ವಿಷಯದ ವಿವರಗಳಿಗೆ ದಾಟಿರಿ

Archive for

9
ಫೆಬ್ರ

ಆಧುನಿಕತೆಯಲ್ಲಿ ಮರೆಯಾಯ್ತೆ ಮಾನವೀಯತೆ ?

ಚಿತ್ರ

೨ನೇ ಫೆಬ್ರವರಿ ೨೦೧೧ರಂದು ಎಂದಿನಂತೆ ಕಚೇರಿಯಿಂದ ಸರಿಯಾಗಿ ಸಂಜೆ ೬ ಗಂಟೆಗೆ ಮನೆಗೆ ಹೊರಟೆ. ಮೆಟ್ಟಿಲಿಳಿದು, ನನ್ನ ನಾಲ್ಕುಚಕ್ರ ವಾಹನದ ಕಡೆ ಬಂದು ಕಾರ್ ಗ್ಲಾಸ್ಗೆ ನೀರು ಹಾಕ್ತಿದ್ದೆ, ಅಷ್ಟೊತ್ತಿಗೆ ಅಲ್ಲೆ ನಿಂತಿದ್ದ ಒಬ್ಬ ಸೆಕ್ಯುರಿಟಿ, ಮೇಡಂ ಚಕ್ರದ ಏರ್ ಇಳ್ದಿದೆ, ನೋಡಿ ಅಂದ. ನೋಡ್ತೀನಿ, ಏರ್ ಇಳ್ದಿದೆ, ಪಂಚರ್ ಆಗಿರೋಹಾಗಿದೆ, ಏನಪ್ಪ ಮಾಡೋದು ಅಂತ ಯೋಚಿಸ್ತಾ, ನನ್ನ ಸಹುದ್ಯೋಗಿಯೊಬ್ಬರನ್ನ ಕರೆದು, ತೋರಿಸ್ದೆ. ಅವರು ಮೇಡಂ ಇಲ್ಲಿ ಸದ್ಯಕ್ಕೆ ಯಾರು ಸಿಕ್ಕಲ್ಲ, ಸೆಕ್ಯುರಿಟಿಯವರಿಗೆ ತಿಳಿಸಿ ಇಲ್ಲೇ ಪಾರ್ಕ್ ಮಾಡಿಹೋಗಿ, ಬೆಳಿಗ್ಗೆ ಬಂದು ಸರಿ ಮಾಡ್ಸಿ ಅಂದ್ರು. ಸರಿ ಅಂತ ಮನೆಗೆ ಬಸ್ನಲ್ಲೇ ಹೋಗೋಣ (ಆಟೋಗೆ ಯಾಕೆ ಅಷ್ಟೊಂದು ಹಣ ಕೊಡೋದು) ಅಂತ ಶೇಷಾದ್ರಿಪುರಂ ಬಸ್ ನಿಲ್ದಾಣದ ಹತ್ತಿರ ಬಂದು ಶೇಷಾದ್ರಿಪುರಂ ನಿಂದ ಸೆಂಟ್ರಲ್ ಮಾರ್ಗವಾಗಿ ಮಲ್ಲೇಶ್ವರ, ಮತ್ತೀಕೆರೆ, ಬಿಇಎಲ್ ವೃತ್ತಕ್ಕೆ ಹೋಗೋ ಬಸ್ ಹತ್ತಿದೆ (೨೭೩ಸಿ). 
9
ಫೆಬ್ರ

ರಂಗಭೂಮಿಯ ಹಿರಿಯಣ್ಣ ಕುಸ್ತಿಯ ಕಲಿ ಗುಡಿಗೇರಿ ಬಸವರಾಜರಿಗೊಂದು ನಮನ

ನಿಲುಮೆ ತಂಡ
ಹೌದು !! ಕನ್ನಡದ ರಂಗಭೂಮಿಯ ಪಾಲಿಗೆ ದಿನಾಂಕ ೮ ನೇ ಫೆಬ್ರವರಿ ೨೦೧೧ ಮರೆಯಲಾಗದ ಮಾಣಿಕ್ಯವೊಂದು ಕಳೆದುಕೊಂಡ ದಿನ. ಗುಡಿಗೇರಿ ಧಾರವಾಡದಲ್ಲಿನ  ಚಿಕ್ಕ ಹಳ್ಳಿಯಲ್ಲಿ ಚನ್ನಪ್ಪ ಗೌರಮ್ಮನವರ ಸುಪುತ್ರ. ವಿದ್ಯಾಭ್ಯಾಸ ೪ನೇ ತರಗತಿಯವರೆಗಾದರು, ಬಸವರಾಜರ ಬಾಲ್ಯ ಸುಖಪ್ರದವಾಗಿರಲಿಲ್ಲ. ೨ರೂಪಾಯಿಗೆ ಎಮ್ಮೆ ಕಾಯುವ ಕಾಯಕದಲ್ಲಿದ್ದವರು, ಗರಡಿಮನೆಯ ಅವರ ಆಸಕ್ತಿಗೆ ಗುಡಿಗೆರೆಯ ಭೂಪಾಲ ಬಸ್ತಿಯವರ ಸಹಕಾರದಿಂದ ಕೊಲ್ಲಾಪುರದಲ್ಲಿ ಕುಸ್ತಿ ಕಲಿತರು, ದಾವಣಗೆರೆಯಲ್ಲಿ ಟಿಪ್ಪು ಸುಲ್ತಾನ್ ನಾಟಕದ ಪ್ರೇರಣೆಯಿಂದ ತಮ್ಮ ಹದಿನಾಲ್ಕು ವರ್ಷದಲ್ಲೇ “ನಾರಿ ಸಾಹಸ” ನಾಟಕದಲ್ಲಿ ಮಂತ್ರಿ ಪಾತ್ರವನ್ನು ಮೊದಲ ಬಾರಿಗೆ ನಿರ್ವಹಿಸಿದರು, ರಂಗವೇದಿಕೆಯಲ್ಲಿ ಪಾತ್ರ ಹಾಕಿ ನಿಂತರೆ ಅವರ ಪದಪ್ರಾಸಕ್ಕೆ ತಲೆದೂಗದವರೇ ಇಲ್ಲ. ಉತ್ತರ ಕರ್ನಾಟಕದ ಮಂದಿಗೆ ಗುಡಿಗೇರಿ ಬಸವರಾಜರ ನಾಟಕವಿದೆಯೆಂದಾದರೆ ಅದೊಂದು ಹಬ್ಬದ ಸಡಗರ.
9
ಫೆಬ್ರ

ಮದರ್ ತೆರೇಸಾ ಸೋಗುಗಾತಿ ಎಂದವನು ಓಶೋ!!!

ಹೇಮಾ ಪವಾರ್, ಬೆಂಗಳೂರು

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು. ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:
ಮತ್ತಷ್ಟು ಓದು »