ವಿಷಯದ ವಿವರಗಳಿಗೆ ದಾಟಿರಿ

Archive for

30
ಆಗಸ್ಟ್

ಅನುಭವಕ್ಕೆ ಮುಖಾಮುಖಿಯಾಗಿಸುವ ವಿಶೇಷ ಪುಸ್ತಕ

– ಡಂಕಿನ್ ಝಳಕಿ, ಸಂಶೋಧಕರು.

  ಶಿವಕುಮಾರ, ಸಂಶೋಧನಾ ವಿದ್ಯಾರ್ಥಿ.

ನಮಗೆ ನಾವೇ ಪರಕೀಯರು‘ಗ್ರಾಮೀಣ ಭಾರತದ ಸಾಮಾನ್ಯ ಜಗತ್ತಿನಲ್ಲಿ ಅನುಭವದೊಂದಿಗೆ ರೂಪತಾಳಿದ ಅಪರೂಪದ ಕೃತಿ’ : ನಮಗೆ ನಾವೇ ಪರಕೀಯರು

ಇತ್ತೀಚೆಗೆ ಕರ್ನಾಟಕದಲ್ಲಿ ಎಸ್.ಎನ್. ಬಾಲಗಂಗಾಧರರ (ಬಾಲುರವರ) ವಿಚಾರಧಾರೆಯು ಒಂದು ಸಂಶೋಧನಾ ಸಂಪ್ರದಾಯವಾಗಿ, ಒಂದು ಚಳುವಳಿಯಾಗಿ ಬೆಳೆಯುತ್ತಿರುವುದು ನಮಗೆ ತಿಳಿಯದ ಹೊಸ ವಿಚಾರವೇನಲ್ಲ. 2002ರಲ್ಲಿ ವಚನಗಳ ಕುರಿತ ಒಂದು ಕಾರ್ಯಾಗಾರವಾಗಿ ಕರ್ನಾಟಕಕ್ಕೆ ಕಾಲಿಟ್ಟ ಈ ವಿಚಾರಧಾರೆ ಕೇವಲ ಹತ್ತು ವರ್ಷಗಳಲ್ಲಿ ಎರಡು ಸಂಶೋಧನಾ ಸಂಸ್ಥೆಗಳಾಗಿ, ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಯೋಜನೆಗಳಾಗಿ ಬೆಳೆದು ನಿಂತಿದೆ. ಈ ವಿಚಾರಧಾರೆಯನ್ನು ಕನ್ನಡಕ್ಕೆ ಪರಿಚಯಿಸುವ ಹಲವು ಕೃತಿಗಳೂ ಈಗಾಗಲೇ ಪ್ರಕಟವಾಗಿವೆ. ರಾಷ್ಟ್ರೋತ್ಥಾನ ಸಾಹಿತ್ಯದವರು ಪ್ರಕಟಿಸಿರುವ ರಮಾನಂದ ಐನಕೈಯವರÀ ನಮಗೆ ನಾವೇ ಪರಕೀಯರು (2012) ಈ ಸಾಲಿಗೆ ಸೇರುವ ಒಂದು ವಿಶೇಷ ಕೃತಿ.

ಈ ಕೃತಿಯನ್ನು ಎರಡು ಪ್ರಮುಖ ಕಾರಣಗಳಿಗಾಗಿ ವಿಶೇಷ ಕೃತಿಯೆನ್ನಬಹುದು. ಇದುವರೆಗೂ ಬಾಲುರವರ ವಿಚಾರಧಾರೆಯ ಕುರಿತು ಪುಸ್ತಕರೂಪದಲ್ಲಿ ಬಂದ ಕೃತಿಗಳೆಲ್ಲಾ ಬಾಲಗಂಗಾಧರರ ಆಂಗ್ಲ ಕೃತಿಗಳ ಕನ್ನಡ ಅವತರಣಿಕೆಗಳೇ. ಈ ಕೃತಿ ಅವರ ವಿಚಾರಗಳನ್ನಿಟ್ಟುಕೊಂಡು ಕನ್ನಡದಲ್ಲಿ ಬಂದ ಮೊದಲ ಸ್ವತಂತ್ರ ಕೃತಿ. ಇದು ಈ ಕೃತಿಯ ಮೊದಲನೆಯ ವಿಶೇಷತೆ. ಇದರ ಎರಡನೆಯ ವಿಶೇಷತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಪ್ರದಾಯ ಮತ್ತು ಚಳುವಳಿಗಳ ಕುರಿತು ಒಂದು ವಿಚಾರವನ್ನು ನಾವು ಮನಗಾಣಬೇಕು. ಸಂಪ್ರದಾಯ ಮತ್ತು ಚಳುವಳಿಗಳ ಯಶಸ್ಸು ಅದು ಹುಟ್ಟುಹಾಕುವ ಅನುಯಾಯಿಗಳ ಸಂಖ್ಯೆ ಮತ್ತು ಪ್ರಕಟಿಸುವ ಕೃತಿಗಳ ಸಂಖ್ಯೆಯ ಮೇಲೆ ನಿರ್ಧಾರವಾಗುವುದಿಲ್ಲ. ಉದಾಹರಣೆಗೆ ವಚನ ಸಂಪ್ರದಾಯದ ಮತ್ತು ಚಳುವಳಿಯ ಯಶಸ್ಸು ಅದು ಹುಟ್ಟುಹಾಕಿದ (ಇಂದು ನಮಗೆ ತಿಳಿದಿರುವ ಅಂಕಿಸಂಖೆಗಳ ಆಧಾರದ ಮೇಲೆ ಹೇಳುವುದಾದರೆ) ಸುಮಾರು 200 ವಚನಕಾರರ ಮತ್ತು 21500 ವಚನಗಳ ಆಧಾರದ ಮೇಲೆ ನಾವು ಅಳೆಯುವುದಿಲ್ಲ್ಲ. ಒಂದು ಸಂಪ್ರದಾಯ, ಅನುಭವಗಳ ಕುರಿತು ಚಿಂತಿಸುವ ಒಂದು ಚಿಂತನಾ ವಿಧಾನವನ್ನು ಹುಟ್ಟುಹಾಕಬೇಕು. ಆದರೆ ಎರಡು ವಸಾಹತುಶಾಹಿಗಳ ಬಳಿಕ, 21ನೇ ಶತಮಾನದಲ್ಲಿ ಒಂದು ಚಿಂತನಾ ವಿಧಾನವನ್ನು ಹುಟ್ಟುಹಾಕುವ ಮೊದಲು, ಒಂದು ಸಂಸ್ಕøತಿಯಾಗಿ ನಾವು (ಭಾರತೀಯರು) ಮರೆತಿರುವ ನಮ್ಮ ಅನುಭವಗಳನ್ನು ಕುರಿತು ಚಿಂತಿಸುವ ಪ್ರಕ್ರಿಯೆಯನ್ನೇ ಮತ್ತೊಮ್ಮೆ ಪುನರುಜ್ಜೀವನಗೊಳಿಸಬೇಕಾಗುತ್ತದೆ. ಇದು ಬಾಲುರವರ ಸಂಶೋಧನೆಯ ಪ್ರಮುಖ ಉದ್ದೇಶ. ಈ ಪ್ರಕ್ರಿಯೆಯನ್ನು ಅವರು ಪ್ರತ್ಯಭಿಜ್ಞಾನ ಎಂದು ಕರೆಯುತ್ತಾರೆ. ಒಂದು ಸಂಸ್ಕøತಿಯಾಗಿ ನಾವು ಕಲಿತು ಮರೆತಿರುವ ‘ಅನುಭವಗಳನ್ನು ಕುರಿತು ಚಿಂತಿಸುವ’ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸುವ ಈ ಪ್ರಕ್ರಿಯೆ ಒಂದು ಅಕಾಡೆಮಿಕ್ ಯೋಜನೆಯಷ್ಟೇ ಅಲ್ಲ, ಇದೊಂದು ಸಾಂಸ್ಕøತಿಕ ಚಳುವಳಿ ಕೂಡ. ಅಂದರೆ ಇದು ಎಲ್ಲಿ ಮತ್ತು ಹೇಗೆ ಆರಂಭವಾದರೂ ಸರಿ, ಅಂತಿಮವಾಗಿ ತನ್ನ ನಿತ್ಯದ ಸಾಮಾಜಿಕ ಜೀವನವನ್ನು ಇನ್ನಷ್ಟು ಅರ್ಥವತ್ತಾಗಿ ಬಾಳಲು ಇದರಿಂದ ಪ್ರತಿಯೋರ್ವನಿಗೂ ಸಹಾಯವಾಗಬೇಕು. ಪ್ರಸ್ತುತ ಕೃತಿ ಅಂತಹ ಪ್ರಕ್ರಿಯೆಗೆ ಒಂದು ಅತ್ಯುತ್ತಮ ಉದಾಹರಣೆ. ಅಷ್ಟೇ ಅಲ್ಲ ಅಂತಹ ಪ್ರಕ್ರಿಯೆಗೆ ಪ್ರೇರಣೆಯನ್ನೂ ನೀಡುತ್ತದೆ ಎನ್ನುವುದು ಈ ಕೃತಿಯ ಎರಡನೇ ಮತ್ತು ಅತ್ಯಂತ ಪ್ರಮುಖವಾದ ವಿಶೇಷತೆ.

ಮತ್ತಷ್ಟು ಓದು »

28
ಆಗಸ್ಟ್

ಸ್ವಾತಂತ್ರ್ಯ ಇನ್ನೆಷ್ಟು ದಿನ !!!

– ಮಧುಚಂದ್ರ , ಭದ್ರಾವತಿ                      

೨೯ ಮೇ ೧೪೫೩, ಅಟ್ಟೋಮನ್ ತುರ್ಕರು ಕಾಂಸ್ಟನ್ಟಿನೋಪಾಲ್ ನಗರವನ್ನು ಆಕ್ರಮಿಸಿ (ಇಂದಿನ ಇಸ್ತಾಂಬುಲ್) ತಮ್ಮ ವಶಕ್ಕೆ ತಗೆದುಕೊಂಡ ದಿನ. ಈ ದಿನಕ್ಕೂ ಮುಂಚೆ ಪೂರ್ವ ಮತ್ತು ಪಶ್ಚಿಮಗಳ ವ್ಯಾಪಾರ ಮತ್ತು ಭಾಂದವ್ಯ ಸಮುದ್ರ ಮಾರ್ಗವಾಗಿ ಈ ನಗರದ ಮೂಲಕವೇ ನಡೆಯುತ್ತಿತ್ತು. ತುರ್ಕರ ಆಕ್ರಮಣದೊಂದಿಗೆ ಪಶ್ಚಿಮದವರ ವ್ಯಾಪಾರದ ಬಾಗಿಲು ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು. ಹೊಸ ಮಾರ್ಗದ ಅನ್ವೇಷಣೆ ಪಶ್ಸಿಮದವರಿಗೆ ಅನಿವಾರ್ಯವಾಯಿತು.

ಮೊದಲಿಗೆ ಸ್ಪೇನ್ ದೇಶದ ನಾವಿಕ ಕೊಲಂಬಸ್ ಮುಂದಾದ, ಭಾರತವನ್ನು ಕಂಡುಹಿಡಿಯುವ ಬದಲಿಗೆ ಅಮೇರಿಕ ಖಂಡವನ್ನು ಅನ್ವೇಷಿಸಿದ. ನಂತರ ಪೋರ್ಚುಗಲ್ನ ನಾವಿಕ ಬರ್ತ ಲೋಮಿಯ ಡಯಾಜ್ , ಪೋರ್ಚುಗಲ್ ದೇಶದ ದಕ್ಷಿಣದಿಂದ ಆರಂಭಿಸಿ ಆಫ್ರಿಕಾ ಖಂಡದ ತುದಿಯನ್ನು ಮುಟ್ಟಿದ ಆದರೆ ಸಮುದ್ರದಲ್ಲಿ ಉಂಟಾದ ಭಾರಿ ಅನಾಹುತಗಳಿಂದ ಅವನ ಸಹ ನಾವಿಕರು ಮುಂದೆ ಸಾಗಲು ನಿರಾಕರಿಸಿದರು. ಆಫ್ರಿಕದ ತುಟ್ಟ ತುದಿ ಕೇಪ್ ಆಫ್ ಗುಡ್ ಹೋಪ್ ಕಂಡು ಹಿಡಿದು ಪೋರ್ಚುಗಲ್ಗೆ ಹಿಂದಿರುಗಿದ. ಮತ್ತೆ ಅದೇ ಯತ್ನವನ್ನು ಪೋರ್ಚುಗಲ್ಲಿನ ವಾಸ್ಕೋ ಡ ಗಾಮ ಬರ್ತ ಲೋಮಿಯ ಡಯಾಜ್ ಬಳಸಿದ ಮಾರ್ಗದಲ್ಲೇ ಹೋಗಿ ಆಫ್ರಿಕಾ ಖಂಡವನ್ನು ಒಂದು ಸುತ್ತು ಹಾಕಿ ಕಡೆಗೆ ಕೇರಳದ ಕಲ್ಲಿ ಕೋಟೆಯಲ್ಲಿ ೨೦ ಮೇ ೧೪೯೮ ಕಾಲಿಟ್ಟ. ಕಲ್ಲಿಕೋಟೆಯ ದೊರೆ ಜಮೂರಿನ ವಾಸ್ಕೋ ಡ ಗಾಮನನ್ನು ಆತ್ಮೀಯವಾಗಿ ಸ್ವಾಗತಿಸಿ ಪೂರ್ವ ಪಶ್ಚಿಮಗಳ ವ್ಯಾಪಾರಕ್ಕೆ ಮುನ್ನುಡಿ ಬರೆದ.

ಸತತ ನೂರು ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ಭಾರತದ ಪಶ್ಚಿಮ ಸಮುದ್ರ ತೀರದ ಎಲ್ಲಾ ಪ್ರಮುಖ ನಗರದಲ್ಲಿ ಒಂದು ಒಂದು ಶಾಖೆಗಳನ್ನು ಸ್ಥಾಪಿಸಿ ಪೋರ್ಚುಗೀಸರು ತಮ್ಮ ವ್ಯಾಪಾರ ಮುಂದುವರೆಸಿದರು. ೧೬೦೦ ಬ್ರಿಟೀಷರು, ೧೬೦೨ ರಲ್ಲಿ ಡಚ್ಚರು, ೧೬೬೪ ರಲ್ಲಿ ಫ್ರೆಂಚರು ಈಸ್ಟ್ ಇಂಡಿಯಾ ಕಂಪನಿ ಹೆಸರಿನಲ್ಲಿ ಭಾರತ ಖಂಡದಲ್ಲಿ ನಿಧಾನವಾಗಿ ತಮ್ಮ ಖಾತೆ ತೆರೆದರು.

ಮತ್ತಷ್ಟು ಓದು »

28
ಆಗಸ್ಟ್

ನಮೋ ಅಭಿವೃದ್ಧಿ ಮಂತ್ರಕ್ಕೆ ಅನುಸರಿಸಬೇಕಾದ ಪ್ರಚಾರತಂತ್ರ ಯಾವುದು?

– ನವೀನ್ ನಾಯಕ್

NaModi       ನರೇಂದ್ರ ಮೋದಿ ಇತ್ತೀಚೆಗೆ ಅತಿ ಹೆಚ್ಚಾಗಿ ಚರ್ಚೆಗೆ ತುತ್ತಾಗುತಿದ್ದಾರೆ. ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕೆಂದು ಹಲವಾರು ರೀತಿಯಲ್ಲಿ ಉತ್ಸಾಹಿ ಯುವಕರು ಸ್ವಯಂಪ್ರೇರಣೆಯಿಂದ ಕೆಲಸ ನಿರ್ವಹಿಸುತಿದ್ದಾರೆ. ಅಭಿಮಾನಿಗಳ ಗುಂಪುಗಳಿರಬಹುದು, ಸಾಮಾಜಿಕ ತಾಣದಲ್ಲಿರುವ ಪೇಜ್, ಗ್ರೂಪ್ ಯಾವುದೇ ಆಗಬಹುದು. ರಾಜಕೀಯ ವಿಷಯದಲ್ಲಿ ಮಲಗಿದ್ದ ಯುವಪಡೆ ಎದ್ದು ನಿಂತಿರುವುದು ಸ್ವಾಗತಾರ್ಹ. ಪ್ರಸಕ್ತ ರಾಜಕೀಯ ದೊಂಬರಾಟದಲ್ಲಿ ಕಡಿವಾಣ ಹಾಕಬೇಕೆಂದರೆ ಯುವಕರ ಪಾತ್ರ ಬೇಕೆಬೇಕು. ಇತಿಹಾಸವೂ ಅದನ್ನೇ ಸಾರಿ ಸಾರಿ ಹೇಳಿದೆ. ನಮೋ ವಿಷಯದಲ್ಲಿ ಗಂಭೀರವಾದ ವಿಚಾರವೆಂದರೆ ಈ ಯುವಕರ ಕೆಲಸ ನೀರಿಕ್ಷಿತ ಮಟ್ಟವನ್ನು ತಲುಪುತ್ತದೆಯಾ. ಇವರ ಉತ್ಸಾಹಕ್ಕೆ 2014 ತಣ್ಣೀರೆರಚಬಹುದೇ ಎಂಬ ಅನುಮಾನ ನನಗೆ. ನನ್ನ ಅನುಮಾನಕ್ಕೆ ಕಾರಣವಿಲ್ಲದೆಯಿಲ್ಲ.

ಮೋದಿಯವರನ್ನು ಪ್ರಚಾರ ಮಾಡುತ್ತಿರುವ ಶೈಲಿ ಸ್ವತಃ ನಮೋ ಅಭಿವೃದ್ದಿ ಕನಸ್ಸಿನ ವಿರೋಧವಾಗಿದೆ. ಮುನ್ನುಗುತ್ತಿರುವ ವೇಗದಲ್ಲಿ ಗುರಿಯನ್ನೇ ಮರೆಯಲಾಗಿದೆ. ಮೋದಿ ನಾಯಕತ್ವದಲ್ಲಿ ಸರಕಾರ ರಚಿಸಬೇಕಾದರೆ ಆ ಸರಕಾರ ನಮ್ಮ ಕನಸ್ಸಿನ ಭಾರತ ಕಟ್ಟಬೇಕಾದರೆ ಮೋದಿ ಹೆಸರಲ್ಲಿ ಅಥವಾ ಬಿಜೆಪಿ ಹೆಸರಲ್ಲಿ ಗೆಲ್ಲುವ ಅಭ್ಯರ್ಥಿ ಹೇಗಿರಬೇಕು, ಅವನ ಕನಸುಗಳೇನಾಗಿರಬೇಕು, ಸಮಾಜ ಪರಿವರ್ತನೆಯಲ್ಲಿ ಆತನ ಸ್ಪಷ್ಟ ನಿರ್ಧಾರವೇನು. ಈ ಅಂಶಗಳು ಮುಖ್ಯವಾಗುವುದಿಲ್ಲವೇ? ಈ ಮಹತ್ತರ ಅಂಶಗಳನ್ನು ಮರೆತು ಅವರ ಹೆಸರಲ್ಲಿ ಅಯೋಗ್ಯರನ್ನು ಗೆಲ್ಲಿಸಿಬಿಟ್ಟರೆ. ಕಂಡ ಕನಸು ತಿರುಗಿ ಬೆಂಕಿ ಕೆಂಡವಾಗುತ್ತದೆಯಲ್ವಾ? ಕರ್ನಾಟಕದಲ್ಲಿ ಬದಲಾವಣೆ ಭರದಲ್ಲಿ ಬಿಜೆಪಿ ಬೆಂಬಲಿಸಿದಾಗ ಯಡವಟ್ಟಾಗಿದ್ದು ಈ ಅಂಶಗಳೇ. ಅಪಾತ್ರರೆಲ್ಲ ಗೆದ್ದು ಉಂಡಾಡಿ ಗುಂಡನ ಹಾಗೆ ಆಡಿದ್ದ ಉದಹಾರಣೆ ಕಣ್ಣ ಮುಂದಿರುವಾಗ ಮತ್ತದೇ ಹೆಜ್ಜೆಯನ್ನಿಟ್ಟರೆ ಏನು ಪ್ರಯೋಜನ ?.. ಬದಲಾವಣೆ ಎಲ್ಲರಿಗೂ ಬೇಕು ಅದೇ ಭರದಲ್ಲಿ ಯೋಗ್ಯರು ಮತ್ತು ಅಯೋಗ್ಯರ ನಡುವಿನ ವ್ಯತ್ಯಾಸ ಮರೆಯಬಾರದು.
ಮತ್ತಷ್ಟು ಓದು »

26
ಆಗಸ್ಟ್

ಯು ಟರ್ನ್ ತೆಗೆದುಕೊಂಡ ಸ್ತ್ರೀ ವಾದಿಗಳು !

– ಮು . ಅ . ಶ್ರೀರಂಗ  ಯಲಹಂಕ  ಬೆಂಗಳೂರು

Kavalu - SL Bhairappaಎಸ್ ಎಲ್ ಭೈರಪ್ಪ ಅವರ “ಕವಲು” ಕಾದಂಬರಿ ಪ್ರಕಟವಾದಾಗ ಸುಮಾರು ಎರಡು ಮೂರು ತಿಂಗಳು ಪತ್ರಿಕೆಗಳಲ್ಲಿ ಎಡಬಿಡದೆ ವಾದ-ವಿವಾದಗಳ ಸುನಾಮಿ! ಜತೆಗೆ ಸ್ತ್ರೀ-ಪುರುಷ ಎಂಬ ಭೇದ ಭಾವ ಇಲ್ಲದೆ ಎಲ್ಲಾ ಸ್ತ್ರೀವಾದಿ ಸಾಹಿತಿಗಳು “ಕವಲು”ಕಾದಂಬರಿ ಸ್ತ್ರೀ ವಿರೋಧಿ ಎಂದು ಟೀಕಿಸಿದ್ದೆ ಟೀಕಿಸಿದ್ದು. ಭೈರಪ್ಪನವರ ವಿರೋಧಿ ಬಣಕ್ಕಂತೂ ಹೊಸ ಅಸ್ತ್ರ ಸಿಕ್ಕಿತು. ಸುಮಾರು ೫೦ ವರ್ಷಗಳಿಂದ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಾ ಬಂದಿರುವ ಕಾದಂಬರಿಯಿಂದ ಕಾದಂಬರಿಗೆ ಬೆಳೆಯುತ್ತಿರುವ ಭೈರಪ್ಪನವರನ್ನು ನಮ್ಮ ಅಕಾಡೆಮಿಕ್ ವಲಯದ ಧೀಮಂತರುಗಳು ತಮ್ಮ ಪರಿಧಿಯಿಂದ ಹೊರಗೆ ಇಟ್ಟಿರುವುದು ಸಾಹಿತ್ಯಾಸಕ್ತರಿಗೆ ತಿಳಿದ ವಿಷಯವೇ ಆಗಿದೆ. ನನ್ನ ಹಿರಿಯ ಸ್ನೇಹಿತರೂ ವಿಮರ್ಶಕರೂ ಮತ್ತು ಕಾಲೇಜೊಂದರಲ್ಲಿ ಕನ್ನಡದ ಪ್ರಾಧ್ಯಾಪಕರೂ ಆಗಿರುವ ಒಬ್ಬರು ಸ್ನಾತಕೋತ್ತರ ಕನ್ನಡದ ಸಿಲಬಸ್ಸಿನಲ್ಲಿ ಭೈರಪ್ಪನವರ ಬಗ್ಗೆ ಒಂದು ಪುಟದಷ್ಟೂ ಮಾಹಿತಿಗಳಿಲ್ಲ ಎಂದು ತಿಳಿಸಿದ್ದರು.ಈ ಮಾತು ಹೇಳಿ ಮೂರ್ನಾಲಕ್ಕು ವರ್ಷಗಳು ಕಳೆಯಿತು. ಈಗ ಪರಿಸ್ಥಿತಿ ಬದಲಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಗೊತ್ತಿರುವವರು ಹೇಳಬೇಕು.

ಈ ಪೀಠಿಕೆಗೆ ಮುಖ್ಯ ಕಾರಣ ೨೬ ಆಗಷ್ಟ್ ೨೦೧೩ರ  ಕನ್ನಡಪ್ರಭ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ “ಪುರುಷರ ಆತ್ಮಹತ್ಯೆಗೆ ಮಹಿಳೆಯರೇ ಕಾರಣ” ಎಂಬ ಸುದ್ದಿ. ಇದೇನೂ ಮುದ್ರಾರಾಕ್ಷಸನ ಹಾವಳಿಯಿಂದಾದ ತಪ್ಪು ಸುದ್ದಿಯಲ್ಲ. ಕರ್ನಾಟಕ ರಾಜ್ಯ ಪುರುಷ ರಕ್ಷಣಾ ಸಮಿತಿ ಸದಸ್ಯರ ಪ್ರತಿಭಟನೆಯ ಸುದ್ದಿ. ಈ ಪ್ರತಿಭಟನೆಯಲ್ಲಿ ಕರ್ನಾಟಕದ ಮಾಜಿ ಸಚಿವೆ ಬಿ ಟಿ ಲಲಿತಾನಾಯಕ್ ಅವರು ಎಲ್ಲಾ ವರ್ಗದ ಪುರುಷರ ಆತ್ಮಹತ್ಯೆಯ ಪ್ರಮಾಣ ಹೆಚ್ಚಲು ಮಹಿಳೆಯರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದೇ  ಕಾರಣ ಎಂದಿದ್ದಾರೆ. ರಾಜ್ಯ ಅಪರಾಧ ಮಾಹಿತಿ ಸಂಗ್ರಹ ಘಟಕದಲ್ಲಿ ದಾಖಲಾಗಿರುವ ಅಂಕಿ ಅಂಶಗಳೇ ಇದಕ್ಕೆ ಉದಾಹರಣೆ ಎಂದೂ ಹೇಳಿದ್ದಾರೆ.
ಮತ್ತಷ್ಟು ಓದು »

26
ಆಗಸ್ಟ್

ಸಾ ನಿಗಮ..ಪಾದ ನೀ ಸಾ?

 – ತುರುವೇಕೆರೆ ಪ್ರಸಾದ್

dantavillada_kathegalu_nilume                ಎಂಎಲ್‍ಎ ಮುಳ್ಳಪ್ಪನವರ ಏಕಮಾತ್ರ ಪುತ್ರಿ ಪದ್ಮಾವತಿ ‘ಸ…’ ಎಂದು ಬಾಯಿ ತೆರೆದಾಗ ಸಂಗೀತ ಮೇಷ್ಟ್ರು ಶಾಮಾ ದೀಕ್ಷಿತರು ‘ಸ್ವಲ್ಪ ಎಳೆಯಮ್ಮ..’ ಎಂದರು. ಕೂಡಲೇ ಪದ್ಮಾವತಿ ಬಾಯಲ್ಲಿದ್ದ ಚೂಯಿಂಗ್ ಗಮ್‍ನ ದೀಕ್ಷಿತರ ಮೂತಿಗೇ ಬರುವಂತೆ ಎಳೆದಾಗ ದೀಕ್ಷಿತರು ಅಸಹ್ಯದಿಂದ ಮುಖ ಹಿಂಡಿದರು. ‘ ಎಳೆಯೋದು ಅಂದ್ರೆ ಈ ಸುಡುಗಾಡು ಚೂಯಿಂಗ್‍ಗಮ್‍ನಲ್ಲ..ಸ್ವರನಮ್ಮ..’ ಎಂದರು ಅಸಹನೆಯಿಂದ. ಪದ್ಮಾ ತಾರಕ ಸ್ವರದಲ್ಲಿ ‘ ಸಾ…’ ಎಂದು ಬೊಬ್ಬೆ ಹೊಡೆದಾಗ, ಆ ಕರ್ಕಶ ಸ್ವರ ಕೇಳಲಾಗದೆ ‘ಶಿವ ಶಿವಾ’ಎಂದು ಕಿವಿ ಮುಚ್ಚಿಕೊಂಡರು.’ಅಷ್ಟೊಂದು ಎಳೀಬಾರದಮ್ಮ..’ ಎಂದು ಕಿವಿಯಲ್ಲಿ ಬೆರಳಿಟ್ಟುಕೊಂಡೇ ಬೇಡಿಕೊಂಡರು. ಪದ್ಮಾವತಿ  ತಲೆಯಾಡಿಸಿ ದೀಕ್ಷಿತರ ಮುಖಕ್ಕೇ ಕೆಮ್ಮಿ, ಕ್ಯಾಕರಿಸಿ ಕಾಫಿ ಎಂಬ ಕಲಗಚ್ಚು ಹೀರಿ ಗಂಟಲು ಹದಮಾಡಿಕೊಂಡು ಬರಲು ಒಳಗೆ ಹೋದಳು. ದೀಕ್ಷಿತರು ಧೋತರದಿಂದ ಪದ್ಮಾವತಿ ಉಗಿದಿದ್ದನ್ನು ಒರೆಸಿಕೊಂಡು ನಿಟ್ಟುಸಿರಿಟ್ಟರು.

ಪಾಪ್, ರ್ಯಾಪ್, ರಾಕ್ ಅಬ್ಬರದಲ್ಲಿ ದೀಕ್ಷಿತರ ಶಾಸ್ತ್ರೀಯ ಸಂಗೀತ ಔಟ್ ಡೇಟೆಡ್ ಆಗಿಹೋಗಿತ್ತು. ಮನೆಯೊಳಗಿನ ಹೆಂಡತಿ ಮಕ್ಕಳೆಂಬ ಪಕ್ಕ ವಾದ್ಯಗಳ ಮಧ್ಯೆ ದೀಕ್ಷಿತರಿಗೆ ಮುತ್ತಯ್ಯ ದೀಕ್ಷಿತರ ಕೀರ್ತನೆಯನ್ನು ಮೆಲುಕು ಹಾಕಲೂ ಅವಕಾಶವಿರಲಿಲ್ಲ. ರಾಮನವಮಿ, ಶಂಕರ ಜಯಂತಿ ಮುಂತಾದ ಸಮಾರಂಭಗಳಲ್ಲಿ ಲೈಟ್ ಮ್ಯೂಸಿಕ್ ಎಂದು ಬಳ್ಳಿ ನಡುವಿನ ಲತಾಂಗಿ ಸ್ಟೇಜ್ ಹತ್ತಲು ಶುರುಮಾಡಿದ ಮೇಲಂತೂ ದೀಕ್ಷಿತರ ಆಲಾಪನೆಯನ್ನು ಕೇಳುವವರೇ ಇಲ್ಲದಾಗಿ ಹೋಯಿತು. ಅಸ್ತಮಾದಿಂದ ದೀಕ್ಷಿತರು ಅನವರತ ಗೊರ ಗೊರ ಎನ್ನುವಂತೆ ತಿದಿಯೊತ್ತಿದರೆ ಅವರ ಹಾರ್ಮೊನಿಯಂ ಪೆಟ್ಟಿಗೆಯೂ ಬುಸ ಬುಸ ಎಂದು ನಿಟ್ಟುಸಿರುಬಿಡುತ್ತಿತ್ತು. ದೀಕ್ಷಿತರು ಇಂತಹ ಸಂಕಷ್ಟ ಸಮಯದಲ್ಲಿ ಎಂಎಲ್‍ಎ ಮುಳ್ಳಪ್ಪನವರ ಮಗಳು ಪದ್ಮಾವತಿಗೆ ಸಂಗೀತ ಕಲಿಯುವ ಹುಚ್ಚು ಹತ್ತಿತ್ತು. ತಾನೂ ಫಿಲಂ ಸ್ಟಾರ್ ರಮಯಾ ತರ ಆಗುತ್ತೇನೆಂದು ಅಪ್ಪನ ಬೆನ್ನು ಹತ್ತಿದ್ದಳು.

ಮತ್ತಷ್ಟು ಓದು »

22
ಆಗಸ್ಟ್

ಮ್ಯೂಟ್ ಮೋಡ್ ನಲ್ಲಿ ಭಾರತ, ಫೈಟ್ ಮೋಡ್ ನಲ್ಲಿ ಚೀನಾ!!

– ವಿಕಾಸ್ ಪುತ್ತೂರು

Mouna -China‘ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು’ ಎಂದು ಸಾರುತ್ತಲೇ “ಶಾಂತಿಧೂತ”ನೆಂದು ಖ್ಯಾತಿಗಳಿಸಿದ  ಆ ಗಾಂಧಿಯೂ ಕೂಡ, ಇಂದಿದ್ದಿದ್ದರೆ, ಪ್ರಸ್ತುತ ಚೀನಾದ ತಕರಾರುಗಳಿಗೆ ಬೇಸತ್ತು ಕೆನ್ನೆ ತೋರಿಸುವುದನ್ನು ನಿಲ್ಲಿಸಿ, ಒಂದು  ಬಾರಿಸಿ ಬಿಡುತ್ತಿದ್ದರೇನೋ! ಅದೇನೆ ಇರಲಿ,  ನಮ್ಮ ಪ್ರಧಾನಿಗಳು ಮಾತ್ರ, ಚೀನಾ ವಿಷಯದಲ್ಲಿ ಆ ಗಾಂಧಿಯ ಮೂರು ಮಂಗಗಳ ಗುಣಗಳನ್ನು ಯತಾವತ್ತಾಗಿ  ಅನುಸರಿಸಿರುವಂತೆ ಕಾಣುತ್ತಿದೆ, ಚೀನಾದ ಅತಿಕ್ರಮಣಗಳನ್ನು ಕಂಡೂ ಕಾಣದಂತೆ ಕುರುಡರಾಗಿಬಿಟ್ಟಿದ್ದಾರೆ, ಅವರ ಆಕ್ರಮಣಗಳ ಬಗ್ಗೆ ತುಟಿಬಿಚ್ಚದೆ  ಚಕಾರವೆತ್ತದೆ ಮೂಕರಾಗಿಬಿಟ್ಟಿದ್ದಾರೆ,  ಚಿಂಗಿಯರ ಕುತಂತ್ರಗಳನ್ನಂತೂ  ಬೇಕೆಂದೇ ಕೇಳಿಸಿಕೊಳ್ಳದೆ ಕಿವುಡನೂ ಆಗಿಬಿಟ್ಟಿದ್ದಾರೆ! ಅವರೇ ಹೇಳುವಂತೆ, ಗಾಂಧಿಯ ಹಾದಿಯಲ್ಲಿ ಸಾಗುವುದೆಂದರೆ ಇದೇ ಇರಬೇಕೇನೋ! ಕಳೆದ ಹತ್ತು ವರ್ಷಗಳಲ್ಲಿ ಮನಮೋಹನರು ಸದನ ಪ್ರವೇಶಿಸಿರುವುದಕ್ಕಿಂತ ಹೆಚ್ಚು  ಬಾರಿ ಚೀನಿಯರು ಭಾರತವನ್ನು ಅತಿಕ್ರಮವಾಗಿ  ಪ್ರವೇಶಿಸಿದ್ದಾರೆ. ಆರ್ಥಿಕವಾಗಿ ಹಾಗು ಸಾಂಸ್ಕೃತಿಕವಾಗಿ  ಭಾರತವನ್ನು ಮುಗಿಸಲು ತುದಿಗಾಲಲ್ಲಿ ನಿಂತು ಅತ್ಯಂತ ವ್ಯವಸ್ತಿತವಾಗಿ ಷಡ್ಯಂತ್ರ ರಚಿಸಿರುವ,  ರಚಿಸುತ್ತಿರುವ ಚೀನಾಗೆ ಸಮರ್ಥವಾಗಿ ಉತ್ತರ ಕೊಡಲು ಸಾಧ್ಯವಾಗದೆ, ಪ್ರಶ್ನೆಯ ಹುಡುಕಾಟದಲ್ಲಿಯೇ ಕಪಟ ನಾಟಕವಾಡುತ್ತಿದೆ ನಮ್ಮ ಕೇಂದ್ರ ಸರಕಾರ.

ಭಾರತದ ಅತಿದೊಡ್ಡ ಶತ್ರು ಪಾಕಿಸ್ತಾನ, ಬೇರೆಲ್ಲಾ ರಾಷ್ಟ್ರಗಳು ಬಹುತೇಕ ಭಾರತದ ಮಿತ್ರರಾಷ್ಟ್ರಗಳೇ ಎಂದು ವಿಶ್ವಾವ್ಯಾಪಿ ಬಿಂಬಿತವಾಗಿರುವುದು ಭಾರತದ ಅತಿದೊಡ್ಡ ದುರಂತ. ರಾಷ್ಟ್ರೀಯ ಭದ್ರತೆಯ ವಾಸ್ತವಕ್ಕಿಳಿದು ನೋಡಿದಾಗ ಭಾರತಕ್ಕೆ, ಪಾಕಿಸ್ತಾನಕ್ಕಿಂತಲೂ  ಚೀನಾದಿಂದ ನೂರು ಪಟ್ಟು ಹೆಚ್ಚು ಆತಂಕ  ಸೃಷ್ಟಿಯಾಗಿದೆ. ಭಾರತದ ಭೂ ಹಾಗು ಸಾಗರಕ್ಕೆ, ಇತರೆ ಒಟ್ಟು 9ರಾಷ್ಟ್ರಗಳು ಅಂಟಿಕೊಂಡಿವೆ, ದಕ್ಷಿಣಕ್ಕೆ ಶ್ರೀಲಂಕಾ ಹಾಗು ಮಾಲ್ಡೀವ್ಸ್. ಪಶ್ಚಿಮಕ್ಕೆ ಪಾಕಿಸ್ತಾನ ಹಾಗು ಅಫಗಾನಿಸ್ತಾನ, ಪೂರ್ವಕ್ಕೆ ನೇಪಾಳ, ಭೂತಾನ್, ಬಾಂಗ್ಲಾದೇಶ ಹಾಗು ಬರ್ಮಾ ಮತ್ತು ಉತ್ತರದಿಂದ ಪೂರ್ವದವರೆಗೂ ಮಹಾಕಂಟಕ ಚೀನಾ. ಈ 9ನೆರೆರಾಷ್ಟ್ರಗಳ ಪೈಕಿ ಭೂತಾನ್ ಎಂಬ ಪುಟ್ಟ ದೇಶವೊಂದನ್ನು  ಬಿಟ್ಟರೆ, ಉಳಿದ  8 ದೇಶಗಳೊಡನೆಯೂ  ಭಾರತದ  ಸಂಬಂಧ ಹಳಸಿದೆ! ಅತ್ಯಂತ ಆತಂಕಕಾರಿ  ಸಂಗತಿ ಎಂದರೆ, ಭಾರತವನ್ನು ಮಣಿಸಲು ಹಾತೊರೆಯುತ್ತಿರುವ ಚೀನಾ, ಉಳಿದ 7 ರಾಷ್ಟ್ರಗಳನ್ನೂ ಒಟ್ಟುಗೂಡಿಸಿ ಬಿಲಿಯನ್ ಡಾಲರ್ಗಟ್ಟಲೆ ಬಂಡವಾಳ ಹೂಡುತ್ತಾ, ತನ್ನ ಸಂಗಡ ಶಿಶ್ಯವೃಂದದಂತೆ ಇರಿಸಿಕೊಂಡಿದೆ.

ಮತ್ತಷ್ಟು ಓದು »

22
ಆಗಸ್ಟ್

ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು” ಪುಸ್ತಕದ ಕುರಿತು

– ಮು . ಅ . ಶ್ರೀರಂಗ  ಯಲಹಂಕ  ಬೆಂಗಳೂರು

ನಮಗೆ ನಾವೇ ಪರಕೀಯರುರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು ” (ನ. ನಾ. ಪ) (ಪ್ರಕಾಶಕರು : ರಾಷ್ಟ್ರೋತ್ಹಾನ ಸಾಹಿತ್ಯ ಬೆಂಗಳೂರು -೧೯ )ಪುಸ್ತಕ ಓದುವ ಮುನ್ನ ನಾನು ಪ್ರೊ .ಎಸ್ .ಎನ್. ಬಾಲಗಂಗಾಧರ (ಬಾಲು)ಅವರ ವಿಚಾರಗಳನ್ನು ಆಧರಿಸಿದ ಕನ್ನಡಕ್ಕೆ ಅನುವಾದವಾಗಿರುವ ಮೂರುಪುಸ್ತಕಗಳನ್ನು ಓದಿದ್ದೆ (ಪೂರ್ವಾವಲೋಕನ ,ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ? ಮತ್ತು ಹುಡುಕಾಟವನ್ನು ನಿಲ್ಲಿಸದಿರೊಣ). ಸ್ಮೃತಿ-ವಿಸ್ಮೃತಿ ;ಭಾರತೀಯ ಸಂಸ್ಕೃತಿ ತನ್ನ ವಿಚಾರ ಮತ್ತು ಗಾತ್ರದಲ್ಲಿ ತುಂಬಾ ಘನವಾಗಿದೆ ಹೀಗಾಗಿ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕಾಗಿದೆ. ಇದುವರೆಗೆ ಸುಮಾರು ಇನ್ನೂರು ಪುಟಗಳನ್ನು ಓದಿದ್ದೆನೆ. ರಮಾನಂದರ ಪ್ರಸ್ತುತ ಪುಸ್ತಕ ಮೇಲೆ ಹೇಳಿದ ಬಾಲು ಅವರ ನಾಲ್ಕು ಪುಸ್ತಕಗಳ ಅದರಲ್ಲೂ ಮುಖ್ಯವಾಗಿ ಸ್ಮೃತಿ-ವಿಸ್ಮೃತಿ ಪುಸ್ತಕದಲ್ಲಿರುವ ವಿಷಯಗಳನ್ನು ನೇರವಾಗಿ ಭಟ್ಟಿ ಇಳಿಸಿರುವುದರ ಪ್ರತಿಫಲ! ಇದಕ್ಕೆ ಪುರಾವೆಗಳು ರಮಾನಂದರ ನ.ನಾ.ಪ.. ಪುಸ್ತಕದಲ್ಲೇ ಇವೆ.

,         ೧. ಬಾಲು ಅವರೇ ತಮ್ಮ ಮುನ್ನುಡಿಯಲ್ಲಿ—ರಮಾನಂದರ ಎಲ್ಲಾ ಲೇಖನಗಳು ಈ ವಿಷಯಗಳ ಕುರಿತಾಗಿ ಬೆಲ್ಜಿಯಂ ಹಾಗೂ ಭಾರತದಲ್ಲಿ ಕುವೆಂಪು ವಿ. ವಿ. ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಂದ ಪ್ರಭಾವಿತವಾಗಿವೆ ಎಂದ್ದಿದ್ದಾರೆ (ಪುಟxii)

೨. ಲೇಖಕರ ಮಾತಿನಲ್ಲಿ ಸ್ವತಃ ರಮಾನಂದ ಐನಕೈ ಅವರೇ ಮೇಲೆ ಹೇಳಿದ ಬಾಲು ಅವರ ಮಾತುಗಳನ್ನೇ ಅನುಮೋದಿಸಿದ್ದಾರೆ—ಬಾಲು ಅವರ ಮೂಲ ಸಿದ್ಧಾಂತಕ್ಕೆ ಚ್ಯುತಿ ಬಾರದ ಹಾಗೆ ಅವರ ವಿಚಾರಗಳನ್ನು ನನ್ನ ಅನುಭವಗಳ ಮೂಲಕ ಸರಳವಾಗಿ ನಿರೂಪಿಸುವ ಕೆಲಸ ಮಾಡಿದ್ದೇನೆ (ಪುಟ xvi )(ರಮಾನಂದರ ಅನುಭವಗಳ ಪ್ರಮಾಣ ಈ ಪುಸ್ತಕದ ವಿಚಾರದಲ್ಲಿ ತೀರಾ ಕಡಿಮೆ ಎಂಬುದು ಓದುಗರಿಗೆ ಮನವರಿಕೆಯಾಗುತ್ತದೆ!)

೩. ರಮಾನಂದರ ಪ್ರಸ್ತುತ ಪುಸ್ತಕ್ಕಕ್ಕೆ (ನ.ನಾ.ಪ) ಹಿನ್ನೆಲೆ ಬರೆದಿರುವ ದಾ॥ ರಾಜಾರಾಮ ಹೆಗಡೆಯವರು ಸಹ ರಮಾನಂದರದು ಸ್ವತಂತ್ರ ಲೇಖನಗಳಾದರೂ ಕೂಡ ಭಾರತೀಯ ಸಂಸ್ಕೃತಿಯ ಕುರಿತು ಎಸ್ . ಎನ್ . ಬಾಲಗಂಗಧರ ಅವರ ಹೊಸ ವಾದಗಳಿಂದ ಪ್ರಭಾವಿತವಾಗಿವೆ. (ಪುಟ xviii)

ಮತ್ತಷ್ಟು ಓದು »

20
ಆಗಸ್ಟ್

“ಕೈ”ಲಾಗದ ಸರ್ಕಾರ ಮತ್ತು ನಮ್ಮ ಕಾಶ್ಮೀರ

–     ರಾಕೇಶ್ ಶೆಟ್ಟಿ

Kashmiraಬಡ ಬೆಸ್ತನೊಬ್ಬನ ಕತ್ತನ್ನು ಸೀಳಿ ಅವನದೇ ಬೋಟನ್ನೇರಿ ೧೦ ಜನರ ಪಾಕಿಸ್ತಾನದ ಸೈತಾನರ ತಂಡ ಗೇಟ್ ವೇ ಆಫ್ ಇಂಡಿಯಾ ಮೂಲಕ ಮುಂಬೈಗೆ ವಕ್ಕರಿಸಿಕೊಳ್ಳುತ್ತದೆ.೧೦ ಜನರಿಂದ ಬೇರ್ಪಟ್ಟ ಇಬ್ಬರು ಮೊದಲಿಗೆ ದಾಳಿಯಿಡುವುದು ’ಲಿಯೋಫೋಲ್ಡ್ ಕೆಫೆ”ಗೆ ಅಲ್ಲಿ ಕಂಡ ಕಂಡಂತೆ ಗುಂಡಿನ ಮಳೆ ಸುರಿಸಿದ ಆ ಇಬ್ಬರು ಪಾಕಿ ಉಗ್ರರು ಅಲ್ಲಿಂದ ರಾಜಾರೋಷವಾಗಿ ಹೊರಡುತ್ತಾರೆ.ಉಗ್ರರ ಕಣ್ಣಿಗೆ ಬೀಳದೆ ಅವಿತು ಕುಳಿತಿದ್ದವನೊಬ್ಬ ಮೆಲ್ಲಗೆ ಬಾಗಿಲ ಸಂದಿಯಿಂದ ರಾಕ್ಷಸರು ಇದ್ದಾರೋ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ಇಣುಕಿದಾಗ ಬಾಗಿಲಿಗೆ ಕಲ್ಲೊಂದು ಬಡಿಯುತ್ತದೆ.ಮತ್ತೆ ನೋಡುತ್ತಾನೆ ಊಹೂಂ “ಗುಂಡಲ್ಲ… ಕಲ್ಲು…!”

ಉಗ್ರರು ಅಮಾಯಕರ ರಕ್ತ ಹರಿಸಿ ಅಲ್ಲಿಂದ ರಾಜಾರೋಷವಾಗಿ ಹೊರಟ ಮೇಲೆ ಬೀಟ್ ನಲ್ಲಿದ್ದ ಪೋಲಿಸ್ ಕಾನ್ಸ್ಟೇಬಲ್ ಗಳು  ಒಂದು ಕೈಯಲ್ಲಿ ಲಾಠಿ ಹಿಡಿದು ಇನ್ನೊಂದು ಕೈಯಲ್ಲಿ ಕಲ್ಲು ಎಸೆದು ಒಳಗಿನಿಂದ “ಗುಂಡು” ಬರುತ್ತಿಲ್ಲ ಅನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ಒಳಬರುತ್ತಾರೆ. ಹೇಗಿದೆ ನೋಡಿ ಉಗ್ರನ ಕೈಯಲ್ಲಿ “ಎ.ಕೆ ೪೭” ಅವನೆದುರಿಸಲು ಬಂದ ಪೋಲಿಸಣ್ಣನ ಕೈಯಲ್ಲಿ “ಕಲ್ಲು”…! ಇದು ನಮ್ಮ ಭಾರತದ ಆಂತರಿಕ ರಕ್ಷಣಾ ವ್ಯವಸ್ಥೆಯ ಸ್ಥಿತಿ.ಭಾರತದ ಬಂಡವಾಳವನ್ನು ಸರಿಯಾಗಿಯೇ ಅರಿತಿದ್ದ ಪಾಪಿ ಪಾಕಿಗಳು ಆ ೧೦ ಜನರ ತಂಡವನ್ನು ನುಗ್ಗಿಸಿ ಒಂದಿಡಿ ಭಾರತವನ್ನು ದಿನಗಳ ಮಟ್ಟಿಗೆ ಗಾಬರಿ ಬೀಳಿಸಿದ್ದರು. ಮುಂಬೈ ಮಾರಣ ಹೋಮದ ನಂತರ ಆಗಿದ್ದಾದರೂ ಏನು? ಭಾರತ-ಪಾಕಿಸ್ತಾನಗಳು ಸಮರದಂಚಿಗೆ ಬಂದು ನಿಂತವು.ನಮ್ಮ ಸರ್ಕಾರ “ಹೊಡಿಬೇಡಿ.ಹೊಡೆದ್ರೆ ನೋವಾಗುತ್ತೆ” ಅನ್ನುವಂತೆಯೇ ವರ್ತಿಸಿದ್ದಲ್ಲವೇ? ಅದಕ್ಕಿಂತ ಹೆಚ್ಚೆಂದರೆ “ಹೋಗಿ.ನಾವು ನಿಮ್ಮೊಂದಿಗೆ ನಾವು ಕ್ರಿಕೆಟ್ ಆಡುವುದಿಲ್ಲ” ಅಂದರು ಅಷ್ಟೇ…!

ಮತ್ತಷ್ಟು ಓದು »

18
ಆಗಸ್ಟ್

೪೭ರ ಸ್ವಾತಂತ್ರ್ಯದ ಸೂರ್ಯನ ನೋಡಲು ಸುಭಾಷರು ‘ಬದುಕಿದ್ದರಾ!?’

– ರಾಕೇಶ್ ಶೆಟ್ಟಿ

ಚಿನ್ನದ ಮೊಟ್ಟೆಯಿಡುವ ‘ಐ.ಸಿ.ಎಸ್’ ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ೨೩, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು  ‘ಮಹಾತ್ಮ ಗಾಂಧೀಜಿ’ಯವರನ್ನು.ಮಹಾತ್ಮರ ಸಲಹೆಯಂತೆ ‘ದೇಶ ಬಂಧು’ ಚಿತ್ತರಂಜನ ದಾಸ್ರವರೊಂದಿಗೆ ಭಾರತದ ಸ್ವಾತಂತ್ಯ್ರ  ಹೋರಾಟಕ್ಕೆ ಧುಮುಕಿ ಮುಂದಿನ ೨೫ ವರ್ಷಗಳಲ್ಲಿ , ೪೦೦೦೦ -೪೫೦೦೦  ಜನರ  ‘ಆಜಾದ್ ಹಿಂದ್ ಫೌಜ್’ ಎಂಬ ಸೇನೆಯನ್ನು ಮುನ್ನಡೆಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ‘ನೇತಾಜಿ ಸುಭಾಷ್ ಚಂದ್ರ ಬೋಸ್’.

ಬೋಸರು ೧೮೯೭ರ ಜನವರಿ ೨೩ ರಂದು ಒರಿಸ್ಸಾದ ಕಟಕ್ನಲ್ಲಿ ಜನಿಸಿದರು.ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ‘ಸ್ವಾತಂತ್ಯ್ರ ಹೋರಾಟ’ ಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ‘ಐ.ಸಿ.ಎಸ್’ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ ೪ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ  ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.

೧೯೩೮ ರಲ್ಲಿ ನಡೆದ ೫೧ನೇ ಹರಿಪುರದ ಕಾಂಗ್ರೆಸ್ಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.೧೯೩೯ರಲ್ಲಿ  ಮತ್ತೊಮ್ಮೆ  ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸುಭಾಷರು ತೀರ್ಮಾನಿಸಿದರು.ಅಲ್ಲಿಯವರೆಗೂ ಕಾಂಗ್ರೆಸ್ಸಿನಲ್ಲಿ ಗಾಂಧೀಜಿ ಸೂಚಿಸಿದವರೆ ಅಧ್ಯಕ್ಷರಾಗುತಿದ್ದರು, ಆದರೆ ಸುಭಾಷರ ಈ ತೀರ್ಮಾನ ಗಾಂಧೀಜಿ ಹಾಗೂ ಅವರ ಅನುಯಾಯಿಗಳಿಗೆ ಸಹ್ಯವಾಗಲಿಲ್ಲ.ಆದರೆ ಯಾವುದೇ ವೈಯುಕ್ತಿಕ ಹಿತಾಸಕ್ತಿಗಳಿಲ್ಲದೆ ಕೇವಲ ದೇಶದ ಹಿತಾಸಕ್ತಿಗಾಗಿ ನಿರ್ಧಾರದಿಂದ ಸುಭಾಷರು ಹಿಂದೆ ಸರಿಯಲಿಲ್ಲ ,ಅಂತಿಮವಾಗಿ ಗಾಂಧೀಜಿ ಬೆಂಬಲಿತ ‘ಪಟ್ಟಾಭಿ ಸೀತಾರಾಮಯ್ಯ’ ಹಾಗೂ ‘ಸುಭಾಷ್’ರ ನಡುವೆ ನೇರ ಹಣಾಹಣಿ ನಡೆದು,ಚುನಾವಣೆಯಲ್ಲಿ ಸುಭಾಷರು ಜಯಶಾಲಿಯಾದರು. ಮತ್ತಷ್ಟು ಓದು »

18
ಆಗಸ್ಟ್

ಸುಭಾಷರ ನೆನಪಿನೊಂದಿಗೆ ಮರೆಯಬಾರದ ಹೆಣ್ಣು

– ಚೇತನಾ ತೀರ್ಥಹಳ್ಳಿ

ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ? ಅವರು ಹಂಬಲಿಸಿದ ನೆಲ ಭಾರತ. ಮತ್ತು, ಅವರು ಪ್ರೇಮಿಸಿದ ಹೆಣ್ಣು ಎಮಿಲೀ!……….. ಸುಭಾಷ್ ಅವರನ್ನ ನೆನೆಸಿಕೊಂಡರೆ, ಎಮಿಲಿಗೂ ನಮ್ಮಿಂದ ಒಂದು ಗೌರವ ಸಲ್ಲಲಿ ಅಂತ ಹಾರೈಸ್ತಾ….

“ನಿನ್ನ ನೋಡಲು ಮತ್ತೆಂದೂ ಸಾಧ್ಯವಾಗದೆ ಹೋಗಬಹುದು. ಆದರೆ ನನ್ನ ನಂಬು. ನೀನು ಸದಾ ನನ್ನ ಹೃದಯದಲ್ಲಿ, ಆಲೋಚನೆಗಳಲ್ಲಿ, ಕನಸಲ್ಲಿ ಇದ್ದೇ ಇರುತ್ತೀಯೆ. ಹಾಗೇನಾದರೂ ವಿಧಿ ನಮ್ಮಿಬ್ಬರನ್ನು ಶಾಶ್ವತವಾಗಿ ಅಗಲಿಸಿದನೆಂದುಕೋ… ಮುಂದಿನ ಹುಟ್ಟಿನಲ್ಲಿ ಮತ್ತೆ ನಿನ್ನ ಸೇರಲು ನಾನು ಪರಿತಪಿಸುವೆ. ನನ್ನ ಕಿನ್ನರೀ… Jeden tag denke ich an sie- ನಿನ್ನನ್ನ ಪ್ರತಿದಿನವೂ ನೆನೆಸಿಕೊಳ್ಳುತ್ತೇನೆ”
( ಸುಭಾಷ್ ಚಂದ್ರ ಬೋಸ್, ಎಮಿಲೀ ಶೆಂಕಲ್ ಗೆ ಬರೆದ ಪತ್ರದಲ್ಲಿ)

ನರನರದಲ್ಲಿ ನೆಲದ ಉನ್ಮಾದ. ಹೋರಾಟದ ಕೆಚ್ಚು. ತನ್ನನ್ನೇ ದೇಶದ ಹೆಸರಿಗೆ ಬರೆದಿಟ್ಟ ಪ್ರೌಢ ಗಂಡಸಿನ ಎದೆಯಲ್ಲೂ ಒಂದು ಬೆಚ್ಚಗಿನ ಗೂಡು. ಪುಟ್ಟದೊಂದು ಖಾಸಗಿ ಬದುಕು. ಅಲ್ಲಿ, ಮೊಗೆದಷ್ಟೂ ಚಿಮ್ಮುವ ಪ್ರೀತಿ. ಎದೆ ಸೀಯುವ ವಿರಹದ ಕಾವು. ಕಾಸಗಲ ಕಣ್ಣೆದುರು ಮುಕ್ತ ಭಾರತದ ಕನಸು. ಒಳಗಿನೊಳಗಲ್ಲಿ ಅವಳ ಪ್ರೇಮ ಬಂಧನದ ನೆನಪು.

ಸುಭಾಷ್ ಚಂದ್ರ ಬೋಸ್… ಮತ್ತಷ್ಟು ಓದು »