‘ಗುಹೆ’ ತೊರೆದ ‘ಸಿಂಹ’
– ರಾಘವೇಂದ್ರ ಅಡಿಗ ಎಚ್ಚೆನ್
ಹೌದು ಸ್ನೇಹಿತರೆ, ಕನ್ನಡ ನಾಟಕಲೋಕದ ಅದ್ಬುತ ಪ್ರತಿಭೆ, ನಟ, ನಿರ್ದೇಶಕ, ಅಂಕಣಾಕಾರರಾಗಿಯೂ ಖ್ಯಾತಿ ಗಳಿಸಿದ್ದ ಸಿ.ಆರ್. ಸಿಂಹ ನಮ್ಮನ್ನೆಲ್ಲಾ ಹೋಗಿದ್ದಾರೆ. ‘ನಟರಂಗ’ ದ ಮೂಲಕ ಖ್ಯಾತಿ ಗಳಿಸಿದ್ದ ರಂಗಕರ್ಮಿ, ಚಿತ್ರ ಕಲಾವಿದರೂ, ನಿರ್ದೇಶಕರೂ ಆಗಿ ಜನಮಾನಸದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿಂಹ ಇದೇ ಫೆಬ್ರವರಿ 28 ರಂದು ತಮ್ಮ 72 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಪೂರೈಸಿದ್ದಾರೆ. ಅದೂ ಕೂಡ ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನವೇ ಎನ್ನುವುದು ವಿಧಿ ವಿಪರ್ಯಾಸ.
ಚಿಕ್ಕಂದಿನಿಂದಲೂ ರಂಗಭೂಮಿಯೊಂದಿಗೆ ನಂಟನ್ನು ಹೊಂದಿದ್ದ ಸಿ.ಆರ್. ಸಿಂಹರವರು ತಾವೇ ರಚಿಸಿದ ‘ನಟಾರಂಗ’ ಎನ್ನುವ ನಾಟಕ ತಂಡದ ಮೂಲಕ ‘ತುಘಲಕ್’, ‘ಸಂಕ್ರಾಂತಿ’, ಮೊದಲಾದ ನಾಟಕಗಳಾನ್ನು ರಂಗದ ಮೇಲೆ ತಂದು ಜನಪ್ರಿಯಗೊಳಿಸಿದ್ದರು. ಅದರಲ್ಲಿಯೂ ‘ತುಘಲಕ್’ ನಾಟಕದ ತುಘಲಕ್ ಪಾತ್ರವನ್ನು ತಾವೇ ನಟಿಸಿದ್ದ ಆ ಪಾತ್ರವೇ ಅವರಿಗೆ ಸಾಕಷ್ಟು ಜನಮನ್ನಣೆ ಗಳಿಸಿಕೊಟ್ಟಿತ್ತು. ಆ ಕಾಲದಲ್ಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ತುಘಲಕ್’ ಬರೋಬ್ಬರಿ 200 ಪ್ರದರ್ಶನಗಳನ್ನು ಕಂಡಿತ್ತು! ಗಿರೀಶ್ ಕಾರ್ನಾಡರ ಇನ್ನೊಂದು ಪ್ರಸಿದ್ದ ನಾಟಕ ’ತಲೆದಂಡ’ ದಲ್ಲಿನ ಬಿಜ್ಜಳನ ಪಾತ್ರದಲ್ಲಿಯೂ ಮಿಂಚಿದ್ದ ಸಿಂಹರವರಿಗೆ ತಾವು ನಟಿಸಿದ ಪಾತ್ರದೊಳಗೆ ಪ್ರವೇಶಿಸಿ ಅದನ್ನು ತನ್ನದಾಗಿಸಿಕೊಳ್ಳುವ ಕಎಲೆಯು ಸಿದ್ದಿಸಿತ್ತು. ಇವರ ನಿರ್ದೇಶನದಲ್ಲಿ ಮೂಡಿಬಂದ ಏಕವ್ಯಕ್ತಿ ನಾಟಕ ‘ಟಿಪಿಕಲ್ ಕೈಲಾಸಮ್’ ಕೈಲಾಸಂ ಬಗೆಗಿನ ಸಿಂಹರವರ ಅಭಿಮಾನಕ್ಕೊಂದು ಸಾಕ್ಷಿಯಾದರೆ ‘ ರಸಋಷಿ ಕುವೆಂಪು’ ಸಿಂಹರಿಗೆ ರಸಋಷಿಯ ಮೇಲಿದ್ದ ಪ್ರೀತಿಯನ್ನು ತೋರುವಂತಹುದು.
ಧರ್ಮದ ಅರ್ಥ ಮತ್ತು ಅದರ ಮೇಲಿನ ಹಣದ ಸಂಬಂಧ
-ನವೀನ್ ನಾಯಕ್
ಜಗತ್ತಿಗೆ ಕಮ್ಯುನಿಸಂನ ಕೊಡುಗೆ ಕತ್ತಲೆ!?
– ನರೇಂದ್ರ ಕುಮಾರ್
ರಷ್ಯಾ ಕಮ್ಯುನಿಸ್ಟ್ ದೇಶವಾಗಿತ್ತು. ಅದು ಕೂಡಾ “Super Power” ಎನಿಸಿಕೊಂಡು ಅಮೆರಿಕಕ್ಕೆ ಸರಿಸಮಾನವಾಗಿ ನಿಂತಿತ್ತು. ಅಮೆರಿಕ ಅಂತರಿಕ್ಷಕ್ಕೆ ಉಪಗ್ರಹವನ್ನು ಚಿಮ್ಮಿಸಿದರೆ, ರಷ್ಯಾವೂ ಉಪಗ್ರಹವನ್ನು ಕಳುಹಿಸಿತ್ತಿತ್ತು. ಹೀಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ, ತಾನು ಅಮೆರಿಕಕ್ಕಿಂತ ಹಿಂದಿಲ್ಲ ಎಂದು ತೋರಿಸುತ್ತಿತ್ತು. ಯುದ್ಧ ಸಾಮಾಗ್ರಿಗಳ ಉತ್ಪಾದನೆಯಲ್ಲೂ ಅದು ತನ್ನ ಸಾಮರ್ಥ್ಯ ತೋರ್ಪಡಿಸುತ್ತಿತ್ತು. ಒಟ್ಟಿನಲ್ಲಿ, ರಷ್ಯಾವೂ ಒಂದು ಮುಂದುವರೆದ ರಾಷ್ಟ್ರವೆಂದು ಜಗತ್ತು ನಂಬಿತ್ತು. ಆದರೆ, 80ರ ದಶಕದ ಅಂತ್ಯ ಭಾಗದಲ್ಲಿ ಗೋರ್ಬಚೇವ್ ಅವರು ಅಧಿಕಾರಕ್ಕೆ ಬಂದ ನಂತರ ಪೊರೆ ಹರಿಯಿತು. ರಷ್ಯಾದಿಂದ ಕಮ್ಯುನಿಸಂ ಉಚ್ಚಾಟಿಸಲಾಯಿತು. USSR ಎನ್ನುವ ರಾಷ್ಟ್ರ ಛಿದ್ರವಾಯಿತು. ಆಗ ತಿಳಿದ ಸತ್ಯವೆಂದರೆ, ರಷ್ಯಾದಲ್ಲಿ ಕಿತ್ತು ತಿನ್ನುವ ಬಡತನವಿದೆ, ಅದು ಆರ್ಥಿಕವಾಗಿ ದಿವಾಳಿಯಾಗಿದೆ! ಇದನ್ನೆಲ್ಲಾ ಏಕೆ ಹೇಳಿದೆನೆಂದರೆ, ಕಮ್ಯುನಿಸ್ಟ್ ದೇಶಗಳಲ್ಲಿ ಏನಾಗುತ್ತಿದೆ, ಅವುಗಳ ನಿಜವಾದ ಸ್ಥಿತಿ ಏನೆಂಬುದು ಹೊರಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಮಾದ್ಯಮಗಳೂ ಅಲ್ಲಿನ ಸರಕಾರದ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ, ತಮಗೆ ಬೇಕಾದ ಚಿತ್ರವನ್ನು ಮಾತ್ರ ಎಲ್ಲೆಡೆ ಅವರು ಬಿತ್ತರಿಸುತ್ತಿರುತ್ತಾರೆ.
ಒಂದು ಊರಿನ ಕಥೆ
– ಹಂಸಾನಂದಿ
ಒಂದೂರಿತ್ತಂತೆ. ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ ಹೇಳ್ತಾರಲ್ಲ ಹಾಗೆ. ಎಲ್ರೂ ಅವರವರ ಮನೆಯಲ್ಲಿ ಅಡುಗೆ ತಕ್ಕ ಮಟ್ಟಿಗೆ ಚೆನ್ನಾಗೇ ಮಾಡಿ ಊಟ ಬಡಿಸ್ತಿದ್ದರಂತೆ.
ಆಗ ಊರಿಗೊಬ್ಬ ಹೊಸ ಡೊಣೆ ನಾಯಕ ಬಂದು ಠರಾವು ಮಾಡಿದನಂತೆ. ಈಗ ಇರೋ ಅಡುಗೆಗೆಳಲ್ಲಿ ಪೌಷ್ಟಿಕತೆ ಸಾಲದು. ಯಾವ ಅಡಿಗೇಭಟ್ಟರಿಗೂ ಒಂದು ಚೂರೂ ಹೊಸತು ಮಾಡೋ ಆಸೆಯಾಗಲಿ, ಕ್ರಿಯಾಶೀಲತೆಯಾಗಲೀ ಒಂದೂ ಇಲ್ಲ. ಅದಲ್ಲದೆ ಇದು ಪೀಟ್ಜ್ಝಾ ಬರ್ಗರ್ ಕಾಲ. ನಾವೂ ಎಲ್ಲರ ಸಮಕ್ಕೆ ಇರಬೇಕಾದರೆ ಹೊಸತನ್ನೇನಾದರೂ ತರಲೇ ಬೇಕು. ಅದು ಬಿಟ್ಟು ಅಪ್ಪ ಹಾಕಿದ ಆಲದ ಮರ ಅಂತ ಬರೀ ಇಡ್ಲಿ ಸಾಂಬಾರ್ ತಿನ್ನುತ್ತಾ ಇರಬೇಕೇನು? ಪ್ರಪಂಚದಲ್ಲಿ ಇರೋದೆಲ್ಲ ನಾವು ಮಾಡೋಕಾಗ್ದೇನು? ನಾವು ಒಂದು ಹೊಸ ಆಡಿಗೇ ಕಾರ್ಖಾನೆಯನ್ನೇ ತೆಗೆಯೋಣ ಅಂದನಂತೆ. ಹಲವಾರು ಜನ ಚಪ್ಪಾಳೆ ತಟ್ಟಿದರಂತೆ. ಒಂದಷ್ಟು ಜನ ಅವನನ್ನೂ ಹಿಂಬಾಲಿಸಿದರಂತೆ. ಒಂದಷ್ಟು ಜನ ಸುಮ್ಮನೇ ಕುತೂಹಲದಿಂದ ನೋಡಿದರಂತೆ. ಒಂದಷ್ಟು ಜನ ಈ ಡೊಣೆನಾಯಕಂದೇನು, ನಾವೇ ನೋಡ್ಕೋತೀವಿ ನಮ್ಮ ನಮ್ಮ ಅಡಿಗೇ ಮನೇಲೇನೇ, ಅಕ್ಕಿ ರೊಟ್ಟಿ ಬದಲು ಜೋಳದ ರೊಟ್ಟಿ ಮಾಡ್ತೀವಿ. ಮೆಣಸಿನ ಕಾಯಿ ಬದಲು ಕಾಳು ಮೆಣಸು ಹಾಕಿ ಕೂಟಿನ ರುಚಿ ಚೆನ್ಣಾಗಿರತ್ತೋ ಇಲ್ವೋ ಅಂತ. ಅದಕ್ಕೆ ಕಾರ್ಖಾನೆ ಯಾಕೆ ಬೇಕು ಅಂದರಂತೆ. ಆದರೆ ಗುಂಪಿನ ಗದ್ದಲದಲ್ಲಿ ಅವರ ಮಾತು ಯಾರಿಗೂ ಕೇಳಲಿಲ್ಲವಂತೆ.
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 4
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಲಿಂಗಾಯತರನ್ನು ಅಥವಾ ವೀರಶೈವರನ್ನು (ಪ್ರಸ್ತುತದಲ್ಲಿ ‘ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆ ಅವೆರಡು ಒಂದೆ ಅಲ್ಲ’ ಎಂಬಂತಹ ವಾದಗಳು ಅಥವಾ ಚರ್ಚೆಗಳು ಮಾಧ್ಯಮಗಳಲ್ಲಿ ಕೇಳಿಬರುತ್ತಿವೆ. ಈ ಕುರಿತು ಮೂರು ರೀತಿಯ ಅಭಿಪ್ರಾಯಗಳಿರುವುದನ್ನು ನೋಡಬಹುದು. ಅವುಗಳೆಂದರೆ, ಒಂದನೆಯದಾಗಿ, ವೀರಶೈವ ಪರಂಪರೆಯು ಹಿಂದೂ ಧರ್ಮದ ಭಾಗವಾಗಿದೆ, ಭಾರತೀಯ ಆಧ್ಯಾತ್ಮ ಚಿಂತನೆಗೆ ಅಪೂರ್ವ ಕೊಡುಗೆಯನ್ನು ನೀಡಿರುವ ಹಾಗೂ ಆಧ್ಯಾತ್ಮ ಮಾರ್ಗದ ಮೂಲಕ ಹೊಸದೊಂದು ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣ ಪರಂಪರೆಯ ಚಿಂತನೆ ಮತ್ತು ಅವರ ಆಚರಣೆಗಳು ಕಾರಣವಾಗಿವೆ. ಹಾಗೆಯೇ ಎರಡನೆಯದಾಗಿ, ಕೆಲವು ಚಿಂತನೆಗಳು ಹಿಂದೂ ಧರ್ಮವನ್ನು ಪ್ರತಿಭಟಿಸಿ, ಸಮಾಜದಲ್ಲಿರುವ ಅನಿಷ್ಠಗಳನ್ನು ವಿರೋಧಿಸಿ, ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು, ಈ ಸಮಾಜದಲ್ಲಿ ಕಲುಷಿತಗೊಂಡಿರುವ ಧಾರ್ಮಿಕ, ಸಾಮಾಜಿಕ ಪರಿಸರದ ವಿರುದ್ಧ ಹೋರಾಡಿದ, ಅನೀತಿಯುತವಾದ ಜಾತಿ ವ್ಯವಸ್ಥೆಯನ್ನು ನಾಶಮಾಡಿ ಉತ್ತಮ ಸಮಾಜವನ್ನು ರಚಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಹುಟ್ಟಿದ ಸ್ವತಂತ್ರ್ಯ ಮತ/ಧರ್ಮವೇ ವೀರಶೈವ ಧರ್ಮವಾಗಿದೆ. ಇದಕ್ಕೆ ಪೂರಕವಾಗಿ ಜಿ.ಎಸ್.ಶಿವರುದ್ರಪ್ಪನವರು ಹೇಳುವಂತೆ, ಕನ್ನಡನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ 12ನೇ ಶತಮಾನ ಒಂದು ಸಂಕ್ರಮಣ ಕಾಲ, ಈ ಸಂಕ್ರಮಣಕ್ಕೆ ಮುಖ್ಯ ಪ್ರೇರಣೆ ವೀರಶೈವ ಧರ್ಮವಾಗಿದೆ ಹಾಗೂ ಇದು ವಿಶಾಲ ಅರ್ಥವನ್ನು ಒಳಗೊಂಡಿದೆ. ಎಂಬಂತಹ ವಿವರಣೆ. ಮತ್ತು ಮೂರನೆಯದಾಗಿ ಕಂಡುಬರುವ ಚಿತ್ರಣಗಳಲ್ಲಿ ಮೇಲಿನ ಎರಡೂ ಮಾರ್ಗಗಳನ್ನು ಒಳಗೊಂಡಿರುವ ವಿವರಣೆಯನ್ನು ನೋಡಬಹುದು. ಅಂದರೆ, ವೀರಶೈವ ಪರಂಪರೆ ಮತ್ತು ವಚನಗಳು ಭಾರತೀಯ ಆಧ್ಯಾತ್ಮ ಮಾರ್ಗಕ್ಕೆ ಕೊಡುಗೆಯನ್ನು ನೀಡಿರುವುದರ ಜೊತೆಗೆ ಸಾಮಾಜಿಕ ಅನಿಷ್ಠಗಳ ವಿರುದ್ಧವೂ ಹೋರಾಡಿದೆ. ತಮ್ಮ ಭಕ್ತಿಯೊಂದಿಗೆ ಸಮಾಜದ ಪಿಡುಗುಗಳ ವಿರುದ್ಧ ಪ್ರತಿಭಟಿಸಿದೆ.
ವಚನ ಸಂಸ್ಕೃತಿಯು ಅತ್ಯಂತ ಸೂಕ್ಷ್ಮವೂ, ಸಂಕೀರ್ಣವೂ, ಬಹುಮುಖಿಯೂ, ಬಹುಸ್ತರೀಯವೂ ಆದ ಒಂದು ಸಾಮಾಜಿಕ ಪ್ರಕ್ರಿಯೆ-ಗತಿಶೀಲತೆಯಾಗಿತ್ತು. ಎಂದು ಹೇಳುವ ಮೂಲಕ ಆಧ್ಯಾತ್ಮ ಹಾಗೂ ಸಾಮಾಜಿಕ ಎಂಬ ಎರಡು ವಲಯಗಳನ್ನು ತಳುಕು ಹಾಕುವ ವಿವರಣೆಗಳನ್ನು ನೋಡಬಹುದು. ಈ ಮೂರು ರೀತಿಯ ವಿವರಣೆಗಳಲ್ಲಿ ಪ್ರಸ್ತುತ ಅಧ್ಯಯನಕ್ಕೆ ಸಂಬಂಧಿಸಿದಂತೆ ನಾವು ಮೊದಲೆರಡು ಅಂಶಗಳನ್ನು ತೆಗೆದುಕೊಂಡು ಗಮನಿಸುವುದಾದರೆ, ಪರಸ್ಪರ ವಿರುದ್ಧವಿರುವ ಎರಡು ರೀತಿಯ ಚಿಂತನೆಗಳು ವಿದ್ವತ್ ವಲಯದಲ್ಲಿ, ರಾಜಕೀಯ ವಲಯದಲ್ಲಿ, ಲಿಂಗಾಯತರು ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ, ಮುಖಾ-ಮುಖಿ ಆಗುತ್ತಿವೆ. ಉದಾಹರಣೆಗೆ, ಚಿದಾನಂದ ಮೂರ್ತಿ ಹಾಗೂ ಕಲ್ಬುರ್ಗಿ. ವಿರಕ್ತ ಪೀಠ/ಮಠಗಳು ಹಾಗೂ ಪಂಚಚಾರಿಪೀಠಗಳು, ಪ್ರಗತಿಪರರು ಹಾಗೂ ಸಾಂಪ್ರದಾಯವಾದಿಗಳು ಮುಂತಾದ ಚಿಂತನೆಗಳು. ಆದರೂ ಪರಸ್ಪರ ವಿರುದ್ಧವಿರುವ ಅಭಿಪ್ರಾಯಗಳು ಒಂದಾಗುತ್ತಿವೆ. ಅಂದರೆ, ಎರಡು ಮಾರ್ಗಗಳು ತಮ್ಮನ್ನು ಲಿಂಗಾಯತರು ಎಂದೇ ಹೇಳಿಕೊಳ್ಳುತ್ತಿದ್ದಾರೆ. ಲಿಂಗಾಯಿತರಲ್ಲಿರುವ ಹತ್ತು ಹಲವು ಜಾತಿಗಳ ನಡುವೆ ಸಮಾನ ಅಂಶ ಯಾವುದು? ಆ ಎಲ್ಲ ಜಾತಿಗಳು ಒಟ್ಟಾಗಿ ಲಿಂಗಾಯಿತ ಅಸ್ಮಿತೆಯನ್ನು ಕಂಡುಕೊಳ್ಳಲು ಸಾಧ್ಯವೆ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ ಸಾಧ್ಯ. ವಿಭಿನ್ನ ಆಚರಣೆ, ವಿಭಿನ್ನ ಕಟ್ಟು ಕಟ್ಟಲೆಗಳು, ಇರುವ ಹಲವು ಜಾತಿಗಳ ನಡುವೆ ಇರುವ ಸಾಮ್ಯತೆ ಏನು ಎನ್ನುವುದನ್ನು ಸ್ಪಷ್ಟಪಡಿಸಲು ಸಾಧ್ಯವಾಗುವುದೇ ಇಲ್ಲ. ಲಿಂಗಧಾರಣೆಯೂ ಸಹ ಸಮಾನ ಆಂಶವಾಗುವುದಿಲ್ಲ ಏಕೆಂದರೆ ಲಿಂಗಾಯಿತರಲ್ಲದ ಕೆಲವು ಜಾತಿಗಳಲ್ಲೂ ಲಿಂಗಧಾರಣೆಯ ಪದ್ಧತಿ ಇದೆ. ಮತ್ತಷ್ಟು ಓದು 
ನಿಶ್ಯಬ್ದ …!
– ರಾಘವೇಂದ್ರ ಎಂ. ಸುಬ್ರಹ್ಮಣ್ಯ
ಕಲಾಸಿಪಾಳ್ಯ/ಕೆ.ಆರ್ ಮಾರ್ಕೆಟ್ ಕಡೆ ಹೋದವರಿಗೆ ಗೌಜು ಗದ್ದಲದ ನಿಜಾರ್ಥ ತಿಳಿದಿರುತ್ತೆ. ಹಾಗೆಯೇ ಕೊಡಚಾದ್ರಿ/ಕುಮಾರಪರ್ವತ ಚಾರಣಮಾಡಿದವರಿಗೆ ನಿಶ್ಯಬ್ದದ ಅನುಭವ ಆಗಿರುತ್ತೆ. ಈಗ ಪ್ರಶ್ನೆ ಏನಂದರೇ ಶಬ್ದಕ್ಕೆ ಮತ್ತಷ್ಟು ಶಬ್ದ ಸೇರಿಸಿ ಮತ್ತಷ್ಟು ಹೆಚ್ಚು ಶಬ್ದ ಮಾಡಬಹುದು. ಆದರೆ ನಿಶ್ಯಬ್ದವನ್ನು ಮತ್ತಷ್ಟು ಕಡಿಮೆ ಮಾಡಲು ಸಾಧ್ಯವೇ?
ಬೆಂಗಳೂರಿನ ನಾಲ್ಕು ರಸ್ತೆಗಳು ಸೇರುವಲ್ಲಿ ಗಣಪತಿ ಪೆಂಡಾಲ್ ಹಾಕಿ, ಸಂಜೆ ಕರ್ಣಭಯಂಕರ ಚಿತ್ರಗೀತೆಗಳನ್ನು ಹಾಕಿ, ಅದರ ಮೇಲೆ ಪಟಾಕಿ ಹೊಡೆದು, ಬೆಳಕಿಗಾಗಿ ಜನರೇಟರ್ ಇಟ್ಟು….ಹೇಗೆ ಶಬ್ದಕ್ಕೆ ಶಬ್ದಗಳನ್ನು ಸೇರಿಸುತ್ತಲೇ ಹೋಗಬಹುದು….ಶಬ್ದಮಾಲಿನ್ಯವನ್ನು ತಾರಕಕ್ಕೆ ತೆಗೆದುಕೊಂಡು ಹೋಗಬಹುದು. ಆದರೆ ಅದೇ ತರಹ ಅದರ ವಿರುದ್ದದೆಡೆಗೆ ಹೋಗುತ್ತಾ ಹೋದರೆ, ಅಂದರೆ ಗಣಪತಿ ಹಬ್ಬದ ಕೊನೆಯದಿನದ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ ರಾತ್ರಿ 2:35ಕ್ಕೆ ಪೂರ್ತಿ ನಿಶ್ಯಬ್ದವನ್ನು ನೋಡಬಹುದು. ಆದರೆ ಅದು ಪೂರ್ತಿ ನಿಶ್ಯಬ್ದವಲ್ಲವಷ್ಟೇ? ಎಲ್ಲೋ ಒಂದು ನಾಯಿ ಓಳಿಡುತ್ತಿರುತ್ತದೆ. ಆ ನಾಯಿಯನ್ನು ಓಡಿಸಿದರೆ….ಇನ್ನಷ್ಟೂ ನಿಶ್ಯಬ್ದ. ಆದರೆ ಇನ್ನೆಲ್ಲೋ ಒಂದು ಜೀರುಂಡೆ ಕಿರ್ರೆನ್ನುತ್ತಿರುತ್ತದೆ. ಆ ಶಬ್ಧವನ್ನೂ ಇಲ್ಲವಾಗಿಸಿದರೆ…..ಹೀಗೆ ನಾವು ಎಷ್ಟರಮಟ್ಟಿಗಿನ ನಿಶ್ಯಬ್ದವನ್ನು ಸಾಧಿಸಬಹುದು!? ಶಬ್ದ ಪರಿವಹನಕ್ಕೆ ಯಾವುದೇ ಮಾಧ್ಯಮವಿಲ್ಲ ಬಾಹ್ಯಾಕಾಶ ಹೇಗಿರಬಹುದು? ಎಷ್ಟು ನಿಶ್ಯಬ್ದವಾಗಿರಬಹುದು!?
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ –೧
ವಿನಯಲಾಲ್ ಮತ್ತು ಅಶೀಶ್ ನಂದಿಯವರ ಸಂಪಾದಕತ್ವದಲ್ಲಿ “ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು” ಎಂಬ ಪುಸ್ತಕವನ್ನು ಅಕ್ಷರ ಪ್ರಕಾಶನದವರು (ಹೆಗ್ಗೋಡು ಸಾಗರ; ಮೊದಲ ಮುದ್ರಣ ೨೦೦೭ ಮತ್ತು ಎರಡನೇ ಮುದ್ರಣ ೨೦೧೦) ಪ್ರಕಟಿಸಿದ್ದಾರೆ. ಈ ಪುಸ್ತಕದ ಬಗ್ಗೆ ಪ್ರಕಾಶಕರು ‘ಬೌದ್ಧಿಕ ಸಿದ್ಧ ಮಾದರಿಗಳ ನಿರಾಕರಣೆ’ ಎಂಬ ಶೀರ್ಷಿಕೆಯಡಿಯಲ್ಲಿ ಹೇಳಿರುವುದನ್ನು ಅವರದೇ ಮಾತುಗಳಲ್ಲಿ ಈ ರೀತಿ ಸಂಕ್ಷೇಪಿಸಿ ಹೇಳಬಹುದು.”… ಕನ್ನಡ ಅಕಾರಾದಿಯಲ್ಲಿ ಜೋಡಿಸಲ್ಪಟ್ಟಿರುವ ಈ ಪರಿಭಾಷಾ ಕೋಶದಲ್ಲಿ (ಅಂದರೆ ಪ್ರಸ್ತುತ ಪುಸ್ತಕದಲ್ಲಿ) ‘ಅರ್ಥಶಾಸ್ತ್ರ’ ದಿಂದ ‘ಬಾಲಿವುಡ್’ ನವರೆಗೆ, ‘ಇಸ್ಲಾಂ’ನಿಂದ ‘ಕೋಕಾಕೋಲಾ’ವರೆಗೆ, ‘ಮಾರ್ಕ್ಸ್ ವಾದ’ ದಿಂದ, ‘ಯಾಹೂ(yahoo)’ ,ದವರೆಗೆ ನಾನಾ ವಿಚಾರ ಕುರಿತ ಕಿರುಲೇಖನಗಳಿವೆ…ಆಧುನಿಕ ಜೀವನಕ್ರಮದಲ್ಲಿ ನಾವಿವತ್ತು ಹಲವು ಪದಗಳನ್ನೂ ಮತ್ತು ಆ ಪದಗಳೊಂದಿಗೆ ಅಂತರ್ಗತವೂ ಆಗಿರುವ ವಿಚಾರಗಳನ್ನು ‘ಸಾಮಾನ್ಯಜ್ಞಾನ’ವಾಗಿ ತುಂಬ ಸಹಜವೂ ಪರಿಚಿತವೂ ಎಂದು ಭಾವಿಸಿ ಸ್ವೀಕರಿಸಿದ್ದೇವೆ. ಉದಾಹರಣೆಗೆ ಶಿಕ್ಷಣ,ಬಡತನ,ಅಥವಾ ಅರ್ಥಶಾಸ್ತ್ರ ಮೊದಲಾದವು…ಈಗ ಈ ಪದವು ಚಾಲ್ತಿಯಲ್ಲಿ ಪಡೆದಿರುವ ಅರ್ಥವನ್ನಾಗಲೀ …ಆ ವ್ಯಾಖ್ಯಾನದ ಹಿನ್ನೆಲೆಯಲ್ಲಿರುವ ಸಿದ್ಧಾಂತವನ್ನಾಗಲಿ ಮೂಲಭೂತವಾಗಿಯೇ ಪ್ರಶ್ನಿಸುವ ಸಾಹಸಕ್ಕೆ ನಾವು ಕೈ ಹಾಕುವುದು ಅಪರೂಪ.
… ಬದಲು ಬದಲಾಗುತ್ತಲೇ ಇರುವ ಬೌದ್ಧಿಕ ಜಗತ್ತಿನೊಳಗೊಂದು ಕಿರುನೋಟವನ್ನು ಕೊಡುವ ಮೂಲಕ ಓದುಗರಿಗೆ ತುಂಬ ಪರಿಚಿತವೆಂದು ಭಾವಿತವಾದದ್ದು, ಎಷ್ಟು ಅಪರಿಚಿತವೆಂಬುದನ್ನೂ ಹಾಗೂ ಅಪರಿಚಿತವೇ ಎಷ್ಟು ಪರಿಚಿತವೆಂಬುದನ್ನೂ ಕಾಣಿಸಿ ಕೊಡುವ ಒಂದು ಪ್ರಯತ್ನ ಇಲ್ಲಿದೆ. ಅಲ್ಲದೆ ಇಲ್ಲಿ ಸಂಕಲಿತವಾಗಿರುವ ಎಲ್ಲ ಲೇಖನಗಳಲ್ಲಿ ಶೈಕ್ಷಣಿಕ ಶಿಸ್ತಿನ ಬಿಗಿಯಾದ ಜಡ ನಿರೂಪಣೆಗಿಂತ ಹಗುರವಾದ ಪ್ರಬಂಧರೂಪಿ ಲಾಲಿತ್ಯದ ಶೈಲಿ ಕಾಣಿಸಿಕೊಂಡಿರುವುದು ಕೂಡಾ ಇಂಥ ಪ್ರಯತ್ನದ ಒಂದು ಅಂಗವಾಗಿಯೇ …ಈ ಎಲ್ಲ ಲೇಖನಗಳು,ತಮ್ಮ ವಸ್ತು -ವಿನ್ಯಾಸಗಳೆರಡರಲ್ಲೂ ಪಾಶ್ಚಿಮಾತ್ಯ ರೂಢಿಯಲ್ಲಿ ಯಾವುದನ್ನು ‘ಅಕೆಡೆಮಿಕ್ ಬರಹ‘ ಎನ್ನಲಾಗುತ್ತದೆಯೋ ಅದಕ್ಕಿಂತ ಭಿನ್ನವಾದ ಹೊಸತನಕ್ಕಾಗಿ ಹವಣಿಸುತ್ತಿವೆ …”
ಇನ್ನು ನಾನು ಮಾಡಲು ಪ್ರಯತ್ನಿಸಿರುವ ಈ ಪುಸ್ತಕದ ಪರಿಚಯದ ರೀತಿಯ ಬಗ್ಗೆ ಒಂದೆರೆಡು ಮಾತುಗಳು. ‘ನಿಲುಮೆ’ಯ ಓದುಗರಲ್ಲಿ ಹಲವರು ಈಗಾಗಲೇ ಈ ಪುಸ್ತಕವನ್ನು ಓದಿರಬಹುದು ಮತ್ತು ಕೆಲವರ ಗಮನಕ್ಕೆ ಬರದೆ ಹೋಗಿರಬಹುದು. ಪ್ರಸ್ತುತ ಪುಸ್ತಕದಲ್ಲಿರುವ ಲೇಖನಗಳ ಅರ್ಥಕ್ಕೆ ಭಂಗ ಬರದಂತೆ ಅವುಗಳ ‘ಸಾರಾಂಶ’ವನ್ನು ನೀಡಲು ನಾನು ಪ್ರಯತ್ನಿಸಿದ್ದೇನೆ.ಈ ಲೇಖನಗಳಲ್ಲಿ ಆಗಾಗ ‘ನಾನು’, ‘ನಾವು’ ಎಂಬ ಪದಗಳು ಬರುತ್ತವೆ. ಅವು ಆ ಮೂಲ ಲೇಖಕರೇ ಹೊರತು ಸಾರಾಂಶ ಬರೆದಿರುವ ”ನಾನಲ್ಲ” ಎಂಬುದನ್ನು ಓದುಗರು ಗಮನಕ್ಕೆ ತರಲು ಇಚ್ಚಿಸುತ್ತೇನೆ.
ನಮ್ಮ ದೇಶದ ಕಥೆ ಇಷ್ಟೇ ಕಣರೋಪ್ಪು!!!
– ಮಧು ಚಂದ್ರ , ಭದ್ರಾವತಿ
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಯಾರಿಗೆ ಗೊತ್ತಿಲ್ಲ ಹೇಳಿ , ನಮ್ಮ ದೇಶದ ಮಾಜಿ ರಾಷ್ಟ್ರಪತಿ ಹಾಗು ಕ್ಷಿಪಣಿ ಗಳ ಜನಕ ಎಂದೇ ಪ್ರಸಿದ್ಧರು.
ಕಲಾಂ ಅವರು ಇಸ್ರೋ ಸಂಸ್ಥೆಯ ಉಪಗ್ರಹ ಉಡಾವಣ ವಾಹನಗಳ ಯೋಜನೆಯ ಕಾರ್ಯದಲ್ಲಿ ತೊಡಗಿದ್ದಾಗ, ಅವರಿಗೆ ಬೆರಿಲಿಯಮ್ ಡಯಾ ಫಾರ್ಮ್ಗಳ ಅವಶ್ಯಕತೆ ಇತ್ತು. ಬೇರಿಲಿಂ ಡಯಾ ಫಾರ್ಮ್ಗಳನ್ನು ವಿಮಾನ, ರಾಕೆಟ್ ಹಾಗು ಕ್ಷಿಪಣಿಗಳ ಭ್ರಮಣ ದಿಕ್ಸೂಚಿಗಳಲ್ಲಿ ಬಳಸುತ್ತಾರೆ. ಭ್ರಮಣ ದಿಕ್ಸೂಚಿಗಳಿಂದ ವಿಮಾನ , ರಾಕೆಟ್ ಹಾಗು ಕ್ಷಿಪಣಿಗಳು ನೆಲದ ಮೇಲೆ ಎಷ್ಟು ಎತ್ತರದಲ್ಲಿ ಹಾರುತ್ತಿವೆ ಎಂದು ಸೂಚಿಸುತ್ತವೆ.
ಅಂದು ನಮ್ಮ ದೇಶದಲ್ಲಿ ಉತ್ಪಾದನೆ ಮಾಡಲು ಯಾವುದೇ ಉದ್ಯಮಗಳು ಇಲ್ಲದೆ ಇರುವುದರಿಂದ , ಇದನ್ನು ಅಮೇರಿಕದಿಂದ ಅಮದು ಮಾಡಿಕೊಳ್ಳುತ್ತಿದ್ದರು . ಇಸ್ರೋದಿಂದ ನಮ್ಮ ಯೋಜನೆಗೆ ನಮಗೆ ಇಷ್ಟು ಡಯಾ ಫಾರ್ಮ್ಗಳು ಬೇಕು ಎಂದು ಅಮೆರಿಕಕ್ಕೆ ಬೇಡಿಕೆ ಇಟ್ಟರು.
ಮೂರು ತಿಂಗಳ ನಂತರ ಅಮೆರಿಕವು, ಭಾರತವು ಖಂಡಾಂತರ ಕ್ಷಿಪಣಿಗಳ ಅಭಿರುದ್ದಿಯಲ್ಲಿ ಬೇರಿಲಿಂ ಡಯಾ ಫಾರ್ಮ್ಗಳನ್ನು ಬಳಸುತ್ತಾರೆ ಎಂದು ಬೇಡಿಕೆ ಪೂರೈಸಲು ನಿರಾಕರಿಸಿತು.
ನಮ್ಮ ಮಕ್ಕಳಿಗೆ ಎಂಥ ಶಿಕ್ಷಣ ಕೊಡಬೇಕು?
ವಲವಿ, ಬಿಜಾಪೂರ
೧೯೮೩ ಅಥವಾ ೧೯೮೪ ನೇ ಇಸ್ವಿ ಇರಬಹುದೇನೋ? ಸರಿಯಾಗಿ ನೆನಪಿಲ್ಲ. ನಮ್ಮ ಶಾಲೆಯಲ್ಲಿ (ಆಗ ನಾನು ೮/೯ ತರಗತಿಯಲ್ಲಿ ಒದುತ್ತಿರಬಹುದು ) ಪೈಥಾಗೋರಸನ ಪ್ರಮೇಯವನ್ನು ನನ್ನ ಗುರುಗಳು ಹೇಳುತ್ತಾ ಈ ಸೂತ್ರವನ್ನು ಪೈಥಾಗೊರಸನಕ್ಕಿಂತಲೂ ಮೊದಲು ಹೇಳಿದವನು ಭಾಸ್ಕರಾಚಾರ್ಯ ಎಂದು ವಿವರಿಸುತ್ತಾ ಅವನ ಲೀಲಾವತಿ ಗ್ರಂಥದಲ್ಲಿ ಈ ಸಾಲುಗಳನ್ನು ಹೇಳಲಾಗಿದೆ ಎಂದು ಪೈಥಾಗೋರಸನ ಪ್ರಮೇಯದ ರೀತಿಯಲ್ಲಿ ಬಿಡಿಸಬಹುದಾದ ಒಂದು ಲೆಕ್ಕವನ್ನು ತಿಳಿಸಿದ್ದರು. ಆಗ ನಾನು, ಸರ್ ಹಾಗಿದ್ದರೆ ಅದನ್ನು ಪುಸ್ತಕದಲ್ಲೇಕೆ ಬರೆದಿಲ್ಲ?? ಎಂದು ಸಹಜವಾಗಿ ಕೇಳಿದ್ದೆ. ಆಗವರು ನಮ್ಮನ್ನು ನಾವು(ಭಾರತೀಯರನ್ನು) ಹೊಗಳಿಕೊಳ್ಳುವ ಜಾಯಮಾನ ನಮಗಿಲ್ಲ ಎಂದಿದ್ದರು. ಅವರು ವ್ಯಂಗವಾಗಿ ಇದನ್ನು ಹೇಳಿದರೋ ಸಹಜವಾಗಿ ಹೇಳಿದರೋ ನನಗಂತೂ ಅರ್ಥವಾಗಿರಲಿಲ್ಲ.
ಮುಂದೆ ನಾನು ಶಿಕ್ಷಕಿಯಾಗಿ ಗಣಿತ ವಿಷಯದ ತರಬೇತಿಗಾಗಿ ಹೋದಾಗ ಶ್ರೀಮತಿ ಮಂಜುಳಾ ಜೋಷಿ ಎನ್ನುವ ತರಬೇತುದಾರರು ಇದೇ ವಿಷಯವನ್ನು ಮತ್ತು ಭಾಸ್ಕರಾಚಾರ್ಯರ ಅವೇ ಸಾಲುಗಳನ್ನು ಪೈಥಾಗೊರಸನ ಪ್ರಮೇಯ ಕುರಿತು ಹೇಳುವಾಗ ಪುನಃ ಹೇಳಿದರು. (ಬಹುಶಃ ೨೦೦೨/೨೦೦೩ ರಲ್ಲಿ ಹೇಳಿರಬಹುದು.) ಆಗಲೂ ನಾನು ಮೇಲಿನ ಪ್ರಶ್ನೆ ಕೇಳಿದೆ. ಆಗ ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ಬದಲಾವಣೆ ಮಾಡಲು ಹೊರಟು ಕೇಸರೀಕರಣಗೊಳಿಸುತ್ತಿದೆ ಎಂಬ ಬೊಬ್ಬೆ ಎಲ್ಲೆಡೆ ಶುರುವಾಗಿತ್ತು. ಹಾಗಾಗಿ ಶ್ರೀಮತಿ ಜೋಷಿಯವರು ನಾವು ಹಾಗೆ ಹೇಳಿಕೊಳ್ಳಲು ಬಿಡುತ್ತಿಲ್ಲ ಸರ್ಕಾರವೇನು ಮಾಡಬೇಕು? ಎಂದು ಪ್ರಶ್ನಿಸಿ ಚರ್ಚೆಯನ್ನು ಹುಟ್ಟುಹಾಕಿದ್ದರು. ಬಹುತೇಕ ಶಿಕ್ಷಕರು ನಮ್ಮ ಪೂರ್ವಿಕರ ಸಾಧನೆಗಳನ್ನು ನಮ್ಮ ಮಕ್ಕಳಿಗೆ ತಿಳಿಸುವದರಿಂದ ಅವರು ಸ್ಪೂರ್ತಿಗೊಳ್ಳುತ್ತಾರೆ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾರೆಂದು ವಾದಿಸಿದರು. ಅಂದರೆ ತರಬೇತಿಗೆ ಹಾಜರಾಗಿದ್ದ ೧೦೦ ಶಿಕ್ಷಕರಲ್ಲಿ ಸುಮಾರು ೮೦/೯೦ ಜನ ಹೀಗೆ ವಾದಿಸಿದರೆಂದರೆ ಜನರಿಗೆ ತಮ್ಮ ಪೂರ್ವಿಕರ ಮಹತ್ವದ ಲಸ ಸಂಶೋಧನೆಗಳನ್ನು ತಮ್ಮ ಪರಂಪರೆಯನ್ನು ಮುಂದಿನ ಪೀಳಿಗೆ ತಿಳಿಯಲಿ ಎಂಬ ಆಶಯ ಇದೆ ಎಂದಾಯ್ತು. ಆದರೂ ಅಂಥ ಕೆಲಸಗಳು ನಡೆದಾಗ ಕೆಲವರು ನಿಲ್ಲಿಸಲು ಕೇಸರೀಕರಣವೆಂದು ಬೊಬ್ಬೆ ಹೊಡೆಯುತ್ತಾರೆ. ಪುರೋಹಿತಶಾಹಿಯ ಹುನ್ನಾರವೆಂದು, ಇನ್ನು ಕೆಲವರು ಬ್ರಾಹ್ಮಣಿಕೆಯ ಹೇರಿಕೆ ಎಂದೂ ಏನೇನೋ ಅಲ್ಲಸಲ್ಲದ ಅಪಪ್ರಚಾರ ಮಾಡುತ್ತಾರೆ. ಅದು ಹ್ಯಾಗೋ ಇವರ ದನಿ ಮೇಲಾಗಿ ಪಠ್ಯಪುಸ್ತಕಗಳಲ್ಲಿ ಅದೇ ಬ್ರಿಟೀಷರನ್ನು ಯುರೋಪಿಯನ್ನರನ್ನು ಹೊಗಳುವಂಥ ಪಾಠಗಳೇ ಪಠ್ಯ ಪುಸ್ತಕದಲ್ಲಿ ಬಂದು ಬಿಡುತ್ತವೆ.
ಮತ್ತಷ್ಟು ಓದು 
ವಿಡಂಬನೆ : ರಾಮನ್ ದೇವನ್ ಟೀ!
– ತುರುವೇಕೆರೆ ಪ್ರಸಾದ್
ಗುದ್ಲಿಂಗ ತನ್ನ ಗುಡ್ಲು ಹೋಟ್ಲಲ್ಲಿ ಪುಕ್ಕಟೆ ಟೀ ಕೊಡ್ತಿದಾನೆ ಅಂತ ಊರೆಲ್ಲಾ ಗುಲ್ಲಾಗಿತ್ತು. ಎಂಜಲು ಕೈಲಿ ಕಾಗೆ ಓಡಿಸ್ದೋನು, ಟೀಗೆ ಹುಣಿಸೇಬೀಜ ಕುಟ್ ಹಾಕಿ ಬೇಸ್ ಕೊಡ್ತಿದ್ದೋನು, ಮೂರು ದಿನದ ಹಿಂದಿನ ಒಡೆದ ಹಾಲಿಗೆ ಸೋಡಾ ಹಾಕ್ತಿದ್ದೋನು ಪುಕ್ಕಟೆ ಟೀ ಕೊಡೋಕೆ ಹೇಗೆ ಸಾಧ್ಯ ಅಂತ ಅಚ್ಚರಿ ಪಟ್ಟು ಪರ್ಮೇಶಿ ಪಟಾಲಂ ಗುದ್ಲಿಂಗನ ಟೀ ಹೋಟ್ಲು ಹತ್ರ ದೌಡಾಯಿಸುದ್ರು. ಗುದ್ಲಿಂಗನ ಹೋಟ್ಲು ತುಂಬಾ ಜನವೋ ಜನ! ಎಲ್ಲಾ ಪುಕ್ಕಟೆ ಟೀ ಹೀರ್ತಿದ್ರು, ಹಾಗೇ ಗುದ್ಲಿಂಗನ ಟೀ ಬಗ್ಗೆ, ರಾಜಕೀಯದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದಿದ್ವು. ಎಲ್ಲಾ ಬೆಕ್ಕಸ ಬೆರಗಾಗಿ ನೋಡುದ್ರು.
‘ಏನೋ ಗುದ್ಲಿಂಗ? ಬಿಟ್ಟಿ ಟೀ ಸಮಾರಾಧನೆ ಮಾಡ್ತಿದೀಯ..’ಕೇಳಿದ ಪರ್ಮೇಶಿ
‘ ಹೂ ಕಣ್ರೋ! ಯಾವ್ದೋ ಕಂಪನಿಯೋರು ಸ್ಯಾಂಪಲ್ಗೆ ಅಂತ ಟೀ ಕೊಟ್ಟಿದ್ರು. ಅದನ್ನ ನಾನ್ಯಾಕೆ ದುಡ್ಡಿಗೆ ಮಾರ್ಕೊಬೇಕು ಅಂತ ಜನಕ್ಕೆ ಫ್ರೀ ಟೀ ಕೊಡ್ತಿದೀನಿ. ಕೆರೆಯ ನೀರನು ಕೆರೆಗೆ ಚೆಲ್ಲಿ’ ಅಂತಾರಲ್ಲ ಹಾಗೆ ಎಂದು ಹಲ್ಕಿರಿದ.






