ರಾಷ್ಟ್ರೀಯತೆ ಮತ್ತು ಚುನಾವಣೆ
– ವರುಣ್ ಕುಮಾರ್
ಭಾರತದಲ್ಲಿ ಚುನಾವಣೆಗಳಿಗೇನೂ ಕಮ್ಮಿಯಿಲ್ಲ. ತಳಮಟ್ಟದ ಪಂಚಾಯತ್ ಗಳಿಂದ ಹಿಡಿದು ಲೋಕಸಭೆವರೆಗೂ ನಮ್ಮ ಚುನಾವಣೆಗಳ ಪಟ್ಟಿ ಇಡುತ್ತಾ ಹೋಗಬಹುದು.ಆಡಳಿತವು ಎಲ್ಲರಿಗೂ ಸಿಗಬೇಕೆನ್ನುವ ದೃಷ್ಟಿಯಲ್ಲಿ ಈ ರೀತಿಯ ವ್ಯವಸ್ಥೆಯು ಸೃಷ್ಟಿ ಮಾಡಿರುವುದು ಪ್ರಜಾಪ್ರಭುತ್ವದ ವೈಶಿಷ್ಟತೆಯೇ ಸರಿ. ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ರೀತಿಯ ವಿಷಯಗಳು ಅವರ ಬಳಿ ಇಟ್ಟು ಪಕ್ಷಗಳು ಮತಗಳನ್ನು ಯಾಚಿಸುತ್ತವೆ. ಮತದಾರ ಯಾರಿಗೆ ಒಲಿಯುತ್ತಾನೋ ಆ ಪಕ್ಷವು ಆಡಳಿತವನ್ನು ಪಡೆಯುವಲ್ಲಿ ಸಫಲವಾಗುತ್ತದೆ.ಇದರಲ್ಲಿ ಕೆಲ ವಿಷಯಗಳು ಚುನಾವಣೆಗಳ ದಿಕ್ಕನ್ನೇ ಬದಲಿಸುವ ಸಾಧ್ಯತೆಗಳು ಇರುವುದು ವಿಶೇಷ. ೮ ತಿಂಗಳಗಳ ಹಿಂದೆಯಷ್ಟೇ ಅಭೂತಪೂರ್ವವಾಗಿ ಗೆಲುವು ಸಾಧಿಸಿದ ಬಿಜೆಪಿಯು ಇತ್ತೀಚಿಗೆ ನಡೆದ ವಿವಿಧ ಅಸೆಂಬ್ಲಿ ಚುನಾವಣೆಗಳಲ್ಲಿ ತನ್ನ ಬಲವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಒಂದಿಷ್ಟು ಮೆಲುಕು ಹಾಕೋಣ. ಮತ್ತಷ್ಟು ಓದು