ವಿಷಯದ ವಿವರಗಳಿಗೆ ದಾಟಿರಿ

Archive for

24
ಏಪ್ರಿಲ್

ದೇಶ ಹಾಳಾದರೂ ‘ಅವರಿಗೆ’ ನೋವಾಗಬಾರದು ನೋಡಿ

– ಅಜಿತ್ ಶೆಟ್ಟಿ ಹೆರಂಜೆ

ಇವತ್ತು ಇಡೀ ವಿಶ್ವ ಕೊರೋನಾ ಮಹಾ ಮಾರಿಯ ವಿರುದ್ಧ ಯುದ್ಧ ಮಾಡುತ್ತಿದೆ.ವಿಶ್ವದ ದಿಗ್ಗಜ ರಾಷ್ಟ್ರಗಳೇ ಇದರ ವಿರುದ್ದ ಮಂಡಿಯೂರಿ ಕುಳಿತಿವೆ. ರೋಗದ ಪಸರುವಿಕೆ ಮತ್ತು ರೋಗದಿಂದ‌ ಆಗುತ್ತಿರುವ ಸಾವು ಇವೆರಡನ್ನು ತಹಬಂದಗಿ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹಾ ಸಮಯದಲ್ಲಿ‌ ಭಾರತ ಈ ಮಹಾಮಾರಿಯ ವಿರುದ್ಧ ಸಮರ್ಥವಾಗಿ ಸೆಣಸುತ್ತಿದೆ. ಇದು ಸಾಧ್ಯವಾಗಿದ್ದು ಮೋದಿಯವರ ಸಮರ್ಥ ನಾಯಕತ್ವದ ಜೊತೆಗೆ ಮೋದಿಯಂತಹ ನಾಯಕನಿಗೆ‌ ಹೆಗಲಿಗೆ ಹೆಗಲು ಕೊಟ್ಟು ನೆಡೆಯುತ್ತಿರುವ ಬಹುಸಂಖ್ಯಾತ ಭಾರತಿಯರು ಸಹಕಾರದಿಂದ, ಇವರು ಪ್ರದರ್ಶನ ಮಾಡತ್ತಿರುವ ಸಾಮಾಜಿಕ ಬದ್ದತೆಯಿಂದಾಗಿ ಇದು ಸಾಧ್ಯವಾಗಿದ್ದು. ಎಲ್ಲದರಲ್ಲೂ ತಾನು ದೊಡ್ಡವ ಎನ್ನುವ ಅಮೇರಿಕಾದಲ್ಲಿ‌ ಜನ ಲಾಕ್‌ ಡೌನ್ ಗೆ ಸಮ್ಮತಿಸುತ್ತಿಲ್ಲ. ಅಲ್ಲಿಯ ನಾಗರೀಕರಿಗೆ ತಮ್ಮ ಉದ್ಯೋಗ ಮತ್ತು ಹಣದ ಚಿಂತೆ‌ ಬಿಟ್ಟರೆ, ಸಮಾಜ‌ ಹಾಗು ದೇಶದ ಬಗ್ಗೆ ಯಾವುದೆ ಬದ್ದತೆ ಇದ್ದಂತೆ ತೋರುತ್ತಿಲ್ಲ.‌ ಬಹುಶಃ ಇದೆ ಕಾರಣಕ್ಕೆ ಇವತ್ತು ಅಮೇರಿಕಾದಲ್ಲಿ‌ ವಿಶ್ವದಲ್ಲೇ ಅತ್ಯಂತ ಹೆಚ್ಚು ಕೊರೋನಾ ಸೋಂಕಿತರು ಇರುವುದು ಮತ್ತು ಸಾವು ಆಗಿರೋದು.

ತಬ್ಲಿಕಿ ಜಮಾತ್ ಕೊಟ್ಟ ಉಪಟಳದ ಮಧ್ಯೆಯೂ, ಕೊರೋನಾ ಸಮಸ್ಯೆಯನ್ನು ಭಾರತ ಇಲ್ಲಿಯ ತನಕ ಸಮರ್ಥವಾಗಿಯೇ ಎದುರಿಸುತ್ತಿದೆ. ಭಾರತದ ಬಹುಸಂಖ್ಯಾತ ಹಿಂದುಗಳೇ ಇರಲಿ ಅಥವ ಅಲ್ಪಸಂಖ್ಯಾತರಾದ ಸಿಖ್,ಜೈನ,ಬೌದ್ಧ,ಕ್ರೈಸ್ತರೇ ಇರಲಿ ಎಲ್ಲರೂ ತಮ್ಮ‌ ಧಾರ್ಮಿಕ‌ ನಂಬಿಕೆ ಮತ್ತು ಆಚರಣೆಗಳನ್ನು ‌ಸರ್ಕಾರ ಪ್ರಸ್ತುತ ಹೊರಡಿಸಿರುವ ಆದೇಶದ ಅನ್ವಯ ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಡೆಸಿಕೊಂಡು ಬರುತ್ತಿವೆ. ಹೌದು ಮೊದಮೊದಲಿಗೆ ಇದು ಕೊಂಚ ಕಷ್ಟ ಅನಿಸಿದರೂ ಬರಬರುತ್ತ ಇದನ್ನು ಬಹುತೇಕರು ರೂಢಿಸಿಕೊಂಡರು.ಈ ಸಂಬಂಧ ಮೋದಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದನ್ನೇ ಇವರೆಲ್ಲ ಪಾಲಿಸಿದರು. ಅಂದ ಹಾಗೆ ಈ ಸಂದರ್ಭದಲ್ಲಿ ಸಮುದಾಯ ನೆಡೆದುಕೊಳ್ಳಬೇಕಾದ ರೀತಿ ರಿವಾಜುಗಳ ಬಗ್ಗೆ ಯಾವುದೇ ಸಮುದಾಯದ ಮುಖಂಡರ ಮುಖಾಂತರ ಸರ್ಕಾರ ಮಾರ್ಗಸೂಚಿಗಳನ್ನೇನು ತಲುಪಿಸಲಿಲ್ಲ. ಅಥವ ಅವರ ಸಮಾಜದ‌‌ ಮುಂಡರನ್ನು ವಿಶೇಷವಾಗಿ ಕರೆದು ಮಾತಾಡಿಸಿ ದೇಶ ಇರುವ ಈ ಸಂದಿಗ್ದ ಸಮಯದಲ್ಲಿ ನಿಮ್ಮ‌ ಸಮಾಜದ ಸಹಕಾರ ಬೇಕು ಎಂದ ಪ್ರತ್ಯೇಕವಾಗಿ ಕೂರಿಸಿ ಮಾತಾಡಿಸಲಿಲ್ಲ.

ಆದರೆ ಆ ಒಂದು ಸಮಾಜ.., ಹೌದು ಅದನ್ನ ಇವತ್ತು ನಾನು ಹಾಗೆಯೇ ಕರೆಯಬೇಕಾಗಿದೆ. ಕಾರಣ, #ಅವರ ಹೆಸರು ಹೇಳಿದರೆ ಬಹಳಷ್ಟು ಜನರಿಗೆ ಬಹಳ ಜಾಗದಲ್ಲಿ ಉರಿ ಹತ್ತುತ್ತದೆ. ಅಂತಹಾ ಆ ಒಂದು ಸಮಾಜ ಮಾತ್ರಾ ಯಾಕೋ ನಾವು ಭಾರತದಲ್ಲಿ ತಮ್ಮನ್ನ ತಾವು ಅತಿ ವಿಶಿಷ್ಟರು, ನಾವು ಈ ದೇಶದ ಮಕ್ಕಳಲ್ಲ #ಅಳಿಯಂದಿರು ಅಂದುಕೊಂಡಿದ್ದಾರೆ. ನಮಗೆ ದೇಶದ ಎಲ್ಲಾ ಸವಲತ್ತು ಸಿಗಬೇಕು ಬಿಟ್ರೆ ನಾವು ದೇಶಕ್ಕೆ ಏನೂ‌ ಕೊಡೋದಿಲ್ಲ. ಎಲ್ಲಿಯ ತನಕ ಕೊಡೋದಿಲ್ಲ ಅಂದ್ರೆ ನೀವು ದೇಶದ ನಾಗರೀಕರೋ ಅಂತ ಕೇಳಿದರೆ ಅದಕ್ಕೆ ದಾಖಲೆಯನ್ನೂ ಕೊಡೋದಿಲ್ಲ ಅನ್ನುವಷ್ಟರಮಟ್ಟಿಗಿನ ಉದ್ದತಟತನ ಪ್ರದರ್ಶನ ಮಾಡುತ್ತದೆ.‌ (ಇವರಲ್ಲಿ‌ ಇರುವ ಒಂದಷ್ಟು ರಾಷ್ಟ್ರ ಭಕ್ತರನ್ನು‌ ಹೊರತುಪಡಿಸಿ) ಇವರಲ್ಲೂ ಈ ತಬ್ಲಿಗಿಗಳು ಅನ್ನುವ ವರ್ಗವೋ..ಇವುಗಳ ಉಪಟಳ‌ ಕೇವ‌ಲ ಭಾರತಕ್ಕೆ ಸೀಮಿತವಾಗಿಲ್ಲ. ಕೆಲವು ಪತ್ರಿಕೆಗಳ ವರದಿಗಳ ಪ್ರಕಾರ ಇವರ ಹಾವಳಿಯಿಂದ ಇಡೀ ದಕ್ಷಿಣ ಏಶ್ಯಾದ ರಾಷ್ಟ್ರಗಳೇ ಕಂಗೆಟ್ಟಿವೆ.ಇವರನ್ನು ನಿಯಂತ್ರಿಸಲು ದೇಶದ ಬಹುತೇಕ ರಾಜ್ಯ ಸರ್ಕಾರಗಳು ಇವರ ಸಮುದಾಯದ ಮುಖಂಡರ ಜೊತೆ ಸಭೆ ಮಾಡಿ ನಿಮ್ಮ ಸಮುದಾಯದ ಸಹಕಾರ ದೇಶಕ್ಕೆ ಕೊರೋನಾ ನಿಯಂತ್ರಣ ಮಾಡೋದಕ್ಕೆ ಬೇಕು ಅಂತ ಕೇಳಿಕೊಳ್ಳುವ ಪ್ರಸಂಗ ಎದರಾಯಿತು.

ಮತ್ತಷ್ಟು ಓದು »

24
ಏಪ್ರಿಲ್

ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆಗಿರುವುದೇಕೆ? ಅದರ ಅರ್ಥವೇನು?

– ಪ್ರಶಾಂತ್
ಇಂಟರ್ನ್ಯಾಶನಲ್ ಕ್ರೂಡ್ ಆಯಿಲ್‌ (WTI)  ಬೆಲೆ ಪ್ರತಿ ಬ್ಯಾರೆಲ್ ಗೆ ಮೈನೆಸ್ 40 ಡಾಲರ್ ಆಗಿದ್ದರ ಬಗ್ಗೆ ಕೆಲವು ಮಾಹಿತಿಗಳು ಹಂಚಿಕೊಳ್ಳಲು ಹಾಗೂ ಇದರ ವಿಷಯ ಎಲ್ಲರಿಗು ಸುಲಭವಾಗಿ ಅರ್ಥವಾಗಲಿ ಅನ್ನೋದು ಈ ಪೋಷ್ಟನ ಉದ್ದೇಶ.
ಆಯಿಲ್ ಬೆಲೆ‌ ಅಷ್ಟುಂದು ಕಮ್ಮಿಯಾಗಿದೆಯಂತೆ, ಪಾತಳಕ್ಕೆ ಇಳಿದಿದೆಯಂತೆ, ಹಾಗಾದರೆ  ನಾನು ಕಾರ್ ತೆಗೆದುಕೊಂಡು ಪೆಟ್ರೋಲ್ ಹಾಕಿಸಲು ಹೋದರೆ, ಬಂಕ್ ನವರು ನನಗೇ ದುಡ್ಡು ಕೊಟ್ಟು ಪೆಟ್ರೋಲ್ ಹಾಕುತ್ತಾರೆಯೇ ಎಂದು‌‌‌ ನನ್ನ ಸ್ನೇಹಿತರು ಬಹಳಾ‌‌ ಸೀರಿಯಸ್ ಫೋನ್‌ ಮಾಡಿ ಕೇಳಿದರು..!! ಈ ಪ್ರಶ್ನೆಗೆ ಉತ್ತರ ಹುಡುಕುವ ಜೊತೆಗೆ,‌ ನಾನು ಪೆಟ್ರೋಲಿಯಂ ಕ್ಷೇತ್ರದಲ್ಲಿಯೇ ಕೆಲಸ ಮಾಡುವುದರಿಂದ ಸ್ವಲ್ಪ‌ ವಿವರಣೆಯನ್ನು‌ ಕೊಡುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ.
ಎಲ್ಲಾದಕ್ಕೂ‌ ಮೊದಲು ಅರ್ಥವಾಗ ಬೇಕಾಗಿರುವುದು ಕ್ರೂಡ್ ಆಯಿಲ್‌‌ ಅಂದರೆ ಏನು ಹಾಗೂ ಅದರ ಗ್ರೇಡಿಂಗ್‌ ಹೇಗೆ‌ ಮಾಡುತ್ತಾರೆ ಎಂಬುದು.. ಸಾವಿರಾರು ವರ್ಷಗಳಿಂದ ಭೂಮಿಯ ‌ಹಾಗೂ ಸಮುದ್ರದ ತಳದಲ್ಲಿ ಪ್ರಾಣಿಗಳ ಮತ್ತು ಗಿಡಗಳ‌ ಪಳೆಯುಳಿಕೆಗಳು,‌ ಕ್ರೂಡ್ ಆಯಿಲ್‌ ಆಗಿ‌ ಪರಿವರ್ತನೆಯಾಗುತ್ತದೆ.. ಅದರಲ್ಲಿ ಇರುವ ಸಲ್ಫರ್ ಅಂಶದಿಂದ ಅದರ ಗ್ರೇಡಿಂಗ್ ನಿರ್ಧಾರವಾಗುತ್ತದೆ.. ಜಾಸ್ತಿ ಅಂಶ ಸಲ್ಫರ್ ಇದ್ದರೆ ಒಳ್ಳೆಯ ಕ್ರೂಡ್ ಆಯಿಲ್ ಯೆಂದು ಪರಿಗಣಿಸುತ್ತಾರೆ.. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಸಮುದ್ರದಲ್ಲಿ ಸಿಗವ ಆಯಿಲ್ ನಲ್ಲಿ ಸಲ್ಫರ್ ಅಂಶ ಜಾಸ್ತಿ ಇರುತ್ತದೆ.. ಅದರ ಪ್ರಕಾರ ಗ್ರೇಡಿಂಗ್ ನಿರ್ಧಾರವಾಗುತ್ತದೆ.. ನಾನು ಕೆಲಸ ಮಾಡುವ ಯುಕೆಯ ನಾರ್ಥ್ ಸೀ (North sea) ಪ್ರದೇಶದಲ್ಲಿ ಸಿಗುವ ಆಯಿಲ್ಅನ್ನು ಬ್ರೆಂಟ್  ಯೆಂದು ಕರೆಯುತ್ತಾರೆ..ಇದು ಉತ್ಕೃಷ್ಟವಾಗಿರತ್ತದೆ.. ಹಾಗೆಯೇ ಅಮೇರಿಕಾದಲ್ಲಿ ಭೂಮಿಯಿಂದ ತೆಗೆಯುವ ಆಯಿಲ್ ಅನ್ನು WTI (West Texus Intermetiate) ಯೆಂದು ಕರೆಯುತ್ತಾರೆ.. ಹಾಗೂ ಅದು ಸಾಧಾರಣ ಕ್ವಾಲೆಟಿಯ ತೈಲ.. ಅರಬ್ ಪ್ರಾಂತ್ಯದ ಆಯಿಲ್ ಅನ್ನು ಓಪೇಕ್ ಬಾಸ್ಕೇಟ್ (OPEC Basket) ಎಂದು ಕರೆಯುತ್ತಾರೆ.
ಇನ್ನೂ ಆಯಿಲ್ (ತೈಲ) ವ್ಯವಹಾರದಲ್ಲಿ ಎರಡು ರೀತಿ ‌ಇದೆ.. ಶೇರು ಮಾರುಕಟ್ಟೆ ವ್ಯವಹಾರ ಹಾಗು ಕಮಾಡಿಟಿ ವ್ಯವಹಾರ (Commodity trading).  (ಚಿನ್ನದ ವ್ಯವಹಾರದ ರೀತಿಯಲ್ಲಿಯೇ ನಡೆಯವ ವ್ಯವಹಾರ). ಕಮೋಡಿಟಿ ವ್ಯವಹಾರದಲ್ಲಿ ಮತ್ತೊಂದು ವಿಧಾನವಿದೆ, ಅದನ್ನು ಫ್ಯೂಚರ್ ಟ್ರೇಡಿಂಗ್ ಏನ್ನುತ್ತಾರೆ.. ಅಂದರೆ, ಏಪ್ರಿಲ್ ಬೆಲೆಯನ್ನು ಜನವರಿಯಲ್ಲಿಯೇ ನಿರ್ಧರಿಸುವ ವಿಧಾನ.. ಉದಾಹರಣೆಗೆ, ಮಾರುವವರು (Seller) ( ಆಯಿಲ್ ಅನ್ನು ತಗೆಯುವ ಕಂಪನಿ) ಮತ್ತು ಕೊಂಡುಕೊಳ್ಳುವವರು ‌(Buyer) ( ಬಹುತೇಕ ಮಧ್ಯವರ್ತಿಗಳು) ಇಬ್ಬರು ಕುಳಿತುಕೊಂಡು,‌ ಬಹಳ ಸುಧೀರ್ಘವಾಗಿ ಸಮಾಲೋಚಿಸಿ ( ಬಿಗ್ ಡೇಟಾ ಹಾಗೂ‌ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ‌- AI ಸಹಾಯದಿಂದ)  ಪ್ರತಿ ‌ಬ್ಯಾರೆಲ್ಗೇ  25 ಡಾಲರ್ ಎಂದು ಬೆಲೆ ನಿರ್ಧರಿಸುತ್ತಾರೆ.. ಅದಕ್ಕೆ ತಕ್ಕ ಹಾಗೆ ಆಯಿಲ್‌ ಪ್ರೂಡ್ಯೂಸ್ ಆಗುತ್ತದೆ ಹಾಗೂ ಅದನ್ನು‌ ಏಪ್ರಿಲ್‌ ನಲ್ಲಿ ದುಡ್ಡು ಕೊಟ್ಟು ತೆಗೆದುಕೊಂಡು ಹೋಗುವುದು ಆಯಿಲ್‌‌ಅನ್ನು‌ ಕೊಂಡುಕೊಳ್ಳವವನ ಜವಾಬ್ದಾರಿ.. ಆದರೆ ನೆನಪಿಡಿ ಈ ಕ್ರೂಡ್ ಆಯಿಲ್ಅನ್ನು ಸಂಸ್ಕರಿಸದೆ ಅದರಿಂದ ಯಾವ ಲಾಭವು ಆಗುವುದಿಲ್ಲ.. ಈ‌ ರೀತಿ ಕೊಂಡುಕೊಳ್ಳವವರು ಇದನ್ನು ಇನ್ನೂ ಕೆಲವು ದಿನ ಶೇಖರಿಸಿ, ಬೆಲೆ‌‌ ಜಾಸ್ತಿಯಾದಗ, ರಿಫೈನರಿ ಕಂಪನಿಗಳಿಗೆ ಇನ್ನು‌ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ‌ಲಾಭ ಮಾಡಿಕೊಳ್ಳುತ್ತಾರೆ.. ರಿಫೈನರಿಗಳು ಈ ಕ್ರೂಡ್ ಆಯಿಲ್ ಅನ್ನು‌ ಸಂಸ್ಕರಿಸಿ ಡೀಸೆಲ್,‌ ಪೆಟ್ರೋಲ್ ಇತ್ಯಾದಿಗಳನ್ನು‌ ಮಾಡಿ ನಮ್ಮಂಥ‌ ಗ್ರಾಹಕರಿಗೆ ಮಾರುತ್ತಾರೆ..

ಮತ್ತಷ್ಟು ಓದು »