ರಕ್ತ ಸಿಕ್ತ ಕಮ್ಯುನಿಷ್ಟ ಕುಡುಗೋಲಿಗೆ ಇನ್ನೆಷ್ಟು ಬಲಿ? ಅದನ್ನು ತಡೆಯಲು ಕೇರಳ ಚಲೋ!
ಶಿವಾನಂದ ಶಿವಲಿಂಗ ಸೈದಾಪೂರ
ವಿಭಾಗ ಸಂಚಾಲಕ,
ಎಬಿವಿಪಿ ಬೆಳಗಾವಿ.
ಬರ್ಬರವಾಗಿ ಹತ್ಯೆ ಮಾಡುವ ಜನರಿಂದ ಶಾಂತಿ ಸೌಹಾರ್ದತೆಯನ್ನು ಬಯಸುವುದು ಬಿಡಿ, ಅದರ ಬಗ್ಗೆ ಕನಸಿನಲ್ಲಿಯೂ ಸಹ ನೆನಪಾದರೆ ಬೆಚ್ಚಿ ಬೀಳುವುದು ಸಹಜ. ಜೀವಂತವಾಗಿರುವ ಮನುಷ್ಯನನ್ನು ಎರ್ರಾಬೀರಿ ಇರಿದು ಕೊಲೆ ಮಾಡಿ ಸೌಮ್ಯವಾದದ ಕತೆ ಹೇಳಲು ಬಂದರೆ ಕೇಳಲು ನಿಲ್ಲುವವರಾದರೂ ಯಾರು? ಈ ದೇಶದಲ್ಲಿ ಎಲ್ಲಲ್ಲಿ ಕಮ್ಯುನಿಷ್ಠ ಪಕ್ಷ ಆಡಳಿತದಲ್ಲಿದೆಯೋ ಅಲ್ಲಲ್ಲಿ ಶಾಂತಿ, ಸೌಹಾರ್ದತೆ ರಾತ್ರಿ ಕನಸಿನಲ್ಲಯೂ ಕಾಣುವಂತಿಲ್ಲ. ಸರ್ವರೂ ಸಮಾನರು ಎನ್ನುವ ಕಮ್ಯುನಿಸಂನ ನೀತಿ ಅಧಿಕಾರ ವಹಿಸಿಕೊಂಡು ಕುರ್ಚಿಯಲ್ಲಿ ಕುಳಿತುಕೊಳ್ಳುವವರಿಗೆ ಮಾತ್ರವೇ ಎಂಬುದನ್ನು ಕೇರಳ ನೋಡಿದರೆ ಗೊತ್ತಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಕಮ್ಯುನಿಷ್ಠ ಆಡಳಿತದಿಂದ ದೇವರ ನಾಡು ನರಹಂತಕರ ನಾಡಾಗಿದೆ. ಮತ್ತಷ್ಟು ಓದು