ಒಸಾಮ ಸತ್ತ… ಭಾರತ ಬದುಕಿದೆಯಾ!?
– ರಾಕೇಶ್ ಶೆಟ್ಟಿ
ತನ್ನ ಮಕ್ಕಳಿಗೆ ಮಾತ್ರ ’ಜಿಹಾದ್’ನೆಡೆಗೆ ಬರಬೇಡಿ ನನ್ನಾಣೆ ಅಂತೇಳಿ, ಕಂಡೋರ ಮಕ್ಕಳ ಬೆನ್ನ ಹಿಂದೆ ಅವಿತು ಕುಳಿತು ಮನುಶ್ಯರನ್ನ ಹುಳಗಳಿಗಿಂತ ಕಡೆಯದಾಗಿ ಸಾಯಿಸಿದ ಒಸಾಮ ಅನ್ನುವ ಸೈತಾನನೊಬ್ಬ ಸತ್ತರೆ ನಾವ್ಯಾಕೆ ಕುಣಿಯಬಾರದು!? ಕುಣಿದರೇನು ತಪ್ಪು?ಇನ್ನೇನು ಅಳಬೇಕಿತ್ತಾ?
ಒಸಾಮ ಸತ್ತರೆ ನಾವ್ಯಕೆ ಕುಣಿಯಬೇಕು? ಅನ್ನುವ ಬರಹವನ್ನೋದಿದೆ.ಅದರಲ್ಲಿ ’ದೇಶ ಪ್ರೇಮ’ ಅನ್ನುವ ಪದದ ಬಗ್ಗೆಯೂ ಉಡಾಫ಼ೆಯಿದೆ.ದೇಶಪ್ರೇಮ ಅನ್ನುವುದನ್ನ ತಾವು ವಿರೋಧಿಸುವ ಪಕ್ಷ/ಸಂಘಟನೆಯ ಗುತ್ತಿಗೆ ಕೊಡಲಾಗಿದೆಯೆಂಬಂತೆ,ಅವರು ಮಾತ್ರವೇ ದೇಶ ಪ್ರೇಮಿಗಳು ಅಂದುಕೊಂಡು,ಅವರ ಮೇಲಿನ ಅಸಹನೆಯನ್ನ ’ದೇಶ ಪ್ರೇಮಿ’ಗಳು ಅನ್ನುವ ಪದಕ್ಕೆ ಜೋಡಿಸಿ ಮಾತನಾಡಿದ್ದಾರೆ ಲೇಖಕರು.





