ವಿಷಯದ ವಿವರಗಳಿಗೆ ದಾಟಿರಿ

Archive for

7
ಏಪ್ರಿಲ್

‘ನಿಧಿ’ಗಿಂತ ‘ದನಿ’ನೀಡುವ ಸಂಸದರು ಬೇಕು – ಸಂಸದರ ಕಾರ್ಯಕ್ಷೇತ್ರದ ಅರಿವೂ ಇರಬೇಕು!

– ತುರುವೇಕೆರೆ ಪ್ರಸಾದ್

ಉತ್ತರಕನ್ನಡದ ಸಂಸದರಾದ ಅನಂತ್ ಕುಮಾರ್ ಹೆಗಡೆ ಮಾತನಾಡಿದರೆ ವಿವಾದವಾಗುತ್ತದೆ ಎಂದು ತಿಳಿದವರೇ ಹೆಚ್ಚು. ಹೆಗಡೆಯವರು ನಮ್ಮ ಸಂಸ್ಕೃತಿ, ಪರಂಪರೆ, ಸಂವಿಧಾನ ಹಾಗೂ ಸಂಸದರ ಜವಾಬ್ಧಾರಿಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ, ತರ್ಕಬದ್ಧವಾಗಿ ಮಾತನಾಡಬಲ್ಲರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇತ್ತೀಚೆಗೆ ಅನಂತಕುಮಾರ ಹೆಗಡೆಯವರು ಸಂಸದರ ಜವಾಬ್ಧಾರಿಗಳ ಬಗ್ಗೆ ಮಾತಾಡಿರುವ ಒಂದು ಪುಟ್ಟ ವೀಡಿಯೋ ನೋಡಿದೆ. ಆ ಪುಟ್ಟ ವೀಡಿಯೋದಲ್ಲಿ ಹೆಗಡೆಯವರು ಸಂಸದರ ಕಾರ್ಯವ್ಯಾಪ್ತಿಯ ಬಗ್ಗೆ ಬಹಳ ಅದ್ಭುತವಾಗಿ ಮಾತನಾಡಿದ್ದಾರೆ. ಅಭಿವೃದ್ಧಿಯ ಅತ್ಯಂತ ಮಾರ್ಮಿಕ ವಿಶ್ಲೇಷಣೆ ಮಾಡಿದ್ದಾರೆ. ಅವರ ಪ್ರಕಾರ ಅಭಿವೃದ್ಧಿಯೆಂದರೆ ಕೇವಲ ಕಾಮಗಾರಿಗಳಲ್ಲ, ಕಾಮಗಾರಿಗಳು ಕೇವಲ ಅಭಿವೃದ್ಧಿಯ ಒಂದು ಭಾಗವಷ್ಟೇ. ಸಮುದಾಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ನಾಲ್ಕು ವಿಧಗಳಿವೆ. ಮೂಲಭೂತ ಅಭಿವೃದ್ಧಿ, ಸಾಂಸ್ಕøತಿಕ ಅಭಿವೃದ್ಧಿ,ಸಾಮಾಜಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ. ಅಭಿವೃದ್ಧಿ ನಿರಂತರ ಪ್ರಕ್ರಿಯೆ, ಅದಕ್ಕೆ ಅಂತ್ಯವಿಲ್ಲ. ಕಾಮಗಾರಿಗೆ ಮಾತ್ರ ಅಂತ್ಯವಿದೆ. ಜನಸಾಮಾನ್ಯರಿಗೆ ಮೂಲಭೂತ ಅಭಿವೃದ್ಧಿಯಷ್ಟೇ ಕಾಣುತ್ತದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಅವರು ಹೆಚ್ಚು ಒತ್ತು ಕೊಡುವುದಿಲ್ಲ. ಸಮುದಾಯದ ಅಭಿವೃದ್ದಿಯ ಅಂತರಾಳ ಅಡಗಿರುವುದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ! ಇದರ ಒಂದು ಭಾಗ ಮಾತ್ರ ಮೂಲಭೂತ ಅಭಿವೃದ್ಧಿ. ಇದು ಅವರ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ.ಕೇಂದ್ರ ಯಾವ ಮೂಲಭೂತ ಅಭಿವೃದ್ಧಿಗೆ ಒತ್ತು ಕೊಡಬೇಕು? ಒಂದು ಗ್ರಾಮೀಣ ಕಾಮಗಾರಿಗೆ ಗ್ರಾ.ಪಂ. ಜಿ.ಪಂ ಸದಸ್ಯರಷ್ಟೇ ಮಹತ್ವವನ್ನು ಸಂಸದರೂ ಕೊಡಬೇಕಾ?ಆ ಮಟ್ಟದಲ್ಲಿ ರಾಜಕಾರಣವನ್ನು ಒಬ್ಬ ಸಂಸದ ಮಾಡಬಾರದು.ಸಂಸದರ ಕಾರ್ಯವ್ಯಾಪ್ತಿಯ ಅರಿವೇ ಇಲ್ಲದೆ ಅತ್ಯಂತ ಕೆಳಹಂತಕ್ಕೆ ಇಳಿದು ರಾಜಕಾರಣ ಮಾಡುವುದು ಮತ್ತು ಹಾಗೆ ನಿರೀಕ್ಷಿಸುವುದು ದುರ್ದೈವ ಎನ್ನುತ್ತಾರೆ.

ಮತ್ತಷ್ಟು ಓದು »