ವಿಷಯದ ವಿವರಗಳಿಗೆ ದಾಟಿರಿ

Archive for

25
ಏಪ್ರಿಲ್

ಯತ್ರ ನಾರ್ಯಸ್ತು ಪೂಜ್ಯಂತೇ

– ಮಯೂರಲಕ್ಷ್ಮಿ,ಮೈಸೂರು

ದೀಪನೂರಾರು ವರ್ಷಗಳಿಂದ ಭಾರತವನ್ನು ಎಷ್ಟೇ ಪ್ರಯತ್ನಿಸಿದರೂ ವಶಪಡಿಸಿಕೊಳ್ಳಲಾಗದ ಪಾಶ್ಚಾತ್ಯರು ಹತಾಶರಾಗಿ ತಮ್ಮ ಪ್ರಯತ್ನಗಳನ್ನು ಕೈಬಿಡದಿದ್ದರೂ ಅಸಹಾಯಕರಾಗಿ ಮತ್ತೆ ಮತ್ತೆ ಭಾರತದ ಮೇಲೆ ಬೇರೆ ಬೇರೆ ರೀತಿಯಲ್ಲಿ ಆಕ್ರಮಣಗಳಲ್ಲಿ ತೊಡಗಿದರು. ಸ್ವತಂತ್ರ ಬಂದ ಹೊಸದರಲ್ಲಿ ಆರ್ಥಿಕವಾಗಿ ಬಲಹೀನವಾಗಿದ್ದೇನೋ ನಿಜ, ಆದರೆ ಎಂತಹ ಪರಿಸ್ಥಿತಿಯಲ್ಲೂ ತನ್ನ ಅಂತ:ಶಕ್ತಿ ಮತ್ತು ಸತ್ಯ ಧರ್ಮಗಳ ಆಧಾರದಿಂದಲೇ ತಲೆಯೆತ್ತಿ ನಿಂತ ಈ ದೇಶ ನಂತರ ಸಾಧಿಸಿದ್ದು ಅಪಾರ.

ಸನಾತನ ಸಂಸ್ಕೃತಿಯ ಸಾಕಾರ ಅಡಿಪಾಯವೇ ಈ ದೇಶವನ್ನು ಎಷ್ಟೆಲ್ಲಾ ಘೋರ ಆಕ್ರಮಣ, ದೌರ್ಜನ್ಯಗಳು ನಡೆದರೂ ಮತ್ತೆ ಮತ್ತೆ ತಲೆಯೆತ್ತಿ ವಿಶ್ವಮಾನ್ಯ ರಾಷ್ಟ್ರವಾಗಿಸಿದ್ದು. ಅಲೆಕ್ಸಾಂಡರಿನಿಂದ ಹಿಡಿದು ಡಚ್, ಪೋರ್ಚುಗೀಸ್ ಮತ್ತು ಬ್ರಿಟಿಷರವರೆಗೂ ಭಾರತವನ್ನು ವಶಪಡಿಸಿಕೊಳ್ಳಲಾಗದ ಸೋಲಿನ ಕಥೆಗಳೇ ಸಾಕ್ಷಿಯಾಗಿರುವುದು ಇತಿಹಾಸದ ಪುಟಗಳಲ್ಲಿ.ಭಾರತವನ್ನು ಹಾವಾಡಿಗರ ದೇಶ, ಜಾತಿಯಾಧಾರಿತ ಸಮಾಜ ವ್ಯವಸ್ಥೆಯ ದೇಶ, ಮೂಢನಂಬಿಕೆಗಳ ನೆಲೆವೀಡು…. ಎಂದೆಲ್ಲಾ ಬಿಂಬಿಸಿದ್ದಾಯ್ತು… ಒಂದು ದೇಶವು ವಿಶ್ವಶಕ್ತಿಯಾಗಿ ಹೊರಹೊಮ್ಮುವುದನ್ನು ನಿರ್ಬಂಧಿಸುವ ಗುರಿಯು ತನ್ನ ದಿಕ್ಕನ್ನು ಬದಲಿಸಿ ಸಾಂಸ್ಕೃತಿಕವಾಗಿ ಭಾರತವನ್ನು ಪಾಶ್ಚಾತ್ಯ ಸಂಸ್ಕೃತಿಯ ಪ್ರತಿರೂಪವನ್ನಾಗಿ ಮಾಡುವತ್ತ ತಿರುಗಿದ್ದು, ಇದಕ್ಕಾಗಿ ಕಳೆದ ನೂರು ವರ್ಷಗಳಿಂದ ಪ್ರಯತ್ನ ಹೊಸ ರೀತಿಯಲ್ಲಿ ನಡೆಯುತ್ತಲೇ ಇದೆ.

ಮತ್ತಷ್ಟು ಓದು »