ವಿಷಯದ ವಿವರಗಳಿಗೆ ದಾಟಿರಿ

Archive for

25
ಜುಲೈ

ಆಹಾ ಎಷ್ಟು ಮಜವಾಗಿತ್ತು ಆ ಕಾಲ…….!!!!

– ಪವನ್ ಪರುಪತ್ತೇದಾರ್

ನಮ್ಮ ತಾತಂದಿರು ಹಳೆ ಕಾಲದ ಕಥೆಗಳನ್ನು ಹೇಳುವಾಗ ಮೊದಲು ಸ್ವಲ್ಪ ಸಮಾಧಾನದಿಂದ ಕೇಳ್ತೇವೆ ಬರು ಬರುತ್ತಾ ಅವರು ಅದೇ ಕಥೆಗಳನ್ನು ಮತ್ತೆ ಮತ್ತೆ ಹೇಳುತ್ತಾರೆ ನಮಗೂ ಬೋರ್ ಅನಿಸಿ ತಾತಾ ಎಷ್ಟು ಸಲಿ ಅದೇ ಕಥೆಗಳನ್ನ ಹೇಳ್ತಿರ ಅಂತ ಗೊಣಗಿಕೊಂಡು ಎದ್ದು ಹೋಗ್ತಿವಿ. ಇಂಥ ಅನುಭವಗಳು ಸಾಮಾನ್ಯವಾಗಿ ಎಲ್ಲರಿಗು ಆಗ್ತವೆ. ನನಗು ಹಾಗೇ ನಮ್ಮ ತಾತ ಕಥೆಗಳನ್ನ ಹೇಳ್ತಾ ಇದ್ರೂ ಅವರು ತಮ್ಮ ಬ್ರಿಟಿಶ್ ಮೇಷ್ಟ್ರಿಗೆ ಚಳ್ಳೆ ಹಣ್ಣು ತಿನ್ನಿಸಿ ಚಕ್ಕರ್ ಹಾಕಿದ್ದು, ಆಗಿನ ಕಾಲಕ್ಕೆ ಲೋಯರ್ ಸೆಕೆಂಡರಿ ಮುಗಿಸಿ ಕುಟುಂಬದಲ್ಲಿ ಹೆಸರು ಮಾಡಿದ್ದೂ, ಊರಿಗೆ ಮೊದಲನೇ ಎಲೆಕ್ಟ್ರಿಕ್ contractor ಆಗಿದ್ದು, ಊರಿನ ಪ್ರೆಸಿಡೆಂಟ್ ಆಗಿದ್ದು, ಆಗಿನ ಜನ, ಹಾಗೆ ಹೀಗೆ ಹುಹ್! ಇನ್ನು ಬಹಳಾ.

ಆದರೆ ನಾವು ಅವರು ಕಥೆ ಹೇಳುವಾಗ ಮುಗು ಮುರಿದು ಹೋಗುತಿದ್ದೆವಲ್ಲ, ನಮಗೆಲ್ಲಿ ಅರಿವಿತ್ತು ಆಗಿನ ಅ ಕಾಲದ ಬಗ್ಗೆ ಎಷ್ಟು ಹೇಳಿದರು ಮತ್ತೆ ಮತ್ತೆ ನಮ್ಮ ತಾತನವರಿಗೆ ಹೇಳಬೇಕು ಎನಿಸಿತ್ತು ಎಂದು. ಯಾಕಂದರೆ ಅ ಕಾಲವೇ ಹಾಗಿತ್ತು ಎಷ್ಟು ಅದರ ಬಗ್ಗೆ ಕೊಂಡಾಡಿದರು ಸಾಲದಂಥ ಕಾಲ. ನನಗೆ ಯಾಕೆ ಹೀಗನಿಸಿತ್ತು ಅಂದರೆ ನನಗೂ ಸಹ ಕಳೆದ ಹತ್ತು ವರ್ಷಕ್ಕೂ ಇಗ್ಗು ಬಹಳ ವ್ಯತ್ಯಾಸ ಕಾಣುತ್ತಿದೆ. ನನಗೆ ಇತ್ತೀಚಿಗಷ್ಟೇ ಇದರ ಅರಿವಾಯಿತು.

ರಾಗಿ ಬೆಳೆ ಬಲೆ ಚೆನ್ನಾಗೈತೆ ಸ್ವಾಮಿ, ಈ ಸಲ ಒಳ್ಳೆ ಬಂಪರ್ ಕಾಸ್ ಮಾಡ್ತ್ಯ ಅಂತ ಚಿಕ್ಕಣ್ಣ ಹೇಳಿದಾಗ ನಮ್ಮಪ್ಪನಿಗೆ ಒಂಥರಾ ಸಂತೋಷ. ಅಂತು ಟೈಮ್ ಗೆ ಸರ್ಯಾಗಿ ಉಳಿಸಿ, ಬಿತ್ತನೆ ಮಾಡಿಸಿ, ಗೊಬ್ಬರ ಚೆಲ್ಲಿ, ಕಳೆ ಒರೆದು, ಗುಂಟುವೆ ಹಾಕಿಸಿ, ಇರೋ ಮುಕ್ಕಾಲು ಎಕರೆಗೆ 10 ಸಾವಿರ ಖರ್ಚ ಮಾಡಿದ್ದಕ್ಕೆ ಇಷ್ಟ ಮಾತ್ರ ಬೆಳೆ ಆಗಿರೋದು ಚಿಕ್ಕಣ್ಣ ಅಂತ ಸ್ವಲ್ಪ ಬಿಂಕದಿಂದನೆ ಅಂದ್ರು. ಅಂಗಲ್ಲ ಸ್ವಾಮಿ ರೇಟ್ ಚೆನ್ನಾಗೈತೆ ಈಗ ಕೆಂಪು ರಾಗಿ 13 ರೂಪಾಯಿಗೆ ತೊಕೊತಾರೆ ಅಂತ ಚಿಕ್ಕಣ್ಣ ಹೇಳೋವಾಗ ಮಧ್ಯಕ್ಕೆ ಬಾಯಿ ಹಾಕಿ ನಮ್ಮಪ್ಪ ನಂದೊಂದು ೧೫ ಮೂಟೆ ಆಗ್ತದಲ್ಲ ಚಿಕ್ಕಣ್ಣ ಅಂದ್ರು ಸ್ವಲ್ಪ ಹೊತ್ತು ಯೋಚನೆ ಮಾಡಿ ಇನ್ನ ಒಂದು ಹೆಚ್ಚೇ ಆಗ್ತದೆ ಸ್ವಾಮಿ ಅಂದ ಚಿಕ್ಕಣ್ಣ. ನಮ್ಮಪ್ಪ ಸರಿ ಹಾಗಾದ್ರೆ ನಾಳೇನೇ ಕೂಲಿಯವರನ್ನ ಕರೆಸಿಬಿಡು ಕುಯ್ಯಿಸಿಬಿಡನ ಅಂದ್ರು.

ಮತ್ತಷ್ಟು ಓದು »