ಬದಲಾವಣೆ ಬಯಸುವುದಾದರೆ ಬಸವನಗುಡಿಗೆ ಬನ್ನಿ…
– ರಾಕೇಶ್ ಶೆಟ್ಟಿ
ಬಸವನಗುಡಿಗೆ ಬಂದ ತಕ್ಷಣ ಬದಲಾವಣೆಯಾಗುತ್ತಾ? ಅನ್ನುವ ಪ್ರಶ್ನೆ ನಿಮ್ಮದಾದರೆ ನನ್ನ ಉತ್ತರ ’ಇಲ್ಲ’! ಅಂತಲೇ. ಭ್ರಷ್ಟಚಾರ ಅನ್ನುವ ಬ್ರಹ್ಮ ರಾಕ್ಷಸನ ವಿರುದ್ಧ ಅಣ್ಣ ಹಜ಼ಾರೆ ನೇತೃತ್ವದಲ್ಲಿ ಶುರುವಾಗಿರುವ ಈ ಹೋರಾಟವೇ ಅಂತಿಮವಲ್ಲ.ಇದು ಆರಂಭವಷ್ಟೆ ಅನ್ನುವುದು ನನ್ನ ಅಭಿಪ್ರಾಯ.
ಅಂತಿಮವಾಗುವುದಾದರೂ ಹೇಗೆ ಹೇಳಿ, ಭ್ರಷ್ಟಚಾರ ಅಂದಾಕ್ಷಣ ಎಲ್ಲರ ಕಣ್ಣು ಮೊದಲು ಬೀಳುವುದೂ ಕಳ್ಳ(ಎಲ್ಲ ಅಲ್ಲ) ರಾಜಕಾರಣಿಗಳ ಮೇಲೆ,ಆಮೇಲೆ ಸರ್ಕಾರಿ ಕಛೇರಿ ಮತ್ತು ಅಧಿಕಾರಿಗಳ ಮೇಲೆ.ತಪ್ಪೇನಿಲ್ಲ ಬಿಡಿ…! ಭ್ರಷ್ಟಚಾರ ಅನ್ನೋ ಪಿರಮಿಡ್ನ ತುತ್ತ ತುದಿಯಲ್ಲಿರೋ ಅವರ ಮೇಲೆ ಎಲ್ಲರ ಕಣ್ಣು ಬೀಳುವುದು ಸಹಜ.ಆದರೆ, ’ನಾವುಗಳೆಷ್ಟು ಸಾಚಾ?’ ಅಂತ ನಮ್ಮನ್ನೇ ನಾವ್ಯಾವತ್ತಾದರೂ ಕೇಳಿಕೊಂಡಿದ್ದೇವೆಯೇ?





