ವಿಷಯದ ವಿವರಗಳಿಗೆ ದಾಟಿರಿ

Archive for

22
ಏಪ್ರಿಲ್

ನಿಮ್ಮ ದೇವರ ಶಕ್ತಿಯನ್ನು ಸಂಶಯಿಸಿದರೆ ಟಿಪ್ಪೂ ಸುಲ್ತಾನರ ಕಥೆಯನ್ನೊಮ್ಮೆ ನೆನಪಿಸಿ.

– ಪ್ರವೀಣ್ ಕುಮಾರ್ ಮಾವಿನಕಾಡು

ದೇವರು, ದೇವಾಲಯ ಎಂದ ಕೂಡಲೇ ಕೆಲವು ವಿಚಾರವಾದಿಗಳು ಅದೊಂದು ಶೋಷಿಸಲೆಂದೇ ಸೃಷ್ಠಿಸಲಾದ ವ್ಯವಸ್ಥೆ ಎಂದುಬಿಡುತ್ತಾರೆ. ಅವರನ್ನು ಅನುಸರಿಸುವ ಇಂದಿನ ಬಹುತೇಕ ಯುವ ಜನರೂ ಕೂಡಾ ದೇವರಿಗೆ ಶಕ್ತಿಯಿಲ್ಲ, ದೇವರನ್ನು ಪೂಜಿಸುವುದರಿಂದ ಸಮಯ ಹಾಳು, ಹಣ ವ್ಯರ್ಥ ಎಂದೆಲ್ಲಾ ತಗಾದೆ ತೆಗೆಯುತ್ತಾರೆ.

ದೇವರು, ದೇವಾಲಯ, ಪೂಜೆ ಇವುಗಳ ಪರ ಯಾರೆಷ್ಟೇ ಸಮರ್ಥಿಸಿಕೊಂಡರೂ ಅದನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ. ವೇದ, ಪುರಾಣ, ಮಹಾಭಾರತ, ರಾಮಾಯಣ, ಸಾವಿತ್ರಿ, ಪ್ರಹ್ಲಾದ … ಉಹೂಂ. ಇವ್ಯಾವುದನ್ನು ಉಲ್ಲೇಖಿಸಿಯೂ ಅವರನ್ನು ಒಪ್ಪಿಸಲು ಸಾಧ್ಯವಿಲ್ಲ. ಅವುಗಳನ್ನೆಲ್ಲಾ ಕಟ್ಟುಕಥೆಗಳೆಂದರೆ ಮುಗಿದೇ ಹೋಯಿತಲ್ಲ, ಮುಂದೆ ಮಾತಾಡುವುದಾದರೂ ಹೇಗೆ? (ಆದರೆ ಅವರು ಮಾತ್ರ ಅದೇ ಕಟ್ಟುಕಥೆಗಳನ್ನು ಬಳಸಿಕೊಂಡು ತಮ್ಮ ವಾದಗಳನ್ನು ಸಮರ್ಥನೆ ಮಾಡಿಕೊಳ್ಳಬಹುದು ಎನ್ನುವುದು ನಿಮಗೆ ನೆನಪಿರಲಿ). ಮತ್ತಷ್ಟು ಓದು »