ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 24, 2011

ಡಿ ಬಿ ಚಂದ್ರೇಗೌಡರು ಪುಸ್ತಕದಲ್ಲಿ

‍ನಿಲುಮೆ ಮೂಲಕ

– ಕಾಲಂ ೯

ಮಲೆನಾಡಿನ ರಾಜಕಾರಣಿ ಡಿ.ಬಿ. ಚಂದ್ರೇಗೌಡರು 75ರ ಹೊಸ್ತಿಲಲ್ಲಿ ಇದ್ದಾರೆ. ಅವರ ನಿರೂಪಿತ  ಆತ್ಮಕಥೆ ‘ಪೂರ್ಣಚಂದ್ರ’ ಪ್ರಕಟಣೆಗೆ ಸಿದ್ಧವಾಗಿದೆ.

ಕಾಂಗ್ರೆಸ್ಸು, ಜನತಾದಳ, ಬಿಜೆಪಿ ಎಲ್ಲ ಪಕ್ಷಗಳಲ್ಲೂ ರಾಜಕೀಯ ಯಾತ್ರೆ ಮಾಡಿ ಕಾನೂನು, ಸಂಸದೀಯ ವ್ಯವಹಾರದಲ್ಲಿ ಹಿಡಿತ ಸಾಧಿಸಿರುವ ರಾಜಕಾರಣಿ ಚಂದ್ರೇಗೌಡರು.

ಆಕಾಶವಾಣಿಯ ಹಿರಿಯ ಪತ್ರಕರ್ತರೊಬ್ಬರು ಚಂದ್ರೇಗೌಡರ ಈ ಆತ್ಮಕಥೆ ‘ಪೂರ್ಣಚಂದ್ರ’(ಚಂದ್ರೇಗೌಡರ ಮನೆಯಾಕೆ ಪೂರ್ಣಿಮಾ)ವನ್ನು ನಿರೂಪೊಸಿದ್ದಾರೆ.

1977ರ ತುರ್ತುಪರಿಸ್ಥಿತಿಯ ತರುವಾಯ ತಿರಸ್ಕೃತಗೊಂಡಿದ್ದ ಇಂದಿರಾಗಾಂಧಿಗೆ ‘ರಾಜಕೀಯ ಮರುಪ್ರವೇಶ’ಕ್ಕಾಗಿ ತಾವು ಗೆದ್ದಿದ್ದ ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟುಕೊಟ್ಟ ಕುಟುಂಬ ನಿಷ್ಠೆ ಚಂದ್ರೇಗೌಡರದ್ದು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಚಿಕ್ಕಮಗಳೂರಿನ ದತ್ತಪೀಠದ ವಿವಾದದ ಸಂಧರ್ಭದಲ್ಲಿ ಸ್ವತಃ ತಾವೇ ಪೂಜೆಗೆ ಕೂತು ಸಿಟಿ ರವಿ, ಮುತಾಲಿಕರಂತಹವರ ಚಳುವಳಿಗಾರರನ್ನು, ಗೌರಿ ಲಂಕೇಶ, ಶಿವಸುಂದರ್ ಇತ್ಯಾದಿ ವಿರೋಧಿ ಬಣದವರನ್ನು ದಂಗುಬಡಿಸಿದ್ದರು.

ಕೊನೆಗಾಲದಲ್ಲಿ ಬಿಜೆಪಿ ಸೇರಿ ಬೆಂಗಳೂರಿನಲ್ಲೊಂದು ಸಂಸದೀಯ ಕ್ಷೇತ್ರ ಹುಡುಕಿಕೊಂಡು ಸಂಸತ್ ಸದಸ್ಯರಾಗಿದ್ದಾರೆ. ಬಿಜೆಪಿಯ ಹೈಕಮಾಂಡ್ ಯಡಿಯೂರಪ್ಪನವರಿಗೆ ಮನೆದಾರಿ ತೋರಿಸಿದಾಗ ವಕಾಲತ್ತಿಗೆ ನಿಂತ ಋಣಸಂದಾಯ ನಿಷ್ಠೆ ಅವರದು.

ಈ ತಿಂಗಳ ಕೊನೆಯಲ್ಲಿ ಪುಸ್ತಕ ಬರಬೇಕು. ಆದರೆ ಅಗಸ್ಟ್ 27ಕ್ಕೆ ಯಡಿಯೂರಪ್ಪನವರಿಗೆ ಇರುವ ಸಮನ್ಸ್ ಮತ್ಯಾವ ರೂಪ ಪಡೆದುಕೊಳ್ಳುತ್ತದೋ ಎಂಬ ಆತಂಕದಲ್ಲಿರುವ ಚಂದ್ರೇಗೌಡರು ಮುಹೂರ್ತದ ದಿನ ಹುಡುಕುತ್ತಿದ್ದಾರೆ.

ಈ ಹಿಂದೆ ಪ್ರಜಾವಾಣಿಯ ಬಿ. ಎಂ. ಹನೀಫ಼್ ನಿರೂಪಿಸಿದ್ದ ಮೈಸೂರಿನ ರಾಜಕಾರಣಿ ಹೆಚ್. ವಿಶ್ವನಾಥರವರ ಆತ್ಮಕಥೆ ಸಾಕಷ್ಟು ಗಮನ ಸೆಳೆದಿದ್ದನ್ನು ಸ್ಮರಿಸಬಹುದು.

*********

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments