ಹೆಣ್ಣೆಂದರೆ ಹೀಗೇಕೆ…..?
-ಶ್ರೀದೇವಿ ಅಂಬೆಕಲ್ಲು॒॒
೩೭ ವರ್ಷಗಳ ಹಿಂದೆ ವಾರ್ಡ್ ಹುಡುಗನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಮಾನಸಿಕ ಯಾತನೆ ಅನುಭವಿಸುತ್ತಿರುವ ನರ್ಸ್ ಅರುಣಾ ಶಾನ್ಭಾಗ್ ಅವರ ನರಳುವಿಕೆ, ಮಾನಸಿಕ ನೋವು ಮತ್ತು ಆಕೆಯ ಗೆಳತಿ ಪಿಂಕಿ ವಿರಾನಿ ಅರುಣಾಗೆ ದಯಾಮರಣ ನೀಡಬೇಕೆಂದು ಅರ್ಜಿ ಸಲ್ಲಿಸಿರುವ ವರದಿ ಇತ್ತೀಚೆಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ, ಕೇಳಿದ್ದೇವೆ. ಹೀಗೆ ಹೆಣ್ಣು ಮಗಳೊಬ್ಬಳು ದೌರ್ಜನ್ಯಕ್ಕೊಳಗಾಗಿ ಅನುಭವಿಸುತ್ತಿರುವ ಯಾತನಾಮಯ ಜೀವನ ಇನ್ಯಾವ ಹೆಣ್ಣು ಮಗಳಿಗೂ ಬಾರದಿರಲಿ ಅನ್ನೋದು ಎಲ್ಲ ತಾಯಿ ಹೃದಯದವರ ಆಶಯ.
ಹೆಣ್ಣು ಹೆಣ್ಣೆಂದು ಹೆಣ್ಣನ್ನೇಕೆ ಹೀಗಳೆಯುವಿರಿ…?ಹೆಣಲ್ಲವೇ ನಮ್ಮನ್ನ ಹೆತ್ತ ತಾಯಿ…?
ಮಾರ್ಚ್ ೮ ಅಂತರರಾಷ್ಟ್ರೀಯ ಮಹಿಳಾ ದಿನ. ದಿನಾಚರಣೆಯ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷ ವಾಕ್ಯ ’ಶಿಕ್ಷಣ, ತರಬೇತಿ ಹಾಗೂ ವಿಜ್ಞಾನ, ತಂತ್ರಜ್ಞಾನಕ್ಕೆ ಸಮಾನ ಅವಕಾಶ-ಮಹಿಳೆಯರಿಗೆ ಒಳ್ಳೆಯ ಕೆಲಸಕ್ಕೆ ಹಾದಿ’.
ಒಬ್ಬ ಗಂಡಸಿನಷ್ಟೇ ಶ್ರಮ ವಹಿಸಿ ದುಡಿಯುವ ಹೆಣ್ಣು ಮಗಳಿಗೆ ನೀಡುವ ಸಂಬಳದಲ್ಲಿ ತಾರತಮ್ಯ ಮಾಡಲಾಗುತ್ತದೆ. ಗಂಡ ದಿನದ ೭ ಗಂಟೆ ದುಡಿದು ಬಂದು ತಾನೆ ಉತ್ಪಾದಕ ಎಂದು ಹೆಮ್ಮೆಯಿಂದ ಬೀಗಿಕೊಳ್ಳುತ್ತಾನೆ. ಇಡೀ ದಿನ ಮನೆಯಲ್ಲಿ ದುಡಿಯುವ ಹೆಂಡತಿಯ ಪರಿಶ್ರಮಕ್ಕೆ ಯಾವ ಬೆಲೆಯೂ ಇಲ್ಲ. ಒಂದು ಕಡೆ ವೇತನ ತಾರತಮ್ಯವಾದರೆ ಇನ್ನೊಂದೆಡೆ ಮಹಿಳಾ ದೌರ್ಜನ್ಯ ಪ್ರಕರಣಗಳು. ಮತ್ತೊಂದೆಡೆ ಕುಟುಂಬ ಜವಾಬ್ದಾರಿ ಹೊರಗಡೆಯೂ ದುಡಿಯಬೇಕು ಎಂಬ ಹೆಚ್ಚುವರಿ ಜವಾಬ್ದಾರಿ. ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಆದರೆ ಹೆಣ್ಣಿನ ಬದುಕು ಅಂದರೆ ಅದು ಕೇವಲ ನೋವುಗಳ ಸಂಕಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರೀಯಾಶಿಲತೆ, ನೋವು ನುಂಗುವ ಶಕ್ತಿ ಮತ್ತು ಸಂಘಟನೆಯಲ್ಲಿ ತಾನು ಮುಂದು ಎಂದು ಹೆಣ್ಣು ತೋರಿಸಿಕೊಟ್ಟಿದ್ದಾಳೆ.
ಹಿರಿಯ ಜೀವದ ಮನ ಆ ಕ್ಷಣ ತಳಮಳಗೊಂಡಿದ್ಯಾಕೆ?
Reading between the lines ಎಂಬ ಮಾತನ್ನು ಕೇಳಿರಬಹುದು. ಅಂತ ಮಾತಿಗೆ ಒಳ್ಳೆಯ ಉದಾಹರಣೆ ಚಿದಾನಂದ ಮೂರ್ತಿಯವರ ಪತ್ರ. ಪಾಪ ವಯಸ್ಸಾಯಿತು. ಅದರಿಂದ ಹೀಗೆಲ್ಲ ಬಡಬಡಿಸುತ್ತಿದ್ದಾರೆ ಅಂಥ ಕೆಲವು ಪತ್ರಿಕೆಗಳು ಬರೆದು ಕಾಸಿಗೆ ರಾಜ ಮಾರ್ಗ ಮಾಡಿಕೊಂಡವು. ನಿಜ.ಚಿಮೂ ಅವರಿಗೆ ವಯಸ್ಸಾಯಿತು.ಆದರೆ ಅವರಳೊಗಿನ ಸಂಶೋಧಕನಿಗೆ ಇತಿಹಾಸದ ಕ್ರೂರ ಅಧ್ಯಾಯಗಳ ಅರಿವಿದೆ. ಮೈ ಮರೆತರೆ ಮತ್ತೊಮ್ಮೆ ಇತಿಹಾಸ ಮರುಕಳಿಸಬಹುದೆಂದ ಸಹಜ ಆತಂಕವೂ ಇದೆ. ಹಂಪಿಯ ಬಗ್ಗೆ ಹೋರಾಡಿದವರ ಅರಿವಿಗೆ ದಂಡೆತ್ತಿ ಬಂದು ಧೂಳಿಪಟ ಮಾಡಿದವರ,ರಕ್ಕಸ ತಂಗಡಿಯ ನೆನಪು ಬಾರದಿರಬಹುದೇ? ಭಾವುಕ ಜೀವಿ ಚಿಮೂ ಅವರಿಗೆ ಇಳಿ ವಯಸ್ಸಿನಲ್ಲಿ ಇವೆಲ್ಲ ಇನ್ನೂ ಹೆಚ್ಚಾಗಿ ಕಾಡುತ್ತಿರಬಹುದು,ಅದರಲ್ಲೂ ಮೈ-ಕೈಗೆ ಎಣ್ಣೆ ಸವರಿಕೊಂಡು ಸತ್ಯ ಹೇಳಲು ಬಂದವರ ಕಣ್ಣಿಗೆ ಮಣ್ಣೇರಚಿ ಹಾದಿ ತಪ್ಪಿಸುವ ಜನರ ಮಧ್ಯೆ ಮಾತಾಡುವ ಚಾಣಕ್ಷ ಮಂದಿಯ ನಡುವೆ ದಿಗಿಲಿಗೆ ಬಿದ್ದ ಆ ಹಿರಿಯ ಜೀವದ ತಲ್ಲಣ ನಮಗರಿವಾಗುತ್ತಿಲ್ಲವಾ?ಡಾಲರ್ ಲೆಕ್ಕಕ್ಕೆ : ಕನ್ನಡ ಪಕ್ಕಕ್ಕೆ
– ರಾಕೇಶ್ ಶೆಟ್ಟಿ
ಬೆಳಗಾವಿಯಲ್ಲಿ ನಡೆಯೋ ವಿಶ್ವ ಸಮ್ಮೇಳನದ ಉದ್ಘಾಟನೆಗಾಗಿ ಇನ್ಫೋಸಿಸ್ ನಾರಾಯಣ ಮೂರ್ತಿಯವರನ್ನ ಸರ್ಕಾರ ಆಹ್ವಾನಿಸಿದ್ದು, ಮತ್ತದಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಕ್ಷೇಪಿಸಿ ಪತ್ರ ಬರೆದಿದ್ದು ಈದೀಗ ಚರ್ಚೆಗೆ ಗ್ರಾಸವಾಗಿದೆ.ಯಾರೇ ಕೂಗಾಡಲಿ ಊರೇ ಹೊರಾಡಲಿ ’ಇನ್ಫಿ ನಾಣಿ’ಯವ್ರೆ ಉದ್ಘಾಟನೆ ಮಾಡ್ತಾರೆ ಅಂತ ಯಡ್ಯೂರಪ್ಪನವ್ರು ಹೇಳಿಯಾಗಿದೆ.ಅದು ಬದಿಗಿರಲಿ.ಬರಗೂರರ ಪತ್ರಕ್ಕೆ ಪ್ರತಿವಾದವಾಗಿ ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ “ನಾರಾಯಣ ಮೂರ್ತಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟದ್ದು ಕನ್ನಡದ ಕೆಲಸವಲ್ಲವೇ?ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವೇ? ” ಅಂತ ಕೇಳಿದ್ದಾರೆ.ಮುಕ್ತ ಚರ್ಚೆಗೆ ಆಹ್ವಾನವನ್ನು ನೀಡಿದ್ದಾರೆ.ಅದನ್ನೆಲ್ಲ ಓದುವಾಗ ಬಹಳಷ್ಟು ಜನ ಬರಗೂರರಿಗೆನು ಹಕ್ಕಿದೆ?ಸಾಹಿತಿಗಳೇ ಏಕೆ ಬೇಕು ಅಂದಿದ್ದಾರೆ?
ನಿಜ.ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವಲ್ಲ ಅನ್ನುವ ಪ್ರತಾಪ್ ಮಾತು ಒಪ್ಪಲೆಬೇಕಾದದ್ದು.ಆದರೆ ಬೆಂಗಳೂರಿನ ಭಾಗ್ಯೋದಯಕ್ಕೂ ಇನ್ಫೋಸಿಸ್ ನಾರಾಯಣ ಮೂರ್ತಿಯವರೆ ಕಾರಣ ಅನ್ನುವ ರೀತಿಯ ಮಾತುಗಳು ಸಹ್ಯವೇ?ಸುಮ್ಮನೆ ಕನ್ನಡಿಗರಿಗೆ ಕೆಲಸ ಕೊಟ್ರೂ,ಜೀವನ ಕೊಟ್ರೂ ಅಂತ ಅಬ್ಬರಿಸಿದರಾಯಿತೆ.ಕನ್ನಡಿಗರಿಗೆ ಕೆಲಸ ಕೊಟ್ರೂ ಕೊಟ್ರೂ ಅನ್ನೋವ್ರು ಒಮ್ಮೆ ಹೋಗಿ ಮೂರ್ತಿಯವರ ಕಂಪೆನಿಯಲ್ಲಿ ಎಷ್ಟು ಪ್ರತಿಶತ ಜನ ಕನ್ನಡಿಗರಿದ್ದಾರೆ?ಅಲ್ಲಿರುವ ಕನ್ನಡಿಗರಾದರು ಯಾವ ಡೆಸಿಗ್ನೇಷನ್ ಹೊಂದಿದ್ದಾರೆ? ಅಸಲಿಗೆ ಅಲ್ಲಿನ ಕನ್ನಡಿಗ ಉದ್ಯೋಗಿಗಳ ಪಾಡೇನಿದೆ ಅನ್ನುವುದಾದ್ರು ಕೇಳಿ ನೋಡಿ.ಅಲ್ಲಿ ಯಾರ ಕಾರು-ಬಾರು ನಡೆಯುತ್ತಿದೆ ಅನ್ನುವುದು ತಿಳಿಯಬಹುದು. ಇವೆಲ್ಲದರ ಸತ್ಯ ದರ್ಶನವಾದರೆ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟರು ಅನ್ನುವಂತೆ ಮಾತಾಡಿರುವುದು ಸುಳ್ಳೇ ಸುಳ್ಳು ಅನ್ನುವುದು ಗೊತ್ತಾಗುತ್ತದೆ.
ನಾರಾಯಣ ಮೂರ್ತಿ ಅವರಿಂದ ಏನ್ ಕಲಿಬೇಕು, ಏನ್ ಬೇಡ ?
ಮೂರ್ತಿಯವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ !

ವಿಜಯ್ ಮಲ್ಯ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕು!

ಈ ಸುದ್ದಿ ಸಂಪಾದಕೀಯದ ಕಣ್ತಪ್ಪಿದ್ದು ಹೇಗೆ?
ವಿಶೇಷ ಅಂದ್ರೆ ಈ ಬ್ಲಾಗು ನಡೆಸೋರು ಯಾರು ಅಂತ ತಿಳಿಯೋಕೆ ಜನ್ರು ಮಾಡಿದ ತಿಣುಕಾಟ, ಹಾಕಿದ ಗೆಸ್ಸು ಕಡಿಮೆಯೇನಲ್ಲ. ಆದರೆ ಸಂಪಾದಕೀಯದ್ದು ಇದಕ್ಕೆಲ್ಲ ದಿವ್ಯಮೌನವೇ ಉತ್ತರ. ಇಂಥ ಮೌನವೇ ಜನರಿಗೆ ಈ ಬ್ಲಾಗಿನ ವಿಷಯಗಳಲ್ಲಿ ಓದುಗರಿಗೆ ಇನ್ನಷ್ಟು ಕುತೂಹಲ ಬೆಳೆಯುವಂತೆ ಮಾಡಿದೆ.ಸಂಪಾದಕೀಯ ಅಷ್ಟೇ ಮಾಡಿ ಸುಮ್ಮನಾಗಿದ್ರೆ ಅದರಲ್ಲಿ ಏನೂ ವಿಶೇಷ ಇರುತ್ತಿರಲ್ಲಿಲ್ಲ.ಟೀವಿ ಪೇಪರ್ ಹೀಗೆ ಎಲ್ಲ ಮಾಧ್ಯಮಗಳ ಆರೋಗ್ಯದ ಬಗ್ಗೆ ಆಗಾಗ ಮಾತಾಡ್ತಾ ಮೀಡಿಯಾಗಳ ಹಿಡನ್ ಅಜೆಂಡಾಗಳನ್ನು, ಹಿತಾಸಕ್ತಿಗಳನ್ನು ಜನರ ಎದುರಿಗೆ ಬೆತ್ತಲೆಗೊಳಿಸಿದ್ದು ಸುಳ್ಳೇನಲ್ಲ.ಇದೊಂಥರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್ ಅನ್ನಿಸಿದ್ರೆ ವಿಶೇಷವೇನಿಲ್ಲ ಬಿಡಿ. ಮತ್ತಷ್ಟು ಓದು 
ಹಾರೋಬೂದಿಯ ವಿರುದ್ಧ ಅಖಾಡಕ್ಕಿಳಿದ ಪೇಜಾವರ ಶ್ರೀ ಮತ್ತು ಸಂಘಟನೆಗಳು
“ಎಂಥ ದೊಡ್ಡ ದೊಡ್ಡರೆಲ್ಲ ಬಂದ್ರು, ವೀಡಿಯೋ ಮಾಡಿದ್ರು, ಪತ್ರಿಕೆಯವ್ರು ಬಂದ್ರು ಏನೆಲ್ಲ ಬರೆದ್ರೂ, ಬೂದಿ ಪರೀಕ್ಷೆ ಮಾಡ್ತೀವಿ ಅಂತ ಬಂದ್ರು, ಬೇಕಾದ್ದು ರಿಪೋರ್ಟ್ ಕೊಟ್ರು ಆದ್ರು ಯಾರಿಂದಲೂ ಏನೂ ಮಾಡೋಕೆ ಆಗ್ಲಿಲ್ಲ. ಇನ್ನು ನೀವ್ ವಿಡೀಯೋ ಮಾಡಿ ಏನ್ ಬರೆದ್ರೂ ನಮಗೇನಿಲ್ಲ. ಇದು ಸರ್ಕಾರದ್ದೇ ಪ್ರೋಜೆಕ್ಟ್, ಸರಕಾರದ್ದೇ ಕಂಪೆನಿ. ಏ ಇವರ ಇವರ ಕಾರಿಗೆ ಅಡ್ಡ ನಿಲ್ಲಿಸ್ರೋ. ಕ್ಯಾಮೆರಾ ಕಿತ್ತುಕೊಳ್ಳೋ….”
ಎಂದು ಇತ್ತಿಚೆಗೆ ಉಡುಪಿಯ ಪ್ರತಿಷ್ಠಿತ ಕಂಪೆನಿಯ ಗುತ್ತಿಗೆದಾರನೊಬ್ಬ ಹಾರೋಬೂದಿ ಇರುವ ಸ್ಥಳಕ್ಕೆ ಹೋದ್ರೆ ಈ ರೀತಿ ಧಮ್ಕಿ ಹಾಕುತ್ತಾನೆ. ಇಷ್ಟೆಲ್ಲ ಧೈರ್ಯದಿಂದ ಈ ಗುತ್ತಿಗೆದಾರ ಮಾತಾಡ್ತಾ ಇರಬೇಕಾದ್ರೆ ಅವನ ಹಿಂದೆ ಪ್ರಬಲವಾದ ಕಾಣದ ಕೈ ಇರಬಹುದು ನೀವೆ ಯೋಚಿಸಿ. ಇಂಥ ಎಷ್ಟೋ ಜನರ ಉಪಟಳವನ್ನು ನಮ್ಮ ಜನ ಎಷ್ಟು ದಿನ ಅಂತ ಸಹಿತಾರೇ? ಅದಕ್ಕೆ ನೋಡಿ ಈ ಪ್ರತಿಷ್ಠಿತ ಕಂಪೆನಿ ಮತ್ತು ಅಹಂಕಾರಿಗಳ ವಿರುದ್ಧ ನೊಂದ ಜನತೆ ಚಳುವಳಿಗೆ ಇಳಿದಿದ್ದಾರೆ.
ಯುಸಿಪಿಎಲ್ ವಿರುದ್ಧ ಜನಾಂದೋಲನ”
“ಪೇಜಾವರ ಶ್ರೀ ಹಾರೋಬೂದಿಯಿಂದ ತೊಂದರೆಗೊಳಗಾದವರ ನಿವಾಸಗಳಿಗೆ ಭೇಟಿ, ನಾಗಾರ್ಜುನ ಆಧುನಿಕ ಭಸ್ಮಾಸುರ ಈ ಯೋಜನೆಯ ವಿರುದ್ಧ ಯಾರೇ ಹೋರಾಟ ಮಾಡಿದರೂ ನನ್ನ ಸಂಪೂರ್ಣ ಬೆಂಬಲ ಇದೆ”
ಹಾರೂಬೂದಿ ಅತ್ಯಂತ ವಿಷಕಾರಕ ಅಂಶ ಹೊಂದಿದ್ದು ಪರಿಸರ ಜಾನುವಾರು ಹಾಗೂ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ- ಪರಿಸರವಾದಿ ಡಾ.ಎನ್.ಎ. ಮಧ್ಯಸ್ಥ ಆತಂಕ”
“ ಕಂಪೆನಿಯನ್ನು ಸ್ಥಗಿತಗೊಳಿಸಲು ಮಾರ್ಚ್ ೫ ರಂದು ದಕ್ಷಿಣಕನ್ನಡ ಉಡುಪಿ ಬಂದ್ ನಡೆಸಲು ನಿರ್ಧಾra
ಇವೆಲ್ಲ ಇತ್ತೀಚೆಗೆ ಪ್ರಜಾವಾಣಿಯಲ್ಲಿ ಮೂಡಿಬಂದ ಸುದ್ದಿಗಳು
ನಿಲುಮೆಯ ಪ್ರಿಯ ಓದುಗರೇ, ಕಳೆದ ಕೆಲವು ದಿನಗಳ ಹಿಂದೆ ನಂದಿಕೂರಿನ ಪ್ರತಿಷ್ಠಿತ ಕಂಪೆನಿಯ ಕುರಿತಂತೆ ಹಾರೋಬೂದಿಯ ನೋಡಿದಿರಾ ಎಂಬ ಲೇಖನ ಪ್ರಕಟವಾಗಿತ್ತು. ಅದರಲ್ಲಿ ಬೂದಿಯಿಂದ್ ಆಗುತ್ತಿರುವ ತೊಂದರೆಯ ಬಗ್ಗೆ ಮತ್ತು ಜನರ ಬಗ್ಗೆ ಹೇಳಲಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಸಂಘಟನೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರ ಮುಂದುವರಿಕೆಯೆಂಬಂತೆ ಈ ಸಮಸ್ಯೆಯ ವಿರುದ್ಧ ಜನಾಂದೋಲನ ಆರಂಭವಾಗಿದೆ.
ಪೇಜಾವರಶ್ರೀಗಳು ಸೇರಿದಂತೆ ಅನೇಕ ಪ್ರಮುಖರು ಈ ಅಂದೋಲನದಲ್ಲಿ ಪಾಲ್ಗೊಂಡಿದ್ದಾರೆ. ಈ ಆಂದೋಲನ ಪ್ರಾರಂಭವಾಗಿ ನಂದಿಕೂರಿನ ಸುತ್ತಮುತ್ತಲ ಪ್ರದೇಶಗಳಾದ ಎರ್ಮಾಳು, ಕಟ್ಪಾಡಿ, ಉದ್ಯಾವರ ಸೇರಿದಂತೆ ಸುಮಾರು ೫೦ ಕಡ್ಗಳಲ್ಲಿ ಪಾದಯಾತ್ರೆ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಅಲ್ಲದೇ ಇದೇ ಮಾರ್ಚ್ ೫ ರಂದು ದಕ್ಷಿಣಕನ್ನಡ ಉಡುಪಿ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ. ಈ ಜನಾಂದೋಲನದಲ್ಲಿ ಪಾದಯಾತ್ರೆಯ ಮೂಲಕ ಕಂಪೆನಿಯ ಯೋಜನೆಯ ಅಪಾಯವೆನ್ನು ಬಿಂಬಿಸುವ ಟ್ಯಾಬ್ಲೋ ಹಾಗೂ ಧ್ವನಿಮುದ್ರಿತ ಯಕ್ಷಗಾನ ಪ್ರಸಂಗ, ಕಂಪೆನಿ ವಿರೋಧಿ ಘೋಷಣೆಗಳು, ಭಿತ್ತಿಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಗಿದೆ. ದಕ್ಷೀಣಕನ್ನಡ ಜಿಲ್ಲಾ ಬಂದ್ಗೆ ಜಿಲ್ಲೆಗಳ ಪ್ರಮುಖ ಸಂಘಟನೆಗಳಾದ ಮೀನುಗಾರರ ಸಂಘ, ಉಡುಪಿ ತಾಲೂಕು ಗ್ರಾಮ ಪಂಚಾಯಿತಿ ಒಕ್ಕೂಟ, ವಿಜಯಕುಮಾರ ಹೆಗ್ಡೆ ನೇತೃತ್ವದ ರೈತಸಂಘ, ಉದ್ಯಾವರ ಗ್ರಾಮ ಸಂರಕ್ಷಣಾ ಸಮಿತಿ ಮೊದಲಾದ ಸಂಘಟನೆಗಳು ಬೆಂಬಲ್ ಸೂಚಿಸಿವೆ.
ಇದೆಲ್ಲ ಬೆಳವಣಿಗೆಗಳನ್ನು ನೋಡಿದಾಗ ನೊಂದ ಜನರಿಗೆ ನ್ಯಾಯ ದೊರೆಯಬಹುದೆಂಬ ಆಶಾಕಿರಣ ಮೂಡುತ್ತಿದೆ. ಈಗ ಹೋರಾಟ ಮುಂದಾಗಿರುವ ಸಂಘಟನೆಗಳು ಯಾವುದೇ ಒತ್ತಡಕ್ಕೆ ಮಣಿಯದೇ ಜನಪರವಾದ ಹೋರಾಟ ಮಾಡಿ ಮುಂದೆ ಬರಬಹುದಾದ ದೊಡ್ಡ ಗಂಡಾಂತರವನ್ನು ತಪ್ಪಿಸಬೇಕಾಗಿದೆ. ಇದಲ್ಲದೇ ಈ ಹೋರಾಟಕ್ಕೆ ಸ್ಥಳೀಯ ಜನರ ಬೆಂಬಲವೂ ಅತ್ಯಗತ್ಯ.
ಚಿತ್ರ ಕೃಪೆ: deccanherald.com, thecanaratimes.com
ನಾವು ಸ್ವತಂತ್ರರೇ..?
ಮಮತ ಕಂಡ್ಲೂರು
ಅಂದು ಸಿಕ್ಕಿತ್ತು ಮುಕ್ತಿ
ಕಳಚಿತ್ತು ಆ ಪರರ ಕಪಿಮುಷ್ಟಿ
ಅಂತೂ ಇಂತೂ ಸ್ವಾತಂತ್ರ್ಯ ಬಂತೆಂದರು ಹಿರಿಯರು
ತನ್ನ ಕರುಳಕುಡಿಗಳಿವರೆಲ್ಲ ಒಂದೆಂಬ ಭಾವದಿ
ಇಹರೆಂದು ‘ಭರತಮಾತೆ’ಯ ಎದೆಯು ಮಿಡಿದಿತ್ತು.
ಆಹಾ, ಎಂಥಾ ಪರಮಾನಂದವಾಗುತ್ತಿದೆ.
ನಮ್ಮದೇ ನೆಲ,ಜಲ,ಗಾಳಿ ಕೊನೆಗೆ ನಮ್ಮದೇ ‘ಸರಕಾರ’.
ನೆಮ್ಮದಿಯ ಉಸಿರು ಬಿಡುತ್ತಿದ್ದಂತೆ,
ಆರಂಭವಾಯ್ತು ಪ್ರಗತಿಯ ಅರಸುವಿಕೆ!
ಜನ್ಮತಾಳಿದುವು ಕಟ್ಟಡಗಳು ಗೆದ್ದಲಗೂಡಿನ ತೆರದಿ.
ಬಲಿಯಾಗಿ ಪಕ್ಷಪಕ್ಷಗಳ ಸ್ವಾರ್ಥರಾಜಕೀಯಕ್ಕೆ
ಅನಾಥಭಾವದಿ ನರಳುವಂತಾಯ್ತು ಬಡಜನತೆ.
ಬೆಳೆದವು ಸರಕಾರದ ಯೋಜನೆಗಳು ಹನುಮಂತನ ಬಾಲದಂತೆ…… ಮತ್ತಷ್ಟು ಓದು 
ಜೋತಿಷ್ಯ ಎಂಬ ಹಗಲು ದರೋಡೆ!
– ಸುಪ್ರೀತ್ ಕೆ.ಎಸ್
ಒಂದಕ್ಕೆ ಎರಡು ಪಟ್ಟು ಹಣ ಕೊಡುತ್ತೇವೆ ಎಂದು ನಂಬಿಸಿ ಹಣ ಪಡೆದು ಮೋಸ ಮಾಡಿ ಓಡಿ ಹೋಗುವ ವಂಚಕರನೇಕರ ಬಗೆಗೆ ಜನರು ಮಾಧ್ಯಮಗಳಲ್ಲಿ ದಿನವೂ ನೋಡುತ್ತಾರೆ. ಕಣ್ಣೆದುರೇ ಹಣ ಕಳೆದುಕೊಂಡು ಬೆಪ್ಪರಾಗಿ, ಅಸಹಾಯಕರಾಗಿ ನಿಂತ ಗ್ರಾಹಕರನ್ನೂ ಕಂಡಿರುತ್ತಾರೆ. ಹಣ ದ್ವಿಗುಣ, ಲಾಟರಿಯಂತಹ ಪ್ರಲೋಭನೆಗಳಿಗೆ ಒಳಗಾಗದೆ, ವಂಚನೆಯಿಂದ ದೂರ ಉಳಿದವರು ಕೆಲವು ರೀತಿಯ ಪ್ರಶ್ನೆಗಳನ್ನು ತಮ್ಮಲ್ಲೇ ಕೇಳಿಕೊಂಡಿರುತ್ತಾರೆ. ಅವೆಂದರೆ: ನ್ಯಾಯಯುತವಾಗಿ ಈ ಮನುಷ್ಯ ಅತೀ ಕಡಿಮೆ ಸಮಯದಲ್ಲಿ ಹಣವನ್ನು ದ್ವಿಗುಣಗೊಳಿಸುವುದಕ್ಕೆ ಹೇಗೆ ಸಾಧ್ಯ? ಹಾಗೆ ಹಣ ದ್ವಿಗುಣಗೊಳಿಸುವ ಯಾವ ವ್ಯಾಪಾರ, ತಂತ್ರಗಾರಿಕೆ ಈತನಿಗೆ ಗೊತ್ತು? ನಮಗೆ ಎರಡು ಪಟ್ಟು ಹಣ ಹಿಂದಿರುಗಿಸುವುದಕ್ಕೆ ಈತನಿಗೆ ಅಥವಾ ಈತನ ಸಂಸ್ಥೆಗೆ ಎಲ್ಲಿಂದ ಸಂಪತ್ತಿನ ಮೂಲವಿದೆ? ನಾನು ಬೆವರು ಸುರಿಸಿ ದುಡಿಯದೆ, ನನ್ನ ಪರಿಶ್ರಮ ಇಲ್ಲದೆ, ನನ್ನ ಪ್ರತಿಭೆಯ ವಿನಿಯೋಗವಿಲ್ಲದೆ ಸುಲಭವಾಗಿ ಹಣವನ್ನು ಪಡೆಯುವುದು ನೈತಿಕವಾಗಿ ನನಗೆ ಸಮ್ಮತವೇ? ಪ್ರತಿಯೊಬ್ಬರೂ ಹೀಗೇ ಹಣ ಮಾಡುವ ವಿಧಾನ ಕಂಡುಕೊಂಡರೆ ನಿಜವಾದ ಪರಿಶ್ರಮ, ಪ್ರತಿಭೆ, ಬದ್ಧತೆ, ತಾಂತ್ರಿಕ ಕೌಶಲ್ಯ ಬೇಡುವ ಕೆಲಸಗಳನ್ನು ಮಾಡುವವರು ಯಾರು?
ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮನುಷ್ಯನಿಗೆ ಸಹಜವಾಗಿ ತನ್ನ ಮೇಲೆ ಆತ್ಮವಿಶ್ವಾಸವಿರುತ್ತದೆ. ತನ್ನ ದುಡಿಮೆಯ ಮೇಲೆ ನಂಬಿಕೆಯಿರುತ್ತದೆ. ನೈತಿಕವಾಗಿ ಈತ ಸದೃಢನಾಗಿರುತ್ತಾನೆ. ಯಾವನಾದರೂ ವಂಚಕ, “ಈ ನಮ್ಮ ಯೋಜನೆಯಲ್ಲಿ ಹಣ ತೊಡಗಿಸಿ ನಿಮಗೆ ಒಂದೇ ತಿಂಗಳಲ್ಲಿ ಹಣ ದ್ವಿಗುಣಗೊಳಿಸಿ ಕೊಡುತ್ತೇವೆ.”, “ನಿಮ್ಮ ಹಣವನ್ನು ನಾವು ಟೀಕ್ ಮರ ಮೊದಲಾದ ಬೆಲೆಬಾಳುವ ಸಂಪತ್ತಿನಲ್ಲಿ ಹೂಡುತ್ತೇವೆ, ಐದು ವರ್ಷದಲ್ಲಿ ಕೋಟ್ಯಾಧಿಪತಿಯಾಗುವಿರಿ” ಎಂಬ ಪ್ರಲೋಭನೆಗಳನ್ನು ಒಡ್ಡಿದರೆ, ಆತನಿಗೆ ಎಂಥದ್ದೇ ಆರ್ಥಿಕ ಮುಗ್ಗಟ್ಟಿದ್ದರೂ, ಸ್ಪಷ್ಟವಾದ ಪ್ರಶ್ನೆಗಳು ಹಾಗೂ ಸಂಶಯಿಸಿ ಪರೀಕ್ಷಿಸುವ ಬುದ್ಧಿಯಿರುವ ಆತ ಮೋಸ ಹೋಗುವುದಿಲ್ಲ. ಇಂತಹ ವಂಚಕರಿಂದ ಪ್ರಾರಂಭದ ಮಟ್ಟಿಗೆ ಒಂದಷ್ಟು ಮಂದಿ ನಿಜವಾಗಿ ಹಣ ದ್ವಿಗುಣಗೊಳಿಸಿಕೊಂಡರೂ, ಹಡಗು ಸುಭದ್ರವಾಗಿ ತೇಲುತ್ತಿರುವಂತೆ ಕಂಡರೂ ಆತ ಸಂಯಮದಿಂದ ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಾನೆ. ಇವೆಲ್ಲ ಹುಲಿಯನ್ನು ಬೇಟೆಯಾಡಲಿಕ್ಕೆ ಬೇಟೆಗಾರ ಒಡ್ಡುವ ಕುರಿ, ಮೇಕೆ, ಆಕಳು ಮೊದಲಾದ ಪ್ರಲೋಭನೆಗಳಿದ್ದ ಹಾಗೆ ಎಂಬುದು ಆತನಿಗೆ ಸ್ಪಷ್ಟವಾಗುತ್ತದೆ. ತನ್ನಲ್ಲಿರುವ ಹಣದಲ್ಲಿ ಇಂತಹ ವಂಚಕ ಏಜೆನ್ಸಿಗಳಲ್ಲಿ ಇನ್ವೆಸ್ಟ್ ಮಾಡುವುದಕ್ಕೆ ಹೊರೆ ಆಗಲಾರದು ಅನ್ನಿಸಿದರೂ, ಹೋದರೆ ಹೋದರೆ ಅಡಿಕೆ, ಬಂದರೆ ಆನೆ ಎಂಬಂತೆ ಕಣ್ಣು ಮುಚ್ಚಿ ಆತ ಮೋಸ ಹೋಗುವುದಕ್ಕೆ ಸಿದ್ಧನಾಗುವುದಿಲ್ಲ. ಮತ್ತಷ್ಟು ಓದು 
ಅಭಿಮಾನಿಯ ಹರಕೆ ಫಲಿಸಿದಾಗ !
ರಶ್ಮಿ ಕಾಸರಗೋಡು
ಸಚಿನ್ ತೆಂಡೂಲ್ಕರ್ ಅಬ್ಬರದ ಆಟ ಮತ್ತು ದಾಖಲೆಗಳ ಬಗ್ಗೆ ಪತ್ರಿಕೆಗಳಲ್ಲಿ, ಬ್ಲಾಗ್್ಗಳಲ್ಲಿ ಸಾಕಷ್ಟುಜನ ಈಗಾಗಲೇ ಬರೆದಿದ್ದಾರೆ. ಆದರೆ ಸಚಿನ್ ಬಗ್ಗೆ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ವಿಷಯ ಇದ್ದೇ ಇರುತ್ತದೆ. ಇಂದು ಮುಂಜಾನೆ ರಾತ್ರಿ ಪಾಳಿ ಮುಗಿಸಿ ಆಫೀಸಿನಿಂದ ಹೊರಡಬೇಕು ಅನ್ನುವಷ್ಟು ಹೊತ್ತಿಗೆ ಅಂದ್ರೆ 3.30ಕ್ಕೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ 15ನೇ ಪುಟದಲ್ಲಿ 20 years ago…ಅಂತಾ ಒಂದು ಸುದ್ದಿ ಓದಿದೆ. ಅದೂ 20 ವರ್ಷಗಳ ಹಿಂದೆ ಸಚಿನ್ ಬರೆದ ಒಂದು ಪತ್ರದ ಸುದ್ದಿ. ಆಗಲೇ ನನಗೆ ಸಚಿನ್ ಬರೆದ ಪತ್ರದ ಬಗ್ಗೆ ಬರೆಯೋಣ ಅಂತಾ ಅನಿಸಿದ್ದು. ಸಚಿನ್ ತೆಂಡೂಲ್ಕರ್್ನ್ನು ಈವರೆಗೆ ಟಿವಿಯಲ್ಲಿಯೇ ನೋಡಿದ್ದು. ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವ ವರೆಗೂ ಸಚಿನ್ ಆಟಗಳನ್ನು ತಪ್ಪದೆ ನೋಡುತ್ತಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಮ್ಯಾಚ್ ನೋಡೋಕೆ ಸಮಯ ಸಿಕ್ತಾ ಇಲ್ಲ. ಬರೀ ಸುದ್ದಿ ಮಾಡುವುದೇ ಆಯ್ತು.










