ಎರಡು ಹೇಳಿಕೆಗಳು ಮತ್ತು ಇಬ್ಬಗೆ ನೀತಿಗಳು
– ರಾಕೇಶ್ ಶೆಟ್ಟಿ
* ಹೇ ಹಿಂದುಸ್ಥಾನ್,ನೀವು 100 ಕೋಟಿ ಜನಗಳು ಇದ್ದೀರಿ ಅಲ್ವಾ? ನಾವು 25 ಕೋಟಿ ಇದ್ದೀವಿ ಅಲ್ವಾ? ಹದಿನೈದು ನಿಮಿಷಗಳ ಕಾಲ ಪೋಲಿಸರನ್ನು ಪಕ್ಕಕ್ಕೆ ಕೂರಿಸಿ ನಮ್ಮ ತಾಕತ್ತು ತೋರಿಸುತ್ತೇವೆ.
* ಅರೆ,ಯಾವ ಮೋದಿ?ಎಲ್ಲಿಯ ಮೋದಿ? ಅವನಿಗೆ ಧೈರ್ಯವಿದ್ದರೆ ಹೈದರಾಬಾದ್ ಗೆ ಒಂದು ಬಾರಿ ಬಂದು ಹೋಗಲು ಹೇಳಿ.
* ನಾವು ಇಲ್ಲಿಂದ ಹೋಗುವುದಾದರೆ ತಾಜ್ ಮಹಲ್,ಚಾರ್ಮಿನಾರ್ ಎಲ್ಲವನ್ನೂ ಜೊತೆಗೆ ಕೊಂಡೊಯ್ಯುತ್ತೇವೆ,ಕಡೆಗೆ ಉಳಿಯುವುದು ಮುರುಕಲು ರಾಮ ಮಂದಿರವೊಂದೆ.
ಹೇಗಿದೆ ಮೇಲಿನ ವಾಕ್ಯಗಳು? ಓದಿದರೆ ಮೈ ಉರಿಯುವಂತೆ ಇದೆಯಲ್ಲವೇ? ಇದೆಲ್ಲ ವಾರದ ಹಿಂದೆ ಹೈದರಾಬಾದ್ ನಲ್ಲಿ MIM ಪಕ್ಷದ ಶಾಸಕ ಅಕ್ಬರುದ್ದೀನ್ ಒವೈಸಿ ಮಾಡಿದ ಕೋಮು ದ್ವೇಷದ ಕಿಡಿ ಹಚ್ಚುವ ಭಾಷಣದ ಕೆಲವೇ ಕೆಲವು ವಾಕ್ಯಗಳಷ್ಟೇ. ಸುಮಾರು 45 ನಿಮಿಷಗಳಷ್ಟಿರುವ ಆ ಇಡಿ ಭಾಷಣದ ತುಂಬಾ ಇರುವುದು ದ್ವೇಷ ಹುಟ್ಟಿಸುವ,ಬೆಂಕಿ ಹಚ್ಚುವಂತ ಇಂತ ಮಾತುಗಳೇ.ಈ ಮೇಲಿನ ವಾಕ್ಯಗಳಲ್ಲಿ ನಿಮಗೆ ಬೆಂಕಿ ಹಚ್ಚುವಂತದ್ದು ಏನು ಕಾಣದಿದ್ದರೆ,ಬಹುಷಃ ಒವೈಸಿಯ ಉರ್ದು ಮಿಶ್ರಿತ ಹಿಂದಿ ಭಾಷಣವನ್ನು ಅನುವಾದ ಮಾಡುವಲ್ಲಿ ನಾನು ಸೋತಿದ್ದೇನೆ ಅಷ್ಟೇ ಹೊರತು ಅವನ ಭಾಷಣ ತಂಪಾಗಿರಲಿಲ್ಲ.ಒವೈಸಿಯ ಭಾಷಣವನ್ನು ಕೇಳಿ ಉನ್ಮತ್ತರಾದವರು ಏನೆಲ್ಲಾ ಮಾಡಬಹುದು ಅನ್ನುವ ಸ್ಯಾಂಪಲ್ ಬೇಕು ಅನ್ನಿಸಿದರೆ 2012ರ ಆಗಸ್ಟ್ ತಿಂಗಳಲ್ಲಿ ,ಮುಂಬೈನ ಆಜಾದ್ ಮೈದಾನದಲ್ಲಿ ಏನಾಗಿತ್ತು ಅನ್ನುವುದನ್ನೊಮ್ಮೆ ನೆನಪಿಸಿಕೊಳ್ಳಿ.ಅಂದ ಹಾಗೆ ಈ ಅಕ್ಬರ್ ಒವೈಸಿ ಯಾರು ಗೊತ್ತಾ,ಈ ದೇಶದ ಸಂಸತ್ತಿನಲ್ಲಿ ನಿಂತು “ಕೇಂದ್ರ ಸರ್ಕಾರಕ್ಕೆ,ಇಲ್ಲಿರುವ ಸಂಸದರಿಗೆ ನಾನು ಎಚ್ಚರಿಕೆ ಕೊಡುತಿದ್ದೇನೆ,ಒಂದು ವೇಳೆ ಅಸ್ಸಾಂ ಗಲಭೆಯ ಮುಸ್ಲಿಂ ನಿರಾಶ್ರಿತರಿಗೆ ಸರಿಯಾದ ಪರಿಹಾರ ಸಿಗಲಿಲ್ಲವಾದರೆ, ಮುಸ್ಲಿಂ ಯುವಕರು ಮುಲಭೂತವಾದಿಗಳಾಗುವುದನ್ನು ನೋಡಬೇಕಾಗುತ್ತದೆ’ ಅಂತ ಬೆದರಿಕೆ ಹಾಕುವಂತ ಭಾಷಣ ಮಾಡಿದ್ದ ಅಸಾದುದ್ದೀನ್ ಒವೈಸಿಯ ತಮ್ಮ.
ಎಲ್ಲವೂ ಹೇಡಿತನದ ಪರಮಾವಧಿಯೇ!?
– ಚಕ್ರವರ್ತಿ ಸೂಲಿಬೆಲೆ
ಇಂದು ಹದಿನೈದು ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನು ನಾಶ ಮಾಡಿಬಿಡುತ್ತೇವೆ ಎನ್ನುತ್ತಾನಲ್ಲ ಓವೈಸಿ, ಅವತ್ತು ಗಾಂಧೀಜಿ ಮೂವತ್ತು ಸೆಕೆಂಡು ಸುಮ್ಮನಿದ್ದುಬಿಟ್ಟಿದ್ದರೆ, ಹಿಂದೂಸ್ಥಾನದಲ್ಲಿ ಹೇಡಿ ಹಿಂದುಗಳು ಮಾತ್ರ ಉಳಿದಿರುತ್ತಿದ್ದರು.
ಮಿತ್ರ ತನ್ವೀರ್ ಮಡಿಕೇರಿಯಲ್ಲೊಮ್ಮೆ ಕೇಳಿದ್ದರು, ’ಹಿಂದುಗಳು ಸಂಖ್ಯೆಯಲ್ಲಿ ಹೆಚ್ಚಿದ್ದೀರಿ. ಅಣ್ಣನಂತೆ ನೀವು. ಸ್ವಲ್ಪ ಕೈಗಳನ್ನು ಅಗಲಿಸಿ ಅಪ್ಪಿಕೊಳ್ಳುವ ಪ್ರೀತಿ ತೋರಿದರೆ ನಾವು ಓಡಿಬಂದು ಅಪ್ಪಿಕೊಂಡು ಬಿಡುತ್ತೇವೆ. ನೀವೇಕೆ ಅಷ್ಟು ವಿಶಾಲವಾಗಲಾರಿರಿ?’ ಎಂದು.
’ನಾವು ಬಾಹುಗಳನ್ನು ಅಗಲಿಸಿಕೊಂಡೇ ನಿಂತಿದ್ದೇವೆ. ಮೊದಲೆಲ್ಲ ಬಂದು ಬಂದು ತಬ್ಬಿಕೊಳ್ಳುತ್ತಿದ್ದ ನೀವೇ ಈಗ ದೂರ ನಿಲ್ಲಲು ಶುರು ಮಾಡಿದ್ದೀರಿ; ನಿಮ್ಮ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆಯಲ್ಲ, ಅದಕ್ಕೆ. ನಾವೇನೋ ಅಂದಿಗೂ ಇಂದಿಗೂ ಅಣ್ಣನ ಸ್ಥಾನದಲ್ಲೇ ಇದ್ದೇವೆ. ಆದರೆ ನೀವು ಮಾತ್ರ ತಮ್ಮನ ಸ್ಥಾನವನ್ನು ತೊರೆಯುತ್ತಿದ್ದೀರಿ. ನಮ್ಮೊಡನೆ ಬೆರೆಯಲು ಹಿಂದೇಟು ಹಾಕುತ್ತಿದ್ದೀರಿ’ ಎಂದೆ. ಏನನ್ನಿಸಿತೋ ಏನೋ ತನ್ವೀರ್ ನಕ್ಕು ಸುಮ್ಮನಾಗಿಬಿಟ್ಟರು.
ಇಸ್ಲಾಮ್ ಈ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಂಥ. ಅದರಲ್ಲಿ ಎರಡು ಮಾತೇ ಇಲ್ಲ. ಈ ಕಾರಣದಿಂದಲೇ ವ್ಯಾಟಿಕನ್ನ ಕ್ರಿಸ್ತ ಪಡೆ ಬೆಚ್ಚಿ ಕುಳಿತಿದೆ. ಹೀಗಾಗಿಯೇ ಇಸ್ಲಾಮ್ ರಾಷ್ಟ್ರಗಳ ನಡುವೆ ಕದನ ತೀವ್ರಗೊಳಿಸಿ ಸಂಖ್ಯೆ ಕಡಿಮೆ ಮಾಡುವ ಹುನ್ನಾರವನ್ನು ಅದು ಮಾಡುತ್ತಲೇ ಇದೆ. ಬಹುಶಃ ಸಾವಿರಾರು ವರ್ಷಗಳಿಂದ ಹೀಗೆ ಎತ್ತಿಕಟ್ಟುವ ಕೆಲಸ ಮಾಡಿದ್ದರಿಂದಲೋ ಏನೋ ಇಂದು ಚಿಂತನಶೀಲ ಕ್ರಿಸ್ತ ಸಮಾಜ, ಚಿಂತನಿಗೆ ಅವಕಾಶವೇ ಇಲ್ಲದ ಇಸ್ಲಾಮಿನತ್ತ ಹೊರಳಿಕೊಳ್ಳಲು ಆರಂಭಿಸಿದೆ.
ಅದೆಲ್ಲ ಬಿಡಿ, ಈಗ ಪ್ರಶ್ನೆ ಅಕ್ಬರುದ್ದಿನ್ ಓವೈಸಿಯದು. ಹೈದರಾಬಾದಿನ ನಟ್ಟನಡುವೆ ನಿಂತು ಹಿಂದುತ್ವವನ್ನೂ ಹಿಂದೂ ದೇವತೆಗಳನ್ನೂ ಹಿಂದೂ ನಾಯಕರನ್ನೂ ಕೊನೆಗೆ ಭಾರತವನ್ನೂ ಅತಿ ಹೀನ ಪದಗಳಲ್ಲಿ ನಿಂದಿಸಿದ್ದಾನಲ್ಲ, ಇದು ಸಾಮೂಹಿಕ ಅತ್ಯಾಚಾರಕ್ಕಿಂತ ಭೀನ್ನವಾದ್ದೇನೂ ಅಲ್ಲ. ಓವೈಸಿಯ ಮದವೇರಲು ಕಾರಣವಾಗಿದ್ದು ಸಂಖ್ಯೆಯೇ, ಅನುಮಾನವಿಲ್ಲ. ’ನಾವೀಗ ಇಪ್ಪತ್ತೈದು ಕೋಟಿಯಾಗಿದ್ದೇವೆ’ ಎನ್ನುವುದು ಅವನ ಎಚ್ಚರಿಕೆಯ ಸಂದೇಶ. ಇಷ್ಟು ಸಂಖ್ಯೆಯ ಮುಸಲ್ಮಾನರು ನೂರು ಕೋಟಿ ಹಿಂದೂಗಳನ್ನು ನಾಶ ಮಾಡುವುದು ಕಠಿಣವಲ್ಲ. ಏಕೆಂದರೆ ಹಿಂದುಗಳು ಹೇಡಿಗಳು – ಇದು ಅವನ ಭಾಷಣದ ಒಟ್ಟಾರೆ ಸಾರಾಂಶ.
ನಾವು ಈಗ ಯಾಕೆ ಹೀಗಾಗಿರುವೆವು?
-ರೂಪಲಕ್ಷ್ಮಿ
ನಾನು ಸಣ್ಣವಳಾಗಿದ್ದಾಗ, ಅಜ್ಜನ ಊರಿಗೆ ಹೋಗಿದ್ದಾಗ (ಮಂಗಳೂರಿನ ಬಳಿಯ ಪುಟ್ಟ ಹಳ್ಳಿ) ಬಾಗಿಲುಗಳಿಗೆ ಚಿಲಕವೇ ಹಾಕುತ್ತಿರಲಿಲ್ಲ, ಮನೆಗಳಲ್ಲಿ ಅಲ್ಮೇರಾ ಇವುಗಳು ಕೂಡ ಮರದ್ದೇ ಆಗಿದ್ದು, ಬೀಗ ಎಂಬುದೆಲ್ಲಾ ನಾನು ನೋಡಿರಲಿಲ್ಲ. ತಾಮ್ರದ ಬಿಂದಿಗೆಗಳು ಹಾಗೇಯೇ ಬಾವಿ ಕಟ್ಟೆಯ ಬಳಿ ಇಟ್ಟು ಬರುತ್ತಿದ್ದರು. ನಾನು ಬೆಂಗಳೂರಿನಿಂದ ಹೋಗುತ್ತಿದ್ದರಿಂದ ನನಗೆ ಇವೆಲ್ಲವೂ ಆಶ್ಚರ್ಯ! ಅಣ್ಣನನ್ನು ಕೇಳಿದ್ದಕ್ಕೆ, ಯಾರೂ ತೆಗೆದುಕೊಂಡು ಹೋಗುವುದಿಲ್ಲ, ಅಷ್ಟು ನಂಬಿಕೆ ಇದೆ ಎಂದು ಹೇಳುತ್ತಿದ್ದ. ಆದರೆ ಆಗ ಬೆಂಗಳೂರಿನಲ್ಲಿ ಸ್ವಲ್ಪ ಕಳ್ಳತನದ ಭಯವಿತ್ತು. ಆದರೂ ಸಿಕ್ಕಿದನ್ನಷ್ಟೇ ಅಂದರೆ, ಕಿಟಕಿಯಲ್ಲಿಟ್ಟ ವಾಚು, ರೇಡಿಯೋ, ಹೊರಗೆ ಒಣಗಿ ಹಾಕಿದ ಬಟ್ಟೆಗಳು, ಇಂತಹವುಗಳನ್ನೇ ತೆಗೆದುಕೊಂಡು ಹೋಗುತ್ತಿದ್ದರೇ ವಿನಃ ಮನೆಗೆ ನುಗ್ಗಿ, ದೋಚಲು ಅಥವಾ ಮನೆಯವರನ್ನು ಕೊಲೆ ಮಾಡಲು ಭಯವಾಗುತ್ತಿತ್ತು. ಏಕೆಂದರೆ ಒಂದು ಕೂಗು ಹಾಕಿದ ತಕ್ಷಣ ಅಕ್ಕ, ಪಕ್ಕದ ಮನೆಯವರೆಲ್ಲರೂ ಸೇರಿ, ಕಳ್ಳನನ್ನು ಚಚ್ಚಿ ಹಾಕುತ್ತಿದ್ದರು. ಇನ್ನೂ ಜಿಂಡಾಲ್ ಮುಂತಾದ ಕ್ವಾರ್ಟರ್ಸ್ ಮನೆಗಳಲ್ಲಿ (ಬೆಂಗಳೂರಿನಲ್ಲಿಯೂ ಕೂಡ) ಹೊರಗೆ ಎಲ್ಲಿಗೆ ಹೋಗುವಾಗಲೂ ಚಿಲಕ ಹಾಕುವ ಪದ್ಧತಿ ಇರುತ್ತಿರಲಿಲ್ಲ. ನೆರೆಹೊರೆಯವರಲ್ಲಿ ಅಷ್ಟೊಂದು ನಂಬಿಕೆ ಆಗ.
ಇನ್ನೂ ಮನೆಯಲ್ಲಿ ಕೆಲಸದವಳನ್ನು ಇಟ್ಟುಕೊಳ್ಳುವ ಪದ್ಧತಿ ಕೂಡ ಇರಲಿಲ್ಲ. ಮನೆಯವರೇ ಮಕ್ಕಳಾದಿಯಾಗಿ ಎಲ್ಲರೂ ಸೇರಿಕೊಂಡು ಮನೆಕೆಲಸವನ್ನೆಲ್ಲಾ ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿನ ದೊಡ್ಡವರು ಎಲ್ಲಿಗಾದರೂ ಹೋಗುವುದಾದರೆ, ಮಕ್ಕಳು ಶಾಲೆಯಿಂದ ಬಂದ ಮೇಲೆ ಪಕ್ಕದ ಮನೆಯವರು ನೋಡಿಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು. ಎಲ್ಲರಲ್ಲಿಯೂ ಒಂದು ಬದ್ಧತೆ ಇತ್ತು. ಸಹಕಾರವಿತ್ತು. ಕಿತ್ತಾಡಿದರೂ ಅದು ಆ ಕ್ಷಣಕಷ್ಟೇ ಆಗಿರುತ್ತಿತ್ತು. ನಂತರ ಒಂದಿಷ್ಟು ದಿವಸಗಳಾದ ಮೇಲೆ, ಯಾವುದೋ ಜಾತ್ರೆಯೋ, ಹಬ್ಬವೋ ಬಂದಾಗ ಮತ್ತೆ ಒಂದಾಗುತ್ತಿದ್ದರು. ಮಕ್ಕಳು ಕೂಡ ಹೊಡೆದಾಡಿಕೊಂಡರೂ, ಒಂದಷ್ಟು ಕ್ಷಣಗಳಾದ ಮೇಲೆ ಮತ್ತೆ ಒಂದುಗೂಡಿ ಆಡುತ್ತಿದ್ದರು. ಇಲ್ಲಿ ಅವರು ಶ್ರೀಮಂತರು, ನಾವು ಬಡವರು, ಅವರು ಓದಿದವರು, ನಾವು ಅನಕ್ಷರಸ್ಥರು ಎಂಬ ಭೇಧ ಭಾವ ಇರುತ್ತಿರಲಿಲ್ಲ. ಮಕ್ಕಳು ಮನೆಯಲ್ಲಿ ಗಲಾಟೆ ಮಾಡದಿದ್ದರೇ ಸೈ, ಹೊರಗೆ ಹೋಗಿ ಆಡಿಕೊಳ್ಳಲಿ ಎಂಬುದಷ್ಟೇ ದೊಡ್ಡವರು ಯೋಚಿಸುತ್ತಿದ್ದರು. ಅಣ್ಣ ಒಮ್ಮೆ ಕೆಟ್ಟ ಪದವನ್ನು ಕಲಿತು ಬಂದಾಗ ಅಮ್ಮ ಬಾಸುಂಡೆ ಬರುವಂತೆ ಬಾರಿಸಿದ್ದು ನನಗೆ ಈಗಲೂ ನೆನಪಿದೆ. ಅಮ್ಮ ಒಂದಕ್ಷರವೂ ಪಕ್ಕದ ಮನೆಯ ಹುಡುಗನಿಗೆ ಬೈದಿರಲಿಲ್ಲ. ನಮ್ಮ ಮನೆಯಲ್ಲಿ ಇಷ್ಟು ಸಂಸ್ಕಾರವಿದ್ದು ನೀನು ಕಲಿತಿದ್ದು ಹೇಗೆ? ಎಂಬುದಷ್ಟೇ ಅವಳ ಪ್ರಶ್ನೆಯಾಗಿತ್ತು! ಅಷ್ಟೇ ಕೊನೆ, ಅಣ್ಣ ಇವತ್ತಿಗೂ ಎಷ್ಟೇ ಕೋಪ ಬಂದರೂ, ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲ. ಅವನಿಗೆ ಹೊಡೆದದ್ದು ನೋಡಿದ ನನಗೇ ಬುದ್ಧಿ ಕಲಿಯಲು ಅಷ್ಟೇ ಸಾಕಿತ್ತು!
ಅಪರಾಧ ಮತ್ತು ಸ್ಥಳದ ಮಹಿಮೆ.
ಡಾ ಅಶೋಕ್ ಕೆ ಆರ್
ಆ ದೌರ್ಭಾಗ್ಯೆಯ
ಹೆಸರು ಸೋನಿ ಸೋರಿ. ಛತ್ತೀಸಗಢದ ಆದಿವಾಸಿ ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆದಿವಾಸಿ ಮಹಿಳೆ. ಪಾಠ ಹೇಳಿಕೊಡುವುದಕ್ಕಷ್ಟೇ ಮೀಸಲಾಗದೆ ಆದಿವಾಸಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಕೆ. ಆಕೆಯ ಬಂಧನವಾಗುತ್ತದೆ. ನಕ್ಸಲರಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆಂಬ ಆರೋಪ. ಛತ್ತೀಸಗಢದ ಆದಿವಾಸಿ, ಮೇಲಾಗಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದವಳು ಎಂದ ಮೇಲೆ ನಕ್ಸಲಳೇ ಇರಬಹುದೆಂದು ಸರಕಾರದ ಅಂದಾಜು! ಕ್ರೂರ ವ್ಯಂಗ್ಯವೆಂದರೆ ಆಕೆಯ ತಂದೆಯ ಮೇಲೆ ಪೋಲೀಸ್ ಮಾಹಿತಿದಾರನೆಂಬ ಶಂಕೆಯಿಂದ ನಕ್ಸಲರು ಗುಂಡು ಹಾರಿಸಿದ್ದರು! ಕಾಲಿಗೆ ತಗುಲಿದ ಗುಂಡು ಶಾಶ್ವತ ಅಂಗವಿಕಲತೆಯನ್ನುಂಟುಮಾಡಿದೆ. ಇಷ್ಟೇ ಆಗಿದ್ದರೆ ನಕ್ಸಲರ ಹತ್ತಿಕ್ಕುವನೆಪದಲ್ಲಿ ನಡೆದ ಮತ್ತೊಂದು ಬಂಧನ ಎಂದು ‘ಮೌನ’ವಹಿಸಬಹುದಿತ್ತೇನೋ? ಆಕೆಗೆ ಪೋಲೀಸ್ ಬಂಧನದಲ್ಲಿ ನೀಡಿದ ಹಿಂಸೆ ‘ನಾಗರೀಕ’ ಸಮಾಜದ ನಿಲುಕಿಗೆ ದಕ್ಕದ್ದು. ಬೆತ್ತಲುಗೊಳಿಸಿ ಅತ್ಯಾಚಾರವೆಸಗಿ, ಅದೂ ಸಾಲದೆಂಬಂತೆ ಜನನಾಂಗ, ಗುದದ್ವಾರದಲ್ಲಿ ಕಲ್ಲು ತೂರಿದ್ದರು ದುರುಳ ಪೋಲೀಸರು. ಸುಪ್ರೀಂಕೋರ್ಟ್ ನಿರ್ದೇಶನದಂತೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲೂ ಇದು ದೃಡಪಟ್ಟಿತ್ತು. ಸೋನಿ ಸೋರಿ ನೀಡಿರುವ ಹೇಳಿಕೆಯಂತೆ ಆ ಹಿಂಸಾಚಾರ ನಡೆದ ಸಮಯದಲ್ಲಿ ಅಲ್ಲಿನ ಎಸ್ ಪಿ ಅಂಕಿತ್ ಗರ್ಗ್ ಕೂಡ ಹಾಜರಿದ್ದ. ನಂತರದಲ್ಲಿ ಅಂಕಿತ್ ಗರ್ಗನಿಗೆ ರಾಷ್ಟ್ರಪತಿ ಗೌರವವೂ ದೊರೆತಿದೆ! ಈ ಘಟನೆಯಾಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲಿಲ್ಲ? ಜನಮಾನಸದ ಮನವನ್ನು ಕಲಕಿ ಪ್ರತಿಭಟನೆಗೆ ಇಳಿಯುವಂತೆ ಪ್ರೇರೇಪಿಸಲಿಲ್ಲ? ಮತ್ತಷ್ಟು ಓದು 




