ವಿಷಯದ ವಿವರಗಳಿಗೆ ದಾಟಿರಿ

Archive for

21
ಫೆಬ್ರ

ಕಾಂಗ್ರೆಸ್ ಸಂಸದ ಭಾರತಕ್ಕೆ ಸೇರಿದವನಲ್ಲವೇ?

ಮಹೇಶ ಪ್ರಸಾದ ನೀರ್ಕಜೆ

ಅರುಣಾಚಲ ಪ್ರದೇಶ ಪ್ರವಾಸದಲ್ಲಿರುವ ಬಾಬಾ ರಾಮ್ ದೇವ್ ಸಮಾವೇಶಕ್ಕೆ ಬಂದಿದ್ದ ಅಲ್ಲಿನ ಕಾಂಗ್ರೆಸ್ ಸಂಸದ ನಿನಾಂಗ್ ಎರಿಂಗ್ ಬಾಬಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂಬುದು ಇತ್ತೀಚಿನ ಸುದ್ದಿ. “ಯು ಬ್ಲಡಿ ಇಂಡಿಯನ್”, “ಸಾಲೆ ಕುತ್ತೇ, ಮೈಕ್ ತೋಡ್ ದೂಂಗಾ, ಸ್ಟೇಜ್ ಫೋಡ್ ದೂಂಗಾ, ಯೋಗಾ ಕರ್ನೇ ಆಯೀ ಹೇ, ಯೋಗಾ‌ ಕರ್. ಕರಪ್ಷನ್ ಕೆ ಬಾರೇ ಮೇ ಬೋಲೇಗಾ ತೋ ಮಾರ್ ಡಾಲೂಗಾ!” ಇತ್ಯಾದಿ. ಈ ಬಗ್ಗೆ ಸಾಕಷ್ಟು ವಿವರಗಳು ಸಿಗುತ್ತಿವೆ ಅಂತರ್ಜಾಲದಲ್ಲಿ. ನಮ್ಮ ಟಿವಿ ಮಾಧ್ಯಮಗಳು ಭಾರತ ಬಾಂಗ್ಲಾದೇಶ ಕ್ರಿಕೆಟ್ ಪಂದ್ಯದಲ್ಲಿ ಹೇಗೆ ಭಾರತ ಬಾಂಗ್ಲಾದೇಶದ ಮೇಲೆ ಸೇಡು ತೀರಿಸಿಕೊಂಡಿತು ಎಂದು ವಿಮರ್ಷಿಸುವುದರಲ್ಲಿ ಬ್ಯುಸಿಯಾಗಿದ್ದವು. ಅವುಗಳಿಗೆ ಹೇಗೆ ಈಶಾನ್ಯ ಭಾರತದ ಮಂದಿ ಹೇಗೆ ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಬೇಕಿಲ್ಲ. ಇರಲಿ. ಈಗ ಪ್ರಶ್ನೆಯೇನೆಂದರೆ ಕಾಂಗ್ರೆಸ್ ಸಂಸದ ಬಾಬಾರನ್ನು “ಯೂ ಬ್ಲಡಿ ಇಂಡಿಯನ್”ಅನ್ನಬೇಕಿದ್ದರೆ ಆತ ಇಂಡಿಯನ್ ಅಲ್ಲವೇ? ಎಲ್ಲಿಯವನು ಆತ? ಚೈನಾದವನೇ? ಅಥವಾ ಬೋಡೋ ದೇಶದವನೇ? ಅಥವಾ ಬೇರೆ ಪಾಶ್ಚಿಮಾತ್ಯ ದೇಶದವನೇ?
ಮತ್ತಷ್ಟು ಓದು »

21
ಫೆಬ್ರ

ಯಾರಿಗೂ ಅರ್ಥವಾಗದ ಬಾಪೂ …!

ಶ್ರೀಹರ್ಷ ಸಾಲಿಮಠ

ಇದನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವತಃ ನನಗೆ ಹೇಳಿದ್ದು. ಈ ಘಟನೆ ನಡೆಯುವಾಗ ಶಾಸ್ತ್ರಿಗಳು ಖುದ್ದು ಎದುರಿಗೇ ಇದ್ದರಂತೆ.
ಸ್ವಾತಂತ್ರ್ಯದ ಸಮಯ. ಭಾರತದ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸಲು ನಡೆದ ಶಾಸನ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನೆಹರೂ ಸರ್ದಾರ್ ಪಟೇಲರ ಎದುರಿಗೆ ೧೧-೧ ಮತಗಳ ಅಂತರದಿಂದ ಸೋತಿದ್ದರು. ಸ್ವಯಂ ನೆಹರೂ ಬಿಟ್ಟು ಬೇರೆ ಯಾರೂ ನೆಹರೂರವರಿಗೆ ಮತ ಹಾಕಿರಲಿಲ್ಲ!
ಇದಾದ ಮರುದಿನ ನೆಹರೂ ಗಾಂಧೀಜಿಯ ಬಳಿ ಬಂದು ನಿಮ್ಮ ಪ್ರಭಾವ ಬಳಸಿ ತಮ್ಮನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಕೇಳಿಕೊಂಡರು. ಅದಕ್ಕೆ ಗಾಂಧೀಜಿ “you are independent now. think independently. take independent decisions. why do you need my help?” ಎಂದರು. ನೆಹರೂಗೆ ನಿರಾಶೆಯಾಯಿತು. ವಾಪಸು ಹೊರಡಲು ಅನುವಾದರು. ಎರಡು ಹೆಜ್ಜೆ ಬಾಗಿಲ ದಿಕ್ಕಿನಲ್ಲಿ ನಡೆದು ಗಾಂಧೀಜಿಯ ತಿರುಗಿ “If I don’t become prime minister I will burn this country”ಎಂದರು. ಗಾಂಧೀಜಿ ಉತ್ತರಿಸದೆ ತಮ್ಮ ಕೆಲಸದಲ್ಲಿ ಮಗ್ನರಾದರು. ಮರುದಿನ ಸರ್ದಾರ್ ಪಟೇಲರು ಗಾಂಧೀಜಿಯವರ ಬಳಿ ಬಂದರು. ಸ್ವಲ್ಪ ಮಾತಾದ ಮೇಲೆ “ನೆಹರೂ ಇಲ್ಲಿಗೆ ಬಂದಿದ್ದರೆ?” ಎಂದು ಕೇಳಿದರು.
ಬಾಪೂ “ಹೌದು” ಎಂದರು.
“ಏನು ಹೇಳಿದರು ನೆಹರೂ?”
ಮತ್ತಷ್ಟು ಓದು »