ವಿಷಯದ ವಿವರಗಳಿಗೆ ದಾಟಿರಿ

Archive for

15
ಸೆಪ್ಟೆಂ

ಮುಲ್ಲಾ ಇಸ್ಲಾಂ ಮತ್ತು ಮಹಾತ್ಮರ ಘನತೆ

-ಡಾ ಅಶೋಕ್ ಕೆ ಆರ್

ವರುಷದ ಹಿಂದೆ ಸಂದರ್ಶನವೊಂದರಲ್ಲಿ ಶಾರೂಕ್ ಖಾನ್ ‘ಮುಲ್ಲಾಗಳ ಇಸ್ಲಾಂ ಮತ್ತು ಅಲ್ಲಾಹುವಿನ ಇಸ್ಲಾಂ’ ಎಂಬ ಮಾತು ಹೇಳಿದ್ದರು. ಮುಲ್ಲಾಗಳ ಇಸ್ಲಾಂನಿಂದ ಇಸ್ಲಾಂ ಧರ್ಮಕ್ಕೆ ಮತ್ತು ಮುಖ್ಯವಾಗಿ ಮನುಷ್ಯತ್ವಕ್ಕೆ ಆಗುತ್ತಿರುವ ಹಾನಿಯನ್ನು ವಿವರಿಸಿದ್ದರು ಶಾರೂಕ್. ಚಲನಚಿತ್ರವೊಂದರ ಸಂಬಂಧವಾಗಿ ಲಿಬಿಯಾ ಮತ್ತಿತರ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ನಡೆಯುತ್ತಿರುವ ವಿನಾಕಾರಣದ ಹಿಂಸಾಚಾರದ ವರದಿಗಳನ್ನು ಓದಿದಾಗ ಶಾರುಕ್ ಮಾತುಗಳು ನೆನಪಾದವು. ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವ ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಆಯಾ ದೇಶ – ಧರ್ಮ –ಪ್ರದೇಶಕ್ಕೆ ಸೀಮಿತವಾದಂತಹ ಚಿತ್ರಗಳಷ್ಟೇ. ಇದೇ ಕಾರಣದಿಂದ ಭಾರತದ ಚಿತ್ರಗಳಲ್ಲಿ ಪಾಕಿಸ್ತಾನ ಶತ್ರುವಾಗಿ ಚಿತ್ರಿಸಲ್ಪಡುತ್ತದೆ, ಅಮೆರಿಕಾದ ಚಿತ್ರಗಳಲ್ಲಿ ರಷಿಯನ್ನರು ಅಮಾನವೀಯರಂತೆ ತೋರಿಸಲ್ಪಡುತ್ತಾರೆ. ನಾವು ಭಾರತದವರಾಗಿದ್ದರೆ ಚಿತ್ರ ಹಿಡಿಸುತ್ತದೆ, ಮನುಷ್ಯ ನಿರ್ಮಿತ ಗಡಿಯಾಚೆಗೆ ಹುಟ್ಟಿದ್ದರೆ ಚಿತ್ರ ಕೋಪ ಮೂಡಿಸುತ್ತದೆ. ಮತಿಗೆಟ್ಟ ಧರ್ಮಾಂಧರು ಅನ್ಯಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಎಲ್ಲ ಧರ್ಮದಲ್ಲೂ ಸಾಮಾನ್ಯ, ಮುಸ್ಲಿಮರೂ ಇದಕ್ಕೆ ಹೊರತಲ್ಲ. ಅಂಥವನೇ ಒಬ್ಬ ಯಹೂದಿ ತನ್ನ ನಿರ್ದೇಶನದ ಚಿತ್ರದಲ್ಲಿ ಮುಸ್ಲಿಮರ ಬಗ್ಗೆ, ಪ್ರವಾದಿಯ ಬಗ್ಗೆ, ಇಸ್ಲಾಮಿನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬಳಸಿದ್ದಾನೆ ಎಂಬುದೇ ನೆಪವಾಗಿ ಮುಲ್ಲಾಗಳ ಇಸ್ಲಾಂ ವಿಜ್ರಂಭಿಸುತ್ತಿದೆ.

ಮತ್ತಷ್ಟು ಓದು »