ರಾಫೆಲ್ ಯುದ್ಧ ವಿಮಾನದ ಸತ್ಯಾಸತ್ಯತೆಗಳು
– ರಾಕೇಶ್ ಶೆಟ್ಟಿ
ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮುಗಿದ ನಂತರ ಕೇಂದ್ರದ ರಾಜಕೀಯ ವಲಯದಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿರುವುದು ರಾಫೆಲ್ ಯುದ್ಧ ವಿಮಾನ ಖರೀದಿಯ ವಿವಾದ.ಕಳೆದ ವಾರದ ಅಂಕಣದಲ್ಲಿ ಸಂಸದ ರಾಹುಲ್ ಗಾಂಧೀ ಸಂಸತ್ತಿನಲ್ಲಿ ರಾಫೆಲ್ ಬಗ್ಗೆ ಮಾತನಾಡಿದ್ದನ್ನು ಅದಕ್ಕೆ ಭಾರತ ಹಾಗೂ ಫ್ರಾನ್ಸ್ ಸರ್ಕಾರ ನೀಡಿದ ಸ್ಪಷ್ಟಿಕರಣದ ಬಗ್ಗೆ ಹೇಳಿದ್ದೆ.
ಇದೆಲ್ಲದರ ಮೂಲವಿರುವುದು ೨೦೦೧ರಲ್ಲಿ ಭಾರತೀಯ ವಾಯುಪಡೆ (IAF) ತನಗೆ ೧೨೬ ಮೀಡಿಯಂ ಮಲ್ಟಿ ರೋಲ್ ಕಂಬ್ಯಾಟ್ ಯುದ್ಧ ವಿಮಾನಗಳ ಅವಶ್ಯಕತೆಯಿದೆ ಎನ್ನುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದಾಗ. ಸಾಧಾರಣವಾಗಿ IAF ಬಳಿ ಕಡಿಮೆಯೆಂದರೂ ೪೫ ಸ್ಕ್ವಾಡ್ರನ್ಸ್ ನಷ್ಟು ಯುದ್ಧವಿಮಾನಗಳು ಇರಬೇಕು ಅಥವಾ ಕನಿಷ್ಟವೆಂದರೂ ೩೯ಸ್ಕ್ವಾಡ್ರನ್ಸ್ ನಷ್ಟು ಇರಬೇಕು ಎನ್ನುವ ನಿಯಮವಿದೆ.ನಮ್ಮ ಬಳಿಯಿದ್ದ ಮಿಗ್ ೨೧ ಮತ್ತು ಮಿಗ್ ೨೭ರ ಜೀವಿತಾವಧಿಗಳು ಮುಗಿಯುತ್ತ ಬಂದಿದ್ದವು ಮೇಲಾಗಿ,ಆ ಯುದ್ಧ ವಿಮಾನಗಳ ಮಿತಿಯನ್ನು ಕಾರ್ಗಿಲ್ ಯುದ್ಧ ಮನಗಾಣಿಸಿತ್ತು ಕೂಡ. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ಬೇಡಿಕೆ IAF ನಿಂದ ಬಂದಿತ್ತು. ೨೦೦೭ರಲ್ಲಿ ಈ ಕುರಿತು RFP (request for proposals) ಸಲ್ಲಿಸಿತ್ತು. ೬ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಗಳು ಬಿಡ್ ಸಲ್ಲಿಸಿದ್ದವು. ತೀವ್ರತರನಾದ ಪರೀಕ್ಷೆಗಳ ಮೂಲಕ ಅಂತಿಮವಾಗಿ ರಾಫೆಲ್ ಮತ್ತು ಯುರೋ ಫೈಟರ್ ಟೈಫೂನ್ ವಿಮಾನಗಳು ಅಂತಿಮ ಸುತ್ತಿನಲ್ಲಿ ಉಳಿದಿದ್ದವು.ಇದರಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದು ರಾಫೆಲ್.ಇಷ್ಟೆಲ್ಲಾ ಆಗುವಾಗ ೨೦೧೨ ಬಂದಿತ್ತು. ಸರಿ ಸುಮಾರು ಹನ್ನೊಂದು ವರ್ಷಗಳು ವರದಿ,ಪ್ರಪೋಸಲ್ ಹಾಗೂ ಯುದ್ಧ ವಿಮಾನದ ಆಯ್ಕೆಯಲ್ಲಿಯೇ ಕಳೆದು ಹೋಗಿತ್ತು. ಹಾಗೂ ಹೀಗೂ ರಾಫೆಲ್ ಖರೀದಿಯ ಕುರಿತ ವ್ಯಾವಹಾರಿಕ ಚರ್ಚೆಗಳು ಶುರುವಾಗಿದ್ದು ೩೧ ಜನವರಿ ೨೦೧೨ ರ ನಂತರ.
ಬಾಡೂಟವೊಂದರ ಐತಿಹ್ಯ…!
– ಸುಜಿತ್ ಕುಮಾರ್
ಹೊತ್ತು ಮುಳುಗಿ ಅದಾಗಲೇ ಕಪ್ಪು ಆಗಸದಲ್ಲಿ ತುಂತುರು ಚುಕ್ಕಿಗಳು ಮಿನುಗತೊಡಗಿವೆ. ತನ್ನೊಟ್ಟಿಗಿದ್ದ ನಾಲ್ವರು ಸೈನಿಕರು ತಮ್ಮ ತಮ್ಮ ಖಡ್ಗಗಳಿಂದ ಖಣಖಣ ಶಬ್ದವನ್ನು ಹೊಮ್ಮಿಸುತ್ತಾ ಯುದ್ಧಕ್ಕೆ ತಯಾರಿ ನೆಡೆಸುತ್ತಿದ್ದಾರೆ. ಯುದ್ಧದ ಸ್ಥಳ ತಾನಿರುವ ಜಾಗದಿಂದ ಸುಮಾರು ಐವತ್ತು ಕ್ರೋಶ ದೂರದ್ಲಲಿದೆ. ಆನೆ, ಕುದುರೆ, ಒಂಟೆಗಳ ಜೊತೆಗೆ ಎರಡೂ ಕಡೆಯ ಲಕ್ಷಾಂತರ ಸೈನಿಕರ ರೋಷ, ಭಯ, ಧೈರ್ಯ, ಚೀರುವಿಕೆ, ರೋಧನೆ, ರಕ್ತ, ಬಳಲಿಕೆ, ದುಃಖ, ಸಾವು.. ಅಬ್ಬಬ್ಬಾ ಎಷ್ಟೆಲ್ಲಾ ಭಾವಸ್ಥಿತಿಗಳುಗಳು! ನಾನೊಬ್ಬ ಅಡುಗೆಯವ. ಡೇರೆಯಲ್ಲಿರುವ ದಿನಸಿಗಳನ್ನು ಕಾಪಾಡುವ ಸಲುವಾಗಿ ಇರುವ ಈ ನಾಲ್ಕು ಸೈನಿಕರ ರಣೋನ್ಮಾದ ಭಾವಗಳನ್ನು ಕಂಡೇ ಮೈಕೈಗಳೆಲ್ಲ ನಡುಗುತ್ತಿವೆ, ಇನ್ನು ಯುದ್ಧವನ್ನು ಸಾಕ್ಷಾತ್ ಕಣ್ಣುಗಳಿಂದ ನೋಡುವ ಧೈರ್ಯವಿದೆಯೇ? ಯಾ ಅಲ್ಲಾ… ನನ್ನನು ಜೀವಮಾನವಿಡೀ ಒಬ್ಬ ಅಡುಗೆಯುವನಾಗಿಯೇ ಇರಿಸು. ಯುದ್ಧದಲ್ಲಿ ಸಾಧ್ಯವಾಗದ್ದನ್ನು ನನ್ನೀ ಪಾಕಜ್ಞಾನದಲ್ಲಿ ಗಳಿಸಿಕೊಳ್ಳುವೆ. ಸಾಧಿಸುವೆ. ಮರುಭೂಮಿಯ ನೆಲಕ್ಕೆ ನೀರನ್ನು ಸುರಿದಂತೆ ಕಣ್ಮುಚ್ಚಿ ಬಿಡುವಷ್ಟರಲ್ಲಿ ತಟ್ಟೆಯನ್ನೇ ಖಾಲಿ ಮಾಡುವ ದೇಹಗಳಿಗೆ ರುಚಿಕಟ್ಟಾದ ಊಟವನ್ನು ಮಾಡಿ ತಣಿಸುವುದು ಸಹ ಏನು ಸುಲಭದ ಕೆಲಸವೇ? ಅದೇನೇ ಆಗಲಿ. ನನ್ನ ಅಡುಗೆಯ ಕೈಚಳಕದಿಂದ ಸೈನಿಕರೆಲ್ಲರ ವಿಶ್ವಾಸವನ್ನು ಗಳಿಸಕೊಳ್ಳಬೇಕು. ಮುಂದೊಂದು ದಿನ ರಾಜರಮನೆಯ ಮುಖ್ಯ ಅಡುಗೆಯ ಭಟ್ಟನಾಗಿ ನಾಲ್ಕಾರು ಜನರಿಂದ ಸಲಾಂಗಳನ್ನು ಗಿಟ್ಟಿಸಿಕೊಳ್ಳಬೇಕು ಎನ್ನುತ್ತಿರುವಾಗಲೇ ಒಬ್ಬ ಸೈನಿಕ ಏದುಸಿರು ಬಿಡುತ್ತ ನಾನಿರುವಲ್ಲಿಗೆ ಓಡಿ ಬಂದು ‘ರಣರಂಗದಲ್ಲಿ ಯುದ್ಧ ತೀವ್ರಗೊಂಡಿದ್ದು ಅದು ಬೇಗನೆ ಮುಗಿಯುವ ಹಾಗೆ ಕಾಣುತ್ತಿಲ್ಲವಂತೆ. ನಾಳೆಯ ಅಪರಾಹ್ನದ ಹೊತ್ತಿಗೆ ಗಾಯಗೊಂಡ ಹತ್ತಿಪ್ಪತ್ತು ಸೈನಿಕರು ನಮ್ಮ ಡೇರೆಗೆ ವಿಶ್ರಾಂತಿಗೆ ಬರಲಿದ್ದಾರಂತೆ.ಅತಿ ರುಚಿಕಟ್ಟಾದ ಮಾಂಸದ ಊಟವನ್ನು ಮಾಡಿ ಬಡಿಸಿ ಅವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಜ್ಞೆ ಸ್ವತಃ ಶೆಹನ್ ಶಾ ರಿಂದ ಬಂದಿದೆ..’ ಪಾರಿವಾಳದ ಕಾಲಿಗೆ ಕಟ್ಟಿದ್ದ ಬಟ್ಟೆಯ ಮೇಲೆ ಬರೆದಿದ್ದ ಅಕ್ಷರಗಳನ್ನು ಓದುತ್ತಾ ನನಗೆ ಕೇಳುವಂತೆ ಹೇಳಿದನಾತ.
ಶೆಹನ್ ಶಾರ ಹೆಸರು ಕೇಳಿಯೇ ಅರ್ಧ ಅಧೀರನಾದ ನಾನು ಮುಂದೇನು ಮಾಡಬೇಕೆಂದು ತೋಚಲಿಲ್ಲ. ಗೋಧಾಮಿನಲ್ಲಿ ಹೇಳಿಕೊಳ್ಳುವಂತಹ ವಿಶಿಷ್ಟ ಪದಾರ್ಥಗಳೇನೂ ಇರಲಿಲ್ಲ. ದೇಶದ ಉತ್ತರ ಪ್ರಾಂತ್ಯದಿಂದ ತರಿಸಿರುವ, ರಾಜಮನೆಯಲ್ಲಿ ಮಾಡುವ ವಿಶಿಷ್ಟವಾದ ಅಕ್ಕಿಯೇನೋ ಇದೆ. ಜೊತೆಗೆ ಒಂತಿಷ್ಟು ಈರುಳ್ಳಿ, ಶುಂಠಿ, ಕೆಂಪುಮೆಣಸು, ತುಪ್ಪ, ಸಂಬಾರ, ಹಸಿರುಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗಗಳಿಂದ ಹಾಗು ಇತರೆ ಮಸಾಲ ಪದಾರ್ಥಗಳಿಂದ ಕೂಡಿದ ಒಂದೆರೆಡು ಗಂಟುಗಳಿವೆ. ತುಸು ಹೊತ್ತು ಸುಮ್ಮನಾದ ನಾನು ನನ್ನೊಳಗೆ ಜರುಗುತ್ತಿದ್ದ ಗೊಂದಲದ ಅಲೆಗಳನ್ನು ಮುಖದ ಮೇಲೆ ವ್ಯಕ್ತಪಡಿಸಲಾಗದೆ ಕೂತೆ. ಸೈನಿಕ ಅತ್ತ ಹೋದಮೇಲೆ ಮತ್ತದೇ ಚಿಂತೆ ಕಾಡತೊಡಗಿತು. ಹಸಿರು ಬಾಳೆಎಲೆಯ ಮೇಲೆ ಅಚ್ಚಬಿಳಿಯ ಹಬೆಯಾರುವ ಬಿಸಿಬಿಸಿಯಾದ ಅನ್ನದ ರಾಶಿಯೊಂದಿದ್ದರೆ ಒಂದಿನಿತು ಉಪ್ಪಿನ ಕಾಯಿಯೂ ಮುಷ್ಟಾನ್ನ ಭೋಜನದ ಸವಿಯನ್ನು ಒದಗೀಸಿತು. ಜೊತೆಗೆ ಮಡಕೆಯಲ್ಲಿ ತುಂಬಿ ಹಸಿ ಮಣ್ಣಿನಲ್ಲಿ ಹುದುಗಿಸಿರುವ ಮೊಸರೆನೋ ಇದೆ. ಒಂದೆರೆಡು ಸೌಟು ಗಟ್ಟಿ ಮೊಸರು, ಬೆಂಕಿಯ ಕೆಂಡಕ್ಕೆ ಒಡ್ಡಿ ಬಾಡಿಸಿದ ಒಂದು ಸಣ್ಣ ಗಾತ್ರದ ಈರುಳ್ಳಿ, ಒಂದೆರೆಡು ಎಳೆಯ ಹಸಿರುಮೆಣಸಿನ ಕಾಯಿ ಜೊತೆಗೆ ತುರಿತುರಿಯಾದ ಬಿಸಿಮಾಡಿದ ತುಪ್ಪ… ಇಷ್ಟು ಸಾಕು ಸೈನಿಕರ ನಾಲಿಗೆಯನ್ನು ತಣಿಸಲು. ಮೇಲಾಗಿ ಸೈನಿಕರು ಪೆಟ್ಟು ತಿಂದು ಧಣಿದು ಬಂದವರು. ಹಸಿದು ಬರಬಿದ್ದ ಹೊಟ್ಟೆಗೆ ಏನಾದರೇನು? ಎಂದು ಸಮಾಧಾನ ತಂದುಕೊಳ್ಳಲು ಪ್ರಯತ್ನಿಸಿದರೂ ರಾಜನ ಕಟ್ಟಾಜ್ಞೆಯನ್ನು ಅಷ್ಟು ಹಗುರವಾಗಿ ಪರಿಗಣಿಸಲು ಸಾಧ್ಯವಾಗಲಿಲ್ಲ. ತುಸು ಹೊತ್ತು ಆಕಾಶವನ್ನು ಧಿಟ್ಟಿಸತೊಡಗಿದೆ. ಕೂಡಲೇ ಉಪಾಯವೊಂದು ಹೊಳೆಯಿತು. ಪರಿಣಾಮ ರಾತ್ರಿಯ ಊಟಕ್ಕೆ ಮಾಡುವ ಅಡುಗೆಯಲ್ಲಿ ಆ ಪ್ರಯೋಗವನ್ನು ಮಾಡಬಯಸಿದೆ. ಆದರೆ ಗುರಿ ಗೊತ್ತಿಲ್ಲದ ಕವಲೊಡೆದ ಹಲವು ದಾರಿಗಳ ಕೇಂದ್ರಬಿಂದುವಿನಲ್ಲಿ ನಿಂತಂತಾಯಿತು. ಊಟ ರುಚಿಯಾಗದಿದ್ದರೆ ನಾಲ್ವರು ಸೈನಿಕರನ್ನು ಹೇಗೋ ಸಂಭಾಳಿಸಬಹುದು. ಆದರೆ ಹತ್ತಾರು ಗಜಕಾಯದ ದಾಂಡಿಗರ ಮುನಿಸು ನನ್ನ ಪ್ರ್ರಾಣಕ್ಕೇ ಕುತ್ತು ತರುವುದಂತೂ ಸುಳ್ಳಲ್ಲ!
ಕಾರ್ಗಿಲ್ ವಿಜಯೋತ್ಸವ ಕಲಿಸಿದ ಪಾಠಗಳು
– ಅಜಿತ್ ಶೆಟ್ಟಿ ಹೆರಂಜೆ
ಇಂದು ಕಾರ್ಗಿಲ್ ವಿಜಯ ದಿವಸದ ವರ್ಷಾಚರಣೆಯನ್ನು ನಾವು ದೇಶದಾದ್ಯಂತ ಮಾಡುತ್ತಿದ್ದೇವೆ. 1999ಮೇ ತಿಂಗಳಲ್ಲಿ ಪ್ರಾರಂಭವಾದ ಈ ಯುದ್ಧ ಸುಮಾರು 3 ತಿಂಗಳುಗಳ ಕಾಲ ನಡದು 27 ನೆ ಜುಲೈ 1999 ಕ್ಕೆ ಮುಕ್ತಾಯಗೊಂಡಿತು. ಈ ಭೀಷಣ ಯುದ್ಧದಲ್ಲಿ ಭಾರತ ಒಟ್ಟು ತನ್ನ 724 ವೀರ ಸೈನಿಕರನ್ನು ಕಳೆದುಕೊಂಡಿತು. ಈ ಯುದ್ಧಕ್ಕೆ ಪ್ರತಿ ದಿನ ಸರ್ಕಾರಕ್ಕೆ 10 ರಿಂದ 15 ಕೋಟಿಯಷ್ಟು ವೆಚ್ಚವಾಗಿತ್ತು. ಹಾಗಿದ್ದಾಗ ಈ ಯುದ್ಧಕ್ಕೆ ಸರ್ಕಾರ ಖರ್ಚು ಮಾಡಿದ ಒಟ್ಟು ವೆಚ್ಚ ನೀವೇ ಅಂದಾಜಿಸಿ. ಈ ಯುದ್ಧ ನಮಗೆ ಕಲಿಸಿದ ಪಾಠ ಅನೇಕ. ಅದರಲ್ಲೂ 21ನೆ ಶತಮಾನದ ಹೊಸ್ತಿಲಿನಲ್ಲಿ ನಡೆದ ಈ ಯುದ್ಧ, ಯಾವುದೇ ಯುದ್ಧವನ್ನು ಗೆಲ್ಲಲು ಕೇವಲ ಸೈನ್ಯ ಶಕ್ತಿ ಅಷ್ಟೇ ಅಲ್ಲ ಅತ್ಯಾಧುನಿಕ ತಂತ್ರಜ್ಞಾನವೂ ಅತ್ಯಂತ ಆವಶ್ಯಕ ಎನ್ನುವ ಪಾಠವನ್ನು ನಮ್ಮ ದೇಶ ರಾಜಕೀಯ ನಾಯಕರಿಗೆ ಕನ್ನಡಿ ತೋರಿಸಿ ಕೆನ್ನೆಗೆ ಬಾರಿಸಿ ಹೇಳಿತು.ಕಾರ್ಗಿಲ್ ಯುದ್ಧ ನಮಗೆ ಕಲಿಸಿದ ಮತ್ತು ನಾವು ಅದರಿಂದ ಕಲಿತ ಪಾಠವೇನು.? ಬನ್ನಿ ತಿಳಿಯೋಣ.
ಸಾಮಾನ್ಯವಾಗಿ ಯುದ್ಧವನ್ನು ಗೆಲ್ಲಬೇಕಾದರೆ ವೈರಿ ಪಡೆಯನ್ನು ಕಟ್ಟಿ ಹಾಕಿ ಅವರ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದಮೇಲೆ, ವೈರಿಗಳ ವಿರುದ್ಧ ಯಾವ ರೂಪದ ಕಾರ್ಯಾಚರಣೆ ಮಾಡಬೇಕು, ಅದಕ್ಕೆ ಬೇಕಾಗಿರುವ ಸೈನ್ಯದ ಸಂಖ್ಯೆ ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು ಇತ್ಯಾದಿಗಳನ್ನು ನಿರ್ಧರಿಸಿದಮೇಲಷ್ಟೇ ಯುದ್ಧ ತಂತ್ರ ರೂಪಿಸುವುದು. ದುರಾದೃಷ್ಟವಶಾತ್ ಕಾರ್ಗಿಲ್ ಯುದ್ಧ ಆರಂಭವಾಗಿ ಅದನ್ನು ಬಹುತೇಕ ಮುಗಿಸುವ ತನಕ ನಮಗೆ ನಿಖರವಾಗಿ ಶತ್ರುಗಳು ಯಾರು ಅವರು ನಿಜವಾಗಿಯೂ ಪಾಕಿಸ್ತಾನ ಹೇಳಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರಾವಾದಿಗಳೋ ಅಥವಾ ಪಾಕಿಸ್ತಾನದ ಸೈನಿಕರೋ ಅನ್ನುವುದು ಮತ್ತು ಈ ವೈರಿ ಪಡೆಯ ಸಂಖ್ಯೆ ಎಷ್ಟು ಇವರು ಅಡಗಿರುವ ಆಯಕಟ್ಟಿನ ಸ್ಥಳಗಳು ಯಾವುದು, ಅವರಲ್ಲಿ ಎಷ್ಟು ಮದ್ದು ಗುಂಡುಗಳ ದಾಸ್ತಾನುಗಳಿವೆ. ಅವರಲ್ಲಿ ಇರೋ ಶಸ್ತ್ರಾಸ್ತ್ರಗಳ ಬಗ್ಗೆ ಯಾವುದೆ ಸ್ಪಷ್ಟ ಮಾಹಿತಿಗಳಿಲ್ಲದೆ ಕೇವಲ ಒಂದು ಅಂದಾಜಿನ ಮೆಲೆ ಯುದ್ದ ಮಾಡಿದ್ದೆವು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಕುರುಡ ಆನೆಯನ್ನು ವರ್ಣಿಸಿದಂತೆ, ನಮಗೆ ಅಂದು ಕಾರ್ಗಿಲ್ ಒಳಗೆ ನುಸುಳಿ ಬಂದ ಪಾಕಿಸ್ತಾನದ ನುಸುಳುಕೋರರ ಬಗ್ಗೆ ಇದ್ದ ಮಾಹಿತಿ.
ಮೇ ೩, ೧೯೯೯ ರಂದು ತಾಂಶಿ ನಾಮ್ ಗ್ಯಾಲ್ ಎನ್ನುವ ಸ್ಥಳೀಯ ಕುರುಬ, ಬಂಜೂ ಟಾಪ್ ನಲ್ಲಿ ಕೆಲವು ಉಗ್ರರ ಚಟುವಟಿಕೆ ಬಗ್ಗೆ ಮಾಹಿತಿ ಕೊಟ್ಟ ನಂತರ ಯುದ್ಧ ಶುರುವಾಯಿತು. ಕಾರ್ಗಿಲ್ ಯುದ್ಧ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಮಯ ಭಾರತೀಯ ಸೈನ್ಯ ಸುಮಾರು ೬೦%ದಷ್ಟು ಯುದ್ಧವನ್ನು ಪೂರೈಸಿದ ಸಮಯ. ಅಂತಹ ಸಂದರ್ಭದಲ್ಲಿ ಭಾರತೀಯ ಸೈನ್ಯದ ಓರ್ವ ಅಧಿಕಾರಿ ಕಾರ್ಗಿಲ್ ಪರ್ವತ ಶ್ರೇಣಿಯ ಉಗ್ರರ ಗುಂಡಿಗೆ ಹುತಾತ್ಮನಾಗುವ ಮುಂಚೆ ತಮ್ಮ ಮೇಲಧಿಕಾರಿಗೆ ಕಾಗದ ಬರೆದು ಹೇಳುತ್ತಾ, “ನಾವು ಯಾರೊಡನೆ ಯುದ್ಧ ಮಾಡುತ್ತಿದ್ದೇವೆ ಎನ್ನುವುದೇ ನಮಗೆ ಗೊತ್ತಿಲ್ಲ. ಇದು ನಮ್ಮನ್ನ ಪ್ರಪಾತದತ್ತ ಕೊಂಡೊಯ್ಯುಯುತ್ತಿದೆ”.. ಎಂದು ಹೇಳಿದ್ದರು.ಇದು ಕಾರ್ಗಿಲ್ ಯುದ್ಧದಲ್ಲಿ ಸೈನ್ಯಕ್ಕೆ ಸರ್ಕಾರಕ್ಕೆ ಇದ್ದ ಕ್ಲಾರಿಟಿ.ಇದೇ ಕಾರಣಕ್ಕೆ ನಾವು ಕ್ಯಾಪ್ಟನ್ ಸೌರಬ್ ಕಾಲಿಯ, ಕ್ಯಾಪ್ಟನ್ ವಿಕ್ರಮ್ ಭಾತ್ರ ಕ್ಯಾಪ್ಟನ್ ಅಹುಜಾ ಮುಂತಾದವರು ಸೇರಿದಂತೆ ಸುಮಾರು 724 ಮಂದಿ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು. ಕ್ಯಾಪ್ಟನ್ ನಚಿಕೆತ್ ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ಪಡಬಾರದ ಕಷ್ಟ ಸಹಿಸಬೇಕಾಗಿ ಬಂತು. ಇದು ಅಂದಿನ ಸರ್ಕಾರ ಮತ್ತು ಸೈನ್ಯದ ಕಾರ್ಯವಿಮುಖತೆ ಯಿಂದ ಆದ ಘಟನೆಯಲ್ಲ. ಬದಲಾಗಿ ಹಿಂದಿನ ಸರ್ಕಾರಗಳ ಅವರು ಆಡಳಿತದ ಸಮಯದಲ್ಲಿ ಅಂದಿನ ಯದ್ದಗಳು ಕಲಿಸಿದ ಪಾಠವನ್ನು ಕಲಿಯದೆ,ಕರ್ತವ್ಯ ವಿಮುಖರಾಗಿದ್ದು ಕಾರಣ.ಅಂದು ನಮ್ಮಲ್ಲಿ ತಂತ್ರಜ್ಞಾನದ ಮುಖಾಂತರ ವೈರಿಪಡೆಯ ಗತಿವಿಧಿ,ಸಂಖ್ಯೆ ಮತ್ತು ಅವರು ಹೊಂದಿರುವ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ತಿಳಿಯುವ,ಗುಪ್ತಚಾರಿಕೆ ಮಾಡುವ ಯಾವುದೇ ವ್ಯವಸ್ಥೆ, ಸಾಧನ ಸಲಕರಣೆಗಳು ಇರಲಿಲ್ಲ.ಇಂತಹಾ ಉಪಯುಕ್ತ ಮಾಹಿತಿ ಕೊಡುವ ಬೇಹುಗಾರಿಕ ಉಪಗ್ರಹಗಳು ಇರಲಿಲ್ಲ..!! ಕಾರ್ಗಿಲ್ ಯುದ್ಧದಲ್ಲಿ ನಾವು ಬಹುತೇಕ ಸೈನಿಕರನ್ನು ಪಾಕಿಸ್ತಾನದ ಸೈನ್ಯದ ವಿರುದ್ದ ನೇರ ಯದ್ದದಲ್ಲಿ ಕಳೆದುಕೊಂಡದ್ದಲ್ಲ. ಬದಲಿಗೆ ವೈರಿಗಳ ಬಗ್ಗೆ ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಕಳೆದುಕೊಂಡದ್ದು.ಈ ರೀತಿ ಇಪ್ಪತ್ತೊಂದನೇ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನ ಎಷ್ಟು ಅವಶ್ಯಕ ಎನ್ನುವುದು ಕಾರ್ಗಿಲ್ ಯದ್ದ ಕಲಿಸಿದ ಮೊತ್ತಮೊದಲ ಪಾಠ..!!
ಹಿಟ್ಲರನ ಗೊಬೆಲ್ಸ್ ಮತ್ತು ಕಾಂಗ್ರೆಸ್ಸಿನ ರಾಹುಲ್
– ರಾಕೇಶ್ ಶೆಟ್ಟಿ
ಮೆಗಾಸೀರಿಯಲ್ಲುಗಳನ್ನೂ ಮೀರಿಸುವಷ್ಟು ಬೋರ್ ಹೊಡೆಸುವಂತಹ ಬಹಳಷ್ಟು ಕಾಮಿಡಿ ಶೋಗಳು ಈಗ ವಿವಿಧ ಚಾನೆಲ್ಲುಗಳಲ್ಲಿ ಬರುತ್ತವೆ. ಈ ಕಾಮಿಡಿ ಶೋಗಳಲ್ಲಿ ಮಾಡುವ ಕಾಮಿಡಿಗೆ,ಕಾರ್ಯಕ್ರಮದ ಪೇಯ್ಡ್ ತೀರ್ಪುಗಾರರು,ಸ್ಪರ್ಧಿಗಳು ಹಾಗೂ ಸ್ಟುಡಿಯೋದಲ್ಲಿ ಕುಳಿತವರನ್ನು ಹೊರತುಪಡಿಸಿ, ಟಿವಿಯಲ್ಲಿ ಇವರ ಕಾಮಿಡಿ ನೋಡುವ ಪ್ರೇಕ್ಷಕರ ಮುಖದಲ್ಲಿ ನಗು ಬಾರದಿರುವುದು,ಈ ಕಾಮಿಡಿ ಶೋಗಳ ಸ್ಪೆಷಾಲಿಟಿ.ಕಳೆದ ಶುಕ್ರವಾರ, ಚಾನೆಲ್ಲುಗಳಲ್ಲಿನ ಇಂತಹ ಕಳಪೆ ಕಾಮಿಡಿ ಶೋಗಳು ಟಿಆರ್ಪಿ ಕಳೆದುಕೊಂಡಿದ್ದವು.ಅಸಲಿ ಕಾಮಿಡಿಯೆಂದರೇನು ಎನ್ನುವುದನ್ನು ಲೋಕಸಸಭಾ ಚಾನೆಲ್ಲಿನಲ್ಲಿ ಶ್ರೀಮಾನ್ ರಾಹುಲ್ ಗಾಂಧಿಯವರು ತಮ್ಮ ಭಾಷಣದ ಮೂಲಕ ತೋರಿಸುತ್ತಿದ್ದರು. ನಕಲಿ ಅಪ್ಪುಗೆ-ಕ್ಲಾಸ್ ರೂಮಿನ ಪಡ್ಡೆ ಹುಡುಗನಂತೆ ಕಣ್ಣು ಹೊಡೆಯುವ ಚೇಷ್ಟೆಗಳೆಲ್ಲ ಬಹುಶಃ ಲೋಕಸಭಾ ಚಾನೆಲ್ಲಿನಲ್ಲೂ ಮೊದಲಬಾರಿಗೆ ಕಂಡ ದೃಶ್ಯಗಳು. ಗಂಜಿಗಿರಾಕಿಗಳು ಬರೆದುಕೊಟ್ಟ ನಾಟಕೀಯ ಸ್ಕ್ರಿಪ್ಟ್ ಮೂಲಕ ಜನರಲ್ಲಿ ನಗುಬುಗ್ಗೆ ಹರಿಸಿದ್ದೇ ರಾಹುಲ್ ಹೆಚ್ಚುಗಾರಿಕೆ.
ಲೋಕಸಭೆಯಲ್ಲಿ ನರೇಂದ್ರ ಮೋದಿಯವರ ಸರ್ಕಾರದ ವಿರುದ್ಧ, ಒಂದು ಕಾಲದ ಮಿತ್ರ ಪಕ್ಷ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಧ್ಯಕ್ಷ,ಸಂಸದ ರಾಹುಲ್ ಗಾಂಧೀ ಹೆಚ್ಚು ಕಡಿಮೆ ಒಂದುಗಂಟೆಗಳ ಕಾಲ ಮಾತನಾಡಿದರು. ರಾಜಕೀಯಕ್ಕೆ ಬಂದು ೧೩ ವರ್ಷಗಳಾದ ನಂತರ ಬರೆದುಕೊಟ್ಟ ಭಾಷಣವನ್ನು ಓದಿಕೊಂಡು ತುಸು ಗಂಭೀರವಾಗಿ ಅವರು ಮಾತನಾಡಿದ್ದು ಬಹುಶಃ ಇದೇ ಮೊದಲು. ಆತ ಮಾತನಾಡುವ ಶೈಲಿ ಬದಲಾಗಿದೆ,ಎದ್ದು ಕಾಣುತ್ತಿದ್ದ ಆತ್ಮವಿಶ್ವಾಸದ ಕೊರತೆಯನ್ನು ದನಿಯನ್ನು ಬದಲಿಸಿಕೊಳ್ಳುವ ಮತ್ತು ಆಕ್ರಾಮಕ ಶೈಲಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಿರುವಂತೆ ತೋರಿತು and Ofcourse ರಾಹುಲ್ ಭಾಷಣವೆಂದ ಮೇಲೆ ಇರಲೇಬೇಕಿದ್ದ ತಪ್ಪುಗಳು ಅಲ್ಲಿದ್ದವು. ಆದರೆ ಒಂದುಗಂಟೆಯ ಕಾಲದ ಈ ಭಾಷಣ ಅದೇ ತಲೆಮಾಸಿದ ಹಳಸಲು ಸುಳ್ಳಿನ ಕಂತೆಗಳಲ್ಲದೇ ಅದರಲ್ಲೇನು ವಿಷಯ ಇರಲಿಲ್ಲ.ಅದೂ ಈ ಮೊದಲಿನಿಂದಲೂ ರಾಹುಲ್ ಮತ್ತವರ ಕಾಂಗ್ರೆಸ್ ಪಕ್ಷ ಹೋದಲ್ಲಿ ಬಂದಲ್ಲಿ ನರೇಂದ್ರ ಮೋದಿವಯವರ ವಿರುದ್ಧ ಮಾಡುತ್ತಿರುವ ಸುಳ್ಳು ಆಪಾದನೆಗಳ ದೋಷಾರೋಪಣ ಪಟ್ಟಿಯನ್ನೇ ರಾಹುಲ್ ಮತ್ತೆ ಲೋಕಸಭೆಯಲ್ಲಿ ರಿಪೀಟ್ ಟೆಲಿಕಾಸ್ಟ್ ಮಾಡಿಸಿದರೇ ಹೊರತು ಅದರಲ್ಲಿ ನಯಾ ಪೈಸೆಯ ಹೊಸತನವಾಗಲಿ, ವೈಚಾರಿಕತೆಯಾಗಲಿ,ಸತ್ಯವಾಗಲಿ ಇರಲೇ ಇಲ್ಲ.ಕೆಲವು ದಿನಗಳ ಹಿಂದಿನ ಅಂಕಣದಲ್ಲಿ ‘ಗಂಜಿಗಿರಾಕಿಗಳೆಂಬ ಗೊಬೆಲ್ಸ್ ಗಳು” ಅಂತೊಂದು ಅಂಕಣವನ್ನು ಬರೆದಿದ್ದೆ. ಮೊನ್ನೆಯ ರಾಹುಲ್ ಭಾಷಣ ಕೇಳಿದ ನಂತರ ಈ ಗೊಬೆಲ್ಸ್ ತಂತ್ರವೇ ಕಾಂಗ್ರೆಸ್ಸಿನ ಚುನಾವಣಾ ಸ್ಟಾಟರ್ಜಿಯೆಂದು ಎಂದು ಊಹಿಸಬಹುದು. ಮತ್ತಷ್ಟು ಓದು
ಕುಮಾರಸ್ವಾಮಿಯವರ ಕಣ್ಣೀರಿಗೆ ಕಾರಣ ಯಾರು?
-ರಾಕೇಶ್ ಶೆಟ್ಟಿ
‘ಈ ಮೊದಲು, ಕಂಡ ಕಂಡಲ್ಲಿ ನಿದ್ದೆ ಮಾಡುವ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿತ್ತು.ಈಗ ಖರ್ಚಿಫು ಒದ್ದೆ ಮಾಡುವ ಮುಖ್ಯಮಂತ್ರಿಯನ್ನು ಕಾಣುತ್ತಿದೆ.’ ಹೀಗೊಂದು ಜೋಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ನಾನೊಬ್ಬ ಸಾಂದರ್ಭಿಕ ಶಿಶು,ನಾನು ಕರ್ಣ,ನಾನು ವಿಷಕಂಠ… ಹೀಗೆ ಗಂಟೆಗೊಮ್ಮೆ- ಘಳಿಗೆಗೊಮ್ಮೆ ತಮ್ಮನ್ನು ಪೌರಾಣಿಕ ಪಾತ್ರಗಳೊಂದಿಗೆ ಹೋಲಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುರಿತು ತರೇವಾರಿ ಜೋಕುಗಳು ಹರಿದಾಡುತ್ತಿವೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರ ಗಾದಿಯನ್ನು ಪಲ್ಲಟಗೊಳಿಸಿ ಬಿಜೆಪಿಯ ಜೊತೆಗೂಡಿ ೨೦-೨೦ ಒಪ್ಪಂದದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಮೂಲಕ, ರಾಜ್ಯ ರಾಜಕೀಯದಲ್ಲಿ ಒಮ್ಮೆಲೇ ಸ್ಟಾರ್ ಆಗಿ ಹೊರಹೊಮ್ಮಿದವರು ಕುಮಾರಸ್ವಾಮಿಯವರು.ಆಗಿನ ಸಂದರ್ಭದಲ್ಲಿ ಅವರೆಂದೂ ತನ್ನನ್ನು ಹೀಗಿನಂತೆ ‘ಸಾಂದರ್ಭಿಕ ಶಿಶು,ಕರ್ಣ” ಅಂತೆಲ್ಲ ಹೋಲಿಸಿಕೊಂಡು ಕಣ್ಣೀರಿಟ್ಟಿರಲಿಲ್ಲ. ಕಣ್ಣೀರಿಡುವ ಸಂದರ್ಭವೂ ಬಂದಿರಲಿಲ್ಲ.ಯಾಕೆಂದರೆ ಅದು ಒಪ್ಪಿಕೊಂಡು ಆಗಿದ್ದ ಮದುವೆ.ಮದುವೆಯ ನಂತರ ಬರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಆಗಿನ ಸರ್ಕಾರದಲ್ಲಿ ಬಂದರೂ ತಮ್ಮ ೨೦ ತಿಂಗಳ ಅವಧಿಯನ್ನಂತೂ ಕುಮಾರಸ್ವಾಮಿ ಯಶಸ್ವಿಯಾಗಿಯೇ ದಾಟಿದ್ದರು. ಕೇವಲ ದಾಟಿದ್ದು ಮಾತ್ರವಲ್ಲ,ದಶಕಗಳ ಹಿಂದೆ ಅವರು ನೀಡಿದ ೨೦ ತಿಂಗಳ ಆಳ್ವಿಕೆಯನ್ನೇ ಮೊನ್ನೆ ಮೊನ್ನೆಯ ಚುನಾವಣೆಯಲ್ಲೂ ಅವರ ಪಕ್ಷ ಪ್ರಮುಖವಾಗಿ ಬಿಂಬಿಸಿಕೊಂಡಿತ್ತು. ಮಾತೆತ್ತಿದರೆ ಕುಮಾರಸ್ವಾಮಿಯವರ ೨೦ ತಿಂಗಳಲ್ಲಿ ನೀಡಿದ ಆಡಳಿತವನ್ನು ನೋಡಿ ಜನರು ನಮ್ಮ ಪಕ್ಷಕ್ಕೆ ಮತ ನೀಡಬೇಕು ಎನ್ನುತ್ತಿದ್ದರು. ಬಿಜೆಪಿಯೊಂದಿಗಿನ ಸಮ್ಮಿಶ್ರ ಸರ್ಕಾರದ ೨೦ ತಿಂಗಳ ಆಡಳಿತದಲ್ಲಿ ಗಳಿಸಿಕೊಂಡಿದ್ದ ಅಂತಹ ಹೆಸರನ್ನು, ಕಾಂಗ್ರೆಸ್ ಜೊತೆ ಸೇರಿ ೨ ತಿಂಗಳಲ್ಲೇ ಕಳೆದುಕೊಂಡಿದ್ದಾರೆ ಕುಮಾರಸ್ವಾಮಿಯವರು.ಕಳೆದುಕೊಂಡ ನಂತರ ಕಣ್ಣೀರಿಟ್ಟು ಮಾಧ್ಯಮವನ್ನು,ಜನರನ್ನು ದೂಷಿಸಿದರೆ ಏನು ಪ್ರಯೋಜನ? ಅಸಲಿಗೆ ಕುಮಾರಸ್ವಾಮಿಯವರ ಕಣ್ಣೀರಿಗೆ ಕಾರಣ ಯಾರು ಎಂದು ನೋಡಲಿಕ್ಕೆ ಹೋದರೆ ಖುದ್ದು ಅವರು ಹಾಗೂ ಅವರ ತಂದೆಯವರೇ ಎಂದು ಹೇಳಬೇಕಾಗುತ್ತದೆ.
ಅರಬ್ ರಾಷ್ಟ್ರವಾದ ಎಂಬ ಟ್ಯಾಂಕು; ಷರಿಯಾ ಎಂಬ ಪೈಪು!
– ಸಂತೋಷ್ ತಮ್ಮಯ್ಯ
ಬಹುತೇಕರಿಗೆ ರಾಮಾಯಣದ ಈ ಚಿರಪರಿಚಿತವಾದ ಪ್ರಸಂಗ ವಿಚಿತ್ರವಾಗಿ ಕಾಣಿಸಬಹುದು.
ಸುಬಾಹು ಮತ್ತು ಮಾರೀಚರು ಪದೇ ಪದೇ ಅಡ್ಡಿ ಪಡಿಸುತ್ತಿದ್ದರೂ ವಿಶ್ವಾಮಿತ್ರನೇಕೆ ಪದೇ ಪದೇ ಅಲ್ಲೇ ಯಾಗ ಮಾಡುತ್ತಿದ್ದ ಎನಿಸಬಹುದು. ಜನ್ಮತಃ ಕ್ಷತ್ರಿಯನಾಗಿದ್ದ ವಿಶ್ವಾಮಿತ್ರನೇ ಏಕೆ ಸುಬಾಹು ಮಾರೀಚರನ್ನು ಕೊಲ್ಲಲಿಲ್ಲ ಎಂಬ ಪ್ರಶ್ನೆಯೂ ಮೂಡಬಹುದು. ಹಾಗಾದರೆ ಸುಬಾವು-ಮಾರೀಚರು ವಿಶ್ವಾಮಿತ್ರನಿಗಿಂತಲೂ ಪರಾಕ್ರಮಿಗಳಾಗಿದ್ದರೇ ಎಂದು ಸಂಶಯವನ್ನೂ ಹುಟ್ಟಿಸಬಹುದು. ಅಂಥ ಪ್ರಶ್ನೆ, ಸಂಶಯ, ಗೊಂದಲಗಳು ಹುಟ್ಟುವುದಕ್ಕೆ ಕಾರಣಗಳೂ ಇವೆ. ಏಕೆಂದರೆ ಪ್ರತೀ ಭಾರಿ ಉಪಟಳ ಕೊಟ್ಟಾಗಲೂ ವಿಶ್ವಾಮಿತ್ರ ಅಷ್ಟೇ ಶ್ರದ್ಧೆಯಿಂದ ಯಾಗಕ್ಕೆ ಅಣಿಯಾಗುತ್ತಿದ್ದ. ಪ್ರತೀ ಬಾರಿಯೂ ರಾಕ್ಷಸರು ಹೊಸ ಹೊಸ ವಿಧಾನಗಳ ಮೂಲಕ ಯಾಗಕ್ಕೆ ಅಡ್ಡಿಪಡಿಸುತ್ತಲೇ ಇದ್ದರು. ರಾಕ್ಷಸರು ವಿಶ್ವಾಮಿತ್ರನಿಗಿಂತ ಒಂದು ಹೆಜ್ಜೆ ಮುಂದಿದ್ದರು. ಪ್ರತೀ ಬಾರಿಯೂ ದಾಳಿಯಾಗುವುದೆಂದು ತಿಳಿದಿದ್ದ ಮಿಶ್ವಾಮಿತ್ರ ತಕ್ಕ ಕ್ರಮವನ್ನೂ ಕೈಗೊಳ್ಳುತ್ತಿದ್ದ, ಪ್ರತಿ ಬಾರಿಯೂ ಸೋಲುತ್ತಿದ್ದ. ಕೊನೆಗೆ ವಿಶ್ವಾಮಿತ್ರ ರಾಮ ಲಕ್ಷ್ಮಣರನ್ನು ಕರೆತರುವ ಹೊತ್ತಿಗೆ ಹಣ್ಣುಗಾಯಿ ನೀರುಗಾಯಿ ಅಗಿಹೋಗಿದ್ದ.
ಏಕೆಂದರೆ ವಿಶ್ವಾಮಿತ್ರನಿಗೆ ರಾಕ್ಷಸರ ಆಚರಣೆಗಳು ತಿಳಿದಿತ್ತೇ ಹೊರತು, ಅವರ ಸಿದ್ಧಾಂತ ಮತ್ತು ಪ್ರವೃತ್ತಿಗಳು ತಿಳಿದಿರಲಿಲ್ಲ ಅಥವಾ ಅವನ್ನು ತಿಳಿಯಲು ಅತ ಬಹುಕಾಲ ತೆಗೆದುಕೊಂಡಿದ್ದ!
ಭಾರತದಲ್ಲಿ ಷರಿಯಾ ಅಥವಾ ಷರಿಯತ್ ಎಂದರೂ ಹಾಗೆಯೇ. ಇಂದಿಗೂ ಮುಸಲ್ಮಾನೇತರರಿಗೆ ಷರಿಯತ್ ಸರಿಯಾ, ತಪ್ಪಾಎಂಬ ಚರ್ಚೆಯೇ ದೊಡ್ಡದಾಗುತ್ತದೆಯೇ ಹೊರತು ಅದರಾಚೆಗೆ ಇಣುಕಿದವರು ಕಡಿಮೆ. ಆದರೆ ಮುಸಲ್ಮಾನರಲ್ಲಿ ಹಾಗಿಲ್ಲ. ಅವರಲ್ಲಿ ಷರಿಯಾ ಏಕಾಗಿ ಇದೆ? ಯಾಕಾಗಿರಬೇಕು? ಅದರ ಮೂಲ ಉದ್ದೇಶವೇನಿದೆ ಎಂಬುದರ ಬಗ್ಗೆ ಸ್ಪಷ್ಟತೆಯಿದೆ. ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ಪ್ರತೀ ಜಿಲ್ಲೆಯಲ್ಲೂ ಷರಿಯಾ ನ್ಯಾಯಾಲಗಳಿರಬೇಕೆಂದು ಹೇಳುತ್ತಿರುವುದಕ್ಕೂ ಗಹನವಾದ ಕಾರಣವಿದೆ.
ನಾಯಕರುಗಳಿಗೇ ಇಲ್ಲದ ‘ಮುಲಾಜು’ ಇಂಥ ಬಯೋಪಿಕ್ ಗಳನ್ನು ಮಾಡಹೋಗುವ ನಿಮಗ್ಯಾಕೆ ಹಿರಾನಿ?
– ಸುಜಿತ್ ಕುಮಾರ್
ಈ ವರ್ಷದ ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರಗಳಲ್ಲಿ ಒಂದಾದ ‘ಸಂಜು’ ಕೊನೆಗೂ ತೆರೆಯ ಮೇಲೆ ಬಂದಿದೆ. ಚಿತ್ರ ಜನಮಾನಸದಲ್ಲಿ ಕುತೂಹಲವನ್ನು ಮೂಡಿಸಲು ಹಲವಾರು ಕಾರಣಗಳಿದ್ದಿರಬಹುದು. ಮೊತ್ತ ಮೊದಲನೆಯದಾಗಿ ನಿರ್ದೇಶಕ ರಾಜ್ಕುಮಾರ್ ಹಿರಾನಿ. ಹಿರಾನಿ ಸದ್ಯಕ್ಕಂತೂ ಬಾಲಿವುಡ್ ನಲ್ಲಿ ಪಕ್ಕ ‘ಹೀರಾ’ ರೆಂದೇ ಹೇಳಬಹುದು. ತಾನು ನಿರ್ದೇಶನ ಮಾಡಿರುವ ಅಷ್ಟೂ ಚಿತ್ರಗಳು ಸೂಪರ್ ಡೂಪರ್ ಹಿಟ್ ಗಳಾಗಿ ಪ್ರತಿ ಬಾರಿಯೂ ಸೆಂಚೂರಿಯನ್ನು ಬಾರಿಸುತ್ತಿದರೆ ಆತ ಅದ್ಯಾವ ಹೀರೊ ಅಥವಾ ಹೀರೋಯಿನ್ ಗಳಿಗೂ ಕಮ್ಮಿ ಇರುವುದಿಲ್ಲ. ಮೇಲಾಗಿ ಹಿರಾನಿ ಕೇವಲ ನಿರ್ದೇಶನವಲ್ಲದೆ ಕಥೆ, ಚಿತ್ರಕತೆ, ಎಡಿಟಿಂಗ್ ಹಾಗು ಪ್ರೊಡಕ್ಷನ್ ಗಳಲ್ಲೂ ತಮ್ಮ ಕೈಯಾಡಿಸಿದವರು. ಇಂತಹ ಒಬ್ಬ ಕಲಾಸಾಮ್ರಾಟ್ ಬರೆದು, ನಿರ್ದೇಶಿಸಿ ನಿರ್ಮಿಸಿರುವ ಚಿತ್ರವೊಂದು ಬರುತ್ತಿದೆ ಎಂದರೆ ಸಿನಿಪ್ರಿಯರ ಹಪಾಹಪಿ ಹೆಚ್ಚಾಗದೇ ಇರದು. ಇದು ಅತಿ ಸಹಜವಾದ ವಿಷಯ. ಆದರೆ ಈ ಬಾರಿ ಸಂಜು ಚಿತ್ರ ಇನ್ನೂ ಹೆಚ್ಚಿನ ಗುಲ್ಲೆಬ್ಬಿಸಲು ಇರುವ ಕಾರಣ ಬೇರೆಯೇ ಇದೆ. ಅದು ಸರಿಸುಮಾರು ಇಪ್ಪತ್ತೈದು ವರ್ಷಗಳ ಕಾಲ ಪ್ರತಿ ದಿನ ಒಂದಿಲ್ಲೊಂದು ಬಗೆಯಲ್ಲಿ ಸುದ್ದಿಯಾಗುತ್ತಿದ್ದ ಸುದ್ದಿಯೊಂದರಿಂದ ಹಾಗು ಆ ಸುದ್ದಿಯ ಕೇಂದ್ರಬಿಂದುವಾದ ವ್ಯಕ್ತಿಯೊಬ್ಬನಿಂದ. ಸಂಜಯ್ ದತ್ತ್. ದೇಶದಲ್ಲಿ ಇಂದು ಸಿನಿಮಾಗಳನ್ನು ನೋಡದಿರದ ಮಂದಿ ಕೇವಲ ಬೆರಳಣಿಕೆಯಷ್ಟಿರಬಹುದು. ಅಂತಹ ಬೆರಳೆಣಿಕೆಯ ಮಂದಿಗೂ ಈ ಒಂದು ಹೆಸರು ಚಿರಪರಿಚಿತ! ನಟನಾಗಿ, ನಾಯಕನಾಗಿ ಅನ್ನುವುದಕ್ಕಿಂತ ಹೆಚ್ಚಾಗಿ 1993 ರ ಮುಂಬೈ ಸರಣಿ ಬಾಂಬಿನ ವಿಚಾರಣೆಯ ಸಲುವಾಗಿ. 50% ನಷ್ಟು ಚಿತ್ರ ಆತನ ಆತ್ಮಕತೆಯಾದರೆ ಉಳಿದರ್ದ ಭಾಗ ಚಿತ್ರದ ಕಲ್ಪಿತ ಚಿತ್ರಕತೆಯೆಂದೇ ಹೇಳಬಹುದು! ಚಿತ್ರವನ್ನು ಚಿತ್ರಗಳಾಗಿಯೇ ನೋಡಬಯಸುವವರಿಗೆ ಸಿಗುವ ಮತ್ತೊಂದು ರೋಮಾಂಚನಕಾರಿ ವ್ಯಕ್ತಿ ರಣಬೀರ್ ಕಪೂರ್. ನಟನೆಯಲ್ಲೇನಾದರೂ ಭಾರತಕ್ಕೆ ಆಸ್ಕರ್ ತಂದುಕೊಡಬಲ್ಲ ನಟರಿದ್ದಾರೆಂದರೆ ಆದರಲ್ಲಿ ರಣಬೀರ್ ಕಪೂರ್ನ ಹೆಸರು ಇರದಿರಲು ಸಾಧ್ಯವೇ ಇಲ್ಲ.. ಸಂಜಯ್ ದತ್ತ್ ನ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ನಿಭಾಯಿಸಿ ಈ ಮಾತಿಗೆ ಮತ್ತಷ್ಟು ಪುಷ್ಟಿಕೊಟ್ಟಿದ್ದಾನೆ ಚಿತ್ರದಲ್ಲಿ. ಈ ಎಲ್ಲ ಕಾರಣಗಳಿಂದ ಚಿತ್ರ ತೆರೆಯ ಮೇಲೆ ದೂಳೆಬ್ಬಿಸುತ್ತಿದೆ. ನೋಡುಗರನ್ನು ಎರಡೂವರೆ ಘಂಟೆಗಳ ಕಾಲ ರಂಜಿಸುತ್ತಿದೆ. ಆದರೆ ಚಿತ್ರಕತೆಯ ಸತ್ಯಾಸತ್ಯತೆಯನ್ನು ಅರಿಯಬಯಸುವವರಿಗೆ, ಹಿಂದಿನ ಇತಿಹಾಸವನ್ನು ಅರೆಬರೆ ಮರೆತಿರುವವರಿಗೆ ಎರಡೂವರೆ ದಶಕಗಳ ವಿದ್ಯಮಾನಗಳನ್ನು ಕೇವಲ ಎರಡೂವರೆ ಘಂಟೆಯಷ್ಟೇ ನೋಡಿ ಇದು ಸರಿ ಅದು ತಪ್ಪೆಂದು ಖಡಾಖಂಡಿತವಾಗಿ ನಿರ್ಧರಿಸುವುದು ದುಡುಕುತನವಾದೀತು. ಚಿತ್ರ ಮಾಡಿದ್ದು ನಿಜವನ್ನು ಬಿಚ್ಚಿಡಲೋ ಅಥವಾ ಮುಖ್ಯವಾದ ಸಂಗತಿಯನ್ನು ಮುಚ್ಚಿಡಲೋ ಎಂಬೊಂದು ಪ್ರಶ್ನೆ ಮಾತ್ರ ಚಿತ್ರಮಂದಿರದಿಂದ ಹೊರಬರುವ ಒಂದಿಷ್ಟು ಮಂದಿಗಂತೂ ಕಾಡದಿರದು! ಮತ್ತಷ್ಟು ಓದು
ಅಂಬೇಡ್ಕರ್ ಅವರಿಗೂ ಬೇಡವಾಗಿತ್ತು ಆರ್ಟಿಕಲ್ 370
– ರಾಕೇಶ್ ಶೆಟ್ಟಿ
“ಮಿ.ಅಬ್ದುಲ್ಲಾ, ಭಾರತ ಕಾಶ್ಮೀರವನ್ನು ರಕ್ಷಿಸಬೇಕು, ಅಭಿವೃದ್ಧಿಗೊಳಿಸಬೇಕು ಮತ್ತು ಕಶ್ಮೀರಿಗಳಿಗೆ ಭಾರತದ ಇತರ ಪ್ರಜೆಗಳಂತೆಯೇ ಸಮಾನ ಹಕ್ಕುಗಳಿರಬೇಕೆಂದು ನೀವು ಬಯಸುತ್ತೀರ. ಆದರೆ, ಭಾರತ ಮತ್ತು ಭಾರತೀಯರಿಗೆ ಕಾಶ್ಮೀರ ರಾಜ್ಯದಲ್ಲಿ ಯಾವುದೇ ಹಕ್ಕುಗಳು ಇರಬಾರದು ಎನ್ನುತ್ತೀರ. ನಾನು ಭಾರತದ ಕಾನೂನು ಮಂತ್ರಿ, ನನ್ನ ದೇಶದ ಹಿತಾಸಕ್ತಿಯನ್ನು ನಾನು ಕಡೆಗಣಿಸಲಾರೆ… “, ಆರ್ಟಿಕಲ್ 370ರನ್ನು ಸಂವಿಧಾನದಲ್ಲಿ ಸೇರಿಸಿ ಜಮ್ಮು ಕಾಶ್ಮೀರದಲ್ಲಿ ಜಾರಿಗೊಳಿಸುವ ವಿಷಯದಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಸಲು ನೆಹರೂ ಸಲಹೆ ಮೇರೆಗೆ ಬಂದಿದ್ದ ಶೇಖ್ ಅಬ್ದುಲ್ಲಾನ ಮುಖಕ್ಕೆ ಹೊಡೆದಂತೆ ಡಾ.ಅಂಬೇಡ್ಕರ್ ಅವರು ಹೇಳಿ ಕಳುಹಿಸಿದ್ದು ಹೀಗೆ. ಖುದ್ಧು ಸಂವಿಧಾನ ಶಿಲ್ಪಿಯೇ ವಿರೋಧಿಸಿದ್ದ ಈ ಆರ್ಟಿಕಲ್ 370ಯನ್ನು ಅಂದು ಅವರ ಬಾಯಿ ಮುಚ್ಚಿಸಲು “ತಾತ್ಕಾಲಿಕ” ಎಂಬ ಪದ ಬಳಸಲಾಯಿತು. ಹೆಂಡ ಕುಡಿದ ಮರ್ಕಟದಂತಾಡುತ್ತಿದ್ದ ನೆಹರೂ ಸಾಹೇಬರು, ತಮ್ಮ ಬಾಲವನ್ನು ಶೇಖ್ ಅಬ್ದುಲ್ಲಾನ ಕೈಗೆ ಇಟ್ಟಾಗಿತ್ತು. ಆರ್ಟಿಕಲ್ 370 ಜಾರಿಯಾಗುತ್ತಿದಂತೆ ಹಿಂಬಾಗಿಲ ಮೂಲಕ ಅದಕ್ಕಿಂತಲೂ ಘೋರವಾದ ವಿಧಿ 35A ಅನ್ನು ಜಮ್ಮು ಕಾಶ್ಮೀರಕ್ಕೆ ಅನ್ವಯಿಸಲಾಯಿತು. ಅಂದು ಅಂಬೇಡ್ಕರ್ ಅವರು ವಿರೋಧಿಸಿದ್ದ ಆರ್ಟಿಕಲ್ 370 ರದ್ಧತಿ ಬಗ್ಗೆ ಮಾತನಾಡುತ್ತಿರುವುದು ಕೇವಲ ಬಿಜೆಪಿ ಮಾತ್ರವೇ. ಹಾಗೂ ಇದನ್ನು ವಿರೋಧಿಸುವವರು ಕಾಂಗ್ರೆಸ್ ಇತ್ಯಾದಿ ಸೆಕ್ಯುಲರ್ ಪಕ್ಷಗಳು ಹಾಗೂ ಸೋ-ಕಾಲ್ಡ್ ಸಂವಿಧಾನ ರಕ್ಷಕರು…! ಮತ್ತಷ್ಟು ಓದು
ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಏನು ಸಂಬಂಧ ಎಂದು ಕೇಳುತ್ತಿರಾ?? ಖಂಡಿತಾ ಸಂಬಂಧ ಇದೆ..!!
– ಅಜಿತ್ ಶೆಟ್ಟಿ ಹೆರಾಂಜೆ
ಹೌದು ಉಡುಪಿಯ ಮಟ್ಟಿಗೆ ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಖಂಡಿತಾ ಸಂಬಂಧ ಇದೆ. ದುರಂತ ಅಂದ್ರೆ ಈ ಸಂಬಂಧದ ಬಗ್ಗೆ ನಮಗೆ ಯಾರೂ ಎಂದೂ ಹೆಳಿದವರೇ ಇಲ್ಲ. ಶಾಲಾ ಕಾಲೇಜುಗಳಲ್ಲಿ ನಮ್ಮ ಯಾವುದೇ ಶಿಕ್ಷಕರು ಈ ಸಂಬಂಧದ ಬಗ್ಗೆ ಪಾಠ ಮಾಡಲಿಲ್ಲ. ನಮಗೆ ಗಾಂಧಿ ಗೊತ್ತಿತ್ತು, ನಮಗೆ ಬುದ್ದ ಗೊತ್ತಿತ್ತು, ನಮಗೆ ಅಕ್ಬರ್ ಗೊತ್ತಿತ್ತು, ನಮಗೆ ಮುಸೊಲಿನಿ, ಹಿಟ್ಲರ್ ಚಗುವೇರ ಗೊತ್ತಿತ್ತು. ಆದ್ರೆ ನಮ್ಮೂರಿನ ಮಹಾತ್ಮರ ಬಗ್ಗೆ ಗೊತ್ತೇ ಇಲ್ಲ. ಅವರು ನಮ್ಮ ಸಮಾಜವನ್ನು ಕಟ್ಟಲು ತಮ್ಮ ಇಡಿ ಜೀವಮಾನದ ಗಳಿಕೆಯನ್ನೆಲ್ಲವೂ ಸಮಾಜದ ಉದ್ದಾರಕ್ಕಾಗಿ ನೀರಿನಂತೆ ಹರಿಸಿ, ತಮ್ಮ ಇಡಿ ಜೀವನವನ್ನು ಸಮಾಜಕ್ಕಾಗಿ ತೇದಿ ಸವೆದು ಸದ್ದಿಲ್ಲದೆ ಮರೆಯಾದವರು. ಅವರಿಗೆ ಯಾವುದೇ ಪ್ರಚಾರದ ಹಂಗಿರಲಿಲ್ಲ, ಅವರಿಗೆ ತಮ್ಮ ಸಮಾಜದ ಬಗೆಗಿನ ತಾವು ನಿಭಾಯಿಸಬೇಕಿದ್ದ ಕರ್ತವ್ಯಗಳ ಅರಿವಿತ್ತು, ಸಮಸ್ಯೆಗಳು ಬಂದಾಗ ಅದನ್ನ ಸರ್ಕಾರ ಅಥವಾ ಇನ್ಯಾರೋ ಪರಿಹರಿಸಲಿ ಎಂದು ಯಾವತ್ತೂ ಕಾದವರಲ್ಲ. ಅವರು ಸ್ವತಃ ತಾವೇ ಅಂತಹಾ ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತು ಪರಿಹರಿಸಿದವರು. ಆಗ ಅವರ ಕಣ್ಣಲ್ಲಿ ಜಾತಿ, ಮತ ,ಪಂತ, ಪಂಗಡ, ಇವ ನಮ್ಮವ ಇವ ಬೇರೆಯವನು ಎಂಬುವ ಯಾವುದೆ ಬೇಧ ಭಾವ ಇರಲಿಲ್ಲ. ಅವ್ರಲ್ಲಿ ಇದ್ದದ್ದು ಸಮಾಜದಲ್ಲಿ ತಾನು ಮಾಡಬೇಕಾಗಿದ್ದ ಕೆಲಸಗಳ ಬಗ್ಗೆ ಇದ್ದ ತುಡಿತ ಮಾತ್ರ. ಅಂತಹ ಅದೆಷ್ಟೋ ಗಣ್ಯರು ಕಾಲದ ಪುಟಗಳಲ್ಲಿ ಮರೆಯಾಗಿ ಹೋದರು. ಅವರನ್ನ ಅವರ ಸಾಧನೆಗಳನ್ನ ಮುಂದಿನ ತಲೆಮಾರಿಗೆ ಪರಿಚಯಿಸುವ ಹೊಣೆ ಹೊತ್ತ ಸರ್ಕಾರಗಳು ಇಂತವರ ಪರಿಚಯನ್ನು ಯಾವತ್ತೂ ಮುಂದಿನ ಪೀಳಿಗೆಗೆ ಮಾಡಲೇ ಇಲ್ಲ. ಅದಿರಲಿ ಸಮಾಜವೂ ಅಂತವರನ್ನ ಮರೆತಿತು. ಇಂತಹಾ ಅನೇಕ ಮರೆತುಹೋದ ಮಹಾನುಭಾವರಲ್ಲಿ ಉಡುಪಿಯ ಖಾನ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬ್ ಬಹದ್ದೂರ್ ಕೂಡ ಒಬ್ಬರು. ಚಿಕ್ಕದಾಗಿ ಹೇಳೋದಾದರೆ ಹಾಜಿ ಅಬ್ದುಲ್ಲಾ ಸಾಹೇಬರು . ಹಾಜಿ ಅಬ್ದುಲ್ಲಾ ಸಾಹೆಬರು !! ? ಯಾರೀತ?? ಮತ್ತಷ್ಟು ಓದು