ವಿಷಯದ ವಿವರಗಳಿಗೆ ದಾಟಿರಿ

ಜನವರಿ 23, 2015

14

ನಿಲುಮೆಯ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿಯ ಕುರಿತು ಕ.ಪ್ರ ವರದಿ

‍ನಿಲುಮೆ ಮೂಲಕ

IMG-20150120-WA0013

IMG-20150120-WA0012

Read more from ಲೇಖನಗಳು
14 ಟಿಪ್ಪಣಿಗಳು Post a comment
  1. Shripad's avatar
    Shripad
    ಜನ 23 2015

    ಮೂರ್ಖ, ಮುಠ್ಠಾಳ ಎಂಬ ಬೈಗುಳಗಳನ್ನು ಬಳಸಬಾರದು ಎನ್ನುತ್ತಾರೆ ಮಾಧ್ಯಮ ಸಲಹೆಗಾರರು. ಈ ಎರಡೂ ಪದಗಳಿಗೆ ಇರುವ ಅರ್ಥ ಒಂದೇ: ಅವಿವೇಕಿ, ತಿಳಿಗೇಡಿ, ಬುದ್ಧಿಹೀನ ಇತ್ಯಾದಿ. ಸರ್ಕಾರದ್ದು ಮೂರ್ಖ ಯೋಜನೆ, ಮುಠ್ಠಾಳತನದ ಕೆಲಸ ಎಂದೋ ಅವಿವೇಕದ ಪರಮಾವಧಿ ಎಂದೋ ಇನ್ನು ಬರೆಯುವಂತಿಲ್ಲ!

    ಉತ್ತರ
  2. UNIVERSAL's avatar
    hemapathy
    ಜನ 23 2015

    ವಿದ್ಯಾವಂತ ಮುಠ್ಠಾಳರು, ಅವಿದ್ಯಾವಂತ ಮೂರ್ಖರೇ ತುಂಬಿರುವ ಈ ಲೋಕದಲ್ಲಿ ಇಂತಹ ಕುಚೋದ್ಯಗಳು ಸರ್ವೇ ಸಾಮಾನ್ಯ. ಇಂತಹವುಗಳಿಗೆ ತಲೆ ಕೆಡಿಸಿಕೊಳ್ಳದೇ ನಿಮ್ಮ ಕಾರ್ಯವನ್ನು ಮುಂದುವರೆಸುವುದು ಸೂಕ್ತ.

    ಉತ್ತರ
  3. Ram's avatar
    ಜನ 25 2015

    When is Nilume prakashana book releasing?

    ಉತ್ತರ
  4. ani's avatar
    ani
    ಜನ 25 2015

    ನಿಮ್ಮ ಬ್ಲಾಗಿನಲ್ಲಿ ಬರೆಯುವವರ ಬಗ್ಗೆ ನೀವು ಸಂಪೂರ್ಣ ನಿಯಂತ್ರಣ ಮಾಡಲಾಗದಿದ್ದರೆ ನಿಲುಮೆಯನ್ನು ಮುಚ್ಚಿಬಿಡಿ ಎನ್ನುತ್ತಾರೆ ಅಮೀನ್ ಮಟ್ಟು ಅವರು. ಆದರೆ ಪತ್ರಿಕೆಯಲ್ಲಿ ಸ್ವತಃ ಸಂಪಾದಕರಾದ ಬೆಳಗೆರೆ, ಮತ್ತು ಲಂಕೇಶರು ಎಷ್ಟೊಂದು ಅವಮಾನಕರವಾಗಿ ಕೆಲವು ಪ್ರಮುಖ ವ್ಯಕ್ತಿಗಳ ಬಗ್ಗೆ , ಮತ್ತು ಮಂತ್ರಿಗಳ ಬಗ್ಗೆ , ಮತ್ತು ಮಠಾಧೀಶರ ಬಗ್ಗೆ ಎಷ್ಟೊಂದು ಕೆಟ್ಟದಾಗಿ ಬರೆದಿದ್ದಾರಲ್ಲಾ ಅವೆರಡೂ ಪತ್ರಿಕೆಗಳನ್ನು ಮುಚ್ಚಲು ಏಕೆ ಮಟ್ಟು ಹೇಳಲ್ಲ??

    ಉತ್ತರ
  5. Nagshetty Shetkar's avatar
    Nagshetty Shetkar
    ಜನ 25 2015

    ದಿನೇಶ್ ಅಮೀನ್ ಮಟ್ಟು ಅವರ ಉದ್ದೇಶ ಒಳ್ಳೆಯದೇ ಇರಬಹುದು, ಆದರೆ ನಿಲುಮೆಯ ವ್ಯವಸ್ಥಾಪಕರ ಮೇಲೆ ಪೋಲೀಸ್ ಕಂಪ್ಲೈಂಟ್ ಕೊಟ್ಟಿದ್ದು ಸರಿ ಅಂತ ಅನ್ನಿಸಲಿಲ್ಲ. ಬಹುಶಃ ದಿನೇಶ್ ಅವರಿಗೆ ನಿಲುಮೆಯ ಓದುಗರು ಅವರ ಬಗ್ಗೆ ಮಾಡಿದ ಅವಹೇಳನಕಾರಿ ಕಮೆಂಟುಗಳಿಗಿಂತ ಸಿ ಎಂ ಸಾಹೇಬರನ್ನು ಮೂರ್ಖ ಮು*ಳ ಅಂತ ಕರೆದದ್ದು ಹರ್ಟ್ ಮಾಡಿದೆ. ಆದುದರಿಂದ ನಿಲುಮೆ ಮೇಲೆ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ದಿನೇಶ್ ಅವರ ಕ್ರಮವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಸ್ವಾಮಿನಿಷ್ಠೆಯನ್ನು ಮೆರೆದಿದೆ. ಎಳೆಸು ಹುಡುಗರ ಮೇಲೆ ಪೋಲೀಸ್ ಕಂಪ್ಲೈಂಟ್ ಕೊಡುವ ಬದಲು ಮಾಧ್ಯಮಗಳಲ್ಲಿ ವ್ಯಕ್ತಿಗತ ಟೀಕೆ ಬಗ್ಗೆ ಒಂದು ವಸ್ತುನಿಷ್ಠ ಚರ್ಚೆಗೆ ಕಾರಣವಾಗುವ ಉತ್ತಮ ಅವಕಾಶವನ್ನು ದಿನೇಶ್ ಅವರು ಸ್ವಾಮಿನಿಷ್ಠೆ ಪ್ರದರ್ಶನಕ್ಕಾಗಿ ವ್ಯಯ ಮಾಡಿದ್ದಾರೆ. ಖೇದನೀಯ.

    ಉತ್ತರ
    • Mahesh's avatar
      ಜನ 27 2015

      ನಾಗಶೆಟ್ಟಿ ಶೆಟ್ಕರ್ ರವರೇ, ನಿಜವಾದ ಪ್ರಗತಿಪರವಾದ ಕಾಮೆಂಟ್ ಹಾಕಿದ್ದೀರಿ. ನಕಲಿ ಪ್ರಗತಿಪರರ ಹಾವಳಿಯಲ್ಲಿ ನೀವು ವಿಭಿನ್ನವಾಗಿ ನಿಲ್ಲುತ್ತೀರಿ.

      ಉತ್ತರ
    • bhatmahesht's avatar
      ಜನ 27 2015

      ನಾಗಶೆಟ್ಟಿ ಶೆಟ್ಕರ್ ರವರೇ, ನಿಜವಾದ ಪ್ರಗತಿಪರವಾದ ಕಾಮೆಂಟ್ ಹಾಕಿದ್ದೀರಿ. ನಕಲಿ ಪ್ರಗತಿಪರರ ಹಾವಳಿಯಲ್ಲಿ ನೀವು ವಿಭಿನ್ನವಾಗಿ ನಿಲ್ಲುತ್ತೀರಿ.

      ಉತ್ತರ
    • Nagshetty Shetkar's avatar
      Nagshetty Shetkar
      ಜನ 28 2015

      +1
      ನಿಮ್ಮ ಪ್ರತಿಕ್ರಿಯೆಗೆ ನೀವು ಅಥವಾ ನಿಮ್ಮ ಐಡಿಯಿಂದ ಹೊಕ್ಕ ಬೇರೆಯವರು ಈ ರೀತಿಯಾಗಿ +1 ಹಾಕುವುದನ್ನು ನಿಲ್ಲಿಸಿ. ಧನ್ಯವಾದಗಳು

      – ನಿಲುಮೆ ನಿರ್ವಾಹಕರು

      ಉತ್ತರ
  6. SSNK's avatar
    ಜನ 27 2015

    PK ಎಂಬ ಸಿನಿಮಾ ತೆಗೆದು ಹಿಂದೂ ದೇವದೇವತೆಗಳ, ಮಠಾಧೀಶರ ಕುರಿತಾಗಿ ಬಾಯಿಗೆ ಬಂದಂತೆ ಟೀಕಿಸಬಹುದು.
    ಆ ಸಿನಿಮಾವನ್ನು ಟೀಕಿಸುವವರನ್ನು “ಅಭಿವ್ಯಕ್ತಿ ಸ್ವಾತಂತ್ರ್ಯ”ದ ಹೆಸರಿನಲ್ಲಿ ಬಾಯಿ ಮುಚ್ಚಿಸುವ ಪ್ರಯತ್ನವೂ ನಡೆಯಿತು.
    ಆದರೆ, ನಿಲುಮೆಯಂತಹ ಸಾಮಾಜಿಕ ತಾಣದಲ್ಲಿ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವುದು ಇವರಿಗೆ ಬೇಡ.
    ಹಿಂದುಗಳ ಟೀಕೆಯ ವಿಷಯದಲ್ಲಿ “ಅಭಿವ್ಯಕ್ತಿ ಸ್ವಾತಂತ್ರ್ಯ”ದ ಪ್ರಶ್ನೆಯನ್ನು ಎತ್ತುವವರೇ ನಿಲುಮೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ಕುತ್ತಿಗೆ ಹಿಸುಕುತ್ತಿರುವುದು ವಿಪರ್ಯಾಸ.
    ನಿಲುಮೆಯಲ್ಲಿ ಬರೆಯುತ್ತಿರುವುದು ಸರಿ ಕಾಣದಿದ್ದರೆ, ನಿಲುಮೆಯನ್ನು ಓದಬೇಡಿ. ನಿಮಗೆ ನಿಲುಮೆಯನ್ನು ಓದಲೇಬೇಕೆಂಬ ಹಠವೇಕೆ!?

    ಉತ್ತರ
  7. bhatmahesht's avatar
    ಜನ 27 2015

    ನಿಲುಮೆಯಲ್ಲಿ ಪ್ರಗತಿಪರರ ಬ್ಲಾಗ್ ಗಳಂತೆ ಕಾಮೆಂಟ್ ಮಾಡರೇಶನ್ ಎಂದಿನಿಂದ ಆರಂಭವಾಯಿತು ? ನಿಲುಮೆ ಆರಂಭವಾದ ಇಷ್ಟು ವರ್ಷಗಳಲ್ಲಿ ಎಂದೂ ಸಹ ಕಾಮೆಂಟ್ ಗಳನ್ನು ಮಾಡರೇಟ್ ಮಾಡಿರಲಿಲ್ಲ. ಪ್ರತಿಯೊಬ್ಬನೂ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ಯಾವ ಅಂಜಿಕೆಯಿಲ್ಲದೇ ನಿಲುಮೆಯಲ್ಲಿ ವ್ಯಕ್ತಪಡಿಸಬಹುದಾಗಿತ್ತು ಮತ್ತು ಅದು ತಕ್ಷಣ ಪ್ರಕಟವಾಗುತ್ತಿತ್ತು ಕೂಡ. ನಕಲಿ ಪ್ರಗತಿಪರರ ಹುಸಿ ಬೆದರಿಕೆಗಳಿಗೆ ಬಲಿಯಾಗಿ ನಿಲುಮೆ ತಂಡ ಕಾಮೆಂಟ್ ಗಳನ್ನು ಮಾಡರೇಟ್ ಮಾಡಲು ಆರಂಭಿಸಿತೇ ? ಖಂಡಿತವಾಗಿಯೂ ಇದು ಒಳ್ಳೆಯ ಬೆಳವಣಿಗೆಯಲ್ಲ. ಅತ್ಯಂತ ಬೇಸರವೆನಿಸುತ್ತಿದೆ.

    ಉತ್ತರ
    • Nagshetty Shetkar's avatar
      Nagshetty Shetkar
      ಜನ 28 2015
    • ನಿಲುಮೆ's avatar
      ಜನ 28 2015

      ಮೊದಲನೆಯದಾಗಿ ನಿಲುಮೆ ತನ್ನ ನಿಲುವನ್ನು ಪಾಲಿಸುತ್ತದೆ..ಸರಿಯಿದ್ದಾಗ ಬೆದರುವ ಪ್ರಶ್ನೆ ಬರುವುದೇ ಇಲ್ಲ.

      ಲೇಖನದ ಆಶಯಕ್ಕೆ ಸಂಬಂಧವಿಲ್ಲದ, ಚರ್ಚೆಯನ್ನು ಎತ್ತಲೋ ತೆಗೆದುಕೊಂಡು ಹೋಗಿ ದಿಕ್ಕು ತಪ್ಪಿಸಿ ವಿಷಯ ಸಂಬಂಧಿತ, ಮೌಲಿಕ ಚರ್ಚೆಗಳು ನಡೆಯದಂತೆ ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆದಿದ್ದನ್ನು ಗಮನಿಸಿ ಮಾಡರೇಶನ್ ಜಾರಿಯಿಡಲಾಗಿದೆ. ಸ್ವಲ್ಪ ಕಾಲ ಕಾದು ನೋಡೋಣ..ಸುಧಾರಿಸಿದಾಗ ಮತ್ತೆ ಸಡಿಲು ಬಿಡೋಣ.

      – ನಿಲುಮೆ ನಿರ್ವಾಹಕರು

      ಉತ್ತರ
  8. bhaskarsn1982's avatar
    bhaskarsn1982
    ಫೆಬ್ರ 2 2015

    ಸಂಕಷ್ಟಗಳು, ಘರ್ಷಣೆಗಳು, ನ್ಯಾಯಾಲಯ, ಮೊಕದ್ದಮೆಗಳು ಪತ್ರಿಕಾ ರಂಗದಲ್ಲಿ ಸಾಮಾನ್ಯ. ಮುದ್ರಣ ಮಾಧ್ಯಮದ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದರೆ, ಎಲೆಕ್ಟ್ರಾನಿಕ್ ಮಾದ್ಯಮವಾದರೆ ಪೊಲೀಸ್ ಠಾಣೆಯಲ್ಲಿ ಐ.ಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಾಮಾನ್ಯರಿಂದ ಇಂತಹ ದೂರುಗಳು ಬಂದಲ್ಲಿ ಸಾಧಾರಣವಾಗಿ ಏಕಾ ಏಕಿ ಪ್ರಕರಣ ದಾಖಲು ಮಾಡುವುದಿಲ್ಲ.. ಈ ರೀತಿಯಾಗಿ ನೊಂದ (..?) ಎಲ್ಲರೂ ದೂರು ನೀಡುತ್ತಾ ಹೋದಲ್ಲಿ, ಬಂದ ದೂರುಗಳೆಲ್ಲವನ್ನೂ ಪರಿಗಣಿಸಿ ಪ್ರಕರಣಗಳನ್ನು ದಾಖಲಿಸುತ್ತಾ ಹೋದರೆ ಐ.ಟಿ ಆಕ್ಟ್ ಪ್ರಕರಣಗಳಿಗೇ ಪ್ರತ್ಯೇಕ ಠಾಣೆಗಳನ್ನು ಎಲ್ಲೆಡೆ ತೆರೆಯಬೇಕಾಗುತ್ತದೆ. ಈ ದೂರಿಗೆ ವಿಶೇಷ ಮಹತ್ವ ನೀಡಲಾಗಿರುವ ಹಿನ್ನೆಲೆ ಮೇಲ್ನೋಟಕ್ಕೇ ಎಲ್ಲರ ಅರಿವಿಗೆ ಬರುತ್ತದೆ.
    ನಿಲುಮೆ ಜನಪ್ರಿಯವಾಗುತ್ತಿರುವ, ಮೌಲ್ಯಯುತ ಸಾಮಾಜಿಕ ಚಿಂತನೆಗಳಿಗೆ ಯಶಸ್ವಿ ವೇದಿಕೆಯಾಗುತ್ತಿರುವ ವೇಳೆಯಲ್ಲಿ ಇಂತಹ ಸಂಕಷ್ಟಗಳು ಸಾಮಾನ್ಯ. ಕಾನೂನಿನ ಹೋರಾಟ ಮುಂದುವರೆಸುತ್ತಾ, ತಮ್ಮ ಎಂದಿನ ಹಾದಿಯಲ್ಲಿ ಮತ್ತಷ್ಟು ದೃಢವಾಗಿ ಮುಂದುವರೆಯುವುದು ಸೂಕ್ತ.
    ಯಶಸ್ಸು ನಿಮ್ಮದಾಗಲಿ.

    ಉತ್ತರ
  9. ಸಹ ಚಿಂತಕ's avatar
    ಸಹ ಚಿಂತಕ
    ಫೆಬ್ರ 3 2015

    ಭಾರತದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಸಿವಿಲ್ ಮತ್ತು ಕ್ರಿಮಿನಲ್ ಲಾ ಎರಡರ ಅಡಿಯಲ್ಲೂ ಹಾಕಬಹುದು. (ಇದು ಭಾರತದಲ್ಲಿ ಮಾತ್ರ ಸಾಧ್ಯ. ಬೇರೆ ದೇಶಗಳಲ್ಲಿ ಇದೊಂದು ಸಿವಿಲ್ ಕಾನೂನಿನ ವಿಚಾರ ಮಾತ್ರ.) ಮಾನನಷ್ಟ ಮೊಕದ್ದಮೆಗೆ ಸೇರಿದ ಕ್ರಿಮಿನಲ್ ಕಾನೂನು ಮಾತ್ರ Indian Penal Code (section 499)ರಲ್ಲಿ ಶಾಸನದ ರೂಪದಲ್ಲಿ ನಮೂದಿಸಲಾಗಿದೆ. ಸಿವಿಲ್ ಕಾನೂನಿನಲ್ಲಿ ಇದು ಕೇವಲ judge-made lawಗಳ ಮೇಲೆ ಅವಲಂಬಿಸಿರುತ್ತದೆ.

    ಈ ಹಿನ್ನಲೆಯಲ್ಲಿ ಆಮೀನರಿಗೆ ಒಂದು ಪ್ರಶ್ನೆ: ಒಬ್ಬ ಶಿಕ್ಷಕನಾಗಿ ನೊಂದು ಈ ಕೇಸು ಹಾಕುತ್ತಿದ್ದ ಪಕ್ಷದಲ್ಲಿ ಅವರು ಮಾನನಷ್ಟ ಮೊಕದ್ದಮೆಯನ್ನು ಸಿವಿಲ್ ಕಾನೂನಿನಡಿ ಹಾಕಬಹುದಿತ್ತು. ಆದರೆ ಅವರು ಇದನ್ನು ಕ್ರಿಮಿನಲ್ ಕಾನೂನಿನ ಅಡಿ ಹಾಕಿದ್ದು ಯಾಕೆ?

    ಏಕೆಂದರೆ, ಭಾರತೀಯ ಕಾನೂನು ಪ್ರಕ್ರಿಯೆಯಲ್ಲಿ, ಸಾಮಾನ್ಯವಾಗಿ ಒಂದು ಕ್ರಿಮಿನಲ್ ಮೊಕದ್ದಮೆ ಹೂಡಿದ ನಂತರ
    ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಸಮನ್ಸ್ ಹೊರಡುತ್ತದೆ/ಹೊರಡಿಸಬಹುದು. ಎದುರಾಳಿಯನ್ನು ಹಣ ಮತ್ತು ಅಧಿಕಾರದ ಬಲಪ್ರಯೋಗ ಮಾಡಿ ನಿಯಂತ್ರಿಸಲು ಭಾರತದಲ್ಲಿ ಬಳಸಲಾಗುವ ಸಾಮಾನ್ಯ ಉಪಾಯ.

    ಇದು ನಮ್ಮ ಶಿಕ್ಷಕರ ಒಳ ಮರ್ಮ.

    ಉತ್ತರ

Leave a reply to bhatmahesht ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments