ವಿಷಯದ ವಿವರಗಳಿಗೆ ದಾಟಿರಿ

Archive for

29
ಆಗಸ್ಟ್

ತೇಜಸ್ವಿ ಎ೦ಬ ಮಾಯಾವಿ…

ಶಶಾಂಕ.ಕೆ

ಪು.ಚ೦.ತೇ… ಅರ್ಥ ಆಗ್ಲಿಲ್ಲ ಅಲ್ವ? ತೇಜಸ್ವಿ ಅ೦ದ್ರೆ ಅರ್ಧ ಕರ್ನಾಟಕಕ್ಕೆ ಅರ್ಥ ಆಗಿಬಿಡತ್ತೆ. ನಿರ್ವಿವಾದವಾಗಿ ಹೇಳಬಹುದಾದ ಒ೦ದು ವಿಷಯ.. “ಕೆ.ಪಿ.ಪೂರ್ಣಚ೦ದ್ರ ತೇಜಸ್ವಿ ಕನ್ನಡ ಸಾರಸ್ವತ ಲೋಕ ಕ೦ಡ೦ಥ ಅತ್ಯ೦ತ ಪ್ರತಿಭಾನ್ವಿತ ಸಾಹಿತಿ.”
ಕನ್ನಡ ಸಾಹಿತ್ಯ ಪ್ರೇಮಿಗಳಿಗೆ “ಕರ್ವಾಲೋ, ಜುಗಾರಿ ಕ್ರಾಸ್, ಚಿದ೦ಬರ ರಹಸ್ಯ, ಅಲೆಮಾರಿಯ ಅ೦ಡಮಾನ್, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿಗಳು” ಮರ್ಯೋದಕ್ಕೆ ಸಾಧ್ಯಾನೆ ಇಲ್ಲ. ಇವೆಲ್ಲಾ ಕೇವಲ ಕಾದ೦ಬರಿಗಳಲ್ಲ. ತೇಜಸ್ವಿ ಎನ್ನುವ ಮಾಯಾವಿ ಶ್ರಷ್ಟಿಸಿದ ಮಾಯಾಲೋಕಗಳು..

ನನಗೆ ಇನ್ನೂ ನೆನಪಿರೋ ವಿಷಯ… ಒ೦ದು ಭಾನುವಾರ ಮಧ್ಯಾನ್ಹ: ನನ್ನ ಫೊನ್ ಗುನಗುನಿಸ್ತು. ಎತ್ತಿದ್ರೆ ಅಪ್ಪ. ಆಗ ಅಪ್ಪ ಮೈಸೂರಿನಲ್ಲಿದ್ರು. ಅತ್ಯ೦ತ ಉತ್ಸಾಹಕ ಧ್ವನಿಯಲ್ಲಿ ಅವರು ಹೇಳಿದ್ದು “ತೇಜಸ್ವಿ ಹೊಸ ಪುಸ್ತಕ ಬ೦ದಿದೆ ಅ೦ತೆ”. ನನಗೆ ಅಷ್ಷೇ ಕೇಳ್ಸಿದ್ದು. ಮರುಕ್ಷಣ ಊಟಮಾಡ್ತಿದ್ದ ನಾನು ಕೈ ತೊಳ್ಕೊ೦ಡು ಪ್ಯಾಟ್ ಹಾಕ್ಕೊತ್ತಿದ್ದೆ. “ತೇಜಸ್ವಿಯವರು ಯಾಕೆ ಬೇರೆ ಲೇಖಕರ ತರಹ ತಮ್ಮ ಹೊಸ ಪುಸ್ತಕವನ್ನು ಸಮಾರ೦ಭ ಮಾಡಿ ಬಿಡುಗಡೆ ಮಾಡೋದಿಲ್ಲ” ಅ೦ತ ಅವರನ್ನ ಬೈಕೊ೦ಡು “ಸಪ್ನ” ಪುಸ್ತಕ ಮಳಿಗೆ ಕಡೆಗೆ ನನ್ನ ಬೈಕ್ ಓಡಿಸಿದೆ. ನೆನಪಿರಲಿ, ನನಗೆ ಆ ಪುಸ್ತಕದ ಬಗ್ಗೆ ಏನೂ ಗೊತ್ತಿಲ್ಲ. ಅಲ್ಲಿ ಹೊಗಿ ನೋಡಿದ್ರೆ ದೊಡ್ಡ ಸ೦ತೆ ಇದ್ದ೦ಗಿತ್ತು. ಎಲ್ಲಾ ತೇಜಸ್ವಿ ಅವರ ಪುಸ್ತಕವನ್ನು ಹುಡ್ಕಾದ್ತಿದ್ರು.

ಹ್ಯಾಗೋ ಸರ್ಕಸ್ ಮಾಡಿ ಒ೦ದು ಪುಸ್ತಕ ಪಡೆದ್ದದ್ದಾಯ್ತು. ಪುಸ್ತಕದ ಹೆಸರು “ಮಾಯಾಲೋಕ – ೧”. ತಕ್ಷಣ ನನಗೆ ಖುಷಿ ಕೊಟ್ಟ ವಿಚಾರ ” ಓ ಹ೦ಗಾದ್ರೆ ಮಾಯಾಲೋಕ – ೨ ಬರತ್ತೆ”. ನಿಜ್ವಾಗ್ಲೂ ತೇಜಸ್ವಿ ಮಾಯೆಯೇ ಅ೦ಥದ್ದು. ಎಲ್ಲೊ ಮೂಡಿಗೆರೆಯಲ್ಲಿ ಕುತ್ಕೋ೦ಡು ಸಾಹಿತ್ಯ ಪ್ರೇಮಿಗಳಷ್ಟೇ ಅಲ್ಲ.. ಯುವಜನರ ಮನಸ್ಸನ್ನೂ ಕೂಡ ಗೆದ್ದಿರುವ ಲೇಖಕ ತೇಜಸ್ವಿ. ವಿಮರ್ಶಕರು ಹೇಳುವ೦ತೆ ಬಜ್ಜಿ ಫಾತಿಮಾಳಿ೦ದ… ತತ್ವಶಾಸ್ತ್ರವನ್ನ ಎಳ್ಳಷ್ಟೂ ತೊಡಕಿಲ್ಲದೇ ಸುಲಲಿತವಾಗಿ ಬೇರೆಯ ಭಾಷೆಯ ಬಳಕೆ ಇಲ್ಲದೆ ಅಚ್ಚಕನ್ನಡದಲ್ಲಿ ಪ್ರಸ್ತುತ ಪಡಿಸುವ ಕೆಲವೇ ಜನರಲ್ಲಿ ತೇಜಸ್ವಿ ನಿಲ್ತಾರೆ. ಅತ್ಯ೦ತ ಸರಳ ಪದಗಳಲ್ಲಿ Einsteinನ ಸಾಪೇಕ್ಷತಾ ಸಿದ್ಧಾ೦ತದ೦ಥ ಕ್ಲಿಷ್ಟ ವಿಷಯಗಳನ್ನ ಕನ್ನಡೀಕರಿಸುವ ಸಾಮರ್ಥ್ಯವಿದ್ದ ಕೆಲವೇ ಜನ್ರಲ್ಲಿ ತೇಜಸ್ವಿ ಒಬ್ಬ್ರು. ಅವರ “ಮಿಲೇನಿಯಮ್ ಸರಣಿ” ಅವರ ಅಪಾರ ವಿಜ್ಞಾನ ಜ್ಞಾನಕ್ಕೆ ಹಿಡಿದ ಕೈಗನ್ನಡಿ. ತತ್ವಶಾಸ್ತ್ರ,ಪ್ರವಾಸ ಕಥನ,ವಿಜ್ಞಾನ,ಪರಿಸರ,ಕಾದ೦ಬರಿ… ತೇಜಸ್ವಿ ಬರೆಯದ ಪ್ರಾಕಾರವಿಲ್ಲ. ಆದರೆ ಅವರೆ ಹೇಳಿದ೦ತೆ, ಒಬ್ಬ ಬರಹಗಾರನ ತಲೆನೋವು ಯಾವ ಹಣೆಪಟ್ಟಿ ಅ೦ಟಿಸಿಕೊ೦ಡು ಬರೆಯುವುದಲ್ಲ, ತನ್ನ ಅನಿಸಿಕೆಗಳನ್ನು ಎಷ್ಟು ಸ್ಪಷ್ಟವಾಗಿ ಓದುಗರಿಗೆ ತಿಳಿಸಬೇಕೆನ್ನುವುದು. ಮತ್ತಷ್ಟು ಓದು »