ವಿಷಯದ ವಿವರಗಳಿಗೆ ದಾಟಿರಿ

Archive for

24
ಸೆಪ್ಟೆಂ

ರೊಹಿಂಗ್ಯಾಗಳಿಗಾಗಿ ‘ಭಾರತ’ ತನ್ನತನವನ್ನು ಕಳೆದುಕೊಳ್ಳಬೇಕೇ ?

– ಡ್ಯಾನಿ ಪಿರೇರಾ
ಹಳ್ಳಿಮೈಸೂರು

ಭಾರತ ಎಲ್ಲಾ ಜಾತಿ ಜನಾಂಗಗಳನ್ನು ತನ್ನೊಡಲಲ್ಲಿ ಆಶ್ರಯ ನೀಡಿ ಆದರಿಸಿದ ದೇಶ. ಕೆಲವರು ಆಶ್ರಯ ಬೇಡಿ ಬಂದರೆ ಮತ್ತೆ ಕೆಲವರು ದುರಾಸೆಯಿಂದ ದಾಳಿ ಇಟ್ಟವರು. ಬಂದವರಲ್ಲಿ ಅನೇಕರು ಇಲ್ಲಿ ಬೆರೆತರು, ಕಲಿತರು ಕಲಿಸಿದರು. ಮತ್ತೆ ಕೆಲವರು ಬೆರೆತಂತೆ ಕಂಡರೂ ಬೇರೆಯಾಗಿಯೇ ಉಳಿದಿದ್ದಾರೆ. ಅವರು ಶರೀರ ಮಾತ್ರ ಇಲ್ಲಿದ್ದರೆ ಮನಸ್ಸು ಜಾತಿ-ಮತ-ಪಂಥಗಳಾಚೆ ಯೋಚಿಸಲು ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳೇ ಕಳೆದಿದ್ದರೂ ಸಾಧ್ಯವಾಗಿಲ್ಲ. ಅವರೊಳಗಿನ ಮತಾಂಧತೆಯ ಭಾವ ಇಲ್ಲಿ ಎಲ್ಲವನ್ನೂ ಪಡೆದ ಮೇಲೂ ಹಾಗೆಯೇ ಇದೆ ಎಂದರೆ ಅದು ಸರಿಯಾಗದ ಮನಸ್ಥಿತಿ ಎನ್ನುವ ನಿಷ್ಕರ್ಶೆಗೆ ಬರಬೇಕಾಗುತ್ತದೆ. ಇಲ್ಲಿ ಸಮರಸತೆಯಿಂದ ಬೆರೆತ ಜನಾಂಗವೊಂದು ಈ ನೆಲದ ಸಂಸ್ಕೃತಿಯೊಂದಿಗೆ ಸಮ್ಮಿಳಿತಗೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ್ಗೊಂಡು ಈ ದೇಶದ ಬದುಕಿನೊಂದಿಗೆ ಸಮರಸಗೊಂಡು ಹೊರಗಿನಿಂದ ಬಂದವರಿಗೆ ಮಾತ್ರವಲ್ಲ, ತಾವು ಇಲ್ಲಿನ ಮೂಲದವರು ಎನ್ನುವವರಿಗೂ ಆದರ್ಶಪ್ರಾಯರಾಗಿದ್ದಾರೆ. ಈ ಜನಾಂಗ ಈ ದೇಶದ ಮೂಲಭೂತವಾದಿ ಮನಸ್ಥಿತಿಗೆ ನೀತಿ ಮಾರ್ಗವಾಗಬೇಕಿತ್ತು! ದುರ್ದೈವ ಹಾಗಾಗಲಿಲ್ಲ. ಮತ್ತಷ್ಟು ಓದು »