ್ನುವುದು ನನ್ನ ಅನಿಸಿಕೆ.
ಇದೆಲ್ಲ ಸರಿ, ಆದ್ರೆ ಬೆಂಗಳೂರಲ್ಲಿ ಸಾಹಿತ್ಯ ಸಮ್ಮೇಳನ ಆದ್ರೆ ಅದಕ್ಯಾಕೆ ಅಷ್ಟು ಮಹತ್ವ ಅನ್ನಿಸಬಹುದು. ಬೆಂಗಳೂರು ಅನ್ನುವುದು ಕರ್ನಾಟಕದ ಬೇರೆ ಊರುಗಳಂತಲ್ಲ. ಇಡೀ ಕರ್ನಾಟಕದ, ಕನ್ನಡಿಗರ ಕಲಿಕೆ, ದುಡಿಮೆ, ಬದುಕು ರೂಪಿಸಬೇಕಾದ ವ್ಯವಸ್ಥೆಯಾದ ಸರ್ಕಾರ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಸಾಂಸ್ಕೃತಿಕ ಗುರುತುಗಳಲ್ಲೊಂದಾದ ಕನ್ನಡ ಚಿತ್ರೋದ್ಯಮ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಕಳೆದ 60 ವರ್ಷಗಳ ಇತಿಹಾಸದಲ್ಲಿ ರೂಪುಗೊಂಡ ಹತ್ತು ಹಲವು ನಾಡ ಪರ, ಭಾಷೆ ಪರ ಚಳುವಳಿಗಳಿಗೆ ಹೊಸ ದಿಕ್ಕು ತೋರಿಸಿದ, ಜನಾಭಿಪ್ರಾಯ ರೂಪಿಸುವಲ್ಲಿ ಕೆಲಸ ಮಾಡಿದ ಹತ್ತು ಹಲವು ಕನ್ನಡ ಚಿಂತಕರು, ಸಂಘಟನೆಗಳಿಗೂ ಬೆಂಗಳೂರು ಕೇಂದ್ರ ಸ್ಥಾನ. ಕರ್ನಾಟಕದ ರಾಜಕೀಯ, ಆಡಳಿತ ವ್ಯವಸ್ಥೆಯನ್ನು ಹದ್ದಿನ ಕಣ್ಣಿನಿಂದ ಬೆನ್ನು ಬಿಡದೇ ಕಾಯುತ್ತಿರುವ ಸುದ್ದಿ, ದೃಶ್ಯ ಮಾಧ್ಯಮಗಳಿಗೂ ಬೆಂಗಳೂರೇ ಕೇಂದ್ರ ಸ್ಥಾನ. ಇವೆಲ್ಲದಕ್ಕೂ ಮಿಗಿಲಾಗಿ ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಬಹು ಪಾಲು ನಿಯಂತ್ರಿಸುತ್ತಿರುವುದು ಬೆಂಗಳೂರೆಂಬ ಕೆಂಪೇಗೌಡರ ಊರು. ಕರ್ನಾಟಕದ ಪಾಲಿನ ಹೆಚ್ಚಿನ ಎಲ್ಲ stakeholders ಇರೋ ಬೆಂಗಳೂರಲ್ಲಿ, ಇವರೆಲ್ಲರ ನಡುವೆ ನಡಿತಿರೋ ಈ ಸಮ್ಮೇಳನ ನಿಜಕ್ಕೂ ಮಹತ್ವದ್ದೇ. ಮತ್ತಷ್ಟು ಓದು

ರಾಜ್ಯಪಾಲರು…ಅತಿರೇಕ ಹಾಗೂ ಯಡಿಯೂರಪ್ಪ…..
‘ ನಂದನವನ’
ಭ್ರಷ್ಟಚಾರ, ಸ್ವಜನಪಕ್ಷಪಾತ, ಅಧಿಕಾರ ದುರಪಯೋಗ ಕಾರಣಗಳಿಂದಾಗಿ ಮುಖ್ಯಮಂತ್ರಿ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲ ಹನ್ಸ್ರಾಜ್ ಭಾರದ್ವಾಜ್ ಅನುಮತಿ ನೀಡಿದ್ದಾರೆ. ಕಟ್ಟರ್ ಕಾರ್ಯಕರ್ತರ ಪಕ್ಷವಾದ ಬಿಜೆಪಿ, ಸಂಘಪರಿವಾರಿಗಳು ನಾಚುವ ಬದಲು ರಾಜ್ಯಪಾಲರ ವಿರುದ್ಧವೇ ತೊಡೆತಟ್ಟಿ ನಿಂತಿರುವುದು ನಾಚಿಕೇಡು. ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಕಾನೂನಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಿಂದ ಹಿಡಿದು ಮುಖ್ಯಮಂತ್ರಿಯವರಿಗೆ ಒಂದೇ ನ್ಯಾಯ ಎಂಬ ಘೋಷ ವ್ಯಾಕ್ಯವನ್ನು ವಕೀಲರಾದ ಸಿರಾಜ್ ಭಾಷಾ, ರಾಮಚಂದ್ರ ಸಿಎಂ ವಿರುದ್ದ ಮೊಕದ್ದಮೆಗೆ ಅವಕಾಶ ನೀಡುವಂತೆ ರಾಜ್ಯಪಾಲರ ಅನುಮತಿ ಕೋರುವ ಮೂಲಕ ಎತ್ತಿ ಹಿಡಿದಿದ್ದಾರೆ.
ಮೊದಲಿನಿಂದಲೂ ರಾಜ್ಯದಲ್ಲಿ ಒಂದು ರೀತಿ ವಿರೋಧ ಪಕ್ಷದಂತೆಯೇ ವತರ್ಿಸಿಕೊಂಡು ಬಂದ ರಾಜ್ಯಪಾಲರು ಸಿಎಂ ವಿರುದ್ಧ ಮೊಕದ್ದಮೆ ಹೂಡಲು ಖಂಡಿತಾ ಅನುಮತಿ ಕೊಟ್ಟೆ ಕೊಡುತ್ತಾರೆ ಎಂಬುದರಲ್ಲಿ ಎರಡು ಮಾತು ಇರಲಿಲ್ಲ. ರಾಜ್ಯಪಾಲರು ಈ ಹಿಂದಿನ ಕೆಲವು ಪ್ರಕರಣಗಳಲ್ಲಿ ಸಿಎಂ ಹಾಗೂ ಬಿಜೆಪಿ ಸಕರ್ಾರದ ವಿರುದ್ಧದ ತೋರಿದ ಅಸಹಕಾರ ನಿಜಕ್ಕೂ ಅವರ ಹುದ್ದೆಗೆ ಘನತೆ ತರುವಂಥದ್ದಲ್ಲ. ಆದರೂ ಭ್ರಷ್ಟಾಚಾರದ ವಿಷಯದಲ್ಲಿ ಅವರು ತೆಗೆದುಕೊಂಡಿರುವ ನಿಧರ್ಾರಕ್ಕೆ ಹ್ಯಾಸ್ಟ್ ಅಫ್ ಹೇಳಲೇಬೇಕು.
ರಾಜಕೀಯವಾಗಿ ರಾಜ್ಯಪಾಲರ ಕ್ರಮ ದುರುದ್ದೇಶಪೂರಿತ ವಿರಬಹುದು. ಆದರೆ ಸಾಂವಿಧಾನಿಕವಾಗಿ, ಈ ನೆಲದ ಕಾನೂನು, ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಯು ರಾಜ್ಯಪಾಲರ ಈ ನಿರ್ಣಯವನ್ನು ಗೌರವಿಸುವಂಥದೇ ಆಗಿದೆ. ಮುಖ್ಯಮಂತ್ರಿ ವಿರುದ್ಧದದ ಭ್ರಷ್ಟಾಚಾರದ ಪ್ರಕರಣಗಳು ಪುಂಖಾನುಫುಂಖವಾಗಿ ಮಾಧ್ಯಮಗಳಲ್ಲಿ ಈ ಹಿಂದೆಯೇ ವರದಿಯಾಗಿದ್ದವು. ಒಮ್ಮೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೆ ಕಾಲಿಟ್ಟರೂ ಅಲ್ಲಿಯ ಸಾಮಾನ್ಯ ಜನರು ಕೂಡ ಸಿಎಂ ಅವರ ಪ್ರವರ ಹೇಳುತ್ತಾರೆ. ಅಷ್ಟೂ ಅಲ್ಲದೇ ರಾಜ್ಯಪಾಲರಿಗೆ ಆ ಇಬ್ಬರು ವಕೀಲರು ಕೇವಲ ಅನುಮತಿ ಕೋರಿ ಅಜರ್ಿ ಬರೆದಿಲ್ಲ, ಬದಲಿಗೆ 2000 ಸಾವಿರ ಪುಟಗಳಷ್ಟು ದಾಖಲೆ, ಇನ್ನೂರು ಪುಟಗಳ ವರದಿಯನ್ನು ನೀಡಿದ್ದಾರೆ.
ಇವನು ಇನಿಯನಲ್ಲ… ತುಂಬ ಸನಿಹ ಬಂದಿಹನಲ್ಲ…
ತನಗೆ ಹೆಂಡತಿಯಾಗುವವಳು ಹೇಗಿರಬೇಕು ಎನ್ನುವ ಕುರಿತು ಪ್ರಾಚೀನ ಗಂಡು ಹೀಗೆ ಹೇಳಿದ್ದಾನೆ:
ಕಾರ್ಯೇಶು ದಾಸಿ, ಕರುಣೇಶು ಮಂತ್ರಿ.
ರೂಪೇಶು ಲಕ್ಷ್ಮಿ, ಕ್ಷಮಯಾ ಧರಿತ್ರಿ.
ಬೋಜ್ಯೇಶು ಮಾತಾ, ಶಯನೇಶು ರಂಭ,
ಷಡ್ಗುಣ್ಯ ಭಾರ್ಯ, ಕುಲಮುದ್ಧರಿತ್ರಿ.
ಹೆಂಡತಿಯಾದವಳು ಕುಟುಂಬದ ಪರಿಸ್ಥಿತಿ, ಗಂಡನ ಆವಶ್ಯಕತೆಗೆ ಅನುಗುಣವಾಗಿ ದಾಸಿ,ಮಂತ್ರಿ, ತಾಯಿ, ವೇಶ್ಯೆ ಮೊದಲಾದ ಪಾತ್ರಗಳನ್ನು ವಹಿಸಬೇಕು. ಪ್ರಾಚೀನ ಕಾಲದ ಕುಟುಂಬ ವ್ಯವಸ್ಥೆ ಹಾಗೂ ದಾಂಪತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಉಕ್ತಿಯನ್ನು ಓದಿಕೊಂಡರೆ ನಮಗೆ ಈ ಗಂಡಿನ ಬೇಡಿಕೆಗಳು ಕೊಂಚ ಆಸಕ್ತಿಕರವಾದವುಗಳೇ ಎಂದೆನ್ನಿಸುತ್ತದೆ.
ಹೆಣ್ಣನ್ನು ತೊತ್ತು, ತನ್ನ ಸಂಗ್ರಹದಲ್ಲಿರುವ ಬೆಲೆಬಾಳುವ, ಅಂತಸ್ಥನ್ನು ಪ್ರತಿಬಿಂಬಿಸುವ ವಸ್ತುಗಳಲ್ಲಿ ಒಂದು ಎಂದು ಕಾಣುವ ಅನಾಗರೀಕ ವರ್ತನೆಯಿಂದ ಈ ಗಂಡಸು ತುಂಬಾ ಮುಂದೆ ಬಂದಿದ್ದಾನೆ ಎನ್ನುವುದು ಕಾಣುತ್ತದೆ. ಈತನಿಗೆ ತಾನು ಮದುವೆಯಾದಾಕೆ ಕೇವಲ ಒಂದು ಪಶುವಿನ ಹಾಗೆ ತನ್ನ ನೆರಳನ್ನು ನೆಚ್ಚಿಕೊಂಡು ಬದುಕುವುದು ಬೇಕಿಲ್ಲ. ಹಾಗಂತ ಆಕೆಯನ್ನು ತನ್ನ ಸಮಾನಳೆಂದು ಪುರಸ್ಕರಿಸುವುದೂ ಇಲ್ಲ. ತನ್ನ ಕೆಲಸ ಕಾರ್ಯಗಳನ್ನು ದಾಸಿಯ ಹಾಗೆ ಮಾಡಬೇಕು ಎನ್ನುವುದು ಆತನ ಮೊದಲ ಬೇಡಿಕೆ. ಅನಂತರ ತನ್ನ ಬುದ್ಧಿವಂತಿಕೆಯಿಂದ ಆಕೆ ತನ್ನ ಜೀವನ ನಿರ್ವಹಣೆಗೆ ನೆರವಾಗಬೇಕು ಎಂದು ಬಯಸುತ್ತಾನೆ. ರೂಪವಿದ್ದರೆ ಯಾರಿಗೆ ತಾನೆ ಸಂತೋಷವಾಗುವುದಿಲ್ಲ? ತನ್ನ ತಪ್ಪುಗಳನ್ನೆಲ್ಲ ಕ್ಷಮಿಸಿ ಪೊರೆಯುವ ಭೂಮಿಯಾಗಿರಲಿ ಎಂದು ಅಪೇಕ್ಷಿಸುವುದರಲ್ಲಿ ಗಂಡು ಬದಲಾಗಿಯೇ ಇಲ್ಲ. ತಾಯಿಯಂತೆ ಪುಷ್ಕಳವಾಗಿ ಅಡುಗೆ ಮಾಡಿ ತನ್ನ ಹಸಿವನ್ನು ಇಂಗಿಸಬೇಕು. ದೈಹಿಕ ಕಾಮನೆಯನ್ನು ಸಹ ತೃಪ್ತಿ ಪಡಿಸಬೇಕು. ಇಷ್ಟೆಲ್ಲಾ ಗುಣಗಳು ಹೆಂಡತಿಯಲ್ಲಿದ್ದರೆ ತನ್ನ ಕುಲ ಉದ್ಧಾರವಾಗುವುದು ಎನ್ನುವುದು ಪ್ರಾಚೀನ ಗಂಡಿನ ನಂಬಿಕೆ.
25ರ ಲಹರಿಯಲ್ಲಿ
ಒಂದಲ್ಲ, ಎರಡಲ್ಲ, ಹತ್ತಾರು ಬಾರಿ ಲೆಕ್ಕ ಮಾಡಿ ನೋಡಿದೆ. 25ಕ್ಕಿಂತ ಕಡಿಮೆಯಾಗುವುದೇ ಇಲ್ಲ. ಮತ್ತೆ ಮತ್ತೆ ಲೆಕ್ಕ ಮಾಡಿ ಅದೇ ಉತ್ತರ ಬಂದಾಗ ಒಂದಿಷ್ಟು ಖುಷಿ ಮತ್ತು ದಿಗಿಲು ಜೊತೆಯಾಯಿತು.
ಮುಂಜಾನೆ ಎದ್ದಾಗಲೇ 4 ಮೆಸೆಜ್ಗಳು ಬರ್ತ್ಡೇ ವಿಷ್ ಮಾಡಲು ಕಾಯುತ್ತಿದ್ದವು. ಸ್ವಲ್ಪ ಸಮಯವಾದಾಗ ಮತ್ತೆ ಒಬ್ಬರು ಮೆಸೆಜ್ ಮಾಡಿದರು. ಸ್ವಲ್ಪ ಹೊತ್ತಾದಾಗ ಗೆಳೆಯ ಸೂರ್ಯ ಕಾಲ್ ಮಾಡಿ ವಿಷ್ ಮಾಡಿದ. ಮೊಬೈಲ್ನ ಬ್ರೌಸರ್ ಆನ್ ಮಾಡಿ ನೋಡಿದಾಗ ಸುಮಾರು ಬರ್ತ್ಡೇ ವಿಷ್ಗಳು ಬಂದಿದ್ದವು. ಆಫೀಸ್ಗೆ ಹೋಗಿ ನೋಡಿದಾಗ ಫೇಸ್ಬುಕ್ನಲ್ಲಿ 19 ಜನ, ಆರ್ಕುಟ್ನಲ್ಲಿ 32 ಜನ ಬರ್ತ್ಡೇ ವಿಷ್ ಮಾಡಿ ನನಗೆ 25 ವರ್ಷ ಮುಗೀತು ಅಂತ ಕನ್ಫರ್ಮ್ ಮಾಡಿದ್ರು. ಅದರಲ್ಲಿ ನನ್ನ ಆತ್ಮೀಯ ಸ್ನೇಹಿತರು, ನನಗಿಂತ ಹಿರಿಯರು, ಕಿರಿಯರು, ಜೀವನದಲ್ಲಿ ಬಹಳಷ್ಟು ಸಾಧಿಸಿದವರೂ ಎಲ್ಲರೂ ಇದ್ದರು. ಯಾಕೋ ತುಂಬಾ ಖುಷಿಯಾಗಿಬಿಟ್ಟಿತು. ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಇಲ್ಲಿ ನೀನು ಇರುತ್ತಿದ್ದರೆ ಪಾಯಸ ಮಾಡಬಹುದಿತ್ತು ಅಂತ ಹೇಳಿ ಅವಳೂ ಕನ್ಫರ್ಮ್ ಮಾಡಿ ಬಿಟ್ಟಳು. ಅಣ್ಣನಿಗೆ ಕಾಲ್ ಮಾಡಲಿಲ್ಲ. ಯಾಕೆಂದರೆ ಕಳೆದ 5ರಂದು ಆತನ ಬರ್ತ್ಡೇ ಮುಗಿದಿತ್ತು. ಆತನಿಗೆ ವಿಷ್ ಮಾಡಲು ಮರೆತಿದ್ದೆ.
ಆಫೀಸ್ನಲ್ಲಿ ಕೀಬೋರ್ಡ್ನ ಮೇಲೆ ನನಗೊಂದು ವಿಶಿಷ್ಠ ಗಿಫ್ಟ್ ಕಾದಿತ್ತು. ಚಂದದ ದೊಡ್ಡ ಪ್ಲಾಸ್ಟಿಕ್ ಕವರ್, ಅದರೊಳಗೆ ಎ4 ಸೈಜ್ ಕಾಗದದಲ್ಲಿ ಹ್ಯಾಪಿಬರ್ತ್ ಡೇ ಅಂತ ಪ್ರಿಂಟ್, ಒಳಗಡೆ ಅಚ್ಚರಿಯ ಉಡುಗರೆಗಳು. ಅಂದ್ರೆ ಇಂಕ್ ಖಾಲಿಯಾಗಿರುವ ಪೆನ್ನು ಇತ್ಯಾದಿ. ಅವರು ಅಂತಹ ವಿಶಿಷ್ಠ ಗಿಫ್ಟ್ ನೀಡಲು ಕಾರಣ ಅವರ ಬರ್ತ್ಡೇಗೆ ನಾನೂ ಹಾಗೇ ಮಾಡಿದ್ದೆ. ಅಂದ್ರೆ ಪುಟ್ಟ ಕಾಗದದಲ್ಲಿ ಹ್ಯಾಪಿ ಬರ್ತ್ಡೇ ಅಂತ ಬರೆದು `ನಿನ್ನ ಜನ್ಮದಲ್ಲಿ ಇಂತಹ ಗಿಫ್ಟ್ ಯಾರಾದರೂ ಕೊಟ್ಟಿದ್ದಾರಾ? ಅಂತ ಕೊಚ್ಚಿಕೊಂಡಿದ್ದೆ. ಅವರು ಅಷ್ಟೇ ನನ್ನ ಜೀವನದಲ್ಲಿ ನನಗೆ ಯಾರೂ ನೀಡದಂತಹ ವಿಶಿಷ್ಠ ಗಿಫ್ಟ್ ನೀಡಿ ನನ್ನನ್ನು ಆಶ್ಚರ್ಯಗೊಳಿಸಿದ್ದರು. ಮತ್ತಷ್ಟು ಓದು 









