ವಿಷಯದ ವಿವರಗಳಿಗೆ ದಾಟಿರಿ

Archive for

11
ಸೆಪ್ಟೆಂ

ಮಿಂಚು ಮರೆಯಾದಾಗ…

– ಅಬ್ದುಲ್ ಸತ್ತಾರ್,ಕೊಡಗು

ಅದು ನಿರ್ಜನವಾದ ಒಂಟಿ ಮನೆ. ಸುತ್ತಲೂ ಹಸಿರಲ್ಲದೆ ದೂರದಲ್ಲೊಂದು ಬೆಟ್ಟ, ಮನೆಯ ಬೇಲಿ ದಾಟಿದಾಗ ನೆಟ್ಟಗೆ ಹಾದು ಹೋಗಿರುವ ರೈಲು ಕಂಬಿ. ಮಳೆ ಸುರಿಸೀ ಸುರಿಸೀ ಸುಸ್ತಾಗಿದ್ದ ಮಳೆರಾಯ ಅಂದು ಸುಮ್ಮನಾಗಿದ್ದ. ಮರ – ಗಿಡ – ಬಳ್ಳಿಗಳೆಲ್ಲಾ ಕೊಟ್ಟಿಕ್ಕುತ್ತಾ ಹಾಯಾಗಿದ್ದವು. ತಂಪು ತಂಪು ಗಾಳಿ, ಚಿಲಿ-ಪಿಲಿ ನಾದ. ವಾತಾವರಣ ನೋಡಿ ಸಮಯವೆಷ್ಟೆಂದು ಅಂದಾಜಿಸುವುದು ಅಸಾಧ್ಯ.

ಆ ಮನೆಯಿಂದ ಇಬ್ಬರು ಹೊರಬಂದರು. ಹೆಣ್ಣು-ಗಂಡು ಅಥವಾ ಪ್ರೇಯಸಿ-ಪ್ರಿಯತಮ ಅಥವಾ ಗಂಡಾ-ಹೆಂಡಿರಿರಬಹುದು. ಅವಳಿಗೆ ತಲೆ ತುಂಬಾ, ಮೈ ತುಂಬಾ ಶಾಲು ಹೊದಿಸಲಾಗಿತ್ತು. ಒಂದು ಕಯ್ಯಲ್ಲಿ ಮಡಚಿದ ಕೊಡೆ, ಮತ್ತೊಂದು ಕಯ್ಯಿಂದ ಅವಳ ತೋಳನ್ನ ಬಳಸಿಕೊಂಡಿದ್ದ. ವಿಶಾಲ ಜಗುಲಿ ದಾಟಿ ಗೇಟು ಮುಚ್ಚಿ ರೈಲು ಕಂಬಿಯಲ್ಲಿ ನಡೆಯಲು ಶುರುವಾದರು.

“ಆಗೋಲ್ಲ ಕಣೋ, ತುಂಬಾ ಚಳಿಯಾಗ್ತಿದೆ”, “ಏನೂ ಆಗೋಲ್ಲ ಪುಟ್ಟ, ಇಷ್ಟು ದಿನ ಜ್ವರ ಹಿಡುಕೊಂಡು ಮಲಗಿದ್ದ ನಿನಗೆ ಇದೊಳ್ಳೆ ಬಿಡುವು ಕೊಡುತ್ತೆ, ಇನ್ನು ಸ್ವಲ್ಪೇ ಸ್ವಲ್ಪ ನಡೆಯೋಣ”ಅಂದ. ಗೊರ ಗೊರ ಕೆಮ್ಮಿದಳು. ಪೂರ್ತಿ ನಿಶ್ಯಕ್ತಳಾಗಿದ್ದಳು. ಕೊಡೆಯನ್ನ ಹಳಿಯಲ್ಲಿ ಬಿಟ್ಟು ಅವಳನ್ನ ಗಟ್ಟಿಯಾಗಿ ತಬ್ಬಿಕೊಂಡ. ಅವಳು ಅಳುಮುಖದೊಂದಿಗೆ ಅವನನ್ನ ದಿಟ್ಟಿಸಿದಳು. ಕಣ್ಣು ಕೆಂಪಾಗಿತ್ತು. ಅವನ ಕಣ್ಣೂ ಯಾಕೋ ಹನಿಗೂಡಿತು. ಸ್ವಲ್ಪ ಹೊತ್ತು ಹಾಗೇ….,
ಮತ್ತಷ್ಟು ಓದು »