ವಿಷಯದ ವಿವರಗಳಿಗೆ ದಾಟಿರಿ

Archive for

7
ಆಗಸ್ಟ್

ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೇಕೆ ಇವರಿಗೆ ಈ ಪರಿ ಕೋಪ?”

– ರಾಕೇಶ್ ಶೆಟ್ಟಿ

ಗಂಗಾ ಪೂಜೆಫೇಸ್ಬುಕಿನಲ್ಲಿ ದಿನಕ್ಕೆ ಅದೆಷ್ಟು ಲಕ್ಷ ಸ್ಟೇಟಸ್ ಅಪ್ಡೇಟ್ ಗಳು ಬರುತ್ತವೆಯೋ ಗೊತ್ತಿಲ್ಲ.ಅವುಗಳಲ್ಲಿ ಜೊಳ್ಳು-ಕಾಳು ಎಲ್ಲವೂ ಇರುತ್ತವೆ.ಇತ್ತೀಚೆಗೆ ನಮ್ಮ ಮೀಡಿಯಾಗಳಲ್ಲಿ “ಪ್ರಭಾ” ಎನ್ನುವವರ ಫೇಸ್ಬುಕ್ ಟಿಪ್ಪಣಿಯ ಮೇಲೆ “ವಿ.ಆರ್ ಭಟ್” ಅವರು ಮಾಡಿದ ಪ್ರತಿಕ್ರಿಯೆ ದೊಡ್ಡ ವಿವಾದವನ್ನೇ ಸೃಷ್ಟಿಸಿ, ಭಟ್ಟರ ಮೇಲೆ ಕೇಸು ದಾಖಲಾಗಿ ಅವರ ಬಂಧನವೂ ಆಯಿತು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಆ ಸ್ಟೇಟಸ್ಸಿನಲ್ಲಿ,ಪ್ರಭಾ ಅವರು “ಪುರೋಹಿತಶಾಹಿ” ಗಳನ್ನು ಟೀಕಿಸಿ ಅವರ ಮೇಲೆ ಸಿಟ್ಟು ಮಾಡಿಕೊಂಡು ಬರೆದಿದ್ದರು. ಭಟ್ಟರ ಕಮೆಂಟಿನ ಗಲಾಟೆಯಲ್ಲಿ ಕಳೆದು ಹೋಗಿದ್ದು, ಪ್ರಭಾ ಅವರು ಬರೆದ ಸ್ಟೇಟಸ್ಸಿನಲ್ಲಿದ್ದ “ಪುರೋಹಿತಶಾಹಿ”ಯ ಬಗ್ಗೆ ಆಗಬೇಕಿದ್ದ ಚರ್ಚೆ.

ಈ ಲೇಖನವನ್ನು ಓದುತ್ತಿರುವ ಬಹುತೇಕ ಜನ ಸಾಮಾನ್ಯರಿಗೆ “ಪುರೋಹಿತಶಾಹಿ” ಎಂದರೇನು ಎನ್ನುವ ಪ್ರಶ್ನೆ ಮೂಡಿದ್ದರೆ ಆಶ್ಚರ್ಯವೇನಿಲ್ಲ. ಹಾಗಾಗಿ ಪುರೋಹಿತಶಾಹಿಯನ್ನು ಅರ್ಥವೇನು ನೋಡೋಣ.

ಪುರೋಹಿತರು ಎಂದರೆ ದೇವರು ಮತ್ತು ಮಾನವನ ನಡುವಿನ ಮಧ್ಯವರ್ತಿಗಳು ಹಾಗೂ ಧರ್ಮದ ಏಕಸ್ವಾಮ್ಯ (ಒಂದರ್ಥದಲ್ಲಿ Copy Rights) ವನ್ನು ಹೊಂದಿದ್ದಾರೆ. ಶಾಹಿ ಎಂದರೆ ಆಳ್ವಿಕೆ ಎಂದರ್ಥ. ಪುರೋಹಿತರ ಆಳ್ವಿಕೆಯೇ “ಪುರೋಹಿತಶಾಹಿ”.

ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೆಕೆ ಇವರಿಗೆ ಈ ಪರಿ ಕೋಪ?”

ಬುದ್ಧಿಜೀವಿಗಳ Definitionನ ಪ್ರಕಾರ “ಪುರೋಹಿತಶಾಹಿ”ಯೆಂದರೆ ದೇವರ ಬಗ್ಗೆ ಭಯ ಮೂಡಿಸಿ ಜನರನ್ನು ಮೂರ್ತಿ ಪೂಜೆಗಳಲ್ಲಿ ತೊಡಗಿಸಿ,ನೆಪ ಹೇಳಿ ಜೇಬು ತುಂಬಿಸಿಕೊಳ್ಳುವವರು ಮತ್ತು ಭವಿಷ್ಯ ಇತ್ಯಾದಿ ನೆಪದಲ್ಲಿ ಮೋಸ ಮಾಡುವವರು” ಅನ್ನುವ ಧಾಟಿಯಲ್ಲಿರುತ್ತದೆ. (ಬಹುಷಃ ಇದಕ್ಕಿಂತ ಉತ್ತಮ Definition ಇದ್ದರೂ ಇರಬಹುದು)

ಒಟ್ಟಾರೆಯಾಗಿ ಬುದ್ಧಿಜೀವಿಗಳ ಈ ಪುರೋಹಿತಶಾಹಿಯ ಕುರಿತ ಮೇಲಿನ Definition ಅನ್ನು ಅರ್ಥಮಾಡಿಕೊಂಡಾಗ ತಿಳಿಯುವುದೇನೆಂದರೆ, ದೇವರು ಮತ್ತು ಜನ ನಡುವಿನ ಮಧ್ಯವರ್ತಿಗಳಾದ ಈ ಪುರೋಹಿತರು ಜನರನ್ನು ನಮ್ಮ ಧರ್ಮ ಗ್ರಂಥಗಳು ಮತ್ತು ಆಚರಣೆಗಳಿಂದ ದೂರವಿರಿಸಿ ಮೂರ್ತಿ ಪೂಜೆಯ ಮೂಲಕ ಮೋಸ ಮಾಡಿ ಸಮಾಜವನ್ನು/ಧರ್ಮವನ್ನು ಹಾಳು ಮಾಡುತಿದ್ದಾರೆ”

ನಮ್ಮ ಬುದ್ಧಿಜೀವಿಗಳ ಈ ವಾದದ ಮೂಲವನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.ಆಗ ನಮಗೆ ಮುಂದಿನ ಚರ್ಚೆಯ ಹಾದಿ ಸುಲಭವಾಗಾಹುದು.

ಮತ್ತಷ್ಟು ಓದು »