ವಿಷಯದ ವಿವರಗಳಿಗೆ ದಾಟಿರಿ

Archive for

17
ಜುಲೈ

ಕುಮಾರಸ್ವಾಮಿಯವರ ಕಣ್ಣೀರಿಗೆ ಕಾರಣ ಯಾರು?

-ರಾಕೇಶ್ ಶೆಟ್ಟಿ

‘ಈ ಮೊದಲು, ಕಂಡ ಕಂಡಲ್ಲಿ ನಿದ್ದೆ ಮಾಡುವ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿತ್ತು.ಈಗ ಖರ್ಚಿಫು ಒದ್ದೆ ಮಾಡುವ ಮುಖ್ಯಮಂತ್ರಿಯನ್ನು ಕಾಣುತ್ತಿದೆ.’ ಹೀಗೊಂದು ಜೋಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ನಾನೊಬ್ಬ ಸಾಂದರ್ಭಿಕ ಶಿಶು,ನಾನು ಕರ್ಣ,ನಾನು ವಿಷಕಂಠ… ಹೀಗೆ ಗಂಟೆಗೊಮ್ಮೆ- ಘಳಿಗೆಗೊಮ್ಮೆ ತಮ್ಮನ್ನು ಪೌರಾಣಿಕ ಪಾತ್ರಗಳೊಂದಿಗೆ ಹೋಲಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುರಿತು ತರೇವಾರಿ ಜೋಕುಗಳು ಹರಿದಾಡುತ್ತಿವೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರ ಗಾದಿಯನ್ನು ಪಲ್ಲಟಗೊಳಿಸಿ ಬಿಜೆಪಿಯ ಜೊತೆಗೂಡಿ ೨೦-೨೦ ಒಪ್ಪಂದದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಮೂಲಕ, ರಾಜ್ಯ ರಾಜಕೀಯದಲ್ಲಿ ಒಮ್ಮೆಲೇ ಸ್ಟಾರ್ ಆಗಿ ಹೊರಹೊಮ್ಮಿದವರು ಕುಮಾರಸ್ವಾಮಿಯವರು.ಆಗಿನ ಸಂದರ್ಭದಲ್ಲಿ ಅವರೆಂದೂ ತನ್ನನ್ನು ಹೀಗಿನಂತೆ ‘ಸಾಂದರ್ಭಿಕ ಶಿಶು,ಕರ್ಣ” ಅಂತೆಲ್ಲ ಹೋಲಿಸಿಕೊಂಡು ಕಣ್ಣೀರಿಟ್ಟಿರಲಿಲ್ಲ. ಕಣ್ಣೀರಿಡುವ ಸಂದರ್ಭವೂ ಬಂದಿರಲಿಲ್ಲ.ಯಾಕೆಂದರೆ ಅದು ಒಪ್ಪಿಕೊಂಡು ಆಗಿದ್ದ ಮದುವೆ.ಮದುವೆಯ ನಂತರ ಬರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಆಗಿನ ಸರ್ಕಾರದಲ್ಲಿ ಬಂದರೂ ತಮ್ಮ ೨೦ ತಿಂಗಳ ಅವಧಿಯನ್ನಂತೂ ಕುಮಾರಸ್ವಾಮಿ ಯಶಸ್ವಿಯಾಗಿಯೇ ದಾಟಿದ್ದರು. ಕೇವಲ ದಾಟಿದ್ದು ಮಾತ್ರವಲ್ಲ,ದಶಕಗಳ ಹಿಂದೆ ಅವರು ನೀಡಿದ ೨೦ ತಿಂಗಳ ಆಳ್ವಿಕೆಯನ್ನೇ ಮೊನ್ನೆ ಮೊನ್ನೆಯ ಚುನಾವಣೆಯಲ್ಲೂ ಅವರ ಪಕ್ಷ ಪ್ರಮುಖವಾಗಿ ಬಿಂಬಿಸಿಕೊಂಡಿತ್ತು. ಮಾತೆತ್ತಿದರೆ ಕುಮಾರಸ್ವಾಮಿಯವರ ೨೦ ತಿಂಗಳಲ್ಲಿ ನೀಡಿದ ಆಡಳಿತವನ್ನು ನೋಡಿ ಜನರು ನಮ್ಮ ಪಕ್ಷಕ್ಕೆ ಮತ ನೀಡಬೇಕು ಎನ್ನುತ್ತಿದ್ದರು. ಬಿಜೆಪಿಯೊಂದಿಗಿನ ಸಮ್ಮಿಶ್ರ ಸರ್ಕಾರದ ೨೦ ತಿಂಗಳ ಆಡಳಿತದಲ್ಲಿ ಗಳಿಸಿಕೊಂಡಿದ್ದ ಅಂತಹ ಹೆಸರನ್ನು, ಕಾಂಗ್ರೆಸ್ ಜೊತೆ ಸೇರಿ ೨ ತಿಂಗಳಲ್ಲೇ ಕಳೆದುಕೊಂಡಿದ್ದಾರೆ ಕುಮಾರಸ್ವಾಮಿಯವರು.ಕಳೆದುಕೊಂಡ ನಂತರ ಕಣ್ಣೀರಿಟ್ಟು ಮಾಧ್ಯಮವನ್ನು,ಜನರನ್ನು ದೂಷಿಸಿದರೆ ಏನು ಪ್ರಯೋಜನ? ಅಸಲಿಗೆ ಕುಮಾರಸ್ವಾಮಿಯವರ ಕಣ್ಣೀರಿಗೆ ಕಾರಣ ಯಾರು ಎಂದು ನೋಡಲಿಕ್ಕೆ ಹೋದರೆ ಖುದ್ದು ಅವರು ಹಾಗೂ ಅವರ ತಂದೆಯವರೇ ಎಂದು ಹೇಳಬೇಕಾಗುತ್ತದೆ.

ಮತ್ತಷ್ಟು ಓದು »