ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 26, 2012

1

ಬರ-ಜೋಳಿಗೆ

‍ನಿಲುಮೆ ಮೂಲಕ

– ಅಕುವ

ಬಾನು ನೋಡುತಿದ್ದ ಉಳುವಾತ
ಹನಿಯಾದರೂ ಉದುರಲೆಂದೆ
ಮತ್ತೆ ಬಿಡದ ಗರ
ನಾಡಿಗೆಲ್ಲಾ ಬರ !

ಹೊರಟು ನಿಂತಿಹರು ನಮ್ಮವರು
ವಿದೇಶ ಯಾತ್ರೆಗೆ
ಪ್ರಾಯಶ: ಸೊರಗಿದವರಿಗೆ ತರಲೆಂದು
ಹಸಿವಾಗದ ಮಾತ್ರೆ !
ಸರ್ಕಾರ ತಂಡ ಕಟ್ಟಿದೆ
ಇನ್ನೇನೋ ಬೆಳೆಸಲಿದೆ ಪಾದಯಾತ್ರೆ
ಗರ ಬಡಿದರೂ
ಇವರಿಗೆಲ್ಲಾ ವರ !

ಬಾರದ ಮಳೆಯಾದರೂ
ಒಮ್ಮೊಮ್ಮೆ ಸುರಿಯಬಹುದು.
ಈ ಪುಡಾರಿಗಳ ಜೋಳಿಗೆಯಂತು
ಎಂದೂ ಸೋರದು !
ಎಂದೂ ಸೋರದು !

ಚಿತ್ರ ಕೃಪೆ : ರೆಡಿಫ಼್.ಕಾಂ

Read more from ಕವನಗಳು
1 ಟಿಪ್ಪಣಿ Post a comment
  1. ashok kumar Valadur's avatar
    ashok kumar Valadur
    ಆಗಸ್ಟ್ 27 2012

    “ನಿಲುಮೆ ” ಗೆ ಧನ್ಯವಾದಗಳು …….

    ಉತ್ತರ

Leave a reply to ashok kumar Valadur ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments