ಜಿ-ಮೈಲ್ನಲ್ಲಿ ಹೊಸ ರೀತಿಯಲ್ಲಿ ಒಮ್ಮೆಗೆ ಹಲವು ಮಿಂಚೆ ರಚಿಸಿ
ಸ್ನೇಹಿತರೇ,
ಜಿ-ಮೈಲ್ನಲ್ಲಿ ಹೊಸ ರೀತಿಯಲ್ಲಿ ಮಿಂಚೆ ರಚಿಸಿ.. ಈಗ. ಏನಿದು ವಿಶೇಷ? ಹೌದು.. ಎಷ್ಟೋ ಬಾರಿ ನೀವು ಮಿಂಚೆ ರಚಿಸುವಾಗ, ನಿಮಗನ್ನಿಸಿರಬಹುದು. ಛೇ..! ಕೆಲವು ವಿಚಾರ ಹಿಂದಿನ ಮೈಲ್ಗಳಲ್ಲಿ ನೋಡಿ ಕಾಪಿ(ಪ್ರತಿ) ಮಾಡಿಕೊಳ್ಳೋದಿತ್ತು. ಕಳುಹಿಸಿದ ಮೈಲ್ (Sent Mail)ನಲ್ಲಿ ಇರೋ ವಿಚಾರ ಒಂದಷ್ಟು ಪ್ರತಿ ಮಾಡಿಕೊಳ್ಳೋದಿತ್ತು. ಅದ್ಯಾವುದೋ ಮೈಲ್ನಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರ ಇತ್ತು. ಅದನ್ನೊಮ್ಮೆ ನೋಡಬೇಕಿತ್ತು. ಅದ್ಯಾವುದೋ ಮೇಲ್ ಮರೆತು ಹೋಯ್ತು.. ಅದನ್ನ ಹುಡುಕಿ, ಅದರಲ್ಲಿನ ವಿಚಾರ ಓದಿ ಅದಕ್ಕೆ ಪೂರಕ ಉತ್ತರ ಕೊಡೋದಿತ್ತು ಅಥವಾ ಅದರಲ್ಲಿನ ವಿಚಾರ ಸ್ವಲ್ಪ ಇಲ್ಲೂ ಪ್ರತಿ ಮಾಡಿ ಹಾಕೋ ಅವಶ್ಯಕತೆ ಇತ್ತು ಅಂತ ನಿಮಗನ್ನಿಸಿರಬಹುದು. ಆಗ ನಿಮಗಾಗುತ್ತಿದ್ದ ಸಮಸ್ಯೆ.. ನಿಮ್ಮ ಇನ್ಬಾಕ್ಸ್ ಅಥವಾ ಕಳುಹಿಸಿದ ಮಿಂಚೆಯ ಫೋಲ್ಡರ್ ಯಾವುದಾದರು ಒಂದು ತೆರೆಯಬಹುದು ಅಥವಾ ನಿಮ್ಮ ಮಿಂಚೆ ಬರೆಯುವಿಕೆಯ ಒಂದು ಕೆಲಸ ಒಮ್ಮೆ ಮಾತ್ರ ಮಾಡಬಹುದು. ಎಲ್ಲವೂ ಒಟ್ಟಿಗೆ ಮಾಡಬೇಕೆಂದಲ್ಲಿ ಬ್ರೌಸರ್ನ ಬೇರೆ ಬೇರೆ ಕಿಟಕಿಗಳನ್ನು ತೆರೆದು ಕೆಲಸ ಮಾಡಬೇಕಿತ್ತು. ಈಗ ಗೂಗಲ್ ನಿಮಗೆ ಇದಕ್ಕೆ ಪರಿಹಾರ ಕೊಟ್ಟಿದೆ.
ನೋಡಿ..! ಈ ಕೆಳಗಿನ ವಿಚಾರಗಳನ್ನು.
ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಮಧುಚಂದ್ರ ಭದ್ರಾವತಿ
ಬಹಳ ದಿನಗಳಿಂದ ಈ ಲೇಖನ ಪ್ರಕಟಿಸಬೇಕು ಎನ್ನುವ ಕಾತರ ಆದರೆ ಸರಿಯಾದ ಸಮಯ ಸಿಗದೇ ಇಂದು ನಾಳೆ ನಾಡಿದ್ದು …. ಹಾಗೆ ಮುಂದುವರಿತ ಹೋಯ್ತು. ಕೊನೆಗೆ ಅ ದಿನ ಬರಲೇ ಇಲ್ಲ. ಇಂದು ಪ್ರಕಟಣೆ ಮಾಡಲೇ ಬೇಕು ಎನ್ನುವ ತುಡಿತ ಇದ್ದುದರಿಂದ ಇಂದೇ ಪ್ರಕಟಿಸುತ್ತಿದ್ದೇನೆ.
ನಿಮಗೆಲ್ಲ ಗೊತ್ತಿರುವ ಹಾಗೆ ಮಾನವ ಒಬ್ಬ ಸಂಘ ಜೀವಿ. ದಿನ ನಿತ್ಯದ ಜೀವನದಲ್ಲಿ ಹಲವರನ್ನು ಭೇಟಿ ಮಾಡುತ್ತಾನೆ. ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ತನ್ನ ಮನದಾಳದ ವಿಚಾರವನ್ನು ಭಾಷೆಯ ಮೂಲಕ ಹಂಚಿ ಕೊಳ್ಳುತ್ತಾನೆ.
ಭಾಷೆ ಎಂದರೆ ಅದೊಂದು ಸಂವಹನ. ಇಬ್ಬರ ನಡೆಯುವ ಮಾತುಕತೆ ಇರಬಹುದು ಅಥವಾ ಹಲವರ ಜೊತೆ ನಡೆಯುವ ಇರುವ ಸಂವಾದವು ಇರಬಹುದು. ಅದು ಎಲ್ಲರಿಗು ಅರ್ಥವಾಗುವ ಹಾಗಿದ್ದರೆ ಕೇಳುವವನು ಮತ್ತು ಅಡುವವನಿಗೆ ಗೌರವ ಸಲ್ಲುತ್ತದೆ. ಭಾಷೆಯಲ್ಲಿ ಎರಡು ವಿಧ. ಒಂದು ಮಾತೃ ಭಾಷೆ ಮತ್ತೊಂದು ವ್ಯವಹಾರಿಕ ಭಾಷೆ. ಮಾತೃ ಭಾಷೆ ತಾಯಿಯ ಕರುಳ ಬೇರಿನಿಂದ ಬಂದದು. ಆಗತಾನೆ ಧರೆಗಿಳಿದ ಮುಗ್ದ ಕಂದಮ್ಮ ಮೊದಲು ಆಡುವುದೇ ಮಾತೃಭಾಷೆ . ಅದೇ ಮುದ್ದಿನ ಕಂದ ಮಾತೃ ಭಾಷೆಯ ಮೂಲಕ ಹೆತ್ತ ತಾಯಿಗೆ ತನ್ನ ಋಣವನ್ನು ತೀರಿಸುತ್ತದೆ. ಮಗು ಮುಂದೆ ದೊಡ್ಡವನಾಗುತ್ತ ಹೋದ ಹಾಗೆ ಅನ್ನ ಸಂಪಾದನೆಗಾಗಿ ವ್ಯವಹಾರಿಕ ಪ್ರಪಂಚಕ್ಕೆ ಕಾಲಿಡುತ್ತಾ ಹಲವು ಭಾಷೆ ಮತ್ತು ವಿದ್ಯೆಯನ್ನು ಕಲಿಯುತ್ತ ಬೆಳೆಯುತ್ತದೆ. ಕಡೆಗೆ ಒಂದು ಹಂತ ಮೀರಿದಾಗ ತನ್ನ ಮಾತುಭಾಷೆಯನ್ನೇ ಮರೆತು ಪರಿಪೂರ್ಣ ವ್ಯಾಪರಿಯಾಗಿ ಬೇರೆ ಭಾಷಗೆ ಮನ್ನಣೆ ಕೊಟ್ಟು ತನಗೆ ಉಸಿರಾಡಿ ಬದುಕಲು ಅವಕಾಶ ಕೊಟ್ಟ ತಾಯಿನುಡಿಯನ್ನೇ ದೂರ ಮಾಡಿ ತನ್ನ ಮುಂದಿನ ಪೀಳಿಗೆಗೆ ಮಮ್ಮಿ ಡ್ಯಾಡಿ ಎನ್ನುವ ಹುಚ್ಚು ಸಂಸ್ಕೃತಿಗೆ ಮುನ್ನುಡಿ ಬರೆಯುತ್ತಾನೆ.
ಇದು ಇಂದಿನ ವಾಸ್ತವ , ನಿಮ್ಮಲ್ಲಿ ಎಷ್ಟು ಜನ ಅಮ್ಮ, ಅಪ್ಪ ಎಂದು ತಮ್ಮ ಹೆತ್ತವರನ್ನು ಕರೆಯುತ್ತಿರ?
ಉತ್ತರ ಶೇಕಡಾ ೫೦ಕ್ಕಿಂತ ಕಡಿಮೆ.
ಇತ್ತೀಚಿಗೆ ಪ್ರತಿಷ್ಟಿತ ಬಹುರಾಷ್ಟ್ರೀಯ ಸಂಸ್ತೆಯಲ್ಲಿ ಕೆಲಸ ಮಾಡುವ ಕನ್ನಡಿಗರು , ತಮ್ಮ ಸಂಸ್ತೆಯಲ್ಲಿ ಕನ್ನಡ ಮಾತನಾಡಿದರೆ ನಮಗೆ ಅವಮಾನವೆಂಬಂತೆ ಅಂಗ್ಲ ಭಾಷೆಯಲ್ಲೇ ತಮ್ಮ ಕಷ್ಟ ಸುಖಗಳ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಇನ್ನ ಹಳ್ಳಿಯವರು ತಮ್ಮ ಮಕ್ಕಳ್ಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಿ , ತಮ್ಮ ಹಳ್ಳಿ ಸೊಗಡಿನ ಕನ್ನಡವನ್ನು ಬಿಟ್ಟು ಅಲ್ಪ ಸ್ವಲ್ಪ ಇಂಗ್ಲಿಷ್ ಪದಗಳ ಬಳಕೆ ಮಾಡಿ ನನಗೂ ಬರತೈತಿ ಇಂಗ್ಲೀಸು ಅಂತ ತೋರಿಸ್ಕೊಳ್ಳುತಾ , ಹುಚ್ಚು ಭ್ರಮೆಯಲ್ಲಿ ತಾನು ಕನ್ನಡಿಗ ಎನ್ನುವುದನ್ನೇ ಮರೆಯುತ್ತ ಇದ್ದಾನೆ . ಈ ಬೆಳವಣಿಗೆ ಒಂದರ್ಥದಲ್ಲಿ ಉತ್ತಮವಲ್ಲ ಒಂದು ಸಮಾಜ ಮತ್ತು ಅದರ ಸಂಸ್ಕಾರಕ್ಕೆ ದೊಡ್ಡ ಆಘಾತ.
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಬಹು ರಾಷ್ಟ್ರೀಯ ಸಂಸ್ತೆಗಳ ಮುಖ್ಯಸ್ತರು ಮೂಲ ಸಂಸ್ತೆಯ ದೇಶದ ನಾಗರಿಕರು (ನನ್ನ ಸಂಸ್ತೆಯು ಸಹ ಇದರಲ್ಲಿ ಸೇರಿದೆ). ಮೂಲ ಸಂಸ್ತೆಯ ವ್ಯವಹಾರವೆಲ್ಲ ಅ ದೇಶದ ರಾಷ್ಟ್ರೀಯ ಭಾಷೆಯಲ್ಲಿ ಇದ್ದರೆ ಅದಕ್ಕೂ ಭಾರತದಲ್ಲೂ ಸಹ ಮನ್ನಣೆ ಇದೆ.(ಸಂಸ್ತೆಯ ಪತ್ರ ವ್ಯವಹಾರಗಳಲ್ಲಿ ಮೊದಲು ತಮ್ಮ ರಾಷ್ಟ್ರ ಭಾಷೆ( ಜರ್ಮನ್ , ಫ್ರೆಂಚ್ , ಫಿನ್ನಿಷ್ ) ನಂತರ ವ್ಯವಹಾರಿಕ ಭಾಷೆಯಾಗಿ ಅಂಗ್ಲ ಭಾಷೆ). ಅ ದೇಶದ ನಾಗರೀಕರು ತಮ್ಮ ಮಾತೃ ಭಾಷಗೆ ನೀಡುತ್ತಿರುವ ಮನ್ನಣೆ ಶ್ಲಾಘನೀಯ.
ಪ್ರತಿ ಶುಕ್ರವಾರ ಗುರುದೇವ ರವೀಂದ್ರನಾಥ ಟ್ಯಾಗೂರು ಅವರು ತಮ್ಮ ನೂತನ ಕೃತಿಗಳನ್ನು ಶಾಂತಿ ನಿಕೇತನದ ವಿದ್ಯಾರ್ಥಿ ಳು ಮತ್ತು ಅಧ್ಯಾಪಕರ ಮುಂದೆ ವಾಚಿಸುವುದಕ್ಕೆ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತಿ
ಭಾಷಾಭಿಮಾನ ಬೇಕೇ ಬೇಕು. ಭಾರತ ಪ್ರಜಾತಂತ್ರ ಒಕ್ಕೂಟ ನಿಂತಿರುವುದು ಭಾಷೆಯ ಮೇಲೆಯೇ ಎನ್ನುವುದನ್ನು ನಾವು ಎಂದು ಮರೆಯ ಬಾರದು. ಅನ್ಯ ಭಾಷಿಕರಿಗೆ ಇರುವ ಕನಿಷ್ಠ ಅಭಿಮಾನ ನಮಗೆಕಿಲ್ಲ. ಕನ್ನಡಕ್ಕೆ ಮೇರು ಕೊಡುಗೆ ನೀಡಿದ ಕಿಟ್ಟಲ್ , ರೈಸ್ , ಮಾಸ್ತಿ , ಕೈಲಾಸಂ , ಬೇಂದ್ರೆ , ರಾಜರತ್ನಂ , ನಿಸಾರ್ ಅಹಮದ್ ಮತ್ತು ಹಲವರ ಮಾತೃ ಭಾಷೆ ಕನ್ನಡವೇ ಅಲ್ಲ . ಕನ್ನಡಿಗ ಕೇವಲ ನವಂಬರಿಗೆ ಸೀಮಿತನಾಗಿ ಎಲ್ಲರ ಹಾಗೆ ಜೈ ಕರ್ನಾಟಕ ಎನ್ನದೆ, ಗಾಂಚಲಿ ಬಿಡಿ ಕನ್ನಡ ಮಾತನಾಡಿ ಎಂದು ಕೇವಲ ಫೇಸ್ ಬುಕ್ ಅಲ್ಲಿ ಲೈಕ್ ಮಾಡಿ ನಿಲ್ಲಬೇಡ . ನಿನ್ನ ದೇಶ ಮತ್ತು ನಿನ್ನ ಭಾಷೆಗೆ ನಿನ್ನ ಕೊಡುಗೆ ಬೇಕು. ಅದಕ್ಕೆ ಹೇಳಿರುವುದು ಕುವೆಂಪುರವರು ” ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ “.ದ್ದರು. ಕಾರ್ಯಕ್ರಮ ಮುಗಿದ ಮೇಲೆ ಅಲ್ಲಿ ನೆರೆದಿದ್ದವರ ಪ್ರಶ್ನೆಗಳಿಗೆ ಗುರುದೇವರು ಉತ್ತರಿಸುತ್ತಿದ್ದರು. ಒಂದು ಬಾರಿ ಒಬ್ಬ ಅನ್ಯ ಭಾಷಿಕ ಮತ್ತು ಒಬ್ಬ ಬಂಗಾಳಿ ವಿದ್ಯಾರ್ಥಿ ಒಟ್ಟಿಗೇ ಪ್ರಶ್ನೆ ಕೇಳುತ್ತಾರೆ. ಆಗ ಅನ್ಯಭಾಷಿಕ ವಿದ್ಯಾರ್ಥಿಗೆ ಗುರುದೇವರು ಹೇಳುತ್ತಾರೆ ” ನನ್ನ ಬಂಗಾಳಿ ಮಿತ್ರನಿಗೆ ಮೊದಲು ಉತ್ತರಿಸುತ್ತೇನೆ , ಆಮೇಲೆ ನಿಮ್ಮ ಸರದಿ ” .
ಬನ್ನಿ ಕನ್ನಡ ರಾಜ್ಯೋತ್ಸವನ್ನು ಅರ್ಥ ಪೂರ್ಣ ವಾಗಿ ಆಚರಿಸೋಣ…
* * * * * * * * *
ಚಿತ್ರ ಕೃಪೆ : ಅಂತರ್ಜಾಲ
ಹೀಗೊಂದು ಸಂ..ಶೋಧನೆ
-ಪ್ರಶಸ್ತಿ ಪಿ.ಸಾಗರ
ಉಪ್ಪಿಗಿಂತ ರುಚಿ ಬೇರೆ ಇಲ್ಲ
ಟೆಸ್ಟಿಂಗಿಲ್ಲದ ಜಗತ್ತೆ ಇಲ್ಲ…
ಅಂತ ಗುಂಡಣ್ಣ ಹಾಡ್ತಾ ಇದ್ದ . ಸೂಪರ್ ಮಚ್ಚಾ.. ಮಸಾಲೆಪುರಿಗೆ ಐಸ್ ಕ್ರೀಂ ಸೇರ್ಸಿದಂಗೈತೆ ಅಂತ ಕಾಲೆಳ್ದ ತರ್ಲೆ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಗೊಳ್ ಅಂತ ನಕ್ರು. ಏ ಸುಮ್ನಿರ್ರಿ ,ಅಷ್ಟೇನೂ ಅದ್ವಾನವಾಗಿಲ್ಲ. ಮಿಸ್ಟರ್ ರೌಂಡ್ ಅಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ಕಿರ್ಬೇಕು. ಅದ್ಕೇ ಖುಷಿಯಾಗಿ ಹಾಡ್ತಿರಬೇಕು ಅಲ್ವಾ ರೌಂಡ್ ಅಂತ ಸಮಾಧಾನ ಮಾಡಿದ್ಲು ಇಳಾದೇವಿ ಅಲಿಯಾಸ್ ಇಳಾ..
ಹೂಂ ಕಣ್ರೋ. ನನ್ನಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ತು. ಡೆವಲಪರ್ಸ್ ಏನೇ ಮಾಡಿದ್ರೂ ಅದ್ನ ಟೆಸ್ಟರ್ಸ್ ಸೈ ಅನ್ನದೆ ಅದು ಜೈ ಅನ್ನಲ್ಲ. ಹಂಗಾಗಿ ಅದ್ಕೂ ಈಗೀಗ ಬೆಲೆ ಬರ್ತಿದ್ಯಂತೆ ಅಂದ ಗುಂಡ. ಹೌದಂಬ್ರು ,ಸಾಪ್ಟವೇರ್ ಟೆಸ್ಟಿಂಗ್ ಜೊತೆ ಡಾಟಾ ಮೈನಿಂಗ್ ಅಂತೇನೂ ಮುಂದಿನ ಸೆಮ್ಮಲ್ಲಿ ಉಟಂತಲಾ ಅದ್ಕೂ ಭರ್ಜರಿ ಬೆಲಿ ಇತ್ತಂಬ್ರು ಅಂದ್ಲು ಸರಿತಾ ಅಲಿಯಾಸ್ ಸರಿ. ಹೌದಾ ಸರಿ ??, ನೀ ಹೇಳಿದ್ದೆಲ್ಲಾ ಸರಿ ಅಂದ ತಿಪ್ಪ. ಎಲ್ಲಾ ಮತ್ತೆ ನಕ್ರು.
ನಂಗೆ ಬಳ್ಳಾರಿ ಮೈನಿಂಗ್ ಮಾತ್ರ ಗೊತ್ತುಂಟು. ಇದೆಂತಾ ಡಾಟಾ ಮೈನಿಂಗ್ ಮಾರ್ರೆ ಅಂದ ಮಂಗ್ಳೂರು ಮಂಜ. ರಾಶಿ ಬಿದ್ದಿರೋ ಮಾಹಿತೀಲಿ ಬೇಕಾಗಿರೋ ಮಾಹಿತೀನ ಕೆದಕಿ ತೆಗ್ಯೋದು , Finding required data out of heap of data ಅಂದ್ಲು ಇಳಾ ತನ್ನತ್ರ ಇರೋ ಮಾಹಿತಿ ಮತ್ತೆ ಇಂಗ್ಲೀಷಿಗೆ ಜಂಭ ಪಡ್ತಾ. ಓ, ತಿಪ್ಪೇಲಿ ಕಸ ಆರಿಸ್ದಂಗಾ ಅಂದ ತಿಪ್ಪೇಶಿ. ಮತ್ತೆ ಗೊಳ್.. ಹೇ, ಹಂಗೆಲ್ಲಾ ಅವ್ಮಾನ ಮಾಡಬಾರ್ದು. ಅದ್ಕೆ ಎಷ್ಟು ಬೆಲೆ ಇದೆ ಗೊತ್ತಾ ಅಂದ ಗುಂಡ. ಮತ್ತಷ್ಟು ಓದು
ಯಡಿಯೂರಪ್ಪರ ಹೊಸ ಪಕ್ಷವೂ..ರಾಜ್ಯ ರಾಜಕೀಯ ಜಂಜಾಟವೂ..!
– ಶಂಶೀರ್ ಬುಡೋಳಿ
ರಾಜ್ಯ ಬಿಜೆಪಿಯ ಆಡಳಿತಾವಧಿಯ ಕಾಲಾವಧಿ ಮುಗಿಯುತ್ತಾ ಬಂದಿದೆ..ಜೊತೆಗೆ ದಿ ಗ್ರೇಟ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಬ್ಲಾಕ್ಮೇಲ್ ರಾಜಕಾರಣ ಕೂಡಾ ಹೆಚ್ಚಾಗ್ತಾ ಇದೆ. ಹಗರಣದ ಆರೋಪ ಮೈಮೇಲೆ ಬಂದಾಗ ಅನಿವಾರ್ಯವಾಗಿ ಸಿಎಂ ಪಟ್ಟದಿಂದ ಕೆಳಗಿಳಿಯುವಾಗ ಬಿಜೆಪಿ ಹೈಕಮಾಂಡ್ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆಂದು ಭರವಸೆ ನೀಡಿತ್ತೆಂದು ಹಲವಾರು ಬಾರಿ ಯಡಿಯೂರಪ್ಪರೇ ಹೇಳಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಮಾಜಿ ಸಿಎಂ ‘ಹಠ’(ಯಡಿ)ಯೂರಪ್ಪ ಬಿಜೆಪಿಯನ್ನ ತೊರೆದು ಕೆಜೆಪಿ ಎಂಬ ಸ್ವಪಕ್ಷ ಕಟ್ಟುವ ಮೂಲಕ ಬಿಜೆಪಿ ಹೈಕಮಾಂಡ್ಗೆ ಸವಾಲು ಎಸೆದಿದ್ದಾರೆ..ಅದಕ್ಕೂ ಮುನ್ನಾ ಹೈಕಮಾಂಡ್ಗೆ ತನಗೆ ಸೂಕ್ತ ಸ್ಥಾನಮಾನ ನೀಡುವುದರ ಬಗ್ಗೆ ಬೇಗ ಯೋಚಿಸಿ ಅಂತಾ ಎಚ್ಚರಿಕೆ ಕೊಟ್ಟು ತಾನೇ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನ ಆಡಳಿತಕ್ಕೆ ತಂದಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಯಡಿಯೂರಪ್ಪಗೆ ಮಾನ ಮರ್ಯಾದೆ ಎನ್ನುವುದು ಇಲ್ಲವೇ..?
ಮಾಜಿ ಸಿಎಂ ಯಡಿಯೂರಪ್ಪನವರು ಬಿಜೆಪಿ ಹೈಕಮಾಂಡ್ನಿಂದ ಮುನಿಸಿಕೊಂಡು ಪ್ರತ್ಯೇಕ ಪಕ್ಷವನ್ನ ಕಟ್ಟುವ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ನಿಜಕ್ಕೂ ಇದು ರಾಜ್ಯ ರಾಜಕೀಯದಲ್ಲಿ ಹೊಸ ಶಕೆಯನ್ನ ಆರಂಭಿಸಲಿದೆಯೇ..? ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉತ್ತರ ನಿಜಕ್ಕೂ ಇಲ್ಲ..ಯಾವ ಯಡಿಯೂರಪ್ಪ ತಾನು ಬಿಜೆಪಿಯಿಂದಲೇ ಬೆಳೆದು ಬಂದಿರುವುದನ್ನೇ ಮರೆತುಕೊಂಡು ತಾನು ಕುಣಿಸಿದ ಹಾಗೇ ಶೆಟ್ಟರ್ ಹಾಗೂ ಹೈಕಮಾಂಡ್ ಆಡಿಲ್ಲವೆಂದು ಮುನಿಸಿಕೊಂಡು ಅದಕ್ಕಿಂತಲೂ ಹಠ ಮಾಡಿಕೊಂಡು ಹೊಸ ಪಕ್ಷ ಕಟ್ಟುವುದಕ್ಕೆ ಮುಂದಾಗಿದ್ದು ಇವರ ಮೂರ್ಖತನಕ್ಕೊಂದು ಸಾಕ್ಷಿ. ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಶ್ರೀರಾಮುಲು ‘ಬಿಎಸ್ಆರ್’ ಪಕ್ಷವನ್ನು ಸ್ಥಾಪನೆ ಮಾಡಿದ ವೇಳೆ ರಾಜ್ಯದಲ್ಲಿ ಬದಲಾವಣೆ ಆಗುತ್ತದೆಂದು ಭಾವಿಸಲಾಗಿತ್ತು. ಆದರೆ ಇಂದು ಈ ಪಕ್ಷ ಪ್ರಾಥಮಿಕ ಮಟ್ಟದಿಂದಲೇ ಬೇರೂರಲು ಇನ್ನು ಸಾಧ್ಯವಾಗಿಲ್ಲ. ಇನ್ನು ರಾಜ್ಯ ಬಿಜೆಪಿ ಹಾಗೂ ಯಡಿಯೂರಪ್ಪರ ವಿಷಯಕ್ಕೆ ಬರುವುದಾದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಮನದಲ್ಲಿ ಏನೇನೋ ಇದೆ..ಮಾತು ಮೊದಲೇ ಹೇಳಿಬಿಡಲು ಕಾರಣನೂ ಇದೆ. ‘ನಾನು ಪಕ್ಷ ಬಿಟ್ಟು ಹೋಗುತ್ತಿದ್ದೇನೆ. ಯಾರಿಗೆ ಬೇಕಾಗಿದೆ ಬಿಜೆಪಿ. ನನಗೆ ಮಾಡಿದ ಅಪಮಾನಕ್ಕಾಗಿ ಪಕ್ಷ ಬಿಡುತ್ತಿದ್ದೇನೆ’ ಎಂದು ತಾನು ಬೆಳೆದು ಬಂದ ಪಕ್ಷದ ವಿರುದ್ಧನೆ ಇತ್ತೀಚಿಗಷ್ಟೇ ಶಿವಮೊಗ್ಗದಲ್ಲಿ ಹೇಳಿಕೆ ನೀಡಿ ತಾನಿಲ್ಲದೇ ಬಿಜೆಪಿ ಪಕ್ಷ ರಾಜ್ಯದಲ್ಲಿರಲು ಸಾಧ್ಯನೇ ಇಲ್ಲ ಅಂತಾ ಫೋಸು ಕೊಡುತ್ತಿರುವ ಯಡಿಯೂರಪ್ಪರ ಮೊಸಳೆ ಕಣ್ಣೀರು ಜನರಿಗೆ ಅರ್ಥವಾಗಲ್ಲವೇ..? ಮತ್ತಷ್ಟು ಓದು
ಸ್ವಾಮಿ ವಿವೇಕಾನಂದರ ಪದತಳದಲ್ಲಿ ಅರಳಿದ ಕುಸುಮ ಭಗಿನಿ ನಿವೇದಿತಾ
– ಶ್ರೀವಿದ್ಯಾ,ಮೈಸೂರು
ಇಂದು ನಮ್ಮ ಸೋದರಿ ನಿವೇದಿತಾ ಅವರ ಜನ್ಮದಿನ. ನಿವೇದಿತಾ ಅವರ ಜೀವನವನ್ನು ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದವರು. ಉದಾರ ಮನಸ್ಸು ಅವರದ್ದು. ಸ್ವಾಮಿ ವಿವೇಕಾನಂದರ ಭವ್ಯ ಭಾರತದ ಕನಸ್ಸನ್ನು ನನಸಾಗಿಸಲು ಸಾಕಷ್ಟು ಪ್ರಯತ್ನಿಸಿದರು. ಆ ಕಾಲದಲ್ಲಿ ಮಹಿಳೆಯರಿಗೆಶಾಲೆಗಳು ಇರಲಿಲ್ಲ. ಜ್ಞಾನವೂ ಕಡಿಮೆಯಿತ್ತು. ಆದರೆ, ಈ ಕಾಲದಲ್ಲಿ ನೋಡಿ, ಎಷ್ಟೋ ಮಹಿಳೆಯರು ವಿದ್ಯಾವಂತರಾಗಿ ಜೀವನ ನಡೆಸುತ್ತಿರುವರು.ಇದೆಲ್ಲಾ ನಿವೇದಿತಾ ಅವರ ಪರಿಶ್ರಮದಿಂದ ! ನಿವೇದಿತಾ ಅವರು ಮನೆ ಮನೆಗಳಿಗೆ ಹೋಗಿ ಮನವೊಲಿಸಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಜಾಗೃತಿ ಮೂಡಿಸಿ ಅನೇಕ ಶಾಲೆಗಳನ್ನು ಕಟ್ಟಿಸಿದರು. ಅಲ್ಲದೇ, ಪ್ಲೇಗ್ ರೋಗ ಬಂದಿದ್ದಾಗ ಜನರ ಸೇವೆ ಮಾಡಿದರು. ಅವರು ಅಸಾಮಾನ್ಯ ಮಹಿಳೆ. ಅವರ ದೇಶವನ್ನು ಬಿಟ್ಟು ಬಂದಾಗಲೂ ಅವರ ಮನಸ್ಸಿನಲ್ಲಿ ಅವರ ದೇಶದ ಜನರು ಅವರನ್ನು ದೂರವಿಡುತ್ತಾರೆಂದು ಹಿಂಸೆ, ನೋವಾಗುತ್ತಿತ್ತು. ಆದರೂ, ಭಾರತ ದೇಶಕ್ಕೆ ಅದೆಲ್ಲ ತ್ಯಾಗ ಮಾಡಿದ್ದು ಅವರ ಪ್ರೀತಿ, ಗೌರವ ದೊಡ್ಡದು ಅಲ್ಲವೇ ? ಅವರು ನಮ್ಮವರೇ ಎಂದು ಅವರ ಜನ್ಮದಿನವನ್ನು ನೆನೆಸಿಕೊಂಡು ಆಚರಿಸೋಣ
ಅವರ ಜೀವನವನ್ನು ತಿಳಿಸುತ್ತಿದ್ದೇನೆ…
೧೮೬೭ರ ಅಕ್ಟೋಬರ್ ೨೮ರಂದು ಮಾರ್ಗರೆಟ್ ಎಲಿಜಬೆತ್ ನೊಬೆಲ್(ನಿವೇದಿತಾ) ಐರ್ಲೆ೦ಡಿನಲ್ಲಿ ಹುಟ್ಟಿದಳು.ತಾಯಿ ಮೇರಿ ಇಸಬೆಲ್, ತಂದೆ ಸಾಮ್ಯುಅಲ್. ಐರ್ಲೆ೦ಡಿನಲ್ಲಿ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆದಿದ್ದಾಗ ಅವಳ ಅಜ್ಜ ಹ್ಯಾಮಿಲ್ಟನ್ ಭಾಗವಹಿಸಿ, ಮನೆಮಾತಾಗಿದ್ದರು. ತಮ್ಮ ಅಜ್ಜನಿಂದ ಅಪಾರವಾದ ಧೈರ್ಯ ಮತ್ತು ದೇಶಭಕ್ತಿ, ಧರ್ಮಗುರುವಾದ ತಂದೆಯಿಂದ “ಮಾನವ ಸೇವೆಯೇ ಭಗವಂತನ ಸೇವೆ” ಎಂಬ ಆದರ್ಶಗಳನ್ನು ಬಾಲ್ಯದಿಂದಲೇ ಅವಳು ರೂಢಿಸಿಕೊಂಡಿದ್ದಳು. ಅಷ್ಟೇ ಅಲ್ಲ, ದಾಷ್ಟ್ರಭಕ್ತಿ, ದೈವಭಕ್ತಿ ಜೊತೆಯಾಗಿ ಅವಳ ಹೃದಯದಲ್ಲಿ ಬೆಳೆದವು. ದುಃಖದಲ್ಲಿರುವವರನ್ನು ಅನುಕಂಪದಿಂದ ಕಾಣುವ ಗುಣ ಬೆಳೆದವು. ಶಾಲೆಯಲ್ಲೂ ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದಳು. ರಗ್ಬಿ ಎನ್ನುವ ಸ್ಥಳದಲ್ಲಿ ಹೆಣ್ಣುಮಕ್ಕಳ ಉಚಿತ ಅನಾಥಾಲಯದಲ್ಲಿ ಒಂದು ವರ್ಷ ಕೆಲಸ ಮಾಡಿದಳು. ನಂತರ, ರೆಕ್ಸ್ ಹಾಮ್ ಎನ್ನುವ ಗಣಿಕೇಂದ್ರದಲ್ಲಿದ್ದ ಸೆಕೆಂಡರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡಿದಳು. ಸಮಾಜ ಸೇವಕಿಯಾಗಿಯೂ ಕೆಲಸ ಪ್ರಾರಂಭಿಸಿದಳು.೧೮೯೨ರಲ್ಲಿ ತನ್ನದೇ ಸ್ವಂತ ಶಾಲೆಯನ್ನು ಪ್ರಾರಂಭಿಸಿದಳು. ಈ ಶಾಲೆ ಬಹುಬೇಗ ಜನಪ್ರಿಯವಾಯಿತು. ಅವಳು ಮದುವೆಯಾಗಬೇಕು ಎನ್ನುವ ಹಂತದಲ್ಲಿ ಮದುವೆ ಮುರಿದುಬಿತ್ತು. ೧೮೯೫, ಮಾರ್ಗರೆಟ್ ಸ್ವಾಮಿ ವಿವೇಕಾನಂದರನ್ನು ಕಂಡ ವರ್ಷ. ಅದು ಅವಳ ಜೀವನದ ದಿಕ್ಕನ್ನೇ ಬದಲಾಯಿಸಿದ ಮಹತ್ವದ ವರ್ಷ. ಈ ಭೇಟಿಯ ನಂತರ ಅವಳು ಸ್ವಾಮೀಜಿಯ ಮಾತು-ಬರಹಗಳನ್ನು ಮತ್ತೆ-ಮತ್ತೆ ಓದಿದಳು. ಭಾರತೀಯ ತತ್ವಶಾಸ್ತ್ರ, ಉಪನಿಷತ್ತು, ಭಗವದ್ಗೀತೆಯನ್ನು ಅಧ್ಯಯನ ಮಾಡಿ ಚರ್ಚೆ ಮಾಡಿದಳು. ಕ್ರಮೇಣ ಅವಳ ಸಂಶಯಗಳೆಲ್ಲ ದೂರವಾದವು. ವಿವೇಕಾನಂದರು ಭಾರತದ ಬಡಮಕ್ಕಳ, ಸ್ತ್ರೀಯರ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಕುರಿತು ಮಾತನಾಡುತ್ತಿರುವಾಗ ಮಾರ್ಗರೆಟ್ ” ನಾನು ಸಿದ್ಧಳಾಗಿದ್ದೇನೆ, ಆ ಕೆಲಸ ಮಾಡುತ್ತೇನೆ” ಎಂದಳು.
ಮತ್ತಷ್ಟು ಓದು
ದೆಹಲಿಗೂ ಹರಿಯಲಿ ಕಾವೇರಿ; ಇಲ್ಲದೇ ಹೋದರೆ ಸೋಲುವಿರಿ
-ರಾಕೇಶ್ ಎನ್ ಎಸ್
ಗಂಗಾ, ಯಮುನಾ ನದಿಗಳ ಹೆಸರು ಕೇಳಿದರೆ ನಿಮಗೆ ಯಾವುದಾದರೂ ರಾಜ್ಯದ ನೆನಪು ಆಗುತ್ತದೆಯೇ ಎಂದು ಹಿರಿಯ ಪತ್ರಕರ್ತರೊಬ್ಬರು ಕೇಳಿದರು. ನಾನು ಅವಾಕ್ಕಾದೆ. ಗಂಗಾ ನದಿಯೂ ಉತ್ತರಾ ಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಗಳಲ್ಲಿ ಜೀವ ನದಿಯಾಗಿ ಹರಿಯುತ್ತದೆ. ಉತ್ತರಾ ಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿಗಳಿಗೆ ಯಮುನೆಯ ಜೀವದಾಯಿ. ಮಾತು ಮುಂದುವರಿಸಿದ ಅವರು ನನಗೆ ಕಾವೇರಿ ಅಂದರೆ ತಮಿಳುನಾಡಿನ ನೆನಪಾಗುತ್ತದೆ ಎಂದರು. ಹೌದು, ಕಾವೇರಿ ನದಿ ಸಂಪೂರ್ಣವಾಗಿ ತಮಿಳುನಾಡಿಗೆ ಸೇರಿದಾಗಿದ್ದು, ಕರ್ನಾಟಕ ಸುಮ್ಮನೆ ಕಿರಿಕ್ ಮಾಡುತ್ತಿದೆ ಎಂಬ ಭಾವನೆ ಕರ್ನಾಟಕದ ಹೊರಗೆ ಮಡುಗಟ್ಟಿದೆ ಎಂಬುದನ್ನು ಅವರು ನನಗೆ ಸೂಚ್ಯವಾಗಿ ಮನದಟ್ಟು ಮಾಡಿಕೊಟ್ಟಿದ್ದರು.

ಬಿಜೆಪಿಯ ಅಪಸ್ವರಕ್ಕೆ ‘ಆರ್.ಎಸ್.ಎಸ್’ನದ್ದೇ ಟ್ಯೂನ್
– ರಾಕೇಶ್ ಶೆಟ್ಟಿ
ಅಂದು ಪಾಕಿಸ್ತಾನದ ನೆಲದಲ್ಲಿ ನಿಂತು “ಜಿನ್ನಾ ಜಾತ್ಯಾತೀತರಾಗಿದ್ದರು” ಅನ್ನುವ ಸತ್ಯ ಹೇಳಿದ್ದೆ ಆ ಹಿರಿಯ ಮಾಡಿದ ದೊಡ್ಡ ತಪ್ಪು(!).ಆ ಒಂದು ಮಾತು ಅವರು ಅಲ್ಲಿವರೆಗೂ ದೇಶದ ಮೂಲೆ ಮೂಲೆಗೆ ಹೋಗಿ ಅವರು ಪಕ್ಷಕಟ್ಟಲು ಪಟ್ಟ ಶ್ರಮ,೨ ಸೀಟಿನಿಂದ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಪಕ್ಷ ಸಾಗಿ ಬಂದ ಹಾದಿಯಲ್ಲಿ ಅವರು ವಹಿಸಿದ ಜವಬ್ದಾರಿ ಎಲ್ಲವನ್ನು ಮರೆಸಿಹಾಕಿತ್ತು.ಧುತ್ತನೆ ಅವರ ಮಾತೃ ಸಂಘಟನೆಗೆ ಈ ಹಿರಿಯ ನಾಯಕ ಮತ್ತು ಮುಂದಿನ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿಯಾಗಿದ್ದವರಿಗೆ ವಯಸ್ಸಾಯಿತು ಅನ್ನುವ ಜ್ನಾನೋದಯ ಅರ್ಧ ರಾತಿಯಲ್ಲಿ ಆಗಿಬಿಟ್ಟಿತ್ತಲ್ಲ,ಅಷ್ಟೇ ಸಾಕಿತ್ತು ಅವಮಾನಕಾರಿಯಾಗಿ ಅವರನ್ನು ಪಕ್ಕಕ್ಕೆ ತಳ್ಳಿ,ಅಲ್ಲಿಯವರೆಗೂ ಮಹಾರಾಷ್ಟ್ರ ಬಿಟ್ಟು ಹೊರಗೆ ಹೆಸರೇ ಕೇಳಿರದ ‘ಯುವ ನಾಯಕ(?)’ ನನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ಇವತ್ತಿಗೆ ‘ಆ ಹಿರಿಯ’ರನ್ನು ಮರೆತು ಮುಂದೆ ಹೋದ ಆ ಪಕ್ಷದ ಪಾಡು, ಅಹಂಕಾರದಿಂದ ಕೃಷ್ಣ ಪರಮಾತ್ಮನನ್ನು ಬಿಟ್ಟು ಬಿಲ್ವಿದ್ಯೆ ಮರೆತು ನಿಂತ ‘ಅರ್ಜುನ’ನಂತೆಯೇ ಆಗಿದೆ.ಕೂದಲು ಬೆಳೆಯೋ ಜಾಗವೆಲ್ಲ ತಲೆ ಅಂದುಕೊಂಡವರಂತೆ ಆ ಪಕ್ಷದಲ್ಲಿರುವ ಜನರೆಲ್ಲಾ ತಾವೇ ‘ಪ್ರಧಾನಿ ಅಭ್ಯರ್ಥಿ’ಗಳು ಅಂದುಕೊಂಡಿದ್ದಾರೆ.ಅಂದ ಹಾಗೆ,ಆ ಹಿರಿಯರ ಹೆಸರು ಲಾಲ್ ಕೃಷ್ಣ ಅಡ್ವಾಣಿ,ಪಕ್ಷ ಬಿಜೆಪಿ,ಮಾತೃ ಸಂಘಟನೆಯ ಹೆಸರು ‘ಆರ್.ಎಸ್.ಎಸ್’ ಮತ್ತೆ ಆ ಯುವನಾಯಕ(?) ಮೊನ್ನೆ ಮೊನ್ನೆ ತಾನೇ ಎಕರೆಗಟ್ಟಲೆ ರೈತರ ಜಮೀನು ಸ್ವಾಹ ಮಾಡಿದ್ದಾರೆ ಅನ್ನುವ ಆರೋಪ ಹೊತ್ತ ನಿತಿನ್ ಗಡ್ಕರಿ.
ತುಳು ಭಾಷೆ ಎಡ್ಮನೇ ಪರಿಚ್ಚೇದೊಡಿಜ್ಜಿ…!
-ಲೋಕು ಕುಡ್ಲ


ಇಂಗ್ಲೀಷ್ ಭಾಷೆಯ ದಾಳಿಯಿಂದ ಸೊರಗುತ್ತಿರುವ ಇನ್ನಿತರ ಭಾಷೆಗಳು – ಇಂಗ್ಲೀಷ್ ವಿಂಗ್ಲೀಷ್
– ರೂಪಲಕ್ಷ್ಮಿ

ಏಕ್ ಥಾ ಟೈಗರ್…! ಅವನೊಬ್ಬನಿದ್ದ ನಮ್ಮ ಸಳ…!
– ಚರಿತ್ರ ಕುಮಾರ್
ಮಲೆನಾಡಿನ ಒಂದು ಹಳ್ಳಿ. ಗುರುವೊಬ್ಬ ಶಿಷ್ಯರನ್ನು ಕೂರಿಸಿಕೊಂಡು ಬಯಲಲ್ಲಿ ಪಾಠ ಹೇಳಿಕೊಡುತ್ತಿದ್ದ. ತನ್ಮಯನಾಗಿದ್ದ ಗುರು. ಆಲಿಸುತ್ತಾ ಮನನಮಾಡಿಕೊಳ್ಳುತ್ತಿದ್ದ ಶಿಷ್ಯರು. ವಿದ್ಯೆಯನ್ನು ಪರಿಕಿಸಲೋ ಅಥವಾ ಶಿಷ್ಯರನ್ನು ಅಳೆಯಲೋ ಅಥವಾ ಗುರುವಿನ ಮಟ್ಟವನ್ನು ತಿಳಿಯಲೋ ಎಂಬಂತೆ ವ್ಯಾಘ್ರವೊಂದು ಘರ್ಜಿಸುತ್ತಾ ಬಂತು. ಎಂಥಾ ಗುರು-ಶಿಷ್ಯರೂ ಒಮ್ಮೆ ಅವಕ್ಕಾಗುವ ಸಮಯ. ಗುರುವಿನ ಬಾಯಿಂದ ಬಂದಿದ್ದು ಒಂದೇ ಒಂದು ಮಾತು “ಹೊಯ್-ಸಳ” . ಸಳ ಎಂಬವನು ಶಿಷ್ಯ. ಆತ ನೆಚ್ಚಿನ ಶಿಷ್ಯನೇ ಇರಬೇಕು. ಆತ ಕತ್ತಿ ಹಿರಿಯಲಿಲ್ಲ. ಬಾಣ ಹೂಡಲಿಲ್ಲ. ಬಯಲಲ್ಲಿ ಗುರುಸಮ್ಮುಖದಲ್ಲಿ ಪಾರಾಯಣ ಮಾಡುತ್ತಿದ್ದವನಿಗೆ ಗುರುವಾಕ್ಯವೇ ಆಯುಧಕ್ಕಿಂತ ವೊನಚಾಯಿತು. ಸಳ ಬರಿಗೈಯಲ್ಲೇ ಕಾದ. ಗುರುವಾಕ್ಯ ಪೂರೈಸಿತು. ಹುಲಿ ಅಸುನೀಗಿತು. ಹೊಯ್ ಸಳ ಎಂದಿದ್ದ ಗುರುವೇ ಈಗ “ಭಲೇ ಸಳ” ಎಂದ. ಮುಂದೆ ಗುರುವಾಕ್ಯಬಲದಿಂದಲೇ ಯುವಕ/ಬಾಲಕ ಸಳ ರಾಜ್ಯ ಕಟ್ಟಿದ, ಆಳಿದ. ವಿದ್ಯೆಯ ಬಲ, ಗುರುವಿನ ಬಲ ಮತ್ತು ಶಿಷ್ಯನ ಅಂತಶಕ್ತಿಗೆ ಇವೆಲ್ಲಾ ಘಟನೆಗಳು ಸಾಕ್ಷಿಗಳಾಗಿ ನಿಲ್ಲುತ್ತವೆ. ಇದು ಕನ್ನಡದ ಇತಿಹಾಸದಲ್ಲಿ ದಾಖಲಾಗುವ ಮಹತ್ತರ ಪ್ರಸಂಗ. ಸ್ವಶಕ್ತಿಯಿಂದ , ಸ್ವಚಿಂತನೆಯಿಂದ ಸಾಮ್ರಾಜ್ಯವೊಂದು ಮೈದಾಳಿದ ಕಥೆ. ಹೀಗೆ ಕರ್ನಾಟಕ ಮರೆಯಲಾಗದ, ಸುವರ್ಣಯುಗವನ್ನು ಕಂಡ ಹೊಯ್ಸಳ ಸಾಮ್ರಾಜ್ಯಮುಂದೆ ಹಲವು ವೈಭವಗಳನ್ನು ಕಂಡಿತು. ಕನ್ನಡದ ಹಲವು ಕುರುಹುಗಳನ್ನು ಬಿಟ್ಟುಹೋಯಿತು. ಕರ್ನಾಟಕ ಶಿಲ್ಪ ಕಲೆಗಳ ಬೀಡಾಯಿತು. ಭೂಲೋಕದ ಸ್ವರ್ಗ ಎಂದು ಕವಿಗಳು ವರ್ಣಿಸುವಂತಾಯಿತು. ಕರ್ನಾಟಕ ನಾಟ್ಯ ಕಲೆಗಳ ನಾಡಾಯಿತು. ಸರ್ವಧರ್ಮ ಸಮನ್ವಯದ ನೆಲೆಯಾಯಿತು. ದ್ವಾರಸಮುದ್ರದ ಹೊಯ್ಸಳರು ಗಡಿಯಾಚೆಗಿನ ರಾಜರೊಂದಿಗೂ ಕಾದಾಡಿ ಕನ್ನಡದ ಹಿರಿಮೆಯನ್ನು ಸಾರಿದರು. ಆಧುನಿಕ ಪರಿಭಾಷೆಯಲ್ಲಿ ಹೇಳಬೇಕೆಂದರೆ ಕನ್ನಡದ ಮನಸ್ಸನ್ನು ಪ್ರಬಲವಾಗಿ ರೂಪಿಸಿದವರೇ ಹೊಯ್ಸಳರು. ಕರ್ನಾಟಕದಲ್ಲಿ ಶಿವ ದೇವಾಲಯಗಳು ಪ್ರಸಿದ್ಧವಾಗಿದ್ದೇ ವೈಷ್ಣವರಾಗಿದ್ದ ಹೊಯ್ಸಳರ ಕಾಲದಲ್ಲಿ ಎಂಬುದು ಇಂದಿನ ಕಾಲಮಾನದಲ್ಲೂ ಸೋಜಿಗ ಹುಟ್ಟಿಸುವ ಸಂಗತಿ.
ಇಂಥ ಎಷ್ಟೋ ಸಂಗತಿಗಳನ್ನು ಇತಿಹಾಸದ ಪುಟಗಳು ವಿವರಿಸುತ್ತಾ ಹೋಗುತ್ತವೆ. ಆ ಸಂಗತಿಗಳೆಲ್ಲವೂ ಹುಲಿಕೊಂದ ಸಳನ ವಂಶದ ವೈಭವಗಳು-ಕೊಡುಗೆಗಳು. ಇಷ್ಟೊಂದು ವೈಭವಶಾಲಿ, ಪರಾಕ್ರಮಶಾಲಿ,ಪರಿಶ್ರಮಶಾಲಿ ಸಾಮ್ರಾಜ್ಯಕ್ಕೆ ಬೀಜ ಹಾಕಿದ ಸಳ ನಿಜವಾದ ಕರ್ನಾಟಕದ ಹುಲಿ. ಪರಾಕ್ರಮದಲ್ಲಿ, ಗುರುವಾಕ್ಯ ಪರಿಪಾಲನೆಯಲ್ಲಿ , ಹಿಡಿದ ಸಂಗತಿಯನ್ನು ಪಾಲಿಸುವುದರಲ್ಲಿ , ಧರ್ಮ ಕಾರ್ಯದಲ್ಲಿ ,ಪರೋಪಕಾರದಲ್ಲೂ ಆತ ಹುಲಿ. ಅವನೊಬ್ಬನಿದ್ದ ಹುಲಿ. ಏಕ್ ಥಾ ಟೈಗರ್. ಹುಲಿ ಎಂದು ಕರೆದರೆ ಇವನನ್ನೇ ಕರೆಯಬೇಕು ಎಂಬ ಗುಣಲಕ್ಷಣ, ವ್ಯಕ್ತಿತ್ವವನ್ನು ಹೊಂದಿದ್ದ ಸಳ ರಾಜ್ಯ ಕಟ್ಟದೆ ಇನ್ನಾರು ಕಟ್ಟಿಯಾರು? ಆತನನ್ನಲ್ಲದೆ ಇನ್ನಾರನ್ನು ತಾನೇ ಹುಲಿ ಎಂದು ಕರೆಯಲಾದೀತು?