ಡೋಕ್ಲಾ ಕಾರ್ಮೋಡ ಕರಗಿದ ನಂತರ ಮೋದಿ ಸಮರ್ಥಕರು, ವಿರೋಧಿಗಳು ಮತ್ತದೇ ಗುದ್ದಾಟಕ್ಕಿಳಿದಿದ್ದಾರೆ.
– ಪ್ರಸನ್ನ ಕೆ
ಮೋದಿ ಅಂತದ್ದೇನು ಮಾಡಿದ್ದು ಎಂದು ವಿಶ್ಲೇಷಿಸಲು ಕುಳಿತರೆ ನಮಗೆ ಅಂತ ವಿಶೇಷಗಳು ಸಿಗುವುದಿಲ್ಲ. ಆದರೆ ವಿಷಯ ಇಷ್ಟೇನಾ? ಮೋದಿ ಏನೂ ಮಾಡಲೇ ಇಲ್ವಾ? ಎಂಬ ಪ್ರಶ್ನೆ ಏಳಬಹುದು. ಏನೂ ಮಾಡದೇ ಇಂತಹ ಗೆಲುವುಗಳು, ಯಶಸ್ಸು ಕೇವಲ ಭಕ್ತರ ಹೊಗಳಿಕೆ ವಿರೋಧಿಗಳ ಕೆಸರೆರಚಾಟದಿಂದ ಸಿಗಲು ಸಾಧ್ಯವೆ?
ಮೋದಿಯನ್ನು ಅತಿಯಾಗಿ ಹೊಗಳುವರಾಗಲಿ ಹಿಂದೆ ಮುಂದೆ ತಿಳಿಯದೆ ಕೇವಲ ಸೈದ್ದಾಂತಿಕ ಕಾರಣಕ್ಕಾಗಿ ವಿರೋಧಿಸುವವರು ಅವರ ಕಾರ್ಯಶೈಲಿಯನ್ನು ವಿಮರ್ಷಿಸಲಿಲ್ಲ ಅಥವಾ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಆದರೆ ಮೋದಿ ಹಾಗೆ ಮಾಡಲಿಲ್ಲ, ತನ್ನ ಕೆಲಸವೇನು, ತನ್ನ ಗುರಿ ಏನು ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ, ಆದನ್ನು ಅವರು ಮುಂದುವರೆಸಿದ್ದಾರಷ್ಟೆ. ಅವರು ಗುರಿ ಒಂದೇ ‘ಉತ್ತಮ ಆಡಳಿತ, ದೇಶದ ಒಳಿತು’. ತನ್ನ ವೈಯಕ್ತಿಕ ವರ್ಚಸ್ಸಿಗಿಂತ ದೇಶದ ಒಳಿತು ಮುಖ್ಯ ಎನ್ನುವುದು ಬಂದಾಗ ಬೇರೆಲ್ಲಾ ದಾರಿಗೆ ಬರುತ್ತವೆ. ಮತ್ತಷ್ಟು ಓದು
ಪ್ರಗತಿಪರ ಫ್ಯಾಸಿಸ್ಟುಗಳಿಂದ ಪ್ರಜಾಪ್ರಾಭುತ್ವವ್ವನ್ನು ರಕ್ಷಿಸಬೇಕಾಗಿದೆ
– ರಾಕೇಶ್ ಶೆಟ್ಟಿ
ದೇಶದಾದ್ಯಂತ ಇಂದು ನಡೆಯುತ್ತಿರುವ Intellectual Intolerance ಹುಟ್ಟಿಕೊಂಡಿದ್ದು 16 May 2014 ರಂದು. ಆ ದಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್.ಡಿ.ಎ ಪ್ರಚಂಡ ಬಹುಮತಗಳಿಸಿ ಅಧಿಕಾರ ಹಿಡಿಯದೇ ಹೋಗಿದ್ದರೆ ಇವತ್ತು ಭಾರತದ ಹಾದಿ ಬೀದಿಗಳಲ್ಲಿ ಗಂಜಿಗಿರಾಕಿಗಳು ಎದೆಬಡಿದುಕೊಂಡು ಅಳಬೇಕಿರಲಿಲ್ಲ. ಆದರೆ ಏನು ಮಾಡುವುದು ಹೇಳಿ? ಭಾರತದ ಪಾಲಿಗೆ ಅಚ್ಛೇ ದಿನಗಳು ನಿಕ್ಕಿಯಾಗಿದ್ದವಲ್ಲ ಹಾಗಾಗಿ ಮೋದಿಯವರೇ ಗೆದ್ದರು. ಅಷ್ಟಕ್ಕೂ ಮೋದಿಯವರು ಗೆದ್ದಿದ್ದಕ್ಕೆ, ಗೆದ್ದ ನಂತರ ಯಶಸ್ವಿ ಮತ್ತು ಮೂರು ವರ್ಷಗಳ ಜನಪ್ರಿಯ ಆಡಳಿತವನ್ನು ನೀಡಿ ನಾಲ್ಕನೇ ವರ್ಷದತ್ತ ಶರವೇಗದಲ್ಲಿ ಹೊರಟಿರುವಾಗ ಗಂಜಿಗಿರಾಕಿಗಳದೇಕೆ ಈ ಗೋಳು? ಅವರ ಗೋಳಿನ ಕಾರಣವನ್ನು ಸರಳೀಕರಿಸಿ ಮೂರು ಪ್ರಮುಖ ಕಾರಣಗಳನ್ನು ನೀಡಬಹುದು. ಮತ್ತಷ್ಟು ಓದು