ವಿಷಯದ ವಿವರಗಳಿಗೆ ದಾಟಿರಿ

Recent Articles

27
ಜೂನ್

ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ

– ಡಾ.ಸಂಗಮೇಶ ಸವದತ್ತಿಮಠ

ನಕಾರಾತ್ಮಕಬೆಂಗಳೂರಿನಲ್ಲಿ ಸುಪ್ರೀಮ್‍ಕೋರ್ಟ ವಿಶ್ರಾಂತ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರು,ದಿನಾಂಕ 29-7-2012 ರಂದು ಮಾಜಿ ಕೇಂದ್ರ ಸಚಿವ ಹಾಗೂ ಪತ್ರಕರ್ತ ಅರುಣ ಶೌರಿ ಅವರ ನಾಲ್ಕು ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈಚೆಗೆ ನಮ್ಮ ದೇಶದಲ್ಲಿ `ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ’ದ (Negetive Social Critical mass) ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ ಎಂದು ಹೇಳಿದ್ದು ನಮ್ಮನ್ನು  ಯೋಚಿಸುವಂತೆ ಮಾಡಿದೆ. ಅವರು ಹೇಳಿದ ’Social Critical mass’, ಎಂಬುದು ಎಲ್ಲ ವಲಯಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಹಬ್ಬಿಸುತ್ತಲಿದೆ. ಸಾಮಾಜಿಕ ಸಮೂಹ ಎಂಬುದು ಒಂದು ಜಾತಿ ಅಥವಾ ಒಂದು ಧರ್ಮ ಇಲ್ಲವೆ ರಾಜಕೀಯ ಪಕ್ಷದ ಒಬ್ಬ ಮುಖಂಡನ ಸುತ್ತ ಗಿರಕಿಹೊಡೆಯುತ್ತ ಇರುತ್ತದೆ. ಮುಖಂಡನು ತನ್ನ ಸುತ್ತಮುತ್ತಣದವರ ಸ್ವಾರ್ಥ ಲಾಲಸೆಗಳನ್ನು ಪೂರೈಸಲೋಸುಗ ಒಂದು ಅಥವಾ ಹಲವು ಸಮಾನ ಮನಸ್ಕ ಜನತಾಗುಂಪುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. ಅಂಥ ಗುಂಪಿನ ಜನ ಹತ್ತಾರು ಸಾವಿರವಿದ್ದರೂ ಆಯಿತು, ಆತನು ಮೊದಲು ಕೈಹಾಕುವುದು ಆಡಳಿತದಲ್ಲಿದ್ದ ಸರ್ಕಾರದ ಕುತ್ತಿಗೆಗೆ. ನನಗೆ ಇಷ್ಟು ಜನಬೆಂಬಲವಿದೆ, ನಮ್ಮ ಸಮುದಾಯವನ್ನು ಸರ್ಕಾರ ನಿರ್ಲಕ್ಷಿಸಿದೆ. ಅದಕ್ಕೆ ಇಂತಿಂಥ ಸೌಲಭ್ಯಗಳು ನಮ್ಮವರಿಗೆ ಬೇಕು ಎಂದು ಒಂದು ದೊಡ್ಡ ಪಟ್ಟಿಯನ್ನು ಮುಂದಿಡುತ್ತಾನೆ. ಇಂಥ ಮುಖಂಡರು ಭಸ್ಮಾಸುರರಿದ್ದಂತೆ. ಒಂದು ಪಕ್ಷವು ಆಡಳಿತದಲ್ಲಿ ಇದ್ದಾಗ ಆ ಪಕ್ಷದಿಂದ ಏನು ಬೇಕೋ ಅದನ್ನೆಲ್ಲ ವಾಮಮಾರ್ಗದಿಂದಾದರೂ ಸರಿಯೆ, ಇನ್ನಿತರರಿಗೆ ಕಷ್ಟವಾದರೂ ಸರಿಯೆ ಬಾಚಿಕೊಳ್ಳುವುದು. ನಂತರ  ಮತ್ತೊಂದು ಪಕ್ಷವು ಆಡಳಿತಕ್ಕೆ ಬಂದರೆ ಅಲ್ಲಿಯೂ ಅವನು ಅದೇ ಬಗೆಯ ತಂತ್ರಗಾರಿಕೆಯನ್ನು ಉಪಯೋಗಿಸುತ್ತಾನೆ. ಅವನಿಗೆ ಯಾರು ಅಧಿಕಾರದಲ್ಲಿ ಇದ್ದರೇನು? ತನ್ನ ಮತ್ತು ತನ್ನವರ ಕಾರ್ಯ ಸುಲಭವಾಗಿ ಸಾಗುವಂತಿದ್ದರೆ ಆಯಿತು. ಇದೀಗ ಮಠಾಧೀಶರೂ ಅದೇ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅದಕ್ಕಾಗೆ ಜಾತಿಗೊಂದು ಮಠಗಳು ಹುಟ್ಟಿಕೊಳ್ಳುತ್ತಿವೆ. ಮಠಾಧೀಶರಿಗೆ ರಾಜಕಾರಣಿಗಳಿಗೆ ಈಗ ವ್ಯತ್ಯಾಸ ಕಡಿಮೆಯಾಗುತ್ತಿದೆ. ತಮ್ಮ ತಮ್ಮ ಜಾತಿ ಗುಂಪುಗಳ ಅನುಕೂಲಸಿಂಧು ಚಟುವಟಿಕೆಗಳೇ ತಮತಮಗೆ ಮುಖ್ಯ ಎಂಬುದನ್ನು ಬಹಿರಂಗವಾಗಿಯೇ ಅವರು ತೋರ್ಪಡಿಸಿಕೊಳ್ಳುತ್ತಿದ್ದಾರೆ. ಇದು ಭಾರತವನ್ನು ಧರ್ಮ-ಜಾತಿ-ಪಕ್ಷ ಆಧಾರಿತ ಗುಂಪುಗಳಲ್ಲಿ ಛಿದ್ರಗೊಳಿಸುವ ಬಹು ಕೆಟ್ಟ ಬೆಳವಣಿಗೆ.
ಮತ್ತಷ್ಟು ಓದು »

25
ಜೂನ್

ಮೂಢನಂಬಿಕೆ ನಿಷೇಧ ಕಾಯ್ದೆ ಮಂಡನೆಗೆ ಆಷಾಢಮಾಸ ಅಡ್ಡಿ!

– ಪ್ರವೀಣ್ ಕುಮಾರ್ ಮಾವಿನಕಾಡು

Sulsuddi - Moudya Virodhi Kaaydeಆಷಾಢಮಾಸ ಯಾವುದೇ ಶುಭ ಕಾರ್ಯಗಳಿಗೆ ಸೂಕ್ತವಲ್ಲ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ “ಮೂಢನಂಬಿಕೆ ಆಚರಣೆ ಪ್ರತಿಬಂಧಕ ವಿಧೇಯಕ”ವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸದಿರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಈ ವಿಧೇಯಕವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವ ಕುರಿತಂತೆ ಮೂಢ ನಂಬಿಕೆ ವಿರೋಧೀ ಹೋರಾಟ ಸಮಿತಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಮಾನ್ಯ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.ಇದೇ ಸಂಧರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,ತಾವು ಈಗಾಗಲೇ ನಗರದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಖ್ಯಾತ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದು ಅವರೂ ಸಹ ಈ ಬಾರಿ ಅಧಿಕ ಆಷಾಢ ಬಂದಿರುವುದರಿಂದ ವಿಧೇಯಕ ಮಂಡನೆ ಬೇಡ ಎಂದು ತಮಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.ಅಲ್ಲದೇ ಹಾಗೊಂದು ವೇಳೆ ಆಷಾಢದಲ್ಲೇ ವಿಧೇಯಕ ಮಂಡಿಸಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರಲಿದೆ ಮತ್ತು ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಗಳಾಗುವ ಸಂಭವವಿದೆ.ಹಾಗೇನಾದರೂ ಆದಲ್ಲಿ ತಾವು ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷಾಂತರ ಮಾಡಿ,ಹಲವು ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ಬೇರ್ಪಡಿಸಿ,ಇದುವರೆಗೆ ಮಾಡಿದ ರಾಜಕೀಯವೆಲ್ಲವೂ ವ್ಯರ್ಥವಾಗಲಿದೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿ ಸಧ್ಯಕ್ಕೆ ಈ ವಿಧೇಯಕವನ್ನು ಮಂಡಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದರು.
ಮತ್ತಷ್ಟು ಓದು »

24
ಜೂನ್

ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು?

– ರಾಕೇಶ್ ಶೆಟ್ಟಿ

ಭಾರತೀಯ ಶಿಕ್ಷಣ ವ್ಯವಸ್ಥೆಅಂಡಮಾನ್ ದ್ವೀಪದ,’ಬೋ’ ಎಂಬ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರ ಹೆಸರು ಬೋ ಎಸ್ಸರ್.ಈಕೆ ‘ಬೋ’ ಭಾಷೆ ಮಾತನಾಡಬಲ್ಲ ಬುಡಕಟ್ಟು ಜನಾಂಗದ ಕೊನೆಯ ಕೊಂಡಿಯಾಗಿದ್ದರು.೨೦೧೦ರಲ್ಲಿ,ತನ್ನ ೮೫ನೇ ವಯಸ್ಸಿನಲ್ಲಿ ಬೋ ಎಸ್ಸರ್ ಮರಣಹೊಂದುವುದರೊಂದಿಗೆ “ಬೋ” ಎಂಬ ಬುಡಕಟ್ಟು ಭಾಷೆಯೂ ಮಣ್ಣಾಯಿತು.ಭಾರತದಂತಹ ಸಾವಿರಾರು ಭಾಷೆಗಳಿರುವ ನೆಲದಲ್ಲಿ ಇಂತ ಅದಿನ್ನೆಷ್ಟು ಭಾಷೆಗಳು ಹೀಗೆ ಮಣ್ಣಾಗಿವೆಯೋ ಗೊತ್ತಿಲ್ಲ.ಒಂದು ಭಾಷೆ ಮಣ್ಣಾಗುವುದೊರೊಂದಿಗೆ ಆ ಭಾಷೆಯ ಜೊತೆಗೆ ಬೆಸೆದುಕೊಂಡ ಸಂಸ್ಕೃತಿ,ಆಚರಣೆಗಳು,ನೋವು,ನಲಿವುಗಳೂ ಮಣ್ಣಾಗುತ್ತವೆ.

ಭಾರತದಂತ ಅಗಾಧ ವೈವಿಧ್ಯಮಯ ದೇಶದಲ್ಲಿ ಭಾಷೆಯ ಕುರಿತ ಚರ್ಚೆಗಳಲ್ಲಿ ಎದ್ದು ಕಾಣುವುದು,ಈ ದೇಶಕ್ಕೊಂದು ರಾಷ್ಟ್ರ ಭಾಷೆಯ ಅಗತ್ಯವಿದೆಯೇ ಅಥವಾ ಲಿಂಕಿಂಗ್ (ಸಂವಹನ) ಭಾಷೆಯ ಅಗತ್ಯವಿದೆಯೇ ಎನ್ನುವುದು.ಇದರ ಜೊತೆಗೆ ಶಿಕ್ಷಣದ ಮಾಧ್ಯಮ ಯಾವುದಿರಬೇಕು ಎನ್ನುವ ವಿಷಯ ಬಂದಾಗ,ಚರ್ಚೆಯನ್ನು ಎರಡು ಹಾದಿಯಲ್ಲಿ ತಂದು ನಿಲ್ಲಿಸಬಹುದು.

ಪರಿಸರದ ಭಾಷೆಯಲ್ಲಿ ಶಿಕ್ಷಣ ನೀಡುವುದು ಒಂದು ಹಾದಿಯಾದರೇ,ಇನ್ನೊಂದು ಹಾದಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಮತ್ತು ಅದರ ಲಾಭ.

ಸಂವಹನ ಭಾಷೆಯಾಗಿ ಮತ್ತು ಶಿಕ್ಷಣದ ಮಾಧ್ಯಮವಾಗಿ ಇಂಗ್ಲೀಷ್ ಮತ್ತಷ್ಟು ಓದು »

22
ಜೂನ್

ನಾಡು-ನುಡಿ ಮರುಚಿಂತನೆ : ಅಕ್ಷರಕ್ಕೂ,ಶಿಕ್ಷಣಕ್ಕೂ,ವಿದ್ಯೆಗೂ,ಜ್ಞಾನಕ್ಕೂ ಏನು ಸಂಬಂಧ?

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಜ್ಞಾನಸಾಧಾರಣವಾಗಿ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಕುರಿತು ಒಂದು ಆರೋಪವನ್ನು ಪದೇ ಪದೇ ಮಾಡಲಾಗುತ್ತದೆ: ಅದೆಂದರೆ  ಬ್ರಾಹ್ಮಣರು ಶೂದ್ರರನ್ನು ಹಾಗೂ ಅಸ್ಪೃಶ್ಯರನ್ನು ಅಕ್ಷರ ಜ್ಞಾನದಿಂದ ವಂಚಿಸಿದ್ದಾರೆ. ಆಕಾರಣದಿಂದಾಗಿ ಅವರಿಗೆ ಜ್ಞಾನವನ್ನೂ, ವಿದ್ಯೆಯನ್ನೂ ನಿರಾಕರಿಸಿದ್ದರು ಅಂತ. ನಮ್ಮ ಜಾತಿ ವ್ಯವಸ್ಥೆಯಲ್ಲಿ ಶೋಷಣೆಯ ಒಂದು ಲಕ್ಷಣ ಎಂಬಂತೆ ಕೆಲವು ಹಿತಾಸಕ್ತಿ ಪೀಡಿತ ಗುಂಪುಗಳು ಈ ಸಂಗತಿಯನ್ನು ತಪ್ಪದೇ ಹೇಳುತ್ತಿರುತ್ತವೆ.

ಹೀಗೆ ಹೇಳುವವರು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಆಧುನಿಕ ಶಿಕ್ಷಣವು ಅಕ್ಷರಾಭ್ಯಾಸಕ್ಕೂ ಶಿಕ್ಷಣಕ್ಕೂ ಒಂದು ಅವಿನಾಭಾವಿಯಾದ ಸಂಬಂಧ ಕಲ್ಪಿಸುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಸಾಕ್ಷರತೆಯ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಹಮ್ಮಿಕೊಂಡಿದೆ ಹಾಗೂ ವಿಶ್ವಸಂಸ್ಥೆ ಕೂಡಾ ಅಕ್ಷರವನ್ನು ಅಭಿವೃದ್ಧಿಯ ಮಾನದಂಡವನ್ನಾಗಿ ಸ್ವೀಕರಿಸಿದೆ. ವಯಸ್ಕರಿಗೆ ಕೂಡಾ ಅವರು ಸಾಯುವುದರ ಒಳಗೆ ಒಮ್ಮೆಯಾದರೂ ಅಕ್ಷರಾಭ್ಯಾಸವನ್ನು ಮಾಡಿಸುವುದು ನಿರ್ಣಾಯಕ ಎಂದು ಭಾವಿಸಲಾಗಿದೆ. ಈ ರೀತಿಯ ಶಿಕ್ಷಣ ಪದ್ಧತಿಯಲ್ಲಿ ಜ್ಞಾನವನ್ನು ಪುಸ್ತಕವನ್ನು ಓದುವ ಮೂಲಕವೇ ಪಡೆಯುವುದು ಅತ್ಯವಶ್ಯ. ಇದು ಪಾಶ್ಚಾತ್ಯ ಸಂಸ್ಕೃತಿಯ ಕ್ರಮ. ಅಲ್ಲಿ ಸತ್ಯದೇವನ ವಾಣಿಯು ಅಂತಿಮವಾದ ಸತ್ಯವಾಗಿದ್ದು ಅದು ಬರೆಹದ ಮೂಲಕವೇ ಲಭ್ಯವಿರುವುದರಿಂದ ಬರೆಹವನ್ನು ಕಲಿಯುವುದು ನಿರ್ಣಾಯಕ.

ಮತ್ತಷ್ಟು ಓದು »

18
ಜೂನ್

ಏಕ್ ಥಾ ಟೈಗರ್!

– ರೋಹಿತ್ ಚಕ್ರತೀರ್ಥ

ರವೀಂದ್ರ ಕೌಶಿಕ್ - ಬ್ಲ್ಯಾಕ್ ಟೈಗರ್“ಹ್ಞೂ ಅಂತಿಯೋ ಊಹ್ಞೂ ಅಂತಿಯೋ?”
“ಏನೇ ಹೇಳುವ ಮೊದಲು ನನಗೆ ಸ್ವಲ್ಪ ಮಾಹಿತಿಯಾದರೂ ಇರಬೇಕು ತಾನೆ? ನನ್ನ ಕೆಲಸ ಏನು ಅಂತಾದ್ರೂ ಹೇಳಿ!”
“ನೀನು ಮೊನ್ನೆ ಕಾಲೇಜಲ್ಲಿ ಸ್ಟೇಜ್ ಮೇಲೆ ಏನು ಮಾಡಿದಿಯೋ ಅದೇ.”
“ಅಂದ್ರೆ??”
“ನಾಟಕ ಆಡೋದು”
“ನೀವೇನು ನಾಟಕ ಕಂಪೆನಿಯವರಾ? ನಾನಿಲ್ಲಿ ಬಿಕಾಂ ಮಾಡ್ತಿದೇನೆ. ಡಿಗ್ರಿ ಮುಗಿಸಿ ನಾಟಕ ಮಂಡಳಿ ಸೇರಿದೆ ಅಂತ ಹೇಳಿದರೆ ನನ್ನಪ್ಪ ಸಿಗಿದು ತೋರಣ ಕಟ್ತಾರೆ ಅಷ್ಟೆ.ಅಲ್ಲದೆ, ನಟನಾಗಿ ಹೆಸರು ಮಾಡೋ ಆಸೆ ಅಷ್ಟೇನೂ ಇಲ್ಲ ನನಗೆ”
“ನಮ್ಮಲ್ಲಿ ನಾಟಕಕ್ಕೆ ಸೇರಿದರೆ ನಿನ್ನ ಕಟೌಟನ್ನು ಎಲ್ಲೂ ನಿಲ್ಲಿಸೋಲ್ಲ. ಇನ್ನು ನಿನ್ನ ಕೆಲಸದ ಬಗ್ಗೆ ಹೊರಗೆಲ್ಲೂ ಹೇಳುವ ಹಾಗೂ ಇಲ್ಲ. ನಿನ್ನ ಜೀವನಪೂರ್ತಿ ಅದೊಂದು ರಹಸ್ಯವಾಗಿರುತ್ತೆ. ಆದರೆ ನೀನು ಆ ಉದ್ಯೋಗ ಮಾಡೋದು ನಿನಗಾಗಿ ಅಥವಾ ಕುಟುಂಬಕ್ಕಾಗಿ ಅಲ್ಲ; ಬದಲು ದೇಶಕ್ಕಾಗಿ. ಅದೊಂದು ಮಹೋನ್ನತ ಉದ್ಯೋಗ.”
“ಯಾ..ಯಾರು ನೀವು?”
“ರಾ ಅಧಿಕಾರಿಗಳು. ದೇಶದ ಹಿತ ಕಾಯುವ ಬೇಹುಗಾರರು.”

ರವೀಂದ್ರ ಕೌಶಿಕ್ ಬೆಚ್ಚಿಬಿದ್ದ. ಹಣೆಯ ನೆರಿಗೆಯ ಮೇಲೆ ಬೆವರಿನ ತೋರಣ ಕಟ್ಟಿತು. ಇವರು ನನ್ನನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ? ಎರಡು-ಮೂರು ಸಾವಿರ ವಿದ್ಯಾರ್ಥಿಗಳಿರುವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ನಾನೊಬ್ಬ ಗುಂಪಿನಲ್ಲಿ ಗೋವಿಂದನಾಗಿರುವ ಸಾಮಾನ್ಯ ಯುವಕ. ಕಾಮರ್ಸ್ ಪದವಿ ಮಾಡುತ್ತಿದ್ದೇನೆ. ಆಗೀಗ ಕಾಲೇಜಿನ ಟ್ಯಾಲೆಂಟ್ ಶೋಗಳಲ್ಲಿ ಸಣ್ಣಪುಟ್ಟ ಪ್ರಹಸನ ಮಾಡಿದ್ದುಂಟು. ಮೂರುದಿನದ ಹಿಂದೆ ಒಂದು ಕಾರ್ಯಕ್ರಮದಲ್ಲಿ, ಚೀನಾದ ಸೈನಿಕರಿಗೆ ಸಿಕ್ಕಿಯೂ ರಹಸ್ಯಗಳನ್ನು ಬಿಟ್ಟುಕೊಡದ ಭಾರತೀಯ ಸೈನಿಕನ ಪಾತ್ರ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದೆ. ಅಷ್ಟೆ! ಅಷ್ಟು ಮಾಡಿದ್ದು ಬಿಟ್ಟರೆ ನನಗೆ ಈ ಸೇನೆ, ರಕ್ಷಣೆ, ಬೇಹುಗಾರಿಕೆ ಇವೆಲ್ಲ ಏನೇನೂ ಗೊತ್ತಿಲ್ಲ. ನನ್ನಲ್ಲಿ ಯಾವ ಮಹಾಗುಣ ನೋಡಿ ಈ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ? RK ಚಿಂತೆಗೆ ಬಿದ್ದ.

ಮತ್ತಷ್ಟು ಓದು »

17
ಜೂನ್

ನ್ಯಾಯಕ್ಕಾಗಿ ಶೋಷಿತ ಯುವಕನ ಜೀವಪರ ಹೋರಾಟ

– ಪ್ರವೀಣ್ ಕುಮಾರ್ ಮಾವಿನಕಾಡು

Sulsuddi - Terroristಬೆಂಗಳೂರು:  ಕೇವಲ ಭಯೋತ್ಪಾದಕ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನಿಗೆ ಮನೆಯನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ನಿರಾಕರಿಸಿದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.ಹೈದರಾಬಾದ್ ಮೂಲದ ಮನೋಜ್ ಕುಮಾರ್(ಹೆಸರು ಮತ್ತು ಧರ್ಮ ಬದಲಿಸಿದೆ) ಎನ್ನುವ ಯುವಕ ತಾನು ಗೆರೆ ನಗರದ ಮನೆಯ ಮಾಲೀಕರೊಬ್ಬರ ಬಳಿ ಬಾಡಿಗೆಗೆ ಮನೆ ಬೇಕೆಂದು ಕೇಳಿದಾಗ ಅವರು ಕೆಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪಿಯಾಗಿರುವ (ಕೇವಲ ಆರೋಪಿಯಾಗಿರುವ) ನನ್ನನ್ನು ಗುರುತಿಸಿದರು ಮತ್ತು ನಾವು ನಿಮ್ಮಂತವರಿಗೆ ಮನೆ ನೀಡುವುದಿಲ್ಲ ಹೇಳಿ ಬಾಗಿಲು ಮುಚ್ಚಿಕೊಂಡರು ಎಂದು ಆರೋಪಿಸಿದ್ದಾನೆ.

ಇಂತಹಾ ಘಟನೆ ರಾಜ್ಯದಲ್ಲಿ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ನಡೆದಿದ್ದು ದೇಶದಾದ್ಯಂತ ತೀವ್ರ ಸಂಚಲನ ಉಂಟುಮಾಡಿದೆ.

ನಿಜಕ್ಕೂ ಇದೊಂದು ದುರದೃಷ್ಟಕರ ಘಟನೆ ಎಂದು ಪ್ರತಿಕ್ರಿಯಿಸಿದ ಗೃಹ ಸಚಿವರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೂರು ದಿನಗಳ ಒಳಗಾಗಿ ತನಗೆ ವರದಿ ನೀಡುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,ತಪ್ಪಿತಸ್ತರು ಎಷ್ಟೇ ದೊಡ್ದವರಾಗಿದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮತ್ತಷ್ಟು ಓದು »

16
ಜೂನ್

ನಾಡು-ನುಡಿ ಮರುಚಿಂತನೆ : ಶಂಕರಾಚಾರ್ಯರು ಮತ್ತು ಜಾತಿವ್ಯವಸ್ಥೆಯ ಕಥೆ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

Shankaraacharya1ಶಂಕರಾಚಾರ್ಯರು ಇಂದು ಒಂದು ವರ್ಗದ ಬುದ್ಧಿಜೀವಿಗಳ ಟೀಕೆಗೆ ಗುರಿಯಾಗಿದ್ದಾರೆ.ಅವರೆಂದರೆ ಜಾತಿ ವ್ಯವಸ್ಥೆಯ ವಿನಾಶವನ್ನು ಪ್ರತಿಪಾದಿಸುವವರು.ಜಾತಿ ವ್ಯವಸ್ಥೆ ಎಂಬ ಕಥೆಯ ಸಾರವಿಷ್ಟು: ಇಂದು ಭಾರತದಲ್ಲಿ ಕಂಡುಬರುವ ಸಕಲ ಜಾತಿಗಳನ್ನೂ, ಅವುಗಳ ಪದ್ಧತಿಗಳನ್ನೂ ಹಾಗೂ ತರತಮಗಳನ್ನೂ ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ರಚಿಸಿದರು ಹಾಗೂ ತಮ್ಮ ಧರ್ಮಶಾಸ್ತ್ರಗಳೆಂಬ ಕಾನೂನುಗಳನ್ನು ಮಾಡಿ ಅವು ಮುಂದುವರೆಯುವಂತೆ ನೋಡಿಕೊಂಡರು. ಈ ಕಥೆಯನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕಾದರೆ ಅದಕ್ಕೆ ಆಧಾರಗಳು ಬೇಕೇ ಬೇಕು. ಶಂಕರಾಚಾರ್ಯರು ಅಂಥದ್ದೊಂದು ಆಧಾರ ಎಂಬುದಾಗಿ ಈ ಬುದ್ಧಿಜೀವಿಗಳು ನಂಬಿದ್ದಾರೆ. ಶಂಕರರ ತತ್ವಜ್ಞಾನ ಹಾಗೂ ಜಿಜ್ಞಾಸೆಗಳು ಈ ವರ್ಗಕ್ಕೆ ಅಪ್ರಸ್ತುತ. ಅವರ ತತ್ವಜ್ಞಾನವೇ ಬ್ರಾಹ್ಮಣಶಾಹಿಯ ಒಂದು ಕಣ್ಕಟ್ಟಾಗಿರುವುದರಿಂದ ಅದಕ್ಕೆ ಬಲಿಯಾಗಬಾರದು ಎಂಬ ಎಚ್ಚರಿಕೆ ಕೂಡ ಇವರಲ್ಲಿ ಸದಾ ಜಾಗೃತವಾಗಿ ಇರುತ್ತದೆ.

ಆದರೆ ಶಂಕರರ ಸಿದ್ಧಾಂತವನ್ನು ಪರಿಚಯಿಸಿಕೊಂಡ ಯಾರಿಗಾದರೂ ಅವರು ಎಲ್ಲಾ ಬಿಟ್ಟು ಜಾತಿಭೇದವನ್ನು ಎತ್ತಿ ಹಿಡಿಯಲಿಕ್ಕಾಗಿ ತಮ್ಮ ಜೀವ ಸವೆಸಿದರು ಎಂಬುದು ಹಾಸ್ಯಾಸ್ಪದವಾಗಿ ಕಾಣುವುದರಲ್ಲಿ ಸಂದೇಹವಿಲ್ಲ. ತಾವು ಪ್ರತಿಪಾದಿಸುವ ಜ್ಞಾನವು ಜಾತಿ, ಒಣ ಪಾಂಡಿತ್ಯ, ತರ್ಕ, ಶಾಸ್ತ್ರ ಇತ್ಯಾದಿಗಳನ್ನು ಮೀರಿದ್ದು ಎಂಬುದನ್ನು ಅವರು ಸ್ಪಷ್ಟವಾಗಿಯೇ ಸಾರುತ್ತಾರೆ. ಜ್ಞಾನಿಯಾದವನಲ್ಲಿ ‘ಜಾತಿ ಭೇದ’ ಅಳಿಯುತ್ತದೆ ಹಾಗೂ ಎಲ್ಲರಲ್ಲೂ ನಾನೇ ಇದ್ದೇನೆ ಎನ್ನುವ ಅನುಭವವಾಗುತ್ತದೆ ಎನ್ನುತ್ತಾರೆ.  ಇಂಥ ಹೇಳಿಕೆಗಳು ಜಾತಿಭೇದವನ್ನು ಗಟ್ಟಿಮಾಡುತ್ತವೆ ಎನ್ನಬಹುದಾದರೆ ಜಾತಿಭೇದ ಅಳಿಯಬೇಕು ಎನ್ನುತ್ತಿರುವ ಇಂದಿನ ಎಲ್ಲ ಬುದ್ಧಿಜೀವಿಗಳ ಹೇಳಿಕೆಗಳೂ ಅದೇ ಕೆಲಸವನ್ನು ಮಾಡುತ್ತಿವೆ ಎಂದೇಕೆ ಹೇಳಬಾರದು? ಹಾಗಾಗಿ ಶಂಕರರ ಮೇಲಿನ ಆಪಾದನೆಯು ತರ್ಕಬದ್ಧವಾಗಿ ಕಾಣಿಸುವುದಿಲ್ಲ. ಹಾಗಾದರೆ ಈ ಆಪಾದನೆಯು ಎಲ್ಲಿಂದ ಹುಟ್ಟಿಕೊಂಡಿತು?

ಮತ್ತಷ್ಟು ಓದು »

15
ಜೂನ್

ಎಲ್ಲ ರೋಗಗಳನ್ನು ಗುಣಪಡಿಸುವ ಯೋಗಕ್ಕೆ ಧರ್ಮಾ೦ಧತೆಯ ರೋಗವನ್ನು ಗುಣಪಡಿಸುವ ಶಕ್ತಿಯಿದೆಯೇ?

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ವಿಶ್ವ ಯೋಗ ದಿನ“ಇಸ್ಲಾ೦ ತತ್ವಗಳ ಕುರಿತಾದ ನನ್ನ ಗ್ರಹಿಕೆ ಅತ್ಯ೦ತ ನಿಖರ ಮತ್ತು ಸ್ಪಷ್ಟ.ಯೋಗವೆನ್ನುವುದು ಮುಸ್ಲಿಮರಿಗೆ ನಿಷೇಧವೆ೦ದು ಖುರಾನಿನ ಯಾವುದೇ ಅಧ್ಯಾಯದಲ್ಲಿಯೂ ಹೇಳಿಲ್ಲವೆನ್ನುವುದನ್ನು ನಾನು ವಿಶ್ವಾಸದಿ೦ದ ನುಡಿಯಬಲ್ಲೆ.ಬದಲಿಗೆ ಯೋಗದಿ೦ದ ಅಲ್ಲಾಹನನ್ನು ಇನ್ನಷ್ಟು ಭಾವುಕವಾಗಿ ಪೂಜಿಸಬಹುದು ಎನ್ನುವುದು ನನ್ನ ನ೦ಬಿಕೆ. ತನ್ನ ದೈನ೦ದಿನ ಜೀವನದಲ್ಲಿ ಯೋಗಾಭ್ಯಾಸದ ಅಳವಡಿಕೆಯಿ೦ದ ಮುಸಲ್ಮಾನನೊಬ್ಬ ಇನ್ನಷ್ಟು ದೇವರಿಗೆ ಪ್ರಿಯನಾಗಬಲ್ಲ ಎನ್ನುವುದನ್ನು ನಾನು ಅನುಮೋದಿಸುತ್ತೇನೆ.ಬಾಲ್ಯದಿ೦ದಲೂ ಯೋಗವನ್ನು ಅಭ್ಯಸಿಸುತ್ತ ಬ೦ದವನು ನಾನು.ಹಾಗಾಗಿ ಇಸ್ಲಾ೦ ಮತ್ತು ಯೋಗದ ನಡುವಣ ಪಾರಮಾರ್ಥಿಕ ಸ೦ಬ೦ಧವನ್ನು ನಾನು ಅನುಭವದಿ೦ದ ಬಲ್ಲೆ.ಅನೇಕ ಮುಸ್ಲಿ೦ ಧರ್ಮಗುರುಗಳು ಯೋಗಾಭ್ಯಾಸ ನಡೆಸುವ ಮುಸಲ್ಮಾನರ ವಿರುದ್ಧ ಫತ್ವಾಗಳನ್ನು ಹೊರಡಿಸಿದ್ದಾರೆ೦ಬುದನ್ನು ನಾನು ಕೇಳಿದ್ದೇನೆ.ಖುರಾನ್ ಶ್ಲೋಕಗಳ ಅವರ ತಪ್ಪುಗ್ರಹಿಕೆಯೆ ಇ೦ಥಹ ಪ್ರಮಾದಕ್ಕೆ ಕಾರಣ.ಸರಿಯಾಗಿ ಪರಾಮರ್ಶಿಸಿದರೆ ಯೋಗವೆನ್ನುವುದು ಇಸ್ಲಾಮಿನ ಒ೦ದು ಭಾಗವೇ ಆಗಿರುವುದು ತಿಳಿಯುತ್ತದೆ.ಯೋಗ ಮತ್ತು ಇಸ್ಲಾ೦ಗಳ ನಡುವಣ ಸ೦ಬ೦ಧವೆನ್ನುವುದು ಪರಸ್ಪರಾವಲ೦ಬಿ ಪಾರಮಾರ್ಥಿಕ ಒಡಬ೦ಡಿಕೆಯ೦ಥದ್ದು.ಯೋಗ ಮತ್ತು ಇಸ್ಲಾಮ್ ತತ್ವಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ.ದೇಹವೆನ್ನುವುದು ಮೋಕ್ಷ ಸಾಧನೆ ಮತ್ತು ಧಾರ್ಮಿಕ ಅನುಭಾವಗಳ ಗ್ರಹಿಕೆಗೆ ಬಹುಮುಖ್ಯ ಅ೦ಗವೆನ್ನುವುದನ್ನು ಯೋಗದ೦ತೆ,ಇಸ್ಲಾ೦ ಸಹ ಒಪ್ಪಿಕೊಳ್ಳುತ್ತದೆ.ಮೋಕ್ಷ ಸಾಧನೆ ಅಥವಾ ಬ್ರಹ್ಮತ್ವವೇ ಯೋಗಸಾಧನೆಯ ಮುಖ್ಯ ಉದ್ದೇಶವಾಗಿದ್ದರೆ, ಸೂಫಿ ಜೀವನಶೈಲಿಯಾಗಿರುವ ’ತಾರೀಕ್-ಎ-ನಕ್ಷಬ೦ದಿ’ಯ ಮೂಲೋದ್ದೇಶ ಅಲ್ಲಾಹನಲ್ಲಿ ಮುಸಲ್ಮಾನನ ವಿಲೀನಿಕರಣ. ಸೂಫಿ ಪ೦ಥದ ಕೆಲವು ಆಚರಣೆಗಳು ಅಕ್ಷರಶ; ಯೋಗದ ಅನುಕರಣೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಖ್ಯಾತ ಮುಸ್ಲಿ೦ ಲೇಖಕ ಅಶ್ರಫ್ ನಿಝಾಮಿ ತಮ್ಮ ’ನಮಾಝ್’ ಎನ್ನುವ ಕೃತಿಯಲ್ಲಿ ಯೋಗವೆನ್ನುವುದು ಇಸ್ಲಾಮಿನ ಅವಿಭಾಜ್ಯ ಅ೦ಗವೆ೦ದು ಸ್ಪಷ್ಟವಾಗಿ ದಾಖಲಿಸಿದ್ದಾರೆ.ಈಜಿಪ್ಟಿನ ಅಬ್ದುಲ್ ಬಾಸಿತ್ ಯಾರಿಗೆ ತಾನೇ ಗೊತ್ತಿಲ್ಲ? ಜಗತ್ತಿನ ಶ್ರೇಷ್ಠ ಖುರಾನ್ ವಾಚಕನೆ೦ದು ಪರಿಗಣಿಸಲ್ಪಡುವ ಬಾಸಿತ್,ಹತ್ತಾರು ನಿಮಿಷಗಳ ಕಾಲ ಉಸಿರು ಬಿಗಿಹಿಡಿದು ಖುರಾನಿನ ಅಧ್ಯಾಯಗಳನ್ನು ನಿರರ್ಗಳವಾಗಿ ಪಠಿಸುವುದನ್ನು ಕ೦ಡು ಅನೇಕ ವಿಜ್ನಾನಿಗಳೇ ಬೆರಗಾಗುತ್ತಾರೆ.ವಿಚಿತ್ರವೆ೦ದರೆ ಉಸಿರಿನ ಮೇಲೆ ಇ೦ಥದ್ದೊ೦ದು ಪಾರಮ್ಯವನ್ನು ಸಾಧಿಸಲು ಅಬ್ದುಲ್ ಬಾಸಿತ್,ಪ್ರಾಣಾಯಾಮದ ಅಭ್ಯಾಸ ನಡೆಸುತ್ತಾರೆನ್ನುವುದು ಅನೇಕರಿಗೆ ತಿಳಿದಿಲ್ಲ.ಹಾಗಾಗಿ ಇಸ್ಲಾಮಿನಲ್ಲಿ ಯೋಗಾಭ್ಯಾಸವೆನ್ನುವುದು ಅನೈತಿಕವೆನ್ನುವುದು ಅರ್ಥಹೀನ ವಾದ.”
ಮತ್ತಷ್ಟು ಓದು »

12
ಜೂನ್

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೩

– ವಿನಾಯಕ ಹಂಪಿಹೊಳಿ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨

ದರ್ಶನಗಳಲ್ಲಿ ತರ್ಕ:

“ಭಗವಂತನಲ್ಲಿ ತನ್ನನ್ನು ಆರಾಧಿಸುವವರ ಮೇಲೆ ಪ್ರೀತಿ, ತನ್ನನ್ನು ಆರಾಧಿಸದವರ ಮೇಲೆ ಕ್ರೋಧ, ತನಗಿಷ್ಟ ಬಂದ ಹಾಗೆ ಮಾಡುವ ಸ್ವೇಚ್ಛೆ ಇವೆಲ್ಲವೂ ತುಂಬಿಕೊಂಡಿವೆ.” ಎಂಬ ಈ ಸೆಮೆಟಿಕ್ ರಿಲಿಜನ್ನಿನ ವಾಕ್ಯವನ್ನು ಭಾರತೀಯ ದಾರ್ಶನಿಕನೊಬ್ಬನಿಗೆ ಹೇಳಿ ನೋಡಿ. ಆಗ ಆತನ ಪ್ರತಿಕ್ರಿಯೆ ಹೇಗಿರುತ್ತದೆ? “ಛೇ! ಕೋಪ, ಆಸೆಗಳನ್ನು ಇಟ್ಟುಕೊಂಡವನು ಭಗವಂತ ಹೇಗಾದಾನು?” ಎಂದೇ ಪ್ರತಿಕ್ರಿಯೆ ನೀಡುತ್ತಾನಲ್ಲವೇ? ಕಾರಣ ನಮ್ಮ ಭಾರತೀಯ ದರ್ಶನಗಳ ತಳಹದಿಯೇ ಬೇರೆ. ದರ್ಶನಗಳಲ್ಲಿಯೂ ತರ್ಕಕ್ಕೆ ರಿಲಿಜನ್ನುಗಳಂತೆ ಪ್ರಥಮ ಪ್ರಾಶಸ್ತ್ಯವಿಲ್ಲ. ತರ್ಕದಿಂದ ಭಗವತ್ಪ್ರಾಪ್ತಿಯೂ ಇಲ್ಲ, ಮೋಕ್ಷವೂ ಇಲ್ಲ. ಆದರೆ “ಈ ಸಿದ್ಧಾಂತವೇ ಸತ್ಯ” ಎಂದು ಎದ್ದು ನಿಂತು ಒಬ್ಬ ಹೇಳಬೇಕಾದರೆ, ಆತ ಆ ತನ್ನ ಸಿದ್ಧಾಂತವನ್ನು ತರ್ಕಾಗ್ನಿಪರೀಕ್ಷೆಗೆ ದೂಡಿ ಪವಿತ್ರವಾಗಿ ಹೊರತರಬೇಕು. ರಿಲಿಜನ್ನುಗಳಂತೆ ಪುಸ್ತಕವೇ ಪರಮ ಸತ್ಯವಲ್ಲ ಈ ದರ್ಶನಗಳಲ್ಲಿ. ಅನುಭವವೇ ಪ್ರಧಾನ. “ವೇದಗಳು ಅಗ್ನಿ ತಣ್ಣಗಿದೆ ಎಂದು ಸಾವಿರ ಸಾರಿ ಹೇಳಿದರೂ ಅನುಭವವನ್ನೇ ಅನುಸರಿಸಬೇಕು” ಎಂದು ಶಂಕರರು ಹೇಳಿದ್ದಾರೆ. ಉಪನಿಷತ್ತುಗಳೂ ಕೂಡ “ಇಲ್ಲಿ ವೇದಗಳು ವೇದಗಳಾಗಿರುವದಿಲ್ಲ” ಎಂದು ಸಾರುತ್ತವೆ. ಅಂದರೆ ವೇದಕ್ಕಿಂತಲೂ ಅನುಭವಕ್ಕೇ ಪ್ರಥಮ ಪ್ರಾಶಸ್ತ್ಯ. ಸಹಸ್ರಾರು ಅನುಭವಿಗಳ ಅನುಭವದೊಂದಿಗೆ ತಾಳೆಯಾಗುವದರಿಂದಲೇ ವೇದ ಉಪನಿಷತ್ತು, ಗೀತೆಗಳಿಗೆ ನಮ್ಮಲ್ಲಿ ಹೆಚ್ಚು ಗೌರವ.

ಅನೇಕ ದರ್ಶನಗಳು ಅನೇಕ ತರ್ಕಗಳನ್ನನುಸರಿಸಿವೆ. ವೇದವನ್ನೊಪ್ಪದ ಬೌದ್ಧ ಮತ್ತು ಚಾರ್ವಾಕ ದರ್ಶನಗಳು ತಮ್ಮದೇ ತರ್ಕ ವ್ಯವಸ್ಥೆಯನ್ನು ಹಾಕಿಕೊಂಡಿವೆ. ವೇದಗಳನ್ನೊಪ್ಪುವ ಸಾಂಖ್ಯ, ಪೂರ್ವಮೀಮಾಂಸ ಮತ್ತು ವೇದಾಂತ ಮತಗಳೂ ಕೂಡ ವೇದ/ಉಪನಿಷತ್ತುಗಳಲ್ಲಿ ಬರುವ ತರ್ಕವನ್ನು ಆಧಾರವಾಗಿಟ್ಟುಕೊಂಡಿವೆ. ಇಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಮತ್ತು ದೇಶಾದ್ಯಂತ ಅನೇಕ ವಿದ್ವಜ್ಜನರು ಒಪ್ಪಿರುವ ಅದ್ವೈತ ವೇದಾಂತ ದರ್ಶನವನ್ನು ತೆಗೆದುಕೊಳ್ಳೋಣ. ಮುಖ್ಯವಾಗಿ ವೇದಾಂತಗಳಲ್ಲಿ ಕಾಣುವ ತರ್ಕ ಅತ್ಯಂತ ಜಟಿಲ. ಕಾರಣ ಉಪನಿಷತ್ತುಗಳು ಅನುಸರಿಸುವ ತರ್ಕ ರೋಮಾಂಚನಗೊಳಿಸುವಂಥದ್ದು. ಏಕೆಂದರೆ ಅದು ಮನುಷ್ಯನ ಮೂಲಭೂತ ನಂಬಿಕೆಗಳನ್ನೇ ಪ್ರಶ್ನಿಸುತ್ತದೆ. “ಆತ್ಮದ ವಿಷಯದಲ್ಲಿ, ಇದೆ ಎಂದು ಕೆಲವರು ಇಲ್ಲ ಎಂದು ಕೆಲವರು” ಎಂಬುದರೊಂದಿಗೆ ಆರಂಭವಾಗುವ ಕಠೋಪನಿಷತ್ತು, “ಆತ್ಮನು ಇದ್ದಾನೆ” ಎಂಬುದನ್ನು ತಾರ್ಕಿಕವಾಗಿ ಸಾಧಿಸಿ ಮುಕ್ತಾಯಗೊಳ್ಳುತ್ತದೆ. ಹಾಗೆಯೇ, ಶಂಕರರು “ಮನುಷ್ಯನಿಗೆ ಇಷ್ಟವಾದದ್ದನ್ನು ಪಡೆದುಕೊಳ್ಳುವದು ಮತ್ತು ಅನಿಷ್ಟವಾದದ್ದನ್ನು ಕಳೆದುಕೊಳ್ಳುವದು ಸ್ವಾಭಾವಿಕವಾಗಿದೆ. ಈ ಇಷ್ಟಪ್ರಾಪ್ತಿ-ಅನಿಷ್ಟಪರಿಹಾರವೆಂಬುದು ಜೀವಿಗಳ ಸ್ವಭಾವವು. ಉಪನಿಷತ್ತುಗಳ ಉದ್ದೇಶವೇ ಈ ಸ್ವಭಾವದ ಕಾರಣವನ್ನು ಅರಿಯುವದು” ಎಂದು ಹೇಳಿದ್ದಾರೆ. ಹೀಗೆ ಮನುಷ್ಯನ ಮೂಲ ನಂಬಿಕೆಯನ್ನೇ ತರ್ಕಕ್ಕೆ ಒಡ್ಡುವಲ್ಲಿ ಉಪನಿಷತ್ತುಗಳು ತೋರಿದ ಧೈರ್ಯ ಯಾವ ರಿಲಿಜನ್ನುಗಳಲ್ಲೂ ಕಂಡು ಬಂದಿಲ್ಲ.

ಮತ್ತಷ್ಟು ಓದು »

12
ಜೂನ್

ಈಶಾನ್ಯ ಭಾರತದೆಡೆಗೂ ಕ್ಯಾಮೆರಾ ತಿರುಗಿಸಿ ಮಾಧ್ಯಮಗಳೇ

– ವಿದ್ಯಾ ಕಾಶೀಕರ

ಈಶಾನ್ಯ ಭಾರತೀಯರುಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಮುದುವರಿಯುತ್ತಿರುವ ದೇಶದಲ್ಲಿ ಭಾರತ ಒಂದು.ಐತಿಹಾಸಿಕ,ಸಾಂಸ್ಕೃತಿಕ,ಪರಂಪರೆ ಮತ್ತು ಉದಾರ ವ್ಯಕ್ತಿತ್ವಕ್ಕಾಗಿ ಈ ದೇಶ ಯಾವಗಲೂ ಬೇರೆ ದೇಶಗಳಿಂದ ಗೌರವ ಪಡೆದಿದೆ.ವಿಶ್ವಕ್ಕೆ ಶಾಂತಿ,ಸಹಬಾಳ್ವೆಪ್ರಜಾಪ್ರಭುತ್ವವನ್ನು ಅಪ್ಪಿಕೊಂಡು ಬಾಳುತ್ತಿರುವ ಈ ದೇಶವನ್ನು ಎಷ್ಟೆಲ್ಲಾ ಆಕ್ರಮಣ, ದೌರ್ಜನ್ಯಗಳು ನಡೆದರೂ ಮತ್ತೆ ವಿಶ್ವದಲ್ಲಿ ತನ್ನ ಛಾಪನ್ನುಮೂಡಿಸಿದೆ.ಶೋಚನೀಯ ಸಂಗತಿಯೆಂದರೆ, ಯಾವ ಕಾರಣಕ್ಕಾಗಿ ನಾವು ಗೌರವಿಸುವಿಸಲ್ಪಡುತ್ತಿದ್ದೇವೋ ಅದನ್ನು ತೊರೆದು,ಬೇರೊಂದು ಸಂಸ್ಕೃತಿಯೆಡೆಗೆ ಆಕರ್ಷಿತರಾಗಿ ಅಂಧಾನುಕರಣೆ ಮಾಡುವುದಲ್ಲದೇ, ನಮ್ಮ ಮೂಲವನ್ನೇ ಅವಹೇಳನ ಮಾಡುವ ಸ್ಥಿತಿಗೆ ಈಗಿನ ಯುವ ಜನಾಂಗ ತಲುಪಿರುವುದು. ನಮ್ಮ ಜನರ ಭಕ್ತಿಯು ಕೇವಲ ಮಂದಿರ-ಗುಡಿಗಳಲ್ಲಿ ಪ್ರಾರ್ಥಿಸುವಾಗ ಮಾತ್ರ ಉದ್ಭವವಾಗುತ್ತದೆ. ಅಲ್ಲಿಂದ ಹೊರಬಂದ ಮರುಕ್ಷಣದ ಸನ್ನಿವೇಶವೇ ಬೇರೆ.ನೈಜಭಕ್ತಿಯು,ನನ್ನ ದೇಶ, ನನ್ನ ನಾಡು-ಭಾಷೆ, ವಿಷಯಗಳಲ್ಲಿ ವ್ಯಕ್ತವಾಗಬೇಕು. ಮಂದಿರಗಳಲ್ಲಿ ಶುದ್ಧನಾಗಿ ಸೇವೆ ಸಲ್ಲಿಸಿ ,ಮಂದಿರದ ಸುತ್ತ ಹೊಲಸು ಮಾಡಿದರೆ ಮೆಚ್ಚನಾ ಪರಮಾತ್ಮನು, ಹಣ್ಣಿನ ಸಿಪ್ಪೆಯನ್ನೋ, ಇನ್ನಾವುದೋ ತ್ಯಾಜ್ಯವನ್ನೋ ಬೀದಿಯಲ್ಲಿ ಚೆಲ್ಲಿದರೆ, ಮಹಿಳೆಯರೊಂದಿಗೆ  ಅಸಭ್ಯವಾಗಿ ವರ್ತಿಸಿದರೆ, ಅದು ಅನಾಗರೀಕತೆಯ ಪರಮಾವಧಿಯಲ್ಲದೆ ಮತ್ತೇನು?

ಒಮ್ಮಿಂದೊಮ್ಮೆಲೇ ಸಮಾಜದಲ್ಲಿ ಇಂತಹ ಆಚರಣೆಗಳು ಕಾಲಿಡುವುದಿಲ್ಲ. ಇದಕ್ಕೆ, ಮಾಧ್ಯಮಗಳ ಕೊಡುಗೆ ಅಪಾರವಾಗಿದೆ. ಮನೋರಂಜನೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ಟಿ.ಆರ್.ಪಿ. ಹೆಚ್ಚಿಸಲು ವಿಧ-ವಿಧದ ಕಾರ್ಯಕ್ರಮಗಳನ್ನು ನೀಡುತ್ತವೆ. ಹಲವು ಮೂಲಭೂತ ಸಮಸ್ಯೆಗಳು ನಮ್ಮ ಸುತ್ತಲೂ ತಲೆ ಎತ್ತಿ ನರ್ತಿಸುತ್ತಿದ್ದರೂ, ಅದನ್ನು ಮೂಲೆಗುಂಪಾಗಿಸಿ,ಮಹಿಳಾ ಸ್ವಾತಂತ್ರದ  ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದವನ್ನು ,ಜಾತಿ,ಧರ್ಮಗಳನ್ನ ನಿಂದಿಸಿದವರನ್ನು ಪುಕ್ಕಟೆ ಪ್ರಚಾರ ಕೊಟ್ಟು, ಬುದ್ದಿಜೀವಿಗಳೆಂದು ನಾಮಕರಣ ಮಾಡಿ ಜನಪ್ರಿಯ ವ್ಯಕ್ತಿಯನ್ನಾಗಿ ಮಾಡುತ್ತವೆ.ಕಟ್ಟಡದ ಆಧಾರವೇ ಕುಸಿಯುತಿರುವಾಗ, ಬಣ್ಣ ಬಳಿದು ಚಂದವಾಗಿಸುವುದು ಸರಿಯೇ?”
ಮತ್ತಷ್ಟು ಓದು »