ವಿಷಯದ ವಿವರಗಳಿಗೆ ದಾಟಿರಿ

Archive for

17
ಏಪ್ರಿಲ್

ಜಮ್ಮುವಿನ ಹಿಂದೂಗಳ ಮೇಲೆ ಕಣ್ಣಿಟ್ಟಿರುವ ಮಾಫಿಯಾಗಳು ಯಾವುವು?

– ರಾಕೇಶ್ ಶೆಟ್ಟಿ

೬ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದು ಇಡೀ ದೇಶದ ಅಂತಃಕರಣವನ್ನೇ ಕಲುಕಿಹಾಕಿತ್ತು.ಸಾರ್ವಜನಿಕರು, ಭಿನ್ನ ಭಿನ್ನ ನಿಲುವುಳ್ಳ ಸಂಘಟನೆಗಳೆಲ್ಲ ಅಪರೂಪದ ಒಗ್ಗಟ್ಟು ಪ್ರದರ್ಶಿಸಿದ್ದ ಕೇಸು ಅದು.ದೆಹಲಿಯ ವಿದ್ಯಾರ್ಥಿಗಳು,ಸಾರ್ವಜನಿಕರು ನೋಡು ನೋಡುತ್ತಿದಂತೆಯೇ ರಾಷ್ಟ್ರಪತಿಭವನದ ರಸ್ತೆಗೆ ಮುತ್ತಿಗೆ ಹಾಕಿಬಿಟ್ಟಿದ್ದರು. ಹಾಗೆ ರಾಷ್ಟ್ರಪತಿ ಭವನದ ಮುಂದೆ ನಿಂತು ನ್ಯಾಯ ಕೇಳಿದ ಯುವಕ-ಯುವತಿಯರ ಮೇಲೆಯೇ ಲಾಠಿ ಚಾರ್ಜ್,ಜಲಫಿರಂಗಿ,ಅಶ್ರು ವಾಯು ಪ್ರಯೋಗವನ್ನು ಆಗಿನ ಯುಪಿಎ ಸರ್ಕಾರ ನಡೆಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು.ದೆಹಲಿಯಲ್ಲಿ ಹೊತ್ತಿಕೊಂಡ ಕಿಡಿ ದೇಶದ ಮೂಲೆಯಲ್ಲೂ ಪ್ರತಿಧ್ವನಿಸಿತ್ತು.ಮೊದಲು ಮೊದಲು ಮೊಂಡತನ ತೋರಿದ್ದ ದೆಹಲಿಯ ಶೀಲಾ ದೀಕ್ಷಿತ್ ಸರ್ಕಾರ ಆ ನಂತರ ತಲೆಬಾಗಿ,ಅತ್ಯಾಚಾರ ಪ್ರಕರಣಗಳ ಕುರಿತ ಕಾನೂನುಗಳ ಸುಧಾರಣೆಗೆ ನ್ಯಾ.ವರ್ಮಾ ಅವರ ನೇತೃತ್ವದ ಸಮಿತಿಯನ್ನು ನೇಮಿಸಿತ್ತು,ಅಂತಿಮವಾಗಿ Criminal Amendment Bill, 2013 ಹೊರಬಂದಿತ್ತು.

ಆ ಭೀಕರ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಗಳೆಲ್ಲ ಆತ್ಮಹತ್ಯೆ ಮಾಡಿಕೊಂಡು ತೊಲಗಿದ್ದಾರಾದರೂ,ಅತ್ಯಾಚಾರಿಗಳ ಅತಿಕ್ರೂರಿ ಎನಿಸಿಕೊಂಡಿದ್ದವ ಮಾತ್ರ ‘ಅಪ್ರಾಪ್ತ’ ಎಂಬ ಸ್ಲೇಟು ಹಿಡಿದು ಇಂದಿಗೂ ಎಲ್ಲೋ ಬದುಕಿಕೊಂಡಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಬಂದವನಿಗೆ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಸರ್ಕಾರವೇ ಜೀವನಕ್ಕೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಇಡೀ ದೇಶದಲ್ಲಿ ಕಿಚ್ಚು ಹಚ್ಚಿಹೋದ ಆ ಹೆಣ್ಣುಮಗಳ ನಿಜವಾದ ಹೆಸರು ಬಿಬಿಸಿ ಸುದ್ದಿ ಸಂಸ್ಥೆ ಹೇಳುವ ತನಕ ಜನಸಾಮಾನ್ಯರಿಗೆ ಗೊತ್ತಿರಲಿಲ್ಲ. ದೇಶ ಆ ಹೆಣ್ಣುಮಗಳಿಗೆ ‘ನಿರ್ಭಯ’ ಎಂಬ ಹೆಸರಿಟ್ಟಿತ್ತು. ಈ ದೇಶದ ಎಷ್ಟೋ ತಾಯಂದಿರು ಆಕೆಗಾದ ಅನ್ಯಾಯ ತಮ್ಮದೇ ಕುಟುಂಬದವರ ಮೇಲಾದ ಅನ್ಯಾಯವೆಂಬಂತೆ ಮರುಗಿದರು,ಬೀದಿಗಿಳಿದರು.ಹಾಗೆ ಬೀದಿಗಿಳಿದವರಿಗೆ ನಿರ್ಭಯಳ ಜಾತಿ ಯಾವುದು,ರಿಲಿಜನ್ ಯಾವುದು? ಆಕೆಯ ಹಿಂದುವೋ?ಮುಸ್ಲಿಮೋ?ಕ್ರಿಶ್ಚಿಯನ್ನೋ?ಇದ್ಯಾವುದರೋ ಪರಿವೆಯೂ ಇರಲಿಲ್ಲ. ಮುಖ್ಯವಾಗಿ ಅದರ ಅವಶ್ಯಕತೆಯೂ ಇರಲಿಲ್ಲ. ಇಡೀ ದೇಶ ಆ ಹೆಣ್ಣುಮಗಳ ನೋವಿಗೆ ಜೊತೆಯಾಗಿ ನಿಂತಿದ್ದು ಆಕೆಯ ಮೇಲಾದ ದೌರ್ಜ್ಯನ್ಯಕ್ಕಾಗಿ,ಆಕೆಯ ಪ್ರಾಣ ತೆಗೆದ ರಾಕ್ಷಸರಿಗೆ ಶಿಕ್ಷೆಯಾಗಲೇ ಬೇಕೆಂಬ ಏಕೈಕ ಕಾರಣಕ್ಕಾಗಿ!

ಮತ್ತಷ್ಟು ಓದು »