ವಿಷಯದ ವಿವರಗಳಿಗೆ ದಾಟಿರಿ

Archive for

26
ಆಗಸ್ಟ್

ಹಳ್ಳೀಗ್ಬಂದ ಗುಂಡಣ್ಣ ಮತ್ತು ಆನ್ಲೈನ್ ಕೋರ್ಸು

ಪ್ರಶಸ್ತಿ. ಪಿ, ಸಾಗರ

ಪಟ್ಣದಿಂದ ಜಗ್ಗಣ್ಣನ ಮಗ ಗುಂಡಣ್ಣ ಬತ್ತವ್ನಂತೆ. ಅದೆಂತದೋ ಕಾಂಪೂಟ್ರಂತ ಡಬ್ಬ ತತ್ತವ್ನಂತೆ ಅನ್ನೋ ಸುದ್ದೀನ ಊರೆಲ್ಲಾ ಟಾಂ ಟಾಂ ಮಾಡ್ತಿದ್ದ ಜಮೀನ್ದಾರ ಜಗ್ಗಣ್ಣನ ಮನೆ ಕೆಲ್ಸದ ಕಿಟ್ಟಪ್ಪ. ಊರಿಗೆ ಬರೋ ಮಗೀನ ತತ್ತಾರಲಾ ಅಂತ ಧಣೀರೆ ಕಿಟ್ಟಪ್ಪಂಗೆ ಗಾಡಿ ಕಟ್ಕಂಡು ಹೋಗಕ್ಕೆ ಹೇಳಿದ್ರು. ಕಿಟ್ಟಪ್ಪ ರಾಜ್ಕುಮಾರ್ನ ಅಣ್ಣತಂಗಿ ಸಿನೀಮಾದಾಗೆ ನೋಡಿದ್ನಂತೆ. ಅದ್ರಲ್ಲಿ ಪಟ್ಣದ ಹೀರೋ ತನ್ನಳ್ಳಿಗೆ ಬಂದಾಗ ಅವನ ಕೋಟು ಬೂಟೇನು ,ಅವಂಗೆ ಹಾರ ತುರಾಹಿ ಹಾಕೋದೇನೂ.. ಅಬ್ಬಬ್ಬಾ ಅಂದ್ಕಂಡಿದ್ದ. ಅದೇ ತರ ಚಿಕ್ಕೆಜಮಾನ್ರೂ ಬತ್ತಾರೆ ಅಂತ ಕನ್ಸು ಕಾಣ್ತಾ ಇದ್ದ. ಮುಖ, ಮೈಮೇಲೆಲ್ಲಾ ಯಾರೋ ನೀರು ಹುಯ್ದಂಗಾಗಿ ಕಣ್ಬಿಟ್ಟ. ಯಾವನ್ಲೇ ಅವ ಕೆಸ್ರು ಹಾರಿಸಿದವ.. ಅಂತ ಬಾಯ್ತುದೀವರ್ಗೂ ಬಂದಿತ್ತು.ನೋಡಿದ್ರೆ ಪಟ್ಣದ ಬಸ್ಸು ಹಾರ್ನು ಹೊಡಿತಾ ಐತೆ. ಯಾವುದೋ ಪಟ್ಣದ ಹುಡ್ಗಿ ಇಳಿತಾ ಐತೆ. ಅದೆಂತದೋ ಪ್ಯಾಂಟು, ಶರ್ಟು, ಕನ್ನಡಕ ಹಾಕ್ಕೊಂಡು. ಒಂದ್ಕಿವಿಗೆ ರಿಂಗು ಬೇರೆ. ಈಗಿನ ಹುಡ್ಗೀರು ಹಿಂಗೆ ಇರ್ಬೇಕು, ಆದ್ರೂ ಕೂದಲು ಬಿಟ್ಕಂಡು , ಕಿವಿಗೆ ರಿಂಗೆಲ್ಲಾ ಹಾಕ್ಕಂವ್ಳಲ್ಲಾ ಅಂತ ಸಮಾಧಾನ ಮಾಡ್ಕಂಡ. ಅಷ್ಟರಲ್ಲೇ ಆ ಹುಡ್ಗಿ ಇವ್ನ ಹತ್ರವೇ ಬಂದು ಜಮೀನ್ದಾರ ಜಗ್ಗಣ್ಣ ಅವ್ರ ಮನೇ ಇಂದ ನನ್ನ ಕರ್ಕೊಂಡೋಗಕ್ಕೆ ಯಾರೋ ಬರ್ತಾರೆ ಅಂದಿದ್ರು. ನೀವ್ಯಾರ್ನೂ ನೋಡಿದ್ರಾ ಅಂದ್ಳು. ಮತ್ತಷ್ಟು ಓದು »