ವಿಷಯದ ವಿವರಗಳಿಗೆ ದಾಟಿರಿ

Archive for

27
ಜೂನ್

ಸಾಲ ಮನ್ನಾ ಮಾಡುವ ಮುನ್ನ…

– ಸುಜೀತ್ ಕುಮಾರ್

ಸಾಲ ಮನ್ನಾ ಅಂದಾಕ್ಷಣ ಹೇಗೆ, ಎಷ್ಟು, ಎಲ್ಲಿ ಎಂಬ ಪ್ರಶ್ನೆಗಳೇ ಹೆಚ್ಚಾಗಿ ನಮ್ಮಲ್ಲಿ ಮೂಡುತ್ತವೆ ಅಲ್ಲವೇ? ರೈತರಾದರೆ ಆಫ್-ಕೋರ್ಸ್ ಯಸ್. ರೈತನ ಕನಸ್ಸು ಮನಸಲ್ಲೂ ಸದ್ಯಕ್ಕೆ ಹರಿದಾಡುತ್ತಿರುವ ಏಕೈಕ ಪದವೆಂದರೆ ಅದು ‘ಸಾಲಮನ್ನಾ’. ಆದರೆ ಈ  ಪ್ರಶ್ನೆಗಳು ಒಂದು ವಿಧದಲ್ಲಿ ಪ್ರಶ್ನೆಗಳೇ ಅನಿಸಿಕೊಳ್ಳುವುದಿಲ್ಲ ಅಂದರೆ!? ಇನ್ ಫ್ಯಾಕ್ಟ್ ಇವು ಒಂತರ ಪಂದ್ಯದ ಮೊದಲೇ ಸೋಲೊಪ್ಪಿಕೊಂಡ ಮನೋಭಾವದ ಸಂಕೇತಗಳು ಎಂದರೂ ತಪ್ಪಾಗುವುದಿಲ್ಲ. ನಾ ಮಾಡಿದ ನಿರ್ಧಾರ ತಪ್ಪೆಂದು ಬೇರೆಯವರ ಮೇಲೆ ಗೂಬೆ ಕೂರಿಸಿ, ಇನ್ಯಾರಿಂದಲೋ ಅದಕ್ಕೊಂದು ಪರಿಹಾರವನ್ನು ಬಯಸುತ್ತ, ಕಾಯುತ್ತ, ಕೊನೆಗೆ  ಹಿಂದಿನಕ್ಕಿಂತಲೂ ಮತ್ತೊಂದು ಬಾಲಿಶ ನಿರ್ಧಾರವನ್ನು ಕೈಗೊಂಡು ಇಡೀ ಸಂಸಾರವನ್ನು ನಡು ನೀರಿನಲ್ಲಿ ಕೈ ಬಿಟ್ಟು, ಯಾರೋ ಮಾಡಿಟ್ಟ ಚಟ್ಟವನ್ನು ಹತ್ತುವುದು ಯಾವ ಸೀಮೆಯ ಪುರುಷಾರ್ಥ?  ರೈತನೆಂದರೆ ಇಷ್ಟೆಯೇ?

ಇಂದು ಬರಡು ಭೂಮಿಯೊಂದನ್ನು ಯಾವುದೇ ಯಂತ್ರಗಳ ಸಹಾಯವಿಲ್ಲದೆ ಅಗೆದು, ಗುದ್ದಿ  ಹಸಿರನ್ನು ಹೊತ್ತಿಸಿ ಸಾವಿರ ಜನರ ಹಸಿವನ್ನು ನೀಗಿಸಬಲ್ಲ ಒಂದಾದರೂ ಪೇಟೆಯ ಕಂಪನಿಗಳನ್ನು ತೋರಿಸಿ ನೋಡುವ.?  ಇವುಗಳು ನೂರು ಕೋಟಿ ಸುರಿದು ಸಾವಿರ ಕೋಟಿ  ಮಾಡುವ  ಮನಿ ಮೈಂಡ್ಸ್ ಗಳೇ ಹೊರತು ಬಿಡಿಗಾಸು ಹಣವಿಲ್ಲದೆ ಬೆವರನ್ನು ಬಸಿದು ಹಸಿವನ್ನು ನೀಗಿಸಬಲ್ಲ ನಮ್ಮ ರೈತನೆಂಬ ನೈಸರ್ಗಿಕ ಕಂಪೆನಿಗಳಂತಲ್ಲ. ಅಂತಹ ಎದೆಗಾರಿಕೆಯ ರೈತನೆಂಬ ಶಕ್ತಿ ಇಂದು ‘ಆತ್ಮಹತ್ಯೆ’ ಹಾಗು ‘ಸಾಲಮನ್ನಾ’ ಎಂಬೆರೆಡೇ ಪದಗಳಿಗೆ ಮೀಸಲಾಗಿರುವುದೇಕೆ? ಆತ್ಮಹತ್ಯೆ ಎಂಬುದು ಜೀವನದ ಅತಿ ಸಹಜ ಸವಾಲಿಗೆ ಹೆದರಿ ಓಟಕೀಳುವಂತಹ ಮನೋಭಾವವಾದರೆ, ಸಾಲಮನ್ನಾ ಎಂಬುದು ಎಲ್ಲವೂ ಇದ್ದರೂ ಇತರರ ಮುಂದೆ ಕೈಯೊಡ್ಡಿದಂತೆ!  ಕುಂಟುತ್ತಿದ್ದ ದೇಶದ ಆರ್ಥಿಕತೆಗೇ ಬೆನ್ನೆಲುಬಾಗಿ ನಿಲ್ಲಬಲ್ಲ ತಾಕತ್ತಿದ್ದ ರೈತನೆಂಬ ಚೇತನ ಇಂದು ಸಾಲವೆಂಬ ಪುಡಿಗಾಸಿಗೆ ನಿಜವಾಗಿಯೂ ಹೆದರಬೇಕೇ? ಒಂದುಪಕ್ಷ ವಿಷಯ ಇಷ್ಟು ಸರಳವಲ್ಲ ಎಂದೇ ಇಟ್ಟುಕೊಳ್ಳೋಣ. ಸರಿ, ಸಾಲ ಎಂಬ ವಿಷಸರ್ಪವನ್ನು ಆತ ಕೆಣಕಿದ್ದಾದರೂ ಏತಕ್ಕೆ? ಗೊಬ್ಬರ ಕೊಳ್ಳಲು? ಜಮೀನಿನಲ್ಲಿ ದುಡಿಯುವ ಕಾರ್ಮಿಕರಿಗಾಗಿ? ನೀರಿಗಾಗಿ ? ಅಥವಾ ತನ್ನ ಸ್ವಂತ ಭೋಗಕ್ಕಾಗಿ? ವಿಷಯವಿರುವುದೇ ಇಲ್ಲಿ. ಕೃಷಿಯ ಯಾವುದೊ ಸಮಸ್ಯೆಯನ್ನು ಹೊತ್ತು ತನ್ನಲ್ಲಿಗೆ ಬರುವ ರೈತನಿಗೆ ಕೃಷಿಸಾಲವೆಂಬ ವಿಷ ಮುಲಾಮನ್ನು ಸವರುವುದೇ ಈ ಸರ್ಕಾರಗಳು. ಅವರ ಸಮಸ್ಯೆಗಳಿಗೊಂದು ಸೂಕ್ತ ಪರಿಹಾರವನ್ನು ಆಲೋಚಿಸುವುದ ಬಿಟ್ಟು ತೋರ್ಪಡಿಕೆಯ ಪ್ರೀತಿಗೆ ದುಡ್ಡಿನ ಅಮಲೇರಿಸಿ ಮಕ್ಕಳು ಹಾಳಾದಾಗ ಮುಂದೇನು ಮಾಡುವುದೆಂದು ಕೈ ಕೈ ಹಿಸುಕಿಕೊಳ್ಳುವ ಪೋಷಕರಂತಾಗಿದೆ ಇಂದಿನ ಸರ್ಕಾರಗಳ ವಸ್ತುಸ್ಥಿತಿ.

ಮತ್ತಷ್ಟು ಓದು »

24
ಜೂನ್

ಹೌದು.ಐಟಿ ರಂಗ ಅಲ್ಲಾಡುತ್ತಿದೆ.ಆದರೆ,ಪ್ರಳಯವೇನೂ ಆಗಲಿಕ್ಕಿಲ್ಲ!

– ರಾಕೇಶ್ ಶೆಟ್ಟಿ

ಭಾರತದ ಐಟಿ ವಲಯದೊಳಗೆ ಮತ್ತೊಮ್ಮೆ ಲಾವಾ ಕುದಿಯಲಾರಂಭಿಸಿದೆ.ಅಲ್ಲಲ್ಲಿ ಈ ಲಾವಾದ ಸ್ಪೋಟವೂ ಆಗಿದೆ.ಆದರಿದು ಆರಂಭ ಮಾತ್ರ ಎನಿಸುತ್ತಿದೆ.ಅಮೆರಿಕಾ ಮೂಲದ ಮಲ್ಟಿನ್ಯಾಷನಲ್ ಕಂಪೆನಿಯೊಂದರಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ತೆಗೆಯಲಾಗುತ್ತಿದೆ,ಸೀನಿಯರ್ ಹುದ್ದೆಯಲ್ಲಿದ್ದವರಿಗೆ ಬಲವಂತವಾಗಿ ನಿವೃತ್ತಿಯ ಹೆಸರಲ್ಲಿ ಎದ್ದು ಹೊರಡಿ ಎನ್ನುತ್ತಿದ್ದಾರೆ ಎಂದು ಇತ್ತೀಚೆಗೆ ಚೆನ್ನೈ ಕೋರ್ಟಿನಲ್ಲಿ ಕೇಸು ದಾಖಲಾಯಿತು. ಇತ್ತೀಚೆಗೆ ಬಂದ ಕೋರ್ಟಿನ ತೀರ್ಪಿನ ಪ್ರಕಾರ, ಉದ್ಯೋಗಿಗಳಿಗೆ ಇನ್ನೊಂದು ಅವಕಾಶವನ್ನು ಕೊಡಿ ಎಂದು ಕಂಪೆನಿಗೆ ಸೂಚಿಸಲಾಗಿದೆ.ಕಂಪೆನಿಯವರೇನೋ ಕೋರ್ಟಿನ ತೀರ್ಪು ಒಪ್ಪಿಕೊಂಡಿದ್ದಾರೆ.ಮತ್ತೆ ಒಳ ಕರೆದುಕೊಂಡವರನ್ನು ಮತ್ತೊಂದು ಕಾರಣ ನೀಡಿಯೋ ಅಥವಾ ಅವರಾಗಿಯೇ ಹೊರ ಹೋಗುವಂತೆ ಮಾಡುವುದನ್ನೇನು ಕಂಪೆನಿಯವರಿಗೆ ಹೇಳಿಕೊಡಬೇಕೆ?

ಹಾಗೆ ನೋಡಿದರೆ ಇದೊಂದೆ ಕಂಪೆನಿಯಲ್ಲಿ ಮಾತ್ರ ಹೀಗೆ ಉದ್ಯೋಗ ಕಡಿತ ಮಾಡುತ್ತಿಲ್ಲ. ಭಾರತ ಮೂಲದ ಹೆಸರಾಂತ ಐಟಿ ಕಂಪೆನಿಗಳೂ ಸಹ ಇದೇ ಕೆಲಸವನ್ನು ಮಾಡುತ್ತಿದೆ.ಆ ಅಮೆರಿಕನ್ ಮೂಲದ ಕಂಪೆನಿಯೇನೋ Mass Layoff ಮಾಡಲು ಕೈ ಹಾಕಿ ತನ್ನ ಹೆಸರು ಮೀಡಿಯಾಗಳಲ್ಲಿ ಕೆಟ್ಟ ಕಾರಣಕ್ಕೆ ಸುದ್ದಿಯಾಗುವಂತೆ ಮಾಡಿಕೊಂಡಿತು ಅಷ್ಟೇ. ಉಳಿದ “ದೊಡ್ಡ ದೊಡ್ಡ” ಹೆಸರಿನ ಕಂಪೆನಿಗಳು ಅದೇ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿವೆ.ಅದು Individually Target ಮಾಡುವ ಮೂಲಕ. ಒಂದಿಡೆ ಗುಂಪನ್ನು ಎದುರು ಹಾಕಿಕೊಳ್ಳುವ ಬದಲು ಒಬ್ಬೊಬ್ಬರನ್ನೇ ಹಿಡಿದು ಹೊರನೂಕಿದರೆ ದನಿಯೆತ್ತುವವರು ಯಾರಿರುತ್ತಾರೆ ಹೇಳಿ? ಮೊದಲೇ ಭಾರತೀಯ ಐಟಿ ಉದ್ಯೋಗಿಗಳಿಗೆ ಅಂತ ಯಾವುದೇ ಟ್ರೇಡ್ ಯೂನಿಯನ್,ಸಂಘಟನೆಗಳು ಇಲ್ಲ.ಹೀಗಿರುವಾಗ ಕಂಪೆನಿಗಳ ಪಾಲಿಗೆ ಆನೆ ನಡೆದಿದ್ದೆ ಹಾದಿಯೆಂಬಂತಾಗಿದೆ.

ಮತ್ತಷ್ಟು ಓದು »

22
ಜೂನ್

ರಸಪ್ರಶ್ನೆಯಲ್ಲಿ ರೈಲು ಹಳಿಗಳಿಲ್ಲದ ಜಿಲ್ಲೆ ಯಾವುದು ಎಂದು ಕೇಳುತಿದ್ದಾಗಲೇ ಧೂರ್ತರಲ್ಲಿ ತಂತ್ರಗಾರಿಕೆಯೊಂದು ಹುಟ್ಟುತ್ತಿತ್ತು..

– ಶಿಲ್ಪಾ ನೂರೆರ

ಅಭಿವೃದ್ಧಿಗೆ ಮಾನದಂಡಗಳೇನು? ಅಷ್ಟಕ್ಕೂ ಅಭಿವೃದ್ಧಿ ಎಂದರೇನು? ಇರುವುದನ್ನೆಲ್ಲಾ ಗುಡಿಸಿ ಎಸೆದು ಮತ್ತೊಂದನ್ನು ಕಟ್ಟುವುದು ಅಭಿವೃದ್ಧಿಯೇ? ಸಹಜವಾದುದನ್ನು ನಾಶಮಾಡಿ ಕೃತಕವಾದದ್ದನ್ನು ಸೃಷ್ಟಿಸುವುದು ಅಭಿವೃದ್ಧಿ ಎನಿಸಿಕೊಳ್ಳುತ್ತದೆಯೇ? ಹಾಗಾದರೆ ಸಹಜವಾದುದನ್ನು, ಈ ಮೊದಲೇ ನೆಲೆಯಾದವುಗಳಿಗೆ ನಾನಾ ಕಿರೀಟಗಳನ್ನು ಕೊಟ್ಟು ಹೊಗಳಿ ಹೊನ್ನಶೂಲಕ್ಕೇಕೆ ಏರಿಸುವಿರಿ?- ಇಂಥ ಅನೇಕ ಪ್ರಶ್ನೆಗಳು ಹುಟ್ಟುವುದು ವ್ಯಾಖ್ಯಾನಕಾರರಿಗೆ, ವಿಶ್ಲೇಷಕರಿಗೆ, ಸಮಾಜಶಾಸ್ತ್ರಜ್ಞರಿಗೆ ಮತ್ತು ಅಭಿವೃದ್ಧಿ ನಿರೀಕ್ಷಿಸುವವರಿಗೆ ಹೊರತು ಅಭಿವೃದ್ಧಿಯನ್ನು ಕೈಗೊಳ್ಳುವವರಿಗಲ್ಲ! ಅಭಿವೃದ್ಧಿಗೆ ಸುಸ್ಥಿರ, ಸಮಗ್ರ ಇತ್ಯಾದಿ ವಿಶೇಷಣಗಳನ್ನು ಕೊಟ್ಟುಕೊಂಡವರೂ ಕೂಡ ಅವರೇ. ಹಾಗಾಗಿ ಅಭಿವೃದ್ಧಿ ಎಂಬುದು ತನ್ನ ಗುರಿಯನ್ನು ಇನ್ನೂ ಮುಟ್ಟದೆ ಅಡ್ಡಾದಿಡ್ಡಿ ಓಡುತ್ತಲೇ ಇದೆ. ಇಂದಿಗೂ ಅಭಿವೃದ್ಧಿ ರಾಜಕೀಯದ ಪ್ರಮುಖ ದಾಳವಾಗಿ ಬಳಕೆಯಾಗುತ್ತಲೇ ಇದೆ. ಹೊರನೋಟಕ್ಕೆ ಆಕರ್ಷಕವಾಗಿ, ಜನರ ಆಶಾಕಿರಣವಾಗಿ ನರ್ತನ ಮಾಡುತ್ತ ಬರುವ ಅಭಿವೃದ್ಧಿ ಯೋಜನೆಗಳು ಇನ್ನೂ ಏಕೆ ತನ್ನ ಉದ್ದೇಶವನ್ನು ಪೂರ್ಣಗೊಳಿಸಿಲ್ಲ ಎನ್ನುವುದರ ಹಿಂದೆ ಇಂಥಾ ವ್ಯಾಖ್ಯಾನಗಳ ಕ್ಲೀಷೆಗಳಿವೆ. ಮತ್ತಷ್ಟು ಓದು »

21
ಜೂನ್

ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು? ( ಭಾಗ – ೪ )

ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)

ಎರಡು ವಿಭಿನ್ನ ಮಾರ್ಗಗಳು :

ಸಾಮಾನ್ಯವಾಗಿ ಪಶ್ಚಿಮದಲ್ಲಿ ನಮ್ಮ ಸಂಸ್ಕೃತಿಗೆ ಸಂಬಂಧಿಸಿದಂತೆ ಪದೇಪದೇ ಕೇಳಿಬರುವ ಈ ಪ್ರಶ್ನೆಗಳನ್ನು ಗಮನಿಸಿ. ನೀವು ಹಣೆಗೆ ತಿಲಕ ಇಡುವುದೇಕೆ? ಗೋಮಾಂಸವನ್ನು ನೀವೇಕೆ ತಿನ್ನುವುದಿಲ್ಲ? ನೀವು ಶಿಶ್ನವನ್ನು ಪೂಜೆ ಮಾಡುತ್ತೀರಂತೆ ಹೌದೆ? ಜಾತಿ ಪದ್ಧತಿಯ ಬಗ್ಗೆ ನಿಮ್ಮ ಅನಿಸಿಕೆಯೇನು? ಈಗಲೂ ಭಾರತದಲ್ಲಿ ವಿಧವೆಯರನ್ನು ಸುಡುತ್ತಾರೆಯೇ? ನಿಮ್ಮ ದೇವರುಗಳಿಗೇಕೆ ಆರೆಂಟು ಕೈಗಳು ಇರುತ್ತವೆ? ನಿಮ್ಮ ರಿಲಿಜನ್ನಿನ ಚಿಹ್ನೆ ಯಾವುದು? ನೀವು ದೇವಸ್ಥಾನದಲ್ಲಿ ಮೂರ್ತಿಪೂಜೆ/idolatry ಮಾಡುತ್ತೀರಾ? ನೀವು ದೇವರನ್ನು ನಂಬುತ್ತೀರಾ? Are you religious? ಇತ್ಯಾದಿ. ಈ ರೀತಿಯ ಪ್ರಶ್ನೆಗಳು ಎದುರಾದಾಗ ಯಾರಾದರೂ ಹೇಗೆ ಪ್ರತಿಕ್ರಿಯಿಸಬಹುದು? ಸ್ಥೂಲವಾಗಿ ಹೇಳುವುದಾದರೆ, ಇದಕ್ಕೆ ಎರಡು ವಿಧದಲ್ಲಿ ಪ್ರತಿಕ್ರಿಯಿಸಬಹುದು. ಮೊದಲನೆಯದು, ಈ ಪ್ರಶ್ನೆಗಳು ಗ್ರಹಿಸಲು ಸಾಧ್ಯವಾಗುವಂಥ ಮತ್ತು ನಮಗೆ ಅರ್ಥವಾಗುವ ಪ್ರಶ್ನೆಗಳು ಎಂಬ ಊಹೆಯೊಂದಿಗೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದು. ಸುಧಾರಣಾವಾದಿಗಳ ಕಾಲದಿಂದ ಇಂದಿನವರೆಗೆ ನಾವು ಅನುಸರಿಸಿದ ಮಾರ್ಗ ಇದೇ. ಆದರೆ ಅಮೆರಿಕೆಯಲ್ಲಿ ನೆಲೆಸುವ ಭಾರತೀಯರ [ಅಷ್ಟೇ ಏಕೆ, ಸಂಕುಚಿತಗೊಳ್ಳುತ್ತಿರುವ ಆ ಜಗತ್ತಿನಲ್ಲಿ, ಭಾರತದಲ್ಲಿನ ಭಾರತೀಯರ] ಪರಿಸ್ಥಿತಿ ಇಂದು ಬದಲಾಗಿದೆ: ಹಿಂದಿನ ಕಾಲದ ಸುಧಾರಕರು ಭಾರತೀಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು, ಆದರೆ ನಾವಿಂದು ಪಾಶ್ಚಾತ್ಯ ಸಂಸ್ಕೃತಿಯ ಸಂದರ್ಭದಲ್ಲಿ ನಿಂತು ಮಾತನಾಡುತ್ತಿದ್ದೇವೆ. ಬದಲಾದ ಈ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನಾವೂ ನಮ್ಮ ಸುಧಾರಣಾವಾದಿಗಳು ನಡೆದ ಮಾರ್ಗವನ್ನು ಅನುಸರಿಸಿದರೆ ಉಂಟಾಗುವ ಪರಿಣಾಮವನ್ನು ಗ್ರಹಿಸುವುದು ಬಹಳ ಮುಖ್ಯವಾಗಿದೆ. ಮತ್ತಷ್ಟು ಓದು »

21
ಜೂನ್

ಯೋಗದ ಮಹತ್ವ ಹಾಗೂ ಅರಿವು

– ಗೀತಾ ಹೆಗ್ಡೆ

ಈ ದಿನ ಅಂತಃರಾಷ್ಟ್ರೀಯ ಯೋಗ ದಿನ. ಇತ್ತೀಚಿನ ದಿನಗಳಲ್ಲಿ ಈ ಯೋಗದ ಬಗ್ಗೆ ತುಂಬಾ ಪ್ರಚಾರ ಹಾಗೂ ಕಲಿಯುವವರು ಕೂಡಾ ಹೆಚ್ಚಾಗುತ್ತಿರುವುದು ಸಂತೋಷದ ಸಂಗತಿ. ಮತ್ತು ಪುರಾತನ ಕಾಲದ ಈ ವಿದ್ಯೆ ಜನ ಮೈಗೂಡಿಸಿಕೊಂಡು ಯೋಗದ ಮಹತ್ವ ತಿಳಿಯುವತ್ತ ದಾಪುಗಾಲು ಹಾಕುತ್ತಿದ್ದಾರೆ. ಹಾಗೂ ದಿನ ಹೋದಂತೆ ಆರೋಗ್ಯದತ್ತ ಕಾಳಜಿ, ಆಸ್ತೆ, ಔಷಧಿಗಳಿಂದ ಆಗುವ ದುಷ್ಪರಿಣಾಮಗಳು, ಅಯ್ಯೋ! ಹೀಗೆ ಇದ್ದರೆ ಮುಂದೇನಾಗುತ್ತದೊ ಅನ್ನುವ ಮನದೊಳಗಿನ ಗಾಬರಿ ಜನ ಆಹಾರ, ವ್ಯಾಯಾಮ, ವಾಕಿಂಗು, ಯೋಗದ ಕಡೆ ಹೆಚ್ಚು ಹೆಚ್ಚು ವಾಲುತ್ತಿರುವುದು ಹಾಗೂ ತಿಳಿದುಕೊಳ್ಳುವ ಆಸಕ್ತಿ ಅಧಿಕವಾಗುತ್ತಿರುವುದನ್ನು ಕಾಣಬಹುದು. ಮತ್ತಷ್ಟು ಓದು »

19
ಜೂನ್

ನಕಲಿ ಜಾತಿ ಪ್ರಮಾಣ ಪತ್ರ ತೋರಿಸಿ 5 ಮೊಟ್ಟೆ ತಿಂದ ವಿದ್ಯಾರ್ಥಿ (ಸುಳ್ಸುದ್ದಿ)

ಪ್ರವೀಣ್ ಕುಮಾರ್ ಮಾವಿನಕಾಡು

  1. ನಕಲಿ ಜಾತಿ ಪ್ರಮಾಣ ಪತ್ರ ತೋರಿಸಿ ವಿದ್ಯಾರ್ಥಿಯೊಬ್ಬ ತನ್ನ ಜಾತಿಗೆ ಸೇರದ ಹೆಚ್ಚುವರಿ ಮೂರು ಮೊಟ್ಟೆಗಳನ್ನು ತಿಂದ ಘಟನೆ ಮೊಟ್ಟೇಚಿಪ್ಪನಹಳ್ಳಿ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಅಪರಾಧಿ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು ಅಪ್ರಾಪ್ತನಾಗಿರುವ ಕಾರಣ ಆತನನ್ನು ರಿಮ್ಯಾಂಡ್ ಹೋಮ್ ನಲ್ಲಿರಿಸಲಾಗಿದೆ.
 
ಘಟನೆಯ ವಿವರ: ಅಂದು ಬುಧವಾರ ಮೊಟ್ಟೇಚಿಪ್ಪನಹಳ್ಳಿ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಎಂದಿನಂತೆಯೇ ಮಕ್ಕಳಿಗೆ ಮೊಟ್ಟೆಯನ್ನು ನೀಡುತ್ತಿದ್ದರು.ಎರಡು ಮೊಟ್ಟೆ ವಿದ್ಯಾರ್ಥಿಗಳ ಕೋಟಾ ಹಿಂದಿನ ದಿನವೇ ಮುಗಿದಿದ್ದರಿಂದಾಗಿ ಆ ಮಕ್ಕಳನ್ನು ಹೊರಗೆ ಕೂರಿಸಿ ಐದು ಮೊಟ್ಟೆಯ ಮಕ್ಕಳನ್ನು ಮಾತ್ರ ಶಾಲಾ ಕೊಠಡಿಯೊಳಗೆ ಕೂರಿಸಿ ಮೊಟ್ಟೆಯನ್ನು ಹಂಚುತ್ತಿದ್ದರು.ಅದೇ ಸಂದರ್ಭದಲ್ಲಿ ಬಂದ ಆರೋಪಿ ವಿದ್ಯಾರ್ಥಿಯು ಮೊಟ್ಟೆ ನೀಡುವಂತೆ ಶಿಕ್ಷಕರೆಡೆಗೆ ಕೈ ಚಾಚಿದ್ದಾನೆ.ಅನುಮಾನಗೊಂಡ ಶಿಕ್ಷಕರು ಆತನನ್ನು ಪ್ರಶ್ನೆ ಮಾಡಿದಾಗ ನಕಲಿ ಜಾತಿ ಪ್ರಮಾಣಪತ್ರವೊಂದನ್ನು ತೋರಿಸಿದ್ದಾನೆ.ಇದನ್ನು ನಂಬಿದ ಮುಖ್ಯೋಪಾಧ್ಯಾಯರು ಆ ಬಾಲಕನಿಗೆ ಐದು ಮೊಟ್ಟೆಗಳನ್ನು ನೀಡಿದ್ದಾರೆ.
 
ಆದರೆ ವಾರಾಂತ್ಯದಲ್ಲಿ ಮೊಟ್ಟೆಗಳ ಅಂತಿಮ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಮೂರು ಮೊಟ್ಟೆ ಕಡಿಮೆಯಾಗಿರುವುದು ಕಂಡುಬಂದಿದೆ.ನಂತರ ಎಲ್ಲಾ ಮಕ್ಕಳಿಗೂ ಮತ್ತೊಮ್ಮೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.ಹಾಗೆ ಎಲ್ಲಾ ಮಕ್ಕಳೂ ಮತ್ತೊಮ್ಮೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಾಗ ಆರೋಪಿ ಬಾಲಕ ನಕಲಿ ಜಾತಿ ಪ್ರಮಾಣಪತ್ರ ತೋರಿಸಿ ಮೂರು ಮೊಟ್ಟೆ ಹೆಚ್ಚುವರಿಯಾಗಿ ತಿಂದಿದ್ದು ಸಾಬೀತಾಗಿದೆ.ಮುಖ್ಯ ಶಿಕ್ಷಕರು ಕೂಡಲೇ ಆ ವಿದ್ಯಾರ್ಥಿಯ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಆ ಮೋಸಗಾರ ವಿದ್ಯಾರ್ಥಿಯನ್ನು ಬಂಧಿಸಿ ರಿಮ್ಯಾಂಡ್ ಹೋಮ್ ಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕಿದ್ದು ಎಲ್ಲಾ ವಿವರಗಳನ್ನೂ ಇಲಾಖೆಯ ಆಯುಕ್ತರಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.ಅಲ್ಲದೇ ಕೇವಲ ಚಿಕ್ಕ ಹುಡುಗನೊಬ್ಬ ತೋರಿಸಿದ ನಕಲಿ ಜಾತಿಪತ್ರವನ್ನು ಗುರುತಿಸಲಾಗದೇ ಶಿಕ್ಷಣ ಇಲಾಖೆಗೆ ಮೂರು ಮೊಟ್ಟೆಗಳ ನಷ್ಟ ಉಂಟುಮಾಡಿದ ಕಾರಣ ನೀಡಿ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಮಾನ್ಯ ಶಿಕ್ಷಣ ಸಚಿವರನ್ನು ಪ್ರಶ್ನಿಸಿದಾಗ ‘ವಿಷಯವನ್ನು ಈಗಾಗಲೇ ನಾನು ವಾಟ್ಸಾಪ್ ಮೂಲಕ ತಿಳಿದುಕೊಂಡಿದ್ದೇನೆ.ಇಂತಹಾ ದುರ್ಬಳಕೆಯನ್ನು ತಡೆಯಲು ಮುಂದಿನ ದಿನಗಳಲ್ಲಿ ಪ್ರತೀ ಜಿಲ್ಲೆಯಲ್ಲೂ ಒಂದೊಂದು ವಿಶೇಷ ತನಿಖಾ ದಳವನ್ನು ಸ್ಥಾಪಿಸಲಾಗುವುದು.ಒಂದು ಜಾತಿಗೆ ಮೀಸಲಿಟ್ಟ ಮೊಟ್ಟೆಯನ್ನು ಇನ್ನೊಂದು ಜಾತಿಯ ಮಕ್ಕಳು ತಿನ್ನುವುದನ್ನು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಸಹಿಸುವುದಿಲ್ಲ’ಎಂದು ಹೇಳಿದರು.
ವಿಷಯ ಕಾಡ್ಗಿಚ್ಚಿನಂತೆ ಎಲ್ಲಾ ಕಡೆ ವೇಗವಾಗಿ ಹರಡುತ್ತಿದ್ದು ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಪ್ರಗತಿಪರ ಸಂಘಟನೆಗಳ ಜೊತೆ ಸೇರಿ ಟೈರಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.ಆ ಬಾಲಕನನ್ನು ನಮ್ಮ ಕೈಗೊಪ್ಪಿಸಿ ಎಂದು ಪಟ್ಟು ಹಿಡಿದಿದ್ದಾರೆ.ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
 
ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಬಾಲಕನ ತಂದೆ ‘ತನ್ನ ಓರಗೆಯವರೆಲ್ಲಾ ಐದು ಮೊಟ್ಟೆ ತಿಂದು ಎಂಜಾಯ್ ಮಾಡುತ್ತಿರುವಾಗ ವಯೋ ಸಹಜ ಆಸೆ ಆಕಾಂಕ್ಷೆಗಳನ್ನು ತಡೆದುಕೊಳ್ಳಲಾಗದೇ ಆತ ಹಾಗೆ ಮಾಡಿರಬಹುದು.ಆದರೆ ಅದಕ್ಕಾಗಿ ಆತ ಬಳಸಿದ ಮಾರ್ಗ ಮಾತ್ರ ನಾಗರೀಕ ಸಮಾಜ ಒಪ್ಪಲು ಸಾಧ್ಯವಿಲ್ಲ.ಇದೊಂದು ಸಾರಿ ನನ್ನ ಮಗನನ್ನು ಕ್ಷಮಿಸಿಬಿಡಿ.ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆ.ಜೊತೆಗೆ ಸಂವಿಧಾನಬದ್ಧ ಜಾತಿ ವ್ಯವಸ್ಥೆಯ ಬಗ್ಗೆಯೂ ಅವನಿಗೆ ತಿಳಿಹೇಳುತ್ತೇವೆ’ ಎಂದು ಹೇಳಿದರು.
 
ಈ ನಡುವೆ ಪ್ರಕರಣಕ್ಕೆ ಇನ್ನೊಂದು ರೋಚಕ ಟ್ವಿಸ್ಟ್ ಸಿಕ್ಕಿದ್ದು ಬಲಗೈ ಗೆ ಐದು ಮೊಟ್ಟೆ ಕೊಡುವುದಾದರೆ ಎಡಗೈಗೆ ಏಳು ಮೊಟ್ಟೆ ಕೊಡಿ ಎಂದು ‘ಮೊಟ್ಟೆಗಾಗಿ ನಾವು’ ಸಂಘಟನೆ ಒತ್ತಾಯಿಸಿದೆ.ಒಂದು ವೇಳೆ ಎಡಗೈ ಗೆ ಏಳು ಮೊಟ್ಟೆ ಕೊಡುವ ಬಗ್ಗೆ ಇನ್ನೊಂದು ತಿಂಗಳ ಒಳಗಾಗಿ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಅದು ಎಚ್ಚರಿಸಿದೆ.
 
ವಿ.ಸೂ: ಇದೊಂದು ಕಾಲ್ಪನಿಕ ಬರಹವಾಗಿದ್ದು ಮಕ್ಕಳಿಗೆ ಜಾತಿಯಾಧಾರಿತ ಮೊಟ್ಟೆ ವಿತರಣೆ ಯೋಜನೆಯ ಬಗ್ಗೆ ವಿಧಾನಸಭೆಯಲ್ಲೇ ಚರ್ಚೆಯಾಗಿದ್ದು ಹಾಗೊಂದು ವೇಳೆ ಮುಂದೆ ಅಂತಹಾ ಯೋಜನೆಗಳು ಅನುಷ್ಠಾನಗೊಂಡರೆ ಏನೆಲ್ಲಾ ಅನಾಹುತಗಳು ಸಂಭವಿಸಬಹುದು ಎನ್ನುವುದನ್ನು ಕಲ್ಪಿಸಿಕೊಂಡು ಬರೆದಿದ್ದಾಗಿರುತ್ತದೆ.
18
ಜೂನ್

ಅಪ್ಪನೆಂಬ ಆಪ್ತ…

– ಗೀತಾ ಹೆಗ್ಡೆ

ಇತಿ ಮಿತಿಯಿಲ್ಲದ ಪ್ರೀತಿಯ ತೇರು ಎಂದರೆ ಹೆತ್ತವರು. ಅಲ್ಲಿ ನಾನು ನನ್ನದೆಂಬ ವಾಂಚೆ ತುಂಬಿ ತುಳುಕುವಷ್ಟು ಮೋಹ. ಈ ಮೋಹದ ಪಾಶಾ ಬಂಧನ ವರ್ಣಿಸಲಸಾಧ್ಯ. ಅಲ್ಲಿ ಸದಾ ನೆನಪಿಸಿಕೊಳ್ಳುವ, ನೆನೆನೆನೆದು ಆಗಾಗ ಪುಳಕಿತಗೊಳ್ಳುವ ಅಪ್ಪನೊಂದಿಗಿನ ದಿನಗಳು ಪ್ರತಿಯೊಬ್ಬರ ಜೀವನದಲ್ಲೂ ಅಮೂಲ್ಯ.

ಅದರಲ್ಲೂ ಹೆಣ್ಣು ಮಕ್ಕಳು ಅಪ್ಪನನ್ನು ಅಪ್ಪಿಕೊಳ್ಳುವುದು ಜಾಸ್ತಿ. ಆಗಾಗ ಬಯ್ಯುವ ಅಮ್ಮನಿಗಿಂತ ಅಪ್ಪನ ಕಂಡರೆ ಹೆಣ್ಣು ಮಕ್ಕಳಿಗೆ ಅಮಿತ ಪ್ರೀತಿ. ಅಪ್ಪನಿಗೂ ಅಷ್ಟೆ, ಮಗಳೂ ಅಂದರೆ ಆಯಿತು. ಅವಳೇನು ಮಾಡಿದರೂ ಚಿಕ್ಕಂದಿನಲ್ಲಿ ವಹಿಸಿಕೊಂಡು ಬರುವುದು ಅಪ್ಪ ಮಾತ್ರ. ಅದಕ್ಕೇ ಏನೋ ಮಗಳು ಏನು ಕೇಳುವುದಿದ್ದರೂ ಅಪ್ಪನ ಕೊರಳಿಗೆ ಹಾರವಾಗಿ ಅಪ್ಪಾ ಅದು ಕೊಡಸ್ತೀಯಾ? ಅಲ್ಲಿ ಕರ್ಕೊಂಡು ಹೋಗ್ತೀಯಾ ಅಂತೆಲ್ಲಾ.. ಅಪ್ಪಾ ಅಂದರೆ ನನ್ನಪ್ಪಾ! ಎಷ್ಟು ಚಂದ ನನ್ನಪ್ಪಾ. ನಂಗೆ ಅಮ್ಮನಿಗಿಂತ ಅಪ್ಪಾ ಅಂದರೇನೆ ಬಲೂ ಇಷ್ಟ. ಈ ಅಮ್ಮ ಯಾವಾಗಲೂ ಬಯ್ತಾಳೆ, ರೇಗುತ್ತಾಳೆ. ಅದು ಕಲಿ ಇದು ಕಲಿ, ಅಲ್ಲಿ ಹೋಗಬೇಡಾ ಇಲ್ಲಿ ಹೋಗಬೇಡಾ, ಸದಾ ಕಾಟ ಕೊಡ್ತಾಳೆ ಹೀಗೆ ಹಲವಾರು ಕಂಪ್ಲೇಂಟು ಕಂಡವರ ಮುಂದೆ ಮಗಳಿನದ್ದು. ಮತ್ತಷ್ಟು ಓದು »

17
ಜೂನ್

ಇಂಗ್ಲೆಂಡಿಗೊಬ್ಬನೇ ಟಾಮಿ ರಾಬಿನ್ಸನ್; ಆದರೆ ಇಲ್ಲಿ?

– ಸಂತೋಷ್ ತಮ್ಮಯ್ಯ

tommyಶತಮಾನಗಳ ಕಾಲ ಸೂರ್ಯ ಮುಳುಗದ ಸಾಮ್ರಾಜ್ಯ ಎಂಬ ಕಿರೀಟ ಧರಿಸಿದ್ದ ಬ್ರಿಟಿಷರಿಗೆ ಇಷ್ಟು ಶೀಘ್ರದಲ್ಲಿ ನಿದ್ರೆಗೆಡುವ ಕಾಲ ಬರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಮೊದಲೆಲ್ಲಾ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳು ಅವರೊಳಗಿನ ಸಂಗತಿ ಎಂದುಕೊಳ್ಳುತ್ತಿದ್ದ ಬ್ರಿಟಿಷರು ತಿಂಗಳೊಳಗಾಗಿ ಮೂರು ದಾಳಿಗಳನ್ನು ಅನುಭವಿಸಿದ್ದಾರೆ. ಹಾಗಾಗಿ ಇದ್ದಕ್ಕಿದ್ದಂತೆ ಭಯೋತ್ಪಾದನೆ ಒಂದು ಜಾಗತಿಕ ಸಮಸ್ಯೆ ಎಂಬ ಹುಯಿಲು ಮತ್ತೆ ಮುನ್ನಲೆಗೆ ಬಂದಿದೆ.

ಬ್ರಿಟಿಷರೇನೋ ದಾಳಿಗಳಿಂದ ಬಹುಬೇಗ ಹೊರಬರಬಹುದು, ದಾಳಿಕೋರರನ್ನು ಎಂಟೇ ನಿಮಿಷದಲ್ಲಿ ಪರಲೋಕಕ್ಕೆ ಕಳುಹಿಸಬಹುದು. ಲಂಡನ್ ಸೇತುವೆ, ವೆಸ್ಟ್ ಮಿನಿಸ್ಟರ್, ಮಾಂಚೆಸ್ಟರ್ ದಾಳಿಗಳು ಭದ್ರತೆ, ಭವಿಷ್ಯದ ಬಗ್ಗೆ ಚರ್ಚೆ ಹುಟ್ಟಿಸಬಹುದು. ಆದರೆ ಬ್ರಿಟಿಷ್ ನೆಲದಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳ ಹಿಂದೆ ಕಾಣದ ಹಲವಾರು ಸಂಗತಿಗಳಿವೆ. ಆ ಎಲ್ಲಾ ಕಾರಣಗಳು ಭಾರತೀಯರಿಗೆ ಅರ್ಥವಾಗದ ಸಂಗತಿಗಳೇನಲ್ಲ. ಏಕೆಂದರೆ ಒಂದಾದ ಮೇಲೊಂದರಂತೆ ದಾಳಿಗಳಾಗುತ್ತಿದ್ದರೂ ಇಂಗ್ಲೆಂಡ್‌ನಲ್ಲಿ ಬುದ್ಧಿಜೀವಿಗಳ ಸಂಖ್ಯೆ ಇಳಿಮುಖವಾಗಿಲ್ಲ. ಸರ್ಕಾರದ ತುಷ್ಟೀಕರಣ ನೀತಿಗಳು ಕಡಿಮೆಯಾಗಿಲ್ಲ. ಅಂದು ಲಂಡನಿಸ್ಥಾನವಾಗಲಿದೆ ಎಂದಾಗಲೂ ಆಳುವವರು ಎಚ್ಚೆತ್ತುಕೊಳ್ಳಲಿಲ್ಲ. ತಾಲಿಬಾನ್ ವಿರುದ್ಧ ಏರಿ ಹೋದರೂ ಯಾಕೋ ಇಂಗ್ಲಿಷರಿಗೆ ಭಯೋತ್ಪಾದನೆಯ ಬೇರೆಲ್ಲಿದೆ ಎಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ. ಅದರ ಪರಿಣಾಮ ಇಂಗ್ಲೆಂಡಿನಾದ್ಯಂತ ವಲಸಿಗರ ಸಂಖ್ಯೆ ಹಲವು ವರ್ಷಗಳಿಂದ ತೀವ್ರವಾಗಿ ಹೆಚ್ಚಿವೆ. ಮುಕ್ತ ಪ್ರಜಾಪ್ರಭುತ್ವ, ತಮ್ಮದು ಸ್ವಾತಂತ್ರ್ಯದ ತವರುಮನೆ ಎನ್ನುವ ಅಹಂ ಇಂಗ್ಲೆಂಡಿಗೇರಿದೆಯೋ ಎನ್ನುವಂತೆ ಭಯೋತ್ಪಾದಕ ರಾಷ್ಟ್ರಗಳ ವಲಸಿಗರು ಹಿಂಡುಹಿಂಡಾಗಿ ಇಂಗ್ಲೆಂಡಿಗೆ ಸಾಗುತ್ತಿದ್ದಾರೆ. ಅದರ ಪರಿಣಾಮ ತಿಂಗಳೊಂದು ಮೂರು ದಾಳಿ.
ಇಂಗ್ಲೆಂಡಿನಲ್ಲಿ ಮುಸಲ್ಮಾನ ವಲಸೆಯ ತೀವ್ರತೆಯೆಷ್ಟಿತ್ತೆಂದರೆ Al-Muhajiroun ಎಂಬ ಸಂಘಟನೆ ಇಂಗ್ಲೆಂಡಿನಲ್ಲಿ ಹುಟ್ಟಿಕೊಂಡಿತು. ಶರಿಯಾ ಅನುಷ್ಠಾನದ ಗುರಿಯಿಟ್ಟುಕೊಂಡು Islamic Council of Britain ೨೦೦೨ರಲ್ಲಿ ಆರಂಭವಾಯಿತು. ಅದೇ ವರ್ಷ Islam4UK ಅಸ್ತಿತ್ವಕ್ಕೆ ಬಂತು. ಹೆಚ್ಚು ಕಡಿಮೆ ಅದೇ ಹೊತ್ತಲ್ಲಿ Need4Khilafah, the Shariah Project and the Islamic Dawah Association ಆರಂಭವಾಯಿತು.
ತಮಾಷೆಯೆಂದರೆ ಇಂಗ್ಲೆಂಡ್ ಗಡಿ ದಾಟಿ ಯಾವುದನ್ನು ನಿರ್ನಾಮ ಮಾಡಬೇಕೆಂದುಕೊಂಡಿತ್ತೋ ಅದೇ ಹೊತ್ತಲ್ಲಿ ತನ್ನ ಕಾಲಬುಡದಲ್ಲಿ ಅದಕ್ಕಿಂತಲೂ ಅಪಾಯಕಾರಿಯಾದವರನ್ನು ಬೆಳೆಯಲು ಬಿಟ್ಟಿತ್ತು. ನೋಡನೋಡುತ್ತಲೇ ಅನಧಿಕೃತ ಮದರಸಗಳೆದ್ದವು. ಪೊಲೀಸರ ಮೇಲೆ ದಾಳಿಗಳಾದವು. ಬಹಿರಂಗವಾಗಿ ಬ್ರಿಟನ್ ಎಂದರೆ ವಲಸಿಗರ ದೇಶ ಎಂದು ಘೋಷಣೆ ಮಾಡಿದರು. ಇಷ್ಟೆಲ್ಲಾ ಆದರೂ ಇಂಗ್ಲಿಷ್ ಬುದ್ಧಿಜೀವಿಗಳು ಮತ್ತು ಆಳುವವರು ಸೆಕ್ಯುಲರಿಸ್ ಮಂತ್ರ ಪಠಿಸುತ್ತಲೇ ಇದ್ದರು. ಭಯೋತ್ಪಾದನೆಯ ವಿರುದ್ಧ ಹೋರಾಡಲು ಶಕ್ತಿಯೊಂದೇ ಸಾಕೆಂಬುದೇನೊ ನಿಜ. ಆದರೆ ಭಯೋತ್ಪಾದನೆಯ ಮೂಲವೆಲ್ಲಿ ಎಂಬ ಅರಿವು ಇಲ್ಲದಿದ್ದರೆ ಬೆನ್ನಲ್ಲಿ ಖಾಲಿ ಬತ್ತಳಿಕೆ ಇಟ್ಟುಕೊಂಡಂತೆ.
ಸದ್ಯದ ಇಂಗ್ಲೆಂಡ್ ಪರಿಸ್ಥಿತಿಯನ್ನು ನೋಡುತ್ತಿದ್ದರೆ ಟಾಮಿ ರಾಬಿನ್‌ಸನ್ ತನ್ನ ಆತ್ಮಕಥೆ The enemy of state ಪುಸ್ತಕದಲ್ಲಿ ಬರೆದುಕೊಂಡ ಸಾಲುಗಳು ನೆನಪಾಗುತ್ತವೆ. ಅಲ್ಲಿನ ಪರಿಸ್ಥಿತಿ ನಮಗಿಂತ ಬೇರೇನಲ್ಲ ಎಂದೂ ಅನಿಸುತ್ತದೆ.
“ನಾನು ಟಾಮಿ ರಾಬಿನ್‌ಸನ್. ಕರೆಯುವವರ ಭಾವಕ್ಕೆ ತಕ್ಕಂತೆ ನನಗೆ ನಾನಾ ಹೆಸರುಗಳು. ನಾನು ಇಂಗ್ಲಿಷ್ ಡಿಫೆನ್ಸ್ ಲೀಗಿನ ಸಂಸ್ಥಾಪಕ ಮತ್ತು ಮುಖಂಡ. ಈಗ ನಿವೃತ್ತ. ನನ್ನ ಕಥೆಯನ್ನು ಎಲ್ಲಿಂದ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಬೀದಿ ಕಾಳಗಗಳಿಂದ ಹೇಳಬೇಕೆ? ಪೊಲೀಸರು ಸೆರೆಹಿಡಿದ ದಿನದಿಂದ ಹೇಳಬೇಕೆ? ನನ್ನ ಮನೆಮಂದಿಯ ಭಯಗ್ರಸ್ಥ ವಾತಾವರಣದಿಂದ ಪ್ರಾರಂಭಿಸಬೇಕೇ? ಅಥವಾ ಹಲವು ತಿಂಗಳುಗಳ ಕಾಲದ ನನ್ನ ಏಕಾಂತ ಸೆರೆವಾಸದಿಂದ ಆರಂಭಿಸಲೇ? ಆದರೆ ನನ್ನ ಆರು ವರ್ಷಗಳ ಬದುಕನ್ನು ಅವಲೋಕನ ಮಡಿದಾಗ ಓರ್ವ ಬ್ರಿಟಿಷ್ ನಾಗರಿಕನಾಗಿ ದೇಶಕ್ಕಾಗಿ ಬದುಕನ್ನು ಸವೆಸಿದ ಸಾರ್ಥಕತೆ ನನ್ನಲ್ಲಿ ಕಾಣುತ್ತದೆ. ನಾನು ಅನುಭವಿಸಿದ ಕಷ್ಟಕೋಟಲೆಗಳು ನನ್ನ ದೇಶವಾಸಿಗಳಿಗಾಗಿ ಎಂದುಕೊಳ್ಳುವಾಗ ನಾನು ಎಲ್ಲವನ್ನೂ ಮರೆಯುತ್ತೇನೆ.
೨೦೧೫ರ ಜುಲೈ೨೩. ನಾನಂದು ೧೮ ತಿಂಗಳ ಜೈಲುವಾಸದಿಂದ ಬಿಡುಗಡೆಯಾಗುವನಿದ್ದೆ. ನಾನು ನನ್ನ ಕುಟುಂಬವನ್ನು ಭೇಟಿಯಾಗಬಹುದಿತ್ತು. ನನಗಾಗಿ ಹೊರಗೆ ಹಲವು ವೇದಿಕೆಗಳು ಕಾಯುತ್ತಿದ್ದವು. ನಾನು ಯುಕೆಯಾದ್ಯಂತ ಪ್ರವಾಸ ಮಾಡಬೇಕೆಂದುಕೊಳ್ಳುತ್ತಿದ್ದೆ. ಆದರೆ ಜುಲೈ ೨೨ಕ್ಕೆ ನನ್ನ ಕೈಗೆ ಮತ್ತೊಮ್ಮೆ ಕೊಳ ತೊಡಸಿದ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಲ್ಯೂಟನ್ ಮತ್ತು ಬೆಡ್‌ಫೋರ್ಡ್‌ಶೈರ್ ಗಲಭೆಗಳಲ್ಲಿ ತಪ್ಪಿತಸ್ಥನೆಂದು ಮತ್ತೆ ಜೈಲಿಗೆ ತಳ್ಳಿದರು. ನಾನು ಮನಸೋ ಇಚ್ಛೆ ಕಿರುಚಿದೆ. ಇವೆಲ್ಲವೂ ದೇಶಕ್ಕಾಗಿ ಮಾಡಿದ್ದೆಂದು ಅರಚಿದೆ. ಅದರೆ ನನ್ನ ದೇಶವಾಸಿಗಳೇ ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಪುನಃ ನನ್ನನ್ನು ಏಕಾಂತವಾಸಕ್ಕೆ ಅಟ್ಟಲಾಯಿತು. ಆಶ್ಚರ್ಯ ಎಂದರೆ ನಾನಿದ್ದ ಸೆಲ್ಲಿನ ಎರಡು ಸೆಲ್ಲಿನಾಚೆ ಒರ್ವ ಭಯಾನಕ ಮುಸಲ್ಮಾನ ಕೊಲೆಗಾರನನ್ನು ಇರಿಸಲಾಗಿತ್ತು. ಎರಡು ಸೆಲ್ಲುಗಳ ನಡುವೆ ಎಷ್ಟೊಂದು ವ್ಯತ್ಯಾಸಗಳಿದ್ದವು? ನಾನು ನನ್ನ ದೇಶಕ್ಕಾಗಿ ಕತ್ತಲಲ್ಲಿ ಕೊಳೆಯುತ್ತಿದ್ದರೆ ಆತ ಇನ್ನೊಬ್ಬರ ದೇಶಕ್ಕೆ ನುಸುಳಿ ತನ್ನ ನಂಬಿಕೆಗಾಗಿ ನನ್ನವರನ್ನು ಕೊಲೆ ಮಾಡುತ್ತಿದ್ದ! ಅಲ್ಲದೆ ಆತ ಜೈಲಲ್ಲೇ ನನ್ನ ಮೇಲೆ ಆಕ್ರಮಣಕ್ಕೆ ಕಾಯುತ್ತಿದ್ದ. ಅಂತೂ ಜುಲೈ ೨೨ ಕಳೆಯಿತು. ೪೮ ಗಂಟೆಗಳ ನನ್ನ ಏಕಾಂತವಾಸದ ಶಿಕ್ಷೆ ಮುಗಿಯಿತು. ಆ ೪೮ ಗಂಟೆಗಳು ನಾನು ಹೊರಗಿದ್ದರೆ ನಾನು ಹೌಸ್ ಆಫ್ ಲಾರ್ಡ್ ಅನ್ನು ಟೀಕೆ ಮಾಡಿ ಜನರನ್ನು ರೊಚ್ಚಿಗೇಳಿಸುತ್ತಿದ್ದೆ ಎಂಬ ಭಯ ಸರ್ಕಾರಕಿತ್ತು ಎಂಬುದು ನನಗೆ ತಿಳಿಯಿತು. ಅದೇ ಹೊತ್ತಿಗೆ ನನ್ನ ದೇಶದ ಇತಿಹಾಸದ ಗುಂಗಲ್ಲಿ ಮಂಕಾಗಿದ್ದ ಕೆಲವರು ಮ್ಯಾಗ್ನಾ ಕಾರ್ಟಾವನ್ನು ಹಾಡಿ ಹೊಗಳುತ್ತಿದರು. ದೇಶದ ಘನತೆ, ಗೌರವ ಮತ್ತು ಭದ್ರ ಭವಿಷ್ಯವನ್ನು ಹಾಡಿ ಹೊಗಳುತ್ತಿದ ಸಮಯದಲ್ಲೇ ನಾನು ಇಂಗ್ಲೆಂಡಿನ ನಾನಾ ಜೈಲುಗಳಲ್ಲಿ ಕುಖ್ಯಾತ ರೈಲು ದರೋಡೆಕೋರರೊಡನೆ ಶಿಕ್ಷೆ ಅನುಭವಿಸುತ್ತಿದ್ದೆ. ನಾನಿಂದು ಹೊರಗೆ ಬಂದಿರಬಹುದು. ಆದರೆ ನನ್ನ ಹೆಗಲ ಮೇಲೆ ಕೈಹಾಕುವ ಕೈಗಳಿಂದ ನಾನು ಹೊರತಾಗಿಲ್ಲವೆಂಬುದೂ ನನಗೆ ತಿಳಿದಿದೆ. ಅದು ಒಂದು ಪ್ರತಿಭಟನೆಯೂ ಆಗಬಹುದು. ನನ್ನ ಒಂದು ಟ್ವಿಟ್ಟೂ ಆಗಬಹುದು. ಈಗ ನಾನು ಇಂಗ್ಲಿಷ್ ಡಿಫೆನ್ಸ್ ಲೀಗಿನಿಂದ ಮುಕ್ತಗೊಂಡಿದ್ದೇನೆ. ಆದರೆ ನನ್ನ ಉದ್ದೇಶದಿಂದ ಮುಕ್ತಗೊಳಿಸಿಕೊಂಡಿಲ್ಲ. ಜೈಲಿನ ಸೆಲ್ಲುಗಳು ನನ್ನನ್ನು ಕಿಂಚಿತ್ತೂ ಬದಲಿಸಿಲ್ಲ. ಏಕೆಂದರೆ ನಾನು ಯಾರನ್ನು ವಿರೋಧಿಸುತ್ತೇನೋ ಅವರೂ ಕಿಂಚಿತ್ ಬದಲಾಗುತ್ತಿಲ್ಲ. ಬಹುಷ ಬದಲಾಗುವುದಿಲ್ಲ. ನನ್ನನ್ನು ಸರ್ಕಾರ ನಡೆಸಿಕೊಂಡ ಬಗೆಗೆ ನಾನು ಒಂದು ದಿನವೂ ಕಣ್ಣೀರು ಹಾಕಿಲ್ಲ. ನನ್ನ ಕಥೆ ನನಗೆಂದೂ ಕರುಣಾಜನಕ ಎನಿಸಿಲ್ಲ. ನನ್ನ ದೇಶಭಕ್ತಿಯ ಬಗ್ಗೆ ನನಗಾರೂ ಸರ್ಟಿಫಿಕೇಟ್ ಕೊಡಬೇಕೆಂದು ನಾನು ಬಯಸಿಲ್ಲ.
ನನ್ನ ಬಗ್ಗೆ ಸಮಾಜದಲ್ಲಿ ಹಲವು ಬಿಂಬಗಳಿವೆ. ಆದರೆ ನಾನು ಯಾರನ್ನು ವಿರೋಧಿಸುತ್ತೇನೋ ಅವರ ಬಣ್ಣದ ಬಗ್ಗೆ ನನಗೆ ಪರಿವೆಯಿಲ್ಲ. ಅವರ ಧರ್ಮದ ಬಗ್ಗೆ ನನಗೆ ಆಸಕ್ತಿಯೇ ಇಲ್ಲ. ಆದರೆ ಅವರ ನಿಷ್ಠೆ ಮತ್ತು ವರ್ತನೆಯ ಬಗ್ಗೆ ನನಗೆ ಆತಂಕವಿದೆ. ಇಷ್ಟಿದ್ದರೂ ಅವರು ನನ್ನ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಆದರೆ ಈ ಟಾಮಿ ರಾಬಿನ್‌ಸನ್ ಎಂಬ ನಾನು ಹೊರಜಗತ್ತಿಗೆ ಪರಿಚಯಿಸಿಕೊಂಡಿದ್ದೇ ೨೦೦೯ರಲ್ಲಿ. ಆದರೆ ನಿಮ್ಮ ನಿಷ್ಠೆ, ನಿಮ್ಮ ನಂಬಿಕೆ, ನಿಮ್ಮ ವರ್ತನೆ ಯಾವತ್ತಿನಿಂದಲೂ ಹಾಗಿದೆಯೆಂಬುದನ್ನು ಯಾಕೆ ಚಿಂತಿಸುತ್ತಿಲ್ಲ? ನನ್ನ ದೇಶದ ಕೆಲವು ಬುದ್ಧಿಜೀವಿಗಳು ನನ್ನನ್ನು ಇಸ್ಲಾಂ ವಿರೋಧಿ ಎನ್ನುತ್ತಾರೆ. ಆದರೆ ನಾನು ನಿಜಕ್ಕೂ ಇಸ್ಲಾಂ ವಿರೋಧಿಯಲ್ಲ. ಹಾಗನ್ನುವವರಿಗೆ ೨೦೦೯ರ ಘಟನೆ ನೆನಪಿದೆಯೇ? ರಾಯಲ್ ಆಂಗ್ಲಿಯನ್ ರೆಜಿಮೆಂಟ್ ಪೆರೇಡ್ ನಡೆಸುತ್ತಿದ್ದಾಗ ಯಾವ ಮುಸಲ್ಮಾನರು ಅದನ್ನು ವಿರೋಧಿಸಿದ್ದರೋ ನಾನು ಅವರ ವಿರೋಧಿ. ಯಾರು ಇಂಗ್ಲಿಷ್ ನೆಲದಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೋ ನಾನು ಅವರ ವಿರೋಧಿ. ಯಾರು ನಮ್ಮ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದಾರೋ ನಾನು ಅವರ ವಿರೋಧಿ. ಯಾರು ಅವರ ನಂಬಿಕೆಯನ್ನು ಹೇರಲು ಪ್ರಯತ್ನಿಸುತ್ತಿದ್ದಾರೋ ನಾನು ಅವರ ವಿರೋಧಿ. ಯಾರು ಮತಕ್ಕಾಗಿ ಮುಗ್ಧರನ್ನು ಕೊಲ್ಲುವರೋ ನಾನು ಅವರ ವಿರೋಧಿ. ಅಂಥವರನ್ನು ವಿರೋಧಿಸುವುದು ಪ್ರತಿಯೊಬ್ಬ ಇಂಗ್ಲಿಷನ ಕರ್ತವ್ಯವಲ್ಲವೇ?”
ಟಾಮಿ ರಾಬಿನ್ ಸನ್ ತನ್ನ ಪುಸ್ತಕದುದ್ದಕ್ಕೂ ಇಂಗ್ಲಿಷರಿಗೆರಗಿದ ಅಪಾಯವನ್ನು ಹೇಳುತ್ತಾ ಹೋದಂತೆ ನಮ್ಮ ದೇಶ ಮತ್ತು ಧರ್ಮಕ್ಕಾಗಿ ಡಜನ್‌ಗಟ್ಟಲೆ ಕೇಸು ಹಾಕಿಸಿಕೊಂಡ ಸಕಲೇಶಪುರದ ರಘು, ಶನಿವಾರಸಂತೆಯ ಉಲ್ಲಾಸ್, ಮಂಗಳೂರಿನ ಶರಣ್, ಬೆಳಗಾವಿಯ ಸ್ವರೂಪ್ ಕಲ್ಕುಂದ್ರಿ, ಬಳ್ಳಾರಿಯ ಸುಭಾಷ್, ಉಡುಪಿಯ ಕೆ.ಆರ್. ಸುನಿಲ್, ಚಿತ್ರದುರ್ಗದ ಪ್ರಭಂಜನ್ ರೆಡ್ಡಿ, ಕೋಲಾರದ ಬಾಬು ನೆನಪಾಗುತ್ತಿದ್ದರು. ಟಾಮಿ ರಾಬಿನ್ಸನ್ನನಿಗೇನೋ ಇಂಗ್ಲಿಷ್ ಜನಗಳ ಬೆಂಬಲವಿತ್ತು. ಇವರೆಲ್ಲರಿಗೆ ಉತ್ಕಟ ದೇಶಭಕ್ತಿಯೊಂದು ಬಿಟ್ಟರೆ ಇನ್ನೇನಿತ್ತು? ಇಂಗ್ಲೆಂಡಿಗೊಬ್ಬನೇ ಟಾಮಿ ರಾಬಿನ್ಸನ್, ರಾಬಿನ್ಸನ್ನನಿಗೆ ಮಾಡಬೇಕಿದ್ದುದೂ ಒಂದೇ ಕಾರ್ಯ. ಆದರೆ ನಮ್ಮಲ್ಲಿ ಎಷ್ಟೊಂದು ಟಾಮಿ ರಾಬಿನ್ಸನ್‌ಗಳು? ಮುಂದಿರುವ ಗುರಿಗಳು ಎಷ್ಟೊಂದು?
15
ಜೂನ್

ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೩ )

ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)

ಭಾಗ – ೧

ಭಾಗ – ೨

ಒಂದು ಹೋಲಿಕೆ

ವಸಾಹತುಶಾಹಿ ಕಾಲದ ಭಾರತೀಯ ಬುದ್ಧಿಜೀವಿಗಳು ಈ ಕಥೆಯನ್ನು ಸಾರಾಸಗಟಾಗಿ ನಂಬಿದ್ದರು. (ಏಕೆ ಎಂಬುದು ಒಂದು ಮುಖ್ಯ ಪ್ರಶ್ನೆಯಾದರೂ, ಈ ಲೇಖನದಲ್ಲಿ ನಾನದನ್ನು ಚರ್ಚೆಗೆತ್ತಿಕೊಳ್ಳುವುದಿಲ್ಲ). ಇದು ಎರಡು ಪರಸ್ಪರ ವಿರುದ್ಧವಾದ ಪ್ರತಿಕ್ರಿಯೆಗಳಿಗೆ ದಾರಿಮಾಡಿತು: ಒಂದೆಡೆ ಕೆಲವು ಜನರು ಹಿಂದುಗಳ ರಿಲಿಜನ್ನಿನ ಪುನರುತ್ಥಾನಕ್ಕಾಗಿ ಪರಿಶ್ರಮಿಸಿದರು. ವೇದ ಉಪನಿಷತ್ತುಗಳಲ್ಲಿರುವ ಶುದ್ಧವಾದ ರಿಲಿಜನ್ನಿಗೆ ಹಿಂದಿರುಗಬೇಕು ಎಂದು ಅವರು ವಾದಿಸಿದರು. ಇನ್ನೊಂದೆಡೆಯಲ್ಲಿ ಹಿಂದೂಯಿಸಂ ಈಗ ಹೇಗಿದೆಯೋ ಅದೇ ಸರಿ ಎಂದು ಗಂಟಾಘೋಷವಾಗಿ ಸಮರ್ಥಿಸುವವರೂ ಇದ್ದರು. ಈ ಎರಡು ತುದಿಗಳ ನಡುವೆ ಹಲವು ವಿವಿಧ ನಿಲುವುಗಳೂ ನಿಧಾನವಾಗಿ ಹರಳುಗಟ್ಟಿದ್ದವು. ಮತ್ತಷ್ಟು ಓದು »

13
ಜೂನ್

ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೨ )

ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)

ಭಾಗ ೧

ಹಿನ್ನೆಲೆ:

ಭಾರತದ ಹಲವು ಪ್ರದೇಶಗಳ ಮೇಲೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಹಿಡಿತವನ್ನು ಬಿಗಿಗೊಳಿಸಿ, ಅದರ ಆಡಳಿತಾಧಿಕಾರಿಗಳು ಆಳುವವರ ಸ್ಥಾನಕ್ಕೆ ಬಂದಾಗ, ಭಾರತೀಯ ಸಂಪ್ರದಾಯಗಳ ಕುರಿತಂತೆ ಒಂದು ವಿಶೇಷ ಹಗೆತನವು ವಸಾಹುತು ಆಡಳಿತ ನೀತಿಯ ಹೆಗ್ಗುರುತಾಯಿತು. ಈ ಹಗೆತನಕ್ಕೆ ಬಹಳ ಪುರಾತನ ಇತಿಹಾಸವಿರುವುದು ನಿಜ. ಹಿಂದೂಗಳ ‘ರಿಲಿಜನ್’ ಆದ ‘ಹಿಂದೂಯಿಸಂ’ನ ಪ್ರತಿ ಅಂಶವೂ ಅವರಿಗೆ ಆಕ್ಷೇಪಾರ್ಹ ಮತ್ತು ಅಸಂಗತವಾಗಿ ಕಂಡಿದ್ದು ಹಳೆಯ ವಿಚಾರ. ಬಾಲ್ಯವಿವಾಹ, ಸತಿ ಪದ್ಧತಿ ಮುಂತಾದ ಅಸಹನೀಯ ಮತ್ತು ಅನೈತಿಕ ಆಚರಣೆಗಳನ್ನು ಅವರು ಭಾರತದಲ್ಲಿ ‘ಕಂಡುಕೊಂಡಿದ್ದರಿಂದ’ ಮಾತ್ರವೇ ಈ ಹಗೆತನವು ಬೆಳೆದದ್ದಲ್ಲ. ಅವರ ಹಗೆತನಕ್ಕೆ ಸಾಕಷ್ಟು ಆಳವಾದ ಬೇರುಗಳಿವೆ: ತಮ್ಮ ರಿಲಿಜನ್ನಿನ ಕನ್ನಡಕದಿಂದ ನೋಡಿದಾಗ, ಇಂತಹ ವಿಕೃತ ಆಚರಣೆಗಳು ಸುಳ್ಳು ರಿಲಿಜನ್ಗಳ ಅವಿಭಾಜ್ಯ ಅಂಗಗಳು ಎಂದು ಅವರಿಗೆ ಅನಿಸಿತ್ತು. ‘ಹಿಂದೂಯಿಸಂ’ ಎನ್ನುವುದು ಸುಳ್ಳು ಮತ್ತು ಅವನತಿ ಹೊಂದಿದ ರಿಲಿಜನ್ನಾದ್ದರಿಂದ, ಇಂತಹ ಅರ್ಥಹೀನ ವಿಕೃತ ಆಚರಣೆಗಳು ಕೇವಲ ಆಕಸ್ಮಿಕಗಳಲ್ಲ, ಬದಲಿಗೆ ಅದರ ಅಗತ್ಯ ಲಕ್ಷಣಗಳು ಎಂದು ಅವರು ನಂಬಿದ್ದರು. ಮತ್ತಷ್ಟು ಓದು »