ಭ್ರಷ್ಟಾಚಾರ ಎಂದರೆ ಅನುಕೂಲ ಸಿಂಧು
– ಪವನ್ ಪರುಪತ್ತೆದಾರ
ನನಗೊಬ್ಬ ಸ್ನೇಹಿತ ಇದ್ದಾನೆ ಪ್ರವೀಣ್ ಅಂತ, ನನ್ನ ಜೊತೆ ಓದಿಲ್ಲವಾದರೂ ನನ್ನ ಸಹಪಾಠಿ ಅವನು, ಒಂದೇ ತರಗತಿ ಆದರೆ ಬೇರೆ ಶಾಲೆ. ಅವನ ಕೆಲಸ ತಾಲ್ಲೂಕು ಕಚೇರಿಯಲ್ಲಿ. ಸರ್ಕಾರದಿಂದ ಕೊಟ್ಟ ಕೆಲಸ ಅಲ್ಲ, ಅವನೇ ಹುಡುಕಿ ಕೊಂಡಿರುವ ವೃತ್ತಿ. ನಿಜ ಹೇಳಬೇಕೆಂದರೆ ನಮ್ಮೂರಿನ ತಾಲ್ಲೂಕು ಕಚೇರಿಯೋಳಗಿರುವರಿಗಿಂತ ಇವನು ಹೆಚ್ಚು ಕೆಲಸ ಮಾಡುತ್ತಾನೆ. ಪಹಣಿ, registration, ಖಾತೆ ಬದಲಾವಣೆ, encumberance ಸರ್ಟಿಫಿಕೇಟ್, survey sketch ಕಾಪಿ, ನಿಮಗೇನು ಬೇಕು?? ತಾಲ್ಲೂಕು ಕಚೇರಿಯ ಗೇಟ್ ನ ಪ್ಯೂನ್ ಇಂದ ಹಿಡಿದು ತಹಶೀಲ್ದಾರ್ ತನಕ, ಏನು ಕೆಲಸ ಬೇಕಾದರುಮಾಡಿಕೊಡುತ್ತಾನೆ(ಮಾಡಿಸಿಕೊಡುತ್ತಾನೆ).
ಇತ್ತೀಚಿಗೆ ನನಗೆ ಬಹಳ ಜರೂರಾಗಿ ನಮ್ಮ ಜಮೀನಿನ ಪಹಣಿ ಬೇಕಾಗಿತ್ತು. ನಮ್ಮ ಊರಿನ ಪಹಣಿ ಕೇಂದ್ರ ಬಹಳ ದಿನಗಳಿಂದ ದುರಸ್ಥಿಯಲ್ಲಿತ್ತು. ಆಗಷ್ಟೇ ಕೊಡಲು ಶುರು ಮಾಡಿದ್ದರು. ಅದ್ದರಿಂದ ತಾಲ್ಲೂಕು ಕಚೇರಿ ಬಳಿ ಹೋಗಿ ಸಾಲು ನೋಡಿದೊಡನೆ ಭಯವಾಯ್ತು. ಅದರಲ್ಲೂ ನಮ್ಮ ಸರ್ಕಾರೀ ಕಛೇರಿಯೋಳಗಿನ ಗಣಕ ಯಂತ್ರಗಳು ಯಾವಾಗ ಕೆಡುತ್ತವೋ ಗೊತ್ತಿಲ್ಲ. ಇವತ್ತು ಕೆಟ್ಟರೆ ಇನ್ನು ರಿಪೇರಿ ಆಗುವುದು ಯಾವಾಗಲೋ??? ಅಲ್ಲಿವರೆಗೂ ನನಗೂ ಕಾಯುವ ಅವಕಾಶವಿರಲಿಲ್ಲ. ಮತ್ತಷ್ಟು ಓದು 
ಕಲಾವಿದರು ಕಸಿದುಕೊಳ್ಳುತ್ತಿರುವ ಕನ್ನಡ ಗ್ರಾಹಕನ ಸ್ವಾತಂತ್ರ್ಯ.!
– ಮಹೇಶ್ ರುದ್ರಗೌಡರ್
ಜೀ ಟಿವಿಯಲ್ಲಿ ಜಾನ್ಸಿ ರಾಣಿ ಅನ್ನೊ ಹಿಂದಿ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ರು ಅಂತ ನಮ್ಮ ಕಿರುತೆರೆ ಕಲಾವಿದರು ಆ ವಾಹಿನಿಯ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಕಲಾವಿದರ ಪ್ರಕಾರ ಇದರಿಂದ ಕಿರುತೆರೆಯನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬರುತ್ತವಂತೆ. ಇದರ ಜೊತೆಗೆ ಜೀ ಟಿವಿಯ ಈ ನಡೆ ಕನ್ನಡ ವಿರೋದಿಯಂತೆ. ಇವರ ವಾದವನ್ನು ಮತ್ತು ಕನ್ನಡತನವನ್ನು ಸ್ವಲ್ಪ ಆಳವಾಗಿ ನೋಡಿ ಬರೋಣ ಬನ್ನಿ.
ಹುರುಳಿಲ್ಲದ ವಾದ.!
ಈ ದಾರಾವಾಹಿ ಈಗಾಗಾಲೇ ತೆಲುಗು, ತಮಿಳು ಬಾಶೆಗೆ ಡಬ್ ಆಗಿ ಅಲ್ಲಿ ಪ್ರಸಾರವಾಗುತ್ತಿದೆ. ಹಾಗಾದರೆ ಆಂದ್ರ ತಮಿಳುನಾಡಿನಲ್ಲಿ ಕಲಾವಿದರೇ ಇಲ್ಲವೇ.? ಅಲ್ಲಿಯೂ ಕಲಾವಿದರಿದ್ದಾರೆ, ಅವರಲ್ಲಿಯೂ ಅನೇಕರಿಗೆ ಕಿರುತೆರೆಯಿಂದಲೇ ಹೊಟ್ಟೆ ತುಂಬುತ್ತದೆ. ಅಲ್ಲಿ ಅವರಿಗೆ ಇಲ್ಲದ ಸಮಸ್ಯೆ ದಿಡೀರನೇ ಕರ್ನಾಟಕಕ್ಕೆ ಬಂದ ಕೂಡಲೇ ಹೇಗೆ ಹುಟ್ಟುತ್ತದೆ. ಇದಕ್ಕೆ ಯಾರು ಕಾರಣ. ಯಾಕೆ ಈ ಮನಸ್ಥಿತಿ.! ಇದೇ ಸಂದರ್ಬದಲ್ಲಿ ಒಬ್ಬ ಕಲಾವಿದರು ಹೇಳಿದ್ರು, ಒಂದು ದಾರಾವಾಹಿ ಕನ್ನಡಕ್ಕೆ ಡಬ್ ಮಾಡಲು ಬಿಟ್ಟರೆ, ಅದರ ಜೊತೆಗೆ ನೂರಾರು ದಾರಾವಾಹಿಗಳು ಬಂದು ನಿಲ್ಲುತ್ತವೆ ಅಂತ.! ಇದು ಯಾವ ಮನಸ್ಥಿತಿಯನ್ನು ತೋರಿಸುತ್ತದೆ. ಸ್ಪರ್ದೆ ಎದುರಿಸುವ ಹಿಂಜರಿಕೆಯನ್ನು ತೋರಿಸುತ್ತದೆ ಅಲ್ಲವೇ.! ಸ್ಪರ್ದೆ ಎಂದ ತಕ್ಷಣ ಬೀದಿಗೆ ಬರುವ ಮಾತು ಇತರ ಬಾಶೆಯ ಕಲಾವಿದರ ಬಾಯಲ್ಲಿ ಬರದೇ ಬರೀ ನಮ್ಮ ಕಲಾವಿದರ ಬಾಯಲ್ಲಿ ಮಾತ್ರ ಏಕೆ ಬರುತ್ತದೆ.? ಒಂದು ಹಿಂದಿ ಬಾಶೆಯಲ್ಲಿರುವ ದಾರಾವಾಹಿಯನ್ನು ಕನ್ನಡ ಚಾನಲ್ಲಿನಲ್ಲಿ ಕನ್ನಡದಲ್ಲಿ ತೋರಿಸಿದರೇ ಅದು ಕನ್ನಡ ವಿರೋದಿ ಎನ್ನುವ ಇವರ ಕನ್ನಡತನಕ್ಕೆ ಏನನ್ನಬೇಕು. ಡಬ್ ಮಾಡದೇನೇ ಹಿಂದಿಯಲ್ಲೇ ತೋರಿಸಿದರೆ ಅದು ಕನ್ನಡಪರವಾಗುವುದೋ.! ಮತ್ತಷ್ಟು ಓದು 
`ಆವರಣ’ ಹಿಂದಿಗೆ
-ಕಾಲಂ ೯
ಕನ್ನಡದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿದ್ದ ಎಸ್. ಎಲ್. ಭೈರಪ್ಪನವರ ‘ಆವರಣ’ ಹಿಂದಿ ಜಗತ್ತನ್ನೂ ಪ್ರವೇಶಿಸಿದೆ. ಈ ಹಿಂದೆಯೇ ತಮಿಳು, ಮರಾಠಿ, ಸಂಕ್ಸಿತಕ್ಕೆ ಆವರಣ ಹೋದ ಸುದ್ದಿ ಇತ್ತು.
ಮುಸ್ಲಿಂ ನವಾಬರ ‘ಜನಾನ’ದ ವರೆಗೆ ಕಥೆ ಪ್ರವೇಶಿಸಿದ್ದು ಒಂದು ಕಡೆಯಾದರೆ ಮತ್ತೊಂದೆಡೆ ಬುದ್ಧಿಜೀವಿಗಳ ಹರಕು-ಹುಳುಕನ್ನು ಕಾದಂಬರಿ ಹರಾಜು ಹಾಕಿ ವಿವಾದಕ್ಕೆ ಕಾರಣವಾಗಿತ್ತು. ಒಂದೇ ವರ್ಶದಲ್ಲಿ 20ಕ್ಕೂ ಹೆಚ್ಚು ಮುದ್ರಣಗಳಿಗೂ ಹೋಗಿತ್ತು.
ಮೂಲಕಥೆ ಉತ್ತರಭಾರತದ ಹಿಂದಿ ಜಗತ್ತಿನದೇ. ಇದೀಗ ಕಾದಂಬರಿ ಹಿಂದಿ ಜಗತ್ತನ್ನು ಪ್ರವೇಶಿಸಿದೆ. ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿರುವ ಡಾ| ಪ್ರಧಾನ ಗುರುದತ್ ಹಿಂದಿಗೆ ಅನುವಾದಿಸಿದ್ದಾರೆ.
ಇಂಡಿಯಾ ಟುಡೇ ಹಿಂದಿ ಅವತರಣಿಕೆಯ ಈ ವಾರದ ಸಂಚಿಕೆ ಅರ್ಧ ಪುಟದ ವಿಮರ್ಶೆ ಪ್ರಕಟಿಸಿದೆ. ವಿಮರ್ಶಕ ಶಶಿಭೂಷಣ ದ್ವಿವೇದಿಗೆ ಪ್ರಧಾನರ ಅನುವಾದ ಸಮಧಾನ ತಂದಿಲ್ಲ.
ಇದೇ ಅಗಸ್ಟ್ 16ರಂದು ಕೇರಳದ ಕೊಚ್ಚಿನ್ ನಲ್ಲಿ ಆವರಣದ ಸಂಸ್ಕೃತ ಆವೃತ್ತಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ‘ಅತ್ಯುತ್ತಮ ಅನುವಾದ’ ಪುರಸ್ಕಾರ ಸಿಗಲಿದೆ ಎಂದು ಗೊತ್ತಾಗಿದೆ.
**********
ಜಾತಿ ಸೂಚಕ ಹೆಸರಿಗೆ ನಿರ್ಬಂಧ, ಹಿಮಾಚಲ ಪೊಲೀಸರ ಮಾದರಿ ನೀತಿ
-ರಾಕೇಶ್ ಎನ್ ಎಸ್
ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆ ಅತ್ಯುತ್ತಮ ನಿರ್ಧಾರವೊಂದನ್ನು ಕೈಗೊಂಡಿದೆ. ಅದೇನೆಂದರೆ ತನ್ನ ಪೊಲೀಸರ ಪೂರ್ಣ ಹೆಸರಿನ ಜೊತೆ ಸಾಮಾನ್ಯವಾಗಿ ಒಂದು ಭಾಗವಾಗಿರುವ ಜಾತಿ ಸೂಚಕ ಹೆಸರನ್ನು ಕಿತ್ತು ಹಾಕುವ ವಿಶಿಷ್ಟ ಯೋಜನೆಯನ್ನು ಅದು ಹಾಕಿಕೊಂಡಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ನ ಜೂನ್ ೨೪ರ ನವದೆಹಲಿ ಆವೃತ್ತಿಯ ಮುಖಪುಟದಲ್ಲಿನ ವರದಿಯೊಂದು ಹೇಳುತ್ತಿತ್ತು.

ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ…!
– ರಾಕೇಶ್ ಶೆಟ್ಟಿ
ಇವತ್ತು ೬೫ನೇ ಸ್ವಾತಂತ್ರ್ಯ ಸಂಭ್ರಮ,ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ ಭಾಷಣ ಮಾಡಲಿದ್ದಾರೆ ನಮ್ಮ ಪ್ರಾಮಾಣಿಕ ಪ್ರಧಾನಿ.ಮತ್ತೆ ನಾಳೆ ಇದೇ ಪ್ರಾಮಾಣಿಕ ಪ್ರಧಾನಿಯ
ಸರ್ಕಾರದ ಅನೈತಿಕತೆಯ ವಿರುದ್ಧ ಅಣ್ಣಾ ಹಜ಼ಾರೆ ಮತ್ತೆ ಉಪವಾಸ ಕೂರುತಿದ್ದಾರೆ.ಅಣ್ಣಾ ಇದನ್ನ ಎರಡನೇ ಸ್ವಾತಂತ್ರ್ಯ ಹೋರಾಟ ಅನ್ನುತಿದ್ದಾರೆ.ಆದರೆ ಮೊದಲ ಸ್ವಾತಂತ್ರ್ಯ ಹೋರಾಟದ ಆಳ-ಅಗಲಗಳನ್ನ ಸರಿಯಾಗಿ ತಿಳಿಯಲಾಗದೇಯೆ ಶಾಲೆ-ಕಾಲೇಜು ಪಾಸಾಗಿ ಬಂದ ನಮ್ಮಲ್ಲಿ ಅದಿನ್ನೆಷ್ಟು ಜನಕ್ಕೆ ಈ ಎರಡನೇ ಹೋರಾಟ ಕಿಚ್ಚು ಹಚ್ಚಬಹುದು,ಅದನ್ನ ಕಾಲವೇ ಉತ್ತರಿಸಲಿದೆ.
ಅಣ್ಣಾ ಉಪವಾಸ ಹೋರಾಟಕ್ಕೆ ಜಯವಾಗಲಿ ಅಂತ ಹಾರೈಸುತ್ತ,ಅಣ್ಣಾ ಉಪವಾಸ ಸತ್ಯಾಗ್ರಹಕ್ಕೆ ಆರಂಭದಲ್ಲೆ ಕಲ್ಲು ಹಾಕಿ ತಲೆಕೆಟ್ಟವರಂತೆ ಮಾತನಾಡುತ್ತಿರುವ ಕಾಂಗ್ರೆಸ್ಸಿನ ಮಂದಿಗೂ ಮತ್ತು ಕೇಂದ್ರ ಗೃಹ ಸಚಿವರಿಗೂ ಮತ್ತು ಕನಿಷ್ಠ ದೆಹಲಿ ಪೋಲಿಸ್ ಪರ್ಮಿಷನ್ ಸಹ ಕೊಡಿಸಲಾಗದ ಅಸಾಹಯಕ ಆದರೆ At the same time ಪ್ರಾಮಾಣಿಕ ಪ್ರಧಾನಿಯ ಶೋಚನೀಯ ಸ್ಥಿತಿಗೆ ಕಂಬನಿ ಮಿಡಿಯುತ್ತ, ಉಪವಾಸ ಸತ್ಯಾಗ್ರಹದಂತ ಹೋರಾಟದ ಅಸ್ತ್ರ ಹಿಡಿದು ನಿಲ್ಲುವವರ ಮನಸ್ಥಿತಿಯ ಕುರಿತಾಗಿ ಮಹಮ್ಮದ್ ಅಲಿ ಜಿನ್ನಾ ಹೇಳಿರುವ ಮಾತುಗಳು ನೆನಪಿಸಿಕೊಳ್ಳುತಿದ್ದೇನೆ.
“ಯಾವ ಮನುಷ್ಯ ಉಪವಾಸ ಸತ್ಯಾಗ್ರಹಕ್ಕೆ ಇಳಿಯುತ್ತಾನೋ ಅಂತವನು ಅವನ ಮನಸಿನ ಮಾತಿನಂತೆ ನಡೆಯುತ್ತಾನೆ ಮತ್ತು ಅವನಿಗೆ ಅವನೇನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಅರಿವಿರುತ್ತದೆ.ಅವರನ್ನು ಹಾದಿ ತಪ್ಪಿದವರು ಅನ್ನುವ ಮೊದಲು ಅವರನ್ನು ಹಾದಿ ತಪ್ಪಿಸಿರುವುದು ಈ ವ್ಯವಸ್ತೆ ಅನ್ನುವುದನ್ನ ಮರೆಯಬಾರದು,ಮತ್ತು ಈ ವ್ಯವಸ್ತೆಯ ವಿರುದ್ಧ ಯುವಕರು ಸಿಡಿದಿದ್ದಾರೆ” . ಅವರು ಹಾಗೇ ಹೇಳಿದ್ದು ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಸಂಗಡಿಗರು ಬ್ರಿಟಿಶ್ ಕೈದಿಗಳಂತೆ ಭಾರತೀಯ ಕೈದಿಗಳಿಗೂ ಜೈಲಿನಲ್ಲಿ ಸಮಾನ ಹಕ್ಕು ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟವನ್ನ ಬಹಿರಂಗವಾಗಿ ಬೆಂಬಲಿಸಿ.ಆಗಲೂ ಸಹ ಕಾಂಗ್ರೆಸ್ಸ್ ಭಗತ್ ಸಿಂಗ್ ಅವರ ಉಪವಾಸದ ಹೋರಾಟದ ಬಗ್ಗೆ ಈಗ ಅಣ್ಣಾ ಅವರ ಹೋರಾಟದ ವಿರುದ್ಧ ಇರುವಂತೆಯೆ ಇತ್ತು. ಅದಿರಲಿ, ಈ ಹೋರಾಟ ನಡೆದಿದ್ದು ಬರೋಬ್ಬರಿ ೬೩ ದಿನಗಳ ಕಾಲ! ಕಡೆಗೂ ಭಗತ್ ಸಿಂಗ್ ಮತ್ತವರ ಗೆಳೆಯರ ಎದುರು ಬ್ರಿಟಿಷ್ ಸರ್ಕಾರ ಮಂಡಿಯೂರಲೇ ಬೇಕಾಯಿತು,ಆದರೆ ಅಷ್ಟರೊಳಗಾಗಲೇ ನಾವು ’ಜತೀನ್ ದಾ’ ಅವರನ್ನ ಕಳೆದುಕೊಂಡಾಗಿತ್ತು 😦
ಸತ್ಯೇಂದ್ರನಾಥ್ ಬೋಸ್ – Another Forgotten Hero…
– ಭೀಮ ಸೇನ್ ಪುರೋಹಿತ್
ನಮ್ಮ ದೇಶದ ಸ್ವಾತಂತ್ರ್ಯಹೋರಾಟಕ್ಕೆ ಅತಿಹೆಚ್ಚು ಹಾಗು ಪ್ರಖರ ಕೊಡುಗೆಗಳನ್ನು ನೀಡಿದ ಯಶಸ್ಸು ‘ಪಶ್ಚಿಮ ಬಂಗಾಳ’ ರಾಜ್ಯಕ್ಕೆ ಸಲ್ಲುತ್ತದೆ. ಆ ಬಂಗಾಳದ ಮತ್ತೊಂದು ಹುಲಿಯೇ “ಸತ್ಯೇಂದ್ರನಾಥ್ ಬೋಸ್”. ಇವನ ಇಡೀ ಕುಟುಂಬವೇ ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿತ್ತು. ಅವನ ತಂದೆ ‘ರಾಜನಾರಾಯಣ ಬೋಸ್’, ಸಹೋದರರಾದ ‘ಜ್ಞಾನೇಂದ್ರನಾಥ್ ಬೋಸ್’,’ಭೂಪೆಂದ್ರನಾಥ್ ಬೋಸ್’,ಎಲ್ಲರೂ ಸ್ವಾತಂತ್ರ್ಯ ಹೋರಾಟಗಾರರೆ.. ಮಿಡ್ನಾಪುರ್ ಜಿಲ್ಲೆಯಲ್ಲಿ ಜನಿಸಿದ ಸತ್ಯೇನ್, ಓದಿನಲ್ಲಿ ಜಾಣ. ಬಿ.ಎ ತನಕ ಓದಿದರೂ, ಮುಂದೆ ಓದಲಾಗಲಿಲ್ಲ..ಇನ್ನೊಂದು ವಿಶೇಷ ಅಂದ್ರೆ, ಈ ಸತ್ಯೇಂದ್ರನಾಥ್, ಶ್ರೀ ಅರವಿಂದ್ ಘೋಶರಿಗೆ ಸಂಬಂಧಿ…
“ಅಲಿಪುರ ಬಾಂಬ್ ಪ್ರಕರಣ” ಮತ್ತು “ಮಾಣಿಕ್ ತೊಲಾ ಗಾರ್ಡನ್ ಬಾಂಬ್ ಪ್ರಕರಣ”, ಈ ಎರಡು ಪ್ರಕರಣಗಳೂ, ಸ್ವಾತಂತ್ರ್ಯಹೋರಾಟದ ಸಮಯದಲ್ಲಿ, ಬಂಗಾಳ ಪ್ರಾಂತದಲ್ಲಿ ನಡೆದ ಬಹುದೊಡ್ಡ ಬ್ರಿಟಿಶ್ ವಿರೋಧಿ ಕಾರ್ಯಗಳು.. ಇವೆರಡರ ಹಿಂದೆ ಇದ್ದಿದ್ದು ಬಂಗಾಳದ “ಅನುಶೀಲನ ಸಮಿತಿ” ಹಾಗು “ಯುಗಾಂತರ ಸಮಿತಿ”ಯ ಕ್ರಾಂತಿಕಾರಿಗಳು, ಹಾಗು ಈ ಕ್ರಾಂತಿಕಾರಿಗಳನ್ನ ಪ್ರೆರೆಪಿಸಿದವ್ರು, ಮಹಾನ್ ರಾಷ್ಟ್ರವಾದಿ ( ನಾನಂತೂ ಅವರನ್ನ ‘ಮಹರ್ಷಿ’ ಅಂತಾನೆ ಕರೆಯೋದು ) ಶ್ರೀ ಅರವಿಂದ್ ಘೋಷ್…. ಈ ಎರಡು ಪ್ರಕರಣಗಳಾದ ಮೇಲೆ ಬ್ರಿಟಿಷರು ಎಚ್ಚೆತ್ತು ತನಿಖೆ ಶುರು ಮಾಡಿದ್ರು.. ಎರಡರಲ್ಲಿಯೂ ಬಳಸಲಾದ ಬಾಂಬ್ ಗಳು ಒಂದೇ ಥರದ್ದು ಅಂತ ಗೊತ್ತಾಯ್ತು. ಹೀಗಾಗಿ ಅನುಶೀಲನ ಸಮಿತಿ ಹಾಗು ಯುಗಾಂತರದ ಕೆಲವು ಕ್ರಾಂತಿಕಾರಿಗಳನ್ನ ಬಂಧಿಸಲಾಯ್ತು. ಜೊತೆಗೆ ಇವರೆಲ್ಲರ ಹಿಂದೆ ಇರೋರು ಅರವಿಂದ ಘೋಶರೆ ಅಂತ ಅಪಾದನೆ ಹೊರಿಸಿ ಅವರನ್ನೂ ಜೈಲಿಗೆ ಕಳಿಸಿದರು..ಇದು ಕ್ರಾಂತಿಕಾರಿಗಳಲ್ಲಿ ಬೇಸರ ಹಾಗು ಆಕ್ರೋಶವನ್ನ ಮೂಡಿಸ್ತು..
ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಯ್ತು. ಬ್ರಿಟಿಷರು ಎಂದಿನಂತೆ ಕ್ರಾಂತಿಕಾರಿಗಳಿಗೆ ಚಿತ್ರಹಿಂಸೆ ಕೊಟ್ಟು ಬಾಯಿಬಿಡಿಸೋದಕ್ಕೆ ಪ್ರಯತ್ನಿಸಿದರು.. ಅದಕ್ಕೆ ಹೆದರಿ, ಬ್ರಿಟಿಷರ ಆಮಿಷಕ್ಕೆ ಸೋತು, ‘ನರೇನ್ ಗೋಸ್ವಾಮಿ’ ಅನ್ನೋನು approver ಆಗ್ಬಿಟ್ಟ.. ಭಾರತದ ಇತಿಹಾಸದುದ್ದಕ್ಕೂ ದೇಶಭಕ್ತರಷ್ಟೇ, ದೇಶದ್ರೋಹಿಗಳೂ ಇದಾರೆ..!!!
ಇತ್ತ ಕೋರ್ಟ್ ನಲ್ಲಿ ನರೇನ್ ಎಲ್ಲರ ವಿರುದ್ಧ ಸಾಕ್ಷಿ ಹೇಳೋದಕ್ಕೆ ಶುರು ಮಾಡಿದ. ಅಷ್ಟೇ ಆಗಿದ್ರೆ ಸುಮ್ನಿರ್ತಿದ್ರೆನೋ.. ಆದ್ರೆ ನರೇನ್, ಅರವಿಂದ ಘೋಷ್ ವಿರುದ್ಧನೂ ಸಾಕ್ಷಿ ಹೇಳೋದಕ್ಕೆ ತಯಾರಾದ.ಅಲ್ಲಿಗೆ ಕ್ರಾಂತಿಕಾರಗಳ ಸಿಟ್ಟು ಮಿತಿ ಮೀರಿತು..ಜೈಲಿನ ಒಳಗಿದ್ದ ‘ಸತ್ಯೇಂದ್ರನಾಥ್’ ಹಾಗು ಅವನ ಗೆಳೆಯ ‘ಕನ್ನಯ್ಯಲಾಲ್ ದತ್ತ’ ಇಬ್ರೂ ಸೇರಿ ಆ ದ್ರೋಹಿ ನರೇನ್ ಸಂಹಾರಕ್ಕೆ ಪ್ಲಾನ್ ಹಾಕಿದರು…
ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ
– ಪವನ್ ಪರುಪತ್ತೆದಾರ್
ಮೊದಲಿಗೆ ನಿಲುಮೆಯ ಎಲ್ಲ ಓದುಗರಿಗೆ ಸ್ವಾತಂತ್ರ್ಯದಿನದ ಶುಭಾಶಯಗಳು. ೬೫ ನೆ ಸ್ವತಂತ್ರ ದಿನದ ಆಚರಣೆ ಎಲ್ಲ ಕಡೆ ಭರ್ಜರಿಯಿಂದ ಸಾಗಲಿ ಎಂದು ಆಶಿಸೋಣ. ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಸಿಕ್ಕಿದ ವಿಷಯ ನಮಗೆಲ್ಲ ತಿಳಿದಿದ್ದೆ. ಇಂದು ನಮಗೆ ಅ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಸಿಕ್ಕಿದೆಯೆಂದರೆ ನಮ್ಮ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸುವ ಮಟ್ಟಿಗೆ ಸಿಕ್ಕಿದೆ. ನಾ ಬೇಕಾದರೆ ಬಾಜಿ ಕಟ್ಟುತ್ತೇನೆ ನಾಳಿನ ಪೇಪರ್ ನೋಡಿ ನಮ್ಮ ರಾಜ್ಯದಲ್ಲೇ ಒಂದೆರಡು ಕಡೆಯಾದರು ಧ್ವಜವನ್ನು ಉಲ್ಟಾ ಹಾರಿಸಿರುತ್ತಾರೆ. ಬ್ರಿಟಿಷರ ದಬ್ಬಾಳಿಕೆ ಹದ್ದು ಮೀರಿದಾಗ ಹಿಂಸೆಯ ನಾನಾ ಮಾರ್ಗಗಳು ಪ್ರಯೋಗಿಸಿ ಹುತಾತ್ಮರಾದವರು, ನಂತರ ದೇಶವನ್ನೆಲ್ಲ ಒಟ್ಟಿಗೆ ಸಂಘಟಿಸಿ ಅಹಿಂಸೆಯಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಾಧ್ಯ ಎಂದು ತೋರಿಸಿಕೊಟ್ಟು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಮಹಾತ್ಮರು, ನಮ್ಮ ಈಗಿನ ಸ್ವಾತಂತ್ರ್ಯವನ್ನೇನಾದರು ನೋಡಿದ್ದರೆ, ಇವರಿಗೆ ಯಾಕಾದ್ರು ಸ್ವಾತಂತ್ರ್ಯ ಕೊಡಿಸಿದೆವೋ ಎಂದು ಮರುಗುತಿದ್ದರೆನೋ…..
ನನ್ನ ಮಾತುಗಳು ಅತಿಶಯೋಕ್ತಿ ಎನಿಸಬಹುದು. ಆದರೆ ನಮ್ಮ ದೇಶದಲ್ಲಿ ಎಲ್ಲರಿಗು ಎಷ್ಟು ಸ್ವಾತಂತ್ರ್ಯವಿದೆ ಅಂತ ನಿಮಗೆ ಗೊತ್ತು. ಟ್ರಾಫಿಕ್ ಪೋಲಿಸ್ ಡಾಕುಮೆಂಟ್ ಸರಿ ಇದ್ದರು ಲಂಚ ಪಡೆಯುವ ಸ್ವಾತಂತ್ರ್ಯ, ಖಾತೆ ಬದಲಾವಣೆ ಮಾಡಿಸಬೇಕಾದರೆ ಪತ್ರ ಸ್ಕಾನ್ನಿಂಗ್ ಮಾಡುವನಿಂದ ಹಿಡಿದು, ಮೊಹರು ಹಾಕುವ ಗುಮಸ್ತನಿಂದ ಹಿಡಿದು, revinue inspector ತನಕ ಲಂಚ ಪಡೆಯುವ ಸ್ವಾತಂತ್ರ್ಯ. ಗೆದ್ದೊಡನೆ ತಮ್ಮ ಕ್ಷೇತ್ರದ ಜನತೆಯನ್ನು ಮರೆತು ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವ ಸ್ವಾತಂತ್ರ್ಯ, ಪಕ್ಷದ ತತ್ವ ಸಿದ್ಧಾಂತಗಳನ್ನು ಮರೆತು ಪಕ್ಷಾಂತರ ಮಾಡುವ ಸ್ವಾತಂತ್ರ್ಯ, ರೈತನ ಜಮೀನನ್ನು ಕಸಿದು ಅಧುನಿಕರಣದ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಸ್ವಾತಂತ್ರ್ಯ, ನಮ್ಮ ಭೂಮಿಯ ಸಂಪತ್ತಲ್ಲದೆ ಅಂತರಂಗದಲ್ಲಿರುವ ತರಂಗಾಂತರಗಳನ್ನು ಮೋಸದಿಂದ ಮಾರುವ ಸ್ವಾತಂತ್ರ್ಯ, ಇನ್ನು ತಮಾಷೆಯೆಂದರೆ ತಪ್ಪು ಮಾಡಿ ದುಷ್ಕ್ರುತ್ಯಗಳನ್ನೆಸಗಿ ವಾರ್ಷಿಕ ೧೧ ಕೋಟಿ ಹಣವನ್ನು ಸರ್ಕಾರದಿಂದ ಖರ್ಚು ಮಾಡಿಸಿಕೊಳ್ಳೋ ಸ್ವಾತಂತ್ರ್ಯ ಮತ್ತು ತಪ್ಪಿತಸ್ತ ಎಂದು ಖಾತರಿಯಾದ ಮೇಲು ಶಿಕ್ಷೆ ಇಲ್ಲದೆ ಐಶಾರಾಮಿ ಜೀವನ ನಡೆಸುವ ಸ್ವಾತಂತ್ರ್ಯ, ಇಂತಹದ್ದೆನ್ನಲ್ಲ ವಿರೋಧಿಸಿದರೆ ವಿರೋಧಿಸಿದವರ ವಿರುದ್ದವೇ ಕೇಸು ಜಡಿಯುವ ಸ್ವಾತಂತ್ರ್ಯ.ಆಹಾ ಹೇಳುತ್ತಾ ಹೋದರೆ ಪುಟಗಟ್ಟಲೆ ಇಂತಹ ಸ್ವಾತಂತ್ರ್ಯಗಳು ಸಿಗುತ್ತವೆ.
ನೊಂದ ಹುಡುಗಿಯ ಡೈರಿಯಿಂದ…
– ವಿದ್ಯಾ ರಮೇಶ್
ದೇವರೆ,
ಇದೊ ನಿನಗೊಂದು ಪತ್ರ. ಏನು ಈ ಹುಚ್ಚು ಹುಡುಗಿ ನನಗೆ ಪತ್ರ ಬರೆಯುತ್ತಿದ್ದಾಳೆ ಎಂದುಕೊಳ್ಳುತ್ತಿದ್ದೀಯ? ಏನು ಮಾಡಲಿ, ನಿನ್ನ ಜೊತೆ ಯಾವಗಲೊ ಒಂದು ಸರತಿ ಸಂಪರ್ಕಿಸುವ ನಾನು,
ಒಂದೇ ಕ್ಷಣದಿ ಎಲ್ಲಾ ಹೇಳಲು ಹೇಗೆ ಸಾಧ್ಯ? ಅದು ಅಲ್ಲದೆ ನಿನಗೆ ಎಲ್ಲಾ ಕೇಳುವ ತಾಳ್ಮೆಯಾದರು ಎಲ್ಲಿದೆ? ಎಷ್ಟೋ ಜನರ ಕೋರಿಕೆಗಳನ್ನ ನೋಡ್ಕೊಬೇಕು ನೀನು.., ಅಂತಹದರಲ್ಲಿ ನನ್ನ ನಿಧಾನಗತಿಯಲ್ಲಿ ಹೇಳುವ ಮಾತುಗಳ ಕೇಳಿಸಿಕೊಳ್ಳಲು ಸಧ್ಯವೆ ನಿನಗೆ? ಕಂಡಿತಾ ಇಲ್ಲ. ಇನ್ನು ನೀನು ಈ ಪತ್ರವನ್ನೂ ಓದ್ತಿಯಾ ಅಂತ ನಾ ಅಂದುಕೊಂಡಿಲ್ಲ…ಹಾಗೆ ಅಂದುಕೊಳ್ಳುವುದು ಮೂರ್ಖತನ ಅಂತಲೂ ಗೊತ್ತು. ಆದ್ರೇನು ಮಾಡ್ಲಿ, ಹೇಗಾದರು ನಿನಗೆ ಕನಿಕರ ಬಂದೋ ಏನೊ ಒಮ್ಮೆ ಈ ಪತ್ರ ಓದಿ ನನ್ನ ಮನಸ್ಥಿತಿ ತಿಳಿದಿಕೊಳ್ತಿಯೇನೋ ಅನ್ನೊ ಒಂದು ಚೂರು ನಂಬಿಕೆ…, ಅದಕ್ಕೆ ನಿನಗೆ ಪತ್ರ ಬರೆಯುತಿರುವುದು…
ನಿನಗೆ ತಿಳಿದಿದೆ ಅಲ್ವ ದೇವ್ರೆ, ನಾನು ನಿನ್ನನ್ನು ಜಾಸ್ತಿ ಏನೂ ಕೇಳಿಕೊಳ್ಳುವುದಿಲ್ಲ. ಅಲ್ಲದೆ ನಿನ್ನ ಬಳಿ ಬರುವುದು ನಾನು ಎಂದೊ ಒಂದು ದಿನ, ಯಾವುದೋ ಹಬ್ಬದಂದು. ಆಗ “ಎಲ್ಲರನ್ನು ಚೆನ್ನಾಗಿ ಇಡು” ಅಥವಾ ಪರೀಕ್ಷೆಗಳು ಹತ್ತಿರ ಬರುತಿದ್ದರೆ “ಓದು ಚೆನ್ನಾಗಿ ಆಗಲಿ, ಪರೀಕ್ಷೆ ಸುಲಭವಾಗಿ ಇರಲಿ” ಎಂದು ಕೇಳಿಕೊಳ್ಳುತೀನಿ. ಅದು ಬಿಟ್ಟು ಬೇರೆ ಏನಾದರು ಕೇಳಿರುವೆನೇನು? ಬೆಳಗೆ ಎದ್ದಾಗ ಒಮ್ಮೆ ನಿನ್ನ ಆ ಫೋಟೊ ನೋಡಿದರೆ ಮತ್ತೆ ನಿನ್ನ ನೋಡುವುದು ಮಾರನೆ ದಿನವೇ! ಇದೇ ನಿನಗೆ ಕೋಪವನ್ನುಂಟು ಮಾಡುತಿದೇಯ? ಮನಸ್ಸಿನಲ್ಲಿರುವ ಭಕ್ತಿ ಸಾಲದೆ? ಬೂಟಾಟಿಕೆಗಾಗಿ ನಡೆಸುವವರ ಭಕ್ತಿಯೇ ನಿನಗೆ ಮೆಚ್ಚೆ?
ಮಧ್ಯಮ ವರ್ಗದಲ್ಲಿದ್ದರೂ ನಿನ್ನ ಎಂದೂ ಇಶ್ವರ್ಯಕ್ಕಾಗಿ ಕೇಳಿಲ್ಲ. ನನ್ನನ್ನು ಸಿರಿಯುಳ್ಳವರ ಮನೆಯಲ್ಲಿ ಹುಟ್ಟಿಸಲಿಲ್ಲವಲ್ಲ ಎಂದು ದೂಡಿಲ್ಲ.., ಅಂತಹದರಲ್ಲಿ ಇದ್ದ ಅಲ್ಪ ಸ್ವಲ್ಪ ಖುಷಿಗೂ ಕಲ್ಲೊಡೆಯುವುದೆ ನೀನು? ಸಂತೊಷವ ಬಯಸಲೇ ಬಾರದೆ ನಾನು? ಬಯಸಬಾರದಂತಾದರೆ ನಾನು ಮಾಡಿರುವ ತಪ್ಪಾದರೂ ಏನು?






