ದೆಹಲಿ ಪಾಲಿಕೆಯ ಫಲಿತಾಂಶದಲ್ಲಿ ಕರ್ನಾಟಕ ಬಿಜೆಪಿಗೇನು ಪಾಠ?
– ವಿನಾಯಕ ಹಂಪಿಹೊಳಿ
ಕಳೆದ ಹತ್ತು ವರ್ಷಗಳಿಂದ ದೆಹಲಿಯ ಮಹಾನಗರ ಪಾಲಿಕೆಯು ಬಿಜೆಪಿಯ ಕೈಯಲ್ಲಿದೆ. ಇಂದು ಸತತ ಮೂರನೇ ಬಾರಿ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ನಿರ್ಮಿಸಿದೆ. ಆದರೆ ಹತ್ತು ವರ್ಷಗಳ ಆಡಳಿತದ ಕುರಿತು ಜನರಿಗೇನೂ ಒಳ್ಳೆಯ ಅಭಿಪ್ರಾಯವಿಲ್ಲ. ಮಹಾನಗರ ಪಾಲಿಕೆಗೆ ಆಯ್ಕೆಯಾದ ಬಿಜೆಪಿಗರಲ್ಲಿ ಹತ್ತು ವರ್ಷ ಭ್ರಷ್ಟಾಚಾರವೂ ವ್ಯಾಪಕವಾಗಿಯೇ ನಡೆದಿತ್ತು. ಎರಡು ವರ್ಷಗಳ ಹಿಂದೆ ರಾಜ್ಯ ಚುನಾವಣೆಯಲ್ಲಿ ಆಪ್ ಪಕ್ಷವು ಪ್ರಚಂಡ ಬಹುಮತದಿಂದ ಗೆದ್ದಿತ್ತು. ೨೦೧೩ ಹಾಗೂ ೨೦೧೫ರಲ್ಲಿ ಆಪ್ ಪಕ್ಷಕ್ಕೆ ದೆಹಲಿಯ ಜನತೆ ವೋಟಿನ ಜೊತೆ ಪ್ರೀತಿಯನ್ನೂ ನೀಡಿತ್ತು.
ಇಂಥ ಜನಪ್ರಿಯ ಸರ್ಕಾರದ ಜೊತೆ ಬಿಜೆಪಿಯ ಹಿಡಿತದಲ್ಲಿದ್ದ ಮಹಾನಗರ ಪಾಲಿಕೆಯು ಜಗಳಕ್ಕಿಳಿಯಿತು. ದೆಹಲಿ ಸರ್ಕಾರವು ಪಾಲಿಕೆಗೆ ಹಣ ಬಿಡುಗಡೆ ಮಾಡುವಲ್ಲಿ ನಿಧಾನಗತಿ ತೋರಿಸುತ್ತಿದೆ ಹಾಗೂ ವೇತನ ಬಿಡುಗಡೆ ಮಾಡದೇ ತಡೆಹಿಡಿದಿದೆ ಎಂದು ಪಾಲಿಕೆ ಆರೋಪಿಸಿತು. ಹಾಗೆಯೇ, ಪಾಲಿಕೆಯ ಕೆಲಸಗಾರರು ಕೆಲಸ ನಿಲ್ಲಿಸಿ ಪ್ರತಿಭಟಿಸಿದ್ದರಿಂದ ಇಡೀ ಊರು ಸ್ವಚ್ಛತೆಯನ್ನು ಕಾಣದೇ ದುರ್ನಾತ ಹಿಡಿಯಿತು. ಪಾಲಿಕೆಯು ೧೦ ವರ್ಷಗಳಲ್ಲಿ ಜನರಿಂದ ಪ್ರಶಂಸೆಗೆ ಒಳಗಾಗುವಂತಹ ಶ್ರೇಷ್ಠ ಸಾಧನೆಯನ್ನೇನೂ ಮಾಡಿರಲಿಲ್ಲ. ಪ್ರಗತಿ ಕಾರ್ಯಗಳ ವೇಗ ಅಷ್ಟಕ್ಕಷ್ಟೇ ಇತ್ತು.
ಅಂಕಣರಂಗ ೧ – ಅನಿಯತಕಾಲಿಕ ಅಂಕಣದ ಅಂಕುರಾರ್ಪಣ!!
