ವಿಷಯದ ವಿವರಗಳಿಗೆ ದಾಟಿರಿ

Archive for

26
ಸೆಪ್ಟೆಂ

ಮಹಿಳೆಯರ ಸಮಸ್ಯೆಗಳು – ಒಂದು ನೋಟ

– ಮು.ಅ ಶ್ರೀರಂಗ, ಬೆಂಗಳೂರು

ವಿಧವೆಯರ ಸಮಸ್ಯೆಗಳುನಮ್ಮ ಬುದ್ಧಿಜೀವಿಗಳು ಸಾಹಿತಿಗಳು ಅದರಲ್ಲೂ ಮುಖ್ಯವಾಗಿ ಸ್ತ್ರೀವಾದಿ ಸ್ತ್ರೀಸಂವೇದನೆ ಎಂಬ ಹೆಸರುಗಳಿಂದ ಪ್ರಸಿದ್ಧರಾಗಿರುವ ಒಂದು ಸಾಕಷ್ಟು ದೊಡ್ಡ ಗುಂಪು ಮಾಡುತ್ತಿರುವ ಒಂದು ಪ್ರಮಾದವೆಂದರೆ,ನಮ್ಮ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂದಿನ ಎಲ್ಲಾ ಸಮಸ್ಯೆಗಳಿಗೆ ಒಬ್ಬ ಊಹಾತ್ಮಕ ಶತ್ರುವನ್ನು ತಂದು ಜನತೆಯ ಮುಂದಿರಿಸಿ,  ಆ ಎಲ್ಲಾ ಸಮಸ್ಯೆಗಳಿಗೂ ಈತನೇ ಕಾರಣ ಎಂದು ದೂಷಿಸುತ್ತಿರುವುದು. ಆ ಊಹಾತ್ಮಕ ಶತ್ರುವೇ “ಮನು”ಮತ್ತು ಆತನ ಹೆಸರಿನಲ್ಲಿದೆ ಎನ್ನಲಾಗುತ್ತಿರುವ “ಮನು ಸಂಹಿತೆ”. ಜತಗೆ ಆತನ ವಂಶಜರಂತೆ ವರ್ತಿಸುತ್ತಿರುವ ಇಂದಿನ ಮೇಲ್ಜಾತಿಗಳು. ಈ ಬುದ್ಧಿಜೀವಿಗಳು ತಮ್ಮ ವಾದಕ್ಕೆ ಪೂರಕವಾಗಿ “ಬ್ರಿಟೀಶ್ ಚರಿತ್ರಕಾರರು”ಬರೆದ “ನಮ್ಮ ಇತಿಹಾಸ”ವನ್ನು ತಮ್ಮ ವಾದಕ್ಕೆ ಸಾಕ್ಷ್ಯ ಎಂಬಂತೆ ತೋರಿಸುತ್ತಿದ್ದಾರೆ.
ಇಂದು ಆಗಾಗ ಚರ್ಚೆಗೆ ವಸ್ತುವಾಗಿರುವ ಎರಡು ವಿಷಯಗಳೆಂದರೆ:-

(೧) ಮಹಿಳೆಯರ  “ಆ ಮೂರುದಿನಗಳ” ಮತ್ತು (೨) “ವಿಧವೆಯರ”ಸಮಸ್ಯೆಗಳು.

ಮತ್ತಷ್ಟು ಓದು »