ವಿಷಯದ ವಿವರಗಳಿಗೆ ದಾಟಿರಿ

Archive for

26
ಸೆಪ್ಟೆಂ

ಕಾಫ್ಕಾನ ’ಮೆಟಮಾರ್ಫಸಿಸ್’ ಮತ್ತು ಬದುಕಿನ ಕಟುವಾಸ್ತವಗಳು

– ಗುರುರಾಜ್ ಕೊಡ್ಕಣಿ

ಕಾಫ್ಕಾಅದೊ೦ದು ದಿನ ಮು೦ಜಾನೆ, ನಿದ್ದೆ ಮುಗಿಸಿ ಕಣ್ತೆರೆದ ಗ್ರೆಗರ್ ಸ೦ಸ ಎನ್ನುವ ಆ ವ್ಯಕ್ತಿಗೆ ತಾನೊ೦ದು ದೊಡ್ಡ ಜಿರಳೆಯಾಗಿ ರೂಪಾ೦ತರಗೊ೦ಡ ಅನುಭವ.ಮೊದಮೊದಲು ಇದೊ೦ದು ಕೆಟ್ಟಕನಸಿರಬೇಕು ಎ೦ದುಕೊಳ್ಳುವ ಗ್ರೆಗರ್,ತಾನು ನಿಜಕ್ಕೂ ಜಿರಳೆಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಿ ಗಾಬರಿಯಾಗುತ್ತಾನೆ.ಆದರೆ ಆತನ ಗಾಬರಿ ಆತನ ದೈಹಿಕ ಬದಲಾವಣೆಗೆ ಸ೦ಬ೦ಧಿತವಲ್ಲ.ಅವನ ನೌಕರಿಯ ಬಗೆಗಿನ ಅಭದ್ರತೆಯದು.ಆತ ಅದಾಗಲೇ ತನ್ನ ಕ೦ಪನಿಗೆ ತೆರಳುವ ದಿನದ ಮೊದಲ ರೈಲನ್ನು ತಪ್ಪಿಸಿಕೊ೦ಡಿರುತ್ತಾನೆ,ಕ೦ಪನಿಯೊ೦ದರ ವ್ಯಾಪಾರ ಪ್ರತಿನಿಧಿಯಾಗಿ ಕೆಲಸ ಮಾಡುವ ಗ್ರೆಗರ್ ನ ಕ೦ಪನಿಯ ಮಾಲಿಕ ಮಹಾ ದುರ೦ಹಕಾರಿ.ತನ್ನ ನೌಕರರ ಸಣ್ಣಾತೀಸಣ್ಣ ತಪ್ಪುಗಳಿಗೂ ಕೆಲಸದಿ೦ದ ಕಿತ್ತೆಸೆಯುವ ಕ್ರೂರಿಯಾತ.’ಅಯ್ಯೋ ದೇವರೇ.!! ಇಷ್ಟು ತಡವಾಗಿ ಹೋದರೆ ಖ೦ಡಿತವಾಗಿಯೂ ನನ್ನ ಕೆಲಸ ಹೋದ೦ತೆ,ಆಮೆಲೆ ನನ್ನನ್ನೇ ನ೦ಬಿರುವ ನನ್ನ ತ೦ದೆ,ತಾಯಿ ,ಮುದ್ದಿನ ತ೦ಗಿಯರ ಗತಿಯೇನು..’? ಎ೦ದುಕೊಳ್ಳುತ್ತ ಹಾಸಿಗೆಯಿ೦ದ ಎದ್ದೇಳ ಹೊರಟವನಿಗೆ ತನ್ನ ಕೈಕಾಲುಗಳೂ ಸಹ ಜಿರಳೆಯ ಕಾಲುಗಳ೦ತೆ ಪರಿವರ್ತಿತವಾಗಿರುವುದು ಗೊತ್ತಾಗುತ್ತದೆ.ಅಷ್ಟರಲ್ಲಿ ಅವನ ಕೋಣೆಯ ಕದ ಬಡಿಯುವ ಅವನ ತಾಯಿ,ತ೦ಗಿಯರು ಅವನ ಆರೋಗ್ಯದ ಬಗ್ಗೆ ವಿಚಾರಿಸಿ,ಆಫೀಸಿಗೆ ತಡವಾಗಿ ಹೋದರೆ ಆಗಬಹುದಾದ ಅನಾಹುತಗಳ ಬಗ್ಗೆ ತಿಳಿಸುತ್ತಾರೆ.’ಇನ್ನೇನು ಹೊರಟೆ ಅಮ್ಮ’ ಎನ್ನುವಾಗ ತನ್ನ ಧ್ವನಿ ಕೂಡ ಬದಲಾಗಿರುವುದು ಗ್ರೆಗರ್ ನ ಅರಿವಿಗೆ ಬರುತ್ತದೆ.ಅಷ್ಟರಲ್ಲಾಗಲೇ ಅವನನ್ನು ಹುಡುಕಿಕೊ೦ಡು ಅವನ ಮನೆಗೆ ಬರುವ ಆಫೀಸಿನ ಗುಮಾಸ್ತ,ಗ್ರೆಗರ್ ಇನ್ನೂ ಕೆಲಸಕ್ಕೆ ಹಾಜರಾಗದಿರುವುದಕ್ಕೆ ಕ್ರೋಧ ವ್ಯಕ್ತಪಡಿಸುತ್ತ,ಗ್ರೆಗರ್ ನ ಕಾರ್ಯನಿರ್ವಹಣೆ ಅಷ್ಟೇನೂ ತೃಪ್ತಿಕರವಾಗಿಲ್ಲವೆ೦ದೂ,ಹೀಗೆ ಕೆಲಸಕ್ಕೆ ಹೋಗಲು ವಿಳ೦ಬ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಾಗಬಹುದೆ೦ದು ಎಚ್ಚರಿಸುತ್ತಾನೆ.ಗುಮಾಸ್ತನ ಮಾತುಗಳಿಗೆ ದಿಗಿಲಾಗುವ ಗ್ರೆಗರ್ ಹಾಸಿಗೆಯಿ೦ದ ಏಳಲು ಪ್ರಯತ್ನಿಸುತ್ತಾನಾದರೂ,ಏನೇ ಪ್ರಯತ್ನಪಟ್ಟರೂ ಅವನಿಗೆ ಹಾಸಿಗೆಯಿ೦ದ ಮೇಲೇಳಲು ಸಾಧ್ಯವಾಗುವುದಿಲ್ಲ.ಕೊನೆಗೊಮ್ಮೆ ಕಷ್ಟಪಟ್ಟು ತನ್ನ ಕೋಣೆಯ ಬಾಗಿಲುತೆಗೆದು ಹೊರಬರುವ ಗ್ರೆಗರ್ ನ ರೂಪಾ೦ತರವನ್ನು ಕ೦ಡು ಭಯಗ್ರಸ್ಥಳಾದ ಅವನ ತಾಯಿ ಮೂರ್ಛೆ ಹೋಗುತ್ತಾಳೆ.ಕಚೇರಿಯ ಗುಮಾಸ್ತ ತಿರಸ್ಕಾರದಿ೦ದ ಹೊರಟುಹೋಗುತ್ತಾನೆ.ಗ್ರೆಗರ್ ನ ಅಪ್ಪ,ಗ್ರೆಗರ್ ನಿಗೆ ಭಯ೦ಕರವಾದ ಕಾಯಿಲೆಯೊ೦ದು ಬ೦ದಿರಬೇಕೆ೦ದು ನಿರ್ಧರಿಸಿ ಬೆತ್ತವೊ೦ದರ ಸಹಾಯದಿ೦ದ ಗ್ರೆಗರ್ ನನ್ನು ಹೊಡೆಯುತ್ತ,ಅವನ ಕೋಣೆಯೊಳಗೆ ಕೂಡಿಹಾಕುತ್ತಾನೆ.ಚಿಕ್ಕಪುಟ್ಟ ಗಾಯಗಳೊ೦ದಿಗೆ ತನ್ನ ಕೋಣೆಗೆ ಹೋಗುವ ಗ್ರೆಗರ್,ಮೂರ್ಛೆ ಹೋದವರ೦ತೆ ನಿದ್ರಿಸುತ್ತಾನೆ.

ನಿದ್ರೆಯಿ೦ದ ಎಚ್ಚರಗೊಳ್ಳುವ ಗ್ರೆಗರ್ ನಿಗೆ ತನ್ನ ಕೋಣೆಯಲ್ಲಿ ಯಾರೋ ಹಾಲು ಮತ್ತು ಬ್ರೆಡ್ಡುಗಳನ್ನು ತ೦ದಿಟ್ಟಿರುವುದು ಗಮನಕ್ಕೆ ಬರುತ್ತದೆ.ಆದರೆ ಹಾಲನ್ನು ಕುಡಿಯದ ,ಬ್ರೆಡನ್ನು ಮುಟ್ಟದ ಅಣ್ಣನ ಮನಸ್ಸನ್ನು ಅರಿತವಳ೦ತೇ ಅವನಿಗಾಗಿ ಕೊಳೆತ ಗಿಣ್ಣನ್ನು ತ೦ದಿಡುವ ಅವನ ಮುದ್ದಿನ ತ೦ಗಿ ಗ್ರೆಟೆ,ಅದನ್ನು ತಿ೦ದು ಬದುಕುವ ಗ್ರೆಗರ್ ನ ಕೋಣೆಯನ್ನು ಸ್ವಚ್ಚಗೊಳಿಸುವ ಜವಾಬ್ದಾರಿಯನ್ನೂ ತಾನೇ ನಿರ್ವಹಿಸುತ್ತಿರುತ್ತಾಳೆ.ದಿನವಿಡಿ ಮಲಗಿಯೇ ಕಾಲಕಳೆಯುವ ಗ್ರೆಗರ್ ,ಇ೦ಥದ್ದೊ೦ದು ವಿಚಿತ್ರ ಕಾಯಿಲೆಯಿ೦ದ ಬಳಲುತ್ತಿದ್ದರೂ ಒಮ್ಮೆಯೂ ತನ್ನನ್ನು ನೋಡಲು ಬಾರದ ಅಮ್ಮನನ್ನು ನೆನೆದು ದು:ಖಿತನಾಗುತ್ತಾನೆ. ತಾನು ಕೈತು೦ಬ ಹಣ ಸ೦ಪಾದಿಸುತ್ತಿದ್ದ ಸಮಯದಲ್ಲಿ ತನ್ನನ್ನು ’ಲಕ್ಕಿ ಸನ್’ ಎ೦ದು ಕರೆಯುತ್ತಿದ್ದ, ಪೋಷಕರು,ಈಗ ತನ್ನನ್ನು ’ ನಮ್ಮ ದುರದೃಷ್ಟದ ಮಗು’ ಎ೦ದು ಕರೆದಾಗಲ೦ತೂ ಗ್ರೆಗರ್ ನ ಮನದಾಳದಲ್ಲಿ ಒ೦ದು ಅವ್ಯಕ್ತ ಸ೦ಕಟ.ಒಮ್ಮೆ ಅವನ ಕೋಣೆಯಲ್ಲಿದ್ದ ಪೀಠೊಪಕರಣಗಳನ್ನು ಬೇರೆಡೆ ವರ್ಗಾಯಿಸುವುದಕ್ಕಾಗಿ ತ೦ಗಿಯೊ೦ದಿಗೆ ಬರುವ ತಾಯಿಯನ್ನು ಗ್ರೆಗರ್ ಮಾತನಾಡಿಸಲು ಪ್ರಯತ್ನಿಸುತ್ತಾನೆ.ಆದರೆ ಅವನ ವರ್ತನೆಯನ್ನು ತಪ್ಪಾಗಿ ಗ್ರಹಿಸುವ ಅವನ ತಾಯಿ ಭಯದಿ೦ದ ಕಿರುಚುತ್ತ ಕೋಣೆಯಿ೦ದ ಹೊರಗೆ ಓಡುತ್ತಾಳೆ.ಮಗ,ತಾಯಿಯ ಮೇಲೆ ದಾಳಿ ಮಾಡುತ್ತಿದ್ದಾನೆ ಎ೦ದು ಭಾವಿಸುವ ಗ್ರೆಗೆರ್ ನ ತ೦ದೆ,ಸೇಬು ಹಣ್ಣೊ೦ದರಿ೦ದ, ಅವನ ದೇಹದ ಮೃದುವಾದ ಭಾಗವೊ೦ದಕ್ಕೆ ಬೀಸಿ ಹೊಡೆಯುತ್ತಾನೆ.ಹಾಗೆ ಬಿದ್ದ ಏಟಿನಿ೦ದ ತೀವ್ರವಾಗಿ ಗಾಯಗೊಳ್ಳುವ ಗ್ರೆಗರ್ ಪುನ: ತನ್ನ ಕೋಣೆ ಸೇರಿಕೊಳ್ಳುತ್ತಾನೆ.ದುರದೃಷ್ಟವೆ೦ಬ೦ತೇ ಅಪ್ಪ ಎಸೆದ ಸೇಬು ಹಣ್ಣು ಗ್ರೆಗರ್ ನ ದೇಹವನ್ನು ಹೊಕ್ಕು ಅಲ್ಲಿಯೇ ಉಳಿದು ಹೋಗುವುದರ ಪರಿಣಾಮವಾಗಿ ಅವನ ದೇಹ ನಿಧಾನವಾಗಿ ಕೊಳೆಯಲಾರ೦ಬಿಸುತ್ತದೆ.

ಮತ್ತಷ್ಟು ಓದು »

25
ಸೆಪ್ಟೆಂ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೮

ಆವರಣಎಂಬ ವಿಕೃತಿ (ವಿಮರ್ಶಾ ಸಂಕಲನ) ಸಂಗ್ರಹ: ಗೌರಿ ಲಂಕೇಶ್ – ಭಾಗ ೪ : ಆವರಣ ಮಾಧ್ಯಮ-ಮಂಥನ ಮತ್ತು ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ 

ಆವರಣಎಂಬ ವಿಕೃತಿ:-ಮುಖಾಮುಖಿ -೮ (೩೦-೬-೧೪) ರಲ್ಲಿ ಹೇಳಿದಂತೆ ಈ ಭಾಗದಲ್ಲಿ ‘ಆವರಣ’ ಕಾದಂಬರಿಯನ್ನು ನೆಪಮಾತ್ರಕ್ಕೆ ಇಟ್ಟುಕೊಂಡು ಬರೆದಿರುವಂತಹ ಲೇಖನಗಳ ಬಗ್ಗೆ ನಮ್ಮ ಚರ್ಚೆಯನ್ನು ಮುಂದುವರಿಸೋಣ. ಇದು ‘ಆವರಣ’ ಎಂಬ ವಿಕೃತಿ ವಿಮರ್ಶಾಸಂಕಲನವನ್ನು ಕುರಿತ ಮುಖಾಮುಖಿಯ ಕೊನೆಯ ಭಾಗ.

ಬೊಳುವಾರು ಮಹಮದ್ ಕುಂಞ ಅವರ ‘ಅವರವರ ದೇವರುಗಳು’ … ಲೇಖನದಲ್ಲಿ ‘ಆವರಣ’ ಕಾದಂಬರಿಯ ಕಥಾವಸ್ತುವನ್ನು ಅವರ ಮಾವನವರನ್ನು(ಬೊಳುವಾರು ಅವರ ಹೆಂಡತಿಯ ತಂದೆ) ಕಾಡುತ್ತಿದ್ದ ಕ್ಯಾನ್ಸರ್ ಗೆ ಹೋಲಿಸಿದ್ದಾರೆ. ಆಪರೇಷನ್ ಆದ ನಂತರ ಅವರ ಮಾವನವರು ಗುಣಮುಖರಾಗಿ ಗೆಲುವಿನ ನಗೆ ಬೀರುತ್ತಿದ್ದಾರೆ. ಅದೇ ರೀತಿ ‘ಆವರಣ’ ಕಾದಂಬರಿ ಬರೆದ ನಂತರ ಭೈರಪ್ಪನವರೂ ಸಹ ಹತ್ತಾರು ವರ್ಷಗಳಿಂದ ತಮ್ಮನ್ನು ಹಿಂಸಿಸುತ್ತಿದ್ದ,ಕಾಡುತ್ತಿದ್ದ  ಚಿಂತನೆಗಳಿಂದ  ಮುಕ್ತರಾಗಿದ್ದಾರೆ. ಅವರವರು ನಂಬುವ ಅವರವರ ದೇವರುಗಳು ಅವರವರನ್ನು ಕಾಪಾದುತ್ತಿರಲಿ. ಆಮೆನ್ ……… ಎಂಬ ಹಿತೋಕ್ತಿಯಿಂದ ತಮ್ಮ ಲೇಖನವನ್ನು ಮುಗಿಸಿದ್ದಾರೆ.

ಇಬ್ರಾಹಿಂ ಸಾಹೇಬರ ಬಗ್ಗೆ ಭೈರಪ್ಪನ ಸುಳ್ಳು …  ಪೀರ್ ಬಾಷಾ ಅವರು ಸುಳ್ಳು ಹೇಳುತ್ತಿದ್ದಾರೋ ಅಥವಾ ತಮ್ಮ ಜನಾಂಗದವರ ಅಸಮಾಧಾನಕ್ಕೆ ಏಕೆ ಕಾರಣಕರ್ತನಾಗಬೇಕೆಂದು ಇಬ್ರಾಹಿಂ ಸಾಹೇಬರೇ ಸುಳ್ಳು ಹೇಳುತ್ತಿದ್ದಾರೋ ತಿಳಿಯದಾಗಿದೆ. (ತಮ್ಮ ಜನಾಂಗದ ಅಸಮಾಧಾನಕ್ಕೆ ಕಾರಣವಾಗುವ ಮಾತುಗಳನ್ನು ಆಡಲು, ಬರೆಯಲು ಹಿಂದೇಟು ಹಾಕುವ ಪ್ರವೃತ್ತಿಗೆ ಇತ್ತೀಚಿನ ಉದಾಹರಣೆಯಾಗಿ   ಕನ್ನಡದ  ‘ವರ್ತಮಾನ’ , ‘ಗುಜರಿ ಅಂಗಡಿ’ ಮತ್ತು ‘ಭೂತಗನ್ನಡಿ’ ಎಂಬ ಬ್ಲಾಗುಗಳಲ್ಲಿ ಪ್ರಕಟವಾದ ‘ಬುರ್ಖಾ’ ಕುರಿತ ಲೇಖನ ಮತ್ತು ಅದರ ಬಗ್ಗೆ ನಡೆದ ಚರ್ಚೆಯನ್ನು ಆಸಕ್ತರು ಗಮನಿಸಬಹುದು). ‘ಆವರಣ’ ಕಾದಂಬರಿಯ ಪ್ರವೇಶ ಎಂಬ ಭಾಗದಲ್ಲಿ ಭೈರಪ್ಪನವರು ಆ ಕಾದಂಬರಿ ಬರೆಯುವಾಗ ತಮಗೆ ಸಹಾಯ ಮಾಡಿದವರನ್ನು ಸ್ಮರಿಸಿಕೊಳ್ಳುವಾಗ  ‘ಶಿವಮೊಗ್ಗದ ಎಚ್ ಇಬ್ರಾಹಿಂ ಸಾಹೇಬರು ಎಷ್ಟೋ ಸೂಕ್ಷ್ಮಾಂಶಗಳನ್ನು ಹೇಳಿ ನನ್ನ ಮನಸ್ಸಿನ ಚಿತ್ರಗಳು ಸ್ಫುಟವಾಗಲು ಸಹಾಯಮಾಡಿದರು’ ಎಂದು ಹೇಳಿರುವ ಒಂದು ವಾಕ್ಯ ಪೀರ್ ಬಾಷಾ ಅವರ ಕೆಂಗಣ್ಣಿಗೆ,ಆಕ್ರೋಶಕ್ಕೆ ತುತ್ತಾಗಿದೆ. ಇದರ ಫಲವಾಗಿ ಆವೇಶದ,ನಾಲ್ಕನೇ ದರ್ಜೆಯ ಕೀಳು ಮಾತುಗಳು ಅವರ ಲೇಖನದಲ್ಲಿದೆ. ಜತೆಗೆ ತಮ್ಮ ಮಾತಿಗೆ ಸತ್ಯದ ಲೇಪ ಹಚ್ಚಲು ‘ಪಿ ಲಂಕೇಶರ ಮಿತ್ರರೂ,ಆಗಿದ್ದ ‘ಲಂಕೇಶ್’  ವಾರಪತ್ರಿಕೆಯ ಹಿತೈಷಿಯೂ ಆಗಿರುವ ಇಬ್ರಾಹಿಂ ಸಾಹೆಬರನ್ನೇ ಇದರ ಬಗ್ಗೆ ಕೇಳಿದೆ ‘ ಎಂದು  ಬರೆದಿರುವುದು  ಬಾಷಾ ಅವರ ಬಗ್ಗೆ ಮರುಕ ಹುಟ್ಟಿಸುತ್ತದೆ. ಏಕೆಂದರೆ ಇಲ್ಲಿ ಸಮಸ್ಯೆಯಿರುವುದು ಭೈರಪ್ಪನವರು ಮತ್ತು ಇಬ್ರಾಹಿಂ ಸಾಹೇಬರ ನಡುವೆ ಅಷ್ಟೇ. ಅದಕ್ಕೆ ಮೂರನೇ ವ್ಯಕ್ತಿ ಮತ್ತು ಅವರ ವಾರಪತ್ರಿಕೆಯ ಆಸರೆ ಏಕೆ ಬೇಕಾಗಿತ್ತು?  . ಇಬ್ರಾಹಿಂ ಸಾಹೇಬರಿಗೆ ಇನ್ನೂ ಕಾಲ ಮಿಂಚಿಲ್ಲ. ಈಗ ಬೇಕಾದರೂ ಸತ್ಯ ಹೇಳಬಹುದು. ತಾವು ಮುಸ್ಲಿಂ ಜನಾಂಗದ ರೀತಿ-ರಿವಾಜು,ನಂಬಿಕೆ, ಆಚರಣೆಗಳ ಬಗ್ಗೆ ಭೈರಪ್ಪನವರ ಜತೆ ಮಾತಾಡಿಲ್ಲ ಎಂದು ಪತ್ರಿಕೆಗಳಿಗೆ ಹೇಳಿಕೆ ಕೊಡಬಹುದು. ನಮ್ಮ  ಕನ್ನಡದ 24X7 ಸುದ್ದಿವಾಹಿನಿಗಳಿಗೆ ತಿಳಿಸಿದರೆ ಸಾಕು. ಅವರು ಒಂದಿಡೀ ದಿನ ಅದರ ಬಗ್ಗೆ ಕಾರ್ಯಕ್ರಮ ನಡೆಸುತ್ತಾರೆ. ಪೀರ್ ಬಾಷಾ ಅವರೂ  ಈ ನಿಟ್ಟಿನಲ್ಲಿ ಸಹಾಯ ಮಾಡಬಹುದು.

ಪಿ. ಲಂಕೇಶರ ಬರಡು ಮನಸ್ಸಿನ ತಡೆರಹಿತ ಅಶ್ಲೀಲತೆ  ಲೇಖನ ಭೈರಪ್ಪನವರ  ‘ಸಾರ್ಥ’  ಕಾದಂಬರಿಗೆ ಸಂಬಂಧಿಸಿದ್ದು. ತಮ್ಮ ತಂದೆಯವರ ಹೆಸರಿನ ಪ್ರಕಾಶನ ಸಂಸ್ಥೆಯಿಂದ ‘……….. ವಿಕೃತಿ’ ವಿಮರ್ಶಾ ಸಂಕಲನ ಪ್ರಕಟಿಸಿರುವುದರಿಂದ ಭೈರಪ್ಪನವರ ಬಗ್ಗೆ, ಅವರ  ಯಾವುದೇ ಕಾದಂಬರಿಯ ಬಗ್ಗೆ ಲಂಕೇಶ್ ಅವರು ಬರೆದ ಯಾವುದೇ ಲೇಖನ ಸೇರಿಸಲು, ಪ್ರಕಟಿಸಲು ಗೌರಿ ಲಂಕೇಶರು ಸ್ವತಂತ್ರರು. ಅದು ಅವರ ವಿವೇಚನೆಗೆ ಬಿಟ್ಟ ವಿಷಯ.  ಮತ್ತಷ್ಟು ಓದು »

23
ಸೆಪ್ಟೆಂ

ಪುರೋಹಿತಶಾಹಿ ಎಂದರೆ ಬರೀ ಬ್ರಾಹ್ಮಣರಾ?

– ತುರುವೇಕೆರೆ ಪ್ರಸಾದ್

ಗಂಗಾ ಪೂಜೆಪುರೋಹಿತಶಾಹಿ ಎಂದರೆ ಧರ್ಮ, ದೇವರು  ಮತ್ತು ಮಹಾತ್ಮರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಇತರೆ ವರ್ಗಗಳನ್ನು ಅಕ್ಷರ  ಹಾಗೂ ಇನ್ನಿತರ ಸಾಮಾಜಿಕ ಅವಕಾಶಗಳಿಂದ ವಂಚಿಸಿದ  ಒಂದು ಪ್ರಭಾವಶಾಲಿ ವರ್ಗ! ಈ ಪುರೋಹಿತಶಾಹಿ ವ್ಯವಸ್ಥೆಯನ್ನು ತನ್ನ ಅನುಕೂಲಕ್ಕೆ ಹಾಗೂ ಸ್ವಾರ್ಥಕ್ಕೆ ತಿರುಗಿಸಿಕೊಂಡು ಸಮಾಜದ ದುರ್ಬಲ ವರ್ಗಗಳನ್ನು ಶೋಷಿಸುತ್ತದೆ ಎಂಬ ಆರೋಪವನ್ನು ಶತಶತಮಾನಗಳಿಂದ ಮಾಡಿಕೊಂಡು ಬರಲಾಗಿದೆ. ಇವುಗಳಲ್ಲಿ ಮುಖ್ಯವಾದವುಗಳು ಹೀಗಿವೆ.

ಪುರೋಹಿತ ಶಾಹಿ ಅರಿವು ಮತ್ತು ಜ್ಞಾನವನ್ನು ತನ್ನ ಖಾಸಗಿ ಸೊತ್ತು ಎಂದು ಭಾವಿಸಿ  ಸಮಾಜದ ಹಿಂದುಳಿದ ವರ್ಗಗಳಿಗೆ ವಿದ್ಯೆಯನ್ನು ಕಲಿಯಲು ಅವಕಾಶ ನೀಡದೆ ವಂಚಿಸಿತು. ರಾಜಾಶಾಹಿ ಜೊತೆ ಕೈ ಜೋಡಿಸಿ ಹಿಂದುಳಿದವರು  ಸಾಮಾಜಿಕ ಸ್ಥಾನಮಾನ ಪಡೆಯದಂತೆ ನಿರ್ಬಂಧಿಸಿತು. ವ್ಯವಸ್ಥೆ ಮತ್ತು ಸಮುದಾಯದಲ್ಲಿ ತರತಮ ಭಾವನೆಗಳನ್ನು ಸೃಷ್ಟಿಸಿ ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಯಿತು. ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅರಾಜಕತೆಗೆ ಕಾರಣವಾಯಿತು. ಶುದ್ಧ ರೂಪದಲ್ಲಿದ್ದ ಧರ್ಮ ಪುರೋಹಿತ ಶಾಹಿಯಿಂದ ಭ್ರಷ್ಟವಾಯಿತು.ದೇವರು ಮತ್ತು ಧರ್ಮದ ಏಕಸ್ವಾಮ್ಯವನ್ನು ತಮ್ಮದಾಗಿಸಿಕೊಂಡು ದೇವರು, ಧರ್ಮದ ಏಜೆಂಟರಾಗಿ  ಜನರನ್ನು ಮೂಡನಂಬಿಕೆಯ ಕೂಪಕ್ಕೆ ತಳ್ಳಿತು. ಸ್ವತಃ ದುಡಿಮೆ ಮಾಡದೆ ದಾನ ಧರ್ಮದ ಹೆಸರಿನಲ್ಲಿ ಜನರಿಂದ ಆಹಾರ,ವಸ್ತ್ರ ದ್ರವ್ಯಾದಿಳನ್ನು ಕಿತ್ತು ಜೀವನ ನಡೆಸಿತು. ಊಳಿಗಮಾನ್ಯ ಪದ್ಧತಿಯನ್ನು ಜೀವಂತವಿರಿಸಿ ಸಮಾಜದ ಕೆಳಸ್ತರದ ಜನರ ದುಡಿಮೆಯಲ್ಲಿ ಕೂತು ತಿಂದು ಶ್ರಮಸಂಸ್ಕøತಿಯನ್ನು ಧಿಕ್ಕರಿಸಿತು. ನಾವು ಆಸ್ತಿವಂತರು,ನಾವು ಆಳುವವರು,ನಮ್ಮ ಸೇವೆ ಮಾಡಲು, ಬೇಕಾದುದನ್ನೆಲ್ಲಾ ಉತ್ಪತ್ತಿ ಮಾಡಿ ಕೊಡುವವರು ಶೂದ್ರರು ಎಂದು ಪರಿಭಾವಿಸಿ ನಿಕೃಷ್ಟವಾಗಿ ನಡೆದುಕೊಂಡಿತು.

ವಸಾಹತುಶಾಹಿ ವ್ಯವಸ್ಥೆಯೊಂದಿಗೆ ಈ ಪುರೋಹಿತಶಾಹಿ ಶಾಮೀಲಾಗಿ ಅಲ್ಲಿನ ಪ್ರಿಸ್ಟ್ಲಿ ಹುಡ್ ಸಂಸ್ಕøತಿಯನ್ನು ಇಲ್ಲಿನ ವ್ಯವಸ್ಥೆಯ ಅವಿಭಾಜ್ಯ ಅಂಗ ಎನ್ನುವಂತೆ ನೋಡಿಕೊಂಡಿತು. ಭಾರತದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರಿಗೂ ಈ ಪುರೋಹಿತಶಾಹಿ ಸನ್ಯಾಸಿ ದೀಕ್ಷೆ ಕೊಡಲು ತಿರಸ್ಕರಿಸಿತು. ಬ್ರಾಹ್ಮಣ್ಯವನ್ನು ತೊರೆದು ಹೋದ ರಾಮಕೃಷ್ಣ ಪರಮಹಂಸರೇ ಕೊನೆಗೆ ವಿವೇಕಾನಂದರಿಗೆ ಸನ್ಯಾಸ ದೀಕ್ಷೆ ಕೊಟ್ಟರು. ಪುರೋಹಿತಶಾಹಿ ಜಾತಿ ಪದ್ದತಿಯನ್ನು ವಿರೋಧಿಸಿದ ಬಸವಣ್ಣನವರನ್ನು ನಂದಿ ಅವತಾರ ಎಂದು ಬಿಂಬಿಸಿ ಪೂಜೆ ಮಾಡುವಂತೆ ಮಾಡಲಾಗಿದೆ.ದೇವರ ಅಸ್ತಿತ್ವವನ್ನು ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಿದ ಬುದ್ಧನನ್ನೇ ಅವತಾರ ಪುರುಷ ಎಂದು ಬಿಂಬಿಸಲಾಯಿತು. ಹೀಗೆ ಪುರೋಹಿತಶಾಹಿಯ ಮೇಲೆ ಆರೋಪಪಟ್ಟಿ ಸಾಗುತ್ತದೆ..!

ಮತ್ತಷ್ಟು ಓದು »

22
ಸೆಪ್ಟೆಂ

ಮನುಸ್ಮೃತಿ : ಪ್ರಗತಿಪರ ಮತ್ತು ಬುದ್ಧಿಜೀವಿಗಳ ಅನ್ನದಾತ

–      ರಾಕೇಶ್ ಶೆಟ್ಟಿ

ಮನು ಸ್ಮೃತಿಒಂದು ವೇಳೆ “ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ” ಎನ್ನುವ ಪ್ರಶ್ನೆ ನಮ್ಮ ಪ್ರಗತಿಪರ ಮಿತ್ರರರನ್ನು ಒಮ್ಮೆ ಕಾಡಿದರೆ ಅವರು ಯಾರನ್ನು ನೆನಯಬಹುದು…?

“ಮನುಸ್ಮೃತಿ!”

ಹೌದು! ಅವರು ನೆನೆಯಬೇಕಿರುವುದು ಮನುಸ್ಮೃತಿಯನ್ನು.ಯಾಕೆಂದರೆ ಬಹಳಷ್ಟು ಪ್ರಗತಿಪರರು ತಮ್ಮ ದಿನನಿತ್ಯದ ಭಾಷಣಗಳಲ್ಲಿ,ಬರಹಗಳಲ್ಲಿ ಕಡ್ಡಾಯವೇನೋ ಎಂಬಂತೆ ಬಳಸಿಯೇ ಬಳಸುವ ಪದಗಳಲ್ಲಿ  “ಮನು, ಮನುವಾದಿ, ಮನುಸ್ಮೃತಿ, ಮನುವಾದಿ ಸಂವಿಧಾನ” ಇತ್ಯಾದಿಗಳು ಬಂದೇ ಬರುತ್ತವೆ (ಸಿನೆಮಾಕ್ಕೊಬ್ಬ “ಹೀರೋ/ವಿಲನ್”ಅನಿವಾರ್ಯವೆಂಬಂತೆ) ಆ ಪದಗಳನ್ನು ಬಳಸಿ ಬಳಸಿಯೇ ಹೆಸರು,ಹಣ,ಪ್ರಶಸ್ತಿ ಪಡೆದುಕೊಂಡವರ ಪಾಲಿಗೆ “ಮನುಸ್ಮೃತಿ” ಅನ್ನದಾತನೇ ಸರಿ.ಮನುಸ್ಮೃತಿಯ ಅತಿ ದೊಡ್ಡ ಫಲಾನುಭವಿಗಳು ಇವರೇ.

ಮನುವಾದಿ ಸಂವಿಧಾನ,ಮನುಸ್ಮೃತಿಯೇ ಹಿಂದೂಗಳ ಕಾನೂನು ಗ್ರಂಥ ಅಂತೆಲ್ಲ ಈ ಪ್ರಗತಿಪರರು ಮಾತನಾಡುವಾಗ ನನ್ನಂತ ಜನ ಸಾಮಾನ್ಯರಿಗೆ ಯಾರೀತ “ಮನು”?,”ಮನುಸ್ಮೃತಿ” ಎಂದರೇನು? ಎನ್ನುವ ಪ್ರಶ್ನೆಗಳೇಳುತ್ತವೆ.ಈ ಪ್ರಶ್ನೆಗಳು ನಮ್ಮಲ್ಲಿ ಯಾಕೆ ಮೂಡುತ್ತವೆಯೆಂದರೆ,ನನ್ನ ದಿನನಿತ್ಯದ ಜೀವನದಲ್ಲಿ,ನನ್ನ ಅನುಭವ,ಆಚರಣೆಗಳಲ್ಲಿ ನಾನೆಂದಿಗೂ ಈ ಮನುವನ್ನೋ, ಮನುಸ್ಮೃತಿಯನ್ನೋ ಮುಖಾಮುಖಿಯಾಗಿಲ್ಲ.ಹಳ್ಳಿಗಳಲ್ಲಿ ನಡೆಯುತಿದ್ದ/ನಡೆಯುತ್ತಿರುವ ನ್ಯಾಯ ಪಂಚಾಯಿತಿಗಳನ್ನು ನಾನು ನೋಡಿದ್ದೇನೆ ಅಲ್ಲಿ ಎಲ್ಲೂ ಮನುಸ್ಮೃತಿಯ ಆಧಾರದ ಮೇಲೆ ತೀರ್ಮಾನಗಳನ್ನು ನೀಡಿದ್ದನ್ನು ಕಂಡಿಲ್ಲ. ನಿಜವಾಗಿಯೂ “ಮನುಸ್ಮೃತಿ” ಅನ್ನುವುದೊಂದಿದೆ ಎನ್ನುವುದು ನನಗೆ ತಿಳಿದಿದ್ದೇ ಬುದ್ಧಿಜೀವಿಗಳ ಮಾತುಗಳನ್ನು ಕೇಳಲು (ಅದು ನನ್ನ ೨೦ನೇ ವಯಸ್ಸಿನ ನಂತರ) ಆರಂಭಿಸಿದ ಮೇಲೆಯೇ ಹೊರತು,ಅದಕ್ಕೂ ಮೊದಲು ನನ್ನ “ಹಿಂದೂ ಸಂಪ್ರದಾಯ”ಕ್ಕೊಂದು “ಕಾನೂನು ಗ್ರಂಥ”ವಿದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ.ನಮಗೇ ಪರಕೀಯವಾಗಿರುವ ಈ “ಮನು ಮತ್ತು ಮನುಸ್ಮೃತಿ” ಅದೇಗೆ “ಹಿಂದೂ ಕಾನೂನು ಗ್ರಂಥ”ವಾಗುತ್ತದೆ? ಈ ವಾದಗಳು ಹುಟ್ಟಿಕೊಂಡಿದ್ದು ಹೇಗೆ ಅಂತ ನೋಡಲಿಕ್ಕೆ ಹೊರಟರೆ ನಾವು ಹೋಗಿ ನಿಲ್ಲುವುದು ಬ್ರಿಟಿಷರ ಬಳಿ.

ವ್ಯಾಪಾರಕ್ಕೆಂದು ಇಲ್ಲಿಗೆ ಬಂದು ನಮ್ಮ ನೆಲವನ್ನೇ ಕಬಳಿಸಿ ಇಲ್ಲಿ ಕುಳಿತ ಬ್ರಿಟಿಷರಿಗೆ ಇಲ್ಲಿನ ಅಗಾಧ ಸಾಮಾಜಿಕ,ಸಾಂಸ್ಕೃತಿಕ ವೈವಿಧ್ಯಮಯ ಸಮಾಜದ ತಲೆಬುಡ ಅರ್ಥವಾಗಲಿಲ್ಲ.ಇಲ್ಲಿ ಅವರ ಆಳ್ವಿಕೆ ಜಾರಿಗೆ ತರಲಿಕ್ಕಾಗಿ ಅವರಿಗೆ ಅವರ ದೇಶದಲ್ಲಿರುವಂತದ್ದೇ ಒಂದು ವ್ಯವಸ್ಥೆ ಬೇಕು ಎಂದುಕೊಂಡು ಯುರೋಪಿಯನ್ ಸಾಮಾಜಿಕ ವ್ಯವಸ್ಥೆಯನ್ನೇ ನಮ್ಮ ಸಮಾಜಕ್ಕೂ ಸಮೀಕರಿಸಿದರು.ಅವರಿಗೆ ಇಲ್ಲಿ ಮುಖ್ಯವಾಗಿ ತಲೆನೋವು ತರುತಿದ್ದ ವಿಷಯಗಳಲ್ಲಿ “ವ್ಯಾಜ್ಯದ ತೀರ್ಮಾನಗಳು” ಪ್ರಮುಖವಾಗಿದ್ದವು.

ಮತ್ತಷ್ಟು ಓದು »

14
ಸೆಪ್ಟೆಂ

ಧರ್ಮ ಮತ್ತು ಅಂಧತ್ವ

-ಡಾ ಅಶೋಕ್ ಕೆ ಆರ್.

World_Religionಆಗ ನಾನು ಕಲ್ಬುರ್ಗಿಯಲ್ಲಿ ಓದುತ್ತಿದ್ದೆ. ಗೆಳೆಯನೊಬ್ಬನನ್ನು ಕಾಣುವ ಸಲುವಾಗಿ ಕಲ್ಬುರ್ಗಿಯಿಂದ ಲಿಂಗಸೂರು ಕಡೆಗೆ ಹೋಗುವ ಬಸ್ಸನ್ನೇರಿದೆ. ದಾರಿ ಮಧ್ಯದಲ್ಲಿ ಕುಟುಂಬವೊಂದು ಬಸ್ಸಿನೊಳಗೆ ಬಂತು. ಮಗ, ಸೊಸೆ ಮತ್ತು ಅತ್ತೆ ಎಂಬುದು ಅವರ ಮಾತಿನಿಂದ ಅರಿವಾಗುತ್ತಿತ್ತು. ಅದು ಮುಸ್ಲಿಂ ಕುಟುಂಬವೆಂದು ತಿಳಿದಿದ್ದು ಬುರ್ಖಾ ಧರಿಸಿದ್ದ ಸೊಸೆಯ ಉಡುಪಿನಿಂದ. ಉತ್ತರ ಕರ್ನಾಟಕದ ಕಡೆ (ನಂತರದ ದಿನಗಳಲ್ಲಿ ಕರಾವಳಿ ಭಾಗದಲ್ಲೂ ಕಂಡಂತೆ) ಮುಸ್ಲಿಮರನ್ನು ಅವರ ಮಾತಿನ ದಾಟಿಯಿಂದ ಗುರುತು ಹಿಡಿಯಲಾಗುವುದಿಲ್ಲ ನಮ್ಮ ಹಳೆ ಮೈಸೂರು ಭಾಗದಲ್ಲಿ ಗುರುತಿಸುವಂತೆ, ಮತ್ತು ಬಹುತೇಕ ಎಲ್ಲ ಕನ್ನಡ ಚಿತ್ರಗಳಲ್ಲೂ ತೋರಿಸಿರುವಂತೆ. ಅಂದು ಬಸ್ಸೇರಿದ ಕುಟುಂಬದಲ್ಲಿ ಅತ್ತೆ ಉತ್ತರ ಕರ್ನಾಟಕದ ಕಡೆಯ ಸೀರೆಯನ್ನು ಉಟ್ಟಿದ್ದರು, ಸೊಸೆ ಬುರ್ಖಾಧಾರಿಯಾಗಿದ್ದರು.

ಕಳೆದೊಂದು ವಾರದಿಂದ ಅಂತರ್ಜಾಲ ತಾಣಗಳಲ್ಲಿ ಬುರ್ಖಾದ ಬಗೆಗಿನ ಚರ್ಚೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಮೇಲಿನ ಘಟನೆ ನೆನಪಾಯಿತು. ‘ನಾನು ವಿವಾದದ ವಿಷಯಗಳನ್ನು ಎತ್ತಿಕೊಂಡು ಮಾತನಾಡುತ್ತಿದ್ದೇನೋ ಅಥವಾ ನಾನು ಮಾತನಾಡಿದ್ದೆಲ್ಲವೂ ವಿವಾದವಾಗುತ್ತೋ ಗೊತ್ತಿಲ್ಲ’ ಎಂದೇ ಮಾತುಗಳನ್ನಾರಂಭಿಸಿದ್ದ ದಿನೇಶ್ ಅಮೀನ್ ಮಟ್ಟುರವರ ಮಾತುಗಳು ಮತ್ತೆ ಚರ್ಚೆಗಳೊಂದಷ್ಟನ್ನು ಹುಟ್ಟುಹಾಕಿವೆ. ಪತ್ರಕತ್ರ ಬಿ.ಎಂ.ಬಷೀರ್‍ರವರ “ಬಾಡೂಟದ ಜೊತೆ ಗಾಂಧಿ ಜಯಂತಿ” ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ. ಅವರು ಮೋದಿಯ ಬಗ್ಗೆ, ಮಾಧ್ಯಮದ ಬಗ್ಗೆ, ಮಂಗಳೂರಿನ ಕೋಮು ಸಾಮರಸ್ಯದ ಬಗ್ಗೆ, ಆ ಕೋಮು ಸಾಮರಸ್ಯದಿಂದಲೇ ಹುಟ್ಟಿದ ಕೋಮುವಾದತನದ ಬಗ್ಗೆ, ಕೋಮುವಾದಿಗಳ ಅಟ್ಟಹಾಸದ ನಡುವೆಯೇ ನಿಜ ಜಾತ್ಯತೀತ ಮನೋಭಾವದ ಧರ್ಮಸಹಿಷ್ಣುಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಕೊನೆಗೆ ಅವರ ಭಾಷಣ ಚರ್ಚೆಗೊಳಗಾಗುತ್ತಿರುವುದು ಅವರು ಪ್ರಸ್ತಾಪಿಸಿದ ಬುರ್ಖಾ ಪದ್ಧತಿಯ ಬಗೆಗೆ ಮಾತ್ರ! ಅವರು ಬುರ್ಖಾ ವಿಷಯಕ್ಕೆ ಬರುವುದಕ್ಕೆ ಮೊದಲು ಮುಸ್ಲಿಂ ಸಮಾಜದ ಒಳಬೇಗುದಿಗಳನ್ನು ಸಮಾಜದ ಮುಂದೆ ತೆರದಿಡುವ ಕೆಲಸವನ್ನು ಬೋಳುವಾರ ಮೊಹಮದ್, ಸಾರಾ ಅಬೂಬಕ್ಕರ್, ಫಕೀರ್ ಮೊಹಮದ್ ಕಟ್ಪಾಡಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರು ಹಾಕಿದ ದಾರಿಯಲ್ಲಿ ಜ್ಯೋತಿಯನ್ನಿಡಿದು ನಡೆಯುವವರ ಕೊರತೆ ಎದ್ದು ಕಾಣುತ್ತಿದೆ ಎಂಬ ಮಾತುಗಳನ್ನು ಹೇಳಿದ್ದಾರೆ. ಬಿ.ಎಂ.ಬಷೀರ್ ಸ್ವಲ್ಪ ಸಾಫ್ಟ್ ಕಾರ್ನರಿನಲ್ಲಿ ಬರೆಯೋದು ಜಾಸ್ತಿ. ಮುಸ್ಲಿಂ ಸಮುದಾಯದ ತಲ್ಲಣಗಳು ಈ ಪುಸ್ತಕದಲ್ಲಿ ಕಾಣಸಿಗುತ್ತಿಲ್ಲ ಎಂದು ಸಲಹೆಯನ್ನು ಕೊಟ್ಟಿದ್ದಾರೆ. ಮುಸ್ಲಿಮನಾದವನು ಆ ಸಮುದಾಯದ ತಲ್ಲಣಗಳನ್ನು ಸಮರ್ಥವಾಗಿ ಬಿಂಬಿಸಲು ಸಾಧ್ಯ ಎಂಬುದು ಎಷ್ಟು ಸತ್ಯವೋ ಮುಸ್ಲಿಂ ಲೇಖಕನಾದ ಮಾತ್ರಕ್ಕೆ ಮುಸ್ಲಿಂ ಸಮುದಾಯದ ತಲ್ಲಣಗಳನ್ನಷ್ಟೇ ಬರೆಯಬೇಕು ಎಂಬುದೂ ಒಪ್ಪತಕ್ಕ ವಿಷಯವೇನಲ್ಲ. ಮತ್ತಷ್ಟು ಓದು »

12
ಸೆಪ್ಟೆಂ

ಕಿಡಿ ಹಚ್ಚಲು ಸುಟ್ಟು ಬೂಧಿಯಾಗುವ ಹೆಣಕ್ಕೆ ನೂರು ವಿಧಿಗಳ ಅಂತ್ಯ ಸಂಸ್ಕಾರ….

-ಎಸ್.ಎನ್.ಭಾಸ್ಕರ್‍

ihk

 

ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಬುದ್ದಿಶಕ್ತಿ, ತರ್ಕ, ಜ್ಞಾನ, ಚಿತ್ತ ಇವುಗಳ ಕಾರಣವಾಗಿ ಮಾತ್ರ ಮಾನವ ಇತರ ಪ್ರಾಣಿಗಳಿಗಿಂತ ಬಿನ್ನವಾಗಿದ್ದಾನೆಯೇ ಹೊರತು ಉಳಿದಂತೆ ಮಾನವ ಸಹಾ ಮೂಲತಃ ಪ್ರಾಣಿಯೇ ಎಂಬುದು ಎಲ್ಲರು ಒಪ್ಪಿರತಕ್ಕಂತಹ ಸಂಗತಿಯೇ ಆಗಿದೆ. ಈ ಮೂಲಭೂತ ಕ್ರಿಯೆಗಳನ್ನು ಮೀರಿ ನಿಲ್ಲುವುದು ಅಥವಾ ಇವುಗಳನ್ನು ಗೆದ್ದು ಜೀವಿಸಲು ಯತ್ನಿಸುವುದು ತಾನು ಪ್ರಾಣಿಯೇ ಅಲ್ಲ ಎಂದು ತೋರ್ಪಡಿಸುಚ ಯತ್ನವಾಗಿರುತ್ತದೆ. ಅಸಲಿಗೆ ಗೆಲುವಾದರೂ ಯಾರ ವಿರುದ್ದ ? ಸಕಲ ಜೀವಸಂಕುಲದ ವಿರುದ್ದವೇ ? ಈ ಪ್ರಕೃತಿಯ ವಿರುದ್ದವೇ ? ಜೀವಿ ಹಾಗೂ ಪ್ರಕೃತಿಯನ್ನು ಹೊತ್ತ ಭೂಮಂಡಳದ ವಿರುದ್ದವೇ ? ಭೂಮಿಯ ಅಸ್ತಿತ್ವದ ಆಧಾರವಾಗಿರುವ ಸೂರ್ಯವ ವಿರುದ್ದವೇ ? ಅದಕ್ಕೂ ಮೀರಿ ಇಡೀ ವಿಶ್ವದ ವಿರುದ್ದವೇ ? ಸುತ್ತಲೂ ಗೆರೆಯೊಂದನ್ನು ಗೀಚಿ ಮೀರಿ ನಡೆದರೆ ಶಿಕ್ಷಿಸಲು ಭ್ರಮೆಯೊಂದನ್ನು ಹುಟ್ಟಿಸಿ ಹತ್ತು ಹಲವು ನಿಷೇಧಗಳನ್ನು ತಾವೇ ಹೇರಿಕೊಂಡು, ತಿನ್ನಲೊಂದು ನಿಯಮ, ತೇಗಲೊಂದು ನಿಯಮಗಳನ್ನು ಹಾಕಿಕೊಂಡು ಬಾಳುವ ಬದುಕಿನ ಸಾರ್ಥಕ್ಯವಾದರೂ ಏನು ? ಡಾ.ಯು.ಆರ್‍. ಅನಂತ ಮೂರ್ತಿ ಯವರ ಸಂಸ್ಕಾರ ಕಾದಂಬರಿಯ ಒಟ್ಟು ಸಾರಾಂಶ ಸಹಾ ಇದೇ ಆಗಿದೆ. ಅರ್ಥವಿಲ್ಲದ ಆಚಾರಗಳನ್ನು, ತರ್ಕಹೀನ ಸಂಪ್ರದಾಯಗಳನ್ನು ಕಡೆಗಣಿಸಿ ಬದುಕಿನ ನೆಲೆಯನ್ನು ವಿಸ್ತರಿಸಿ ಅರಿಯುವ ಪ್ರಯತ್ನ ಈ ಕಾದಂಬರಿಯಲ್ಲಿ ಕಂಡು ಬರುತ್ತದೆ. ಹಲವು ವಿವಾದಗಳನ್ನೂ ಮೀರಿ ಉನ್ನತ ವೈಚಾರಿಕ ಚಿಂತನೆಯ ಹರಿವಿನೊಂದಿಗೆ ಡಾ. ಯು.ಆರ್‍. ಅನಂತ ಮೂರ್ತಿಯವರ ಬರಹಗಳು ಪ್ರಿಯವೆನಿಸುತ್ತದೆ.

ಮತ್ತಷ್ಟು ಓದು »

4
ಸೆಪ್ಟೆಂ

ವಿಗ್ರಹಾರಾಧನೆಯ ರಹಸ್ಯ ತತ್ವ

– ಮಂಜುನಾಥ ಅಜ್ಜಂಪುರ

ದುರ್ಗೆಮಹರ್ಷಿ ಅರವಿಂದರಂತಹ ಋಷಿಮುನಿಗಳು, ಆನಂದಕುಮಾರಸ್ವಾಮಿ, ಸ್ಟೆಲ್ಲಾ ಕ್ರ್ಯಾಮ್ರಿಶ್, ಅಲಿಸ್ ಬೋನರ್ರಂತಹ ವಿದ್ವಾಂಸರು ಹಿಂದೂ ವಿಗ್ರಹಾರಾಧನೆಯ ಬಗೆಗೆ ಅಧ್ಯಯನ ಮಾಡಿದ್ದಾರೆ, ಧ್ಯಾನಿಸಿದ್ದಾರೆ, ಚಿಂತನೆ ನಡೆಸಿದ್ದಾರೆ. ಮಾನವ ಕೋಟಿಯ ಮನೋಭೂಮಿಕೆಯ ಸಾಮಾನ್ಯ ಮಿತಿಗಳನ್ನು ಮೀರಿದ, ದಾಟಿದ ರೂಪ – ಸತ್ತ್ವ – ಗುಣಲಕ್ಷಣಗಳನ್ನು ಈ ಹಿಂದೂ ವಿಗ್ರಹಗಳಲ್ಲಿ ಕಾಣುತ್ತೇವೆ, ಎಂದು ಅವರೆಲ್ಲಾ ದೃಢವಾಗಿ ಗಟ್ಟಿಯಾಗಿ ಹೇಳುತ್ತಾರೆ. ಇವು ಮನುಷ್ಯರ – ಪ್ರಾಣಿಪಕ್ಷಿಗಳ ಕೇವಲವಾದ ಭೌತಿಕ ರೂಪಗಳ ನೆರಳಚ್ಚುಗಳು ಅಲ್ಲ, ಎಂದೂ ಹೇಳಿದ್ದಾರೆ. ಅವು ಅನಂತತೆಯನ್ನು – ಅಸೀಮವಾದುದನ್ನು ಒಂದು ಪರಿಮಿತಿಯಲ್ಲಿ – ಸೀಮಿತ ಸ್ವರೂಪದಲ್ಲಿ ಕಾಣುವಂತಹ, ಅಮೂರ್ತವಾದುದನ್ನು ಮೂರ್ತಸ್ವರೂಪದಲ್ಲಿ ನೋಡುವಂತಹ ಪರಿಕಲ್ಪನೆಗಳು, ಎನ್ನುತ್ತಾರೆ. ಅವು ಅವುಗಳ ಭೌತಿಕ ಸ್ವರೂಪಗಳನ್ನು ಮೀರಿದ ಅತೀತವಾದುದನ್ನು ಹೇಳುತ್ತವೆ; ಬಹಿರಂಗದಿಂದ ಅಂತರಂಗದೆಡೆಗೆ ನಮ್ಮ ಆಲೋಚನೆಗಳು – ಚಿಂತನೆಗಳು ಹರಿಯುವಂತೆ ಮಾಡುತ್ತವೆ, ಎಂದಿದ್ದಾರೆ.

ಹಿಂದೂ ಶಿಲ್ಪಶಾಸ್ತ್ರಗಳು, ಶಿಲೆಯಲ್ಲಿ – ಲೋಹದಲ್ಲಿ ಮತ್ತು ಬೇರೆ ಬೇರೆ ವಸ್ತು ಬಳಸಿ ಈ ಹಿಂದೂ ವಿಗ್ರಹಗಳನ್ನು ಕೆತ್ತುವಾಗ, ರೂಪಿಸುವಾಗ ಏನೆಲ್ಲಾ ಮಾಡಬೇಕು, ಯಾವೆಲ್ಲಾ ಬಾಹ್ಯರೂಪದ ತಾಂತ್ರಿಕವಾದ ಸೂತ್ರ – ವಿಧಾನಗಳನ್ನು ಅನುಸರಿಸಬೇಕು, ಎನ್ನುವುದನ್ನು ಮಾತ್ರವೇ ಹೇಳುವುದಿಲ್ಲ. ಒಂದು ದೇವತೆಯ ಮೂರ್ತಿಯನ್ನು ಕೆತ್ತುವ – ನಿರ್ಮಿಸುವ ಪೂರ್ವದಲ್ಲಿ, ಆ ದೇವತೆಯ ಸ್ವರೂಪ ಲಕ್ಷಣಗಳನ್ನು ಮನೋಭೂಮಿಕೆಯಲ್ಲಿ ಕಲ್ಪಿಸಿಕೊಳ್ಳುವುದಕ್ಕೆ ಮೊದಲು, ಶಿಲ್ಪಿಯು – ಕಲಾವಿದನು ಎಷ್ಟು ಸಮಯ ಉಪವಾಸವಿರಬೇಕು, ಎಷ್ಟೆಷ್ಟು ಮತ್ತು ಹೇಗೆ ಹೇಗೆ ಪ್ರಾರ್ಥನೆ ಮಾಡಬೇಕು ಮತ್ತು ತನ್ನನ್ನು ತಾನು ಹೇಗೆಲ್ಲಾ ಶುದ್ಧೀಕರಣ ಮಾಡಿಕೊಳ್ಳಬೇಕು, ಎಂಬುದರ ಬಗೆಗೆ ವಿಸ್ತೃತವಾದ ಸಂಹಿತೆಯನ್ನೇ ತಿಳಿಸುತ್ತವೆ. ತದನಂತರವೇ, ಮೂರ್ತಿ ನಿರ್ಮಿಸಲು ಅನುಮತಿ ದೊರೆಯುತ್ತದೆ. ಭೂಮಂಡಲದ ತುಂಬ ವ್ಯಾಪಿಸಿರುವ – ಕಾಣುವ ಬಹುಸಂಖ್ಯೆಯ ದೈವಿಕವಾದ ಶಿಲ್ಪಗಳಲ್ಲಿ – ಚಿತ್ರಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ, ಚಿದಂಬರಂ ದೇವಾಲಯದ ನಟರಾಜ, ಸಾರನಾಥದ ಬುದ್ಧ, ವಿದಿಶಾ ನಗರದ ವರಾಹಮೂರ್ತಿಗಳಂತಹ ಅಪೂರ್ವ ಪ್ರತಿಮೆಗಳ ನಿರ್ಮಿತಿಯ ಆಂತರ್ಯವನ್ನು – ಮಹತ್ತ್ವವನ್ನು, ಈ ಹಿಂದೂ ಶಿಲ್ಪಶಾಸ್ತ್ರಗಳ ಉದಾತ್ತ ನಿಯಮಗಳು ಮಾತ್ರ ವಿವರಿಸಬಲ್ಲವು. ಅಂತಹ ಮಹೋನ್ನತ ವಾದ ಸಂಹಿತೆಯ ಪರಿಚಯವಿಲ್ಲದ ಆಧುನಿಕ ಶಿಲ್ಪಿಗಳು, ಮೂಲ ಶಿಲ್ಪಕಲಾಕೃತಿ ಗಳಂತಹ ಕೌತುಕಗಳನ್ನು – ವಿಸ್ಮಯಗಳನ್ನು ಸೃಷ್ಟಿಸಲಾರರು ಮತ್ತು ಬರಿಯ ಅಣಕುರೂಪಗಳನ್ನು ಮಾತ್ರ ನೀಡಬಲ್ಲರು.
ಮತ್ತಷ್ಟು ಓದು »

3
ಸೆಪ್ಟೆಂ

 ” ಬನ್ನಿ , ಪ್ರೀತಿಯಿಂದ ಬದಲಾಯಿಸೋಣ ನಮ್ಮ ಈ ಭಾರತವನ್ನು “

-ದರ್ಶನ್ ಕುಮಾರ್

india

ಭಾರತ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಅನ್ನಿಸುವುದು, ಈ ದೇಶದ ತುಂಬಾ ಬರಿ ಸಮಸ್ಯೆಗಳ ಸಾಗರವೆ ಇದೆ ಅನ್ನುವಂತಹ ಭಾವನೆ . ನನ್ನ ಪ್ರಶ್ನೆ, ಈ ಸಮಸ್ಯೆಗಳ ಕಾರಣಕರ್ತರು ಯಾರು ???  ಇದಕ್ಕೆ ಉತ್ತರ ಹುಡಕಲು ಹೊರಟರೆ “ಮೊಟ್ಟೆ ಮೊದಲ-ಕೋಳಿ ಮೊದಲ” ಅನ್ನೋ ಪ್ರಶ್ನೆಗಳೇ ನಮಗೆ ಸಿಗೋ ಉತ್ತರಗಳು .  ಕೆಲವರು ಸರ್ಕಾರಗಳೇ ಇದಕ್ಕೆ ಕಾರಣವೆಂದರೆ, ಈ ಸರ್ಕಾರಗಳು ರಚಿಸಲ್ಪಟ್ಟಿದ್ದು ನಮ್ಮಂತಹ ಜನ ಸಾಮಾನ್ಯರಿಂದಲ್ಲವೇ.. ಅನ್ನೋ ಪ್ರಶ್ನೆಗಳ ಸರಣಿ ಮುಂದುವರೆಯುತ್ತದೆ ವಿನಹ ಉತ್ತರ ಸಿಗುವುದಿಲ್ಲ .

ಹೋಗ್ಲಿ ಬಿಡಿ ನಾವು ಏನು ಮಹಾ  ಮಾಡೋಕೆ ಆಗುತ್ತೆ, ಈ ವ್ಯವಸ್ತೆ ಇರೋದೆ ಹೀಗೆಂದು, ಆ ವ್ಯವಸ್ಥೆಯಲ್ಲಿ ನಮ್ಮ ಪಾತ್ರವೇನು ಇಲ್ಲ ಎಂಬಂತೆ ನುಣಿಚಿಕೊಳ್ಳುತ್ತಾ  ಸಾಗಿದ್ದೇವೆ ಅಲ್ಲವೇ? ಈ ಭ್ರಷ್ಟ ವ್ಯವಸ್ತೆಯಲ್ಲಿ  ಯಾವುದಾದರು ಒಂದು ರೀತಿಯಲ್ಲಿ ನಾವು ಕೂಡ ಭ್ರಷ್ಟಾಚಾರಕ್ಕೆ ಸಹಾಯ ಮಾಡಿದ್ದೇವೆ ಅಥವಾ  ಸಹಾಯ ಪಡೆದುಕೊಂಡಿದ್ದೇವೆ ಅಲ್ಲವೇ ?. ಇಂದಿನ ನಮ್ಮ ಭಾರತದಲ್ಲಿ ಮತ್ತೊಮ್ಮೆ ಏನಾದರೂ  ಬುದ್ಧ ಹುಟ್ಟಿದ್ದರೆ “ಸಾವಿಲ್ಲದ ಮನೆಯಲ್ಲಿ ಸಾಸಿವೆ” ತೆಗೆದುಕೊಂಡು ಬಾ ಎಂದು ಹೇಳುವದರ ಬದಲು “ಭ್ರಷ್ಟಾಚಾರ ಇಲ್ಲದ ಜಾಗದಿಂದ ಅಥವಾ ಭ್ರಷ್ಟಾಚಾರವನ್ನೇ ಮಾಡದ ವ್ಯಕ್ತಿಯನ್ನು” ಹುಡುಕಿಕೊಂಡು ಬಾ ಎಂದು ಹೇಳಿರುತ್ತಿದ್ದನೇನೋ ..! ಮತ್ತಷ್ಟು ಓದು »

1
ಸೆಪ್ಟೆಂ

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 3

– ಪ್ರೊ.ರಾಜಾರಾಮ್ ಹೆಗಡೆ,

ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logo

ಕರ್ನಾಟಕದ ಕುರಿತಂತೆ ವೃತ್ತಿಪರ ಇತಿಹಾಸಕಾರರ ಒಂದು ಇತಿಹಾಸ ಬಂದಿದ್ದೇ 1970 ರಲ್ಲಿ. ಅಂದರೆ, ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಇತಿಹಾಸಕ್ಕೇ ಪ್ರತ್ಯೇಕ ಪತ್ರಿಕೆಗಳನ್ನು ಪ್ರಾರಂಭಿಸಿದ ನಂತರ. ಕರ್ನಾಟಕದ ಕುರಿತ ವೃತ್ತಿಪರ ವ್ಶೆಜ್ಞಾನಿಕ ಇತಿಹಾಸವು ಒಂದು ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ವಸಾಹತು ಮತ್ತು ರಾಷ್ಟ್ರೀಯ ಇತಿಹಾಸದ ಚೌಕಟ್ಟಿನಲ್ಲಿ ಮೂಡಿಬಂದಿದೆ. ಏಕೀಕೃತ ಕರ್ನಾಟಕದ ಇತಿಹಾಸವಾಗಿ ಪಿ. ಬಿ. ದೇಸಾಯಿ ಮತ್ತಿತರರು 1970ರಲ್ಲಿ ಹೊರತಂದ A History of Karnataka ದ ಮುನ್ನುಡಿಯಲ್ಲಿ ಈ ಕರ್ನಾಟಕದ ಗಾಥೆಯನ್ನು ಈ ರೀತಿ ಇಡಲಾಗಿದೆ: ‘ ಈ ಶತಮಾನದ ಪ್ರಾರಂಭದ ಏಕೀಕರಣ ಪೂರ್ವದ ಕರ್ನಾಟಕದ ಇತಿಹಾಸವು ಅತ್ಯಂತ ಕತ್ತಲೆಯ ಕಾಲವಾಗಿದೆ, ಇದಕ್ಕೆ ನೆಲವಿರಲಿಲ್ಲ, ಭಾಷೆಯಿರಲಿಲ್ಲ, ಇತಿಹಾಸವಿರಲಿಲ್ಲ.. ಆದರೆ ಈಗ ಕರ್ನಾಟಕಕ್ಕೆ ಇತಿಹಾಸವರುವುದೊಂದೇ ಅಲ್ಲದೇ, ಅದು ವೈಭವೊಪೇತವೂ, ಅಸೂಯೆ ಹುಟ್ಟಿಸುವಂಥದ್ದೂ ಆಗಿದೆ ಎಂಬುದು ಗೊತ್ತಾಗಿದೆ.. ಆದಿಮ ಗತಕಾಲದಿಂದ ಅನೇಕ ಶತಮಾನಗಳ ಸುದೀರ್ಘ ಕಾಲದವರೆಗೆ ಅಡೆತಡೆಯಿಲ್ಲದೇ ಅಭಿಮುಖವಾಗಿ ಅದು ಚಲಿಸುತ್ತಿದೆ… ಕರ್ನಾಟಕದ ಜನತೆಗೆ ಯಾವುದೇ ನಾಗರಿಕ ರಾಷ್ಟ್ರವು ನ್ಯಾಯೋಚಿತವಾಗಿ ಹೆಮ್ಮೆಪಡಬಹುದಾದಂಥ ಉನ್ನತ ಸಾಧನೆಗಳಿವೆ.’ (ಸಂಕ್ಷಿಪ್ತಗೊಳಿಸಲಾಗಿದೆ) ಇಷ್ಟೇ ಅಲ್ಲದೆ, ಪ್ರಸ್ತುತ ಇತಿಹಾಸವು ಏನನ್ನು ನಿರ್ದೇಸುತ್ತದೆ? ಇದು ಒಂದು ಜನತೆಯು ನಾಗರೀಕ ಪೂರ್ವ ಅವಸ್ಥೆಯಿಂದ ನಾಗರೀಕ ಅವಸ್ಥೆಗೆ ಪದಾರ್ಪಣ ಮಾಡಿದ ಕಥನವಾಗಿದೆ. ಸದಾಕಾಲವೂ ಮಹೋನ್ನತ ಭಾರತ ರಾಷ್ಟ್ರದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡೇ ಒಂದು ಒಟ್ಟಂದದ ಸಾಂಸ್ಕೃತಿಕ ಘಟಕವಾಗಿ ಅವರ ವಿಕಾಸ, ಏಳ್ಗೆ, ಅವನತಿ ಮತ್ತು ವಿಘಟನೆಗಳು, ಹಾಗೂ ಆಧುನಿಕ ಕಾಲದಲ್ಲಿ ಮತ್ತೆ ಒಂದು ಏಕೀಕೃತ ಪ್ರಭುತ್ವದ ಜನತೆಯಾಗಿ ಅವರ ಪುನರುತ್ಥಾನ..(ಗಳ ಕಥನವಾಗಿದೆ)’ ಇವುಗಳ ಜೊತೆಗೇ ಇಂದಿನ ಕರ್ನಾಟಕದ ಹೊರಗಿನ ಪ್ರದೇಶಗಳ ಮೇಲೆ ಹಿಂದೆ ಅದಕ್ಕಿದ್ದ ಪ್ರಭುತ್ವ ಮತ್ತು ಪ್ರಭಾವಗಳನ್ನು ‘ಮಹಾನ್ ಕರ್ನಾಟಕ’ (Greater Karnataka) ಎಂಬ ಪರಿಭಾಷೆಯಲ್ಲಿ ವರ್ಣಿಸಲಾಗಿದೆ. ‘ ಅತ್ಯಂತ ಹೆಚ್ಚಿನ ರಾಜರನ್ನು ಸೃಷ್ಟಿಸಿದ ಏಕಮೇವ ಪ್ರದೇಶ ಇದಾಗಿದೆ. ಇಲ್ಲಿನ ರಾಜರು ಓರಿಸ್ಸಾ, ಗೋವಾ, ಗುಜರಾಥ್, ಬಿಹಾರ, ರಾಜಸ್ಥಾನ, ಬೆಂಗಾಲ ಇತ್ಯಾದಿ ಪ್ರದೇಶಗಳಲ್ಲಿ ಆಳಿದ್ದಾರೆ. ಅದರ ಸಂಸ್ಸೃತಿಯ ಪ್ರಭಾವ ಹೊರಭಾಗಗಳಮೇಲೆ ಹೇಗಾಯಿತು, ಹಾಗೂ ‘ಮಹಾನ್ ಭಾರತ’ ಕ್ಕೆ ಕರ್ನಾಟಕದ ಕಾಣಿಕೆ ಏನು? ಇತ್ಯಾದಿಗಳ ಕುರಿತೂ ಪ್ರಸ್ತಾವನೆಯಲ್ಲಿ ಚರ್ಚಿಸಲಾಗಿದೆ.

ಮತ್ತಷ್ಟು ಓದು »