ಓದುಗ, ಸಾಹಿತ್ಯ ಮತ್ತು ವಿಮರ್ಶಕ- ಭಾಗ -೧
– ಮು.ಅ ಶ್ರೀರಂಗ ಬೆಂಗಳೂರು
ಹೊಸಗನ್ನಡ ಸಾಹಿತ್ಯದ ಒಬ್ಬ ಹವ್ಯಾಸಿ ಓದುಗನಾಗಿ ನನ್ನ ಪ್ರಾರಂಭದ ಹೆಜ್ಜೆಗಳಿಂದ ಇಲ್ಲಿಯ ತನಕದ ಸುಮಾರು ನಲವತ್ತು ವರ್ಷಗಳ ಪಯಣವನ್ನು ‘ನಿನ್ನೆಗೆ ನನ್ನ ಮಾತು’ ಎಂಬ ಲೇಖನಗಳ ಸರಣಿಯಲ್ಲಿ ಈಗಾಗಲೇ ‘ನಿಲುಮೆ’ ಬ್ಲಾಗಿನಲ್ಲಿ ಬರೆದಿದ್ದೇನೆ. (ದಿನಾಂಕ ೫/೧೨/೧೩, ೩/೧/೨೦೧೪, ೪/೨/೧೪, ೧೩/೩/೧೪ ಮತ್ತು ೨೫/೪/೧೪. ಇದರಲ್ಲಿ ಮೊದಲ ಎರಡು ಭಾಗಗಳು ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಮತ್ತು ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ). ನಂತರ ೨/೬/೧೪ರಂದು ‘ಸಾಹಿತ್ಯ ಮತ್ತು ವಿಮರ್ಶೆ’ ಎಂಬ ಲೇಖನವನ್ನು ಇದೇ ಬ್ಲಾಗಿನಲ್ಲಿ ಬರೆದಿದ್ದೇನೆ. ಅವುಗಳ ಮುಂದುವರಿಕೆಯಾಗಿ ಈ ಲೇಖನವನ್ನು ಓದುಗರು ಗಮನಿಸಬಹುದು. ಅಥವಾ ಇದೊಂದನ್ನೇ ಪ್ರತ್ಯೇಕ ಲೇಖನವಾಗಿಯೂ ಓದಬಹುದು.