ಕಾಯಕ ಯೋಗಿಗೊಂದು ನಮನ
ಮಧುಚಂದ್ರ ಭದ್ರಾವತಿ
ಭರತ ಖಂಡದ ಅಸಂಖ್ಯ ಭೂ ಪ್ರದೇಶಕ್ಕೆ ನೀರು ಹರಿಸಿದ ಇವರನ್ನು ಭಗೀರಥನೆನ್ನ ಬೇಕೆ?. ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ನೀಡಲು ಶ್ರಮಿಸಿದ ಸರಸ್ವತಿ ಪುತ್ರನೆನ್ನ ಬೇಕೆ ? ಭರತ ಖಂಡವೇ ಆಂಗ್ಲರ ವಿರುದ್ದ ಹೋರಾಟ ಮಾಡುತ್ತಿದ್ದಾಗ ಅದೇ ಅಂಗ್ಲರನ್ನು ಉಪಯೋಗಿಸಿಕೊಂಡು ದೇಶದ ಅಭಿರುದ್ದಿಗೆ ಶ್ರಮಿಸಿದ ಚಾಣಾಕ್ಯನೆನ್ನ ಬೇಕೆ? ಅತ್ತ ಕಡೆ ಪರಕೀಯರು, ಇತ್ತ ಕಡೆ ದೂರ ದೃಷ್ಟಿಯಿಲ್ಲದ ಸ್ವದೇಶಿಯರು, ಸಾಲದೇ ಪ್ರಾಮಾಣಿಕತೆಯಿಲ್ಲದ ಅಧಿಕಾರಿಗಳ ವರ್ಗ ಅವರೆಲ್ಲರನ್ನು ಮೀರಿ ಕಾರ್ಯ ಸಾಧನೆ ಮಾಡಿದ ಭೀಷ್ಮನೆ ?. ಆಂಗ್ಲರು ತಮ್ಮ ಸಚಿವ ಮಂಡಳಿಯಲ್ಲಿ ನೀಡಿದ ಸಚಿವ ಸ್ಥಾನವನ್ನು ನಯವಾಗಿ ನಿರಾಕರಿಸಿ ದೇಶಪ್ರೇಮ ಮೆರದ ದೇಶಭಕ್ತನೆ?.ಕೇವಲ ಭರತ ಖಂಡಕ್ಕೆ ಅಲ್ಲದೆ ಇಡಿ ವಿಶ್ವದ ಮನುಕುಲದ ಉದ್ದಾರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ವಿಶ್ವಮಾನವನೆನ್ನ ಬೇಕೆ ?..
ನಾ ಅರಿಯೇ.
ಮುಲ್ಲಾ ಇಸ್ಲಾಂ ಮತ್ತು ಮಹಾತ್ಮರ ಘನತೆ
-ಡಾ ಅಶೋಕ್ ಕೆ ಆರ್
ವರುಷದ ಹಿಂದೆ ಸಂದರ್ಶನವೊಂದರಲ್ಲಿ ಶಾರೂಕ್ ಖಾನ್ ‘ಮುಲ್ಲಾಗಳ ಇಸ್ಲಾಂ ಮತ್ತು ಅಲ್ಲಾಹುವಿನ ಇಸ್ಲಾಂ’ ಎಂಬ ಮಾತು ಹೇಳಿದ್ದರು. ಮುಲ್ಲಾಗಳ ಇಸ್ಲಾಂನಿಂದ ಇಸ್ಲಾಂ ಧರ್ಮಕ್ಕೆ ಮತ್ತು ಮುಖ್ಯವಾಗಿ ಮನುಷ್ಯತ್ವಕ್ಕೆ ಆಗುತ್ತಿರುವ ಹಾನಿಯನ್ನು ವಿವರಿಸಿದ್ದರು ಶಾರೂಕ್. ಚಲನಚಿತ್ರವೊಂದರ ಸಂಬಂಧವಾಗಿ ಲಿಬಿಯಾ ಮತ್ತಿತರ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ನಡೆಯುತ್ತಿರುವ ವಿನಾಕಾರಣದ ಹಿಂಸಾಚಾರದ ವರದಿಗಳನ್ನು ಓದಿದಾಗ ಶಾರುಕ್ ಮಾತುಗಳು ನೆನಪಾದವು. ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವ ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಆಯಾ ದೇಶ – ಧರ್ಮ –ಪ್ರದೇಶಕ್ಕೆ ಸೀಮಿತವಾದಂತಹ ಚಿತ್ರಗಳಷ್ಟೇ. ಇದೇ ಕಾರಣದಿಂದ ಭಾರತದ ಚಿತ್ರಗಳಲ್ಲಿ ಪಾಕಿಸ್ತಾನ ಶತ್ರುವಾಗಿ ಚಿತ್ರಿಸಲ್ಪಡುತ್ತದೆ, ಅಮೆರಿಕಾದ ಚಿತ್ರಗಳಲ್ಲಿ ರಷಿಯನ್ನರು ಅಮಾನವೀಯರಂತೆ ತೋರಿಸಲ್ಪಡುತ್ತಾರೆ. ನಾವು ಭಾರತದವರಾಗಿದ್ದರೆ ಚಿತ್ರ ಹಿಡಿಸುತ್ತದೆ, ಮನುಷ್ಯ ನಿರ್ಮಿತ ಗಡಿಯಾಚೆಗೆ ಹುಟ್ಟಿದ್ದರೆ ಚಿತ್ರ ಕೋಪ ಮೂಡಿಸುತ್ತದೆ. ಮತಿಗೆಟ್ಟ ಧರ್ಮಾಂಧರು ಅನ್ಯಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಎಲ್ಲ ಧರ್ಮದಲ್ಲೂ ಸಾಮಾನ್ಯ, ಮುಸ್ಲಿಮರೂ ಇದಕ್ಕೆ ಹೊರತಲ್ಲ. ಅಂಥವನೇ ಒಬ್ಬ ಯಹೂದಿ ತನ್ನ ನಿರ್ದೇಶನದ ಚಿತ್ರದಲ್ಲಿ ಮುಸ್ಲಿಮರ ಬಗ್ಗೆ, ಪ್ರವಾದಿಯ ಬಗ್ಗೆ, ಇಸ್ಲಾಮಿನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬಳಸಿದ್ದಾನೆ ಎಂಬುದೇ ನೆಪವಾಗಿ ಮುಲ್ಲಾಗಳ ಇಸ್ಲಾಂ ವಿಜ್ರಂಭಿಸುತ್ತಿದೆ.
ಎಷ್ಟು ಕಷ್ಟ ಒಂದ್ ಮದ್ವೆ ಅಂದ್ರೆ
-ಪರೇಶ್ ಸರಾಫ್
ಡಾಕ್ಟರ್ ಮಾಮನ ಆಸ್ಪತ್ರೆಯ ಹಿಂದಿನ ಹಾಲ್ನಲ್ಲಿ ಆಗಾಗ ಚಿಕ್ಕ ಪುಟ್ಟ ಸಮಾಜ ಸೇವಾ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಅದರಲ್ಲಿ ಪ್ರತಿ ರವಿವಾರ ನಡೆಯುವ ಮ್ಯಾರೇಜ್ ಬ್ಯುರೋ ಸಹ ಒಂದು. ನಮ್ಮ ಸಮುದಾಯದ ಹುಡುಗ, ಹುಡುಗಿಯರ ಮಾಹಿತಿ ಸಂಗ್ರಹ, ಜಾತಕ ಮೇಳಾಮೇಳಿ
, ಮಾತುಕತೆಯಿಂದ ಹಿಡಿದು, ಬಡವರಿದ್ದರೆ ಮದುವೆಗೆ ಸಹಾಯ ಮಾಡುವಷ್ಟರವರೆಗೆ ಸಮಾಜಸೇವೆ ನಡೆಯುತ್ತಿತ್ತು. ಪ್ರಭು ಮಾಸ್ತರರು, ಮಹಾಲೆ ಮಾಮನ ಸಾರಥ್ಯದಲ್ಲಿ ಈ ಕಾರ್ಯ ಬಹಳ ಸಮರ್ಥವಾಗಿ ಮುಂದುವರೆದುಕೊಂಡು ಹೋಯಿತು. ಬರೀ ವಧು ವರರ ಮಾಹಿತಿ ನೀಡುವುದಷ್ಟೇ ಅಲ್ಲದೇ ಹುಡುಗನ, ಹುಡುಗಿಯ ಹಿನ್ನೆಲೆಗಳನ್ನು ನೋಡಿ, ಜೋಡಿ ಸರಿ ಹೊಂದುತ್ತದೆಯೋ, ಹುಡುಗನಿಗೆ ವ್ಯಸನಗಳಿವೆಯೋ ಎಂಬುದನ್ನೆಲ್ಲ ಪರೀಕ್ಷಿಸಿ ತಮ್ಮ
ಕೈಲಾದ ಮಟ್ಟಿಗೆ ಉತ್ತಮ ಸೇವೆ ನೀಡಿ, ಮದುವೆಯ ನೈತಿಕ ಹೊಣೆಯನ್ನು ಸಹ ಹೊತ್ತು ಮನೆ ಮಾತಾದರು. ಹೀಗೆ ಬರುವವರ ಸಂಖ್ಯೆ ಸಹ ಜಾಸ್ತಿಯಾಗುತ್ತ ಹೋಯಿತು. ಸಂಖ್ಯೆಗಳು ಜಾಸ್ತಿಯಾದಂತೆ ಹಲವು ಸಿಹಿ ಕಹಿ ಅನುಭವಗಳು ಸಹ ಆಗುತ್ತಾ ಹೋಯಿತು. ಪ್ರತಿ ಅನುಭವವೂ ಈಗಿನ ಸಾಮಾಜಿಕ ಜೀವನ,
ಕೈ ಹಿಡಿದವಳು…..!!
ಸೂರ್ಯ ಅವಿ
ಅವಳಿಗಾಗಿ ನಾನು ಕಾದು ಕುಳಿತಿದ್ದೆ. ಅದು ಮಳೆಗಾಲದ ದಿನಗಳು. ಅವಳು, ಇಂದು ಭೇಟಿ ಆಗುತ್ತೇನೆ ಎಂದು ಕರೆ ಮಾಡಿ ಹೇಳಿದಳು. ಸೂರ್ಯ ತನ್ನ ದಿನ ನಿತ್ಯದ ಕೆಲಸ ಮುಗಿಸಿ ಉಷೆಗೆ ಕೆಂಪು powder ಹಚ್ಚಿ ಬೆಳಕಿನ ರಂಗಿನಾಟ ಮುಗಿಸಿ ಮೆಲ್ಲಮೆಲ್ಲಗೆ ದೂರ ದಿಗಂತದಿ ಜಾರಿಕೊಂಡ. ಬಹು ದೂರದಲ್ಲಿ ಕಪ್ಪು ಮೋಡಗಳು ಮಳೆ ಹನಿಗಳ ತುಂಬಿಕೊಂಡು, ಗರ್ಭಿಣಿಯಂತೆ ಹೆಜ್ಜೆ ಇಡುತ್ತ, ಮುಗಿಲ ಸರೋವರದಿ ಒಮ್ಮೆಗೆ ಧಾವಿಸಿದವು. ಬೀಸುತಿದ್ದ ಗಾಳಿಯ ರಭಸಕ್ಕೆ ಅಲ್ಲೊಂದು ಇಲ್ಲೊಂದು ಪುಟ್ಟ ಹಕ್ಕಿಗಳು ತಮ್ಮ ಗೂಡು ಸೇರಿಕೊಳ್ಳಲಾರಂಭಿಸಿದವು .ದಿಟ್ಟ ಕಾಗೆಯೊಂದು ಗಾಳಿಯ ರಭಸದೆಡೆಗೆ ಸೂತ್ರ ಮುರಿದ ಗಾಳಿಪಟದ ಹಾಗೆ ಅತ್ತಿತ್ತ ತೇಲುತ್ತ ಮುಂದೆ ಹಾರಿತು…
ಎಷ್ಟು ಸಮಯವಾದರೂ ಅವಳ ಸುಳಿವು ಇರಲಿಲ್ಲ, ಬೀದಿಯ ಕಡೆ ನೋಡಿದರೂ ಅವಳು ಬರುವ ಮುನ್ಸೂಚನೆ ಇರಲಿಲ್ಲ. ತಕ್ಷಣಕ್ಕೆ ಗುಡುಗಿನ ಶಬ್ದ ಕೇಳಿ ಬಂತು. ತಲೆಯೆತ್ತಿ ಮೇಲೆ ನೋಡಿದೆ. ಮೋಡಗಳ ಗರ್ಭದಿಂದ ಭಾವದ್ಗೊನನವಾದ ಮೊದಲ ಮಳೆ ಹನಿ ನನ್ನ ಕಣ್ಣ ರೆಪ್ಪೆ ಮೇಲೆ ಬಂದು ತಾಕಿತು. ಪುಟ್ಟ ಮಗುವಿನ ಹಾಗೆ ಕಣ್ಣ ಉಜ್ಜಿಕೊಂಡು ತಲೆ ಎತ್ತಿದೆ, ಇದಕ್ಕಿದ್ದ ಹಾಗೆ ಅಸಂಖ್ಯಾತ , ಕೋಟಿ ಕೋಟಿ ಮಳೆ ಹನಿಗಳ ರಾಶಿ ಒಮ್ಮೆಗೆ ಭೂಮಿಯೆಡೆಗೆ ಧಾವಿಸಿದವು, ಚಿಟರ್ ಪಟರ್ ಎಂದು ಸದ್ದು ಮಾಡುತ್ತ ವಾತಾವರಣದಿ ತುಂಬಿದ ಮೌನವ ಮುರಿದವು.
ಚಿಕಾಗೋದಲ್ಲಿ ಹರಿದ ವಿವೇಕಾಮೃತ ಧಾರೆ
– ಚಕ್ರವರ್ತಿ ಸೂಲಿಬೆಲೆ
ಸ್ವಾತಂತ್ರ್ಯ ಹೋರಾಟದ ಹೊತ್ತು. ಕ್ರಾಂತಿಕಾರಿಯೊಬ್ಬ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸಂದರ್ಭ. ಪ್ರೀತಿಲತಾ ವಡ್ಡೆದಾರ್ ಎಂಬ ಮತ್ತೊಬ್ಬ ಮಹಿಳಾ ಕ್ರಾಂತಿಕಾರಿಗೆ ಜೈಲಿನಿಂದಲೇ ಪತ್ರ ಬರೆದ. ಅಚಾನಕ್ಕಾಗಿ ನಿನ್ನ ತೋಳಿನ ರವಿಕೆಯ ಮೇಲಿದ್ದ ವಿವೇಕಾನಂದರ ಚಿತ್ರ ನನ್ನ ಕಣ್ಣಿಗೆ ಬಿತ್ತು. ಬಹಳ ಆನಂದವಾಯ್ತು. ನಮ್ಮ ಕಾಲದ ಋಷಿ ಆತ. ಆತನನ್ನು ಅನುಸರಿಸುವುದು ಒಳಿತು.ಮುಂದೆ ಪೊಲೀಸರೊಂದಿಗಿನ ಕದನದಲ್ಲಿ ಆ ಹುಡುಗಿ ಅಸುನೀಗಿದಳು.
ಇದು ಸ್ವಾಮಿ ವಿವೇಕಾನಂದರ ದೇಹತ್ಯಾಗದ ಬಹು ವರ್ಷಗಳ ನಂತರ ನಡೆದ ಘಟನೆ. ಅವರು ಬದುಕಿದ್ದಾಗಲೇ ಅಪರೂಪದ ಮತ್ತೊಂದು ಘಟನೆ ಜರುಗಿತ್ತು.
ಸ್ವಾಮೀಜಿ ಪ್ರಯಾಣಿಸುತ್ತಿದ್ದ ರೈಲು ತಮ್ಮೂರನ್ನು ಹಾದುಹೋಗಲಿದೆ ಎಂದರಿತ ಒಂದು ಊರಿನ ಜನ ತಮ್ಮ ಊರಿನಲ್ಲಿ ರೈಲು ನಿಲ್ಲಿಸುವಂತೆ ಕೇಳಿಕೊಂಡರು. ಅದನ್ನು ನಿಯಮ ಬಾಹಿರವೆಂದು ಸ್ಟೇಷನ್ ಮಾಸ್ಟರ್ ನಿರಾಕರಿಸಿದಾಗ ಅವರು ಗೋಗರೆದರು. ಆಗಲೂ ಕೇಳುವ ಲಕ್ಷಣಗಳು ಕಾಣದಾದಾಗ ಊರಿನ ಜನ ರೈಲು ಹಳಿಗಳ ಮೇಲೆ ಅಂಗಾತ ಮಲಗಿಬಿಟ್ಟರು. ಶ್ರೇಷ್ಠ ಸಂತನೊಬ್ಬನ ಪಾದಸ್ಪರ್ಷ ನಮ್ಮೂರಿನ ನೆಲಕ್ಕೆ ಆಗಲಿಲ್ಲವೆಂದರೆ ನಮ್ಮೆಲ್ಲರ ಬದುಕು ವ್ಯರ್ಥ ಎನ್ನುವುದು ಅವರ ನಿಲುವಾಗಿತ್ತು. ರೈಲು ಬಂತು. ಆನರು ಹಳಿಯಿಂದ ಅಲುಗಾಡುವ ಲಕ್ಷಣ ಕಾಣದಿದ್ದಾಗ ಸ್ಟೇಷನ್ ಮಾಸ್ಟರ್ ಗಾಬರಿಗೊಂಡು ನಿಲುಗಡೆ ಸೂಚಿಸಿದ. ಜನ ಫ್ಲಾಟ್ಫಾರಮ್ನತ್ತ ಧಾವಿಸಿದರು. ಸ್ವಾಮೀಜಿ ಮೆಟ್ಟಿಲ ಬಳಿ ಬಂದು, ನಿಂತಿದ್ದ ಜನರತ್ತ ಕೈಬೀಸಿದರು. ರೈಲು ಮತ್ತೆ ಹೊರಟಿತು.
ಅಬ್ಬ! ಇದು ವ್ಯಕ್ತಿಯೊಬ್ಬನಿಗೆ ಸಿಗಬಹುದಾದ ಅತ್ಯಂತ ಶ್ರೇಷ್ಠ ಗೌರವ. ಆತನ ಚಿಂತನೆಗಳನ್ನು ಅನುಸರಿಸುತ್ತ ಜೀವ ತೆರುವುದು ಒಂದೆಡೆಯಾದರೆ ಆತನಿಗಾಗಿ ಬಯಸಿ ಪ್ರಾಣ ಕೊಡಲು ಸಿದ್ಧವಾಗುವುದು ಮತ್ತೊಂದು. ಸ್ವಾಮೀಜಿ ಎರಡೂ ರೀತಿಯ ಅನುಯಯಿಗಳನ್ನು ಹೊಂದಿದ್ದ ಅಪರೂಪದ ವ್ಯಕ್ತಿಯಾಗಿದ್ದರು.
ರಾಂಬೋ ಮೇನಿಯಾ.. ಶರಣ್ ದೇ ದುನಿಯಾ
ಫಿಲ್ಮಿ ಪವನ್
ಈ ನಡುವೆ ಯಾಕೋ ಲೇಖನ ಅಂದ್ರೆ ಸ್ವಲ್ಪ ಸೋಂಬೇರಿಯಾಗಿಬಿಡುತಿದ್ದೆ, ಸುಲಭವಾಗಿ ಕವನ ಬರೆದುಬಿಡೋಣ, ಯಾರು ಅಷ್ಟುದ್ದ ಟೈಪ್ ಮಾಡೋರು ಅನ್ನೋ ಆಲಸಿತನ. ಆದ್ರು ಈ ಸಿನಿಮಾ ನಂಗೆ ಬಹಳಾ ಹತ್ತಿರವಾಗಿದ್ದು ಮತ್ತೆ ತುಂಬಾ ಚೆನ್ನಾಗಿರೋದ್ರಿಂದ ಸುಮಾರು ದಿನಗಳ ಮೇಲೆ ಸಿನಿಮಾ ಲೇಖನ ಬರೀತಿದ್ದೀನಿ.
ಶರಣು ಶರಣಾರ್ಥಿ ಅಂತ ತೆರೆಮೇಲೆ ಒಂದು ಪತ್ರ ಕಡೆಯಲ್ಲಿ ಶರಣ್ ಹಸ್ತಾಕ್ಷರ ಹಿಂದೆ ಶರಣ್ ಕಂಠ ಸಿನಿಮಾ ಪ್ರಾರಂಭಕ್ಕೆ ಬಂದು ಶರಣ್ ಬಗ್ಗೆ ಒಂದಷ್ಟು ವಿಷಯಗಳು ತಿಳಿಯುತ್ತದೆ, ೯೯ ಸಿನಿಮಾಗಳು ಸಹಾಯಕ ನಟನಾಗಿ ದುಡಿದ ಶರಣ್, ನಾಯಕನಾಗಲು ಇಷ್ಟು ದಿನ ಯಾಕೆ ತೊಗೊಂಡ್ರು ಅಂತ ಒಮ್ಮೆ ಅನಿಸಿದ್ರೆ ಅದ್ರಲ್ಲಿ ತಪ್ಪೇನು ಇಲ್ಲ, ಶರಣ್ ನೂರನೆ ಚಿತ್ರ ಅವರದೇ ಬ್ಯಾನರ್ ನಲ್ಲಿ ಬಂದಿರೋದು ನಿಜಕ್ಕು ಅವರಿಗೇ ಹೆಮ್ಮೆ, ಲಡ್ಡು ಪ್ರೊಡಕ್ಷನ್ಸ್ ಅಂತ ಹೆಸರಿಟ್ಟಾಗಲೆ ಇವರ ಸಿನಿಮಾ ಹಿಟ್ ಆಗಿತ್ತು ಅನ್ಸುತ್ತೆ, ಯಾಕಂದ್ರೆ ಆ ಪ್ರೊಡಕ್ಷನ್ ಹೆಸರು ನೋಡಿದೊಡನೆ ಚಿತ್ರಮಂದಿರದಲ್ಲಿ ಒಮ್ಮೆ ನೆಗೆಯ ಬುಗ್ಗೆ ಒಡೆದಿತ್ತು.
ಬೊಜ್ಜೋ…( ಕೊಂಕಣಿ ಕವನ )
ಪರೇಶ್ ಸರಾಫ್
ಹಾತ್ತಿ ಹಾತ್ತಿ ಫುಲ್ಲಾಚೆ ಹಾರು
ತೊಂಡಾoತು ತುಳ್ಸಿ ಉದಾ
ಪೆಟೆಲೇ ತಾಕ್ಕ ಮೆರವಣಿಗೇರಿ
ಪೂತ್ ಆನಿ ಸೂನ್ ರಡ್ತಾ ಅಸಾಚಿ
ಕಷ್ಟ ಪಾವ್ನ್ ದೋಳೆ ಉದಾ ಹಾಡೋನ್
ಬಾಯ್ಲ್ ರಡ್ತಾ ಅಸ್ಸ ಪಾಪ-
ಬಾಮ್ಮುಣ್ ನಾ ಆಶಿಲ್ ಘರಾಂತ್
ಹಾವ ಆಸುನ್ ಭೀ ನಾ ಅಷಿಲ್ ತಷಿ ಮೋಣು
ಮರೆಯಾಯಿತೇ, ನಮ್ಮ ಕ್ರಿಯಾಶೀಲತೆ ?
–ಮಧುಚಂದ್ರ ಭದ್ರಾವತಿ
ಅಮೇರಿಕ ಖಂಡವನ್ನು ಅನ್ವೇಷಣೆ ಮಾಡಿದ ಸಲುವಾಗಿ ಸ್ಪೇನ್ ದೇಶದ ರಾಣಿ ಇಸಬೆಲ ಒಂದು ಕೂಟವನ್ನು ಏರ್ಪಡಿಸಿದ್ದಳು. ಅಲ್ಲಿಗೆ ಕೊಲಂಬಸ್ ಸಹ ಬಂದಿದ್ದನು. ಎಲ್ಲರೂ ಮೇಜಿನ ಮುಂದೆ ಕುಳಿತಿರುವಾಗ ಅಲ್ಲಿ ನೆರೆದಿದ್ದ ಅಮಂತ್ರಿತರನ್ನು ಕುರಿತು ” ಮೊಟ್ಟೆಯನ್ನು ಯಾರು ಮೇಜಿನ ಮೇಲೆ ನಿಲ್ಲಿಸುತ್ತಿರ ” ಎಂದು ಪ್ರಶ್ನೆಯನ್ನು ಇಟ್ಟಳು. ಅಲ್ಲಿದ್ದ ಮಹಾ ಜನರು ಅದೇನು ಮಹಾ ಎಂದು ಮೊಟ್ಟೆಯನ್ನು ಮೇಜಿನ ಮೇಲೆ ನಿಲ್ಲಿಸಲು ಪ್ರಯತ್ನಿಸಿ ವಿಫಲರಾದರು. ಆಗ ಕೊಲಂಬಸ್ ಬೆಂದ ಮೊಟ್ಟೆಯನ್ನು ಕುಕ್ಕಿ ನಿಲ್ಲಿಸಿದಾಗ ಅಲ್ಲಿ ನೆರೆದಿದ್ದ ಕೆಲವರು ಹೊಗಳಿದರೆ, ಮತ್ತೆ ಕೆಲವರು ಇದನ್ನು ನಾನು ಮಾಡುತಿದ್ದೆ ಇದರಲ್ಲಿ ಏನು ಇದೆ ಎಂದು ತಿರಸ್ಕಾರದಿಂದ ತೆಗಳಿದರು.
ಲಕ್ಷ್ಮೀ ಪುತ್ರರಾಗುವುದು ಹೇಗೆ?
-ವೆಂಕಟೇಶ್ ಗುರುರಾಜ್
ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೧
ವಿಶ್ವದ ಅತೀ ಶ್ರೀಮಂತರಲ್ಲಿ ಪ್ರಥಮ ಸ್ಥಾನದಲ್ಲಿರುವ ಮೆಕ್ಸಿಕೋದೇಶದ ಕಾರ್ಲೋಸ್, ದ್ವಿತೀಯ ಸ್ಥಾನದ ಅಮೇರಿಕಾದವರಾದ ಬಿಲ್ ಗೇಟ್ಸ್, ಮೂರನೇ ಸ್ಥಾನದ ಅಮೇರಿಕಾದವರೇಆದ ವಾರೆನ್ ಬಫೆಟ್ ಮುಂತಾದ ವಿಶ್ವದ ಅತೀ ಶ್ರೀಮಂತ ೧೦ ವ್ಯಕ್ತಿಗಳು ಹೇಗೆ ಲಕ್ಷ್ಮೀ ಪುತ್ರರಾದರುಎನ್ನುವ ಬಗ್ಗೆ ಒಂದು ಸೊಗಸಾದ ಕಾರ್ಯಕ್ರಮವನ್ನು ಟಿ.ವಿ.೯ ಇತ್ತೀಚೆಗೆ ಪ್ರಸಾರಮಾಡಿತ್ತು. ಚರ್ಚೆಯಲ್ಲಿಭಾಗವಹಿಸಿದ್ದ ವಿಶ್ವದ ಶ್ರೀಮಂತರಲ್ಲಿ ೧೦೫೧ನೇ ಸ್ಥಾನದ ಮತ್ತು ಕರ್ನಾಟಕದ ೬ನೇ ಶ್ರೀಮಂತರಾದ ರಾಜೇಶ್ಎಕ್ಸ್ ಪೋರ್ಟ್ ಸಿ.ಇ.ಒ.ರಾಜೀವ್ ಮೆಹ್ತಾ, ಐ.ಐ.ಎಂ.ನಿರ್ದೇಶಕರಾದ ಮುರಳೀಧರ್ ಮತ್ತು ಹಣಕಾಸು ಹೂಡಿಕೆತಜ್ಞರಾದ ರುದ್ರಮೂರ್ತಿಯವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಶ್ರೀಮಂತರಾಗುವುದು ಹೇಗೆ? ಎಂಬ ಮೂಲಭೂತ ವಿಷಯವನ್ನು ಬಹಳ ಚೆನ್ನಾಗಿ ತಿಳಿಯಪಡಿಸಿದರು.






