ವಿಷಯದ ವಿವರಗಳಿಗೆ ದಾಟಿರಿ

Archive for

4
ಜೂನ್

ಸಂಶೋಧನೆಯ ದಾರಿಯನ್ನು ಯಾರು ನಿರ್ಧರಿಸಬೇಕು?

  ಪ್ರೊ.ರಾಜಾರಾಮ ಹೆಗಡೆ

{20-5-2013 ಕನ್ನಡ ಪ್ರಭದಲ್ಲಿ ವರದಿಯಾದಂತೆ ಡಾ. ಎಂ.ಎಂimages. ಕಲ್ಬುರ್ಗಿಯವರು ಬಸವಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಕುವೆಂಪು ವಿಶ್ವವಿದ್ಯಾನಿಲಯದ ಸಂಶೋಧಕರ ಕುರಿತು ಆಡಿದ ಮಾತಿಗೆ ಈ ಪ್ರತಿಕ್ರಿಯೆ.}

“ವಚನ ಚಳುವಳಿಯ ಚರ್ಚೆಯಲ್ಲಿ ಪ್ರಜಾವಾಣಿ ಪತ್ರಿಕೆಯು ಒಂದು ಪಕ್ಷದವರ ನಿಲುವುಗಳನ್ನು ಹೆಚ್ಚಾಗಿ ಬೆಂಬಲಿಸಿ ಈಗ ಚರ್ಚೆಯನ್ನು ಸಂಪೂರ್ಣವಾಗಿ ಆ ಪತ್ರಿಕೆಯು ನಿಲ್ಲಿಸಿಯಾಗಿದೆ. ಆದರೆ ಆ ಚರ್ಚೆಯ ಪರಿಣಾಮಗಳು ಗಾಢವಾಗಿವೆ ಎಂಬುದು ಸ್ಪಷ್ಟ. ಹಲವಾರು ಪ್ರಗತಿಪರ ಸಂಘಟನೆಗಳು ನಮ್ಮ ಸಂಶೋಧನಾ ಕೇಂದ್ರವನ್ನು ಮತ್ತು ಸಂಶೋಧನೆಯನ್ನು ನಿಲ್ಲಿಸುವಂತೆ ಸರ್ಕಾರದ ಮಟ್ಟದಲ್ಲಿ, ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ಬೀರುತ್ತಾ ಒತ್ತಡ ತರುತ್ತಿವೆ. ಇಂತಹ ಸಮಯದಲ್ಲಿ ಬಸವಶ್ರೀ ಪ್ರಶಸ್ತಿ ಪಡೆದ ಎಂ.ಎಂ.ಕಲಬುರ್ಗಿಯವರು ವಿಕೃತ ಸಂಶೋಧನೆಯನ್ನು ನಿಲ್ಲಿಸಬೇಕೆಂದು ಮುಖ್ಯಮಂತ್ರಿಗಳ ಮುಂದೆ ಅಲವತ್ತುಕೊಂಡಿರುವುದು ಹಲವಾರು ಪತ್ರಿಕೆಗಳಲ್ಲಿ ಪಕ್ರಟವಾಗಿದೆ. ಅವರ ಕೋರಿಕೆಗೆ ಕೆಲವಾದರೂ ಪರಿಣಾಮಗಳು ಇದ್ದೇ ಇರುತ್ತವೆ. ಕನ್ನಡಪ್ರಭದಲ್ಲಿ ಪ್ರಕಟವಾದ ಅವರ ಅಂಬೋಣಕ್ಕೆ ಪ್ರತಿಕ್ರಿಯೆಯಾಗಿ ಈ ಲೇಖನವನ್ನು ಬರೆದು ಕನ್ನಡಪ್ರಭ ಪತ್ರಿಕೆಗೆ ಕಳುಹಿಸಲಾಗಿತ್ತು. ಆದರೆ ಪ್ರಕಟವಾಗಿಲ್ಲ.”

ವಿಶ್ವವಿದ್ಯಾನಿಲಯದ ಸಿಂಡಿಕೇಟು ಸದಸದ್ಯರು ಈ ಅಧ್ಯಾಪಕರಿಗೆ ಎಚ್ಚರಿಕೆ ನೀಡಬೇಕೆಂದು ಅವರು ಕರೆಕೊಟ್ಟಿದ್ದಾರೆ. ಅದೇ ಭಾಷಣದಲ್ಲಿ ಅವರು ವಚನಗಳ ಕುರಿತು ಕುವೆಂಪು ವಿಶ್ವವಿದ್ಯಾಲಯದ ಸಂಶೋಧಕರು ನಡೆಸುತ್ತಿರುವುದು ವಿಕೃತ ಸಂಶೋಧನೆ, ಅದನ್ನು ನಿಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೂ ಕೇಳಿಕೊಂಡಿದ್ದಾರೆ ಎಂಬುದನ್ನು ಇತರ ಪತ್ರಿಕೆಗಳೂ ಪ್ರಕಟಿಸಿವೆ.

ಕನ್ನಡ ಸಾರಸ್ವತ ಲೋಕದಲ್ಲಿ ಕಲಬುರ್ಗಿಯವರನ್ನು ಸಂಶೋಧಕರು ಎಂದೇ ಗುರುತಿಸಲಾಗುತ್ತದೆ. ಅವರು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೂಡ ಜವಾಬ್ದಾರಿ ನಿರ್ವಹಿಸಿದ್ದಾರೆ. ಅದಕ್ಕಿಂತ ಸ್ವತಃ ಅವರೇ ತಮ್ಮ ಮಾರ್ಗ 2 ಸಂಪುಟದಲ್ಲಿನ ಲೇಖನವೊಂದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯನ್ನು ಎದುರಿಸಬೇಕಾದ ಪರಿಸ್ಥಿತಿ ಕೂಡ ಒಮ್ಮೆ ಬಂದಿತ್ತು. ಆಗ ಅಭಿಪ್ರಾಯ ಸ್ವಾತಂತ್ರ್ಯದ ಮೌಲ್ಯ ಅವರಿಗೆ ರಕ್ಷಣೆಯಾಗಿ ಬಂದಿತ್ತು. ಆದರೆ ಈಗ ಒಂದು ವಿಪರ್ಯಾಸವನ್ನು ನೋಡುತ್ತಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆಯು ಸಂಶೋಧಕನೊಬ್ಬನಿಗೆ ನೀಡುವ ಯಾವ ಭರವಸೆಯು ಕಲಬುರ್ಗಿಯವರ ಸಂಶೋಧನೆಯನ್ನು ಸಾಧ್ಯ ಮಾಡಿತೊ ಹಾಗೂ ಅದರ ಹೆಸರಿನಲ್ಲಿ ಎದ್ದ ವಿವಾದಗಳಿಗೆ ಎದುರಾಗಿ ಅವರನ್ನು ರಕ್ಷಿಸಿತೊ ಅದು ಮುಂದಿನ ತಲೆಮಾರಿನ ಸಂಶೋಧಕರಿಗೆ ಬೇಡ ಎಂಬ ಅಭಿಪ್ರಾಯಕ್ಕೆ ಅವರು ಬಂದಂತಿದೆ. ಅಥವಾ ಅವರು ಈಗ ಸಂಶೋಧನೆಗೆ ಬೇರೆಯದೇ ಆದ ಅರ್ಥ ಹಚ್ಚುತ್ತಿರಲೂಬಹುದು

ಮತ್ತಷ್ಟು ಓದು »