ವಿಷಯದ ವಿವರಗಳಿಗೆ ದಾಟಿರಿ

Archive for

7
ಸೆಪ್ಟೆಂ

ಮರೆಯಾಯಿತೇ, ನಮ್ಮ ಕ್ರಿಯಾಶೀಲತೆ ?

ಮಧುಚಂದ್ರ ಭದ್ರಾವತಿ
ಅಮೇರಿಕ ಖಂಡವನ್ನು ಅನ್ವೇಷಣೆ ಮಾಡಿದ ಸಲುವಾಗಿ ಸ್ಪೇನ್ ದೇಶದ ರಾಣಿ ಇಸಬೆಲ ಒಂದು ಕೂಟವನ್ನು ಏರ್ಪಡಿಸಿದ್ದಳು. ಅಲ್ಲಿಗೆ ಕೊಲಂಬಸ್ ಸಹ ಬಂದಿದ್ದನು. ಎಲ್ಲರೂ ಮೇಜಿನ ಮುಂದೆ ಕುಳಿತಿರುವಾಗ ಅಲ್ಲಿ ನೆರೆದಿದ್ದ ಅಮಂತ್ರಿತರನ್ನು ಕುರಿತು ” ಮೊಟ್ಟೆಯನ್ನು ಯಾರು ಮೇಜಿನ ಮೇಲೆ ನಿಲ್ಲಿಸುತ್ತಿರ ” ಎಂದು ಪ್ರಶ್ನೆಯನ್ನು ಇಟ್ಟಳು. ಅಲ್ಲಿದ್ದ ಮಹಾ ಜನರು ಅದೇನು ಮಹಾ ಎಂದು ಮೊಟ್ಟೆಯನ್ನು ಮೇಜಿನ ಮೇಲೆ ನಿಲ್ಲಿಸಲು ಪ್ರಯತ್ನಿಸಿ ವಿಫಲರಾದರು. ಆಗ ಕೊಲಂಬಸ್ ಬೆಂದ ಮೊಟ್ಟೆಯನ್ನು ಕುಕ್ಕಿ ನಿಲ್ಲಿಸಿದಾಗ ಅಲ್ಲಿ ನೆರೆದಿದ್ದ ಕೆಲವರು ಹೊಗಳಿದರೆ, ಮತ್ತೆ ಕೆಲವರು ಇದನ್ನು ನಾನು ಮಾಡುತಿದ್ದೆ ಇದರಲ್ಲಿ ಏನು ಇದೆ ಎಂದು ತಿರಸ್ಕಾರದಿಂದ ತೆಗಳಿದರು.

ಮೇಲಿನ ಕತೆ ಯಾಕೆ ಬಂತು ಅಂದರೆ ನಮ್ಮ ಸುತ್ತಲಿನ ಪರಿಸರದಲ್ಲಿ ಮೇಲಿನ ಅಪಸ್ವರಗಳು ನಿತ್ಯ ನಡೆಯುತ್ತಲೇ ಇವೆ. ಕೆಲವರು ಬೇರೆಯವರ ಶೈಲಿಯನ್ನು ಅನುಕರಣೆ ಮಾಡಿ ಇದರ ಮೂಲ ತಮ್ಮದೆಂದು ಪ್ರತಿಪಾದಿಸುತ್ತ ಮೇಲೇರುತ್ತಾರೆ. ಕೇವಲ ಪುಸ್ತಕ , ಕಾದಂಬರಿಗೆ ಸೀಮಿತವಾದ ಕೃತಿ ಚೌರ್ಯ ಎಲ್ಲೆಡೆ ವಿರಾಜಮಾನವಾಗಿ ಬಿಟ್ಟಿದೆ. ಬೆಂಗಳೂರಿನ ಎಸ್ ಪಿ ರಸ್ತೆ, ನ್ಯಾಷನಲ್ ಮಾರ್ಕೆಟ್ ಮತ್ತು ರೋಡ್ ಸೈಡ್ ನಲ್ಲಿರುವ ಪುಟ್ಟ ಅಂಗಡಿಗಳಿಗೆ ಹೋದಲ್ಲಿ ನಿಮಗೆ ಬೇಕಾದ ವಸ್ತುವಿನ ನಕಲಿನ ಮಾಲು ಕೊಳ್ಳಲು ಸಿದ್ದವಾಗಿರುತ್ತದೆ. ಐಫೋನ್, ಎಯೇಫೋನ್ ನೋಕಿಯಾ ನಕಿಯ, ರೈಬ್ಯಾನ್ , ರಬನ್ ಎಂದು ಬ್ರಾಂಡ್ ಹೆಸರಲ್ಲಿ ಮಾರಾಟಕಿರುತ್ತವೆ. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕೊಂಡು ಕೊಳ್ಳುವವರು ಸಂಖ್ಯೆ ತಸು ಜಾಸ್ತಿನೇ.

ಮತ್ತಷ್ಟು ಓದು »